Subscribe to Updates
Get the latest creative news from FooBar about art, design and business.
Author: editor.udayarashmi@gmail.com
“ವೀಣಾಂತರಂಗ”- ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ-ಗದಗ ಅದೊಂದು ಬೃಹತ್ತಾದ ಕಾಡು. ಅ ಕಾಡಿನ ಹಾದಿಯಾಗಿ ಸುತ್ತು ಹಾಕಿ ಬಸವಳಿದು ಬಾಯಾರಿದ ಆ ವ್ಯಕ್ತಿ ಕಾಡಂಚಿನ ಊರಿಗೆ ಬಂದು ತಲುಪಿದ. ಊರ ಹೊರಗಿನ ಬಾವಿಯಲ್ಲಿ ನೀರು ಸೇದುತ್ತಿದ್ದ ಓರ್ವ ಮಹಿಳೆಯನ್ನು ಕಂಡು ತನಗೆ ತುಂಬಾ ಬಾಯಾರಿಕೆಯಾಗಿದ್ದು ಕುಡಿಯಲು ನೀರು ಕೊಡಲು ಕೇಳಿದ.ತಲೆ ಕೂದಲು ನೆರೆತ, ಬೊಚ್ಚು ಬಾಯಿಯ ಆ ವೃದ್ಧ ಹೆಣ್ಣು ಮಗಳು “ನೀರನ್ನು ನಾನು ಕೊಡುವೆ, ಆದರೆ ನಿನ್ನ ಪರಿಚಯವನ್ನು ಹೇಳು” ಎಂದಳು.ಆ ಕಾಲದ ಅತ್ಯಂತ ಪ್ರಸಿದ್ಧ ಕವಿ ಮತ್ತು ವಿದ್ವಾಂಸನಾಗಿದ್ದ ಆ ವ್ಯಕ್ತಿ ತನ್ನ ಪರಿಚಯ ಹೇಳಿದರೆ ತಿಳಿದುಕೊಳ್ಳುವಷ್ಟು ಯೋಗ್ಯತೆ ಆ ವೃದ್ಧ ಹಳ್ಳಿಯ ಹೆಣ್ಣುಮಗಳಲ್ಲಿ ಇಲ್ಲ ಎಂದುಕೊಂಡು “ನಾನು ಓರ್ವ ಪಥಿಕ, ಈ ದಾರಿಯ ಮೂಲಕ ಮುಂದಿನ ಊರಿಗೆ ಹೋಗುತ್ತಿರುವ ದಾರಿಹೋಕ” ಎಂದು ಹೇಳಿದನು.ಇದೀಗ ವೃದ್ಧ ಹೆಣ್ಣು ಮಗಳು ಮೆಲುವಾಗಿ ನಕ್ಕು ಈ ಪ್ರಪಂಚದಲ್ಲಿ ಕೇವಲ ಇಬ್ಬರೇ ಪಥಿಕರಿರುವುದು ಸೂರ್ಯ ಮತ್ತು ಚಂದ್ರ. ಅವರಿಬ್ಬರೂ ಪ್ರತಿದಿನ ಪೂರ್ವದಲ್ಲಿ…
ಇಂಡಿ: ರಕ್ತ ದಾನ ಶ್ರೇಷ್ಠ ದಾನ, ಅದರಲ್ಲಿ ಯುವ ಜನತೆಯ ಪಾತ್ರ ಹೆಚ್ಚಿದೆ. ಇಂದು ಎಲ್ಲೆಡೆ ರಕ್ತದ ಅಗತ್ಯತೆ ಹೆಚ್ಚಿದೆ. ಆದ್ದರಿಂದ ರಕ್ತದಾನಿಗಳ ಅಗತ್ಯವು ಹೆಚ್ಚಿದೆ ಎಂದು ರೋಡಗಿಯ ಅಭಿನವ ಶಿವಪುತ್ರ ಮಹಾಸ್ವಾಮಿಗಳು ಹೇಳಿದರು.ತಾಲೂಕಿನ ರೋಡಗಿ ಗ್ರಾಮದಲ್ಲಿ ಶ್ರೀ ಶಿವಲಿಂಗೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಶಿವಲಿಂಗೇಶ್ವರ ಮಹಾಸ್ವಾಮಿಗಳ ೧೩ ನೇ ವರ್ಷದ ಪಟ್ಟಾಧಿಕಾರ ಮಹೋತ್ಸವ ನಿಮಿತ್ಯ ನಡೆದ ಉಚಿತ ಆರೋಗ್ಯ ತಪಾಸಣೆ ಹಾಗೂ ಶಸ್ತç ಚಿಕಿತ್ಸಾ ಶಿಬಿರ ಮತ್ತು ಬೃಹತ್ ರಕ್ತದಾನ ಶಿಬಿರದಲ್ಲಿ ಮಾತನಾಡುತ್ತಿದ್ದರು.ಅಪಘಾತಕ್ಕಿಡಾದವರಿಗೆ ಮತ್ತು ಹೆರಿಗೆ ಸಂದರ್ಭದಲ್ಲಿ ರಕ್ತದ ಕೊರತೆಯಿಂದ ಹೋಗುವ ಜೀವಗಳನ್ನು ಉಳಿಸಲು ರಕ್ತದಾನ ಮಾಡುವದು ಅತೀ ಅವಶ್ಯ ಎಂದರು.ಗೋಳಸಾರದ ಅಭಿನವ ಪುಂಡಲಿಂಗ ಶಿವಯೋಗಿಗಳು ಸಾನಿಧ್ಯ ವಹಿಸಿದ್ದರು.ಶಿಬಿರದಲ್ಲಿ ಡಾ|| ಅನೀಲ ರಾಠೋಡ, ಸಂಗಮೇಶ ಕಡಿಬಾಗ, ಆರೀಫ್ ಇನಾಮದಾರ, ಅರುಣ ಕಾಂಬಳೆ, ಪ್ರಕಾಶ ಕವಲಗಿ ಮತ್ತಿತರಿದ್ದರು.ಗ್ರಾಮಸ್ಥರಾದ ರುದ್ರಗೌಡ ಅಲಬಗೊಂಡ, ಪ್ರಶಾಂತ ಅಲಗೊಂಡ, ಶಂಕರಗೌಡ ಬಂಡಿ, ಸಂತೋಷ ಪಾಟೀಲ, ಗಂಗಾಧರ ಬಡಿದಾಳ, ಗಜಾನನ ನಿರ್ವಹಣಶೆಟ್ಟಿ, ಶ್ರೀಮಂತ ತಾವರಖೇಡ, ಶ್ರೀಧರ ಪೂಜಾರಿ ಮತ್ತಿತರಿದ್ದರು.೪೫೦…
ಇಂಡಿ: ತಾಲೂಕಿನಲ್ಲಿ ಹರಿಯುವ ಕೃಷ್ಣಾ ಕಾಲುವೆಗೆ ನೀರು ಹರಿಯ ಬಿಡಲಾಗಿದ್ದು ಅದು ಮೇ. ೧೬ ರಂದು ಇಂಡಿ ತಾಲೂಕು ತಲುಪಲಿದೆ ಎಂದು ಕೃಷ್ಣಾ ಬಾಗ್ಯ ಜಲ ನಿಗಮದ ಅಧಿಕ್ಷಕ ಅಭಿಯಂತರ ಮನೋಜಕುಮಾರ ಗಡಬಳ್ಳಿ ತಿಳಿಸಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಈಗಾಗಲೇ ನೀರು ಸಿಂದಗಿ ತಾಲೂಕಿನ ಕಾಲುವೆಗಳಲ್ಲಿ ಹರಿಯುತ್ತಿದ್ದು ಸಿಂದಗಿ ತಾಲೂಕಿನ ಬಳಗಾನೂರ ಕೆರೆಯನ್ನು ತುಂಬಲಾಗುತ್ತಿದೆ.ನಂತರ ಮೇ ೧೬ ರಂದು ಇಂಡಿ ತಾಲೂಕಿಗೆ ಸಂಬಂದಿತ ಸಂಗೋಗಿ ಕೆರೆ, ತಾಲೂಕಿನ ಲೋಣಿ ಕೆಡಿ ಕೆರೆ ತುಂಬಿಸಲಾಗುವದು.ಈ ನೀರು ಕುಡಿಯಲು ಮತ್ತು ಜನ ಜಾನುವಾರುಗಳ ಉಪಯೋಗಕ್ಕೆ ಮಾತ್ರ ಬಳಸಲು ತಿಳಿಸಲಾಗಿದೆ ಎಂದರು.ಇಂಡಿಯ ಕಂದಾಯ ಉಪ ವಿಬಾಗಾಧಿಕಾರಿ ಅಬೀದ್ ಗದ್ಯಾಳ ಮತ್ತು ಡಿ.ಎಸ್.ಪಿ ಜಗದೀಶ ಮಾತನಾಡಿ ಕೃಷ್ಣಾ ಕಾಲುವೆ ನೀರು ಕುಡಿಯಲು ಮಾತ್ರ ಬಳಸಬೇಕು. ಕಾಲುವೆ ಮತ್ತು ಕೆರೆಯ ಮೇಲೆ ವಿದ್ಯುತ್ ಪಂಪ ಉಪಯೋಗಿಸಿ ನೀರು ಕೃಷಿಗೆ ಪಡೆದುಕೊಂಡರೆ ಕಾನೂನು ರಿತ್ಯ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಮತ್ತು ಕಾಲುವೆ ೨೦೦ ಮೀ ಸುತ್ತಲಿನ ಪ್ರದೇಶದಲ್ಲಿ ಮೋಟಾರು ಬಳಸದಂತೆ ೧೪೪ ಕಲಂ…
ವಿಜಯಪುರ: ಒಂದು ಆಸ್ಪತ್ರೆಯು ಅತ್ಯುತ್ತಮ ಸೇವೆ ನೀಡುತ್ತಿದೆ ಎನ್ನುವುದು ನಮಗೆ ತಿಳಿದು ಬರುವುದು ಅಲ್ಲಿರುವ ಸೌಕರ್ಯಗಳಿಗಿಂತ ಅಲ್ಲಿರುವ ಚಿಕಿತ್ಸೆ ಹಾಗೂ ತೆಗದುಕೊಳ್ಳುವ ಕಾಳಜಿಯಿಂದ. ಯಾವ ಆಸ್ಪತ್ರೆಯಲ್ಲಿ ನರ್ಸಿಂಗ್ ಸೇವೆ ಅತ್ಯುತ್ತಮವಾಗಿರುತ್ತದೆಯೋ ಆ ಆಸ್ಪತ್ರೆ ರೋಗಿಗಳ ಪಾಲಿಗೆ ಸಂಜೀವಿನಿಯಾಗಿರುತ್ತದೆ. ಆ ಕಾಣದಿಂದಾಗಿಯೇ ವೈದ್ಯರು ಆಸ್ಪತ್ರೆಯ ಮೆದುಳಾದರೆ ಶುಶ್ರೂಶಕರು ಆಸ್ಪತ್ರೆಯ ಬೆನ್ನೆಲುಬು ಇದ್ದಂತೆ ಎಂದು ಜೆಎಸ್ಎಸ್ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಶರಣ ಮಳಖೇಡ್ಕರ್ ತಿಳಿಸಿದರು.ಸೋಮವಾರ ನಗರದ ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಆಯೋಜಿಸಲಾಗಿದ್ದ ಅಂತರಾಷ್ಟ್ರೀಯ ಶುಶ್ರೂಶಕರ ದಿನಾಚರಣೆಯ ಪ್ರಯುಕ್ತ ರೋಗಿಗಳಿಗೆ ಹಣ್ಣು ಹಾಗೂ ಹೊದಿಕೆಯನ್ನು ವಿತರಿಸಿ ಮಾತನಾಡಿದ ಅವರು; ಯಾವುದೇ ಒಂದು ಆಸ್ಪತ್ರೆಯಾಗಿದ್ದರು ಕೇವಲ ಒಂದೇ ವಿಭಾಗದಿಂದ ಮುಂದೆ ಬರುತ್ತದೆ ಎಂದುಕೊಂಡರೆ ತಪ್ಪಾಗುತ್ತದೆ. ಇಲ್ಲಿ ಯಾವುದೇ ಕಾರ್ಯವಾದರೂ ಕೂಡ ತಂಡಕಾರ್ಯವಾಗಿ ಮಾರ್ಪಡುತ್ತದೆ. ಒಬ್ಬರಿಗೊಬ್ಬರು ಹೆಗಲು ನೀಡಿ ದುಡಿದಾಗ ಮಾತ್ರ ಅತ್ಯುತ್ತಮವಾದ ಸೇವೆ ನೀಡುವುದಕ್ಕೆ ಸಾಧ್ಯವಾಗುತ್ತದೆ. ಅದರಲ್ಲೂ ವೈದ್ಯರು ರೋಗಿಯ ರೋಗವನ್ನು ಪತ್ತೆ ಮಾಡಿ ಅದಕ್ಕೆ ಪೂರಕವಾದ ಚಿಕಿತ್ಸೆಯನ್ನು ತಿಳಿಸಿದ…
ವಿಜಯಪುರ: ಕಾಣೆಯಾಗಿದ್ದ ಮಕ್ಕಳು ಶವವಾಗಿ ಪತ್ತೆಯಾಗಿರುವ ಘಟನೆ ನಗರದಲ್ಲಿ ನಡೆದಿದೆ. ವಿಜಯಪುರ ನಗರದ ಗಚ್ಚಿನಗಕಟ್ಟಿ ಕಾಲೋನಿಯಿಂದ ಮಕ್ಕಳು ನಾಪತ್ತೆಯಾಗಿದ್ದರು. ಭಾನುವಾರ ಕಾಲೋನಿಯಲ್ಲಿ ಒಂಟೆ ಬಂದಾಗ ಅದರ ಹಿಂದೆ ಹೋಗಿದ್ದರು.ಸೋಮವಾರ ಮೂರೂ ಮಕ್ಕಳ ಶವಗಳು ಇಂಡಿ ರಸ್ತೆಯ ಶಾಂತಿನಿಕೇತನ ನಗರದ ಚರಂಡಿಯಲ್ಲಿ ಪತ್ತೆಯಾಗಿವೆ.ಅನುಷ್ಕಾ ಅನಿಲ್ ದಹಿಂದೆ (09 ವರ್ಷ) ಗದಗ, ವಿಜಯ ಅನಿಲ್ ದಹಿಂದೆ +07ವರ್ಷ) ಗದಗ ಹಾಗೂ ಮಿಹೀರ್ ಜಂಗೌಲಿ (06ವರ್ಷ) ಬಿಜಾಪುರ ಶವವಾಗಿ ಪತ್ತೆಯಾಗಿದ್ದಾರೆ.ಘಟನಾ ಸ್ಥಳದಲ್ಲಿ ಪೋಷಕರ ಆಕ್ರಂಧನ ಮುಗಿಲು ಮುಟ್ಟಿತ್ತು.ಸ್ಥಳಕ್ಕೆ ಎಪಿಎಂಸಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಪೊಷಕರು ಹಾಗೂ ಕಾಲೋನಿ ನಿವಾಸಿಗಳು ಕಾಣೆಯಾದ ಮಕ್ಕಳಿಗಾಗಿ ಎಲ್ಲೆಡೆ ಹುಡುಕಾಡಿದ್ದರು. ಸಿಸಿಟಿವಿಯಲ್ಲಿ ಮಕ್ಕಳು ಹೋಗುವುದು ಸೆರೆಯಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳ ಕಾಣೆ ಕುರಿತು ಹಲವರು ಪೊಸ್ಟ್ ಮಾಡಿದ್ದರು.ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ದೇವರಹಿಪ್ಪರಗಿ: ಸರ್ಕಾರದ ಯಾವುದೇ ಸಹಾಯ ಪಡೆಯದೇ ಕಳೆದ ಹಲವು ವರ್ಷಗಳಿಂದ ಮಕ್ಕಳ ಪಾಲನೆ, ಪೋಷಣೆಗೆ ನಿಂತ ಧಾಮದ ಕುರಿತು ಅಧಿಕಾರಿಗಳ ನಿರ್ಲಕ್ಷ್ಯ ಸಲ್ಲದು. ಈ ಕುರಿತು ಜಿಲ್ಲಾಧಿಕಾರಿಗಳು ಅಗತ್ಯ ಕ್ರಮ ವಹಿಸಬೇಕು ಎಂದು ಸಲಹಾ ಸಮಿತಿ ಸದಸ್ಯ ರಾಜೀವ ಗುತ್ತೇದಾರ ಹೇಳಿದರು.ಪಟ್ಟಣದ ನಮ್ಮೂರು ಮಕ್ಕಳ ಧಾಮದಲ್ಲಿ ಭಾನುವಾರ ಜರುಗಿದ ಸಲಹಾ ಸಮಿತಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.ಮಕ್ಕಳಧಾಮದ ನವೀಕರಣಕ್ಕೆ ಅಗತ್ಯವಾದ ದಾಖಲೆಗಳನ್ನು ಪೂರೈಸಿದ ನಂತರವೂ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಾರ್ಯಾಲಯದ ಅಧಿಕಾರಿಗಳು ನೋಂದಣಿ ನವೀಕರಣಕ್ಕೆ ಅನಗತ್ಯವಾಗಿ ವಿಳಂಬನೀತಿ ಅನುಸರಿಸುತ್ತಿರುವುದು ತಪ್ಪು. ಅವರ ಈ ನೀತಿಯ ವಿರುದ್ಧವಾಗಿ ಮುಂದಿನ ದಿನಗಳಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದರು.ಗಣ್ಯವ್ಯಾಪಾರಿ ಹೀರಾಚಂದ್ ಗಾಂಧಿ ಮಾತನಾಡಿ, ಸೋಂಕಿತ ಮಕ್ಕಳ ಆರೋಗ್ಯ, ಶಿಕ್ಷಣ, ರಕ್ಷಣೆ, ವಸತಿಯ ಜೊತೆಗೆ ಮನೋ ಸಾಮಾಜಿಕ ಬೆಂಬಲ ನೀಡುವ ನಮ್ಮೂರ ಮಕ್ಕಳ ಧಾಮದ ಸೇವೆ ಜಿಲ್ಲೆ ಹಾಗೂ ತಾಲ್ಲೂಕಿಗೆ ಅಗತ್ಯವಾಗಿದೆ ಎಂದರು.ಸ್ಥಳೀಯ ವ್ಯಾಪಾರಸ್ಥರು ಹಾಗೂ ಸಮಿತಿಯ ಸದಸ್ಯರಾದ ಬಾಬುಲಾಲ್ ದೇವಣಗಾಂವ, ಕಾಶೀಪತಿ ಕುದರಿ, ರಾಜಕುಮಾರ ಸಿಂದಗೇರಿ(ಪಡಗಾನೂರ) ಮಾತನಾಡಿದರು. ಸಿಬ್ಬಂದಿ…
ವಿಜಯಪುರ: ಸಮಾಜದಲ್ಲಿ ಸಮಾನತೆ, ಭ್ರಾತತ್ವ, ನೈತಿಕತೆ ಸಾರಿದ ವಿಶ್ವಗುರು ಬಸವಣ್ಣನವರ ತತ್ತ್ವಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ಜಾತೀಯತೆ ತೊಡೆದುಹಾಕಲು ಸಾಧ್ಯ. ಇಂದಿನ ಬದುಕಿಗೆ ಬಸವಣ್ಣನವರ ವಚನಗಳೇ ದಿವ್ಯಶಕ್ತಿ ಎಂದು ಆದರ್ಶ ನಗರದ ಪಿಎಸೈ ಸುರೇಶ ಮಂಟೂರ ಹೇಳಿದರು.ಅವರು ನಗರದ ಆಲಕುಂಟೆ ನಗರದ ಸಿದ್ದಿವಿನಾಯಕ ದೇವಸ್ಥಾನದಲ್ಲಿ ರವಿವಾರದಂದು ಭಾರತ ಯುವ ವೇದಿಕೆ ಚಾರಿಟೇಬಲ್ ಫೌಂಡೇಶನ್ ಹಾಗೂ ಪಿನ್ಯಾಕಲ್ ಕರಿಯರ್ ಬಿಲ್ಡರ್ಸ್ ಅವರ ಸಂಯುಕ್ತಾಶ್ರಯದಲ್ಲಿ ಬಸವ ಜಯಂತಿ ನಿಮಿತ್ತ ‘ಇಂದಿನ ಬದುಕಿನಲ್ಲಿ ಬಸವಣ್ಣನವರ ವಚನಗಳ ಪ್ರಸ್ತುತತೆ’ ಚಿಂತನಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು.ಉಪನ್ಯಾಸ ನೀಡಿದ ಸಾಹಿತಿ ಆರ್ ಎಸ್ ಪಟ್ಟಣಶೆಟ್ಟಿ ಮಾತನಾಡಿ, ಸಮತೆ, ವಿಶ್ವಬಾಂಧವ್ಯ,ವ್ಯಕ್ತಿ ಸ್ವಾತಂತ್ರ್ಯ,ಸತ್ಯ, ಅಹಿಂಸೆ, ದಯಾಪರತೆಯಂತಹ ತತ್ವಗಳ ತಳಹದಿಯ ಮೇಲೆ ಆದರ್ಶ ಸಮಾಜವೊಂದನ್ನು ರೂಪಿಸುವ ಯುಗ ಪ್ರವರ್ತಕ ಬಸವಣ್ಣನವರ ಜೀವನ ಇಂದಿನ ಪೀಳಿಗೆಗೆ ಆದರ್ಶಪ್ರಾಯವಾದುದು ಎಂದು ಹೇಳಿದರು.ಮುಖ್ಯ ಅತಿಥಿಗಳಾಗಿ ಶಿಕ್ಷಕ ಸಾಹಿತಿ ಸಂತೋಷ ಬಂಡೆ ಮಾತನಾಡಿ, ಇಂದು ನಿಸರ್ಗ ಸಮತೋಲನ ಕಳೆದುಕೊಂಡು ಜಾಗತೀಕರಣವು ತುಚ್ಚೀಕರಿಸುತ್ತಾ ಸಾಗುತ್ತಿದೆ. ಇಂತಹ ಪ್ರಕ್ಷುಬ್ಧ ವಾತಾವರಣದಲ್ಲಿ ಬಸವಣ್ಣನವರ ಚಿಂತನೆಗಳು ನಮಗೆ ಮಾರ್ಗದರ್ಶನವಾಗಿ,…
ಎಕ್ಸಲೆಂಟ್ ಕಾಲೇಜ್ ಆಫ್ ನರ್ಸಿಂಗ್ ಮಹಾವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ಶುಶ್ರುಷ ದಿನಾಚರಣೆ ವಿಜಯಪುರ: ಮಾತೃ ಸಮಾನರಾದ ನರ್ಸ್ ಗಳ ಸೇವೆ ನಿಜಕ್ಕೂ ಅನನ್ಯವಾದದ್ದು, ವಿಶ್ವದ ಶ್ರೇಷ್ಠ ನರ್ಸ್ ಆಗಿ ಸೇವೆ ಸಲ್ಲಿಸಿದ್ದ ಫ್ಲೋರೆನ್ಸ್ ನೈಟಿಂಗೆಲ್ ಹುಟ್ಟಿದ ದಿನವನ್ನು ಅಂತರಾಷ್ಟ್ರೀಯ ಶುಶ್ರುಷ ದಿನವನ್ನಾಗಿ ಆಚರಿಸಲಾಗುತ್ತಿದೆ. ಶ್ರೀಮಂತ ಮನೆತನದಲ್ಲಿ ಹುಟ್ಟಿದರೂ ಈ ವೃತ್ತಿಯನ್ನು ಆಯ್ಕೆ ಮಾಡಿಕೊಂಡ ನೈಟಿಂಗೆಲ್ಲಳ ತ್ಯಾಗ ಸೇವೆ ಜಗತ್ತಿನಾದ್ಯಂತ ಇವತ್ತಿಗೂ ಸ್ಮರಣೀಯವಾಗಿದೆ. ಎಕ್ಸಲೆಂಟ್ ಕಾಲೇಜ್ ಆಫ್ ನರ್ಸಿಂಗ್ ಮಹಾವಿದ್ಯಾಲಯದಲ್ಲಿ ಓದುತ್ತಿರುವ ಎಲ್ಲ ವಿದ್ಯಾರ್ಥಿಗಳಿಗೆ ಅವರ ಬದುಕು ಒಂದು ಪ್ರೇರಣೆಯಾಗಲಿ ಎಂದು ಆಕ್ಸ್ಫರ್ಡ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದರು.ಸೋಮವಾರ ಅವರು ನಗರದ ಮಾತೋಶ್ರೀ ಗೌರಮ್ಮ ಅಪ್ಪಾಸಾಹೇಬ ಬಬಲೇಶ್ವರ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಎಕ್ಸಲೆಂಟ್ ಕಾಲೇಜ್ ಆಫ್ ನರ್ಸಿಂಗ್ ಮಹಾವಿದ್ಯಾಲಯದಲ್ಲಿ ನಡೆದ ಅಂತರಾಷ್ಟ್ರೀಯ ಶುಶ್ರುಷ ದಿನಾಚರಣೆಯ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.ಈ ಸಂದರ್ಭದಲ್ಲಿ ಅತಿಥಿಗಳಾಗಿ ಅಖಿಲಾ ಬಿರಾದಾರ, ಅಂಜುಮ್ ಹತ್ತಿರಕಿಹಾಳ, ಆಕಾಶ ಮಲನೂರ, ರಾಜು ತಿಡುಗುಂದಿ ಆಗಮಿಸಿದ್ದರು.ಅಶ್ವಿನಿ ಸಾಲ್ಗಾರ, ಸಮತಾ ಸಿಂಗಾಡಿ, ಪಂಕಜ…
ವಿಜಯಪುರ: ಕಾಣೆಯಾಗಿದ್ದ ಮಕ್ಕಳು ಶವವಾಗಿ ಪತ್ತೆಯಾಗಿರುವ ಘಟನೆ ನಗರದಲ್ಲಿ ನಡೆದಿದೆ. ವಿಜಯಪುರ ನಗರದ ಗಚ್ಚಿನಗಕಟ್ಟಿ ಕಾಲೋನಿಯಿಂದ ಮಕ್ಕಳು ನಾಪತ್ತೆಯಾಗಿದ್ದರು. ಭಾನುವಾರ ಕಾಲೋನಿಯಲ್ಲಿ ಒಂಟೆ ಬಂದಾಗ ಅದರ ಹಿಂದೆ ಹೋಗಿದ್ದರು.ಸೋಮವಾರ ಮೂರೂ ಮಕ್ಕಳ ಶವಗಳು ಇಂಡಿ ರಸ್ತೆಯ ಶಾಂತಿನಿಕೇತನ ನಗರದ ಚರಂಡಿಯಲ್ಲಿ ಪತ್ತೆಯಾಗಿವೆ.ಅನುಷ್ಕಾ ಅನಿಲ್ ದಹಿಂದೆ (09 ವರ್ಷ) ಗದಗ, ವಿಜಯ ಅನಿಲ್ ದಹಿಂದೆ +07ವರ್ಷ) ಗದಗ ಹಾಗೂ ಮಿಹೀರ್ ಜಂಗೌಲಿ (06ವರ್ಷ) ಬಿಜಾಪುರ ಶವವಾಗಿ ಪತ್ತೆಯಾಗಿದ್ದಾರೆ.ಘಟನಾ ಸ್ಥಳದಲ್ಲಿ ಪೋಷಕರ ಆಕ್ರಂಧನ ಮುಗಿಲು ಮುಟ್ಟಿತ್ತು.ಸ್ಥಳಕ್ಕೆ ಎಪಿಎಂಸಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಪೊಷಕರು ಹಾಗೂ ಕಾಲೋನಿ ನಿವಾಸಿಗಳು ಕಾಣೆಯಾದ ಮಕ್ಕಳಿಗಾಗಿ ಎಲ್ಲೆಡೆ ಹುಡುಕಾಡಿದ್ದರು. ಸಿಸಿಟಿವಿಯಲ್ಲಿ ಮಕ್ಕಳು ಹೋಗುವುದು ಸೆರೆಯಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳ ಕಾಣೆ ಕುರಿತು ಹಲವರು ಪೊಸ್ಟ್ ಮಾಡಿದ್ದರು.ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ದೇವರಹಿಪ್ಪರಗಿ: ಅನ್ನ ಬ್ರಹ್ಮನ ಸ್ವರೂಪ. ಈ ಅನ್ನವನ್ನು ಬೆಳೆಯುವ ಪರಬ್ರಹ್ಮನೇ ರೈತ. ರೈತ ಎಂದರೆ ದೇವರು ಎಂದರೆ ತಪ್ಪಾಗಲಾರದು ಎಂದು ಜಾಲಹಳ್ಳಿ ಜಯಶಾಂತಲಿಂಗೇಶ್ವರ ಸಂಸ್ಥಾನಮಠದ ಜಯಶಾಂತಲಿಂಗಶ್ರೀಗಳು ಹೇಳಿದರು.ತಾಲ್ಲೂಕಿನ ಯಾಳವಾರ ಗ್ರಾಮದ ಮಹಾಲಿಂಗೇಶ್ವರ ಕ್ರೀಡಾಂಗಣದಲ್ಲಿ ಶನಿವಾರ ಅನುದಿನ ಅನುಸರಿಸಿ ಸಂಸ್ಥೆಯ ಅಡಿಯಲ್ಲಿ ಜರುಗಿದ ನಮ್ಮೂರು ಉತ್ಸವ ನಮ್ಮ ಹೆಮ್ಮೆ, ರೈತೋತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು. ದೇಶಕ್ಕೆ ಯೋಧ ಮತ್ತು ರೈತ ಇವರಿಬ್ಬರೂ ಕಣ್ಣುಗಳಿದ್ದಂತೆ ಅಂತೆಯೇ ಭಾರತದ ಮಾಜಿಪ್ರಧಾನಿ ದಿ.ಲಾಲ್ ಬಹಾದ್ದೂರ ಶಾಸ್ತಿçಜೀ ಜೈಜವಾನ್ ಜೈಕಿಸಾನ್ ಎಂಬ ಅರ್ಥಗರ್ಭಿತ ಮಾತನ್ನು ಹೇಳಿದ್ದಾರೆ ಎಂದು ರೈತಪರ ಮಾತುಗಳನ್ನು ಹೇಳಿದರು.ಬೆಂಗಳೂರಿನ ಖ್ಯಾತ ಬಾಲವಾಗ್ಮಿ ಹಾರಿಕಾ ಮಂಜುನಾಥ ಮಾತನಾಡಿ, ದೇಶದಲ್ಲಿ ಇಂದು ಸಂಸ್ಕಾರ, ಮಠ, ಮಂದಿರಗಳ ಉಳಿವಿಗೆ ಕಾರಣರೇ ನಮ್ಮ ತಾಯಂದಿರು. ಭಾರತದಲ್ಲಿ ಗೋಮಾತೆಗೆ ವಿಶೇಷ ಸ್ಥಾನವಿದೆ. ಆದ್ದರಿಂದ ಗೋವುಗಳ ರಕ್ಷಣೆ, ಸೇವೆ ಇಂದು ಅತ್ಯಂತ ಅಗತ್ಯವಾಗಿದೆ ಎಂದು ರೈತಪರ, ಗೋವಿನ ರಕ್ಷಣೆ ಕುರಿತಾಗಿ ವಿಶೇಷ ಉಪನ್ಯಾಸ ನೀಡಿದರು.ನಂತರ ಅನುದಿನ ಅನುಸರಿಸಿ ಸಂಸ್ಥೆ ಹಾಗೂ ಗ್ರಾಮಸ್ಥರಿಂದ ಸನ್ಮಾನಿಸಲ್ಪಟ್ಟರು.
