ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಅ೨೬ ರಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಾರ್ಷಿಕೋತ್ಸವದ ನಿಮಿತ್ಯ ಹಮ್ಮಿಕೊಳ್ಳಲಾದ ಭವ್ಯ ಪಥಸಂಚಲನವನ್ನು ಇನ್ನಷ್ಟು ಆಕರ್ಷಿತಗೊಳಿಸಲು ಭರ್ಜರಿ ಪೂರ್ವಸಿದ್ಧತಾ ತಯಾರಿ ನಡೆಸಲಾಗುತ್ತಿದೆ.
ಕಳೆದ ಕೆಲ ವರ್ಷಗಳಿಂದ ಪಥ ಸಂಚಲನ ನಡೆಯದ ಹಿನ್ನೆಲೆ ಬೇಜಾರಾಗಿದ್ದ ಸಂಘದ ಕಾರ್ಯಕರ್ತರು ಮತ್ತು ಹಲವು ಹಿಂದೂ ಯುವಕರಿಗೆ ಉತ್ಸಾಹ ಬಂದಂತಾಗಿದೆ. ಬೆಳ್ಳಬೆಳಿಗ್ಗೆ ಪಟ್ಟಣದ ವಿಬಿಸಿ ಮೈದಾನದಲ್ಲಿ ಸೇರಿವ ಅನೇಕ ಕಾರ್ಯಕರ್ತರು ಪೂರ್ವಸಿದ್ಧತಾ ತಯಾರಿಯಲ್ಲಿ ಭಾಗಿಯಾಗಿ ಆವರಣವನ್ನು ಒಂದೆರಡು ಸುತ್ತು ಹಾಕುತ್ತಾರೆ. ಕಿರಿಯ ಕಾರ್ಯಕರ್ತರು, ಹಿರಿಯ ಕಾರ್ಯಕರ್ತರು ಹೇಳಿಕೊಡುವ ತಾಲೀಮುಗಳನ್ನು ಶಿಸ್ತಿನಿಂದ ಪಾಲಿಸುತ್ತಿದ್ದಾರೆ.
ಈ ಕುರಿತು ತಾಲೂಕು ಕಾರ್ಯವಾಹ ಚೇತನ ಮೂಗನೂರ ಮಾತನಾಡಿ, ಅಂದು ಮಧ್ಯಾಹ್ನ ೩ಗಂಟೆಗೆ ಪಟ್ಟಣದ ಹುಡ್ಕೋ ಬಡಾವಣೆಯ ಗವಿಸಿದ್ದೇಶ್ವರ ಕ್ರೀಡಾ ಮೈದಾನದಿಂದ ಶುರುವಾಗುವ ಪಥಸಂಚಲನ ಹೇಮರೆಡ್ಡಿ ಮಲ್ಲಮ್ಮ ವೃತ್ತ, ನ್ಯಾಯಾಲಯದ ಹಿಂದಿನ ಈಶ್ವರ ದೇವಸ್ಥಾನ, ಸ್ಟೇಟ್ ಬ್ಯಾಂಕ್ ರಸ್ತೆ, ಕರ್ನಾಟಕ ಕೋ ಅಪ್ ಬ್ಯಾಂಕ್, ಕಿತ್ತೂರು ರಾಣಿ ಚನ್ನಮ್ಮ ವೃತ್ತ, ಸಂತ ಕನಕದಾಸ ವೃತ್ತ, ವಾಲ್ಮೀಕಿ ವೃತ್ತ, ಲಕ್ಷಿö್ಮÃ ವೆಂಕಟೇಶ್ವರ ದೇವಸ್ಥಾನ, ಛತ್ರಪತಿ ಶಿವಾಜಿ ವೃತ್ತ, ಸಿದ್ರಾಮೇಶ್ವರ ವೃತ್ತ, ನೇತಾಜಿ ಗಲ್ಲಿ, ಕುಂಬಾರ ಗಲ್ಲಿ, ದ್ಯಾಮವ್ವ ದೇವಿ ದೇವಸ್ಥಾನ, ಕಿಲ್ಲಾ ಹೊಸಮಠ, ಸರಾಫ ಬಜಾರ, ಮುಖ್ಯ ಬಜಾರ, ಬಸವೇಶ್ವರ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತ ಮಾರ್ಗವಾಗಿ ವಿಬಿಸಿ ಹೈಸ್ಕೂಲ್ ವರೆಗೆ ಸಾಗಲಿದೆ. ರಸ್ತೆಯುದ್ದಕ್ಕೂ ತಾಯಂದಿರು ತಳಿರು ತೋರಣ, ರಂಗೋಲಿಗಳಿAದ ಅಲಂಕರಿಸಿ ಪವಿತ್ರ ಭಗವಾಧ್ವಜಕ್ಕೆ ಪುಷ್ಪಾರ್ಚನೆ ನೀಡುವ ಮೂಲಕ ಸಂಚಲನಕ್ಕೆ ಸ್ವಾಗತ ಕೋರುವಂತೆ ವಿನಂತಿಸಿದರು.
ಈ ವೇಳೆ ನಗರ ಕಾರ್ಯವಾಹ ಪ್ರಭು ನಂದೆಪ್ಪನವರ ಮಾತನಾಡಿ ಪಥಸಂಚನದಲ್ಲಿ ಭಾಗಿಯಾಗಲು ಇಚ್ಛಿಸುವವರು ಸಂಘದ ಕಾರ್ಯಕರ್ತರಾದ ಸುಭಾಶ ಬಿದರಕುಂದಿ ಅವರ ಮಳಿಗೆಯಲ್ಲಿ ಗಣವೇಶವನ್ನು ಖರೀದಿಸಿ ಭಾಗಿಯಾಗಬಹುದು. ಪಥಸಂಚಲನದ ಬಳಿಕ ಸಂಜೆ ವಿಬಿಸಿ ಹೈಸ್ಕೂಲ್ ಮೈದಾನದಲ್ಲಿ ಸಮಾರಂಭ ಇರಲಿದೆ. ಕಾರ್ಯಕ್ರಮಕ್ಕೆ ಎಲ್ಲರೂ ಭಾಗಿಯಾಗಿ ಶೋಭೆ ತರುವಂತೆ ವಿನಂತಿಸಿದರು.

