Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಮುದ್ದೇಬಿಹಾಳ: ಕುಡಿದ ಅಮಲಿನಲ್ಲಿ ಹೆಂಡತಿಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಕ್ರೌರ್ಯ ಎಸಗಿರುವ ಘಟನೆ ಪಟ್ಟಣದ ತಾಳಿಕೋಟೆ ರಸ್ತೆಯಲ್ಲಿರುವ ಇದಗಾ ಬಳಿ ಶನಿವಾರ ನಡೆದಿದೆ.ಯಲ್ಲವ್ವ ಕಾಳಗಿ ಗಂಭೀರವಾಗಿ ಗಾಯಗೊಂಡ ನತದೃಷ್ಟ ಮಹಿಳೆ. ಕಳೆದ ಎರಡು ವರ್ಷಗಳಿಂದ ಪತಿ ಸಿದ್ದಪ್ಪನ ಕಿರುಕುಳ ತಾಳದೇ ಸಹೋದರಿಯ ಮನೆಯಲ್ಲಿ ವಾಸವಾಗಿ ತರಕಾರಿ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಳು. ಶನಿವಾರ ಬೆಳಿಗ್ಗೆ ತರಕಾರಿ ಖರೀದಿಸಲೆಂದು ಹೊರಟಾಗ ಏಕಾಏಕಿ ಬಂದ ಸಿದ್ದಪ್ಪ ಕುಡುಗೋಲಿನಿಂದ ಯಲ್ಲವ್ವಳ ಕುತ್ತಿಗೆಗೆ ಹೊಡೆದು ಪರಾರಿಯಾಗಿದ್ದಾನೆ.ಈ ಕುರಿತು ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಯ ಹೆಡೆಮುರಿ ಕಟ್ಟುವ ವಿಶ್ವಾಸವನ್ನು ಪಿಎಸ್ಐ ಸಂಜೀವ ತಿಪರೆಡ್ಡಿ ವ್ಯಕ್ತಪಡಿಸಿದ್ದಾರೆ.
ಮುದ್ದೇಬಿಹಾಳ: ಅಪಘಾತ ಪ್ರಕರಣವೊಂದರಲ್ಲಿ ಆರೋಪಿಗೆ ಆರು ತಿಂಗಳ ಶಿಕ್ಷೆ ಮತ್ತು ೬ಸಾವಿರ ರೂಪಾಯಿಗಳ ದಂಢ ವಿಧಿಸಿ ಇಲ್ಲಿನ ಕಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಸಂಪತ್ತಕುಮಾರ ಬಳೂಳಗಿಡದ ಆದೇಶಿಸಿದ್ದಾರೆ.ಜನೆವರಿ ೨೦೧೮ ರಲ್ಲಿ ಆರೋಪಿ ರಾಮನಗೌಡ ಪಾಟೀಲ ತನ್ನ ಟ್ರಾö್ಯಕ್ಟರ್ನ್ನು ಜೋರಾಗಿ ನಿರ್ಲಕ್ಷತನದಿಂದ ಓಡಿಸಿ ರಸ್ತೆ ಬದಿಯಲ್ಲಿ ಹೊರಟಿದ್ದ ೧೧ ವರ್ಷದ ಬಾಲಕನಿಗೆ ಹಾಯಿಸಿ ಅಪಘಾತ ಪಡಿಸಿ ಮರಣಹೊಂದುವಂತೆ ಮಾಡಿದ್ದ. ಈ ಕುರಿತು ಮಗುವಿನ ತಾಯಿ ನೀಡಿದ ದೂರಿನ ಮೇಲೆ ಪೊಲೀಸರು ಮುದ್ದೇಬಿಹಾಳ ನ್ಯಾಯಾಲಯಕ್ಕೆ ದೋಶಾರೋಪಣೆ ಪಟ್ಟಿಯನ್ನು ಸಲ್ಲಿಸಿದ್ದರು. ಬಳಿಕ ಪ್ರಕರಣದ ಸುದೀರ್ಘ ವಿಚಾರಣೆ ಇಲ್ಲನ ನ್ಯಾಯಾಲಯದಲ್ಲಿಯೇ ನಡೆದಿತ್ತು. ಕಳೆದ ಕೆಲ ದಿನಗಳಿಂದ ತಾಳಿಕೋಟೆಯಲ್ಲಿ ಕಿರಿಯ ಶ್ರೇಣಿ ಸಿವಿಲ್ ನ್ಯಾಯಾಲಯ ಪ್ರಾರಂಭವಾಗಿದ್ದು ಈ ಪ್ರಕರಣ ಆದೇಶ ಶನಿವಾರ ತಾಳಿಕೋಟೆಯ ನ್ಯಾಯಾಲಯದಲ್ಲಿಯೇ ಹೊರಬಿದ್ದಿದೆ.
ಮುದ್ದೇಬಿಹಾಳ: ಕೇಂದ್ರ ಬಿಜೆಪಿ ಸರ್ಕಾರ ದಿನಬಳಕೆಯ ಎಲ್ಲ ವಸ್ತುಗಳ ಮೇಲೆ ಜಿಎಸ್ಟಿ ಹಾಕಿ ಬಡವರನ್ನು ಲೂಟಿ ಹೊಡೆಯುತ್ತಿದೆ ಎಂದು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗುರು ತಾರನಾಳ ಆರೋಪಿಸಿದರು.ತಾಲೂಕಿನ ಬಳಬಟ್ಟಿ ಗ್ರಾಮದಲ್ಲಿ ಲೋಕಸಭಾ ಚುನಾವಣೆಯ ವಿಜಯಪುರ ಕಾಂಗ್ರೇಸ್ ಅಭ್ಯರ್ಥಿ ರಾಜು ಆಲಗೂರ ಪರವಾಗಿ ಪ್ರಚಾರ ನಡೆಸಿ ಅವರು ಮಾತನಾಡಿದರು.ಜನಸಾಮಾನ್ಯರ ಬದುಕಿನ ಮೇಲೆ ಜಿಎಸ್ಟಿ ಪರಿಣಾಮ ಬೀರಿದೆ. ದಿನಬಳಕೆಯ ವಸ್ತುಗಳು ಗಗನಕ್ಕೇರಿವೆ. ಜೀರಿಗೆ, ಅಡುಗೆ ಎಣ್ಣೆ ಸೇರಿದಂತೆ ಎಲ್ಲ ಪದಾರ್ಥಗಳು ಕೈಗೆಟುಗದಂತಾಗಿವೆ. ಬಡವರ ಪರವಾಗಿ ಬಿಜೆಪಿ ಸರ್ಕಾರ ಯಾವ ಯೋಜನೆಗಳನ್ನೂ ಜಾರಿಗೊಳಿಸಿಲ್ಲ. ಬದಲಾಗಿ ಅವರ ದುಡಿಮೆಯಲ್ಲಿ ದಿನಂಪ್ರತಿ ಜಿಎಸ್ಟಿ ನೆಪದಲ್ಲಿ ಲೂಟಿ ಹೊಡೆಯುತ್ತಿದೆ. ಈ ಬಾರಿ ಪ್ರತಿಯೊಬ್ಬರು ಕಾಂಗ್ರೇಸ್ ಗೆ ಮತ ನೀಡಿ ಪ್ರಚಂಡ ಬಹುಮತದಿಂದ ರಾಜು ಆಲಗೂರ ರನ್ನು ಆರಿಸಿ ತರಬೇಕು ಎಂದರು.ಈ ವೇಳೆ ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಯ ತಾಲೂಕು ಅದ್ಯಕ್ಷ ಶಿವಶಂಕರಗೌಡ ಹಿರೇಗೌಡರ ಪ್ರಮುಖರಾದ ವಾಯ್.ಎಚ್.ವಿಜಯಕರ, ಸುಜಾತಾ ಸಿಂದೆ, ಲಕ್ಷ್ಮಣ ಚವ್ಹಾಣ, ಬುಡ್ಡಾಸಾ ಚಪ್ಪರಬಂದ, ಶಾಮ್ ಪಾತ್ರದ, ಮುತ್ತಣ್ಣ ಮುತ್ತಣ್ಣವರ,…
ದೇವರಹಿಪ್ಪರಗಿ: ಗುರು ಮತ್ತು ಶಿಷ್ಯರ ಸಂಬಂಧ ಜಗತ್ತಿನ ಶ್ರೇಷ್ಠ ಹಾಗೂ ದೊಡ್ಡ ಸಂಬಂಧವಾಗಿದೆ ಎಂದು ಎಮ್ಮಿಗನೂರು ಹಂಪಿಸಾವಿರದೇವರಮಠದ ವಾಮದೇವ ಮಹಾಂತ ಸ್ವಾಮೀಜಿ ಹೇಳಿದರು.ಪಟ್ಟಣದ ಮಲ್ಲಯ್ಯ ದೇವಸ್ಥಾನ ಆವರಣದಲ್ಲಿ ಭಾನುವಾರ ಜರುಗಿದ ಬಿ.ಎಲ್.ಡಿ.ಇ ಸಂಸ್ಥೆಯ ದಿ.ಎ.ಬಿ.ಸಾಲಕ್ಕಿ ಪ್ರೌಢಶಾಲೆಯ ೧೯೯೦-೯೧ ನೇ ಸಾಲಿನ ವಿದ್ಯಾರ್ಥಿ,ವಿದ್ಯಾರ್ಥಿನೀಯರ ಗುರುವಂದನಾ ಹಾಗೂ ಸ್ನೇಹಿತರ ಸಮ್ಮೀಲನದ ಸಾನಿಧ್ಯ ವಹಿಸಿ ಮಾತನಾಡಿದರು.ಜಗತ್ತಿನಲ್ಲಿ ಗುರುವಿಗೆ ಉನ್ನತ ಸ್ಥಾನವಿದೆ. ಸುವರ್ಣಮಾಲೆ ಧರಿಸಿದವರಿಗಿಂತ ವರ್ಣಮಾಲೆ ಧರಿಸಿದವರು ಶ್ರೇಷ್ಠರು. ಶಿಕ್ಷಣವೇ ಶ್ರೇಷ್ಠ ಸಂಪತ್ತು ಜೊತೆಗೆ ಸ್ನೇಹಕ್ಕಿಂತ ಹಿರಿದಾದದ್ದು ಯಾವುದು ಇಲ್ಲ. ಇಲ್ಲಿ ಗುರು ಶಿಷ್ಯರ ಸ್ನೇಹ ಸಂಬಂಧ ಅತ್ಯಂತ ಪವಿತ್ರವಾದದು ಎಂದರು.ಬೆಂಗಳೂರು ಮಾರತಹಳ್ಳಿ ವಿಭೂತಿಪುರ ವೀರಸಿಂಹಾಸನ ಸಂಸ್ಥಾನಮಠದ ಮಹಾಂತಲಿಂಗಶ್ರೀಗಳು ಮಾತನಾಡಿ, ಅಕ್ಷರಜ್ಞಾನ ನೀಡಿದ ಗುರುಗಳ ಉಪಕಾರವನ್ನು ಸ್ಮರಿಸುವ ಮೂಲಕ ಗುರುವಂದನಾ ಕಾರ್ಯಕ್ರಮ ಜರುಗುತ್ತಿರುವು ಅತ್ಯಂತ ಶ್ಲಾಘನೀಯ. ಇಂದು ನಾವೆಲ್ಲ ಏನಾಗಿದ್ದೇವೆಯೋ ಅದಕ್ಕೆಲ್ಲಾ ಕಾರಣ ನಮ್ಮ ಪ್ರಾಥಮಿಕ ಹಾಗೂ ಪ್ರೌಢಶಾಲೆ ಶಿಕ್ಷಕ ವರ್ಗ. ಇವರಿಂದ ಶಾಲೆಯ ಪಾಠ ಮಾತ್ರವಲ್ಲ, ಭವಿಷ್ಯದ ಬದುಕಿನ ಪಾಠವು ಭೋದಿಸಲ್ಪಡುತ್ತದೆ ಎಂದರು.ಉದ್ಘಾಟಕರಾಗಿ ಆಗಮಿಸಿದ ನಿವೃತ್ತ…
ಬಸವನಬಾಗೇವಾಡಿ: ಪಟ್ಟಣದ ಶಾಸಕರ ಮಾದರಿ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಹೆಣ್ಣುಮಕ್ಕಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಜಿಲ್ಲಾ ಸ್ವೀಪ್ ಸಮಿತಿ, ತಾಲೂಕಾಡಳಿತ, ತಾಲೂಕು ಪಂಚಾಯತ ಹಾಗೂ ಪುರಸಭೆ ಕಾರ್ಯಾಲಯದ ಸಹಯೋಗದಲ್ಲಿ ಸಾರ್ವತ್ರಿಕ ಲೋಕಸಭಾ ಚುನಾವಣೆಯಂಗವಾಗಿ ನಮ್ಮ ನಡೆ ಮತಗಟ್ಟೆ ಕಡೆ ಎಂಬ ಅಭಿಯಾನದಂಗವಾಗಿ ಸ್ವೀಪ್ ಧ್ವಜಾರೋಹಣ, ಪ್ರತಿಜ್ಞಾ ವಿಧಿ ಬೋಧನೆ, ನಮ್ಮ ನಡೆ ಮತಗಟ್ಟೆ ಸ್ವಚ್ಛತೆ ಕಡೆಗೆ ಕಾರ್ಯಕ್ರಮ ಭಾನುವಾರ ಜರುಗಿತು.ಸ್ವೀಪ್ ಧ್ವಜಾರೋಹಣವನ್ನು ಸಹಾಯಕ ಚುನಾವಣಾಧಿಕಾರಿ ಗಂಗಪ್ಪ ಎಂ. ನೆರವೇರಿಸಿ ಮಾತನಾಡಿದ ಅವರು, ಮೇ.೭ ರಂದು ನಡೆಯಲಿರುವ ಲೋಕಸಭಾ ಚುನಾವಣೆಯ ಮತದಾನದ ಜಾಗೃತಿಯ ಕುರಿತು ಸ್ವೀಪ್ ಸಮಿತಿಯಿಂದ ವಿವಿಧ ಜಾಗೃತಿ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿವೆ. ಮತದಾರರು ತಪ್ಪದೇ ಮತದಾನ ಮಾಡುವ ಮೂಲಕ ಮತದಾನ ಮಾಡುವ ಪ್ರಜಾಪ್ರಭುತ್ವವನ್ನು ಗಟ್ಟಿಗೊಳ್ಳಿಸುವ ಕಾರ್ಯದಲ್ಲಿ ಪಾತ್ರವಹಿಸಬೇಕು. ಬಸವನಬಾಗೇವಾಡಿ ಮತಕ್ಷೇತ್ರದಲ್ಲಿ ೨೩೦ ಮತಗಟ್ಟೆಗಳನ್ನು ೧೨೨ ಸ್ಥಳಗಳಲ್ಲಿವೆ. ಎಲ್ಲ ಮತಗಟ್ಟೆಗಳಲ್ಲಿ ಸ್ವೀಪ್ ಧ್ವಜಾರೋಹಣ ಆಯಾ ಭಾಗದ ಮುಖ್ಯಸ್ಥರಿಂದ ನೆರವೇರುವ ಮೂಲಕ…
ದೇವರಹಿಪ್ಪರಗಿ: ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಸಹಕಾರಭಾರತಿ ಸಂಘಟನೆಯ ಮೂಲಕ ಅಭ್ಯಾಸವರ್ಗ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ಸಹಕಾರ ಭಾರತಿ ಜಿಲ್ಲಾಧ್ಯಕ್ಷ ಹರ್ಷಗೌಡ ಪಾಟೀಲ ಹೇಳಿದರು.ಪಟ್ಟಣದ ಪತ್ತಿನ ಸಹಕಾರಿ ಸಂಘದ ಕಚೇರಿಯಲ್ಲಿ ಶನಿವಾರ ಜರುಗಿದ ಸಹಕಾರಿಗಳ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಜಿಲ್ಲಾ ಸಹಕಾರ ಭಾರತಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಇದೇ ಪ್ರಥಮ ಬಾರಿಗೆ ಎಲ್ಲ ಸಹಕಾರ ಸಂಘಗಳಿಗೆ ಭೇಟಿ ನೀಡಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಸಹಕಾರ ಕ್ಷೇತ್ರವನ್ನು ಬಲಪಡಿಸಲು ಅಗತ್ಯವಾದ ಯೋಜನೆಗಳನ್ನು, ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಆದ್ದರಿಂದ ಸಹಕಾರ ಕ್ಷೇತ್ರದ ಎಲ್ಲ ಹಿರಿಯರ ಮಾರ್ಗದರ್ಶನ ಹಾಗೂ ಸಹಕಾರ ಅಗತ್ಯವಾಗಿ ಬೇಕು ಎಂದರು.ಸಹಕಾರ ಭಾರತಿ ವಿಭಾಗೀಯ ಕಾರ್ಯದರ್ಶಿ ಸುಭಾಸ್ ಇಂಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಹಕಾರ ಭಾರತಿ ಯಾವತ್ತಿಗೂ ಸಹಕಾರ ಸಂಘ, ಸಂಸ್ಥೆಗಳನ್ನು ಸ್ವಾಯತ್ತವಾಗಿರಿಸಲು ಮತ್ತು ಬಾಹ್ಯ ನಿಯಂತ್ರಣ ಮತ್ತು ರಾಜಕೀಯ ಹಸ್ತಕ್ಷೇಪದಿಂದ ರಕ್ಷಿಸಲು ಬದ್ಧವಾಗಿದೆ. ಜೊತೆಗೆ ಎಂದಿಗೂ ಪ್ರಚಾರ ಬಯಸದೇ ಇರುವಂತಹ ಸಂಘಟನೆಯಾಗಿದೆ ಎಂದರು.ಸಹಕಾರಭಾರತಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಡಾ.ಆರ್.ಆರ್.ನಾಯಿಕ್ ಸ್ವಾಗತಿಸಿ, ಮಾತನಾಡಿದರು.…
ವಿಜಯಪುರ: ವಿ.ಶ್ರೀನಿವಾಸ್ ಪ್ರಸಾದ ಅವರು ಒಬ್ಬ ಧೀಮಂತ ಹಾಗೂ ಜನಾನುರಾಗಿ ನಾಯಕರಾಗಿದ್ದರು ಎಂದು ಕಾಂಗ್ರೆಸ್ನ ಲೋಕಸಭೆ ಅಭ್ಯರ್ಥಿ ಪ್ರೊ.ರಾಜು ಆಲಗೂರ ಅವರು ಹೇಳಿದರು.ಸೋಮವಾರ ಬೆಳಗ್ಗೆ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಭಾವುಕರಾಗಿ ಮಾತನಾಡಿ, ಅವರೊಂದಿಗಿದ್ದ ತಮ್ಮ ಸಂಬಂಧವನ್ನು ಮೆಲುಕು ಹಾಕಿದರು.ಹಿಂದುಳಿದ ವರ್ಗದ ಹಿತ ಕಾಪಾಡಿದವರು ಶ್ರೀನಿವಾಸ್ ಪ್ರಸಾದ. ನಮಗೆ ಅವರು ದನಿಯಾಗಿದ್ದವರು. ಅವರೊಂದಿಗೆ ನನಗೆ ಉತ್ತಮ ಸಂಬಂಧವಿತ್ತು. ಅವರೊಬ್ಬ ಶ್ರೇಷ್ಠ ಸಂಸದೀಯ ಪಟುವಾಗಿದ್ದರು. ಮೊದಲ ಸಲ ನಾನು ಬಳ್ಳೊಳ್ಳಿ ಕ್ಷೇತ್ರದಲ್ಲಿ ನಿಂತಾಗ ನನ್ನ ಜತೆ ಶಕ್ತಿಯಾಗಿದ್ದರು. ಬಡವರು, ಅಲ್ಪಸಂಖ್ಯಾತರ ಪರ ಅವರ ಕಳಕಳಿ ಅಪಾರವಾಗಿತ್ತು. ಅಂತಹ ನಾಯಕ ಈಗ ಯಾರೂ ಇಲ್ಲ. ಹಿಂದೆ ನಮ್ಮೂರಿಗೆ ಕರೆಸಿ ಅವರಿಂದ ಭಾಷಣ ಮಾಡಿಸಿದ್ದೆ. ಚಳವಳಿಯ ದಿನಗಳಿಂದ ಜಿಲ್ಲೆಯಲ್ಲಿ ನಾನವರಿಗೆ ಒಡನಾಡಿಯಾಗಿದ್ದೆ. ಆರು ಸಲ ಸಂಸದರಾಗಿ, ಶಾಸಕರಾಗಿ ಅವರು ಜೀವಪರವಾಗಿ ಮಿಡಿದಿದ್ದಾರೆ ಎಂದು ಆಲಗೂರ ಅವರು ಹೇಳಿದರು.
ಸಂತೋಷ್ ರಾವ್ ಪೆರ್ಮುಡ,ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ ಒಂದು ತಂಪಾದ ಸಂಜೆಯ ವೇಳೆಯಲ್ಲಿ ಭಗವಂತ ಮತ್ತು ರೋಗ ಈ ಇಬ್ಬರೂ ಪರಸ್ಪರ ಉಭಯ ಕುಶಲೋಪರಿಗಳನ್ನು ವಿಚಾರಿಸಿಕೊಳ್ಳುತ್ತಿದ್ದರು. ಜನರು ಭಗವಂತನನ್ನು ಪ್ರಾರ್ಥಿಸಿದರೆ, ರೋಗವನ್ನು ಜನರು ತಮ್ಮಿಂದ ಬಹಳ ದೂರವಿಡುತ್ತಿದ್ದರು. ಹೀಗೆ ಇಬ್ಬರೂ ಮಾತನಾಡುತ್ತಿರುವಾಗ ಪರಸ್ಪರ ತಮ್ಮ ಕೆಲಸಗಳ ಕುರಿತು ಚರ್ಚಿಸುತ್ತಾ ಭಗವಂತ ಹೇಳುತ್ತಾನೆ, ನಾನು ಈ ಪ್ರಪಂಚದ ಎಲ್ಲಾ ಜೀವರಾಶಿಗಳನ್ನು ಕಾಪಾಡುತ್ತೇನೆ ಎಂದು. ಆಗ ರೋಗವು, ನಾನು ಭೀಕರ ರೋಗವನ್ನು ಪ್ರಪಂಚದ ಎಲ್ಲಾ ಕಡೆಗೂ ಮತ್ತು ಎಲ್ಲರಿಗೂ ಹರಡುತ್ತೇನೆ ಎಂದು ಹೇಳಿತು. ಹೀಗೆ ಮಾತನಾಡುತ್ತಾ ರೋಗವು ನಾನು ಒಂದು ತಿಂಗಳಲ್ಲಿ ಸುಮಾರು ಐನೂರು ಜನಕ್ಕೆ ರೋಗವನ್ನು ಹರಡಿ ಅವರನ್ನು ಸಾಯಿಸುತ್ತೇನೆ ಎಂದು ಭಗವಂತನಿಗೆ ಹೇಳಿತು. ಅಲ್ಲಿಗೆ ರೋಗ ಮತ್ತು ಭಗವಂತರ ಮಾತುಕತೆಗಳು ಮುಗಿದು, ಇಬ್ಬರೂ ತಮ್ಮ ತಮ್ಮ ಕೆಲಸದ ನಿಮಿತ್ತ ಅಲ್ಲಿಂದ ಹೊರಡುತ್ತಾರೆ.ಸುಮಾರು ಒಂದೆರಡು ತಿಂಗಳು ಕಳೆದ ನಂತರ ಮತ್ತೆ ಭಗವಂತ ಮತ್ತು ರೋಗ ಇಬ್ಬರೂ…
“ಸಿನಿ ತಿರುಳು”- ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ – ಗದಗ* ಅನಾಥಾಲಯವೊಂದರಲ್ಲಿ ಓದುತ್ತಿರುವ ನಿಯತಿ ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿನಿ, ಹತ್ತನೇ ತರಗತಿಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿ ಇಡೀ ದೇಶಕ್ಕೆ ಮೊದಲಿಗಳಾಗಿ ನಗರದ ಅತ್ಯಂತ ಪ್ರತಿಷ್ಠಿತ ಶಾಲೆಗೆ ಆಯ್ಕೆಯಾದಳು. ವಿದೇಶಿ ಕಾರುಗಳಲ್ಲಿ ಆ ಶಾಲೆಗೆ ಬರುತ್ತಿದ್ದ ಇತರ ವಿದ್ಯಾರ್ಥಿಗಳು ಈಕೆಯ ಬುದ್ಧಿಮತ್ತೆಯನ್ನು ಕಂಡು ವಿಸ್ಮಿತರಾದರು. ಈಕೆಯ ಜೊತೆಗೆ ಆಕೆಯ ಇನ್ನೋರ್ವ ಸ್ನೇಹಿತ ಆಕಾಶ್ ಕೂಡ ಅದೇ ಶಾಲೆಗೆ ಆಯ್ಕೆಯಾಗಿದ್ದ.ಮೊದಲ ತರಗತಿಯಲ್ಲಿಯೇ ಚವಿ ಎಂಬ ಶ್ರೀಮಂತ ಹುಡುಗಿಗೆ ಲೆಕ್ಕವನ್ನು ಬಿಡಿಸಲು ಸಹಾಯ ಮಾಡಿದ ನಿಯತಿಯನ್ನು ತನ್ನ ಮನೆಗೆ ಕರೆದೊಯ್ದ ಚವಿ ತನಗೆ ಓದಿನಲ್ಲಿ ಸಹಾಯ ಮಾಡಲು ಕೇಳುತ್ತಾಳೆ. ಕನಿಷ್ಠ 80 ಪರ್ಸೆಂಟ್ ಅಂಕಗಳನ್ನು ಪಡೆದು ವಿದೇಶದಲ್ಲಿ ವಿದ್ಯಾಭ್ಯಾಸ ಪಡೆಯುವ ಮಹತ್ವಕಾಂಕ್ಷೆ ಆಕೆ ಮತ್ತು ಆಕೆಯ ತಂದೆಯದ್ದು. ಪರೀಕ್ಷೆಗಳಲ್ಲಿ ನಿಯತಿ ಆಕೆಗೆ ಸಹಾಯ ಮಾಡುವ ಮೂಲಕ ಆಕೆ 91 ಶೇಕಡ ಅಂಕಗಳನ್ನು ಗಳಿಸುತ್ತಾಳೆ. ಮೊದಮೊದಲು ಸಣ್ಣಪುಟ್ಟ ಅವಶ್ಯಕತೆಗಳಿಗೆ ಅನಾಥಾಲಯದ ಮಕ್ಕಳ ಜೊತೆ ಪಾರ್ಟಿ…
Udayarashmi kannada daily newspaper
