ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯಾದ್ಯಂತ ಮತದಾರರ ಪಟ್ಟಿ ಪರಿಶೀಲನೆ ಕಾರ್ಯ ಜಾರಿಯಲ್ಲಿದ್ದು, ಜಿಲ್ಲೆಯ ಒಟ್ಟು ೧೯,೮೨,೧೧೪ ಮತದಾರರಿಗೆ ಮತಗಟ್ಟೆ ಅಧಿಕಾರಿಗಳು ಮನೆ ಮನೆಗೆ ತೆರಳಿ ಗಣತಿ ನಮೂನೆ ವಿತರಿಸಿದ್ದು, ಈ ಪೈಕಿ ಭರ್ತಿ ಮಾಡಿದ ೧೭,೩೮,೫೮೭ ಗಣತಿ ನಮೂನೆಗಳನ್ನು ಈಗಾಗಲೇ ಸ್ವೀಕರಿಸಿ ಗಣಕೀಕರಣಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಡಾ. ಆನಂದ ಕೆ. ಅವರು ತಿಳಿಸಿದ್ದಾರೆ.
ಗೈರು, ವಲಸೆ, ಮರಣ ಮತದಾರರ ವಿವರ: ಮನೆ ಮನೆ ಭೇಟಿ ವೇಳೆ ಕಂಡುಬಂದ ಗೈರುಹಾಜರಿ, ವಲಸೆ, ಮರಣ,ಡುಪ್ಲಿಕೇಟ್ ಹಾಗೂ ಇತರೇ ಸೇರಿದಂತೆ ಒಟ್ಟು ೧,೭೬,೩೫೨ ಮತದಾರರ ವಿವರವಾದ ಪಟ್ಟಿ ಸಿದ್ಧಪಡಿಸಲಾಗಿದೆ.
ವಿಧಾನಸಭಾ ಕ್ಷೇತ್ರವಾರು ವಿವರ: ವಿಜಯಪುರ ನಗರ: ೪೯,೬೬೭, ಮುದ್ದೇಬಿಹಾಳ: ೨೬,೪೫೭, ಇಂಡಿ: ೨೦,೮೦೯, ದೇವರ ಹಿಪ್ಪರಗಿ: ೨೦,೨೪೯, ನಾಗಠಾಣ: ೧೮,೧೫೫, ಸಿಂದಗಿ: ೧೭,೭೫೨, ಬಸವನ ಬಾಗೇವಾಡಿ: ೧೨,೫೨೭, ಬಬಲೇಶ್ವರ: ೧೦,೭೩೬ ಸೇರಿದಂತೆ ಒಟ್ಟು ೧,೭೬,೩೫೨ ಮತದಾರರ ವಿವರವಾದ ಪಟ್ಟಿ ಸಿದ್ಧಪಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಆಕ್ಷೇಪಣೆ ಸಲ್ಲಿಸಲು ಅವಕಾಶ: ಕ್ಷೇತ್ರವಾರು ಸಿದ್ಧಪಡಿಸಲಾದ ಮತದಾರರ (ಎಎಸ್ಡಿಡಿಒ) ಪಟ್ಟಿಯನ್ನು ಆಯಾ ಮತಗಟ್ಟೆ ಅಧಿಕಾರಿಗಳು, ಮತಗಟ್ಟೆ ಏಜೆಂಟರುಗಳಿಗೆ ನೀಡಲಾಗಿದೆ. ಸಾರ್ವಜನಿಕರು ವಿಜಯಪುರ ಜಿಲ್ಲಾ ವೆಬ್ ಸೈಟ್ :viರಿಚಿಥಿಚಿಠಿuಡಿಚಿ.ಟಿiಛಿ.iಟಿ ಅಥವಾ ನೀಡಲಾಗಿರುವ ಗೂಗಲ್ ಡ್ರೈವ್ ಲಿಂಕ್ ಮೂಲಕ ಈ ಪಟ್ಟಿ ಪರಿಶೀಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. https://drive.google.com/drive/folders/1TxCRel70q_-wsrI8LDr_2KueAE95UyqW
(ಎಎಸ್ಡಿಡಿಒ) ಪಟ್ಟಿಗೆ ಸಂಬಂಧಿಸಿದಂತೆ ಮತದಾರ ನೋಂದಣಾಧಿಕಾರಿಗಳಿಗೆ ಮಾಹಿತಿ ನೀಡಲು ಅ.೮ ರವರೆಗೆ ಅವಕಾಶ ಕಲ್ಪಿಸಲಾಗಿದೆ. ಬಳಿಕ ಆಗಸ್ಟ್.೧೭ ರಿಂದ ಸೆ.೧೬ ರವರೆಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶವಿದೆ ಎಂದು ಅವರು ತಿಳಿಸಿದ್ದಾರೆ.
ಜಿಲ್ಲೆಯ ಎಲ್ಲಾ ಮತದಾರರು ಹಾಗೂ ರಾಜಕೀಯ ಪಕ್ಷಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

