Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಚಿಮ್ಮಡ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಗ್ರಾಮದ ಮತಗಟ್ಟೆಗಳಿಗೆ ತೇರದಾಳ ಮತಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಹಾಗೂ ವಿಶೇಷ ಜಿಲ್ಲಾಧಿಕಾರಿಗಳಾದ ಎಸ್. ಎಂ. ಮುಲ್ಲಾ ಭೇಟಿನೀಡಿ ಪರಿಶೀಲನೆ ನಡೆಸಿದರು.ಗ್ರಾಮದ ಸರಕಾರಿ ಪ್ರೌಢಶಾಲೆ ಮತ್ತು ಸರಕಾರಿ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಗಳ ಮತಗಟ್ಟೆ ಕೇಂದ್ರಗಳಿಗೆ ಭೇಟಿನೀಡಿ ಅಲ್ಲಿನ ಗಾಳಿ ಬೆಳಕು ಶೌಚಾಲಯ ವ್ಯವಸ್ಥೆ ಹಾಗೂ ಪೀಠೋಪಕರಣಗಳ ವ್ಯವಸ್ಥೆಗಳ ಕುರಿತು ಮಾಹಿತಿ ಪಡೆದರು. ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಪೀಠೋಪಕರಣಗಳ ಕೊರತೆ, ಹಾಗೂ ಸರಕಾರಿ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಮಳೆಗೆ ಸೋರುತ್ತಿರುವ ಕುರಿತು ಮಹಿತಿ ಪಡೆದು ಅವುಗಳ ಪರಿಹಾರ ಇಲ್ಲವೇ ಪರ್ಯಾಯ ವ್ಯವಸ್ಥೆ ಕೈಗೊಳ್ಳುವ ಕುರಿತು ವರದಿ ಸಲ್ಲಿಸಲಾಗುವುದೆಂದು ಸಹಾಯಕ ಚುನಾವಣಾಧಿಕಾರಿ ಎಸ್. ಎಂ. ಮುಲ್ಲಾ ತಿಳಿಸಿದರು.ತೇರದಾಳ ವಿಭಾಗದ ಕಂದಾಯ ನಿರೀಕ್ಷಕ ಪಿ.ಆರ್. ಮಠಪತಿ, ಗ್ರಾಮ ಆಡಳಿತ ಅಧಿಕಾರಿ ಮಂಜುನಾಥ ನೀಲನ್ನವರ, ಅರಭಾಜ ಜಮಖಂಡಿ, ಪ್ರೌಢಶಾಲಾ ಮುಖ್ಯೋಪಾದ್ಯಾಯೆ ಶ್ರೀಮತಿ ಎಂ.ಎಸ್. ಜಿಟ್ಟಿ, ಬಿ.ಎಸ್. ಹಲಗಿ, ಎಪಿಎಂಸಿ ನಿರ್ದೆಶಕ ಪ್ರಭು ಮುಧೋಳ,…
ದೇವರಹಿಪ್ಪರಗಿ: ಕಾರ್ಯ ನಿರತ ಪತ್ರಕರ್ತರ ಸಂಘ ದೇವರಹಿಪ್ಪರಗಿ ಮತ್ತು ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕ ವಿಜಯಪುರ ವತಿಯಿಂದ ದೇವರಹಿಪ್ಪರಗಿ ತಾಲೂಕಿನ ಪಡಗಾನೂರ ಗ್ರಾಮದಲ್ಲಿ ಏರ್ಪಡಿಸಿದ “ಕರ್ನಾಟಕ ಸುವರ್ಣ ಸಂಭ್ರಮಾಚರಣೆ ” ಕಾರ್ಯಕ್ರಮದಲ್ಲಿ ಪಡಗಾನೂರಿನ ಮಾತೋಶ್ರೀ ಸುಗಲಾಬಾಯಿಗೌಡತಿ ಪಾಟೀಲ ಜಾನಪದ ಪ್ರತಿಷ್ಠಾನ (ರಿ)ವು ಜಾನಪದ ಕ್ಷೇತ್ರದಲ್ಲಿ ೬ ವರ್ಷಗಳಲ್ಲಿ ೪೦ ಕಾರ್ಯಕ್ರಮ ಹಮ್ಮಿಕೊಂಡು ಜಾನಪದ ಉಪನ್ಯಾಸ, ಜಾನಪದ ಕಲಾ ಪ್ರದರ್ಶನ, ಕಲಾವಿದರ ಸನ್ಮಾನ, ಸಾಧಕರ ಸನ್ಮಾನ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜಾನಪದ ಉಳಿವಿಗಾಗಿ ಮಾಡಿದ ಸೇವೆಯನ್ನು ಪರಿಗಣಿಸಿ ರಾಜ್ಯ ಮಟ್ಟದ “ಸುವರ್ಣ ಕರ್ನಾಟಕ ಪ್ರಶಸ್ತಿ” ನೀಡಲಾಯಿತು.ಪ್ರತಿಷ್ಠಾನದ ಅಧ್ಯಕ್ಷ ವೀರೇಶಗೌಡ ಪಾಟೀಲ (ಮಿಣಜಗಿ)ಯವರಿಗೆ ವಿಜಯಪುರ ಸಂಸದ ರಮೇಶ ಜಿಗಜಿಣಗಿ, ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ, ಮಾಜಿ ಶಾಸಕ ಅಶೋಕ ಶಾಬಾದಿ, ಕಾಂಗ್ರೆಸ್ ಮುಖಂಡ ಡಾ ಪ್ರಭುಗೌಡ ಲಿಂಗದಳ್ಳಿ , ಕಾನಿಪ ಜಿಲ್ಲಾಧ್ಯಕ್ಷ ಸಂಗಮೇಶ ಚೂರಿ ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಬಾಳನಗೌಡ ಪಾಟೀಲ, ಕಾನಿಪ ತಾಲೂಕಾಧ್ಯಕ್ಷ ಸಂಗಮೇಶ ಉತ್ನಾಳ, ಡಿ ಸಿ…
ವಿಜಯಪುರ: ಕನ್ನಡ ಸಾಹಿತ್ಯ ಪರಿಷತ್ತಿಗೆ ನೂರು ವರ್ಷಗಳ ಇತಿಹಾಸವಿದೆ. ಈ ಮುಖಾಂತರ ನಾಡು ನುಡಿ ಸಂಸ್ಕೃತಿ ಗಾಗಿ ಶ್ರಮಿಸಿದ ಜೀವಿಗಳು ಸ್ಮರಿಸುವ ಮತ್ತು ಸಮಾಜಕ್ಕೆ ಸಂದೇಶ ನೀಡುವ ಕೆಲಸ ಮಾಡುತ್ತ ಬಂದಿದೆ ಎಂದು ದೊಡ್ಡಣ್ಣ ಭಜಂತ್ರಿ ಅಭಿಪ್ರಾಯ ವ್ಯಕ್ತಪಡಿಸಿದರು.ಸೋಮವಾರ ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಭಾ ಭವನದಲ್ಲಿ ಜರುಗಿದ ಮ ಮ ಹುಂಡೇಕಾರ ಸಾ ಮ ಹುಂಡೇಕಾರ ಅವರ ಸ್ಮರಣಾರ್ಥ ಏರ್ಪಡಿಸಿದ ದತ್ತಿ ಉಪನ್ಯಾಸ ಉದ್ಘಾಟಿಸಿ ಅವರು ಮಾತನಾಡಿದರು.ಸಮಾಜದಲ್ಲಿರುವ ಮೇಲುಕೀಳು ತೊಡೆದು ಸಮ ಸಮಾಜ ನಿರ್ಮಾಣ ಮಾಡುವ ಶಕ್ತಿ ಸಾಹಿತ್ಯಕ್ಕೆ ಇದೆ. ಪ್ರತಿ ದಿನವೂ ಕ್ರಿಯಾಶೀಲವಾಗಿ ಸಾಹಿತ್ಯದ ಚಟುವಟಿಗಳು ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಾಡುತ್ತ ಬಂದಿದೆ ಈ ರೀತಿ ಸಮಾಜ ತಿದ್ದುವ ಶಕ್ತಿ ಕನ್ನಡ ಸಾಹಿತ್ಯ ಪರಿಷತ್ತಿಗೆ ಇದೆ ಎಂದರು.ಉಪನ್ಯಾಸಕರಾಗಿ ಮಲ್ಲಮ್ಮ ಬಿರಾದಾರ ಅವರು ಜನಪದ ಸಾಹಿತ್ಯ ಕುರಿತು ಮಾತನಾಡುತ್ತ, ಜನಪದ ಸಾಹಿತ್ಯ ಸಾವನ್ನು ಧಿಕ್ಕರಿಸುವ ಜೀವಂತ ಪಳೆಯುಳಿಕೆ, ಮಣ್ಣನ್ನು ಪೂಜಿಸುವ ಮತ್ತು ಪ್ರೀತಿಸುವ ಸಂಸ್ಕಾರ ಜನಪದರಿಗಿದೆ,…
ಮುದ್ದೇಬಿಹಾಳ: ಸಮಾಜದಲ್ಲಿ ತಮ್ಮ ಕಷ್ಟಗಳನ್ನು ಮರೆತು, ತನಗಾಗಿ ಅಲ್ಲದೇ ತಮ್ಮವರಿಗೋಸ್ಕರ ಬದುಕುವವಳು ಹೆಣ್ಣು ಅವಳು ಮನಸ್ಸು ಮಾಡಿದಲ್ಲಿ ಇಡೀ ಜಗತ್ತನ್ನೇ ಆಳಬಲ್ಲಳು ಎಂದು ವಿಜಯಪುರದ ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕಿ ಸಂಯುಕ್ತ ಪಾಟೀಲ ಹೇಳಿದರು.ತಾಲೂಕಿನ ಕುಂಟೋಜಿ ಸಂಸ್ಥಾನ ಹಿರೇಮಠದ ಡಾ.ಚನ್ನವೀರ ದೇವರ ಪಟ್ಟಾಧಿಕಾರ ಮಹೋತ್ಸವದ ಅಂಗವಾಗಿ ನಡೆದ ಮಹಿಳಾ ಸಂಪದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.ಸಧ್ಯದ ಕಾಲಘಟ್ಟದಲ್ಲಿ ಹಣಕ್ಕೆ, ಆಸ್ತಿಗೆ ಇರುವ ಮೌಲ್ಯಕ್ಕಿಂತ ಹೆಚ್ಚಿಗೆ ವಿದ್ಯೆಗೆ ಬೆಲೆ ಇದೆ. ಗಳಿಸಿದ ಹಣ, ಆಸ್ತಿ, ಸಂಪತ್ತು ಹಾಳಾಗಬಹುದು ಆದರೆ ವಿದ್ಯೆ ಯಾವತ್ತೂ ಹಾಳಾಗಲಾರದು. ಪ್ರತಿಯೊಬ್ಬರೂ ನಿಮ್ಮ ಮಕ್ಕಳಿಗೆ ವಿದ್ಯೆ ಕೊಡಿಸಬೇಕು. ಗಂಡು ಮಕ್ಕಳಷ್ಟೇ ಹೆಣ್ಣು ಮಕ್ಕಳಿಗೂ ಸಮಾನತೆ ಇರುವ ಸಧ್ಯದ ಬೆಳವಣಿಗೆಯಲ್ಲಿ ನಿಮ್ಮ ಮಗು ಹೆಣ್ಣು ಅಂತಾ ವಿದ್ಯೆಯಿಂದ ವಂಚಿತರಾಗಿ ಮಾಡಿದಲ್ಲಿ ಆ ಮಗು ಮುಂದೆ ಕಣ್ಣೀರಿಡುವ ಪರಿಸ್ಥಿತಿ ಎದುರಾಗಬಹುದು ಎಂದರು.ಸ್ವಯಂಭೂ ಆರ್ಟ್ ಫೌಂಡೇಶನ್ ನ ಸಂಸ್ಥಾಪಕಿ ದೀಕ್ಷಾ ಬಿಸೇ ಮಾತನಾಡಿ, ಪ್ರತೀ ಹೆಣ್ಣು ಮಗುವಿಗೆ ವಿದ್ಯೆಯ ಜೊತೆಗೆ ಕಲೆ ಸಂಸ್ಕೃತಿಯನ್ನೂ ಕಲಿಸಬೇಕು.…
‘ಆರೋಗ್ಯ ಅಂಗಳ’- ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ-ಗದಗ ಆ ಮನೆಯ ಯಜಮಾನ ದಿನದ ಮೂರು ಹೊತ್ತು ಅನ್ನವನ್ನು ಉಣ್ಣುತ್ತಾನೆ. ಆದರೆ ಆತನದು ಜೋರಾಗಿ ಗಾಳಿ ಬಿಟ್ಟರೆ ಹಾರಿ ಹೋಗುವಷ್ಟು ಸಣಕಲು ಮೈಕಟ್ಟು. ಹಾಗಾದರೆ ಅನ್ನ ತಿಂದರೆ/ಉಂಡರೆ ಮೈ ಬರುವುದಿಲ್ಲವೇ!?? ಇನ್ನೊಂದು ಮನೆಯಲ್ಲಿ ಒಂದು ಚೂರು ಸಿಹಿಯನ್ನು ಬಾಯಿಗೆ ಹಾಕದ, ಸಕ್ಕರೆಯನ್ನು ತಿನ್ನದ, ಕೇವಲ ಚಪಾತಿ, ರೊಟ್ಟಿ, ತರಕಾರಿ, ಹಣ್ಣುಗಳನ್ನು ಸೇವಿಸುವ ಆ ಮನೆಯ ಪ್ರತಿಯೊಬ್ಬ ಸದಸ್ಯರು ತುಸು ಸ್ಥೂಲಕಾಯರೇ??? ಮತ್ತೊಂದೆಡೆ ಇನ್ನೊಬ್ಬ ವ್ಯಕ್ತಿ ಏನೆಲ್ಲವನ್ನು ತಿಂದು ಉಂಡು ಅರಗಿಸಿಕೊಂಡರೂ ಆತನದ್ದು ಕೃಶ ಶರೀರ. ಹಾಗಾದರೆ ಆತನ ಬೊಜ್ಜು ಹೋಯಿತೆಲ್ಲಿಗೆ ?? ಮತ್ತೂ ಕೆಲವು ಜನ ಅದೆಷ್ಟೇ ವಿವಿಧ ಬಗೆಯ ಡಯಟ್ಗಳನ್ನು ಪಾಲಿಸಿದರೂ ಆ ಸಮಯಕ್ಕೆ ಇಳಿಯುವ ತೂಕ ಕೆಲವೇ ತಿಂಗಳುಗಳಲ್ಲಿ ‘ಹೋದೆಯಾ ಪಿಶಾಚಿ ಅಂದರೆ ಬಂದೆ ಗವಾಕ್ಷಿಯಲಿ’ ಎಂಬಂತೆ ಮತ್ತೆ ಮತ್ತೆ ಕಾಡುತ್ತದೆ. ಹಾಗಾದರೆ ಅವರ ಡಯೆಟ್ ಸುಳ್ಳೇ!? ಪ್ರತಿ ಆರು ತಿಂಗಳು, ವರ್ಷಕ್ಕೊಮ್ಮೆ ಪ್ರಕೃತಿ ಚಿಕಿತ್ಸಾ ಕೇಂದ್ರಗಳಲ್ಲಿ ಅವರು…
Udayarashmi kannada daily newspaper
ಆಲಮಟ್ಟಿ: ಪ್ರಯಾಸದ ಪ್ರಯಾಣವಾಗಿದ್ದ ರೈಲು ಈಗ ಆರಾಮದಾಯಕ ಪ್ರಯಾಣವಾಗುತ್ತಿದೆ. ಇದಕ್ಕೆ ಕಾರಣ ದೇಶದ ಪ್ರಧಾನಿ ನರೇಂದ್ರ ಮೋದಿ ಎಂದು ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಅಭಿಪ್ರಾಯಪಟ್ಟರು.ಆಲಮಟ್ಟಿ ರೈಲು ನಿಲ್ದಾಣದಲ್ಲಿ ಸೋಮವಾರ ನಡೆದ, 15.21 ಕೋಟಿ ರೂ ವೆಚ್ಚದಲ್ಲಿ ಆಲಮಟ್ಟಿ ರೈಲು ನಿಲ್ದಾಣದ ಆಧುನೀಕರಣದ ಚಾಲನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.ಬಡ, ಮಧ್ಯಮ ವರ್ಗದವರೇ ಹೆಚ್ಚಿನ ಪ್ರಮಾಣದಲ್ಲಿ ಪ್ರಯಾಣಿಸುವ ರೈಲ್ವೆ ಸಾರಿಗೆಯೂ ವಿಮಾನ ಸಾರಿಗೆಯಷ್ಟೇ ಸುಖಕರವಾಗಿರಲಿ ಎನ್ನುವ ಉದ್ದೇಶದಿಂದ ದೇಶಾದ್ಯಂತ ರೈಲು ನಿಲ್ದಾಣ ಹಾಗೂ ರೈಲ್ವೆಯ ಸ್ವರೂಪವನ್ನೇ ಬದಲಾವಣೆ ಮಾಡಲಾಗುತ್ತಿದೆ ಎಂದರು.ಇಡೀ ದೇಶಾದ್ಯಂತ ಬಹುತೇಕ ರೈಲ್ವೆ ಮಾರ್ಗಗಳು ಡಬಲಿಂಗ್ ಜತೆಗೆ ವಿದ್ಯುದೀಕರಣಗೊಂಡಿವೆ ಎಂದರು. ಸಾಗರಮಾಲಾ, ಪರ್ವತಮಾಲಾ, ಭಾರತಮಾಲಾ ಯೋಜನೆಯಿಂದ ಇಡೀ ದೇಶಾದ್ಯಂತ ಸಾರಿಗೆ ಕ್ಷೇತ್ರದಲ್ಲಿ ಭಾರಿ ಬದಲಾವಣೆಯಾಗಿದೆ ಎಂದರು.ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಕವಿತಾ ಬಡಿಗೇರ ಅಧ್ಯಕ್ಷತೆ ವಹಿಸಿದ್ದರು.ರೈಲ್ವೆ ಅಧಿಕಾರಿ ಎಂ. ಚೇತನಕುಮಾರ, ರೈಲ್ವೆ ಇಲಾಖೆಯ ಹಿರಿಯ ಹಣಕಾಸು ವ್ಯವಸ್ಥಾಪಕ ಜಿ.ಬೂ.ಝಕಾಬ್, ಎಂ.ಚೇತನಕುಮಾರ, ಚಂದ್ರಹಾಸ್, ಜಯಶ್ರೀ ರಾಠೋಡ, ಲಕ್ಷ್ಮೀ ರಾಠೋಡ, ರಮೇಶ ಆಲಮಟ್ಟಿ, ಕಲ್ಲು ಸೊನ್ನದ,…
ಇಂದು ರಾಜ್ಯಸಭೆ ಚುನಾವಣೆ | ನಾಲ್ಕು ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ ಐವರು ಅಭ್ಯರ್ಥಿಗಳು ಸ್ಪರ್ಧೆ ಬೆಂಗಳೂರ: ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಇಂದು ಸೋಮವಾರ(ಫೆ.27) ಚುನಾವಣೆ ನಡೆಯಲಿದೆ. ಇದಕ್ಕಾಗಿ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಮೈತ್ರಿ ಅಭ್ಯರ್ಥಿ ಕಣದಲ್ಲಿ ಇರುವುದರಿಂದ ಚುನಾವಣಾ ಕಣ ರಂಗೇರಿದೆ.ಕಣದಲ್ಲಿ ಐವರು ಅಭ್ಯರ್ಥಿಗಳು:ನಾಲ್ಕು ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ ಐವರು ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದಾರೆ. ಕಾಂಗ್ರೆಸ್ನಿಂದ ಅಜಯ್ ಮಾಕನ್, ಜಿಸಿ ಚಂದ್ರಶೇಖರ್, ಡಾ. ಸೈಯದ್ ನಾಸೀರ್ ಹುಸೇನ್, ಬಿಜೆಪಿಯಿಂದ ನಾರಾಯಣ ಎಸ್ ಭಾಂಡಗೆ, ಮೈತ್ರಿ ಅಭ್ಯರ್ಥಿಯಾಗಿ ಡಿ ಕುಪೇಂದ್ರ ರೆಡ್ಡಿ ಕಣದಲ್ಲಿದ್ದಾರೆ.ವಿಧಾನಸಭೆಯಲ್ಲಿ ಕಾಂಗ್ರೆಸ್ ಬಲಾಬಲ 135 ಇತ್ತು. ಇದೀಗ ರಾಜಾ ವೆಂಕಟಪ್ಪ ನಾಯಕ ಮೃತಪಟ್ಟ ಹಿನ್ನೆಲೆಯಲ್ಲಿ ಸದ್ಯ ಕಾಂಗ್ರೆಸ್ ಬಲ 134 ಆಗಿದೆ. ಇನ್ನು ಬಿಜೆಪಿ 66, ಜೆಡಿಎಸ್ 19 ಸ್ಥಾನಗಳನ್ನು ಹೊಂದಿವೆ. ನಾಲ್ವರು ಪಕ್ಷೇತರ ಶಾಸಕರಿದ್ದಾರೆ.ಪಕ್ಷೇತರರು ನಾಲ್ವರೂ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕುವ ಸಾಧ್ಯತೆ ಇದೆ. ವಿಶೇಷವಾಗಿ ಗಾಲಿ ಜನಾರ್ದನ ರೆಡ್ಡಿ ಸೋಮವಾರ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ…
ಅತ್ಯಾಚಾರ ಯತ್ನದ ಆರೋಪಿಗಳ ಬಂಧನಕ್ಕೆ ಮಾದಿಗರ ಸಂಘ ಆಗ್ರಹ ವಿಜಯಪುರ: ಕರ್ನಾಟಕ ಮಾದಿಗರ ಸಂಘ ವಿಜಯಪುರ ವತಿಯಿಂದ ಮುದ್ದೇಬಿಹಾಳ ತಾಲೂಕಿನ ಕವಡಿಮಟ್ಟಿ ಗ್ರಾಮದ ದಲಿತ ಯುವತಿ ದುರ್ಗಮ್ಮ ಮಾದರ ಮೇಲೆ ದೌರ್ಜನ್ಯ ಮತ್ತು ಹಲ್ಲೆ ಮಾಡಿ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿಗಳನ್ನು ಬಂದಿಸಲು ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ಈ ವೇಳೆ ಸಂಘದ ವಿಜಯಪುರ ಜಿಲ್ಲಾಧ್ಯಕ್ಷ ಶ್ರೀಶೈಲ ರತ್ನಾಕರ್ ಮಾತನಾಡಿ ಕವಡಿಮಟ್ಟಿ ಗ್ರಾಮದ ಯುವತಿ ದುರ್ಗಮ್ಮ ಮಾದರ ಬಡ ಕೂಲಿ ಕಾರ್ಮಿಕರಾಗಿದ್ದು ಅದೇ ಗ್ರಾಮದ ಹೊಲದಲ್ಲಿ ಕಬ್ಬು ಕಡಿಯಲು ಕೂಲಿಗೆ ಕೆಲಸಕ್ಕೆ ಹೋದಾಗ ಹೊಲದ ಮಾಲೀಕನ ಸೊಸೆ ಸಾಬವ್ವ ಮಂಜುನಾಥ್ ವಾಲಿಕಾರ, ಸಂಗಪ್ಪ ವಾಲಿಕಾರ, ಬಸಪ್ಪ ಸಂಗಪ್ಪ ವಾಲಿಕಾರ್, ಇವರು ಕ್ಷುಲ್ಲಕ ಕಾರಣಕ್ಕೆ ಯುವತಿಯ ಮೇಲೆ ಹಲ್ಲೆ ಮಾಡಿ ಜಾತಿನಿಂದನೆ ಮಾಡಿರುತ್ತಾರೆ. ಸುರೇಶನು ಕೂಲಿ ಕಾರ್ಮಿಕರ ಎದುರಿನಲ್ಲಿಯೇ ಯುವತಿಯ ಮೇಲೆ ಬಿದ್ದು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಇದಕ್ಕೆ ಅವನ ಸೋದರಿ ಸಾಬವ್ವ ವಾಲಿಕಾರ್ ಸಹಕರಿಸಿರುತ್ತಾಳೆ. ಯುವತಿಯನ್ನು ಅವರ ಸಂಬಂಧಿಕರು ಆಸ್ಪತ್ರೆಗೆ ದಾಖಲಿಸಿ ಪೊಲೀಸ್ ಠಾಣೆಯಲ್ಲಿ ದೂರನ್ನು…
ಮುದ್ದೇಬಿಹಾಳ: ಸಾಹಿತಿಗಳು ಇಷ್ಟಪಟ್ಟು ಬರೆದು, ಕಷ್ಟಪಟ್ಟು ಮುದ್ರಸಿ ಪುಸ್ತಕಗಳನ್ನು ಹೊರತರುತ್ತಾರೆ. ಆದರೆ ಆ ಪುಸ್ತಕಗಳನ್ನು ಕೊಂಡು ಓದುವ ಓದುಗರ ಸಂಖ್ಯೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿರುವುದು ಸಾಹಿತಿಗಳ ಆತಂಕಕ್ಕೆ ಕಾರಣವಾಗಿದೆ ಎಂದು ಹಿರಿಯ ಸಾಹಿತಿ ಡಾ.ಸತ್ಯಾನಂದ ಪಾತ್ರೋಟ ಕಳವಳ ವ್ಯಕ್ತಪಡಿಸಿದರು.ತಾಲೂಕಿನ ಅಮರಗೋಳ ಗ್ರಾಮದಲ್ಲಿ ಬಾವೈಕ್ಯ ಸಾಹಿತ್ಯ ವೇದಿಕೆ, ಡಾ.ಸಿಂಪಿಲಿಂಗಣ್ಣ ಸಾಹಿತ್ಯ ವೇದಿಕೆ ಹಾಗೂ ಗ್ರಾಮಸ್ಥರ ಸಹಯೋಗದಲ್ಲಿ ದಿ.ಮಲಕಣ್ಣ ಮಾಸ್ತರ ಇವರ ೭ನೇ ಪುಣ್ಯ ಸ್ಮರಣೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ದತ್ತಿ ಕಾರ್ಯಕ್ರಮದಲ್ಲಿ “ಸಾಹಿತ್ಯ ರತ್ನ” ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.ಇಂದಿನ ಮೊಬೈಲ್ ಹಾಗೂ ಟಿ.ವ್ಹಿ.ಹಾವಳಿಗೆ ಸಿಲುಕಿ ಪುಸ್ತಕಗಳು ಓದುಗರ ಕೈಯಲ್ಲಿರದೆ ಗೆದ್ದಲು ಹತ್ತುತ್ತಿರುವುದು ವಿಷಾದನೀಯ. ಬಡತನದ ಬವಣೆಯಲ್ಲಿ ನೊಂದು ಬೆಂದು ಕಷ್ಟದಲ್ಲಿಯೇ ಕೈತೊಳೆದುಕೊಂಡು ಜೀವನ ಸಾಗಿಸಿದ್ದ ಅದೆಷ್ಟೋ ಸಾಹಿತಿಗಳಿಗೆ ಕೈ ಹಿಡಿದದ್ದೇ ಸಾಹಿತ್ಯ ಕ್ಷೇತ್ರ. ಇತ್ತೀಚಿನ ದಿನಮಾನಗಳಲ್ಲಿ ಪುಸ್ತಕಗಳನ್ನು ಕೊಂಡು ಓದುವವರ ಸಂಖ್ಯೆ ಕಡಿಮೆಯಾಗುತ್ತಿರುವದರಿಂದ ಬಡಸಾಹಿತಿಗಳ ಬದುಕು ಗಂಭೀರ ಹಂತ ತಲುಪಿದೆ. ಪುಸ್ತಕಗಳನ್ನು ಕೊಂಡುಕೊಂಡು ಓದುವ ಹವ್ಯಾಸವನ್ನು ಪ್ರತಿಯೊಬ್ಬ ಓದುಗರು ಬೆಳಸಿಕೊಳ್ಳಬೇಕು ಎಂದರು.ಕಾರ್ಯಕ್ರಮದ ಅಧ್ಯಕ್ಷತೆ…
