Author: editor.udayarashmi@gmail.com

ಸಿಂದಗಿ: ಫೆ.೨೬ ರಂದು ಪಟ್ಟಣದ ಎಹೆಚ್.ಜಿ.ಪಪೂ ಮಹಾವಿದ್ಯಾಲಯದ ಮೈದಾನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಸಿಂದಗಿ ಹಮ್ಮಿಕೊಳ್ಳುತ್ತಿರುವ ೬ನೆಯ ಕನ್ನಡ ಸಾಹಿತ್ಯ ಸಮ್ಮೇಳನವು ಎಲ್ಲ ಕನ್ನಡ ಮನಸ್ಸುಗಳು ಕೂಡಿಕೊಂಡು ನಾಡದೇವಿಯ ಮೆರವಣಿಗೆಯೊಂದಿಗೆ ಅದ್ದೂರಿಯಾಗಿ ಜರುಗಿಸೋಣ ಎಂದು ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ ವಿನಂತಿಸಿದರು.ಪಟ್ಟಣದ ಬಸವ ಮಂಟಪದಲ್ಲಿ ೬ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.ಸಮ್ಮೇಳನದ ವೇದಿಕೆ ಸಜ್ಜಾಗಿದೆ, ಬಿತ್ತಿಪತ್ರಗಳ ಅಂಟಿಸುಕೆ ನಡೆಸಿದೆ, ಅಲ್ಲದೆ ವಿವಿಧ ಬಗೆಯ ಜವಾರಿ ಊಟದ ವ್ಯವಸ್ಥೆ ನಡೆದಿದೆ. ಸುಮಂಗಲೆಯರ ಕುಂಭಮೇಳದೊಂದಿಗೆ ಸರ್ವಾಧ್ಯಕ್ಷರ ಮೆರವಣಿಗೆಗೆ ಸಾರವಾಡದ ಗೊಂಬೆ ಕುಣಿತ, ಕರಡಿ ಮಜಲು, ಲಂಬಾಣಿ ನೃತ್ಯ, ಹಲಗಿ ಕುಣಿತ ಸೇರಿದಂತೆ ಸರಕಾರಿ ಶಾಲೆಗಳ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಹಲವು ಕಲಾ ತಂಡಗಳು ಕಾರ್ಯಕ್ರಮದಲ್ಲಿ ಬಾಗವಹಿಸಲಿವೆ. ಕಾರಣ ಎಲ್ಲ ಸಾಹಿತ್ಯಾಭಿಮಾನಿಗಳು ಒಂದಾಗಿ ಅಕ್ಕರೆಯ ಅಕ್ಷರ ಜಾತ್ರೆಯನ್ನು ರಾಜ್ಯದಲ್ಲಿ ಮಾದರಿಯಾಗುವ ರೀತಿಯಲ್ಲಿ ಆಚರಿಸೋಣ ಎಂದರು.ಈ ವೇಳೆ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ ಮಾಜಿ ಅದ್ಯಕ್ಷ ಅಶೋಕ…

Read More

“ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ” – ವಿವೇಕಾನಂದ ಎಚ್. ಕೆ.. ಇತಿಹಾಸದಲ್ಲಿ ಅನೇಕ ಏಳು ಬೀಳುಗಳಿಗೆ ಸಾಕ್ಷಿಯಾಗಿರುವ ದೆಹಲಿ ಕೆಲವೇ ತಿಂಗಳುಗಳ ಹಿಂದೆ ಒಂದು ವರ್ಷದ ನಿರಂತರ ಯಶಸ್ವಿ ರೈತ ಹೋರಾಟವನ್ನು ಕಂಡಿದೆ. ಜಾಗತೀಕರಣದ ನಂತರ ಅತಿ ಹೆಚ್ಚು ನಷ್ಟಕ್ಕೆ, ತೊಂದರೆಗೆ ಒಳಗಾಗಿದ್ದು ಭಾರತದ ರೈತ ಸಮೂಹ. ಮುಕ್ತ ಮಾರುಕಟ್ಟೆಗೆ ಬೇಕಾದ ಮಾನಸಿಕ ಸ್ಥಿತಿ ಭಾರತದ ರೈತರಲ್ಲಿ ಇರಲಿಲ್ಲ ಅಥವಾ ಆ ಮುಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲಿನ ರೈತರಿಗೆ, ಈ ನೆಲಕ್ಕೆ ಹೊಂದಾಣಿಕೆ ಆಗಲಿಲ್ಲ. ಅದರ ಪರಿಣಾಮ ಲಕ್ಷ ಲಕ್ಷ ಜನ ಆತ್ಮಹತ್ಯೆಯ ಹಾದಿ ಹಿಡಿದ ಪರಿಣಾಮ ಇನ್ನೂ ನಿಂತಿಲ್ಲ.. ರೈತ ಕೃಷಿಯಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ನಿರಂತರವಾಗಿ ಈ ವ್ಯವಸ್ಥೆಯಿಂದ ಶಾಶ್ವತ ದೂರ ಸರಿಯುವ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುವುದು ಈ ದೇಶದ ಒಂದು ದುರಂತ ವ್ಯವಸ್ಥೆಗೆ ಉದಾಹರಣೆಯಾಗಿದೆ. ಈ ನಡುವೆ ಮುಖ್ಯವಾಗಿ ಕರ್ನಾಟಕ ಮಹಾರಾಷ್ಟ್ರ ಉತ್ತರ ಪ್ರದೇಶ ಹರಿಯಾಣ ಮಧ್ಯಪ್ರದೇಶ ಪಂಜಾಬ್ ಈ ಭಾಗಗಳಲ್ಲಿ ರೈತ ಹೋರಾಟಗಳು ತುಂಬಾ ಪರಿಣಾಮಕಾರಿಯಾಗಿ ಮತ್ತು…

Read More

ವಿಜಯಪುರ: ವಿದ್ಯಾರ್ಥಿಗಳು ಸತತ ಅಧ್ಯಯನದ ಮೂಲಕ ಉತ್ತಮ ಸಾಧನೆ ಮಾಡಿ ಪೋಷಕ ಕನಸುಗಳನ್ನು ನನಸು ಮಾಡಲು ಶ್ರಮಿಸಬೇಕು ಎಂದು ರಾಜ್ಯ ಶುಶ್ರೂಷ ಪರೀಕ್ಷಾ ಮಂಡಳಿ ಕಾರ್ಯದರ್ಶಿ ಮಡಿವಾಳಪ್ಪ ನಾಗರಹಳ್ಳಿ ಹೇಳಿದ್ದಾರೆ.ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಶ್ರೀ ಬಿ. ಎಂ. ಪಾಟೀಲ ಶೂಶ್ರುಷ ಮಹಾವಿದ್ಯಾಲಯದಲ್ಲಿ ಸೋಮವಾರ ನಡೆದ ಮೊದಲನೇ ವರ್ಷದ ಬಿಎಸ್ಸಿ ಪದವಿ ವಿದ್ಯಾರ್ಥಿಗಳಿಗೆ ಮತ್ತು ಜಿ.ಎನ್.ಎಂ ವಿದ್ಯಾರ್ಥಿಗಳ ಪ್ರತಿಜ್ಞಾವಿಧಿ ಬೋಧಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಈ ಭಾಗದ ಜನರಿಗೆ ಉತ್ತಮ ಶಿಕ್ಷಣ ನೀಡುವ ಗುರಿ ಹೊಂದಿರುವ ಪ್ರತಿಷ್ಠಿತ ಬಿ.ಎಲ್.ಡಿ.ಇ ಶಿಕ್ಷಣ ಸಂಸ್ಥೆಯ ಕಾಲೇಜಿಗೆ ಸೇರುವ ಮೂಲಕ ವಿದ್ಯಾರ್ಥಿಗಳು ಉತ್ತಮ ನಿರ್ಧಾರ ಕೈಗೊಂಡಿದ್ದೀರಿ. ಇಲ್ಲಿ ನೀಡಲಾಗುವ ಗುಣಮಟ್ಟದ ಶಿಕ್ಷಣವನ್ನು ಪಡೆದು ಎಲ್ಲರೂ ಜೀವನದಲ್ಲಿ ಉನ್ನತ ಸಾಧನೆ ಮಾಡಬೇಕು ಎಂದು ಹೇಳಿದರು.ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಬೋರ್ಡ್ ಆಫ್ ಸ್ಟಡೀಸ್ ಸದಸ್ಯ ಶ್ರೀಕಾಂತ ಪುಲಾರಿ ಮಾತನಾಡಿ, ಶುಶ್ರೂಷ ವೃತ್ತಿಗೆ ವಿಶ್ವದಲ್ಲಿ ಹೆಚ್ಚಿನ ಬೇಡಿಕೆ ಇದೆ. ನರ್ಸಿಂಗ್ ಪದವೀಧರರು ಯಾರೂ ನಿರುದ್ಯೋಗಿಗಳಾಗಿರುವ ಉದಾಹರಣೆಗಳಿಲ್ಲ. ಅಲ್ಲದೇ,…

Read More

“ಜಯ್ ನುಡಿ” ( ವ್ಯಕ್ತಿತ್ವ ವಿಕಸನ ಮಾಲೆ ) – ಜಯಶ್ರಿ.ಜೆ. ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕರು, ಬೆಳಗಾವಿ ೯೪೪೯೨೩೪೧೪೨ ಜಗತಿನಲ್ಲಿ ಎಲ್ಲರಿಗೂ ಒಂದೇ ಸಮನಾಗಿ ಸಿಗುವುದು ಸಮಯ ಮಾತ್ರ. ಬಡವನಿಗೂ ಒಂದೇ ಶ್ರೀಮಂತನಿಗೂ ಒಂದೇ. ಮಹಾನ ಸಾಧಕರಿಗೂ ಒಂದೇ ಸಾಮಾನ್ಯನಿಗೂ ಒಂದೇ. ಹೀಗೆ ಸಮನಾಗಿ ಸಿಗುವ ಈ ಸಮಯವನ್ನು ಬಳಸುವ ವಿಧಾನವು ವ್ಯಕ್ತಿಯ ಜೀವನದ ಗೆಲುವನ್ನು ಮೌಲ್ಯವನ್ನು ಹೆಚ್ಚಿಸುತ್ತದೆ. ಇಲ್ಲವೇ ಮೇಲಕ್ಕೆ ಏಳದಂತೆ ಕೆಳಕ್ಕೆ ಬೀಳಿಸುತ್ತದೆ. ಹಾಗೆಯೇ ಬಿಟ್ಟರೆ ಮಣ್ಣು ಮುಕ್ಕಿಸುತ್ತದೆ. ಸರಿಯಾಗಿ ಬಳಸಿದ ಒಳ್ಳೆಯ ಸಮಯ ಜೀವನದಲ್ಲಿ ನೆನಪಾಗಿ ಉಳಿಯುತ್ತದೆ. ವ್ಯರ್ಥವಾಗಿ ಕಳೆದ ಸಮಯ ಬದುಕಿನಲ್ಲಿ ಪಾಠವಾಗುತ್ತದೆ. ಅಂದ ಹಾಗೆ ನಾನಿಲ್ಲಿ ಇಷ್ಟೆಲ್ಲ ಪೀಠಿಕೆ ಏಕೆ ಹಾಕುತ್ತಿದ್ದೇನೆ ಅಂದುಕೊಂಡಿರೇನು? ಅಂದುಕೊಂಡಿದ್ದನ್ನು ಅಂದುಕೊಂಡಷ್ಟು ಸುಲಭವಾಗಿ ಮಾಡಬಹುದು ಎಂದು ಸ್ಪಷ್ಟಪಡಿಸಲು. ಸಮಯದಿಂದಲೇ ಕಂಡ ಕನಸುಗಳನ್ನು ನನಸಾಗಿಸಬಲ್ಲೆವು ಎಂದು ಹೇಳಲು.ಭಿನ್ನ ವಿಭಿನ್ನ ಅಭಿಮತಅಂದುಕೊಂಡಿರುವ ಎಲ್ಲದಕ್ಕೂ ಸಮಯವನ್ನು ಎತ್ತಿಟ್ಟು ಅಂದುಕೊಂಡಿದ್ದನ್ನು ನಿರ್ವಹಿಸುವುದು ನಾವು ಅಂದುಕೊಂಡಷ್ಟು ಸರಳವಲ್ಲ. ಅನ್ನೋದು ಬಹುತೇಕರ ಅಂಬೋಣ. ಅದು ನಿಜವೂ ಕೂಡ ಅನ್ನೋದು ಹಲವರ…

Read More

ವಿಜಯಪುರ: ಗ್ರಂಥಗಳು ಮಾನವೀಯ ಮೌಲ್ಯವನ್ನು ಕಾಪಾಡುವ ಸಾಹಿತ್ಯವಾಗಿದೆ. ಸಂಸ್ಕೃತಿಕ ಪ್ರತೀಕವೇ ಗ್ರಂಥಗಳು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಹೇಳಿದರು. ಮಂಗಳವಾರ ಮನಗೂಳಿ ಗ್ರಾಮದ ಸುರೇಶ ಗೆಜ್ಜೆ ತೋಟದಲ್ಲಿ ಹಮ್ಮಿಕೊಂಡ ’ಸ್ವಾತಂತ್ರ್ಯ ಸಿರಿ’ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಪರಿಷತ್ ಗ್ರಾಮಮಟ್ಟದಲ್ಲಿ ಸಾಹಿತ್ಯ ಚಟುವಟಿಕೆಗಳನ್ನು ಮಾಡುವುದರ ಮೂಲಕ ಸಾಹಿತ್ಯವನ್ನು ಮನೆ ಮನೆಗೆ ತಲುಪಿಸುವ ಕಾರ್ಯ ಮಾಡಿದ ತೃಪ್ತಿ ನಮಗಿದೆ ಎಂದರು.’ಸ್ವಾತಂತ್ರ್ಯ ಸಿರಿ’ ಕೃತಿ ಪರಿಚಯ ಮಾಡಿದ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಜಂಬುನಾಥ ಕಂಚಾಣಿ ಮಾತನಾಡಿ, ಲೇಖಕಿ ಕಮಲ ಗೆಜ್ಜೆ (ಮುರಾಳ ) ವಿಜ್ಞಾನ ಶಿಕ್ಷಕಿಯಾದರೂ ಕನ್ನಡ ಸಾಹಿತ್ಯದಲ್ಲಿ ಬಹಳಷ್ಟು ಗ್ರಂಥಗಳನ್ನು ರಚಿಸುವ ಮೂಲಕ ಕನ್ನಡ ಸಾಹಿತ್ಯ ಸಾರಸ್ವತ ಲೋಕಕ್ಕೆ ಅಮೂಲ್ಯವಾದ ’ಸ್ವಾತಂತ್ರ್ಯ ಸಿರಿ’ ಉಪಯುಕ್ತ ಗ್ರಂಥವಾಗಿದೆ ಎಂದರು.ಸ್ವಾತಂತ್ರ್ಯ ಹೋರಾಟಗಾರರಾದ ದಿ. ಚಂದಪ್ಪ ಗೆಜ್ಜೆ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಅರ್ಪಿಸಿ ಮಾತನಾಡಿದ ಕಮಲ ಮುರಾಳ ಮತ್ತು ಸುರೇಶ್ ಗೆಜ್ಜೆ…

Read More

ವಿಧಾನಪರಿಷತ್ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಗೆಲುವು ಬೆಂಗಳೂರು: ವಿಧಾನಪರಿಷತ್ ನ ಬೆಂಗಳೂರು ಶಿಕ್ಷಕರ ಕ್ಷೇತ್ರದ ಫಲಿತಾಂಶ ಹೊರಬಿದ್ದಿದ್ದು ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿಗೆ ಸೋಲಾಗಿದೆ.ಉಪಚುನಾವಣೆಯಲ್ಲಿ ಕಾಂಗ್ರೆಸ್ ನ ಪುಟ್ಟಣ್ಣ 1506 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.ಆರಂಭದಿಂದಲೂ ಮುನ್ನಡೆ ಕಾಯ್ದುಗೊಂಡಿದ್ದ ಪುಟ್ಟಣ್ಣ ಅಂತಿಮವಾಗಿ ಎಪಿ ರಂಗನಾಥ್ ವಿರುದ್ಧ ಗೆಲುವು ಸಾಧಿಸಿದ್ದಾರೆ. ಪುಟ್ಟಣ್ಣ ಗೆಲುವು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಸಂಭ್ರಮ ಮನೆ ಮಾಡಿದೆ.ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಸಲುವಾಗಿ ಕಳೆದ ಮಾರ್ಚ್ ನಲ್ಲಿ ಬಿಜೆಪಿಗೆ ರಾಜಿನಾಮೆ ನೀಡಿ ಕಾಂಗ್ರೆಸ್ ಸೇರ್ಪಡೆಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಉಪಚುನಾವಣೆ ನಡೆದಿದ್ದು ಇದೀಗ ಪುಟ್ಟಣ್ಣ ಅವರೇ ಗೆಲುವು ಸಾಧಿಸಿದ್ದಾರೆ.ಕಾಂಗ್ರೆಸ್​ನ ಪುಟ್ಟಣ್ಣ ಒಟ್ಟು 8,260 ಮತಗಳನ್ನು ಪಡೆದುಕೊಂಡಿದ್ದರೆ, ಜೆಡಿಎಸ್​-ಬಿಜೆಪಿ ಮೈತ್ರಿ ಅಭ್ಯರ್ಥಿ ಎಪಿ ರಂಗನಾಥ್ ಅವರಿಗೆ ಒಟ್ಟು 6753 ಮತಗಳು ಬಿದ್ದಿವೆ. ಇನ್ನು 1239 ಮತಗಳು ತಿರಸ್ಕೃತಗೊಂಡಿವೆ.

Read More

ವೀಣಾಂತರಂಗ – ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ-ಗದಗ ವಿಚಿತ್ರವಾದರೂ ಸತ್ಯ.. ಪರಸ್ಪರ ಗಂಡು-ಹೆಣ್ಣುಗಳು, ಪಾಲಕರು ಮತ್ತು ಹಿರಿಯರು.. ಸಾಮಾಜಿಕವಾಗಿ, ಆರ್ಥಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ಪಾರಿವಾರಿಕವಾಗಿ ಪರಸ್ಪರ ಹೊಂದಾಣಿಕೆ ಸಾಧ್ಯ ಎಂಬುದನ್ನು ಪರಿಶೀಲಿಸಿ, ಒಪ್ಪಿ ಮಾಡಿರುವ ವಿವಾಹದ ಬಂಧವನ್ನು ಕೋರ್ಟ್ನ ಮೂಲಕ ಮುರಿದು ಹಾಕುವುದು ಅಥವಾ ಬೇರ್ಪಡಿಸುವುದು ವಿಚ್ಛೇದನ. ಹಾಗಾದರೆ ಸಂಬಂಧಗಳು ಹಳಸುವುದು ಯಾವಾಗ? *ಪರಸ್ಪರ ಒಬ್ಬರಿಗೊಬ್ಬರು ಸಮಯ, ಪ್ರೀತಿ ನೀಡದೆ ಇದ್ದಾಗ ಮತ್ತು ವಿಶ್ವಾಸ, ನಂಬಿಕೆಯನ್ನು ಉಳಿಸಿಕೊಳ್ಳದೆ ಹೋದಾಗ *ದಾಂಪತ್ಯ ಎಂಬುದು ಎರಡು ಜೀವಗಳು ಒಟ್ಟಾಗಿ ಜೊತೆಯಾಗಿ ಸಾಗಿಸಬಹುದಾದ ಸುಧೀರ್ಘ ಸಂಬಂಧ ಮತ್ತು ಆ ಸಂಬಂಧದಲ್ಲಿ ಪರಸ್ಪರ ಕುಂದು ಕೊರತೆಗಳನ್ನು ಅರಿಯುವುದು ಮತ್ತು ಕುಂದು ಕೊರತೆಗಳ ಸಮೇತ ಅವರನ್ನು ಸ್ವೀಕರಿಸದೇ ಇರುವುದು. *ಇತ್ತೀಚೆಗಿನ ಮಾಧ್ಯಮಗಳ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಕಂಡುಬರುವ ಅತಿರಂಜಿತವಾದ ಭ್ರಾಮಕ ಬದುಕಿನ ಚಿತ್ರಣಗಳು ಮತ್ತು ಅದರ ಪರಿಣಾಮವಾಗಿ ಸ್ವೇಚ್ಚೆಯ ಜೀವನವನ್ನು ಬಯಸುವ ಯುವಜನ. *ಪರಸ್ಪರ ಅರಿವಿನ ಮತ್ತು ಹೊಂದಾಣಿಕೆಯ ಕೊರತೆ, ಸಂಬಂಧಗಳಲ್ಲಿ ತಲೆದೋರುವ ಅಹಂ *ಮದುವೆ ಎಂಬ…

Read More

ವಿಜಯಪುರ: ಮಾರ್ಚ ೩ ರಿಂದ ೬ರವರೆಗೆ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಪೋಲಿಯೊವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ನವಜಾತ ಶಿಶುವಿನಿಂದ ಹಿಡಿದು ೫ ವರ್ಷದ ಒಳಗಿನ ಮಕ್ಕಳಿಗೆ ಕಡ್ಡಾಯವಾಗಿ ಪೋಲಿಯೋ ಲಸಿಕೆ ನೀಡಬೇಕು. ಇದು ರಾಷ್ಟ್ರೀಯ ಕಾರ್ಯಕ್ರಮ ಆಗಿರುವುದರಿಂದ ವಿವಿಧ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ಯಾವ ಕಾರಣಕ್ಕೂ ಮಕ್ಕಳು ಪೋಲಿಯೊ ಲಸಿಕೆ ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಟಿ. ಭೂಬಾಲನ್ ಸೂಚಿಸಿದರು.ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ೨೦೨೪ರ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ಜಿಲ್ಲಾ ಮಟ್ಟದ ಕಾರ್ಯಪಡೆ ಸಮಿತಿ ಸಭೆಯಲ್ಲಿ ಮಾತನಾಡಿದರು.ಪೋಲಿಯೋ ಲಸಿಕೆಯನ್ನು ಶೀತಲೀಕರಣ ಮಾಡಬೇಕು. ಅವುಗಳನ್ನು ಎಲ್ಲಾ ಕಡೆ ಸೂಕ್ತ ರೀತಿಯಲ್ಲಿ ಸರಬರಾಜು ಮಾಡಬೇಕು. ಯಾವುದೇ ಕಾರಣಕ್ಕೂ ಮಕ್ಕಳು ಲಸಿಕೆ ವಂಚಿತರಾಗಬಾರದು. ಜನನಿಬಿಡ ಬಸ್ ನಿಲ್ದಾಣ, ರೈಲು ನಿಲ್ದಾಣದಲ್ಲಿ ಪ್ರಯಾಣ ಮಾಡುತ್ತಿರುವ ಮಕ್ಕಳಿಗೂ ಲಸಿಕೆ ನೀಡುವುದಕ್ಕಾಗಿ ತಂಡವನ್ನು ರಚಿಸಿ ನಿಲ್ದಾಣಗಳಲ್ಲಿ ಪೋಲಿಯೊ ಲಸಿಕಾ ಕೇಂದ್ರಗಳನ್ನು ತೆರೆಯಬೇಕು ಎಂದು ಹೇಳಿದರು.ಪೋಲಿಯೋ ಕುರಿತು ಶಾಲಾ ಮಕ್ಕಳಿಂದ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಬೇಕು.…

Read More

ಬೆಂಗಳೂರು: ಹತ್ತು ಅಶ್ವಶಕ್ತಿಗೂ ಅಧಿಕ ಸಾಮರ್ಥ್ಯದ ವಿದ್ಯುತ್ ಮಗ್ಗ ನೇಕಾರರಿಗೆ ಈ ಮೊದಲಿನಂತೆ ಯೂನಿಟ್ ಗೆ ೧.೨೫ ರೂ. ನಿಗದಿಪಡಿಸಿ ಜಾರಿಗೆ ತರುವ ಬಗ್ಗೆ ಪರಿಶೀಲನೆ ಮಾಡಲಾಗುವುದು ಎಂದು ಜವಳಿ ಸಚಿವ ಶಿವಾನಂದ ಪಾಟೀಲ ವಿಧಾನ ಪರಿಷತ್ತಿಗೆ ತಿಳಿಸಿದ್ದಾರೆಪ್ರಶ್ನೋತ್ತರ ಅವಧಿಯಲ್ಲಿ ಉಮಾಶ್ರೀ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಒಂದರಿಂದ ಹತ್ತು ಅಶ್ವಶಕ್ತಿ ಸಾಮರ್ಥ್ಯದ ವಿದ್ಯುತ್ ಮಗ್ಗಗಳಿಗೆ ಉಚಿತವಾಗಿ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಹತ್ತು ಅಶ್ವಶಕ್ತಿಗೂ ಅಧಿಕ ಸಾಮರ್ಥ್ಯದ ವಿದ್ಯುತ್ ಕೈ ಮಗ್ಗಗಳಿಗೆ ಈ ಮೊದಲು ನಿಗದಿಪಡಿಸಿದ್ದ ದರವನ್ನೇ ಜಾರಿಗೆ ತರುವ ಬಗ್ಗೆ ಇಂಧನ ಸಚಿವರೊಂದಿಗೆ ಚರ್ಚೆ ಮಾಡಲಾಗುವುದು ಎಂದು ಪರಿಶೀಲಿಸಲಾಗುವುದು ಎಂದು ಹೇಳಿದರು.ಶಾಲಾ ಸಮವಸ್ತ್ರ ಪೂರೈಕೆಗೆ ಈ ಮೊದಲು ಆದೇಶ ನೀಡಲಾಗಿತ್ತು. ಆದರೆ ಗುಣಮಟ್ಟ ಕಳಪೆಯಾಗಿದ್ದರಿಂದ ಆದೇಶ ಹಿಂತೆಗೆದುಕೊಳ್ಳಲಾಗಿತ್ತು. ಬಟ್ಟೆ ಸರಬರಾಜಿಗೆ ಪುನಃ ಅವಕಾಶ ನೀಡುವ ಬಗ್ಗೆ ಚಿಂತನೆ ಇದೆ ಎಂದು ತಿಳಿಸಿದರು.ಬೇರೆ ಬೇರೆ ಉದ್ಯೋಗಗಳಲ್ಲಿ ತೊಡಗಿಸಿಕೊಂಡಿರುವ ಕಾರಣ ನೇಕಾರರ ಸಂಖ್ಯೆ ಕಡಿಮೆಯಾಗಿದೆ. ನೇಕಾರರ ನಿಖರ ಸಂಖ್ಯೆ ಅರಿಯಲು ಜನಗಣತಿ ಮಾಡಿಸುವ…

Read More