Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ರಾಜ್ಯ ಸಮಗಾರ ಹರಳಯ್ಯ (ಚಮ್ಮಾರ) ಸಂಘ (ರಿ) ನಾಗರಭಾವಿ ಬೆಂಗಳೂರು.ಸಮಗಾರ ಹರಳಯ್ಯ ಜಿಲ್ಲಾ ಅಧ್ಯಕ್ಷರಾದ ಶ್ರೀನಿವಾಸಮೂರ್ತಿ ರಾ. ಶಹಾಪೂರ ಇವರ ಅಧ್ಯಕ್ಷತೆಯಲ್ಲಿ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಸಮಗಾರ ಹರಳಯ್ಯಸಮಾಜದ ತಾಲೂಕ ಅಧ್ಯಕ್ಷರನ್ನಾಗಿ ರಾಘವೇಂದ್ರ ಆನಂದ ಕೊಡಹೊನ್ನ ಸಾ|| ಅಹಿರಸಂಗ, ಇವರನ್ನುಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.ಅದೇ ರೀತಿಯಾಗಿ ಎಲ್ಲಾ ಪದಾಧಿಕಾರಿಗಳಾಗಿ ಆಯ್ಕೆಮಾಡಲಾಯಿತು. ಗೌರವ ಅಧ್ಯಕ್ಷರು: ಶಂಕ್ರಪ್ಪ ಸರ್ಜಾಪೂರ ಸಾ||ಸಾಲೋಟಗಿ, ಉಪಾಧ್ಯಕ್ಷರಾಗಿ: ಸಿದ್ದಪ್ಪಲಕ್ಷ್ಮಣ ಹೊನ್ನಕೇರಿ ಮತ್ತು ಪರಶುರಾಮ ಬಾಬುಕಸ್ವಾರ ಸಾಇಂಡಿ ಪರಮೇಶ್ವರ ಹಿ. ಕಟ್ಟಿಮನಿ ಸಾ||ಇಂಡಿ, ರಾಜುಕುಮಾರ ಲಕ್ಷಣ ಬಾಬುಕಸವಾರ, ಪ್ರಧಾನ ಕಾರ್ಯದರ್ಶಿ: ಸಿದ್ರಾಮ ಮ ಹೊನ್ನಕೋರೆಸಾ|| ಚಿಕ್ಕಬೇನೂರ, ಸಹಕಾರ್ಯದರ್ಶಿ: ಚಿದಾನಂದ ಕೊಂಜಾರೆ ಸಾಭತಗುಣಕಿ, ಖಜಾಂಚಿ ಶಿವಾನಂದಬಾಬುಕಸ್ವಾದ ಸಾಆಳೂರ, ಸಂಘಟನಾ ಕಾರ್ಯದರ್ಶಿ: ಹಣಮಂತ ಕಟ್ಟಿಮನಿ ಸಾ|| ಬಬಲಾದ, ಶ್ರೀಶೈಲವನಂಜಕರ ಸಾ|| ಅಥರ್ಗಾ, ಮಹಿಳಾ ಪ್ರತಿನಿದಿ: ಅನಿತಾ ಗಣೇಶ ವಾಘಮೋರೆ, ಇವರನ್ನು ಜಿಲ್ಲಾಅಧ್ಯಕ್ಷರು ಶ್ರೀನಿವಾಸಮೂರ್ತಿ ರಾ ಶಹಾಪೂರ ಹಾಗೂ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯರಾದಅಶೋಕ ಸೌದಾಗಾರ, ಜಿಲ್ಲಾ ಪದಾಧಿಕಾರಿಗಗಳು, ಶಂಕರ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಶಿಕ್ಷರಿಗೆ ಸುಪ್ರೀಂಕೋರ್ಟ ಟಿಇಟಿ ಕಡ್ಡಾಯಗೊಳಿಸಿದ್ದು, ಇದಕ್ಕೆ ಆಕ್ಷೇಪಣೆ ಸಲ್ಲಿಸಲು ಶಿಕ್ಷಕರು ಇಇಡಿಎಸ್ ತಂತ್ರಾಂಶದಲ್ಲಿ ಮಾಹಿತಿ ತುಂಬಬೇಕಾಗಿದೆ ತಕ್ಷಣವೇ ಈ ಕಾರ್ಯವನ್ನು ಮಾಡಬೇಕೆಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅರ್ಜುನ ಲಮಾಣಿ ತಿಳಿಸಿದ್ದಾರೆ.ಈ ಕುರಿತು ಬುಧವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ರಾಜ್ಯದಲ್ಲಿ1ಲಕ್ಷ 22 ಸಾವಿರ ಜನ ಶಿಕ್ಷಕರು ಟಿಇಟಿ ಕುರಿತು ಇನ್ನೂ ಮಾಹಿತಿ ತುಂಬಿಲ್ಲ. ಕೇವಲ 10 ಸಾವಿರ ಜನ ಮಾತ್ರ ಟಿಇಟಿ ಸಂಬಂಧಿಸಿದ ಮಾಹಿತಿಯನ್ನು ತುಂಬಿದ್ದಾರೆ. ಇನ್ನೂ 1 ಲಕ್ಷ 22 ಸಾವಿರ ಜನ ಶಿಕ್ಷಕರು ಮಾಹಿತಿಯನ್ನು ತುಂಬಬೇಕಾಗಿದೆ. ತಕ್ಷಣ ತಮ್ಮ ತಮ್ಮ ಇಇಡಿಎಸ್ ತಂತ್ರಾಂಶದಲ್ಲಿ ಟಿಇಟಿ ಪರೀಕ್ಷೆ ಕುರಿತು ಮಾಹಿತಿ ತುಂಬುವುದರ ಜೊತೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳರವರ ಕಚೇರಿಯಲ್ಲಿ ತೆರಳಿ ಯಾರು ಟಿಇಟಿ ಪಾಸಾಗಿಲ್ಲ ಎಂಬ ಮಾಹಿತಿಯನ್ನು ತಕ್ಷಣ ಅಪಡೇಟ್ ಮಾಡಿಸಬೇಕು. ಸುಪ್ರೀಂ ಕೋರ್ಟಿಗೆ ಲಕ್ಷಾಂತರ ಜನ ಶಿಕ್ಷಕರ ಅಂಕಿ ಅಂಶಗಳ ಮೂಲಕ ದಾವೆ ಸಲ್ಲಿಸಬೇಕಾಗಿದೆ. ಇದು ಅತ್ಯಂತ ತುರ್ತು ಮಾಹಿತಿಯಾಗಿರುವುದ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮೀಸಲಾತಿ ಗೊಂದಲ ಶೀಘ್ರ ನಿವಾರಿಸಿ ರಾಜ್ಯದ ನಾನಾ ಇಲಾಖೆಗಳಲ್ಲಿ ಖಾಲಿಯಿರುವ ಹುದ್ದೆಗಳನ್ನು ತಕ್ಷಣವೇ ಭರ್ತಿ ಮಾಡಬೇಕು. ಜತೆಗೆ ವಯೋಮಿತಿ ಸಡಿಲಗೊಳಿಸಬೇಕೆಂದು ಒತ್ತಾಯಿಸಿ ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.ಗ್ರಾಮೀಣ ಭಾಗದ ಬಡ ನಿರುದ್ಯೋಗಿಗಳು ಸರ್ಕಾರಿ ನೌಕರಿ ಪಡೆದುಕೊಳ್ಳಬೇಕೆಂಬ ಮಹದಾಸೆಯೊಂದಿಗೆ ನಾನಾ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗಾಗಿ ಸ್ವಂತ ಊರು, ವಯಸ್ಸಾದ ತಂದೆ-ತಾಯಿ ಹಾಗೂ ಕುಟುಂಬ ವರ್ಗದವರನ್ನು ಬಿಟ್ಟು ದೂರದ ಬೆಂಗಳೂರು, ಧಾರವಾಡ ಹಾಗೂ ವಿಜಯಪುರದಂತಹ ನಗರಗಳಲ್ಲಿ ಸಾಲ ಶೂಲ ಮಾಡಿದ್ದಾರೆ. 5-6 ವರ್ಷಗಳಿಂದ ಬಾಡಿಗೆ ಮನೆ, ಪಿಜಿಗಳಲ್ಲಿದ್ದು, ಕಷ್ಟ ಪಟ್ಟು ಹಗಲಿರುಳು ಓದುತ್ತಿದ್ದಾರೆ.ಅಲ್ಲದೆ ಕಳೆದ ಎರಡು ವರ್ಷಗಳಿಂದ ಒಳ ಮೀಸಲಾತಿ ಜಾರಿ ವಿಳಂಬದಿಂದಾಗಿ ಎಲ್ಲ ನೇಮಕಾತಿ ಅಧಿಸೂಚನೆಗಳನ್ನು ತಡೆ ಹಿಡಿದಿರುವುದರಿಂದ ಪಿಜಿ ರೂಮುಗಳ ಬಾಡಿಗೆಯನ್ನು ಕಟ್ಟಲಿಕ್ಕಾಗದೇ ಊಟ ಮಾಡುವುದಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ‌.‌ಹೊಸ ನೇಮಕಾತಿಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಆದರೆ ಯಾವುದೇ ನೇಮಕಾತಿಯಿಲ್ಲದೇ ಇರುವುದರಿಂದ ಲಕ್ಷಾಂತರ ಯುವಕರು ತಮ್ಮ ಬದುಕಿನ ಭರವಸೆ…

Read More

ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಕಾರ್ಯಕ್ರಮ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ದಿನಾಂಕ 11-11-2025 ಮಂಗಳವಾರದಂದು ಲೈಂಗಿಕ ಕಿರುಕುಳ ತಡೆಗಟ್ಟುವಿಕೆ ಕುರಿತು ಜಾಗೃತಿ ಕಾರ್ಯಕ್ರಮ ಜರುಗಿತು.ಕಾಲೇಜಿನ ಐಕ್ಯೂಎಸಿ, ಲೈಂಗಿಕ ಕಿರುಕುಳ ತಡೆಗಟ್ಟುವಿಕೆ ಕೋಶ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ `ನಿಮ್ಮ ಧ್ವನಿ-ನಿಮ್ಮ ಹಕ್ಕು’ ಕುರಿತು ಕಾನೂನು ಜಾಗೃತಿ ಮೂಡಿಸಿ ಶಿಶು ಅಭಿವೃದ್ಧಿ ಯೋಜನೆಯ ಹಿರಿಯ ಮೇಲ್ವಿಚಾರಕಿ ಸವಿತಾ ಶಾಸ್ತ್ರಿಮಠ ಮಾತನಾಡಿದರು.ಈ ಸಂದರ್ಭದಲ್ಲಿ ಪ್ರಾಚಾರ್ಯೆ ಡಾ.ಆರ್.ಎಂ.ಮಿರ್ಧೆ, ಡಾ.ರಾಜೇಶ್ವರಿ ಪುರಾಣಿಕ, ಪ್ರೊ.ಆರ್.ಆರ್. ಹಟಗಾರ್, ಪ್ರೊ.ಪವನಕುಮಾರ್ ಮಹೀಂದ್ರಕರ, ಗಾಯತ್ರಿ ಗೌಡರ, ಲಕ್ಷ್ಮಿ ಪಟ್ಟಣಶೆಟ್ಟಿ, ಪಿಒಎಸ್‌ಎಚ್ ಸೆಲ್‌ನ ಅಧ್ಯಕ್ಷೆ ಪ್ರೊ.ಆರ್.ಡಿ.ಜೋಶಿ, ಭಾರತಿ ಹೊನ್ನಳ್ಳಿ, ವಿಜಯಪುರದ ಮಕ್ಕಳ ಸಹಾಯವಾಣಿ 1098/112 ರ ಕೌನ್ಸೆಲರ್ ನೀಲಮ್ಮ ಅರಳಗುಂಡಗಿ, ಮಹಾವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಬಿಎಲ್‌ಡಿಇ ಸಂಸ್ಥೆಯ ಎಸ್.ಬಿ.ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಸ್ವಾತಂತ್ರ್ಯ ಭಾರತದ ಪ್ರಥಮ ಶಿಕ್ಷಣ ಮಂತ್ರಿ ಡಾ.ಮೌಲಾನಾ ಅಬುಲ್ ಕಲಾಂ ಆಜಾದ್ ಅವರ ಜನ್ಮದಿನಾಚರಣೆ ಆಚರಿಸಲಾಯಿತು.ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಆರ್.ಎಂ.ಮಿರ್ಧೆ, ಡಾ.ಅನಿಲ ಪಾಟೀಲ, ಡಾ.ಎಸ್.ಡಿ.ಲಮಾಣಿ, ಪ್ರೊ.ವಿದ್ಯಾ ಪಾಟೀಲ, ಪ್ರೊ.ರಾಜೇಶ್ವರಿ ಪುರಾಣಿಕ, ಪ್ರೊ.ಗೀರಿಜಾ ನಿಂಬಾಳ, ಪ್ರೊ.ಶ್ವೇತಾ ಸವನೂರ, ಪ್ರೊ.ಆರ್.ಆರ್.ಹಟಗಾರ ಮತ್ತಿತರರು ಬೋಧಕ, ಬೋಧಕೇತರ ಸಿಬ್ಬಂದಿ ಇದ್ದರು.

Read More

ಸಿಂದಗಿಯಲ್ಲಿ ನಡೆದ ಹೋರಾಟದಲ್ಲಿ ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ದಾನಪ್ಪಗೌಡ ಚನಗೊಂಡ ಅಸಮಾಧಾನ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ವರ್ಷ ಪೂರ್ತಿ ಕಷ್ಟಪಟ್ಟು ರೈತ ಬೆಳೆದ ಕಬ್ಬಿಗೂ ಕಾರ್ಖಾನೆಯವರು ಕೊಡುವ ಹಣಕ್ಕೂ ಯಾವುದೇ ರೀತಿಯ ತುಲನೆಯಾಗುತ್ತಿಲ್ಲ. ಕಬ್ಬನ್ನು ಕಾರ್ಖಾನೆಗಳಿಗೆ ಸಾಗಿಸುವಾಗ ಪ್ರತಿ ಸಲ ಹೋರಾಟ ನಡೆಸುವುದು ಅನಿವಾರ್ಯವಾಗುತ್ತಿದೆ ಎಂದು ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ದಾನಪ್ಪಗೌಡ ಚನಗೊಂಡ ಅಸಮಾಧಾನ ವ್ಯಕ್ತಪಡಿಸಿದರು.ಸಿಂದಗಿ ತಾಲೂಕು ಆಡಳಿತ ಸೌಧದ ಆವರಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಕಬ್ಬಿನ ಬೆಂಬಲ ಬೆಲೆ ನಿಗದಿಗಾಗಿ ಜರುಗಿದ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಉಚಿತ ಗ್ಯಾರಂಟಿಗಳನ್ನು ನೀಡುತ್ತಿರುವ ಸರಕಾರ ಕಷ್ಟಪಟ್ಟು ಬೆಳೆದ ರೈತನ ಬೆಳೆಗಳಿಗೆ ಬೆಂಬಲ ಬೆಲೆ ಕೊಡುವಲ್ಲಿ ಮೀನಾಮೇಷ ಎಣಿಸಲು ಕಾರಣವಾದರು ಏನು? ಸಕ್ಕರೆ ಸಚಿವ ಶಿವಾನಂದ ಪಾಟೀಲರು ಕೃಷ್ಣ ಮತ್ತು ಭೀಮಾ ಬೆಲ್ಟ್ನ ಭೂಮಿಯಲ್ಲಿ ವ್ಯತ್ಯಾಸವಿದೆ ಹಾಗಾಗಿ ಇಳುವರಿಯಲ್ಲಿಯೂ ವ್ಯತ್ಯಾಸವಿದೆ ಎಂದು ಹೇಳುವ ಮೂಲಕ ರೈತರಲ್ಲಿಯೇ ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ. ನೆರೆ ಜಿಲ್ಲೆಯವರ…

Read More

ಕೆಆರ್‌ಎಸ್ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವಾನಂದ ಯಡಹಳ್ಳಿ ಸ್ಪಷ್ಟನೆ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ರಾಜ್ಯದಲ್ಲಿ ದುರಾಡಳಿತ, ಭ್ರಷ್ಟಾಚಾರ, ಅನ್ಯಾಯ, ದೌರ್ಜನ್ಯಗಳ ವಿರುದ್ಧ ನಿರಂತರವಾಗಿ ಹೋರಾಟ ಮಾಡುತ್ತಿರುವ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ತನ್ನ ಪ್ರಾಮಾಣಿಕ ಹೋರಾಟದಿಂದ ನಾಡಿನ ಜನರ ಪ್ರೀತಿ ಮತ್ತು ವಿಶ್ವಾಸಗಳಿಸುತ್ತಿದ್ದು ಸದಸ್ಯತ್ವ ಪಡೆಯಲು ಜನ ಹೆಚ್ಚಿನ ಒಲವು ತೋರುತ್ತಿದ್ದಾರೆ ಎಂದು ಕೆಆರ್‌ಎಸ್ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವಾನಂದ ಯಡಹಳ್ಳಿ ಹೇಳಿದರು.ಸಿಂದಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಂದಗಿ ಭಾಗದ ಕೆಆರ್‌ಎಸ್ ಪಕ್ಷದ ನೂತನ ಕ್ರಾಂತಿಗೆ ಈ ಭಾಗದ ಜನ ಸನ್ನದ್ಧರಾಗಬೇಕಿದೆ. ಸತ್ಯ, ನ್ಯಾಯ ನೀತಿ ಮತ್ತು ಧರ್ಮದ ಆಧಾರದ ಮೇಲೆ ಹೊಸ ಯುಗದ ರಾಜಕಾರಣವನ್ನು ಸ್ಥಾಪಿಸಲು ಭ್ರಷ್ಟರನ್ನು ಮೆಟ್ಟಿ ನಿಂತು ನೊಂದ ಪ್ರಜೆಯ ಧ್ವನಿಯಾಗಿ ಹೊರ ಹೊಮ್ಮುತ್ತಿರುವ ಏಕೈಕ ಪಕ್ಷವಾಗಿದೆ ಎಂದರು.ಈ ವೇಳೆ ಕೆಆರ್‌ಎಸ್ ಪಕ್ಷದ ನಬಿ ಹುಣಶ್ಯಾಳ ಮಾತನಾಡಿ, ಅಕ್ರಮವಾಗಿ ಮಧ್ಯ ಮಾರಾಟ ದಂದೆ ಅವ್ಯಾಹತವಾಗಿ ನಡೆಸುತ್ತ ಯುವಕರನ್ನು ದುಮಾರ್ಗದೆಡೆ…

Read More

ಉದಯರಶ್ಮಿ ದಿನಪತ್ರಿಕೆ ದೇವರ ಹಿಪ್ಪರಗಿ: ತಾಲ್ಲೂಕಿನ ಹುಣಶ್ಯಾಳ ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಶಿಕ್ಷಣ ದಿನ, ಒನಕೆ ಒಬವ್ವ ಜಯಂತಿ ಹಾಗೂ ಉರ್ದುದಿನ ಆಚರಣೆ ಜರುಗಿತು.ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ಜರುಗಿದ ಕಾರ್ಯಕ್ರಮದಲ್ಲಿ ಗಣಿತ ಶಿಕ್ಷಕ ಎ.ಜೆ.ಕೆಂಭಾವಿ ಮಾತನಾಡಿ, ರಾಷ್ಟದ ಮೊದಲ ಶಿಕ್ಷಣಮಂತ್ರಿಯಾಗಿದ್ದ ಮೌಲಾನಾ ಅಬುಲ್ ಕಲಾಂ ಆಜಾದ್ ರವರ ಜನ್ಮದಿನ ಪ್ರಯುಕ್ತ ರಾಷ್ಟ್ರೀಯ ಶಿಕ್ಷಣ ದಿನವನ್ನಾಗಿ ಆಚರಿಸಲಾಗುತ್ತದೆ. ಅವರಂತೆ ಆದರ್ಶದ ಬದುಕು ನಮ್ಮದಾಗಬೆಕು. ತನ್ನ ರಾಜ್ಯವನ್ನು ವೈರಿಪಡೆಯಿಂದ ರಕ್ಷಿಸಲು ಮೈಸೂರಿನ ಹೈದರಾಲಿಯ ಸೈನ್ಯವನ್ನು ಹಿಮ್ಮೆಟ್ಟಿಸಿ ಪ್ರಾಣಾರ್ಪಣೆ ಮಾಡಿದ ವೀರವನಿತೆ ಒನಕೆ ಓಬವ್ವಳ ಧೈರ್ಯ ಸಾಹಸವನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು. ಎಂದರು.ಉರ್ದು ಶಿಕ್ಷಕ ಮಹಮ್ಮದ ಉಮರ್ ಪ್ರಾಸ್ತಾವಿಕವಾಗಿ ಮಾತನಾಡಿ ಸುಮಾರು ೨೩೦ ಮಿಲಿಯನ್ ಜನರು ಉರ್ದುವನ್ನು ಮಾತನಾಡುವ ಕಾರಣ, ಇದು ವಿಶ್ವದ ಹತ್ತನೇ ಹೆಚ್ಚು ಮಾತನಾಡುವ ಭಾಷೆಗಳಲ್ಲಿ ಒಂದಾಗಿದೆ. ಎಲ್ಲ ಭಾಷೆಗಳನ್ನು ಪ್ರೀತಿಸಬೇಕು. ಮಾತೃಭಾಷೆಯನ್ನು ಮರೆಯಬಾರದು ಎಂದರು.ವಿಜ್ಞಾನ ಶಿಕ್ಷಕ ಮಹಮ್ಮದ ಯಾಸೀನ ಮಂದೇವಾಲ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಶಿಕ್ಷಕ ಎಸ್.ಎಸ್.ಗಡೇದ ಮಾತನಾಡಿದರು.ಶಿಕ್ಷಕರುಗಳಾದ ಮಂಜುನಾಥ ಸಜ್ಜನ, ದೈಹಿಕ…

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಒನಕೆ ಓಬವ್ವರನ್ನು ಕರ್ನಾಟಕದ ವೀರವನಿತೆಯರಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ ಎಂದು ತಹಶೀಲ್ದಾರ ಪ್ರಕಾಶ ಸಿಂದಗಿ ಹೇಳಿದರು.ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ಮಂಗಳವಾರ ಓಬವ್ವ ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.ಓಬವ್ವ ೧೮ನೇ ಶತಮಾನದ ಚಿತ್ರದುರ್ಗದ ಪಾಳೆಯಗಾರ ಮದಕರಿ ನಾಯಕನ ಕೋಟೆಯ ಕಾವಲುಗಾರ ಕಹಳೆ ಮದ್ದಹನುಮಪ್ಪನ ಪತ್ನಿಯಾಗಿ ತನ್ನ ಶೌರ್ಯತನದಿಂದ ಒನಕೆಯ ಮೂಲಕ ಸಾಹಸ ಮೆರೆದು ಇತಿಹಾಸದಲ್ಲಿ ಹೆಸರಾಗಿದ್ದಾಳೆ ಎಂದರು.ಶಿಕ್ಷಕರಾದ ಜಿ.ಪಿ.ಬಿರಾದಾರ, ಅರುಣ ಕೋರವಾರ, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಸಿದ್ದು ಮೇಲಿನಮನಿ, ಪ್ರಕಾಶ ಗುಡಿಮನಿ, ಮಾತನಾಡಿದರು. ಇದೇ ಸಂದರ್ಭದಲ್ಲಿ ವಿವಿಧ ಶಾಲೆಗಳಲ್ಲಿ ಓಬವ್ವ ರ ಕುರಿತು ಏರ್ಪಡಿಸಿದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಅಕ್ಷತಾ ಬಿರಾದಾರ(ಪ್ರಥಮ), ಶಿವಲೀಲಾ ಮುತ್ತಗಿ(ದ್ವಿತೀಯ), ಆಕಾಶ ಕರಿಗೌಡ(ತೃತಿಯ) ಇವರಿಗೆ ಪುಸ್ತಕ ಪಾರಿತೋಷಕ ವಿತರಿಸಲಾಯಿತು.ಶಿರಸ್ತೇದಾರ ಸುರೇಶ ಮ್ಯಾಗೇರಿ, ಸಿಬ್ಬಂದಿ ಚನ್ನಬಸು ಹೊಸಮನಿ, ಗ್ರಾಮಾಡಳಿತ ಅಧಿಕಾರಿಗಳಾದ ರಮಾನಂದ ಚಕ್ಕಡಿ(ದೇವರಹಿಪ್ಪರಗಿ) ಅನೀಲ ರಾಠೋಡ(ಯಾಳವಾರ) ಬಸವರಾಜ ತಳಕೇರಿ, ಬಸವರಾಜ ಇಂಗಳಗಿ, ಪಿಂಟು ಭಾಸುತ್ಕರ್ ಇದ್ದರು.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯ ಸಿಂದಗಿ ತಾಲೂಕಿನ ದೇವಣಗಾಂವ ಗ್ರಾಮದ ಮೌಲಾನಾ ಅಬ್ದುಲ್ ಕಲಾಂ ಆಜಾದ್ ಸಂಘದ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆಯಿತು.ಸಂಘದ ನೂತನ ಅಧ್ಯಕ್ಷರಾದ ಗಾಲೀಬಸಾಹೇಬ ನಾಗಾವಿ, ಉಪಾಧ್ಯಕ್ಷರಾದ ಮೈಬೂಬಸಾಬ ಬಾಗವಾನ, ಕಾರ್ಯದರ್ಶಿ ಸುಲೇಮಾನ ಮಕಾನದಾರ ಹಾಗೂ ಸದಸ್ಯರಾದ ಯಾಕುಬ ನಾಗಾವಿ, ನಜೀರ್ ನೆಲ್ಲಗಿ, ರಾಜು ನಾಗಾವಿ, ಸಲಾಮ್ ಕಸಾಬ, ಹುಸೇನ್ ಕಸಾಬ, ಸೈಫನಸಾಬ ನಾಗಾವಿ ಸೇರಿದಂತೆ ಹಲವರನ್ನು ಈ ಪ್ರಯುಕ್ತ ಸನ್ಮಾನಿಸಲಾಯಿತು.

Read More