Author: editor.udayarashmi@gmail.com

ಸಿಂದಗಿ: ಪಟ್ಟಣದ ಸೋಂಪುರ ರಸ್ತೆಯಲ್ಲಿರುವ ಶ್ರೀಗುರು ಕೃಪಾ ಆಂಗ್ಲ ಮಾಧ್ಯಮ ಶಾಲೆಯ ೧ನೆಯ ತರಗತಿಯ ವಿದ್ಯಾರ್ಥಿನಿ ಸಾಹಿತ್ಯ ಮಹಾಂತೇಶ ನೂಲಾನವರ ಹಾಗೂ ಎಲ್‌ಕೆಜಿಯ ಪ್ರೀತಿ ರಾಧಾ ವೇಷದಲ್ಲಿ ಸಂಭ್ರಮಿಸಿದರು. ಸಿಂದಗಿ: ಪಟ್ಟಣದ ಸೋಂಪುರ ರಸ್ತೆಯ್ಲಲಿರುವ ಶ್ರೀಗುರು ಕೃಪಾ ಆಂಗ್ಲ ಮಾಧ್ಯಮ ಶಾಲೆಯ ೩ನೆಯ ತರಗತಿಯ ವಿದ್ಯಾರ್ಥಿ ಸಾತ್ವೀಕ ಮಹಾಂತೇಶ ನೂಲಾನವರ ಶ್ರೀಕೃಷ್ಣನ ವೇಷದಲ್ಲಿ ಕಾಣಿಸಿಕೊಂಡನು.

Read More

ಸಿಂದಗಿ: ಮಕ್ಕಳಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಬೆಳೆಸುವ ಪ್ರಯತ್ನವಾಗಿ ಮತ್ತು ಅವರಲ್ಲಿರುವ ಪ್ರತಿಭೆಯನ್ನು ಗುರುತಿಸಿ ಬೆಳೆಸುವ ಉದ್ದೇಶದಿಂದ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಶಿಕ್ಷಕ ಪ್ರಸನ್ನ ಕುಲಕರ್ಣಿ ಹೇಳಿದರು.ಪಟ್ಟಣದ ಸೋಂಪುರ ರಸ್ತೆಯ್ಲಲಿರುವ ಶ್ರೀಗುರು ಕೃಪಾ ಆಂಗ್ಲ ಮಾಧ್ಯಮ ಶಾಲೆಯ ವತಿಯಿಂದ ಹಮ್ಮಿಕೊಂಡ ಶ್ರೀಕೃಷ್ಣ ಜನ್ಮಾಷ್ಟಮಿಯ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.ಈ ವೇಳೆ ಶಾಲೆಯ ಮುಖ್ಯಗುರುಮಾತೆ ಹೇಮಾ ಪೋದ್ದಾರ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಇದೇ ಸಂದರ್ಭದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ನಿಮಿತ್ಯವಾಗಿ ಹಮ್ಮಿಕೊಂಡ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಆಡಳಿತಾಧಿಕಾರಿ ಹಣಮಂತ ಪೋದ್ದಾರ, ಶಿಕ್ಷಕರಾದ ಶೃತಿ ಕುಲಕರ್ಣಿ, ಹರೀಶ ಪೊದ್ದಾರ, ವಿಶಾಲ ಹಿರೇಮಠ, ಸವಿತಾ ಬನಗುಂಡಿ, ಭಾರತಿ ಬಿರಾದಾರ, ಪೂಜಾ ದಸ್ಮಾ, ಆಲಿಯಾ ಸೀತನೂರ, ವರ್ಷಾ ಜೋಷಿ, ಮಯೂರಿ ಜಮಾದಾರ, ರೇಣುಕಾ ಬಿರಾದಾರ, ಸಹನಾ ಪರೂತಿ, ನೇತ್ರಾ ವಸ್ತçದ, ಆರ್.ಬಿ.ಬಿರಾದಾರ, ಬಸು ಮಾಳೆಗಾರ ಶಶೀಧರ ಸೇರಿದಂತೆ ಶಾಲೆಯ ಬೋಧಕ-ಬೋಧಕೇತರ ಸಿಬ್ಬಂದಿಗಳು ಇದ್ದರು.ವಿದ್ಯಾನಿಕೇತನ ಶಾಲೆ:ಪಟ್ಟಣದ ಹೂಗಾರ ಲೇಔಟ್‌ನಲ್ಲಿರುವ ವಿದ್ಯಾನಿಕೇತನ ಶಾಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಕಾರ್ಯಕ್ರಮ…

Read More

ಮುದ್ದೇಬಿಹಾಳ: ಅಂತಸ್ತು, ಐಶ್ವರ್ಯ, ಆರೋಗ್ಯವನ್ನು ಎಲ್ಲರೂ ಪಡೆಯಬಹುದು ಆದರೆ ಕೀರ್ತಿ ಪಡೆಯುವದು ಅಷ್ಟೊಂದು ಸುಲಭವಲ್ಲ ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಹೇಳಿದರು.ಪಟ್ಟಣದ ಹುಡ್ಕೋ ಬಡಾವಣೆಯಲ್ಲಿರುವ ತಮ್ಮ ಗೃಹ ಕಚೇರಿಯಲ್ಲಿ ಸಾಧಕರಾದ, ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ, ವೀರಶೈವ ಮಹಾ ಸಭಾ ತಾಲೂಕು ಅಧ್ಯಕ್ಷ ವೆಂಕನಗೌಡ ಪಾಟೀಲ ಮತ್ತು ವಾಣಿಜ್ಯ ರತ್ನ ಪ್ರಶಸ್ತಿ ಪುರಸ್ಕೃತ ಶರಣು ಸಜ್ಜನ ಈ ಮೂವರಿಗೆ ಸನ್ಮಾನಿಸಿ ಗೌರವಿಸಿ ಅವರು ಮಾತನಾಡಿದರು.ಸಾಧಕರನ್ನು ಗುರುತಿಸುವ ಮತ್ತು ಸಾಧಕರ ಸಾಧನೆ ಇತರರಿಗೆ ಪ್ರೇರಣೆಯಾಗಲಿ ಎನ್ನುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸನ್ಮಾನಿತರಾದ ಈ ಮೂವರು ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸುತ್ತಾರೆ ಎಂಬ ಭರವಸೆ ನಮಗಿದೆ ಎಂದರು.ನಮ್ಮಲ್ಲಿ ಯಾವುದೇ ಸಮಾಜಮುಖಿ ಕಾರ್ಯಕ್ರಮಗಳು ನಡೆದರೆ ಅಲ್ಲಿ ಜಾತಿ, ಮತ, ಪಂಥ, ಪಕ್ಷ ಎನ್ನದೇ ಎಲ್ಲರೂ ಮುಂಚೂಣಿಯಲ್ಲಿ ನಿಂತು ನಮ್ಮೂರಿಗೆ ಒಳ್ಳೆಯ ಹೆಸರು ಬರಲಿ ಎಂದು ಆ ಕಾರ್ಯಕ್ರಮವನ್ನು ರಾಜ್ಯವನ್ನೇ ತಿರುಗಿ ನೋಡುವಂತೆ ಯಶಸ್ವಿ ಮಾಡುತ್ತೀರಿ ಇದು ಅತ್ಯಂತ ಸಂತೋಷದ ವಿಷಯ. ಅದಕ್ಕೆ ಪಕ್ಷ ಪಂಗಡ ಎನ್ನದೇ…

Read More

ಮುದ್ದೇಬಿಹಾಳ: ತಾಲ್ಲೂಕಿನ ಜಟ್ಟಗಿ ತಾಂಡಾದಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿ ನಿಮಿತ್ಯ ವಿಶೇಷ ಮೋಸರ ಗಡಿಗೆ ಒಡೆಯುವ ಮೂಲಕ ಅತ್ಯಂತ ಅದ್ಧೂರಿಯಿಂದ ಆಚರಿಸಲಾಯಿತು. ಈ ವೇಳೆ ಮುಖಂಡರಾದ ರಾಮಪ್ಪ ಲಮಾಣಿ, ಶಿಕ್ಷಕ ಹಣಮಂತ ರಾಠೋಡ, ಮಲ್ಲೇಶ ಚವ್ಹಾಣ, ಸುಭಾಸ ಚವ್ಹಾಣ, ಶಿಕ್ಷಕ ಲಕ್ಷ್ಮಣ ರಾಠೋಡ, ಬಸವರಾಜ ರಾಠೋಡ, ರಾಮು ನಾಯಕ, ಭೀಮು ನಾಯಕ, ಮೋತಿಲಾಲ ರಾಠೋಡ, ಚಂದ್ರಶೇಖರ ರಾಠೋಡ ಸಿದ್ರಾಮ ಕೇಶಪ್ಪ ರಾಠೋಡ, ಶಿವಾನಂದ ಲಮಾಣಿ, ಪೂಜಾರಿ ಹರಿಶ್ಚಂದ್ರ ರಾಠೋಡ, ಪೂಜಾರಿ ಕೃಷ್ಣಾ ರಾಠೋಡ, ಶಿವಾಜಿ ರಾಠೋಡ ಮಲ್ಲು ರಾಠೋಡ, ಸೇರಿದಂತೆ ಮತ್ತಿತರರು ಇದ್ದರು.

Read More

ಮುದ್ದೇಬಿಹಾಳ: ಮಕ್ಕಳ ವರ್ತನೆಯ ಬಗ್ಗೆ ಸದಾ ಗಮನವಿರಬೇಕು ಎಂದು ಪ್ರೌಢ ಶಾಲಾ ಮುಖ್ಯಗುರು ರಾಮಚಂದ್ರ ಹೆಗಡೆ ಹೇಳಿದರು.ಪಟ್ಟಣದ ಜ್ಞಾನ ಭಾರತಿ ವಿದ್ಯಾ ಮಂದಿರದಲ್ಲಿ ಆಯೋಜಿಸಿದ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಮಕ್ಕಳಿಗೆ ಕೃಷ್ಣ ರಾಧೆಯ ಪಾತ್ರ ಹಾಕಿಸಿ ಪೋಟೊ ತೆಗೆದು ಖುಷಿ ಪಡುವದು ಈ ದಿನಕ್ಕೆ ಮಾತ್ರ ಸೀಮಿತವಾಗವಾಗಬಾರದು. ಪ್ರತಿ ದಿನ ಒಳ್ಳೆಯ ಪುರಾಣ ಪುರುಷರ ಕಥೆಯನ್ನು ಹೇಳುತ್ತಿರಬೇಕು. ಇದರಿಂದ ಸಂಸ್ಕೃತಿ ಭರಿತ ಸದ್ಬಾವನೆಯುಕ್ತ ಜ್ಞಾನ ಒದಗುತ್ತದೆ. ಚಿಕ್ಕಂದಿನಿಂದಲೇ ಉತ್ತಮ ಪ್ರವೃತ್ತಿ ರೂಢಿಸಿಕೊಂಡಲ್ಲಿ ಮನೆಯಿಂದ ಹಿಡಿದು ದೇಶಕ್ಕೆ ಭಾರವಾಗದೆ ಕೀರ್ತಿ ತರುವಂತ ಪ್ರಜೆ ಆಗಲು ಸಾಧ್ಯವಾಗುತ್ತದೆ ಎಂದರು.ಸಂಸ್ಥೆಯ ನಿರ್ದೇಶಕ ಡಾ. ಪರಶುರಾಮ ಪವಾರ ಅಧ್ಯಕ್ಷತೆ ವಹಿಸಿದ್ದರು.ಮಾತೃ ಭಾರತಿ ಪರಿಷತ್ತಿನ ಅಧ್ಯಕ್ಷರಾದ ಶ್ರೀದೇವಿ ಪತ್ತಾರ, ಪರಿಷತ್ತಿನ ಕಾರ್ಯದರ್ಶಿ ರಶ್ಮಿ ತೇಲಂಗಿ, ಉಪನ್ಯಾಸಕ ವಿ.ವಿ.ಪಾಟೀಲ, ಶಿಕ್ಷಕರುಗಳಾದ ಎಸ್.ಎಸ್.ಹಂಜಗಿ, ಅನ್ನಪೂರ್ಣ ನಾಗರಾಳ, ಮಂಜುನಾಥ ಪಡದಾಳಿ, ಆರ್.ಜೆ.ಸಾಗರ, ಕೀರ್ತಿ ತಳಗೇರಿ, ಕಿರಣ ಕಡಿ, ಇಂದು ನಾಯಕ, ಶಿವಶಂಕರಯ್ಯ ಮಠ, ಬಿ.ಆರ್.ಬೆಳ್ಳಿಕಟ್ಟಿ, ಲೋಹಿತ ಜೈನಾಪೂರ, ಬಿ.ಟಿ.ಭಜಂತ್ರಿ, ರೂಪಾ ನಾಟಿಕರ,…

Read More

ವಿಜಯಪುರ: ಸೋಂದಾ ಸ್ವರ್ಣವಲ್ಲೀಯ ಪೂಜ್ಯಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮಿಜಿಗಳು ಹಮ್ಮಿಕೊಂಡಿರುವ ಭಗವದ್ಗೀತಾ ಅಭಿಯಾನದ ಪ್ರಶಿಕ್ಷಣ ವರ್ಗ ನಗರದ ಶ್ರೀ ಶಂಕರ ಮಠದಲ್ಲಿ ಜರುಗಿತು.ಮಾತೆಯರು ವಿದ್ಯಾರ್ಥಿನಿಯರನ್ನು ಒಳಗೊಂಡಂತೆ ೮೫ ಜನ ಭಾಗವಹಿಸಿದ್ದರು.ಸೋಂದಾ ಸ್ವರ್ಣವಲ್ಲೀ ಸಂಸ್ಥಾನದಿಂದ ಮೂವರು ಸಹೋದರಿಯರು ಆಗಮಿಸಿ ಪ್ರಶಿಕ್ಷಣ ನೀಡಿದರು. ಅರುಣ ಸೋಲಾಪುರಕರ್, ಅರುಣ ಶಹಾಪುರ, ಶ್ರೀಹರಿ ಗೊಳಸಂಗಿ, ಶ್ರೀಮತಿ ಡಾಕ್ಟರ್ ಜಯಶ್ರೀ ಮುಂಡೇವಾದಿ, ಶ್ರೀಮತಿ ಭುವನೇಶ್ವರಿ ಕೋರವಾರ ಭಾಗವಹಿಸಿದ್ದರು.ಪ್ರಾಸ್ತಾವಿಕವಾಗಿ ಶ್ರೀರಾಮ ಭಟ್ ಮಾತನಾಡಿದರು.ಇದೇ ಸಂದರ್ಭದಲ್ಲಿ ಬಿಜೆಪಿ ಯುವ ನಾಯಕರಾದ ಉಮೇಶ ಕಾರಜೋಳ ಅವರು ನೀಡಿದ ಹತ್ತು ಸಾವಿರ ಭಗವದ್ಗೀತೆಗಳನ್ನು ಬಿಡುಗಡೆ ಮಾಡಲಾಯಿತು.ಶಂಕರ ಮಠದ ಅಧ್ಯಕ್ಷರಾದ ಮಹೇಶ ದೇಶಪಾಂಡೆ, ಅಭಿಯಾನದ ಸಂಘಟನಾ ಕಾರ್ಯದರ್ಶಿ ಸಂಗನಗೌಡ ಪಾಟೀಲ್ ಉಪಸ್ಥಿತರಿದ್ದರು.

Read More

ಆಲಮಟ್ಟಿ: ಸಮೀಪದ ಬೇನಾಳ ಆರ್.ಎಸ್. ಗ್ರಾಮದ ವಾಕ್ ಸಿದ್ಧಿಪುರುಷ ರಾಮಣ್ಣ ಮುತ್ಯಾರವರ ೭೧ ನೇ ಪುಣ್ಯಸ್ಮರಣೆ ಆ.೨೬ ಸೋಮವಾರ ಜರುಗಲಿದೆ.ಬೆಳಿಗ್ಗೆ ರಾಮಣ್ಣ ಮುತ್ಯಾರ ಗದ್ದುಗೆಗೆ ಅಭಿಷೇಕ ಸೇರಿದಂತೆ ನಾನಾ ಧಾರ್ಮಿಕ ಕಾರ್ಯಗಳು ಜರುಗಲಿವೆ.ಬೆಳಿಗ್ಗೆ ೧೧ ಗಂಟೆಯಿಂದ ಸಂಜೆಯವರೆಗೆ ಸಂಗ್ರಾಣಿ ಕಲ್ಲು ಸಿಡಿ ಹೊಡೆಯುವ ಸ್ಪರ್ಧೆ, ತೆಕ್ಕೆ ಬಡಿಯುವ ಸ್ಪರ್ಧೆ, ಕಲ್ಲು ವತಗಲ್ಲು ಮಾಡುವ ಸ್ಪರ್ಧೆ, ಉಸುಕಿನ ಚೀಲ ಎತ್ತುವ ಸ್ಪರ್ಧೆ, ಜೋಳದ ಚೀಲ ಬೈಟೆಕ್ ಮಾಡುವ ಸ್ಪರ್ಧೆ ಸೇರಿದಂತೆ ನಾನಾ ಗ್ರಾಮೀಣ ಸ್ಪರ್ಧೆಗಳು ಜರುಗಲಿವೆ. ಮಧ್ಯಾಹ್ನ ಅನ್ನಸಂತರ್ಪಣೆ ಜರುಗಲಿದೆ, ನಾನಾ ಗಣ್ಯರು ಸ್ಮರಣೋತ್ಸವ ಸಂಭ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Read More

ವಿಜಯಪುರ: ಮಹಾನಗರ ಪಾಲಿಕೆ ವತಿಯಿಂದ ಡೇನಲ್ಮ ಅಭಿಯಾನ ಮತ್ತು ಪಿಎಂ ಸ್ವನಿಧಿ ಯೋಜನೆಯಡಿ ನಗರ ಕಲಿಕಾ ಪ್ರಾಯೋಗಿಕ ತರಬೇತಿ ಕಾರ್ಯಕ್ರಮಕ್ಕೆ ಇಂಟರ್‌ನಶಿಪ್ ತರಬೇತಿಗಾಗಿ ಪದವಿ-ಸ್ನಾತಕೋತ್ತರ ಪದವಿ-ಡಿಪ್ಲೋಮಾ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಪದವಿ-ಸ್ನಾತಕೋತ್ತರ ಪದವಿ-ಡಿಪ್ಲೋಮಾದಲ್ಲಿ ವ್ಯಾಸಂಗ ಪೂರ್ಣಗೊಂಡು ೨೦೨೦-೨೧ನೇ ಸಾಲಿನ ನಂತರ ಪದವಿ ಹೊಂದಿದ ಆಸಕ್ತ ಅಭ್ಯರ್ಥಿಗಳು ಆಧಾರ ಕಾರ್ಡ, ಕಾಲೇಜ್ ಐಡಿ, ಆದಾಯ ಮತ್ತು ಜಾತಿ ಆದಾಯ ಪ್ರಮಾಣ ಪತ್ರ, ಪದವಿ-ಸ್ನಾತಕೋತ್ತರ ಪದವಿ- ಡಿಪ್ಲೋಮಾ ಅಂಕಪಟ್ಟಿಯೊಂದಿಗೆ ದಿನಾಂಕ : ೨೯-೦೮-೨೦೨೪ರ ಬೆಳಿಗ್ಗೆ ೧೧-೩೦ರೊಳಗಾಗಿ ಅರ್ಜಿ ಸಲ್ಲಿಸಬೇಕು.ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಮಹಾನಗರ ಪಾಲಿಕೆಯ ಡೇ-ನಲ್ಮ ಶಾಖೆಯನ್ನು ಸಂಪರ್ಕಿಸುವಂತೆ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ವಿಜಯಪುರ: ಪಿಂಚಣಿದಾರರ ಅಹವಾಲು ಆಲಿಸಲು ಹಾಗೂ ಅರ್ಹರಿಗೆ ಪಿಂಚಣಿ ಮಂಜೂರು ಮಾಡುವ ಸಾಮಾಜಿಕ ಭದ್ರತಾ ಯೋಜನೆಯಡಿ ಜಿಲ್ಲೆಯ ೧೩ ಗ್ರಾಮ ಪಂಚಾಯತಿಗಳಲ್ಲಿ ಸೆ.೬ ರಂದು ಬೆಳಿಗೆ ೧೧ ಗಂಟೆಗೆ ಹೋಬಳಿ ಮಟ್ಟದ ಪಿಂಚಣಿ ಅದಾಲತ್ ಹಮ್ಮಿಕೊಳ್ಳಲಾಗಿದೆ ಎಂದು ಎಂದು ಜಿಲ್ಲಾಧಿಕಾರಿ ಟಿ. ಭೂಬಾಲನ್ ತಿಳಿಸಿದ್ದಾರೆ.ಸೆ.೬ರಂದು ಬೆಳಗ್ಗೆ ೧೧ ಗಂಟೆಗೆ ವಿಜಯಪುರ ಉಪವಿಭಾಗಾಧಿಕಾರಿಗಳು ಕುಬಕಡ್ಡಿ ಗ್ರಾಮ ಚಾವಡಿಯಲ್ಲಿ, ಇಂಡಿ ಉಪವಿಭಾಗಾಧಿಕಾರಿಗಳು ಆಲಮೇಲ ತಹಶೀಲ್ದಾರ ಕಾರ್ಯಾಲಯ ಸಭಾ ಭವನದಲ್ಲಿ, ವಿಜಯಪುರದ ಗ್ರೇಡ್-೨ ತಹಶೀಲ್ದಾರ ಅವರು ವಿಜಯಪುರದ ಢೋಬಳೆ ಗಲ್ಲಿಯ ಶ್ರೀ ಈಶ್ವರ ಮಂದಿರ ಸಾಂಸ್ಕೃತಿಕ ಭವನದಲ್ಲಿ, ತಿಕೋಟಾ ಗ್ರೇಡ್-೨ ತಹಶೀಲ್ದಾರ ಅವರು ಇಟ್ಟಂಗಿಹಾಳ ಶ್ರೀ ಅಮೋಘ ಸಿದ್ದೇಶ್ವರ ಕಟ್ಟಡದಲ್ಲಿ, ಬಬಲೇಶ್ವರ ಗ್ರೇಡ್-೨ ತಹಶೀಲ್ದಾರ್ ಅವರು ಕಾರಜೋಳ ಗ್ರಾಮ ಪಂಚಾಯತಿಯಲ್ಲಿ, ಬಸವನಬಾಗೇವಾಡಿ ಗ್ರೇಡ್-೨ ತಹಶೀಲ್ದಾರ ಅವರು ಹಂಗರಗಿ ಹನುಮಾನ ದೇವಸ್ಥಾನದಲ್ಲಿ, ನಿಡಗುಂದಿ ಗ್ರೇಡ್-೨ ತಹಶೀಲ್ದಾರ ಅವರು ವಡವಡಗಿ ಮಾರುತೇಶ್ವರ ದೇವಸ್ಥಾನದಲ್ಲಿ ಪಿಂಚಣಿ ಅದಾಲತ್ ನಡೆಸಲಿದ್ದಾರೆ.ಮುದ್ದೇಬಿಹಾಳ ಗ್ರೇಡ್ ೨ ತಹಶೀಲ್ದಾರ ಅವರು ಗುಂಡಕರ್ಜಗಿ ಬಸವೇಶ್ವರ ದೇವಸ್ಥಾನದಲ್ಲಿ, ತಾಳಿಕೋಟೆ…

Read More

ವಿಜಯಪುರ: ನಗರದ ಕಾಳಿಕಾ ನಗರದಲ್ಲಿ ಆ.೨೩ರಂದು ಅಂದಾಜು ೬ಕೆ.ಜಿ. ಗೋಧಿ ಬಣ್ಣ, ಸಾಧಾರಣ ಮೈಕಟ್ಟು ಹೊಂದಿರುವ ಅನಾಮಧೇಯ ೧೧ ತಿಂಗಳ ನವಜಾತ ಹೆಣ್ಣು ಶಿಶು ಪತ್ತೆಯಾಗಿದ್ದು, ಮಗುವಿನ ಜೈವಿಕ ಪಾಲಕರ ಪತ್ತೆಗಾಗಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.ಪತ್ತೆಯಾದ ಹೆಣ್ಣು ಶಿಶುವಿನ ಪಾಲಕರು ಯಾರಾದರೂ ಇದ್ದಲ್ಲಿ ಈ ಪ್ರಕಟಣೆಯ ೬೦ ದಿನಗಳೊಳಗಾಗಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಬಿ೪/೩ ವಿವೇಕ ನಗರ ಪಶ್ಚಿಮ, ವಿಜಯಪುರ ದೂ: ೦೮೩೫೨-೨೭೬೩೫೪, ಮೊ: ೯೮೮೬೧೨೨೨೯೨ ಸಂಖ್ಯೆಗೆ ಸಂಪರ್ಕಿಸುವಂತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More