Author: editor.udayarashmi@gmail.com

ವಿಜಯಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆ ಮತ್ತು‌ ವೈದ್ಯಕೀಯ ಕಾಲೇಜು ಉಳುವಿಗಾಗಿ ಜನವೇದಿಕೆ ಮಹಿಳಾ ಸಂಘಟನೆಯಿಂದ ವಿನೂತನ ಪ್ರತಿಭಟನೆ ಉದಯರಶ್ಮಿ ದಿನಪತ್ರಿಕೆ ಆಲಮೇಲ: ಜಿಲ್ಲಾ ಆಸ್ಪತ್ರೆ ಮತ್ತು ಸರಕಾರಿ ವೈದ್ಯಕೀಯ ಕಾಲೇಜು ಖಾಸಗೀಕರಣ ಮಾಡುತ್ತಿರುವುದನ್ನು ವಿರೋಧಿಸಿ ಜನವೇದಿಕೆ ಮಹಿಳಾ ಸಂಘಟನೆ ರಂಗೋಲಿ ಚಳುವಳಿ ಹಮ್ಮಿಕೊಳ್ಳುವ ಮೂಲಕ ಪ್ರತಿಭಟಿಸಿದರು.ಮಂಗಳವಾರ ಪಟ್ಟಣ ಪಂಚಾಯಿತಿ ಎದುರುಗಡೆ ಜನ ವೇದಿಕೆ ಮಹಿಳಾ ಸಂಘಟನೆ ಸದಸ್ಯರು ರಂಗೋಲಿ ಹಾಕುವ ಮೂಲಕ ಜಿಲ್ಲಾ ಸರಕಾರಿ ಆಸ್ಪತ್ರೆ ಮತ್ತು ಸರಕಾರಿ ವೈದ್ಯಕೀಯ ಕಾಲೇಜು ಉಳಿವಿಗಾಗಿ ರಂಗೋಲಿ ಬಿಡಿಸಿ ವಿನೂತನವಾಗಿ ಪ್ರತಿಭಟಿಸಿದರು.ನಂತರ ಪ.ಪಂ ಮುಖ್ಯಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.ನ್ಯಾಯ ಬೆಲೆ ಅಂಗಡಿ ಮಾಲಿಕ ಅಪ್ಪು ಶೆಟ್ಟಿ ಮಾತನಾಡಿ, ಸರಕಾರಿ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜು ಖಾಸಗಿಕರಣ ಮಾಡಿದರೆ ಬಡ ಜನರ ಚಿಕಿತ್ಸೆ ಕಷ್ಟಕರ ವಾಗುತ್ತದೆ. ಯಾವುದೆ ಕಾರಣಕ್ಕೂ ಸರಕಾರಿ ಆಸ್ಪತ್ರೆ ಮತ್ತು ಜಿಲ್ಲೆಗೆ ಮಂಜುರಾಗಿರುವ ಸರಕಾರಿ ವೈದ್ಯಕೀಯ ಕಾಲೇಜು ಖಾಸಗೀಕರಣ ಮಾಡಬಾರದು ಎಂದು ಒತ್ತಾಯಿಸಿದರು.ಜನವೇದಿಕೆಯ ಮುಖ್ಯಸ್ಥೆ ಒಲಿವಾ ಸಲ್ಡಾನ ಮಾತನಾಡಿ, ವಿಜಯಾಪುರ ಜಿಲ್ಲೆಗೆ…

Read More

ಉದಯರಶ್ಮಿ ದಿನಪತ್ರಿಕೆ ಚಡಚಣ: ಪಟ್ಟಣದ ಧರ್ಮಶ್ರೀ ಜ್ಞಾನ ವಿಕಾಸ ಕೇಂದ್ರದಲ್ಲಿ ಚಡಚಣ ವಲಯದ ಪರಮಾನಂದ ಕಾರ್ಯಕ್ಷೇತ್ರದ ಸೃಜನಶೀಲ ಕಾರ್ಯಕ್ರಮದಡಿಯಲ್ಲಿ ಬಟ್ಟೆ ಬ್ಯಾಗ್ ತಯಾರಿಕಾ ತರಬೇತಿಯನ್ನು ಹಮ್ಮಿಕೊಳ್ಳಲಾಯಿತು.ತರಬೇತಿಯ ಸಮಾರೋಪ ಕಾರ್ಯಕ್ರಮವನ್ನು ಚಡಚಣ ತಾಲೂಕಿನ ಯೋಜನಾಧಿಕಾರಿ ನಟರಾಜ್ ಜ್ಯೋತಿ ಬೆಳಗಿಸುವುದರ ಮೂಲಕ ಚಾಲನೆ ನೀಡಿ ಮಾತನಾಡಿ, ನಮ್ಮೆಲ್ಲರ ಮಾತೃ ಹೃದಯಿ ಮಾತೃಶ್ರೀ ಹೇಮಾವತಿ ಅಮ್ಮನವರು ಈ ನಾಡಿನ ಜನರ ಬಡತನ ನಿವಾರಣೆಗಾಗಿ ಮತ್ತು ಮಹಿಳೆಯರು ಸ್ವಾವಲಂಬನೆಯಾಗಿ ಬದುಕಬೇಕೆಂಬುವ ನಿಟ್ಟಿನಲ್ಲಿ ಸೃಜನಶೀಲ ಕಾರ್ಯಕ್ರಮದಂತಹ ವಿಶೇಷ ಕಾರ್ಯಕ್ರಮಗಳನ್ನು ಜ್ಞಾನವಿಕಾಸ ಕೇಂದ್ರದ ಮೂಲಕ ಅವಕಾಶ ಕಲ್ಪಿಸಿಕೊಟ್ಟಿದ್ದು, ಅದೆಷ್ಟೋ ನಿರುದ್ಯೋಗಿಗಳನ್ನು ಜ್ಞಾನವಿಕಾಸ ಕೇಂದ್ರದಲ್ಲಿ ಸ್ವ-ಉದ್ಯೋಗದ ತರಬೇತಿಗಳನ್ನು ನೀಡುವುದರ ಮೂಲಕ ಉದ್ಯೋಗಿಗಳನ್ನಾಗಿಸಿ ಸದಸ್ಯರ ಬದುಕು ಬಂಗಾರವಾಗುವಂತೆ ಮಾಡುತ್ತಿದೆ.ಅದೇ ರೀತಿ ಭೂತಾಯಿ ಸಂರಕ್ಷಣೆ, ಪರಿಸರ ಸುರಕ್ಷತೆ, ಪ್ಲಾಸ್ಟಿಕ್ ಮುಕ್ತ ನಾಡನ್ನು ಮಾಡಬೇಕೆನ್ನುವ ಉದ್ದೇಶ ಹಾಗೂ ಸ್ವ ಉದ್ಯೋಗಗಳನ್ನು ಕಲ್ಪಿಸಿ ಕೊಡುವ ನಿಟ್ಟಿನಲ್ಲಿ ನಮ್ಮ ತಾಲೂಕಿನ ಜಿ.ವಿ.ಕೆ ಕೇಂದ್ರದ ಸದಸ್ಯರಿಗೆ ಬಟ್ಟೆ ಬ್ಯಾಗ್ ತಯಾರಿಕೆ ತರಬೇತಿಯನ್ನು ಹಮ್ಮಿಕೊಂಡಿದ್ದು, ತಾವೆಲ್ಲರೂ ಅತ್ಯಂತ ಉತ್ಸಕತೆಯಿಂದ ಭಾಗವಹಿಸಿ ತರಬೇತಿಯನ್ನು…

Read More

ಕಾರ್ಯನಿರತ ಪತ್ರಕರ್ತರ ಸಂಘದ ವಿಜಯಪುರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಂದುಶೇಖರ ಮಣೂರ ಶ್ಲಾಘನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮಾತು ಬಾರದ, ಕಿವಿ ಕೇಳದ ಬಡ ಮಕ್ಕಳಿಗಾಗಿ ತಮ್ಮ ಬದುಕನ್ನೇ ಮೀಸಲಿಟ್ಟು, ಆ ಮಕ್ಕಳಿಗೆ ಧ್ವನಿಯಾಗಿರುವ ಸುಜಾತ ರೇಶ್ಮಿ ಅವರು ಮಹಾತಾಯಿಯಾಗಿದ್ದಾರೆ ಎಂದು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪ್ರಧಾನ ಕಾರ್ಯದರ್ಶಿ ಇಂದುಶೇಖರ ಮಣೂರ ಶ್ಲಾಘಿಸಿದರು.ನಗರದ ಸಪ್ನಾ ಕಿವುಡ ಮತ್ತು ಮೂಕ ಮಕ್ಕಳ ಶಾಲೆಯಲ್ಲಿ ಸೋಮವಾರ ಸಂಜೆ ಏರ್ಪಡಿಸಿದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.೨೦೦೯ ರಲ್ಲಿ ಯಾರ ಸಹಾಯವೂ ಇಲ್ಲದೆ ಕೇವಲ ಮೂರು ಮಕ್ಕಳಿಂದ ಆರಂಭಗೊಂಡ ಈ ಶಾಲೆ ಇಂದು ೧೩೦ ಮಕ್ಕಳಿಗೆ ಆಶ್ರಯಧಾಮವಾಗಿದೆ. ಇಂತಹ ಮಕ್ಕಳಿಗೆ ಶಿಕ್ಷಣ ನೀಡುವುದು ತುಂಬ ಕಷ್ಟದ ಕೆಲಸ. ಆದರೆ ಈ ಶಾಲೆಯ ಸಂಸ್ಥಾಪಕಿ ಸುಜಾತ ರೇಶ್ಮಿ ಅವರು ತಾವೇ ಮೂರು ವರ್ಷ ಮೈಸೂರಿನಲ್ಲಿ ಸ್ಪೀಚ್ ಥೆರೆಪಿ ತರಬೇತಿ ಪಡೆದು, ಇಲ್ಲಿಯ ಸುಮಾರು ೨೫ ಶಿಕ್ಷಕರಿಗೆ ತರಬೇತಿ ನೀಡಿ ಪರಿಣಾಮಕಾರಿ ಶಿಕ್ಷಣದೊಂದಿಗೆ ಮಕ್ಕಳಿಗೆ ಊಟ-ವಸತಿಯ…

Read More

ಲೇಖನ- ಜಯಶ್ರೀ.ಜೆ. ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕರುಬೆಳಗಾವಿಮೊ: ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ನನ್ನೊಲವಿನ ಚೆಲುವೆಕಾಲೇಜಿನಂಗಳದಿ ಕಾಲಿಟ್ಟ ದಿನದಂದೇ ನೀ ಕಣ್ಣಿಗೆ ಬಿದ್ದೆ. ಸುರಿವ ಸೋನೆ ಮಳೆಗೆ ಹಾಡೊಂದ ಗುಣುಗುಣಿಸುತ ಕಣ್ಮುಂದೆ ನಿಂದೆ. ತುಸುವೇ ತುಸು ದೂರದ ರಸ್ತೆಯಂಚಿನಲ್ಲಿ ನಿಂತು ಹರಿವ ಸಿಹಿ ಝರಿಯಂತೆ ನನ್ನೆಡೆ ಕಣ್ಣೋಟ ಹರಿಸಿದೆ. ಬೀಸುವ ತಂಗಾಳಿಯ ಜತೆ ನಿನ್ನ ಮೈಯ ಸುಗಂಧ ತೇಲಿ ಬಂದು ನನ್ನ ಮೈಯ ಸವರಿದಂತೆನಿಸಿ ನಿಂತಲ್ಲೇ ಒಮ್ಮೆ ನಡುಗಿದೆ. ಒಮ್ಮಿಂದೊಮ್ಮೆಲೇ ಬೀಸಿದ ಜೋರಾದ ಗಾಳಿಗೆ ಬಲು ದೂರದ ತನಕ ಹಾರಿದ ನಿನ್ನೆದೆಯ ಅಂದದ ಆಕಾರ ಮುಚ್ಚಿದ್ದ ದುಪ್ಪಟ್ಟಾ ತಂದು ಕೈಗಿತ್ತೆ. ಕೋಮಲವಾದ ನಿನ್ನ ಬೆರಳುಗಳಿಗೆ ಬೆರಳು ಸೋಕಿ ಪುಳಕಗೊಂಡೆ. ಆ ಹೊಸ ಸ್ಪರ್ಷ ಪ್ರೇಮ ಲೋಕವೊಂದನ್ನು ತೆರೆದಂತಿತ್ತು. ಬಾನಂಗಳದಿ ನೇಸರ ಕಂಗೊಳಿಸುತ್ತ ಇಳಿಯುತ್ತಿದ್ದ. ಸದ್ದಿಲ್ಲದೇ ನೀ ನನ್ನೆದೆಗೆ ಇಳಿಯುತ್ತಿದ್ದೆ. ನೋಟದಲ್ಲಿ ನೋಟ ಬೆರೆಸಿ ಸ್ವಲ್ಪ ದೂರ ನನ್ನೊಡೆನೆ ನಡೆದು ಬಂದೆ ನೀನು, ನನ್ನೊಡನೆ ಒಂದಾಗಿ ಹೋದಂತೆ ಅನಿಸಿತು. ಇಬ್ಬರೂ ಜೊತೆಗೂಡಿ ರಸ್ತೆ ಬದಿಯಲಿರುವ ಜರ್ಝರಿತವಾದ ಬಂಡೆಗಲ್ಲಿನ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮಹಾರಾಷ್ಟ್ರದ ಅಕ್ಕಲಕೋಟದ ಮಾಜಿ ಶಾಸಕ ಸಿದ್ರಾಮಪ್ಪ ಮಲಕಪ್ಪ ಪಾಟೀಲ(೮೭) ಇದೇ ನ.೧೩ ರ ಗುರುವಾರ ರಾತ್ರಿ ಸೋಲ್ಲಾಪುರದ ಖಾಸಗಿ ಆಸ್ಪತ್ರೆಯಲ್ಲಿ ನಿಧರಾದರು. ಅವರ ಅಂತ್ಯಕ್ರಿಯೆ ಅಕ್ಕಲಕೋಟ ತಾಲೂಕಿನ ಕುಮಠೆ ಗ್ರಾಮದಲ್ಲಿ ನ.೧೪ ರ ಶುಕ್ರವಾರದಂದು ನೆರವೇರಿತು.ಇವರಿಗೆ ನಾಲ್ವರು ಪುತ್ರರು, ಇಬ್ಬರು ಪುತ್ರಿಯರು ಸೇರಿ ಅಪಾರ ಬಂಧು ಬಳಗ ಅಗಲಿದ್ದಾರೆ. ಅವರ ನಿಧನಕ್ಕೆ ಹಾಲಳ್ಳಿ ಗ್ರಾಮದಲ್ಲಿ ಅವರ ಅಭಿಮಾನಿಗಳು ಮೇಣದ ಬತ್ತಿ ಬೆಳಗಿಸುವುದರ ಮೂಲಕ ಶೃದ್ಧಾಜಂಲಿ ಸಲ್ಲಿಸಿದರು.ಮೂಲಕ ಮೂಲತಃ ಕರ್ನಾಟಕದ ಚಡಚಣ ತಾಲೂಕಿನ ಹಾಲಳ್ಳಿ ಗ್ರಾಮದಲ್ಲಿ ಜೂನ ೧೦, ೧೯೩೯ರಂದು ಹುಟ್ಟಿ ಬೆಳದು ಪ್ರಾಥಮಿಕ ಶಿಕ್ಷಣವನ್ನು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಾಗೂ ಮಾಧ್ಯಮಿಕ ಶಿಕ್ಷಣವನ್ನು ಚಡಚಣ ಪಟ್ಟದ ಶ್ರೀ ಸಂಗಮೇಶ್ವರ ಮಾಧ್ಯಮಿಕ ಶಾಲೆಯಲ್ಲಿ ಪೂರೈಸಿದ ಇವರು ನಂತರ ಅಕ್ಕಲಕೋಟ ಶಾಸಕರಾಗಿ ಕಾರ್ಯ ನಿರ್ವಹಿಸಿದ್ದರು.ಅವರು ಅಕ್ಕಲಕೋಟ ತಾಪಂ ಅಧ್ಯಕ್ಷರಾಗಿ, ಸೋಲಾಪು ಜಿಪಂ ಉಪಾಧ್ಯಕ್ಷರಾಗಿ, ಸೋಲಾಪುರ ಡಿಸಿಸಿ ಬ್ಯಾಂಕ್‌ಗೆ ೩೫ ವರ್ಷ ಸಂಚಾಲಕರಾಗಿ, ಸ್ವಾಮಿ ಸಮರ್ಥ ಸಕ್ಕರೆ ಕಾರ್ಖಾನೆ…

Read More

ಉದಯರಶ್ಮಿ ದಿನಪತ್ರಿಕೆ ಬ್ರಹ್ಮದೇವನಮಡು: ಸಿಂದಗಿ ತಾಲೂಕಿನ ಸುಕ್ಷೇತ್ರ ಯಂಕಂಚಿ ಗ್ರಾಮದ ಕುಂಟೋಜಿ ಹಿರೇಮಠದಲ್ಲಿ ಶ್ರೀಮಠದ ಒಡೆಯ ಅಭಿನವ ರುದ್ರಮುನಿ ಶಿವಾಚಾಯ೯ರ ನೇತೃತ್ವದಲ್ಲಿ ಲಿಂ.ರುದ್ರಮುನಿ ಶಿವಾಚಾಯ೯ರ ೪೮ನೇ ಪುಣ್ಶಾರಾಧನೆ ನಿಮಿತ್ಶ ನ.೧೭ರಿಂದ ನ.೨೭ ರವರೆಗೆ ನಿತ್ಶ ೧೧ ದಿನಗಳ ಕಾಲ ರಾತ್ರಿ ೮ ರಿಂದ ೯ರ ವರೆಗೆ ನವಲಗುಂದದ ಶ್ರೀ ಅಜಾತ ನಾಗಲಿಂಗ ಸ್ವಾಮಿಗಳ ಪುರಾಣ ನಡೆಯಲಿದೆ. ಶಹಾಪೂರದ ಸರಸ್ವತಿ ಪೀಠ, ವಿಶ್ವಕಮ೯ ಏಕದಂಡಗಿ ಮಠದ ಕಾಳಹಸ್ತೇಂದ್ರ ಮಹಾಸ್ವಾಮಿಗಳು ಪ್ರವಚನ ನಡೆಸಿಕೊಡುವರು. ಯಂಕಂಚಿಯ ನಿಂಗಣ್ಣ ವಿಶ್ವಕಮ೯ ಸಂಗೀತ ಸೇವೆ ನೀಡುವರು. ಮೋರಟಗಿಯ ರವಿ ವಿಭೂತಿ ತಬಲಾ ಸಾಥ್ ನೀಡುವರು. ನ.೧೭ರಂದು ರಾತ್ರಿ ೮ಕ್ಕೆ ಪುರಾಣ ಆರಂಭೋತ್ಸವಕ್ಕೆ ಉದ್ದಿಮೆದಾರ ವೆಂಕಟೇಶ ಗುತ್ತೆದಾರ, ಚಿಕ್ಕರೂಗಿಯ ಈರಣ್ಣ ಶಾಸ್ತ್ರೀಗಳು ಉದ್ಘಾಟಿಸುವರು.ಮುಧೋಳ (ಬಿ) ಗಂಜಗಟ್ಟಿ ಡಾ.ವೈಜನಾಥ ಶಿವಾಚಾಯ೯ರು,ಮಳ್ಳಿ ಹಿರೇಮಠದ ರುದ್ರಮುನಿ ಶಿವಾಚಾಯ೯ರು ದಿವ್ಶ ಸಾನಿಧ್ಶವಹಿಸುವರು.ರೋಡಗಿಯ ವಿರಕ್ತಮಠದ ಅಭಿನವ ಶಿವಲಿಂಗೇಶ್ವರ ಸ್ವಾಮಿಗಳು, ಕಡಕೋಳ (ಡೋಣಿ) ಹಿರೇಮಠದ ರಾಜಗುರು ಮಹಾಲಿಂಗ ಸ್ವಾಮಿಗಳು, ಕೋರವಾರ ಚೌಕಿಮಠದ ಮುರಗೇಂದ್ರ ಮಹಾಸ್ವಾಮಿಗಳು ನೇತೃತ್ವ ವಹಿಸುವರು. ಚಬನೂರದ…

Read More

ಉದಯರಶ್ಮಿ ದಿನಪತ್ರಿಕೆ ಚಿಮ್ಮಡ: ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ವೃದ್ದಿಗೆ ನಮ್ಮ ಸರಕಾರಿ ಪ್ರೌಢಶಾಲೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಶಿಕ್ಷಕರೊಂದಿಗೆ ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಪಾಲಕರೂ ಸಹಕಾರ ನೀಡಬೇಕೆಂದು ಚಿಮ್ಮಡ ಹಾಗೂ ತೇರದಾಳ ಸರಕಾರಿ ಪ್ರೌಢಶಾಲೆಯ ಮುಖ್ಯೊಪಾದ್ಯಾಯೆ ಎಂ.ಎಸ್. ಜಿಟ್ಟಿ ಹೇಳಿದರು.ಗ್ರಾಮದ ಸರಕಾರಿ ಪ್ರೌಢಶಾಲೆಯ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಪೋಷಕ-ಶಿಕ್ಷಕರ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಎಸ್‌ಎಸ್‌ಎಲ್‌ಸಿ ಫಲಿತಾಂಶ ವೃದ್ದಿಗಾಗಿ ವಿಶೇಷ ತರಗತಿ ನಡೆಸುವುದು, ಬೆಳಗಿನ ಜಾವ ಅಭ್ಯಾಸಕ್ಕಾಗಿ ಮಕ್ಕಳನ್ನು ಎಚ್ಚರಿಸುವುದು, ವಿಶೇಷ ಟಿಪ್ಪಣಿಗಳನ್ನು ಮಕ್ಕಳಿಗೆ ನೀಡುವುದು ಹಾಗೂ ಶೇ. ೧೦೦ ರಷ್ಟು ಮಕ್ಕಳ ಹಾಜರಾತಿ ಕಾಯ್ದುಕೊಳ್ಳುವ ಮೂಲಕ ವಿಶೇಷ ಮುತುವರ್ಜಿ ವಹಿಸಲಾಗುತ್ತಿದ್ದು ಈ ಬಾರಿ ಶೇ,೧೦೦ ಫಲಿತಾಂಶಕ್ಕಾಗಿ ಶೃಮಿಸಲಾಗುತ್ತಿದೆ ಎಂದರು.ಕಾರ್ಯಕ್ರಮದಲ್ಲಿ ಆರ್‌ಟಿ.ಇ ಕಾಯಿದೆ ಕುರಿತು ಶ್ರೀಮತಿ ಬಿ.ಡಿ. ಬಡಿಗೇರ, ಮಕ್ಕಳ ಹಕ್ಕು ಹಾಗೂ ನಿರ್ವಹಣಾ ನೀತಿ ಕುರಿತು ಶ್ರೀಮತಿ ಆರ್.ಎಚ್. ಕೋರಡ್ಡಿ, ಪ್ರೋತ್ಸಾಹದಾಯಕ ಯೋಜನೆಗಳ ಕುರಿತು ಎಂ.ಎಲ್. ಜಮಾದಾರ, ಪಾಲಕ, ಪೋಷಕರ ಜವಾಬ್ದಾರಿ ಕುರಿತು ಶ್ರೀಮತಿ ಜಿ.ಎಸ್. ಕುಲಕರ್ಣೀ,…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಇಂದಿನ ಜಗತ್ತಿನಲ್ಲಿ ಯಶಸ್ವಿ ಹೊಂದಲು ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಜ್ಞಾನ ಮತ್ತು ಕೌಶಲ್ಯಗಳನ್ನು ಹೊಂದಬೇಕು. ಗುಣಮಟ್ಟದ ಶಿಕ್ಷಣದ ಜೊತೆಗೆ ಪ್ರಸ್ತುತ ಜಗತ್ತು ಅಪೇಕ್ಷಿತ ಮಟ್ಟದ ವಿಷಯ ಜ್ಞಾನ, ಕೌಶಲ್ಯ, ವಿಶ್ಲೇಷಣಾತ್ಮಕ ಚಿಂತನಾ ಶಕ್ತಿ, ಕಾರ್ಯತತ್ಪರತೆ, ಕ್ರಿಯಾಶೀಲತೆ, ಸೃಜನಾತ್ಮಕತೆ ಮತ್ತು ಪ್ರಾಯೋಗಿಕತೆಯಂತಹ ಔದ್ಯೋಗಿಕ ಕೌಶಲ್ಯಗಳನ್ನು ಪಡೆಯುವುದು ಅಗತ್ಯವಾಗಿದೆ ಎಂದು ವಾಣಿಜ್ಯಶಾಸ್ತ್ರ ಪ್ರಾಧ್ಯಾಪಕ ಎಂ.ಎಸ್.ಖೊದ್ನಾಪೂರ ಅವರು ಅಭಿಪ್ರಾಯಪಟ್ಟರು.ಅವರು ನಗರದ ನವಭಾಗದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾಣಿಜ್ಯಶಾಸ್ತ್ರ ವಿಭಾಗದಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗಾಗಿ ಎಂಪ್ಲೆöÊಯೆಬಿಲಿಟ್ ಸ್ಕಿಲ್ಸ್ ವಿಷಯದ ಪಠ್ಯಕ್ರಮಕ್ಕೆ ಸಂಬಂಧಿಸಿದಂತೆ ಆಯೋಜಿಸಿದ್ದ “ಔದ್ಯೋಗಿಕ ಮತ್ತು ಸ್ಪರ್ಧಾತ್ಮಕ ಕೌಶಲ್ಯಗಳ ಕಾರ್ಯಾಗಾರ” ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.ಅವರು ಮಾತನಾಡುತ್ತಾ, ಸ್ಪರ್ಧಾತ್ಮಕ ಪರೀಕ್ಷೆಗಳು ಸರ್ಕಾರಿ ಉದ್ಯೋಗ ಮತ್ತು ಪ್ರತಿಷ್ಠಿತ ಖಾಸಗಿ ವಲಯದ ಸಂಸ್ಥೆಗಳಲ್ಲಿ ಉದ್ಯೋಗಾವಕಾಶಗಳನ್ನು ಗಿಟ್ಟಿಸಿಕೊಳ್ಳಲು ಪ್ರವೇಶದ್ವಾರವಾಗಿವೆ. ಇಂದು ಕೇವಲ ವಿಷಯ ಜ್ಞಾನ, ಅಂಕ ಮತ್ತು ಪದವಿ ಪಡೆದರೆ ಸಾಲದು. ಅದಕ್ಕಿಂತ ಮುಖ್ಯವಾಗಿ ಶಿಸ್ತು, ಉದಾತ್ತ ಗುರಿ, ಯೋಜಿತ ತಯಾರಿ, ನಿರಂತರ ಕಲಿಕೆ, ಕಠಿಣ ಪರಿಶ್ರಮ,…

Read More

ಉದಯರಶ್ಮಿ ದಿನಪತ್ರಿಕೆ ಆಲಮೇಲ: ಮಹಿಳೆಯರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಸಮಾನ ಅವಕಾಶ ಸಿಗಬೇಕು ಎಂದು ಎಸ್ ಎನ್ ಹಪ್ತಿ ಹೇಳಿದರು.ಅವರು ತಾಲೂಕಿನ ಮೋರಟಗಿ ಗ್ರಾಮದ ಶ್ರೀ ಸಿದ್ಧರಾಮೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಹಿಳಾ ಸಬಲೀಕರಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.ರಾಜಕೀಯ ಸಾಮಾಜಿಕ ಆರ್ಥಿಕ ಸಬಲತೆ ಹೊಂದಿದಾಗ ಕುಟುಂಬದ ಅಭಿವೃದ್ಧಿಗೆ ಅಲ್ಲದೆ ದೇಶದ ಬೆಳವಣಿಗೆಗೂಕಾರಣವಾಗುತ್ತಾಳೆ ಎಂದು ಹೇಳಿದರು.ಉದ್ಘಾಟನೆಯನ್ನು ಸಂಸ್ಥೆಯ ಆಡಳಿತಾಧಿಕಾರಿ ಬಿ ಎಸ್ ಪಾಟೀಲ್ ನೆರವೇರಿಸಿ ಮಾತನಾಡಿದರು.ಅಧ್ಯಕ್ಷತೆಯನ್ನು ವಹಿಸಿದ ಪ್ರಾಚಾರ್ಯ ಡಾ.ವೀರಭದ್ರ ಗೋಲಾ ಮಾತನಾಡಿ, ಮಹಿಳೆ ಒಂದು ದೇಶದ ಪ್ರಗತಿಯ ಸಂಕೇತ ಅವಳಿಗೆ ಉತ್ತಮವಾದ ಶಿಕ್ಷಣ ನೀಡಿ, ಎಲ್ಲರಂತೆ ಅವಕಾಶಗಳನ್ನು ಸಮಾನವಾಗಿ ಪಡೆಯಲು ಸಮರ್ಥಲಾಗಿದ್ದಾಳೆ ಎಂದರು.ಸಬಲೀಕರಣದ ಅಧಿಕಾರಿ ವ್ಹಿ ಎಸ್ ಶಹಾಪುರ ಪ್ರಾಸ್ತಾವಿಕವಾಗಿ ಮಾತನಾಡಿದರು.ಅತಿಥಿಗಳಾಗಿ ಪ್ರೊ ಆರ್ ವೈ ಕಂಬಾರ ಪ್ರೊ ಎಸ್ ಎಂ ಹರನಾಳ ಡಾ. ಐ ಜಿ ಕೋನಸಿರಸಗಿ ವಿದ್ಯಾರ್ಥಿನಿ ಉಮಾಶ್ರೀ ಬಿಜಾಪುರ ಮಾತನಾಡಿದರು .ಗೌರಿ ಶಾಬಾದಿ ಪ್ರಾರ್ಥಿಸಿದರು ನಾಜಿಯಾ ಮುಲ್ಲಾ ನಿರೂಪಿಸಿದರು ಶರಣಮ್ಮ ಚೌಡಾಪುರ ಸ್ವಾಗತಿಸಿದರು ಪದ್ಮಾವತಿ…

Read More

ಉದಯರಶ್ಮಿ ದಿನಪತ್ರಿಕೆ ಚಿಮ್ಮಡ: ವೃಕ್ಷ ಮಾತೆ ಎಂದೇ ಹೆಸರಾಗಿದ್ದ ಸಾಲು ಮರದ ತಿಮ್ಮಕ್ಕ ಇಂದು ನಮ್ಮನ್ನು ಅಗಲಿರಬಹುದು ಆರದೆ ಅವರು ಬೆಳೆಸಿದ ಮರಗಳು ಪರಿಸರ ಕಾಳಜಿಯ ಪಾಠಗಳ ಮೂಲಕ ಅವರು ಅಜರಾಮರರಾಗಿದ್ದಾರೆ ಎಂದು ಗ್ರಾ.ಪಂ. ಮಾಜಿ ಅಧ್ಯಕಷ ಪರಪ್ಪಾ ಪಾಲಭಾವಿ ಹೇಳಿದರು.ಗ್ರಾಮದ ಭಾರತೀಯ ಜನತಾ ಪಕ್ಷದ ಕಾರ್ಯಾಲಯದ ಆವರಣದಲ್ಲಿ ಭಾಜಪ ಘಟಕದಿಂದ ಶನಿವಾರ ರಾತ್ರಿ ಹಮ್ಮಿಕೊಳ್ಳಲಾಗಿದ್ದ ಶೃಧ್ಧಾಂಜಲಿ ಸಭೆಯಲ್ಲಿ ಮೌನಾಚರಣೆ ನೆರವೇರಿಸಿದ ನಂತರ ಮಾತನಾಡಿದ ಅವರು ತಿಮ್ಮಕ್ಕ ಕಾಯಕವೇ ಕೈಲಾಸ ಎಂಬ ಮನಸ್ಸನ್ನು ಹೊಂದಿದ್ದರು ಸಾವಿರಾರು ಮರಗಳನ್ನು ನೆಟ್ಟು ಮಕ್ಕಳಂತೆ ಪೋಷಣೆ ಮಾಡಿ ದೇಶಕ್ಕೆ ಮಾದರಿಯಾಗಿರುವ ತಿಮ್ಮಕ್ಕನವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದರು.ಉಪನ್ಯಾಸಕ ಪ್ರವೀಣ ಮೈತ್ರಿ ಮಾತನಾಡಿ, ೧೧೪ ವರ್ಷಗಳ ಸಂತ್ರಪ್ತ ಜೀವನ ಸಾಗಿಸಿದ ತಿಮ್ಮಕ್ಕ ಪರಿಸರ ಕಾಳಜಿಯಲ್ಲಿ ಸ್ಪೂರ್ತಿದಾಯಕ ವ್ಯಕ್ತಿಯಾಗಿದ್ದರು. ಅವರ ಅಗಲಿಕೆ ದೇಶಕ್ಕೆ ತುಂಬಲಾರದ ನಷ್ಟ ಎಂದರು.ಗ್ರಾ.ಪಂ. ಮಾಜಿ ಅಧ್ಯಕ್ಷ ಶಂಕರ ಬಟಕುರ್ಕಿ, ಗುರಲಿಂಗಪ್ಪ ಪೂಜಾರಿ, ಬಸವರಾಜ ಕುಂಚನೂರ, ಮನೋಜ ಹಟ್ಟಿ, ಬಾಳೇಶ ಬ್ಯಾಕೋಡ, ನಾಗಪ್ಪ ಆಲಕನೂರ, ಪ್ರಭು…

Read More