Author: editor.udayarashmi@gmail.com

“ವೀಣಾಂತರಂಗ”- ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ – ಗದಗ ತನ್ನ ರಾತ್ರಿ ಪಾಳಿಯ ಎಲ್ಲ ಕೆಲಸಗಳನ್ನು ಪೂರೈಸಿ ತನ್ನ ಜೊತೆ ಓದುತ್ತಿರುವ ಇತರ ಇಂಟರ್ನ್ ಸ್ನೇಹಿತರೊಂದಿಗೆ ರಾತ್ರಿ 2 ಗಂಟೆಗೆ ಊಟ ಮಾಡಿಸೆಮಿನಾರ್ ಹಾಲ್ನಲ್ಲಿ ಓದಲು ಕುಳಿತುಕೊಂಡ ಆ ಮಹಿಳಾ ವೈದ್ಯೆಗೆ ಅದು ತನ್ನ ಜೀವನದ ಅಂತಿಮ ರಾತ್ರಿ ಎಂಬ ಅರಿವೇ ಇರಲಿಲ್ಲ. ರೆಸ್ಪಿರೇಟರಿ ಮೆಡಿಸಿನ್ ನಲ್ಲಿ ಸ್ನಾತಕೋತ್ತರ ಪಿಜಿ ಮಾಡುತ್ತಿರುವ ಆಕೆ ಓದುತ್ತಾ ಕುಳಿತುಕೊಂಡ ಸ್ಥಳದಲ್ಲಿಯೇ ತುಸು ನಿದ್ದೆಗೆ ಜಾರಿದಳು. ಕಳೆದ ಆರೇಳು ವರ್ಷಗಳಿಂದ ಅಲ್ಲಿಯೇ ಕಾರ್ಯ ನಿರ್ವಹಿಸುತ್ತಿದ್ದ ಪೊಲೀಸ್ ಅಧಿಕಾರಿಯೊಬ್ಬ ತನ್ನ ಸಂಬಂಧಿಯೊಬ್ಬರನ್ನು ಅಲ್ಲಿ ದಾಖಲಿಸಿದ್ದು ಅವರನ್ನು ಭೇಟಿಯಾಗಲು ಬಂದನು. ಸೆಮಿನಾರ್ ಹಾಲ್ನಲ್ಲಿ ಆಗ ತಾನೆ ನಿದ್ದೆಗೆ ಜಾರಿದ್ದ ವೈದ್ಯಕೀಯ ವಿದ್ಯಾರ್ಥಿನಿಯನ್ನು ಕಂಡು ಆತನಲ್ಲಿನ ರಾಕ್ಷಸಿ ಪ್ರವೃತ್ತಿ ಎಚ್ಚೆತ್ತು ಆಕೆಯ ಮೇಲೆ ಬಲಾತ್ಕಾರ ಎಸಗಿದನು. ಆತನನ್ನು ಬಹಳಷ್ಟು ವಿರೋಧಿಸಿದ ಆಕೆಯ ಕನ್ನಡಕವನ್ನು ಒಡೆದು ಹಾಕಿದ ಆತ ಆಕೆಯ ಮೇಲೆ ಬರ್ಬರವಾಗಿ ದಾಳಿ ಮಾಡಿದನು. ತುಸು ಹೆಚ್ಚಾಗಿಯೇ ವಿರೋಧಿಸಿದ…

Read More

ಸಿಂದಗಿ: ತಾಲೂಕಿನ ಹಿಕ್ಕನಗುತ್ತಿ ಗ್ರಾಮದ ಲಿಂಗಾಯತ ಮಹಾಮಠದಲ್ಲಿ ಪ್ರಭುಲಿಂಗ ಶರಣರು ಸಿಂದಗಿಯ ನಟ, ನಿರ್ದೇಶಕ ವಿಶ್ವಪ್ರಕಾಶ ಟಿ ಮಲಗೊಂಡ ಅವರಿಗೆ “ಬಸವ ಶ್ರೀರಕ್ಷೆ” ನೀಡಿ ಸನ್ಮಾನಿಸಿ ಗೌರವಿಸಿ ಆಶೀರ್ವದಿಸಿದರು.ಸೋಮವಾರ ನೂಲ ಹುಣ್ಣಿಮೆ ಶಿವಶರಣ ಹಡಪದ ಅಪ್ಪಣ್ಣನವರ ಜಯಂತಿ ಮತ್ತು ಶಿವಶರಣ ನೂಲಿಯ ಚಂದಯ್ಯನವರ ಜಯಂತಿ ಪ್ರಯುಕ್ತ ಮಾಸಿಕ ೬ ಶಿವಾನುಭವ ಕಾರ್ಯಕ್ರಮದಲ್ಲಿ ಅವರು ಸನ್ಮಾನಿಸಿದರು.ಸಹ ಕಲಾವಿದ ಹಾಗೂ ಸಾರಿಗೆ ಇಲಾಖೆಯ ಕೆಎಸ್ ಟಿ ಕಾನ್ಸ್ಟೇಬಲ್ ಈರಣ್ಣ ಹಡಪದ ಅವರಿಗೆ ಸಹ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ತಾರಾಪೂರದ ಮುರಳಿಧರ ಮುತ್ಯಾರು, ಚಿಕ್ಕರೂಗಿಯ ಶರಣ ಈರಣ್ಣ ಶಾಸ್ತ್ರೀಗಳು, ಮಲಕಣ್ಣ ಗೊ ತಳವಾರ, ಸಂಗಣ್ಣ ಬ್ಯಾಕೋಡ, ರಾಷ್ಟ್ರೀಯ ಬಸವದಳ ಮಾಜಿ ಅಧ್ಯಕ್ಷ ಗುರುಪಾದ ತಾರಾಪೂರ, ರವಿರಾಜ ದೇವರಮನಿ, ಕಾನೂನು ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ, ನ್ಯಾಯವಾದಿ ಡಿ ಎ ಚನಗೊಂಡ ಅಧ್ಯಕ್ಷತೆ ವಹಿಸಿದ್ದರು.ಗೋಲಗೇರಿ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಮುರುಗೆಪ್ಪಗೌಡ್ರು ಸಿ ರುದ್ದೇವಾಡಗಿ, ಜಗದೀಶ ಕಲಬುರಗಿ, ಬಿಜೆಪಿ ಮುಖಂಡ ಮುತ್ತು ಶಾಬಾದಿ ಬ್ಯಾಕೋಡ, ಸಿಂದಗಿ ಹ.ಅ.ಸ.ಸೇ.ಸಂಸ್ಥೆ ಅಧ್ಯಕ್ಷ ಮಹಾಂತೇಶ…

Read More

ವಿಜಯಪುರ: ಮುಖ್ಯಮಂತ್ರಿ ಸಿದ್ಧರಾಮಯ್ಯ ಕೂಡಲೇ ರಾಜಿನಾಮೆ ನೀಡಿ ತನಿಖೆ ಎದುರಿಸಬೇಕು, ತಮ್ಮ ಪ್ರಾಮಾಣಿಕ ರಾಜಕಾರಣ ಜೀವನದ ಬದ್ಧತೆಯನ್ನು ಪ್ರದರ್ಶಿಸಬೇಕಾದ ಸಮಯ ಬಂದಿದ್ದು, ಕೂಡಲೇ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ಸಂಸದ ರಮೇಶ ಜಿಗಜಿಣಗಿ ಸಿದ್ಧರಾಮಯ್ಯ ಅವರಿಗೆ ಕಿವಿಮಾತು ಹೇಳಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ ತನಿಖೆಗೆ ಆದೇಶ ನೀಡಿರುವುದರಿಂದ ಮುಖ್ಯಮಂತ್ರಿ ಹುದ್ದೆಯಲ್ಲಿ ಸಿದ್ಧರಾಮಯ್ಯ ಅವರು ಮುಂದುವರೆಯುವುದು ಸರಿಯಲ್ಲ. ಸಿದ್ಧರಾಮಯ್ಯ ಅವರು ದಿ.ರಾಮಕೃಷ್ಣ ಹೆಗಡೆ, ಮಾಜಿ ಪ್ರಧಾನಿ ಎಚ್.ಡಿ. ದೇವೆಗೌಡ, ಜೆ.ಎಚ್. ಪಟೆಲರಂತಹ ಮುತ್ಸದ್ಧಿ ನಾಯಕರ ಗರಡಿಯಲ್ಲಿ ಬೆಳೆದವರು. ನೀವು ಯಾವಾಗಲೂ ನಿಮ್ಮ ರಾಜಕೀಯ ಜೀವನ ತೆರೆದ ಪುಸ್ತಕ ಎಂದೇ ಹೇಳಿಕೊಳ್ಳುತ್ತೀರಿ. ಆದರೆ ಈಗ ಆ ಪುಸ್ತಕ ಕೆಲವು ಪುಟಗಳನ್ನು ಜನರಿಗೋಸ್ಕರ ಮುಚ್ಚಿದ್ದಿರಿ ಎನ್ನುವ ಸಂಶಯ ಬರುತ್ತಿದೆ. ಇಂದು ನೀವು ಮುಡಾ ಹಗರಣದ ಆರೋಪದಲ್ಲಿ ನಿಮ್ಮ ಆಪ್ತರೊಂದಿಗೆ ಸಿಕ್ಕು ಜನತೆಯ ಆಕ್ರೋಶಕ್ಕೆ ಬಲಿಯಾಗುತ್ತಿದ್ದೀರಿ, ಹೀಗಾಗಿ ಎಚ್ಚೆತ್ತುಕೊಳ್ಳುವಂತೆ ಜಿಗಜಿಣಗಿ ಕರೆ…

Read More

ಫೋಟೋ ಜರ್ನಲಿಸ್ಟ್‌ಗಳಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಅಭಿನಂದನೆ ಬೆಂಗಳೂರು: ವಿಶ್ವಛಾಯಾಗ್ರಹಣ ದಿನದ ಅಂಗವಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಕೆ.ಯೂ.ಡಬ್ಲ್ಯು.ಜೆ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಫೋಟೋ ಜರ್ನಲಿಸ್ಟ್‌ಗಳನ್ನು ಅಭಿನಂದಿಸಿತು.ಅಭಿನಂದನಾ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದ, ಛಾಯಾಗ್ರಾಹಕರು ಪತ್ರಿಕೋದ್ಯಮದಲ್ಲಿ ಸುದ್ದಿಯ ಮೂಲ ವ್ಯಕ್ತಿಗಳಾಗಿದ್ದು, ತಮ್ಮದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದ್ದಾರೆ. ಸುದ್ದಿಮನೆಯಲ್ಲಿ ಛಾಯಾಗ್ರಾಹಕರ ಪಾತ್ರ ಮಹತ್ತರವಾಗಿದೆ. ಇದರಿಂದಾಗಿ ಮಾಧ್ಯಮಗಳ ಬೆಳವಣಿಗೆಯೂ ಆಗಿದೆ ಎಂದು ಕರ್ನಾಟಕ ಮಾಧ್ಯಮ ಅಕಾಡಮಿ ಅಧ್ಯಕ್ಷೆ ಆಯೇಷಾ ಖಾನಂ ಅಭಿಪ್ರಾಯಪಟ್ಟರು.ಯುವ ಪತ್ರಕರ್ತರು ಛಾಯಾಗ್ರಾಹಕರೊಂದಿಗೆ ಉತ್ತಮ ಭಾಂದವ್ಯ ಬೆಳೆಸಬೇಕಾದುದು ಇಂದಿನ ಪರಿಸ್ಥಿತಿಗೆ ಅತ್ಯಗತ್ಯ. ಮಾಧ್ಯಮದಲ್ಲಿ ಅವಿಭಾಜ್ಯ ಅಂಗದಂತಿರುವ ಛಾಯಾಗ್ರಾಹಕರ ದೃಷ್ಟಿಕೋನ ನಿಜಕ್ಕೂ ಮಹತ್ವಪೂರ್ಣ ಎಂದರು.ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಸಭೆ, ಸಮಾರಂಭಗಳಲ್ಲಿ ಅಷ್ಟೆ ಅಲ್ಲ, ಪ್ರಕೃತಿ ವಿಕೋಪಗಳ ಸಂಕಷ್ಟ ಮತ್ತು ಸಂಘರ್ಷ ಹಾಗೂ ಅವಘಡಗಳ ಸಂದರ್ಭದಲ್ಲಿಯೂ ಪೋಟೋ ಜರ್ನಲಿಸ್ಟ್‌ಗಳು ಅತ್ಯಮೂಲ್ಯ ಕೆಲಸ ಮಾಡಿ ತಮ್ಮ ವೃತ್ತಿ ಬದ್ದತೆಯನ್ನು ಮೆರೆದಿರುವುದು ಅಭಿನಂದಾರ್ಹವಾದದ್ದು ಎಂದರು.ಮುದ್ರಣ…

Read More

ಕೊಲ್ಹಾರ: ತಾಲೂಕಿನ ನಾಗರದಿನ್ನಿ ಗ್ರಾಮದ ಜಮೀನೊಂದರಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು ಗ್ರಾಮಸ್ಥರಲ್ಲಿ ಆತಂಕವನ್ನುಟ್ಟು ಮಾಡಿದೆ.ರವಿವಾರ ಸಾಯಂಕಾಲ ಗ್ರಾಮದ ರೈತ ಸುರೇಶ ಕುಬಕಡ್ಡಿ ತಮ್ಮ ಜಮೀನಿನಿಂದ ನಾಗರದಿನ್ನಿ ಗ್ರಾಮದಕಡೆಗೆ ಬರುವಾಗ ಮಹಾದೇವ ಕೋಲ್ಕಾರ ಎಂಬ ರೈತರ ಜಮೀನಿನ ಬೇಲಿಯನ್ನು ಚಿರತೆಯು ಹಾರಿ ಗೋವಿನ ಜೋಳದ ಬೇಳೆಯಲ್ಲಿ ಹೋಗುವದನ್ನು ನೋಡಿದ್ದಾರೆ. ಗಾಬರಿಗೊಂಡ ಅವರು ಗ್ರಾಮಕ್ಕೆ ಆಗಮಿಸಿ ಗ್ರಾಮದ ಜನರಿಗೆ ಚಿರತೆ ಇರುವುದನ್ನು ತಿಳಿಸಿದ್ದಾರೆ. ಯುವಕರು ತಕ್ಷಣ ಅರಣ್ಯ ಇಲಾಖೆಗೆ ಹಾಗೂ ತಹಶೀಲ್ದಾರ ಎಸ್.ಎಸ್. ನಾಯಕಲಮಠ ಅವರಿಗೆ ಮಾಹಿತಿ ನೀಡಿದ್ದಾರೆ. ಅರಣ್ಯ ಇಲಾಖೆಯ ಬಸವನಗೌಡ ಬಿರಾದಾರ, ಬಿ.ಎಸ್.ಕೊಣ್ಣೂರ ಹಾಗೂ ಸಿಬ್ಬಂದಿ ಗ್ರಾಮಸ್ಥರೊಂದಿಗೆ ರಾತ್ರಿ ಭೇಟಿ ನೀಡಿ ಪರೀಶೀಲನೆ ನಡೆಸಿದ ಅರಣ್ಯ ಸಿಬ್ಬಂದಿ ಹೆಜ್ಜೆ ಗುರುತಿನ ಚಿತ್ರಗಳನ್ನು ತೆಗೆದುಕೊಂಡ ಹೋಗಿದ್ದಾರೆ.ಬೆಳಗ್ಗೆ ತಹಶೀಲ್ದಾರ ಎಸ್.ಎಸ್. ನಾಯಕಲಮಠ ಹಾಗೂ ಪಿಎಸ್ಐ ಎಂ.ಬಿ. ಬಿರಾದಾರ ಅವರು ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಚರ್ಚಿಸಿ, ಚಿರತೆ ಇರುವುದು ಇನ್ನೂ ದೃಢಪಟ್ಟಿಲ್ಲ ಆದರೂ ಸುತ್ತಮುತ್ತಲಿನ ಗ್ರಾಮಸ್ಥರು ಜಾಗೃತಿಯಿಂದ ಇರಲು ತಿಳಿಸಿದರು. ಹೆಜ್ಜೆ ಗುರುತಿನ ಪರಿಶೀಲನೆಯಿಂದ ಚಿರತೆ ಅಥವಾ…

Read More

ರಾಜ್ಯಪಾಲರನ್ನು ಹಿಂಪಡೆದುಕೊಳ್ಳಲು ರಾಷ್ಟ್ರಪತಿಗಳಿಗೆ ಮನವಿ | ಪ್ರಧಾನಿ ಮೋದಿ, ಸಚಿವ ಕುಮಾರಸ್ವಾಮಿ ಪ್ರತಿಕೃತಿ ದಹನ ವಿಜಯಪುರ: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ವಿರುದ್ಧ ವಿನಾಕಾರಣ ರಾಜ್ಯಪಾಲರು ಪ್ರಾಸಿಕ್ಯೂಷನ್ ತನಿಖೆಗೆ ಆದೇಶಿಸಿರುವ ಕ್ರಮವನ್ನು ಪ್ರಬಲವಾಗಿ ವಿರೋಧಿಸಿರುವ ಕಾಂಗ್ರೆಸ ಪಕ್ಷದ ಕಾರ್ಯಕರ್ತರು ವಿಜಯಪುರದಲ್ಲಿ ಸಚಿವ ಡಾ. ಎಂ.ಬಿ. ಪಾಟೀಲ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.ಮುದ್ದೇಬಿಹಾಳ, ಸಿಂದಗಿ, ಇಂಡಿ ಸೇರಿದಂತೆ ಎಲ್ಲ ತಾಲೂಕುಗಳಿಂದ ಸರಿಸುಮಾರು 20 ಸಾವಿರಕ್ಕೂ ಅಧಿಕ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಜಮಾಯಿಸಿ ಸಿದ್ದರಾಮಯ್ಯನವರೇ ನಾವು ನಿಮ್ಮ ಜೊತೆ ಇದ್ದೇವೆ..’ ಎಂಬ ಸಂದೇಶವನ್ನು ರವಾನಿಸಿದರು. ಅಹಿಂದ ಒಕ್ಕೂಟದ ಮುಖಂಡರು ಸಹ ಈ ಪ್ರತಿಭಟನೆಗೆ ಸಾಥ್ ನೀಡಿದರು. ಸಂವಿಧಾನ ವಿರೋಧಿ ನಡೆ ಅನುಸರಿಸಿದ ರಾಜ್ಯಪಾಲರ ಕ್ರಮ ಖಂಡನಾರ್ಹ, ರಾಜ್ಯಪಾಲ ಹಠಾವೋ.., `ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯುತ್ತಿರುವ ಬಿಜೆಪಿ-ಜೆಡಿಎಸ್ ನಾಯಕರಿಗೆ ಧಿಕ್ಕಾರ..’ ಎಂಬಿತ್ಯಾದಿ ಘೋಷಣೆಗಳು ಪ್ರತಿಭಟನಾ ರ‍್ಯಾಲಿಯುದ್ದಕ್ಕೂ ಮೊಳಗಿದವು.ಸಾವಿರಾರು ಕಾರ್ಯಕರ್ತರು ಕಾಂಗ್ರೆಸ್ ಬಾವುಟ, ಶಲ್ಯ ಧರಿಸಿ, ಅನೇಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾವಚಿತ್ರ ಹಿಡಿದು ಪ್ರತಿಭಟನೆಯಲ್ಲಿ ಭಾಗಿಯಾದರೆ,…

Read More

ಅಫಜಲಪುರ: ಇತ್ತಿಚಿಗೆ ಮೊಬೈಲ್ ಬಳಕೆ ಹೆಚ್ಚಾಗಿ ಅದೇ ಗೀಳಾಗುತ್ತಿದೆ. ವಿದ್ಯಾರ್ಥಿಗಳು ಮೊಬೈಲ್ ವ್ಯಸನ ತಲೆಗೆರಿಸಿಕೊಂಡು ಮೊಬೈಲ್ ನೋಡುವುದಕ್ಕಾಗಿ ತಲೆ ತಗ್ಗಿಸಬೇಡಿ, ಪುಸ್ತಕಗಳನ್ನು ಓದುವುದಕ್ಕಾಗಿ ತಲೆ ತಗ್ಗಿಸಿ ನಾಳೆ ಅದು ನಿಮ್ಮ ತಲೆ ಎತ್ತಿ ನಿಲ್ಲುವಂತೆ ಮಾಡುತ್ತದೆ ಎಂದು ಸಾಹಿತಿ, ಪತ್ರಕರ್ತ ಮಹಿಪಾಲ್‌ರೆಡ್ಡಿ ಮುನ್ನೂರ ಹೇಳಿದರು.ಅವರು ಪಟ್ಟಣದ ಡಾ. ಎಪಿಜೆ ಅಬ್ದುಲ್ ಕಲಾಂ ಕಲಾ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ೨೦೨೪-೨೫ನೇ ಸಾಲಿನ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಹಾಗೂ ಕಲಾಂ ರತ್ನ ಪ್ರಶಸ್ತಿ ಪ್ರಧಾನ ಸಮಾರಂಭ ಉದ್ಘಾಟಿಸಿ ಮಾತನಾಡುತ್ತಾ, ಕಾಲ ಬದಲಾಗಿದೆ, ಹೀಗಾಗಿ ಓದಿನತ್ತ ಹೆಚ್ಚು ಗಮನ ಸಮಯ ಪ್ರಜ್ಞೆಯಿಂದ ಇಟ್ಟುಕೊಂಡು ಓದಿ, ಸುಮ್ಮನೆ ಟೈಂ ಪಾಸ್‌ಗಾಗಿ ಓದುವುದು ಬೇಡ. ಎಂದು ಸಲಹೆ ನೀಡಿದ ಅವರು ಶಿಕ್ಷಣ ಸಂಸ್ಥೆಗಳು ಗುಣಮಟ್ಟದ ಶಿಕ್ಷಣ ನೀಡುವ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ಎಪಿಜೆ ಅಬ್ದುಲ್ ಕಲಾಂ ಕಾಲೇಜನ್ನು ಕಟ್ಟಿ ಬೆಳೆಸುತ್ತಿರುವ ಶಿವಾನಂದ ಚಿಂಚೋಳಿ ಅವರ ಶ್ರಮ ಶ್ಲಾಘನೀಯವಾದುದ್ದು ಎಂದರು.ವಿಶ್ವರಾಧ್ಯ ಶ್ರೀ ಮಳೇಂದ್ರ…

Read More

ಮುದ್ದೇಬಿಹಾಳ: ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಇಲ್ಲಿ ಅಲೆದಾಡುವ ಸಾರ್ವಜನಿಕರಿಗೆ ಸಾಕಷ್ಟು ತೊಂದರೆ ನೀಡುತ್ತಿವೆ. ಕೂಡಲೇ ಈ ಬೀದಿ ನಾಯಿಗಳ ಹಾವಳಿಯನ್ನು ಪುರಸಭೆಯವರು ತಡೆಗಟ್ಟಬೇಕು ಎಂದು ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ ಸೇರಿದಂತೆ ಹಲವರು ಒತ್ತಾಯಿಸಿದ್ದಾರೆ.ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ ಕೆಲವು ದಿನಗಳಿಂದ ಹಲವು ಬೀದಿನಾಯಿಗಳಿಂದ ಸಾರ್ವಜನಿಕರಿಗೆ ಸಾಕಷ್ಟು ತೊಂದರೆ ಆಗುತ್ತಿದೆ. ರಸ್ತೆಯಲ್ಲಿ ಎಲ್ಲಂದರಲ್ಲಿ ಅಲೆದಾಡಿ ವಾಹನ ಸವಾರರಿಗೆ ತೊಂದರೆ ನೀಡುತ್ತಿವೆ. ಕೆಲ ಪಾದಾಚಾರಿಗಳಿಗೆ ಕಚ್ಚಿ ಗಾಯ ಪಡಿಸಿದ ಉದಾಹರಣೆ ಕೂಡ ಇವೆ. ಕಾರಣ ಕೂಡಲೇ ಪುರಸಭೆಯವರು ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಿದರು.ಮುಖಂಡ ಹುಸೇನ ಮಲ್ಲಾ ಮಾತನಾಡಿ ಚಿಕ್ಕ ಮಕ್ಕಳು, ವಿದ್ಯಾರ್ಥಿಗಳು, ವೃದ್ಧರು ಹೀಗೆ ಹಲವು ಜನರಿಗೆ ಈಗಾಗಲೇ ಬೀದಿ ನಾಯಿಗಳು ಕಚ್ಚಿ ಗಾಯಪಡಿಸಿವೆ. ಪಟ್ಟಣದ ಅಂಬೇಡ್ಕರ ವೃತ್ತ ಪ್ರಮುಖ ಮೂರು ರಸ್ತೆಗಳು ಕೂಡುವ ವೃತ್ತವಾಗಿದ್ದರಿಂದ ದಿನಂಪ್ರತಿ ಬಹಳ ವಾಹನಗಳು ಓಡಾಡುತ್ತವೆ. ಈ ನಾಯಿಗಳು ವಾಹನದ ಮಧ್ಯೆ ಬಂದು ಹಲವು ದ್ವಿಚಕ್ರ ವಾಹನ…

Read More

ವಿಜಯಪುರ: ರಕ್ಷಾ ಬಂದನವು ಸಹೋದರ ಮತ್ತು ಸಹೋದರಿಯರ ನಡುವಿನ ಶಾಶ್ವತ ಮತ್ತು ಮಂಗಳಕರ ಬಾಂಧವ್ಯವನ್ನು ಮತ್ತು ಕುಟುಂಬದಲ್ಲಿನ ಒಡಹುಟ್ಟಿದವರ ವಾತ್ಸಲ್ಯವನ್ನು ಆಚರಿಸಲು ವಿಶೇಷ ಸಂದರ್ಭವಾಗಿದೆ. ರಕ್ಷಾ ಬಂಧನ ಪ್ರೀತಿ, ವಿಶ್ವಾಸ ಮತ್ತು ಜವಾಬ್ದಾರಿಯ ಸುಂದರ ಬಂಧವಾಗಿದೆ ಎಂದು ಎಸ್.ಕೆ.ಶಿಂಧೆ ಹೇಳಿದರು.ಜಿಲ್ಲಾ ಬಂಜಾರಾ ವಿದ್ಯಾವರ್ಧಕ ಸಂಘದ ಬಂಜಾರಾ ಪ್ರೌಢ ಶಾಲೆಯಲ್ಲಿ ಸೋಮವಾರದಂದು ಹಮ್ಮಿಕೊಂಡಿದ್ದ ರಕ್ಷಾ ಬಂಧನ ಕಾರ್ಯಕ್ರಮದ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿನಿಯರಿಂದ ರಾಖಿ ಕಟ್ಟುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು. ರಕ್ಷಾ ಬಂಧನ ಆಚರಿಸುವ ಹಿಂದಿನ ಮುಖ್ಯ ಉದ್ದೇಶವು ಸಹೋದರ ಮತ್ತು ಸಹೋದರಿಯ ನಡುವಿನ ಪ್ರೀತಿಯ ಸದ್ಗುಣದ ಬಂಧವನ್ನು ಮಕ್ಕಳಿಗೆ ತಿಳಿಸುವುದಾಗಿದೆ ಎಂದರು.ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಗುರು ಇ.ಡಿ.ಲಮಾಣಿ ಮಾತನಾಡುತ್ತ. ಸಹೋದರತ್ವದ ಮಹತ್ವ ಸಾರುವ ಹಬ್ಬವಾಗಿದೆ. ಸಹೋದರರು ತಮ್ಮ ಅಂಕ-ತಂಗಿಯರಿಂದ ಕೈಗೆ ಕಟ್ಟುವ ದಾರ ರಕ್ಷಾ ಕವಚದ ಸಂಕೇತವಾಗಿರುತ್ತದೆ ಎಂಬ ನಂಬಿಕೆಯಿದೆ. ವಿದ್ಯಾರ್ಥಿಗಳು ಸಾಮೂಹಿಕವಾಗಿ ರಕ್ಷಾ ಬಂಧನದಲ್ಲಿ ಪಾಲ್ಗೊಂಡು ತಮ್ಮ ಸಹೋದರತ್ವದ ಸಂಬಂಧಗಳು ಗಟ್ಟಿಯಾಗಿ ಉಳಿಯಲಿ ಎಂದು ಹೇಳಿದರು.ಈ…

Read More