Author: editor.udayarashmi@gmail.com

ಬ್ರಹ್ಮದೇವನಮಡು: ಆಲಮೇಲ ತಾಲೂಕಿನಲ್ಲಿ ಆರಂಭವಾಗಬೇಕಿದ್ದ ತೋಟಗಾರಿಕೆ ಕಾಲೇಜು ಮತ್ತು ಪ್ರಾದೇಶಿಕ ಸಾರಿಗೆ ಕಚೇರಿ ರದ್ದು ಮಾಡಿದ ಕೀರ್ತಿ ಹಿಂದಿನ ಬಿಜೆಪಿ ಸಕಾ೯ರಕ್ಕೆ ಸಲ್ಲುತ್ತದೆ, ಸುಳ್ಳು ಆಶ್ವಾಸನೆ ನೀಡಿ ಸಾರ್ವಜನಿಕರಿಗೆ ಮರಳು ಮಾಡುತ್ತಿರುವ ಬಿಜೆಪಿ ಪಕ್ಷಕ್ಕೆ ಮುಂಬರುವ ಚುನಾವಣೆಯಲ್ಲಿ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಸದಸ್ಯ ಸುರೇಶ ಮಳಲಿ (ಸುಂಗಠಾಣ) ಆಕ್ರೋಶ ವ್ಯಕ್ತಪಡಿಸಿದ್ದಾರೆ.ಈ ಕುರಿತು ಶನಿವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ನಮ್ಮ ಜಿಲ್ಲೆ ಗೆ ಒಂದು ಮಂತ್ರಿಸ್ಥಾನ ಕೂಡ ನೀಡಲಿಲ್ಲ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜಿಲ್ಲೆಗೆ ೨ ಸಚಿವ ಸ್ಥಾನ ನೀಡಿದೆ. ಐದು ಉಚಿತ ಯೋಜನೆಗಳನ್ನು ಮನೆ ಬಾಗಿಲಿಗೆ ತಲುಪಿಸಿದೆ. ಹೀಗಾಗಿ ರಾಜ್ಯ ಮತ್ತು ಜಿಲ್ಲೆಯ ಬಿಜೆಪಿ ನಾಯಕರಿಗೆ ಮತ ಕೇಳಲು ನೈತಿಕ ಹಕ್ಕಿಲ್ಲ ಎಂದರು. ೨೦೧೮ರ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ದಿ,ಎಂ ಸಿ ಮನಗೂಳಿ ಅವರು ಸತತ ಪರಿಶ್ರಮ ಪ್ರಯತ್ನದಿಂದ ಆಲಮೇಲ ತಾಲೂಕು ಮಾಡಿ ಅಲ್ಲಿ…

Read More

ದೇವರಹಿಪ್ಪರಗಿ: ಗ್ರಾಮೀಣ ಮಹಿಳೆಯರ ಆರೋಗ್ಯ ಕಾಪಾಡುವಲ್ಲಿ ಶೌಚಾಲಯ ಬಹುಮುಖ್ಯ ಪಾತ್ರ ವಹಿಸುತ್ತದೆ ಎಂದು ಉಜ್ವಲ ಸಂಸ್ಥೆಯ ಯೋಜನಾ ಸಂಯೋಜಕಿ ಸುನಂದಾ ತೋಳಬಂದಿ ಹೇಳಿದರು.ತಾಲ್ಲೂಕಿನ ಬಮ್ಮನಜೋಗಿ ಗ್ರಾಮದಲ್ಲಿ ಶನಿವಾರ ನಮ್ಮೂರು ಯುವಸೇವಾ ಸಮಿತಿಯಿಂದ ಮಹಿಳೆಯರಿಗಾಗಿ ನಿರ್ಮಿಸಲಾಗಿರುವ ಶೌಚಾಲಯ ಸಂಕೀರ್ಣ ಉದ್ಘಾಟಿಸಿ ಮಾತನಾಡಿದರು.ಪ್ರತಿ ಗ್ರಾಮದಲ್ಲಿ ನಾವು ದೇವಾಲಯಕ್ಕೆ ನೀಡುವ ಪ್ರಾಮುಖ್ಯತೆಯನ್ನು ಶೌಚಾಲಯಕ್ಕೂ ನೀಡಬೇಕು. ದೇವಾಲಯ ಮಾನಸಿಕ ಸ್ವಾಸ್ಥ್ಯ ಕಾಪಾಡಿದರೆ ಶೌಚಾಲಯ ದೈಹಿಕ ಕ್ಷಮತೆಗೆ ಕಾರಣವಾಗಿದೆ. ನಮ್ಮ ಗ್ರಾಮಗಳಲ್ಲಿ ಇಂದಿಗೂ ಶೌಚದ ಕುರಿತು ನಾಚಿಕೆ ಹಾಗೂ ನಿರ್ಲಕ್ಷ್ಯ ಭಾವವಿದೆ. ಇದು ಮಹಿಳೆಯರ ಮೇಲೆ ಹೆಚ್ಚಿನ ಪರಿಣಾಮ ಬೀರುವಂತಾಗಿದೆ. ಮಹಿಳೆಯರ ಕ್ಷೇಮ ಹಾಗು ಕ್ಷಮತೆಗಾಗಿ ಪ್ರತಿ ಮನೆ ಶೌಚಾಲಯ ಹೊಂದಿರುವುದು ಅಗತ್ಯ ಎಂದರು.ಗ್ರಾಮದಲ್ಲಿ ಅತ್ಯಾಧುನಿಕ ಮಹಿಳಾ ಶೌಚಾಲಯದ ರೂವಾರಿಯಾದ ಆದಿಜಾಂಬವ ನಿಗಮದ ಪ್ರಧಾನ ವ್ಯವಸ್ಥಾಪಕ ರಾಮನಗೌಡ ಕನ್ನೋಳ್ಳಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಎಲ್.ಎಚ್. ಚಲವಾದಿ, ವಿಠ್ಠಲ ಯಂಕಂಚಿ, ಸಾಗರ್ ಘಾಟಗೆ, ಗುರುಗೌಡ ಬಿರಾದಾರ, ಗಣೇಶ ಬಿರಾದಾರ, ರಾಮನಗೌಡ ಬಿರಾದಾರ, ಚಿದಾನಂದ ಹಿರೇಮಠ, ರೇವಣಸಿದ್ಧ ಯಂಕಂಚಿ, ಲಕ್ಷ್ಮಣ ಹೊಸಮನಿ,…

Read More

ಜನ-ಜಾನುವಾರುಗಳಿಗೆ ತೊಂದರೆ | ಗ್ರಾಮಸ್ಥರಿಂದ ಹೆದ್ದಾರಿ ತಡೆ | ಸಂಚಾರ ಅಸ್ತವ್ಯಸ್ತ ಬಸವನಬಾಗೇವಾಡಿ: ತಾಲೂಕಿನ ಕಾನ್ನಾಳ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಜನ-ಜಾನುವಾರುಗಳಿಗೆ ತೊಂದರೆಯಾಗಿದೆ. ಅಧಿಕಾರಿಗಳು ಗ್ರಾಮದ ಹತ್ತಿರವಿರುವ ಮುಳವಾಡ ಏತ ನೀರಾವರಿ ಕಾಲುವೆಯಿಂದ ಗ್ರಾಮದ ಕೆರೆ(ಬಾಂದಾರ)ಗೆ ನೀರು ಬಿಡುವಂತೆ ಆಗ್ರಹಿಸಿ ಶನಿವಾರ ಮಿನಿವಿಧಾನಸೌಧ ಮುಂಭಾಗ ಹಾಯ್ದು ಹೋಗಿರುವ ರಾಜ್ಯ ಬಿಜ್ಜಳ ಹೆದ್ದಾರಿಯಲ್ಲಿ ತಾಲೂಕಿನ ಕಾನ್ನಾಳ ಗ್ರಾಮಕ್ಕೆ ಕುಡಿಯುವ ನೀರಿಗಾಗಿ ಕಾಲುವೆಯಿಂದ ಬಾಂದಾರಕ್ಕೆ ನೀರು ಬಿಡುವಂತೆ ಆಗ್ರಹಿಸಿ ಗ್ರಾಮಸ್ಥರು ಕೆಲ ಹೊತ್ತು ರಸ್ತೆ ತಡೆದು ಪ್ರತಿಭಟನೆ ಮಾಡಿದ ಘಟನೆ ಜರುಗಿತು.ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ಕಳೆದ ಫೆ.೨೨ ರಂದು ತಹಸೀಲ್ದಾರರಿಗೆ ಮನವಿ ಸಲ್ಲಿಸಿದರೂ ಇದುವರೆಗೂ ಯಾವುದೇ ಪ್ರಯೋಜನವಾಗದೇ ಇರುವದರಿಂದಾಗಿ ಇಂದು ಬೆಳಗ್ಗೆ ಗ್ರಾಮಸ್ಥರು, ಕಾನ್ನಾಳ ಗ್ರಾಮದ ಪಂಚಾಯಿತಿ ಸದಸ್ಯರು ಗ್ರಾಮಕ್ಕೆ ಕಾಲುವೆ ನೀರು ಬಿಡಲು ಆಗ್ರಹಿಸಿ ತಹಸೀಲ್ದಾರ ಅವರಿಗೆ ಮನವಿ ಸಲ್ಲಿಸಿದರು.ನಂತರ ಪ್ರತಿಭಟನೆ ಮೆರವಣಿಗೆ ಮೂಲಕ ವಿಜಯಪುರ ರಸ್ತೆಯಲ್ಲಿರುವ ತಾಲೂಕು ಪಂಚಾಯಿತಿ ಕಚೇರಿಗೆ ತೆರಳಿ ಅಲ್ಲಿಯೂ ಮನವಿ ಸಲ್ಲಿಸಿದರು.ಮನವಿಯಲ್ಲಿ ನಮ್ಮ…

Read More

“ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ ” ವಿವೇಕಾನಂದ. ಎಚ್. ಕೆ, ಬೆಂಗಳೂರು ಶೂನ್ಯದಿಂದ ಪ್ರಾರಂಭವಾಗುವ ಜೀವನದ ಪಯಣ 100 ನಿಲ್ದಾಣಗಳನ್ನು ತಲುಪುತ್ತದೆ ಎಂದು ಹೇಳಲಾಗುತ್ತದೆ. ಆದರೆ ವಾಸ್ತವ ಅನುಭವದಲ್ಲಿ 60 ರಿಂದ 80 ರ ನಡುವಿನ ಯಾವುದಾದರೂ ನಿಲ್ದಾಣದಲ್ಲಿ ಪ್ರಯಾಣ ಮುಗಿಯುವ ಸಾಧ್ಯತೆಯೇ ಹೆಚ್ಚು.. ಜೀವ ಅಂಕುರವಾಗುವ ಘಳಿಗೆಯಿಂದ ಉಸಿರು ನಿಲ್ಲುವವರೆಗೆ ಇರುವ ಕಾಲವನ್ನು ಸರಳವಾಗಿ ಜೀವನ ಎಂದು ಪರಿಗಣಿಸಲಾಗುತ್ತದೆ. ನಮ್ಮ ದೇಹಕ್ಕೆ ನಾವೇ ಅಧಿಪತಿಯಾದರು ನಮ್ಮ ಜೀವನ ಮಾತ್ರ ಬಹುತೇಕ ಪರಿಸ್ಥಿತಿಯ ಕೂಸು. ಬದುಕಿಗಾಗಿ ಹೋರಾಡುತ್ತಾ ಖಚಿತವಾಗಿರುವ ಸಾವಿಗೆ ಶರಣಾಗುವುದೇ ಅಂತಿಮ ಸತ್ಯ.. ವ್ಯಾವಹಾರಿಕ ಜಗತ್ತಿನಲ್ಲಿ ಫಲಿತಾಂಶದ ಆಧಾರದಲ್ಲಿಯೇ ಯಶಸ್ಸನ್ನು ನಿರ್ಧರಿಸಲಾಗುತ್ತದೆ. ಭಾರತೀಯ ಸಮಾಜವನ್ನು ಹಿನ್ನೆಲೆಯಾಗಿಟ್ಟುಕೊಂಡು ನೋಡುವುದಾದರೆ ಅಧಿಕಾರ, ಹಣ, ಅಂತಸ್ತು, ಜನಪ್ರಿಯತೆಗಳನ್ನೇ ಮಾನದಂಡಗಳಾಗಿ ಬಳಸಿ ಇವತ್ತಿನ ಯಶಸ್ಸನ್ನು ನಿರ್ಧರಿಸಲಾಗುತ್ತದೆ. ಅವರೇ ಆದರ್ಶ ವ್ಯಕ್ತಿಗಳು. ಅವರೇ ಬಹುತೇಕ ಜನಸಾಮಾನ್ಯರು ಜೀವನ ರೂಪಿಸಿಕೊಳ್ಳಲು ಪ್ರೇರೆಪಿಸುವ ಕನಸುಗಾರರು. ತಂದೆ ತಾಯಿಗಳು, ಶಿಕ್ಷಕರು, ಸುತ್ತಲ ಸಮುದಾಯ ಎಲ್ಲರೂ ಇವರನ್ನೇ ಉದಾಹರಣೆ ನೀಡಿ ನೀವು ಅವರಂತೆ…

Read More

ಆಲಮಟ್ಟಿ: ಪ್ರವಾಸಿ ತಾಣವಾಗಿ ಬೆಳೆಯುತ್ತಿರುವ ಆಲಮಟ್ಟಿ ರೈಲು ನಿಲ್ದಾಣಕ್ಕೆ ಮೂರು ಎಕ್ಸ್ ಪ್ರೆಸ್ ರೈಲು ನಿಲುಗಡೆಗೆ ಆದೇಶಿಸಿ ರೈಲ್ವೆ ಮಂಡಳಿ ಅನುಮೋದನೆ ನೀಡಿದೆ.ವಾರಕೊಮ್ಮೆ ಬರುವ ಮೈಸೂರು- ಶಿರಡಿ (16217), ಪ್ರತಿನಿತ್ಯ ಚಲಿಸುವ ಹೊಸಪೇಟೆ- ಮುಂಬೈ (11140), ವಾರಕ್ಕೆರೆಡು ಬಾರಿ ಚಲಿಸುವ ಯಶವಂತಪುರ-ಬಿಕಾನೇರ್ (16587) ರೈಲಿಗೆ ಒಂದು ನಿಮಿಷ ನಿಲುಗಡೆ ಕಲ್ಪಿಸಿದೆ.ಆಲಮಟ್ಟಿಗೆ ಕೆಲವು ಎಕ್ಸಪ್ರೆಸ್ ರೈಲು ಮಾತ್ರ ನಿಲ್ಲುತ್ತಿದ್ದವು. ಆಲಮಟ್ಟಿಯ ಮೂಲಕವೇ ಹಾದು ಹೋಗುವ ಈ ಮೂರು ರೈಲನ್ನು ನಿಲ್ಲಿಸಬೇಕೆಂಬ ಕಳೆದ ಐದು ವರ್ಷಗಳಿಂದ ಈ ಭಾಗದ ಜನರು ಸಾಕಷ್ಟು ಬಾರಿ ಮನವಿ ಅರ್ಪಿಸಿದ್ದರು. ಸಂಸದ ರಮೇಶ ಜಿಗಜಿಣಗಿ ಅವರ ಮೇಲೆಯೂ, ನೈರುತ್ಯ ರೇಲ್ವೆ ವಲಯದ ಜನರಲ್ ಮ್ಯಾನೇಜರ್ ಅವರಿಗೂ ಹಲವಾರು ಬಾರಿ ಮನವಿ ಸಲ್ಲಿಸಿದರು.ಈ ರೈಲು ನಿಲ್ದಾಣದ ರೈಲ್ವೆ ಟಿಕೆಟ್ ಆದಾಯವನ್ನು ಗಮನಿಸಿ, ಜನರ ಒತ್ತಡದ ಕಾರಣ, ಕಳೆದ ನಾಲ್ಕು ತಿಂಗಳ ಹಿಂದಷ್ಟೇ ನೈರುತ್ಯ ರೇಲ್ವೆ ವಲಯದ ಅಧಿಕಾರಿಗಳು ರೈಲ್ವೆ ಮಂಡಳಿಗೆ ಪತ್ರ ಬರೆದು ರೈಲು ನಿಲುಗಡೆಗೆ ಅನುಮತಿ ಕೋರಿದ್ದರು.*ಹರ್ಷ:* ನಮ್ಮ…

Read More

ಸಹಸ್ರಾರು ಭಕ್ತರ ಲಗ್ಗೆ | ಶೋಭಾಯಾತ್ರೆ | ಅಹೋರಾತ್ರಿ ಸಂಗೀತ ಕಾರ್ಯಕ್ರಮ | ತೆರದ ಬಂಡಿ ಸ್ಪರ್ಧೆ ಆಲಮಟ್ಟಿ: ಏಳೂರು ಒಡೆಯ ಯಲಗೂರೇಶ್ವರನ ಕಾರ್ತಿಕೋತ್ಸವ ಶನಿವಾರ, ಸಹಸ್ರಾರು ಭಕ್ತರ ಭಾವಪರವಶದ ಮಧ್ಯೆ ಚಾಲನೆ ದೊರೆಯಿತು.ನಸುಕಿನ ಜಾವದಿಂದಲೇ ಸಹಸ್ರಾರು ಸಂಖ್ಯೆಯ ಭಕ್ತರು ಯಲಗೂರದತ್ತ ಲಗ್ಗೆ ಇಟ್ಟಿತು. ಪಾದಯಾತ್ರೆಯ ಮೂಲಕ ಬಂದ ಭಕ್ತರಿಗೆ ನಾನಾ ಕಡೆ ಅಲ್ಪೋಪಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು.ವಿವಿಧ ಆಚಾರ್ಯರ ನೇತೃತ್ವದ ತಂಡ ವೇದಘೋಷಗಳೊಂದಿಗೆ ಪೂಜಾ ಕಾರ್ಯಕ್ರಮ ನೆರವೇರಿಸಿದರು.ಅವಳಿ ಜಿಲ್ಲೆಗಳಿಂದ ಬಂದಿದ್ದ ನೂರಾರು ಮಹಿಳೆಯರು, ಹಲವಾರು ಭಜನಾ ತಂಡಗಳು ಶೋಭಾಯಾತ್ರೆಯಲ್ಲಿ ಪಾಲ್ಗೊಂಡವು. ಭಜನೆಯೊಂದಿಗೆ ಮೆರವಣಿಗೆ ಸಾಗಿತು. ಗ್ರಾಮದ ತುಂಬೆಲ್ಲಾ ಶೋಭಾಯಾತ್ರೆಯಲ್ಲಿ ಮಹಿಳೆಯರ ಕೋಲಾಟ ಗಮನಸೆಳೆಯಿತು. ವಿಜಯಪುರ, ಬಾಗಲಕೋಟೆ, ಮುದ್ದೇಬಿಹಾಳ, ಬಸವನ ಬಾಗೇವಾಡಿ, ತೆಲಗಿ, ಹುಬ್ಬಳ್ಳಿ, ಬೆಳಗಾವಿ, ಆಲಮಟ್ಟಿ , ಯಲಗೂರ ಸೇರಿದಂತೆ ವಿವಿಧ ಭಜನಾ ಮಂಡಳಿಗಳಿಂದ ಎರಡು ದಿನಗಳಕಾಲ ನಿರಂತರ ಭಜನಾ ನಿನಾದ ಸದ್ದು ಝೇಂಕರಿಸಿತು.ಸಂಗೀತಕ್ಕೆ ಚಾಲನೆ:ಹದಿದಾಸ ಸಂಗೀತ ಸಾಹಿತ್ಯ ವೇದಿಕೆ ವತಿಯಿಂದ ಸಂಘಟಿಸಿರುವ ಅಹೋರಾತ್ರಿ ಸಂಗೀತ ಕಾರ್ಯಕ್ರಮಕ್ಕೆ ವಿ.ಬಿ. ಕುಲಕರ್ಣಿ, ಗೋಪಾಲ…

Read More

‍ಚಡಚಣ: ಪಟ್ಟಣದಲ್ಲಿ ಭಾನುವಾರ ನಡೆವ ಪಲ್ಸ್‌ ಪೋಲಿಯೋ ಕಾರ್ಯಕ್ರಮ ನಿಮಿತ್ಯ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಎಚ್ ಪಿ ಎಸ್. ನಂ:02 ಶಾಲೆಯ ವತಿಯಿಂದ ಶನಿವಾರ ಪಲ್ಸ್‌ ಪೋಲಿಯೋ ಜಾಥಾ ನಡೆಸಲಾಯಿತು.ಚಡಚಣ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ: ಜಾನ್ ಕಟವಟೆ ಮಾತನಾಡಿ, ಮಾ.03 ರಂದು ಪಲ್ಸ್‌ ಪೋಲಿಯೋ ಲಸಿಕಾ ಕಾರ್ಯಕ್ರಮ ಇದ್ದು ಐದು ವರ್ಷದ ಒಳಗಿನ ಎಲ್ಲಾ ಮಕ್ಕಳಿಗೆ ಎಲ್ಲರೂ ಪಲ್ಸ್‌ ಪೋಲಿಯೋ ಲಸಿಕೆ ಹಾಕಿಸಬೇಕು ಎಂದರು.ಇದೇ ಸಂದರ್ಭದಲ್ಲಿ ಚಡಚಣ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ಆರ್ ಬಿ ಲಾಳಸಂಗಿ, ಎಮ್ ಬಿ ತೇಲಿ, ಸುರೇಶ ವಾಲಿಕಾರ, ಪಿ ವೈ ಕುರಿ, ಶ್ರೀಶೈಲ್ ಯಳಮೇಲಿ, ಶ್ರೀಧರ್ ಬಂಡಗರ, ಎಮ್ ಎಲ್ ಮುಲ್ಲಾ, ಚೇತನ್ ಅಳುರ್, ಸಚಿನ್ ತೇಲಿ, ವಿ ಸಿ ಬಳಮಕರ, ಆರ್ ಡಿ ಕಿಟ್ಟದ್, ಡಿ ಎಸ್ ಕದರಿ, ಪ್ರಶಾಂತ್ ಸಾಳುಂಕೆ, ರಾಜು. ಎಸ್ ಓ ಹಿರೇಕುರುಬರ, ಸಂಜು ರೂಗಿ ಮತ್ತು ಆಶಾ ಕಾರ್ಯಕರ್ತೆಯರು, ಪಟ್ಟಣ ಪಂಚಾಯಿತಿ…

Read More

ವಿಜಯಪುರ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮೀತಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅನುಮೋದನೆಯ ಮೇರೆಗೆ ವಿಜಯಪುರ ಜಿಲ್ಲಾ ಕಾಂಗ್ರೆಸ್ ಸಮೀತಿಯ ಉಪಾಧ್ಯಕ್ಷರನ್ನಾಗಿ ಡಿ.ಎಲ್.ಚವ್ಹಾಣ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ನೇಮಕಾತಿ ಮಾಡಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಸಂತ ಹೊನಮೊಡೆ ಪತ್ರಿಕೆಗೆ ತಿಳಿಸಿದ್ದಾರೆ.

Read More

ಚಡಚಣ: ತಾಲೂಕಿನ ಜೀಗಜೇವಣಿ ಗ್ರಾಮದ ರಾಮನಗೌಡ ಬಿರಾದಾರ ಅವರನ್ನು ಭಾರತೀಯ ಜನತಾ ಪಕ್ಷ (ಬಿಜೆಪಿ)ದ ವಿಜಯಪುರ ಜಿಲ್ಲಾ ರೈತ ಮೋರ್ಚಾ ಕಾರ್ಯದರ್ಶಿಯಾಗಿ ಆಯ್ಕೆ ಮಾಡಿ, ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಅವರು ಆದೇಶ ಹೊರಡಿಸಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಕೆಂಭಾವಿ: ಗೆಳೆಯರ ಬಳಗ ಕೆಂಭಾವಿ ವತಿಯಿಂದ ಲಿಂ.ಗುರುಬಸಯ್ಯ ಚನ್ನಯ್ಯಸ್ವಾಮಿ ಚಿಕ್ಕಮಠರವರ ಜನ್ಮದಿನದ ಪ್ರಯುಕ್ತ ಸ.ಮಾ.ಪ್ರಾ.ಶಾಲೆ ಪರಸನಹಳ್ಳಿ ಶಾಲೆಗೆ ಸ್ಮಾರ್ಟ್ ಟಿ ವಿ ಕೊಡುಗೆಯಾಗಿ ನೀಡಲಾಯಿತು.

Read More