Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಗೋಲಗೇರಿ ಪ್ರಚಾರ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಬಿಜೆಪಿ ವಿರುದ್ದ ವಾಗ್ದಾಳಿ ಬ್ರಹ್ಮದೆವನಮಡು: ರಾಹುಲ್ ಗಾಂಧಿ ಅವರು ೨೫ ಗ್ಶಾರಂಟಿಗಳನ್ನು ನೀಡುವ ಯೋಜನೆ ಮಾಡಿದ್ದಾರೆ. ರೈತರ ಸಾಲ ಸಂಪೂಣ೯ ಮನ್ನಾ, ಪ್ರತಿ ಕುಟುಂಬಕ್ಕೆ ವಷ೯ಕ್ಕೆ ೧ ಲಕ್ಷ ರೂಪಾಯಿ ಸೇರಿ ಅನೇಕ ಯೋಜನೆ ರೂಪಿಸಿದ್ದಾರೆ. ಪಕ್ಷ ಅಧಿಕಾರಕ್ಕೆ ಬಂದ ತಕ್ಷಣ ರಾಹುಲ್ ಗಾಂಧಿ ಮತ್ತು ಮಲ್ಲಿಕಾಜು೯ನ ಖಗೆ೯ ಜಾರಿಗೆ ತರುತ್ತಾರೆ ಎಂದು ಬೃಹತ್ ಕೈಗಾರಿಕಾ ಸಚಿವ ಡಾ.ಎಂ.ಬಿ.ಪಾಟೀಲ ಹೇಳಿದರು.ಸಿಂದಗಿ ತಾಲೂಕಿನ ಗೋಲಗೇರಿ ಗ್ರಾಮದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್ ಅಭ್ಶಥಿ೯ ಪ್ರೊ.ರಾಜು ಆಲಗೂರ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.ಬಡವರು, ದೀನದಲಿತರ ಹಾಗೂ ರೈತರ ಅಭಿವೃದ್ದಿಗಾಗಿ ಸ್ವಾತಂತ್ಶ್ರಾನಂತರ ವಿವಿಧ ಯೋಜನೆಗಳನ್ನು ಜಾರಿಗೆಗೊಳಿಸಿ, ಸಾಮಾಜಿಕ ನ್ಶಾಯ ಒದಗಿಸಿದ್ದು ಕಾಂಗ್ರೆಸ್ ಪಕ್ಷ. ದೇಶವನ್ನು ಲೂಟಿ ಮಾಡಿದ ನಂತರ ದೇಶದಲ್ಲಿ ತಾಂಡವವಾಡುತ್ತಿತ್ತು. ಆ ಸಂದಭ೯ದಲ್ಲಿ ಆಹಾರ ಭದ್ರತೆ ಕೊಟ್ಟಿದ್ದು ಕಾಂಗ್ರೆಸ್. ನೆಹರು ಅವರು ಉದ್ದಿಮೆಗಳನ್ನು ಸ್ಥಾಪಿಸಿ ಔದ್ಶೋಗಿಕ ಕ್ರಾಂತಿ ಮಾಡಿ ಯುವಕರಿಗೆ ಉದ್ಶೋಗ ನೀಡಿದರು.ಶಾಲೆ ಕಾಲೇಜು ವಿಶ್ವವಿದ್ಶಾಲಯ…
ಇಂಡಿ: ರಾಜ್ಯ ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಗಳು ಜನರನ್ನು ಸಂಕಷ್ಟಗಳಿಂದ ಪಾರು ಮಾಡಿ ನೆಮ್ಮದಿಯಿಂದ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಹಾಯ ಮಾಡಿವೆ. ಇದೇ ರೀತಿಯಲ್ಲಿ ಕಾಂಗ್ರೆಸ್ ಲೋಕಸಭೆ ಚುನಾವಣೆಯ ಪ್ರಣಾಳಿಕೆಯಲ್ಲಿ ಘೋಷಿಸಿರುವ ಗ್ಯಾರಂಟಿ ಯೋಜನೆಗಳು ದೇಶದ ಜನರ ಅರ್ಥಿಕತೆಯನ್ನು ಸುಧಾರಿಸಲಿವೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲರು ಹೇಳಿದರು.ತಾಲೂಕಿನ ನಾದ ಕೆಡಿ ಗ್ರಾಮದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಲೋಕಸಭಾ ಚುನಾವಣೆ ಅಭ್ಯರ್ಥಿ ರಾಜು ಅಲಗೂರರವರ ಪ್ರಚಾರ ಸಭೆಯಲ್ಲಿ ಮಾತನಾಡಿದರು.ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡಿ ಯುವಕರಿಗೆ ನೌಕರಿ ಕೊಡುವದಾಗಿ ಹೇಳಿದರು. ಇಂದು ದೇಶದಲ್ಲಿ ೪೦ ಲಕ್ಷ ಸರಕಾರಿ ನೌಕರರ ಹುದ್ದೆ ಖಾಲಿ ಇವೆ ಎಂದರು.ಕಾಂಗ್ರೆಸ್ ಸರಕಾರ ಬಡವರ ಸರಕಾರ,ಹಾಗಾಗಿ ಜನರಿಗಾಗಿ ಪಂಚ ಗ್ಯಾರಂಟಿ ೮ ತಿಂಗಳಲ್ಲಿ ಜಾರಿ ಮಾಡಿ ಎಲ್ಲರಿಗೆ ಅನುಕೂಲ ಮಾಡಿಕೊಟ್ಟಿದೆ ಎಂದರು.ಗ್ರಾ.ಪಂ ಅಧ್ಯಕ್ಷ ಸಿದ್ದರಾಯ ಐರೋಡಗಿ ಮಾತನಾಡಿ ದೇಶದ ಯಾವುದೇ ರಾಜ್ಯದಲ್ಲಿ ಕೊಡಲಾರದಷ್ಟು ಸೌಲಭ್ಯಗಳನ್ನು ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ನೀಡಿದೆ. ಧರ್ಮದ…
ಇಂಡಿ: ಮಳೆ, ಬಿರುಗಾಳಿ, ಸಿಡಿಲಿನಿಂದ ಕಳೆದ ವಾರ ಮೃತಪಟ್ಟ ಜಾನುವಾರದ ಮಾಲಿಕರಿಗೆ ಪರಿಹಾರ ಧನ ವಿತರಿಸಲಾಗಿದೆ ಎಂದು ತಹಸೀಲ್ದಾರ ನಾಯಕ ತಿಳಿಸಿದ್ದಾರೆ.ತಡವಲಗಾ ಗ್ರಾಮದ ಮಳಸಿದ್ದಪ್ಪ ಸಿದ್ದಪ್ಪ ಸುಧಾಮ ಇವರ ಎಮ್ಮೆ ಸಿಡಿಲು ಬಡಿದು ಮೃತ ಪಟ್ಟಿದ್ದು ಅವರ ಖಾತೆಗೆ ೩೭೫೦೦ ರೂ, ಅಹಿರಸಂಗ ಗ್ರಾಮದ ಸಂತೋಷ ಶಾಂತಪ್ಪ ಹೊನ್ನಳ್ಳಿ ಇವರ ೫ ಕುರಿಗಳು ಸಿಡಿಲು ಬಡಿದು ಸತ್ತಿದ್ದು ಅವರಿಗೆ ರೂ ೨೦೦೦೦ ಹೀಗೆ ಒಟ್ಟು ೫೭೫೦೦ ರೂ ಹಣ ರೈತರ ಖಾತೆಗೆ ಜಮೆ ಆಗಿದೆ ಎಂದು ಮಂಜುಳಾ ನಾಯಕ ತಿಳಿಸಿದ್ದಾರೆ.
ಗುವಾಹಟಿ: ಲೋಕಸಭೆ ಚುನಾವಣೆಯ ಏಳು ಹಂತಗಳ ಪೈಕಿ ಎರಡು ಹಂತಗಳು ಮುಕ್ತಾಯಗೊಂಡಿದ್ದು, ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಮುಂಬರುವ ಮೂರನೇ ಹಂತದ ಚುನಾವಣೆಯ ಪ್ರಚಾರವನ್ನು ತೀವ್ರಗೊಳಿಸಿದ್ದಾರೆ. ಸಾರ್ವಜನಿಕ ಸಭೆಗಳು ಮತ್ತು ರೋಡ್ಶೋಗಳ ಮೂಲಕ ಶಾ ಅವರು ರಾಜ್ಯಗಳಾದ್ಯಂತ ಜನರೊಂದಿಗೆ ತೊಡಗಿಸಿಕೊಂಡಿದ್ದಾರೆ. ಅಸ್ಸಾಂನ ಗುವಾಹಟಿಯಲ್ಲಿರುವ ಭಾರತೀಯ ಜನತಾ ಪಕ್ಷದ ರಾಜ್ಯ ಕಚೇರಿಯಲ್ಲಿ ನಡೆದ ಪ್ರಮುಖ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಶಾ, ಸಂವಿಧಾನವನ್ನು ಬದಲಾಯಿಸುವುದು ಮತ್ತು ಮೀಸಲಾತಿಯನ್ನು ಕೊನೆಗೊಳಿಸುವುದು ಸೇರಿದಂತೆ ಬಿಜೆಪಿ ವಿರುದ್ಧ ಕಾಂಗ್ರೆಸ್ ನೇತೃತ್ವದ ಇಂಡಿ ಒಕ್ಕೂಟ ಮಾಡುತ್ತಿರುವ ಸುಳ್ಳು ಸುದ್ದಿಗಳನ್ನು ತಳ್ಳಿಹಾಕಿದರು.ಕರ್ನಾಟಕ ಮತ್ತು ಆಂಧ್ರಪ್ರದೇಶದ ಕಾಂಗ್ರೆಸ್ ಸರ್ಕಾರವು ಎಸ್ಸಿ, ಎಸ್ಟಿ ಮತ್ತು ಒಬಿಸಿ ಹಕ್ಕುಗಳ ವಿರುದ್ಧ ಕೆಲಸ ಮಾಡಿ, ಅಸಂವಿಧಾನಿಕ ರೀತಿಯಲ್ಲಿ ಧರ್ಮದ ಆಧಾರದ ಮೇಲೆ ಮೀಸಲಾತಿಯನ್ನು ನೀಡಿತು. ಅಂತ್ಯೋದಯ ರಾಜಕೀಯವನ್ನು ಪ್ರತಿಪಾದಿಸುವ ಅಮಿತ್ ಶಾ, ಧರ್ಮಾಧಾರಿತ ಮೀಸಲಾತಿ ಅಸಾಂವಿಧಾನಿಕ ಎಂದು ನಂಬುತ್ತಾರೆ ಮತ್ತು ಈ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ, ಧರ್ಮಾಧಾರಿತ…
ಬಸವನಬಾಗೇವಾಡಿ: ಅಕ್ಕಮಹಾದೇವಿಯವರು ಇಡೀ ಜಗತ್ತಿನ ಮಹಿಳಾ ಕುಲಕ್ಕೆ ಧೈರ್ಯ ನೀಡಿದ ಸ್ವಾಭಿಮಾನವನ್ನು ಬಿತ್ತಿದ ಮೊದಲ ಕವಯತ್ರಿ ಹಾಗೂ ವೀರವೀರಾಗಣಿಯಾಗಿ ನಮ್ಮ ಮುಂದೆ ನಿಲ್ಲುತ್ತಾರೆ ಎಂದು ತಾಳಿಕೋಟಿಯ ನಿಕಟ ಪೂರ್ವ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಸುಮಂಗಲಾ ಕೋಳೂರ ಹೇಳಿದರು.ಪಟ್ಟಣದ ಕೇಶವ ನಗರದ ಈರಕಾರ ಮುತ್ಯಾನ ದೇವಸ್ಥಾನದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್, ಕದಳಿ ವೇದಿಕೆ ಹಾಗೂ ಯುವ ಘಟಕ ಸಹಯೋಗದಲ್ಲಿ ಅಕ್ಕಮಹಾದೇವಿ ಜಯಂತಿ, ಕಾಯಕ ದಿನ ಹಾಗೂ ದತ್ತಿ ಉಪನ್ಯಾಸಗಳ ಉದ್ಘಾಟನಾ ಸಮಾರಂಭದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು, ಇಡೀ ಜಗತ್ತಿನಲ್ಲಿ ಮಹಿಳೆಯರಿಗೆ ಸ್ವತಂತ್ರವನ್ನು ನೀಡಿದ ಮಹಾ ಮಾನವತವಾದಿ ಅಣ್ಣ ಬಸವಣ್ಣನವರು. ಅನೇಕ ಹಿಂದುಳಿದ ಶರಣೆಯರನ್ನು ಮುಖ್ಯವಾಹಿನಿಗೆ ತಂದ ಕಾರಣಕ್ಕಾಗಿ ನಮಗೆಲ್ಲ ಅಣ್ಣನಾಗಿ ನಿಲ್ಲುತ್ತಾರೆ. ಶರಣರ ಬದುಕು ನಮಗೆಲ್ಲ ಆದರ್ಶಮಯವಾಗಿ ನಿಲ್ಲುತ್ತದೆ ಎಂದು ಹೇಳಿದರು.ಕಾರ್ಯಕ್ರಮವನ್ನು ಉದ್ಘಾಟಿಸಿದ ಹಿರಿಯ ವಕೀಲ ಬಿ. ಆರ್. ಅಡ್ಡೋಡಗಿ ಅವರು ಮಾತನಾಡಿ, ಸಮಾಜದ ಹಲವಾರು ಜ್ವಲಂತ ಸಮಸ್ಯೆಗಳಿಗೆ 12ನೇ ಶತಮಾನದ ಶರಣರು ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಿ ಯಶಸ್ವಿಯಾಗುತ್ತಾರೆ.…
ಬಸವನಬಾಗೇವಾಡಿ: ದೈವಿ ಪುರುಷ ನರೇಂದ್ರ ಮೋದಿ ಅಂತಹ ಪ್ರಧಾನಿ ದೇಶಕ್ಕೆ ಸಿಕ್ಕಿರುವದು ನಮ್ಮೆಲ್ಲರ ಪುಣ್ಯ. ಹಿಂದು ಸನಾತನ ಧರ್ಮ ಉಳಿಯಲು ಮತ್ತೊಮ್ಮೆ ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾಗಲು ಲೋಕಸಭೆಯಲ್ಲಿ ನಾನು ಅವರ ಪರ ಕೈ ಎತ್ತಲು ನನಗೆ ಜಿಲ್ಲೆಯ ಮತಬಾಂಧವರು ಆಶೀರ್ವಾದ ಮಾಡಿ ಆಯ್ಕೆ ಮಾಡಬೇಕೆಂದು ಸಂಸದ, ಬಿಜೆಪಿ ಪಕ್ಷದ ಲೋಕಸಭಾ ಅಭ್ಯರ್ಥಿ ರಮೇಶ ಜಿಗಜಿಣಗಿ ಹೇಳಿದರು.ತಾಲೂಕಿನ ಮುತ್ತಗಿ ಗ್ರಾಮದ ಸಿದ್ದರಾಮೇಶ್ವರ ಕಲ್ಯಾಣ ಮಂಟಪದಲ್ಲಿ ಭಾರತಿಯ ಜನತಾ ಪಕ್ಷದ ಬಸವನಬಾಗೇವಾಡಿ ಮತಕ್ಷೇತ್ರದ ಮುತ್ತಗಿ ಮಹಾಶಕ್ತಿ ಕೇಂದ್ರ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನನಗೆ ಭಗವಂತ ಆನೆಯಂತಹ ಶಕ್ತಿ ಕೊಟ್ಟಿದ್ದಾನೆ. ಈಗಾಗಲೇ ನನಗೆ ಮತದಾರರು ರಾಜ್ಯ-ಕೇಂದ್ರ ಸರ್ಕಾರಕ್ಕೆ ೧೨ ಸಲ ಆಯ್ಕೆ ಮಾಡಿದ್ದಾರೆ. ಕೇಂದ್ರ-ರಾಜ್ಯ ಎರಡು ಸರ್ಕಾರದಲ್ಲಿ ನಾನು ಕಾರ್ಯನಿರ್ವಹಿಸಿದ್ದೇನೆ. ಇದು ನನ್ನ ಕೊನೆಯ ಚುನಾವಣೆಯಾಗಿದೆ. ಈ ಚುನಾವಣೆಯಲ್ಲಿ ನಾನು ಆಯ್ಕೆಯಾದರೆ ಯಾವುದೇ ಮಂತ್ರಿ ಸ್ಥಾನ ಬಯಸುವುದಿಲ್ಲ. ನಾನು ಮೋದಿ ಪ್ರಧಾನಿಯಾಗಲು ಅವರ ಪರ ಕೈ ಎತ್ತುವ ಆಸೆ ಹೊಂದಿದ್ದೇನೆ. ನನ್ನ…
ಬಸವನಬಾಗೇವಾಡಿ: ವಿಜಯಪುರ ಮೀಸಲು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರ ಪರ ಲೋಕಸಭಾ ಚುನಾವಣಾ ಪ್ರಚಾರಾರ್ಥವಾಗಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಮೇ. ೪ ರಂದು ಸಂಜೆ ೪ ಗಂಟೆಗೆ ಬಸವನಬಾಗೇವಾಡಿ ಪಟ್ಟಣಕ್ಕೆ ಆಗಮಿಸಲಿದ್ದಾರೆ ಎಂದು ಜೆಡಿಎಸ್ ಪಕ್ಷದ ರಾಜ್ಯ ಕಾರ್ಯಕಾರಿ ಸಮಿತಿಯ ಹಿರಿಯ ಉಪಾಧ್ಯಕ್ಷ ಸೋಮನಗೌಡ(ಅಪ್ಪುಗೌಡ) ಪಾಟೀಲ ಮನಗೂಳಿ ಹೇಳಿದರು.ಪಟ್ಟಣದ ಜೆಡಿಎಸ್ ತಾಲೂಕಾಧ್ಯಕ್ಷ ಜಗದೀಶ ಕೊಟ್ರಶೆಟ್ಟಿ ಅವರ ನಿವಾಸದಲ್ಲಿ ಗುರುವಾರ ಸಂಜೆ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ ವೃತ್ತದಿಂದ ರೋಡ್ ಶೋದೊಂದಿಗೆ ಚುನಾವಣಾ ಪ್ರಚಾರ ಆರಂಭಿಸಲಿದ್ದಾರೆ. ಗಣಪತಿ ವೃತ್ತ, ಬಸವೇಶ್ವರ ವೃತ್ತ, ಬಸ್ ನಿಲ್ದಾಣದವರೆಗೆ ತೆರಳಿ ಬಸವೇಶ್ವರ ವೃತ್ತದ ಮಾರ್ಗವಾಗಿ ರಾಣಿ ಚನ್ನಮ್ಮ ವೃತ್ತದಲ್ಲಿ ಪ್ರಚಾರ ಕಾರ್ಯಕ್ರಮ ಮುಕ್ತಾಯವಾಗಲಿದೆ. ರಾಣಿ ಚನ್ನಮ್ಮ ವೃತ್ತದಲ್ಲಿ ತೆರೆದ ವಾಹನದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಪ್ರಚಾರ ಭಾಷಣ ನೆರವೇರಿಸಲಿದ್ದಾರೆ. ಈ ಸಂದರ್ಭದಲ್ಲಿ ಅಭ್ಯರ್ಥಿ ರಮೇಶ ಜಿಗಜಿಣಗಿ, ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ, ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ ಸೇರಿದಂತೆ…
ಮತದಾನ ದಿನ ಮತ್ತು ಮತದಾನದ ಪೂರ್ವ ದಿನ ಮುದ್ರಣ ಮಾಧ್ಯಮದ ಜಾಹಿರಾತಿಗೆ ನಿಯಮ ವಿಜಯಪುರ: ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ಮೇ ೬ ಹಾಗೂ ೭ ರಂದು ಯಾವುದೇ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು, ಸಂಸ್ಥೆಗಳು ಅಥವಾ ಏಜೆಂಟರು ದಿನಪತ್ರಿಕೆಗಳಲ್ಲಿ ಯಾವುದೇ ರೀತಿಯ ಚುನಾವಣಾ ಜಾಹಿರಾತು ಪ್ರಕಟಿಸಲು ಪೂರ್ವಾನುಮತಿ ಕಡ್ಡಾಯವಾಗಿರುತ್ತದೆ ಎಂದು ಭಾರತ ಚುನಾವಣಾ ಆಯೋಗ ತಿಳಿಸಿದೆ.ಚುನಾವಣೆಗೆ ಸಂಬಂಧಿಸಿದ ಯಾವುದೇ ರೀತಿಯ ಜಾಹಿರಾತುಗಳನ್ನು ಸ್ಥಳೀಯ, ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರಮಟ್ಟದ ದಿನಪತ್ರಿಕೆಗಳಲ್ಲಿ ಪ್ರಕಟಿಸಲು ಜಿಲ್ಲಾ ಮಟ್ಟದ ಮಾಧ್ಯಮ ಪ್ರಮಾಣಿಕರಣ ಹಾಗೂ ಮಾಧ್ಯಮ ಕಣ್ಗಾವಲು ಸಮಿತಿ (ಎಂಸಿಎಂಸಿ) ಯಿಂದ ಪೂರ್ವಾನುಮತಿ ಪಡೆಯವುದು ಕಡ್ಡಾಯವಾಗಿರುತ್ತದೆ..ಚುನಾವಣಾ ಜಾಹಿರಾತು ಪ್ರಕಟಣೆ ಮಾಡ ಬಯಸುವ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು, ಸಂಸ್ಥೆಗಳು ಅಥವಾ ಏಜೆಂಟರು ಮೇ ೬ ಹಾಗೂ ೭ ರಂದು ಮುದ್ರಣ ಮಾಧ್ಯಮಗಳಲ್ಲಿ ಜಾಹಿರಾತು ಪ್ರಕಟಿಸಬೇಕೆಂದಲ್ಲಿ ಅಂತಹ ಜಾಹಿರಾತಿನ ಎರಡು ಸ್ವ-ದೃಡಿಕೃತ ಪ್ರತಿಗಳೊಂದಿಗೆ ನಿಗದಿತ ಅರ್ಜಿ ನಮೂನೆಯಲ್ಲಿ ಮೇ ೪ ರೊಳಗೆ ಜಿಲ್ಲಾ ಮಟ್ಟದ ಮಾಧ್ಯಮ ಪ್ರಮಾಣಿಕರಣ ಹಾಗೂ ಮಾಧ್ಯಮ…
ವಿಜಯಪುರ: ಜಿಲ್ಲೆಯು ಸೈಕ್ಲಿಂಗ್ ಕ್ಷೇತ್ರಕ್ಕೆ ಹೆಸರುವಾಸಿಯಾಗಿದ್ದು, ಇಲ್ಲಿನ ಕ್ರೀಡಾಪಟುಗಳ ಸ್ಪರ್ಧಾ ಮನೋಭಾವ ಹೆಮ್ಮರದಂತೆ ಇದೆ. ಅದರಂತೆ ಲೋಕಸಭೆ ಚುನಾವಣಾಯಲ್ಲೂ ಸ್ಪರ್ಧೇಯೊಡ್ಡಿದವರಂತೆ ನೂರಕ್ಕೆ ನೂರರಷ್ಟು ಮತದಾನ ಮಾಡುವ ಮೂಲಕ ಜಿಲ್ಲೆಯ ಕೀರ್ತಿ ಹೆಚ್ಚಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಟಿ. ಭೂಬಾಲನ್ ಹೇಳಿದರು.ಅವರು ಲೋಕಸಭಾ ಚುನಾವಣೆ ೨೦೨೪ರ ಪ್ರಯುಕ್ತ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಗುರುವಾರ ಹಮ್ಮಿಕೊಂಡ ಬೃಹತ್ ಸೈಕಲ್ ಜಾಥಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.ಇಲ್ಲಿನ ಸೈಕ್ಲಿಂಗ್ ಕ್ರೀಡಾಪಟುಗಳು ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟಿçಯ ಮಟ್ಟದಲ್ಲಿ ತಮ್ಮ ಸಾಧನೆಯನ್ನು ಬಿಂಬಿಸಿ ಜಿಲ್ಲೆ ಹಾಗೂ ರಾಜ್ಯಕ್ಕೆ ಹೆಮ್ಮೆ ತಂದಿದ್ದಾರೆ. ನಾವು ದಿನನಿತ್ಯದ ಬಿಡುವಿನಲ್ಲಿ ಸೈಕ್ಲಿಂಗ್ ನಂತಹ ಚಟುವಟಿಕೆಯಲ್ಲಿ ತೊಡಗಿದರೆ ನಮ್ಮ ಆರೋಗ್ಯ ಹಾಗೂ ಮನಸು ಲವಲವಿಕೆ ಯಿಂದ ಕೂಡಿರುತ್ತದೆ. ಸದೃಢ ಮನಸ್ಸು ಹಾಗೂ ದೇಹವು ಉತ್ತಮ ವಿಚಾರಧಾರೆಗೆ ಪೂರಕವಾಗಿ ಗುಣಮಟ್ಟದ ಜೀವನ ನಡೆಸಲು ಸಹಕಾರಿ ಆಗುತ್ತದೆ. ಅದೇ ರೀತಿ ಮತದಾನ ಮಾಡುವದರಿಂದ ದೇಶದ ಭವಿಷ್ಯಕ್ಕೆ ಸಹಕಾರಿಯಾಗುವುದ…
ದೇವರಹಿಪ್ಪರಗಿ: ಪಟ್ಟಣಕ್ಕೆ ಚುನಾವಣಾ ವೀಕ್ಷಕರಾದ ರತನಕುಮಾರಿ ಕನ್ವರ್ ಭೇಟಿ ನೀಡಿ, ಚುನಾವಣಾ ರಥಕ್ಕೆ ಚಾಲನೆ ನೀಡಿ, ಸೆಕ್ಟರ್ ಅಧಿಕಾರಿಗಳ ಸಭೆ ನಡೆಸಿದರು.ಪಟ್ಟಣಕ್ಕೆ ಗುರುವಾರ ಬೆಳಿಗ್ಗೆ ಚುನಾವಣಾ ವೀಕ್ಷಕರು ಆಗಮಿಸುತ್ತಿದ್ದಂತೆಯೇ ಸಹಾಯಕ ಚುನಾವಣಾ ಅಧಿಕಾರಿ ಪ್ರವೀಣ ಜೈನ್ ಹಾಗೂ ತಹಶೀಲ್ದಾರ ಪ್ರಕಾಶ ಸಿಂದಗಿ ಸ್ವಾಗತಿಸಿದರು. ನಂತರ ಬಿಎಲ್ಡಿಇ ಸಂಸ್ಥೆಯ ದಿ.ಎ.ಬಿ.ಸಾಲಕ್ಕಿ ಕಾಲೇಜಿನಲ್ಲಿಯ ಮತಕ್ಷೇತ್ರದ ಭದ್ರತಾ ಕೊಠಡಿಗೆ ಭೇಟಿ ನೀಡಿ ಪರಿಶೀಲಿಸಿದರು. ನಂತರ ಡಾ.ಅಂಬೇಡ್ಕರ್ ವೃತ್ತದಲ್ಲಿ ಚುನಾವಣಾ ರಥಕ್ಕೆ ಚಾಲನೆ ನೀಡಿದರು. ತದನಂತರ ತಹಶೀಲ್ದಾರ ಕಚೇರಿಗೆ ತೆರಳಿ ಮತಕ್ಷೇತ್ರದ ಸೆಕ್ಟರ್ ಅಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡು ನಿರ್ದೆಶನಗಳನ್ನು ನೀಡಿ ಮಾತನಾಡಿದರು. ಕೊನೆಯಲ್ಲಿ ಸಖಿ ಮತಗಟ್ಟೆ ಸೇರಿದಂತೆ ಸಂಖ್ಯೆ ೨೮, ೨೯,೩೦,೩೧, ೩೬, ೩೯, ೪೦, ೪೧ ಗಳಿಗೆ ಭೇಟಿ ನೀಡಿ ಪೂರ್ವಸಿದ್ಧತೆ ಹಾಗೂ ವ್ಯವಸ್ಥೆಗಳನ್ನು ಪರಿಶೀಲನೆ ಮಾಡಿದರು.ತಾಲ್ಲೂಕು ಪಂಚಾಯಿತಿ ಇಓ ಸಂಜೀವ ಜುನ್ನೂರ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಲ್.ಡಿ.ಮುಲ್ಲಾ, ಪಿಎಸ್ಐ ಬಸವರಾಜ ತಿಪ್ಪಾರೆಡ್ಡಿ, ಬಿ.ಬಿ.ಕೊಳ್ಳಿ, ಕಿರಿಯ ಆರೋಗ್ಯ ನಿರೀಕ್ಷಕ ಫಿರೋಜ್ ಮುಲ್ಲಾ, ಅನೀಲಕುಮಾರ ರಾಠೋಡ ಸೇರಿದಂತೆ…
