ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಪಟ್ಟಣದ ಬಸಯ್ಯ ಮಲ್ಲಿಕಾರ್ಜುನಮಠ ಇವರು ಶ್ರೀಸುಜ್ಞಾನ ವಿದ್ಯಾಪೀಠ ಮತ್ತು ಸಾಂಸ್ಕೃತಿಕ ರಂಗಕಲಾವಿದರ, ಸಾಧಕರ ಶ್ರೀಮಾತಾ ಪ್ರಕಾಶನ (ರಿ) ಅವರ ಧಾರವಾಡ ನುಡಿ ಸಂಭ್ರಮ ಪ್ರಯುಕ್ತ ನೀಡುವ “ರಾಷ್ಟ್ರಮಟ್ಟದ ಉತ್ತಮ ಸಮಾಜ ಸೇವಾರತ್ನ ಪ್ರಶಸ್ತಿ”ಗೆ ಭಾಜನರಾಗಿದ್ದು, ದಿ:೨೨ ರಂದು ಭಾನುವಾರ ಧಾರವಾಡ ರಂಗಾಯಣ ಸಾಂಸ್ಕೃತಿಕ ಸಮುಚ್ಛಯ ಸಭಾಭವನದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಡಾ.ನಾಗರಾಜ ತಂಬ್ರಹಳ್ಳಿ, ಲೀಲಾಧರ ನಾಯಕ್, ಟಿ.ತ್ಯಾಗರಾಜು ಇದ್ದರು.

