Author: editor.udayarashmi@gmail.com

ದೇವರಹಿಪ್ಪರಗಿ: ಮಹಿಳೆಯರು ಹಾಗೂ ಮಕ್ಕಳಿಗೆ ಸಮತೋಲಿತ ಆಹಾರ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ವಲಯ ಮೇಲ್ವಿಚಾರಕಿ ಶಾಂತಾ ನಾಯಿಕ್ ಹೇಳಿದರು.ತಾಲ್ಲೂಕಿನ ಮಣೂರ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಜರುಗಿದ ಪಾಲಕರ ಸಭೆ ಹಾಗೂ ಪೌಷ್ಠಿಕ ಆಹಾರ ಹಾಗೂ ಆರೋಗ್ಯ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಆಧುನಿಕತೆಗೆ ತಕ್ಕಂತೆ ನಮ್ಮ ಆಹಾರ ಪದ್ದತಿಯೂ ಬದಲಾಗುತ್ತಿದೆ. ಪೌಷ್ಠಿಕ ಆಹಾರ ಸಿಗುವುದು ಕಷ್ಟಕರವಾಗಿದೆ. ಗರ್ಭಿಣಿ ಮಹಿಳೆಯರು ಹಾಗೂ ಬೆಳೆಯುವ ಮಕ್ಕಳಿಗೆ ಮುಖ್ಯವಾಗಿ ಕಿಶೋರಿಯರಿಗೆ ಉತ್ತಮ ಗುಣಮಟ್ಟದ ಆಹಾರ ಆರೋಗ್ಯಯುತ ಜೀವನಕ್ಕೆ ಸಹಕಾರಿಯಾಗಬಲ್ಲದು ಅದಕ್ಕಾಗಿ ಮಹಿಳೆ ಮತ್ತು ಮಕ್ಕಳಿಗೆ ಸಮತೋಲಿತ, ಗುಣಮಟ್ಟದ, ಸತ್ವಯುತ ಆಹಾರದ ಬಗ್ಗೆ ಜಾಗೃತಿ ಮೂಡಿಸಬೇಕು. ನಾವು ಸಹ ಪಾಲಿಸಬೇಕು ಎಂದು ತಿಳಿಹೇಳಿದರು.ಸಿಎಚ್‌ಓ ರುಕಿಯಾ ಬಾಗವಾನ, ಅಂಗನವಾಡಿ ಕಾರ್ಯಕರ್ತೆಯರಾದ ಶಾಂತಾ ಚಿಗರಿ, ಪ್ರೇಮಾ ನಡುವಿನಮನಿ ಮತ್ತು ಆಶಾ ಕಾರ್ಯಕರ್ತೆಯರು, ತಾಯಂದಿರು, ಮಕ್ಕಳು ಹಾಗೂ ಕಿಶೋರಿಯರು ಪಾಲ್ಗೊಂಡಿದ್ದರು.

Read More

ವಿಜಯಪುರ: ಜಿಲ್ಲಾ ಬಂಜಾರಾ ವಿದ್ಯಾವರ್ಧಕ ಸಂಘದ ಬಂಜಾರಾ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಸಂಯುಕ್ತಾಶ್ರಯದಲ್ಲಿ “ರಾಷ್ಟ್ರೀಯ ಮತದಾರರ ದಿನ”ದ ಅಂಗವಾಗಿ ಹಮ್ಮಿಕೊಂಡಿದ್ದ ಪ್ರತಿಜ್ಞಾ ವಿಧಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವೀಧಿಯನ್ನು ಪ್ರೌಢ ಶಾಲೆಯ ಮುಖ್ಯ ಗುರು ಇ.ಡಿ.ಲಮಾಣಿಯವರು ಭೋಧಿಸಿದರು.ನಂತರ ಮಾತನಾಡಿದ ಅವರು. ಚುನಾವಣಾ ಪ್ರಕ್ರಿಯೆಯಲ್ಲಿ ಮತದಾನದಲ್ಲಿ ಭಾಗವಹಿಸಲು ಯುವಕರನ್ನು ಉತ್ತೇಜಿಸಲು ಈ ದಿನ ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುತ್ತಿದೆ. ಭಾರತ ಪ್ರಜಾಪ್ರಭುತ್ವ ರಾಷ್ಟ್ರ. ಪ್ರತಿಯೊಬ್ಬ ಪ್ರಜೆಗೂ ಮತದಾನದ ಮೂಲಭೂತ ಹಕ್ಕು ಇದೆ. ರಾಷ್ಟ್ರವನ್ನು ಮುನ್ನಡೆಸಲು, ಸಾಮಾನ್ಯ ಜನರ ಸಮಸ್ಯೆಗಳನ್ನು ಪರಿಹರಿಸಲು, ಬದಲಾವಣೆ ತರಲು ಸಾಧ್ಯವಾಗುತ್ತದೆ ಎಂದು ಭಾವಿಸುವವರಿಗೆ ತನ್ನ ನಾಯಕನನ್ನು ಆಯ್ಕೆ ಮಾಡುವ ಹಕ್ಕನ್ನು ಅವನು ಅಥವಾ ಅವಳು ಹೊಂದಿರುತ್ತಾರೆ. ರಾಷ್ಟ್ರೀಯ ಮತದಾರರ ದಿನವು ದೇಶದ ಭವಿಷ್ಯವು ಸುಳ್ಳಾಗಿರುವುದರಿಂದ ಭಾರತದ ಮಹತ್ವದ ಮೂಲವಾಗಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಎಂ.ಬಿ.ಪೂಜಾರಿ, ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಮುಖ್ಯ ಗುರು ಸಂದೀಪ ರಾಠೋಡ,…

Read More

ಇಂಡಿ: ಪರಿವರ್ತನೆ ಜಗದ ನಿಯಮ, ಜಗತ್ತು ಬದಲಾದಂತೆ ನಾವು ಬದಲಾಗಬೇಕು. ಇಲ್ಲದಿದ್ದರೆ ಜೀವನ ಜಡತ್ವಕ್ಕೆ ಸಿಲುಕುತ್ತದೆ. ನೈತಿಕತೆ ಕೆಳಮಟ್ಟಕ್ಕೆ ಇಳಿಯುತ್ತಿದೆ. ಮನೆಗಳು ದೊಡ್ಡದಾಗುತ್ತಿದ್ದು ಮನಸ್ಸುಗಳು ಸಣ್ಣದಾಗುತ್ತಿವೆ ಎಂದು ಬ್ರಹ್ಮಕುಮಾರಿ ವಿವಿಯ ರಾಜಯೋಗಿನಿ ಯಮುನಾ ಅಕ್ಕಾ ಹೇಳಿದರು.ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ವಿವಿ ಯಲ್ಲಿ ಯಮುನಾ ಅಕ್ಕಾ ಮತ್ತು ಸಂಗಡಿಗರಿಂದ ಲೋಕ ಕಲ್ಯಾಣಕ್ಕಾಗಿ ೨೧ ದಿನಗಳ ಮೌನ ವೃತದ ಮುಕ್ತಾಯ ಸಮಾರಂಭದಲ್ಲಿ ಮಾತನಾಡಿದರು.ಬ್ರಹ್ಮಕುಮಾರಿ ಶ್ರೀದೇವಿ ಅಕ್ಕನವರು ಮಾತನಾಡಿ, ಪ್ರಸ್ತುತ ಜಗತ್ತು ಬದಲಾವಣೆಯ ದಿಕ್ಕಿನಲ್ಲಿ ಮುನ್ನುಗುತ್ತಿದ್ದು ಮನಸ್ಸಿನ ನಿಯಂತ್ರಣ ತಪ್ಪುತ್ತಿದೆ. ಕ್ಷಣಿಕ ಸುಖಕ್ಕೆ ಇಡೀ ಜೀವನವನ್ನೇ ಹಾಳುಮಾಡಿಕೊಳ್ಳುತ್ತಿದ್ದೇವೆ. ಹೀಗಾಗಿ ಸಕಾರಾತ್ಮಕ ಆಲೋಚನೆಗಳನ್ನು ಮೈಗೂಡಿಸಿ ಕೋಳ್ಳಬೇಕಾಗಿದೆ ಎಂದರು.ನಿವೃತ್ತ ಪ್ರಾಚಾರ್ಯ ಐ.ಬಿ.ಸುರಪುರ, ಪ್ರೊ ಎಂ.ಜೆ.ಪಾಟೀಲ,ಶಿವಲಿಂಗಪ್ಪ ಪಟ್ಟದಕಲ್ಲ ಮೌನವೃತದ ಕುರಿತು ಮಾತನಾಡಿದರು.ವಿಶ್ವನಾಥ ಜಾಮಗೊಂಡಿ, ಅರವಿಂದ ಕಠಾರೆ, ರಾಜಶ್ರೀ ಕೋಳೆಕರ, ನಿವೃತ್ತ ಪ್ರಾಚಾರ್ಯ ಎ.ಎಸ್.ಗಾಣಿಗೇರ, ಲಲಿತಾ ಹೂಗಾರ, ಸಾವಿತ್ರಿ ಜಾಮಗೊಂಡಿ, ಉಮಾ ಪಟ್ಟದಕಲ್ಲ, ಪವಿತ್ರಾ ವಾಲಿ, ಸುಮಾ ಪತಂಗಿ, ವಿದ್ಯಾಶ್ರೀ ಪಾಟಿಲ, ಜಯಶ್ರೀ ಪತ್ತಾರ, ದ್ರಾಕ್ಷಾಯಿಣಿ ಮೈದರಗಿ ಮತ್ತಿತರಿದ್ದರು.

Read More

ಇಂಡಿ: ಪ್ರತಿಯೊಬ್ಬರು ಶಿಕ್ಷಣದ ಬಗ್ಗೆ ಗೌರವ ಬೆಳೆಸಿಕೊಳ್ಳಬೇಕು.ವಿದ್ಯೆ ವಿದ್ಯಾರ್ಥಿಗಳ ಜೀವನ ಬೆಳಗುವ ಕಣ್ಣು, ಕಾರಣ ಭಾರತದ ಭವಿಷ್ಯ ವಿದ್ಯಾವಂತರ ಕೈಯಲ್ಲಿ ಇದೆ ಎಂದು ಪುರಸಭೆ ಮಾಜಿ ಅಧ್ಯಕ್ಷ ಶ್ರೀಕಾಂತ ಕುಡಿಗನೂರ ಹೇಳಿದರು.ಪಟ್ಟಣದ ಕರ್ನಾಟಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಲಿಕಾ ಉಪಕರಣಗಳ ಪ್ರದರ್ಶನ, ಆಹಾರ ಹಬ್ಬ, ರಂಗೋಲಿ ಸ್ಪರ್ಧೇ ಕಾರ್ಯಕ್ರಮದಲ್ಲಿ ಮಾತನಾಡಿದರು.ಸಂಸ್ಥೆಯ ಉಪಾಧ್ಯಕ್ಷ ಸಂಗಣ್ಣ ಇರಾಬಟ್ಟಿ ಮಾತನಾಡಿ, ಇಂದು ನಮ್ಮ ಯುವಕ ಯುವತಿಯರು ವಿಜ್ಞಾನ, ಕ್ರೀಡೆ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಮುಂದಿದ್ದು ಜಗತ್ತು ನಮ್ಮ ಯುವಕರ ಕಾರ್ಯ ಪ್ರಶಂಸಿಸುತ್ತಿದ್ದಾರೆ ಎಂದರು.ಸಂಸ್ಥೆಯ ಕಾರ್ಯದರ್ಶಿ ಪಿ.ಬಿ.ಕತ್ತಿ,ಪ್ರಾಚಾರ್ಯ ಸುಧಾ ಸುಣಗಾರ, ಮುಖ್ಯ ಗುರು ರಾಜಕುಮಾರ ಪಾಟೀಲ ವಿದ್ಯಾರ್ಥಿಗಳ ಸ್ಪರ್ಧೆ ಕುರಿತು ಮಾತನಾಡಿದರು.ಡಿ.ಎಸ್.ಮಠಪತಿ, ಸಿ.ಎಸ್.ಪೂಜಾರಿ,ಎಂ.ಎಂ.ಪೊದ್ದಾರ,ಸಂಗೀತಾ ಉಟಗಿ, ಸುರೇಖಾ ಭೈರಶೆಟ್ಟಿ, ಶೃತಿ ಬಿರಾದಾರ,ರೇಣುಕಾ ಗೊಟಗಿ, ಕಮರುನ್ನಿಸಾ ಕೊಟ್ನಾಳ ಮತ್ತಿತರಿದ್ದರು.

Read More

ದೇವರಹಿಪ್ಪರಗಿ: ಕರ್ನಾಟಕ ಸಂಭ್ರಮ ಜ್ಯೋತಿ ರಥಯಾತ್ರೆ ಹಾಗೂ ಸಂವಿಧಾನ ಜಾಗೃತಿ ಸ್ತಬ್ಧಚಿತ್ರ ಯಾತ್ರೆಗೆ ಗೌರವಯುತವಾಗಿ ಶಿಷ್ಟಾಚಾರದೊಂದಿಗೆ ಸ್ವಾಗತಿಸೋಣ ಎಂದು ತಹಶೀಲ್ದಾರ ಪ್ರಕಾಶ ಸಿಂದಗಿ ಹೇಳಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಜರುಗಿದ ಕರ್ನಾಟಕ ಸಂಭ್ರಮ ಜ್ಯೋತಿ ರಥಯಾತ್ರೆ ಹಾಗೂ ಸಂವಿಧಾನ ಜಾಗೃತಿ ಸ್ತಬ್ಧಚಿತ್ರ ಸಂಚಾರದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.ರಥ ಯಾತ್ರೆ ಹಾಗೂ ಸಂವಿಧಾನ ಜಾಗೃತಿ ಸ್ತಬ್ಧಚಿತ್ರಗಳೆರಡೂ ಅತ್ಯಂತ ಮಹತ್ವ ಸಾರಿ ಹೇಳುವ ಯಾತ್ರೆಗಳಾಗಿವೆ. ಇವುಗಳನ್ನು ತಾಲ್ಲೂಕಿನಲ್ಲಿ ಎಲ್ಲ ಸಂಘ, ಸಂಸ್ಥೆ, ಸಂಘಟನೆಗಳ ಉಪಸ್ಥಿತಿಯಲ್ಲಿ ಅಧಿಕಾರಿಗಳು, ವಿದ್ಯಾರ್ಥಿಗಳು, ಜನಪ್ರತಿನಿಧಿಗಳು ಹಾಗೂ ಮುಖ್ಯವಾಗಿ ಸಾರ್ವಜನಿಕರು ಪಾಲ್ಗೊಂಡು ಸ್ವಾಗತಿಸಿ, ಬಿಳ್ಕೋಡೋಣ ಎಂದರು.ತಾಲ್ಲೂಕು ಪಂಚಾಯಿತಿ ಇಓ ಭಾರತಿ ಚೆಲುವಯ್ಯ, ಕಸಾಪ ತಾಲ್ಲೂಕು ಅಧ್ಯಕ್ಷ ಜಿ.ಪಿ.ಬಿರಾದಾರ, ಶರಣ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಎಸ್.ಎನ್.ಬಸವರೆಡ್ಡಿ, ತಾಲ್ಲೂಕು ನೋಡಲ್ ಅಧಿಕಾರಿ ಬಿ.ಎಲ್.ಜುಮನಾಳ, ಮಾತನಾಡಿ, ಎರಡು ಯಾತ್ರೆ, ಕಾರ್ಯಕ್ರಮಗಳ ತಯಾರಿ, ರೂಪುರೇಷೆಗಳ ಕುರಿತು ಮಾತನಾಡಿದರು.ದಲಿತ ಸಂಘರ್ಷ ಸಮೀತಿಯ ವಿಭಾಗೀಯ ಸಂಚಾಲಕ ರಾವುತ ತಳಕೇರಿ, ಪ್ರಕಾಶ ಗುಡಿಮನಿ, ರಾಜಕುಮಾರ ಸಿಂದಗೇರಿ, ಹುಯೋಗಿ…

Read More

ಬ್ರಹ್ಮದೇವನಮಡು: ನಾನು ಒಬ್ಬ ಸಹಕಾರಿಯಾಗಿ ಗುಬ್ಬೇವಾಡ ಪಿಕೆಪಿಎಸ್ ಬ್ಶಾಂಕ್ ಕಟ್ಟಡ ನಿಮಾ೯ಣಕ್ಕೆ ಹತ್ತು ಲಕ್ಷ ರೂ.ಅನುದಾನ ನೀಡುವುದಾಗಿ ಶಾಸಕ ಅಶೋಕ ಮನಗೂಳಿ ಹೇಳಿದರು.ಸಿಂದಗಿ ತಾಲೂಕಿನ ಗುಬ್ಬೇವಾಡ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಕಟ್ಟಡ ನಿಮಾ೯ಣ ಕಾಮಗಾರಿಗೆ ಮಂಗಳವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.ಗುಬ್ಬೇವಾಡ ಪಿಕೆಪಿಎಸ್ ಬ್ಶಾಂಕ್ ಕೆಲವೇ ದಿನಗಳಲ್ಲಿ ಹೆಮ್ಮರವಾಗಿ ಬೆಳೆದು ನಿಂತಿದ್ದು,ನನಗೆ ಸಂತಸವಾಗಿದೆ ಎಂದರು.ಗ್ರಾಮದ ಅಡಿವೇಶ್ವರ ಮಠದ ಅಡಿವೇಶ್ವರ ಸ್ವಾಮೀಜಿ, ಅಮೋಘಸಿದ್ದೇಶ್ವರ ಮಠದ ಕನ್ನಯ್ಶ ಮಹಾರಾಜರು ಸಾನ್ನಿಧ್ಶ ವಹಿಸಿದ್ದರು. ಬ್ಶಾಂಕ್ ಅಧ್ಶಕ್ಷ ಎಸ್.ವಾಯ್.ಕೊಂಡಗೂಳಿ ಅಧ್ಶಕ್ಷತೆ ವಹಿಸಿದ್ದರು. ಉಪಾಧ್ಶಕ್ಷ ನಿಂಗಪ್ಪ ನಾಯ್ಕೋಡಿ,ಗ್ರಾಪಂ ಅಧ್ಶಕ್ಷರ ಪ್ರತಿನಿಧಿ ನಿತ್ಶಾನಂದ ಕಟ್ಟಿಮನಿ, ಉಪಾಧ್ಶಕ್ಷ ಮಹಾಂತೇಶ ಮಳ್ಳಿ, ವಿಡಿಸಿಸಿ ತಾಲೂಕು ನೋಡಲ್ ಅಧಿಕಾರಿ ಎನ್.ಜಿ.ಜನಿವಾರ, ಸಿಂದಗಿ ವಿಡಿಸಿಸಿ ಬ್ಶಾಂಕ್ ವ್ಶವಸ್ಥಾಪಕ ಎ.ಎಸ್.ಕಲಶೆಟ್ಟಿ, ವಿಡಿಸಿಸಿ ಕ್ಷೇತ್ರಾಧಿಕಾರಿ ಎಸ್.ವಾಯ್.ಎಂಟಮಾನ ಸೇರಿದಂತೆ ಯೋಗೇಶ ಕನಾ೯ಳ ಮತ್ತಿತ್ತರಿದ್ದರು. ಬ್ಶಾಂಕ್ ಸಿಇಒ ರಮೇಶ ಇಜೇರಿ ಪ್ರಾಸ್ತಾವಿಕ ಮಾತನಾಡಿದರು. ಮುತ್ತು ಪಾಟೀಲ ಸ್ವಾಗತಿಸಿದರು. ದೇವಿಂದ್ರ ಬಡಿಗೇರ ನಿರೂಪಿಸಿದರು. ಕಾಂಗ್ರೆಸ್ ಯುವ…

Read More

ಆಲಮಟ್ಟಿಯಲ್ಲಿ ಎಸ್ಸೆಸ್ಸೆಲ್ಸಿ ಮಕ್ಕಳೊಂದಿಗೆ ಸಂವಾದದಲ್ಲಿ ಡಿಡಿಪಿಐ ನಾಗೂರ ಅಭಿಮತ ಆಲಮಟ್ಟಿ: ಪಠ್ಯ ಪುಸ್ತಕದ ಸಾಂಗತ್ಯದಲ್ಲಿ ಮಕ್ಕಳು ಪ್ರೀತಿ ಅದರದಿಂದ ಬೆರೆತರೆ ಖಂಡಿತ ಭವಿಷ್ಯತ್ತಿನ ಜೀವನದಲ್ಲಿ ಜೀವನೋಲ್ಲಾಸ ಕಾಣಬಹುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎನ್.ಎಚ್.ನಾಗೂರ ಅಭಿಪ್ರಾಯಿಸಿದರು. ಸ್ಥಳೀಯ ಎಸ್.ವಿ.ವಿ.ಸಂಸ್ಥೆಯ ಮಂಜಪ್ಪ ಹರ್ಡೇಕರ ಸ್ಮಾರಕ ಸಂಯುಕ್ತ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಶಾಲೆಗೆ ಗುರುವಾರ ಭೇಟಿ ನೀಡಿ ಎಸ್ಸೆಸ್ಸೆಲ್ಸಿ ಮಕ್ಕಳೊಂದಿಗೆ ನಡೆಸಿದ ಸಂವಾದದಲ್ಲಿ ಅವರು ಮಾತನಾಡಿದರು. ಪರೀಕ್ಷೆಗಳು ಸಮೀಪಿಸುತ್ತಿವೆ. ಮಕ್ಕಳು ಓದು,ಬರಹದೆಡೆಗೆ ಹೆಚ್ಚು ಗಮನ ಹರಿಸಬೇಕು. ಕಲಿಕೆಯಲ್ಲಿ ಪರಿಪೂರ್ಣತೆ ಇಲ್ಲದಿದ್ದರೆ ಅಥವಾ ಪ್ರಶ್ನೋತ್ತರ ಕೊರತೆಯ ಕಾಡುತ್ತಿದ್ದರೆ ಅದನ್ನು ಶ್ರಮಪಟ್ಟು ಸರಿದೂಗಿಸಿಕೊಳ್ಳಬೇಕು. ಅನ್ಯ ಸಂಗತಿಗಳಿಗೆ ತಲೆ ಕೆಡಿಸಿಕೊಳ್ಳದೇ ಅದ್ಯಯನಾಸಕ್ತಿ ಬೆಳೆಸಿಕೊಳ್ಳಬೇಕು. ಪುಸ್ತಕ ಪ್ರೇಮ, ಬರಹದ ಒಡನಾಟ ತಮ್ಮನ್ನು ಉನ್ನತಿಯಡೆಗೆ ಕೊಂಡೊಯ್ಯುತ್ತದೆ. ನಾಗರಿಕ ಸಮಾಜದಲ್ಲಿ ತಮ್ಮ ಪ್ರತಿಬಿಂಬದ ಛಾಯೆ ಸೊಗಸಾಗಿ ತೋರ್ಪಡಿಸುತ್ತದೆ ಎಂದರು. ಕಲಿಕೆಯಲ್ಲಿ ಏರುಪೇರು ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ ಹಾಗೂ ಪ್ರಶ್ನೋತ್ತರ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ಯಾವ ಪಠ್ಯ…

Read More

ಮುದ್ದೇಬಿಹಾಳ: ಅನಧಿಕೃತವಾಗಿ ಡಬ್ಬಾ ಅಂಗಡಿ ಇಟ್ಟುಕೊಂಡು ವ್ಯಾಪಾರ ನಡೆಸುತ್ತಿದ್ದ ವ್ಯಾಪಾರಸ್ಥರಿಗೆ ಗುರುವಾರ ಬೆಳ್ಳಂಬೆಳಿಗ್ಗೆ ತಾಲೂಕು ಆಡಳಿತ ಶಾಕ್ ನೀಡಿತು.ಇಲ್ಲಿನ ತಹಶೀಲ್ದಾರ ಕಚೇರಿಯ ಬಳಿ ಮತ್ತು ಬಸವೇಶ್ವರ ವೃತ್ತದ ಬಳಿ ಸರ್ಕಾರಿ ಜಾಗೆಯಲ್ಲಿದ್ದ ಅಂಗಡಿ ಮುಂಗಟ್ಟುಗಳ ತೆರವು ಕಾರ್ಯಾಚರಣೆ ನಡೆಸಿ ಸಫಲವಾಯಿತು.ಈ ಮೊದಲು ತೆರವುಗೊಳಿಸಿಕೊಳ್ಳುವಂತೆ ತಹಶೀಲ್ದಾರ ಬಲರಾಮ ಕಟ್ಟಿಮನಿ ಖಡಕ್ ಸೂಚನೆ ನೀಡಿದ್ದರು. ವ್ಯಾಪಾರಿಗಳು ತಮ್ಮ ಅಂಗಡಿಗಳನ್ನ ತೆರುವುಗೊಳಿಸಿಕೊಳ್ಳುವದಾಗಿ ಕೆಲ ದಿನಗಳ ಅವಕಾಶವನ್ನು ಬೇಡಿದ್ದರು. ಮಾನವೀಯತೆಯ ಆಧಾರದ ಮೇಲೆ ತಹಶೀಲ್ದಾರ ಜ.೨೪ ರವರೆಗೆ ಗಡುವು ನೀಡಿದ್ದರು. ಗಡುವಿನ ಅಂತಿಮ ದಿನದಂದು ಯಾವುದೇ ಅಂಗಡಿಕಾರರು ಸ್ವಯಂ ಪ್ರೇರಿತರಾಗಿ ತಮ್ಮ ಅಂಗಡಿಗಳನ್ನು ತೆರವುಗೊಳಿಸದ ಹಿನ್ನೆಲೆ ಅಟೋ ರಿಕ್ಷಾ ಮೂಲಕ ಬಹಿರಂಗವಾಗಿ ತೆರವುಗೊಳಿಸಿಕೊಳ್ಳುವಂತೆ ಪ್ರಕಟಣೆ ಹೊರಡಿಸಿದ್ದರು. ಇಷ್ಟಾದರೂ ವ್ಯಾಪಾರಸ್ಥರು ಮಾತ್ರ ತೆರುವಿಗೆ ಮುಂದಾಗದೇ ನ್ಯಾಯಾಲಯದ ಮೊರೆ ಹೋಗಿದ್ದರು.ಗುರುವಾರ ಬೆಳ್ಳಂಬೆಳಿಗ್ಗೆ ೬ ಗಂಟೆಗೆ ತಹಶೀಲ್ದಾರ ಬಲರಾಮ ಕಟ್ಟಿಮನಿ, ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ, ಪಿಎಸ್‌ಐ ಸಂಜೀವ ತಿಪರೆಡ್ಡಿ, ತಾಳಿಕೋಟೆ ಪಿಎಸ್‌ಐ ರಾಮನಗೌಡ ಸಂಕನಾಳ ಸೇರಿದಂತೆ ೬೦ ಕ್ಕೂ ಹೆಚ್ಚು…

Read More

ಬಸವನಬಾಗೇವಾಡಿ: ತಾಲೂಕಿನ ಮನಗೂಳಿ ಸಂಸ್ಥಾನ ಹಿರೇಮಠದಲ್ಲಿ ಫೆ.2 ರಿಂದ 4 ರವರೆಗೆ ಹಮ್ಮಿಕೊಂಡಿರುವ ಕಾರ್ಯಕ್ರಮಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ ಅವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿ ಬುಧವಾರ ಶ್ರೀಮಠದ ಅಭಿನವ ಸಂಗನಬಸವ ಶಿವಾಚಾರ್ಯ ಸ್ವಾಮೀಜಿ ಆಹ್ವಾನ ಪತ್ರಿಕೆ ನೀಡಿ ಆಹ್ವಾನಿಸಿದರು.ಫೆ.3 ರಂದು ಹಮ್ಮಿಕೊಂಡಿರುವ ಶ್ರೀಮಠದ ಶತಾಯುಷಿ ಸಂಗನಬಸವ ಕಲ್ಯಾಣ ಮಂಟಪ ಲೋಕಾರ್ಪಣೆ, ಉಭಯ ಶ್ರಿಗಳ ಧ್ವನಿ ಸುರುಳಿ ಬಿಡುಗಡೆ ಮತ್ತು ಸಂಗನಬಸವಶ್ರೀ ರಾಜ್ಯಮಟ್ಟದ ಪ್ರದಾನ ಸಮಾರಂಭಕ್ಕೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಗೆ ಬುಧವಾರ ಶ್ರೀಮಠದ ಅಭಿನವ ಸಂಗನಬಸವ ಶಿವಾಚಾರ್ಯ ಸ್ವಾಮೀಜಿ ಅವರು ಆಹ್ವಾನ ಪತ್ರಿಕೆ ನೀಡುವ ಸಮಾರಂಭಕ್ಕೆ ಆಹ್ವಾನ ನೀಡಿದರು.ನಂತರ ಇದೇ ಸಮಾರಂಭಕ್ಕೆ ಸಚಿವರಾದ ಎಚ್. ಕೆ. ಪಾಟೀಲ, ಶಿವಾನಂದ ಪಾಟೀಲ, ಮಾಜಿ ಉಪಮುಖ್ಯಮಂತ್ರಿ ಲಕ್ಷ್ಣಣ ಸವದಿ ಅವರಿಗೂ ಆಹ್ವಾನ ಪತ್ರಿಕೆ ನೀಡಿ ಆಹ್ವಾನ ನೀಡಿದರು.ಫೆ,4 ರಂದು ಹಮ್ಮಿಕೊಂಡಿರುವ ಡಾ.ಮಹಾಂತ ಶಿವಾಚಾರ್ಯರ 11 ನೇ ಪುಣ್ಯಾರಾಧನೆ, ಅಭಿನವ ಸಂಗನಬಸವ ಶಿವಾಚಾರ್ಯ ಸ್ವಾಮೀಜಿ ಅವರ ಪಟ್ಟಾಧಿಕಾರದ ದಶಮಾನೋತ್ಸವ, ಉಚಿತ ಸಾಮೂಹಿಕ ವಿವಾಹ ಮತ್ತು ನೂತನ ರಥೋತ್ಸವ ಲೋಕಾರ್ಪಣೆ…

Read More

ಬಸವನಬಾಗೇವಾಡಿ: ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿ ಪಕ್ಷದ ಸಂಘಟಕರಾಗಿ ಹಲವಾರು ವರ್ಷಗಳಿಂದ ಪಕ್ಷಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಉತ್ತರ ಕರ್ನಾಟಕದ ವಿಶೇಷ ರಾಜಕಾರಣಿಯಾಗಿರುವ ಜಮಖಂಡಿಯ ನಜೀರ ಕೊಂಗನಳ್ಳಿ ಅವರಿಗೆ ನಿಗಮ ಮಂಡಳಿಯಲ್ಲಿ ಸ್ಥಾನವನ್ನು ನೀಡಬೇಕೆಂದು ನಜೀರ ಕೊಂಗನಳ್ಳಿ ಅಭಿಮಾನಿ ಬಳಗದ ಸದಸ್ಯರಾದ ಪಯಾಜಅಹ್ಮದ ತಂಬದ, ಲಾಲಾಸಾಬ ಚಳ್ಳಿಗಿಡದ, ಅಲಿ ಹುಬ್ಬಳ್ಳಿ, ಅಬ್ದುಲ್ ಬಾಗವಾನ ಶೇಖ್ ಚಳ್ಳಿಗಿಡದ ಅವರು ಕಾಂಗ್ರೆಸ್ ವರಿಷ್ಠರಿಗೆ ಆಗ್ರಹಿಸಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ನಜೀರ ಕೊಂಗನಳ್ಳಿ ಅವರು ಈಗಾಗಲೇ ಕರ್ನಾಟಕ ರಾಜ್ಯ ಜವಳಿ ಮತ್ತು ಮೂಲಭೂತ ಸೌಕರ್ಯದ ಉಪಾಧ್ಯಕ್ಷರಾಗಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದಾರೆ. ಇವರೊಬ್ಬ ಸಜ್ಜನ ರಾಜಕಾರಣಿಯಾಗಿದ್ದಾರೆ. ಇವರ ಸೇವೆಯನ್ನು ಗುರುತಿಸಿ ನಿಗಮ ಮಂಡಳಿಯ ರಚನೆಯಲ್ಲಿ ಇವರಿಗೆ ಸ್ಥಾನಮಾನ ನೀಡುವಂತೆ ಕಾಂಗ್ರೆಸ್ ವರಿಷ್ಠರಿಗೆ ಮನವಿ ಮಾಡಿಕೊಂಡಿದ್ದಾರೆ.

Read More