Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಇಂಡಿ: ಭಾರತೀಯ ಭೂಸೇನೆಯಲ್ಲಿ ಹದಿನೇಳು ವರ್ಷ ಸೇವೆ ಸಲ್ಲಿಸಿ ನಿವೃತ್ತಿಯಾದ ಸಾಲೋಟಗಿ ಗ್ರಾಮದ ವೀರ ಯೋಧ ಅನೀಲ ಪರಶೇನವರ ಅವರನ್ನು ಇಂಡಿ ರೈಲು ನಿಲ್ದಾಣದಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು.ನಂತರ ಇಂಡಿ ರೈಲು ನಿಲ್ದಾಣ, ಇಂಡಿ ನಗರ ಮತ್ತು ಸಾಲೋಟಗಿ ಗ್ರಾಮದಲ್ಲಿ ಅದ್ದೂರಿಯ ಮೆರವಣೆಗೆ ನಡೆಯಿತು.ತೆರೆದ ಜೀಪದಲ್ಲಿ ಸೈನಿಕ ಪರಶೇನವರ ಇವರಿಗೆ ಅಂದಾಜು ೨೦೦ ಕ್ಕೂ ಹೆಚ್ಚು ಬೈಕುಗಳು ಸೇರಿ ಭಾರತ ಮಾತೆಯ ಧ್ವಜದೊಂದಿಗೆ ಭಾರತ ಮಾತಾ ಕಿ ಜೈ ಘೋಷಣೆಯೊಂದಿಗೆ ಭವ್ಯ ಮೆರವಣೆಗೆ ನಡೆಯಿತು.ಇಂಡಿಯಲ್ಲಿ ಶಿವಾಜಿ ವೃತ್ತ, ಮಹಾವೀರ ವೃತ್ತ, ಬಸವೇಶ್ವರ ವೃತ್ತ, ಸ್ವಾಮಿ ವಿವೇಕಾನಂದ ವೃತ್ತದ ಮೂಲಕ ಸಾಲೋಟಗಿ ಗ್ರಾಮದ ವರೆಗೆ ಮೆರವಣೆಗೆ ನಡೆಯಿತು.ಸಾಲೋಟಗಿ ಗ್ರಾಮದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಶ್ರೀ ಸಂಗಮೇಶ್ವರ ಶ್ರೀಗಳು ಜಗತ್ತಿನಲ್ಲಿ ಯಾವದು ಶ್ರೇಷ್ಠ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಹಾಲಿನಲ್ಲಿ ತಾಯಿಯ ಎದೆಹಾಲು, ಚುಕ್ಕೆಯಲ್ಲಿ ಬೆಳ್ಳಿ ಚುಕ್ಕೆ, ಹೂವು ಹತ್ತಿ ಹೂ, ಮಕ್ಕಳಲ್ಲಿ ಭೂ ತಾಯಿಯ ಚೊಚ್ಚಲ ಮಗ ರೈತ, ಮತ್ತು ಸೈನಿಕ…
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ:ಭಾರತೀಯ ಜನಗಣತಿ 2027ರ ಕಾರ್ಯಾಚರಣೆ ಮೊದಲ ಹಂತ ಏಪ್ರಿಲ್ 1 ರಿಂದ ಮೇ 15ರವರೆಗೆ ನಡೆಯಲಿದೆ. ಈ ಅವಧಿಯಲ್ಲಿ ಮನೆಗಳ ಪಟ್ಟಿ ಮತ್ತು ಮನೆಗಣತಿ ಕಾರ್ಯ ಕೈಗೊಳ್ಳಲಾಗುತ್ತಿದೆ. ಈ ಬಾರಿ ಜನಗಣತಿ ಎರಡು ಹಂತಗಳಲ್ಲಿ ನಡೆಯಲಿದೆ. ಮೊದಲ ಹಂತದಲ್ಲಿ ಮನೆಗಳ ಪಟ್ಟಿ ಮತ್ತು ಮನೆಗಳ ಮಾಹಿತಿ ಸಂಗ್ರಹಿಸುವ ಕಾರ್ಯ ನಡೆಯಲಿದೆ. ಭಾರತ ಸರಕಾರವು ಇದೇ ಮೊದಲ ಬಾರಿಗೆ ನಾಗರಿಕರಿಗೆ ಸ್ವಯಂ ಜನಗಣತಿ ಸೌಲಭ್ಯವನ್ನು ಪರಿಚಯಿಸಿದೆ. ನಾಗರಿಕರು ತಾವಾಗಿಯೇ ಆನ್ಲೈನ https://se.census.gov.in ದಾಖಲಿಸಿ ಸ್ವಯಂ ಜನಗಣತಿ ಮಾಡಿಕೊಂಡು ಐಡಿ ಯನ್ನು ಪಡೆದುಕೊಳ್ಳುವುದು. ಗಣತಿದಾರರು ನಿಮ್ಮ ಮನೆಗೆ ಭೇಟಿ ನೀಡಿದಾಗ ಸ್ವಯಂ ಗಣತಿ ಐಡಿಯನ್ನು ಅವರಿಗೆ ನೀಡಬೇಕು. ಈ ಪ್ರಕ್ರಿಯೆಯು ಸಂಪೂರ್ಣ ಉಚಿತವಾಗಿರುತ್ತದೆ.ಅದರಂತೆ ಈ ಜನಗಣತಿ ಕಾರ್ಯಕ್ಕೆ ನೇಮಕ ಮಾಡಿದ ಅಧಿಕಾರಿ ನೌಕರರು ಏಪ್ರಿಲ್ 16 ರಿಂದ ಮೇ 15 ರವರೆಗೆ ತಮ್ಮ ಮನೆಗೆ ಬರಲಿದ್ದು. ಪುರಸಭೆ ವ್ಯಾಪ್ತಿಯ ಎಲ್ಲ ಸಾರ್ವಜನಿಕರು ಸ್ವಯಂ ಪ್ರೇರಿತವಾಗಿ ಈ ಜನಗಣತಿ ಕಾರ್ಯದಲ್ಲಿ ಭಾಗವಹಿಸಿ ಸರ್ಕಾರದ…
ಲೇಖನ – ಜಯಶ್ರೀ.ಜೆ. ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕರುಬೆಳಗಾವಿಮೊ: ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ನೆನಪುಗಳ ಓಣಿಯಲ್ಲಿ ಓಡಾಡುತಿರುವೆ. ನೆನಪುಗಳ ಮಳಿಗೆಯಲಿ ಇನ್ನಾರಿಲ್ಲ ನಿನ್ನ ಹೊರತು. ನೀನಿಲ್ಲದೇ ನೆನಪಿನ ಆ ಓಣಿ ಕಳೆಗಟ್ಟುವುದಾದರೂ ಹೇಗೆ? ನಿನ್ನೊಂದಿಗಿದ್ದ ದಿನಗಳೇ ಅಪ್ಪಟ ಸ್ವರ್ಗದ ದಿನಗಳು. ಸ್ವರ್ಗವೊಂದು ಏನಾದರೂ ಭೂಮಿಯ ಮೇಲಿದ್ದರೆ ಅದು ನಿನ್ನೊಂದಿಗಿದ್ದಾಗ ಮಾತ್ರ ಗೋಚರಿಸುತ್ತದೆ. ಸ್ವರ್ಗ ಬೇರಲ್ಲ ನೀನು ಬೇರಲ್ಲ ಅಂತ ಎಷ್ಟೊಂದು ಸಲ ನನಗೆ ಅನಿಸಿದ್ದು ಸುಳ್ಳಲ್ಲ ಸುಮತಿ. ಪ್ರಾಣ ಸ್ನೇಹಿತೆಯಾದ ನಿನ್ನ ಬಗೆಗಿನ ವಿಚಾರಗಳೆಲ್ಲ ಗಾಣದಂತೆ ಸದಾ ಸುತ್ತುತ್ತಲೇ ಇರುತ್ತವೆ. ಬಾಲ್ಯದಲ್ಲಿ ಗಂಡ ಹೆಂಡತಿಯಾಗಿ ಆಡಿದ ಆಟವಂತೂ ಇಂಚಿಂಚಾಗಿ ಯಥಾವತ್ತಾಗಿ ನೆನಪಿನಲ್ಲಿಟ್ಡಿದೆ ಮೆದುಳು. ಗಂಡ ಹೆಂಡತಿಯಾಟ ನೆನಪಿನ ಶಾಲೆಯಲ್ಲಿ ಹೆಚ್ಚೆಚ್ಚು ತೆರೆದುಕೊಳ್ಳುತ್ತದೆ. ಅದೇ ಈಗ ನಿಜವಾದರೆ ನನ್ನನ್ನು ಹಿಡಿಯುವವರೇ ಇಲ್ಲ. ಹೀಗೆ ನೆನಪಿನ ಲೋಕದಲ್ಲಿ ವಿಹರಿಸುವ ಹುಚ್ಚು ಇತ್ತೀಚಿಗೆ ಮತ್ತಷ್ಟು ಹೆಚ್ಚುತ್ತಿದೆ. ನೀನಿಲ್ಲದೇ ಪ್ರೇಮ ಲೋಕದ ಪ್ರಪಂಚ ನಿಂತಂತಾಗಿದೆ. ಮನಸ್ಸು ಕೂಡ ಭಾರವಾಗುತ್ತಿದೆ. ನನ್ನ ಅಪ್ರತಿಮ ಅನುಪಮ ಪ್ರೇಯಸಿ ಜೊತೆ ಭಾವನೆಗಳ ಬೆಸೆಯಲು ಮನಸ್ಸು…
ಅನಧಿಕೃತ ಸಂಪರ್ಕ ಹೊಂದಿದ್ದರೆ ೫ ಸಾವಿರ ರೂ. ದಂಡ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಅನವಶ್ಯಕವಾಗಿ ಕುಡಿಯುವ ನೀರು ಪೋಲು ಮಾಡುವರಿಗೆ ೨ ಸಾವಿರ ರೂ. ಹಾಗೂ ಅನಧಿಕೃತ ನಳ ಸಂಪರ್ಕ ಪಡೆದುಕೊಳ್ಳುವ ಹಾಗೂ ಪಡೆದುಕೊಂಡವರಿಗೆ ಹೊಸ ನಳದ ಶುಲ್ಕದ ಜೊತೆಗೆ ಹೆಚ್ಚುವರಿ ೫ ಸಾವಿರ ರೂ. ದಂಡ ವಿಧಿಸಲಾಗುವುದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸಹಾಯಕ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ.ನಗರದ ವಿವಿಧ ವಲಯ, ವಾರ್ಡಗಳಲ್ಲಿ ಪೂರೈಕೆಯಾಗುವ ನೀರನ್ನು ಕುಡಿಯುವ ಸಲುವಾಗಿ ಮಾತ್ರ ಪರಿಗಣಿಸಿ ನೀರಿನ ಪ್ರಮಾಣವನ್ನು ಅಂದಾಜಿಸಲಾಗಿರುತ್ತದೆ. ದಿನಂಪ್ರತಿ ಪ್ರತಿಯೊಬ್ಬರಿಗೆ ತಲಾ ೧೩೫ ಲೀಟರನಂತೆ ಪ್ರತಿ ಮನೆಯಲ್ಲಿ ಒಟ್ಟು ೫ ಜನರ ಬೇಡಿಕೆಯನ್ನಾಧರಿಸಿ ನೀರು ಪೂರೈಸಲಾಗುತ್ತಿದೆ. ಆದರೆ ಸಾರ್ವಜನಿಕರು ಈ ಪ್ರಮಾಣ ಮೀರಿ ವಾಹನ ತೊಳೆಯುವುದು, ಗಾರ್ಡನಗಳಿಗೆ ನೀರುಣಿಸುವುದು. ಅನವಶ್ಯಕವಾಗಿ ನಳದ ನೀರನ್ನು ಬಂದ್ ಮಾಡದೇ ರಸ್ತೆಗೆ, ಹೊರಚರಂಡಿಗೆ ಫೋಲು ಮಾಡುತ್ತಿರುವುದು ಕಂಡು ಬಂದಿರುತ್ತದೆ. ಕೆಲವೆಡೆ ಪವರ್ ಪಂಪ್ ಅಳವಡಿಸಿ. ಹೆಚ್ಚಿನ ನೀರು ಬಳಸುತ್ತಿದ್ದು, ಇದರಿಂದಾಗಿ ಕುಡಿಯುವ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಸಮಾಜ ಕಲ್ಯಾಣ ಇಲಾಖೆ ಇವರ ಸಹಯೋಗದಲ್ಲಿ ಹಸಿರು ಕ್ರಾಂತಿಯ ಹರಿಕಾರ ಹಾಗೂ ಭಾರತದ ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನ ರಾಂ ಅವರ ೧೧೯ನೇ ಜಯಂತಿ ಕಾರ್ಯಕ್ರಮವನ್ನು ಏಪ್ರಿಲ್ ೫ರಂದು ಬೆಳಿಗ್ಗೆ ೧೦ ಗಂಟೆಗೆ ನಗರದ ಕಂದಗಲ್ ಶ್ರೀ ಹನುಂತರಾಯ ರಂಗಮಂದಿರದಲ್ಲಿ ಆಯೋಜಿಸಲಾಗಿದೆ.ಅಂದು ಬೆಳಿಗ್ಗೆ ೯ ಗಂಟೆಗೆ ನಗರದ ಸೆಟ್ಲೈಟ್ ಬಸ್ ನಿಲ್ದಾಣದ ಹತ್ತಿರ ಇರುವ ಡಾ. ಬಾಬು ಜಗಜೀವನರಾಂ ವೃತ್ತದಿಂದ ನಗರದ ಪ್ರಮುಖ ವೃತ್ತಗಳ ಮೂಲಕ ಸಾಗಿ, ಕಂದಗಲ್ ಶ್ರೀ ಹನುಂತರಾಯ ರಂಗಮಂದಿರದವರೆಗೆ ಭಾವಚಿತ್ರದ ಮೆರವಣಿಗೆ ಜರುಗಲಿದೆ.ಈ ಜಯಂತಿ ಕಾರ್ಯಕ್ರಮಕ್ಕೆ ಎಲ್ಲಾ ಜಿಲ್ಲಾಮಟ್ಟದ ಅಧಿಕಾರಿ,ಸಿಬ್ಬಂದಿ, ಜಿಲ್ಲೆಯ ಸಾರ್ವಜನಿಕರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಮತ್ತು ಎಲ್ಲಾ ಸಮುದಾಯದ ಗಣ್ಯರು ಭಾಗವಹಿಸುವಂತೆ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ಕೋರಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ಹೆಚ್ ಡಿ ಕೋಟೆ: ಮುಂಬರುವ ವಿಧಾನಸಭೆ ಚುನಾವಣೆಗೆ ಇನ್ನು ಎರಡು ವರ್ಷ ಬಾಕಿ ಇದೆ. ಆದರೆ ಹೆಚ್ ಡಿ ಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಈಗಲೇ ಚುನಾವಣಾ ಅಖಾಡಕ್ಕೆ ವೇದಿಕೆ ಸಿದ್ಧವಾಗುತ್ತಿದೆ. ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆಯಲ್ಲಿ ಉಪಚುನಾವಣಾ ಕಾವು ರಂಗೇರುತ್ತಿದ್ದರೆ ಹೆಚ್ ಡಿ ಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಹಾಗು ಕಾಂಗ್ರೆಸ್ ನಾಯಕರ ನಡುವೆ ಮಾತಿನ ವಾಕ್ಸಮರ ಜೋರಾಗಿದೆ. ಮಧ್ಯಪ್ರಾಚ್ಯದಲ್ಲಿ ನಿಜವಾದ ಯುದ್ಧ ನಡೆಯುತ್ತಿದ್ದರೆ ವನಸಿರಿ ನಾಡಿನಲ್ಲಿ ಮಾತಿನ ಯುದ್ಧ ತುಸು ಜೋರಾಗಿಯೇ ನಡೆಯುತ್ತಿದೆ.ಇತ್ತೀಚೆಗೆ ನಡೆದ ಜನರೊಂದಿಗೆ ಜನತಾದಳ ಸಮಾವೇಶದಲ್ಲಿ ಜೆಡಿಎಸ್ ಮುಖಂಡ ಕೆ.ಎಂ. ಕೃಷ್ಣನಾಯಕ ಅವರು ಶಾಸಕ ಅನಿಲ್ ಚಿಕ್ಕಮಾದು ವಿರುದ್ಧ ಆರೋಪಗಳ ಸುರಿಮಳೆಗೈದ್ದಿದ್ದರು. ಕ್ಷೇತ್ರಕ್ಕೆ ಶಾಸಕರ ಕೊಡುಗೆ ಏನು ಎಂದು ಪ್ರಶ್ನಿಸಿದ್ದರು. ಅಲ್ಲದೆ ಸೋಷಿಯಲ್ ಮೀಡಿಯಾದಲ್ಲಿ ಹದಗೆಟ್ಟ ರಸ್ತೆಗಳ ವಿಡಿಯೋಗಳನ್ನು ಅಪ್ಲೋಡ್ ಮಾಡುವ ಮೂಲಕ ಜೆಡಿಎಸ್ ಮುಖಂಡರು ಟೀಕೆಗಳ ಸುರಿಮಳೆಗೈದಿದ್ದರು. ಇದರಿಂದ ಕೇರಳಿ ಕೆಂಡವಾಗಿರುವ ಕಾಂಗ್ರೆಸ್ ನಾಯಕರು ಜೆಡಿಎಸ್ ಮುಖಂಡ ಕೆ.ಎಂ. ಕೃಷ್ಣನಾಯಕ ವಿರುದ್ಧ ತಿರುಗಿಬಿದ್ದಿದ್ದಾರೆ.…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ನಗರ ಸಾವಿರಾರು ಎಕರೆ ವಿಸ್ತಾರದಲ್ಲಿ ನಿರ್ಮಾಣಗೊಂಡಿದ್ದು, ನಗರದ ಅಭಿವೃದ್ಧಿಗೆ ನಗರ ಯೋಜನಾ ಪ್ರಾಧಿಕಾರ ಸೂಕ್ತ ಯೋಜನೆ ರೂಪಿಸಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಿ ಎಂದು ಶಾಸಕ ಅಶೋಕ ಮನಗೂಳಿ ಶುಭ ಹಾರೈಸಿದರು.ನಗರ ಯೋಜನಾ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಛೇರಿಗೆ ವರುವವರಿಗೆ ಯಾವುದೇ ರೀತಿಯ ತೊಂದರೆ ಇಲ್ಲದಂತೆ ಭ್ರಷ್ಠಾಚಾರ ರಹಿತವಾಗಿ ಕಾರ್ಯನಿರ್ವಹಿಸಬೇಕು. ನಗರದ ಅಭಿವೃದ್ಧಿಗೆ ಪೂರಕವಾಗಿ ಕಾರ್ಯನಿರ್ವಹಿಸಬೇಕು ಎಂದರು.ಈ ವೇಳ ನೂತನ ಅಧ್ಯಕ್ಷ ಹಣಮಂತ ಸುಣಗಾರ ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ಶಾಸಕರ ಮೂಲಕ ಸರಕಾರದಿಂದ ಸಿಂದಗಿ ಯೋಜನಾ ಪ್ರಾಧಿಕಾರದ ಜವಾಬ್ದಾರಿಯನ್ನು ನನಗೆ ವಹಿಸಿದ್ದಾರೆ. ಉತ್ತಮವಾಗಿ, ಬಡವರ ಕಾರ್ಯಗಳನ್ನು ನಡೆಸುವಂತೆ ಶಾಸಕರು ಕಿವಿಮಾತು ಹೇಳಿದ್ದು ಅವರ ಮಾತಿಗೆ ಚ್ಯುತಿ ಬಾರದಂತೆ ಶಿರಸಾ ವಹಿಸಿ ಪಾಲಿಸುತ್ತೇನೆ. ಸಿಂದಗಿ ತಾಲೂಕಿನ ಜನತೆ ಏನನ್ನು ಬಯಸುತ್ತಾರೆಯೋ ಅದನ್ನು ನಡೆಸಲಾಗುವುದು. ನನಗೆ ಆಯ್ಕೆ ಮಾಡಿದ ಸಿಎಂ, ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ ಹಾಗೂ ನಗರಾಭಿವೃದ್ಧಿ ಸಚಿವ ಭೈರತಿ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ನಗರದ ಸಾಹಿತಿ, ಶಿಕ್ಷಕಿ, ಶಾಂತಾ ಎಂ. ಮೊಸಲಗಿ ಅವರು ಕರ್ನಾಟಕ ರಾಜ್ಯ ಸಾಹಿತಿಗಳ ಬಳಗ ಕೇಂದ್ರ ಘಟಕ ಕಲಬುರಗಿ (ರಿ) ಇವರ ವತಿಯಿಂದ ನಡೆದ ಚುಟುಕು ಸಾಹಿತ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.ಈ ಬಳಗದ ಗೌರವಾಧ್ಯಕ್ಷ ಬಾಬುಮಿಯಾ ಫುಲಾರಿ, ಸಂಚಾಲಕರಾದ ಮಹಾನಂದಾ ಮುಗಳಿ, ವಿಮರ್ಶಕರಾದ ರಾಜಶ್ರೀ ಬಿದರಿ, ಪ್ರಧಾನ ಕಾರ್ಯದರ್ಶಿ ಕುದುರತ್ಅಲಿ ಭೂಸನೂರ ಅವರು ಅಭಿನಂದಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಅವರ ಅಧ್ಯಕ್ಷತೆಯ ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನೂತನವಾಗಿ ಜಾರಿಗೆ ತರಲಾದ ಜೆಎಸ್ಎಸ್ ಲಕ್ಷ್ಮಿಪುತ್ರಿ ಸುರಕ್ಷಾ ಯೋಜನೆಗೆ ಸಿದ್ಧಸಿರಿ ಬಹುರಾಜ್ಯ ಬಹುಉದ್ದೇಶ ಸಹಕಾರಿ ಸೊಸೈಟಿ ನಿಯಮಿತ ನಿರ್ದೇಶಕರಾದ ಶೈಲಜಾ ಬಸನಗೌಡ ಪಾಟೀಲ ಯತ್ನಾಳ ಹಾಗೂ ಅಬೋಲಿ ರಾಮನಗೌಡ ಪಾಟೀಲ ಯತ್ನಾಳ ಅವರು ಗುರುವಾರ ಚಾಲನೆ ನೀಡಿದರು.ಅತ್ಯಾಧುನಿಕ ತಂತ್ರಜ್ಞಾನ, ತಜ್ಞ ವೈದ್ಯರುಗಳೊಂದಿಗೆ ರೋಗಿಗಳಿಗೆ ಕೈಗೆಟುಕುವ ದರದಲ್ಲಿ ಗುಣಮಟ್ಟದ ಚಿಕಿತ್ಸೆ ಒದಗಿಸಿ, ಅತ್ಯುತ್ತಮ ಆರೈಕೆಗೆ ಹೆಸರುವಾಸಿಯಾದ, ನಮ್ಮ ಜೆ.ಎಸ್.ಎಸ್ ಆಸ್ಪತ್ರೆಯಲ್ಲಿ, ಸುರಕ್ಷತೆ ಹೆರಿಗೆ ನಮ್ಮ ಬದ್ದತೆ ಎಂಬ ಸಾಮಾಜಿಕ ಕಾಳಜಿ ಯೊಂದಿಗೆ ಇದೀಗ ಜಾರಿಗೆ ತಂದಿರುವ ಜೆಎಸ್ಎಸ್ ಲಕ್ಷ್ಮಿಪುತ್ರಿ ಸುರಕ್ಷಾ ಯೋಜನೆಯಡಿ ಆಸ್ಪತ್ರೆಯಲ್ಲಿ ಹೆಣ್ಣು ಮಗು ಜನಿಸಿದರೆ ತಾಯಿಗೆ ಉಚಿತ ಆರೈಕೆ ಮಾಡಲಾಗುತ್ತದೆ. ತಾಯಿ ಮತ್ತು ಮಗುವಿನ ಆರೋಗ್ಯ ರಕ್ಷಣೆಗೆ ಇಂತಹ ಯೋಜನೆಗಳು ಸಹಕಾರಿ ಆಗಲಿವೆ.ಈ ಸಂದರ್ಭದಲ್ಲಿ ಆಸ್ಪತ್ರೆಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರವಿ ಆರ್.ಬಿ (ನಾಯ್ಕ), ವೈದ್ಯರುಗಳಾದ ಡಾ.ವೀಣಾ…
ಉದಯರಶ್ಮಿ ದಿನಪತ್ರಿಕೆ ಆಲಮೇಲ: ವಚನಗಳ ಆಧಾರದ ಮೇಲೆ ನಮ್ಮ ಜೀವನ ನಡೆದರೆ ಯಾವುದೇ ಸಮಸ್ಯೆಗಳು ಎದುರಾಗುವುದಿಲ್ಲ. ಒಂದು ವೇಳೆ ಕಷ್ಟಗಳು ಬಂದರೂ ಅವುಗಳನ್ನು ಎದುರಿಸುವ ಧೈರ್ಯ ನಮಗೆ ವಚನ ಸಾಹಿತ್ಯದಿಂದ ಸಿಗುತ್ತದೆ, ಆದ್ದರಿಂದ ಯಾವುದಕ್ಕೂ ದೃತಿಗೇಡಬಾರದು ಎಂದು ಡಾ. ಸಂಗಮೇಶ್ವರಿ ಪ್ರಮೋದ ಮಹಾಜನ ಅವರು ಅಭಿಪ್ರಾಯಪಟ್ಟರು.ಪಟ್ಟಣದ ತಹಸೀಲ್ದಾರ್ ಕಚೇರಿಯ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಕನ್ನಡದ ಮೊದಲ ಮಹಿಳಾ ಕವಿಯತ್ರಿ ಅಕ್ಕಮಹಾದೇವಿ ಅವರ 896ನೇ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.ಕಾರ್ಯಕ್ರಮದಲ್ಲಿ ಅಕ್ಕಮಹಾದೇವಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವ ಸಮರ್ಪಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಗಣ್ಯರು, 12ನೇ ಶತಮಾನದಲ್ಲಿ ಅಕ್ಕಮಹಾದೇವಿಯವರು ತೋರಿದ ವೈರಾಗ್ಯ ಮತ್ತು ಧೈರ್ಯ ಇಂದಿನ ಮಹಿಳೆಯರಿಗೆ ಹಾಗೂ ಇಡೀ ಸಮಾಜಕ್ಕೆ ದಾರಿದೀಪವಾಗಿದೆ ಎಂದು ಸ್ಮರಿಸಿದರು.ಈ ಸಂಭ್ರಮದ ಕಾರ್ಯಕ್ರಮದಲ್ಲಿ ಬಣಜಿಗ ಸಮಾಜದ ಅಧ್ಯಕ್ಷ ಸಿದ್ದಲಿಂಗ ಸುಬೇದಾರ,ಕಾಂಗ್ರೇಸ ಮುಖಂಡ ಮಲ್ಲಿಕಾರ್ಜುನ ಅಚಲೇರಿ,ಡಾ.ಪ್ರಮೋದ ಮಹಾಜನ, ಶಿವಪ್ಪ ಜಂಗಮಶೆಟ್ಟಿ, ಬಸವರಾಜ ಜಾನಾ, ಮಲ್ಲಿಕಾರ್ಜುನ ಜೋಗೋರ, ಪ್ರಶಾಂತ ನಾಶಿ, ಸೋಮಶೇಖರ ಬಂದೆ, ವಿಶ್ವನಾಥ ಕೊರಳ್ಳಿ, ಈರಪ್ಪ ತೆಲ್ಲೂರ, ಆಕಾಶ…
