Author: editor.udayarashmi@gmail.com

ವಿಜಯಪುರ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ತಪಾಸಣೆ ಹಾಗೂ ಇತರ ಆರೋಗ್ಯ ಸೇವೆ ಸುಧಾರಿಸಲು ಹೆಚ್ಚುವರಿ ಆರೋಗ್ಯ ಕಿಟ್‌ಗಳನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ ವಿತರಣೆ ಮಾಡಿದರು.ಬುಧವಾರ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಆರೋಗ್ಯ ಕಿಟ್‌ಗಳನ್ನು ವಿತರಿಸಿ ಮಾತನಾಡಿದ ಅವರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮಹತ್ವಕಾಂಕ್ಷಿ ಯೋಜನೆಯಾದ ಗ್ರಾಮ ಆರೋಗ್ಯ ಕಾರ್ಯಕ್ರಮವನ್ನು ಗ್ರಾಪಂ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ. ಗ್ರಾಮ ಆರೋಗ್ಯ ಕಾರ್ಯಕ್ರಮದಡಿ ಹೆಚ್ಚಿನ ಸಂಖ್ಯೆಯ ನರೇಗಾ ಕೂಲಿ ಕಾರ್ಮಿಕರನ್ನು ಹೊಂದಿರುವ ಕೆಲವು ಗ್ರಾಪಂ ಗಳ ಅಗತ್ಯವನ್ನು ಪರಿಗಣಿಸಿ ಆದ್ಯತೆಯ ಆಧಾರದ ಮೇಲೆ ಕೆಎಚ್‌ಪಿಟಿ ಸಂಸ್ಥೆಯಿಂದ ಹೆಚ್ಚುವರಿ ಆರೋಗ್ಯ ನಿರ್ವಹಣಾ ಕಿಟ್‌ಗಳನ್ನು ಆಲಮೇಲ ತಾಲೂಕಿನ ಕೋರಹಳ್ಳಿ, ಚಡಚಣ ತಾಲೂಕಿನ ಬರಡೋಲ, ಧೂಳಖೇಡ, ಇಂಚಗೇರಿ, ಜಿಗಜೇವಣಗಿ, ನಂದರಗಿ, ದೇವರ ಹಿಪ್ಪರಗಿ ತಾಲೂಕಿನ ಹರನಾಳ, ಹೊನ್ನಳ್ಳಿ, ಜಾಲವಾದ, ಇಂಡಿ ತಾಲೂಕಿನ ಆಲೂರು, ಅಂಜುಟಗಿ, ಬಬಲಾದ,…

Read More

ಉದಯರಶ್ಮಿ ದಿನಪತ್ರಿಕೆ ಮೋರಟಗಿ: ದಿನದಿಂದ ದಿನಕ್ಕೆ ಮೊಬೈಲ್ ಬಳಕೆ ಹೆಚ್ಚಾದಂತೆ ಜಾನಪದ, ಸಂಸಾರಿಕ ನಾಟಕ ಹಾಗೂ ಬಯಲಾಟಗಳು ಮಾಯವಾಗುತ್ತಿವೆ. ಯುವಕರು ವಿದ್ಯಾಭ್ಯಾಸದ ಜೊತೆಗೆ ಸಂಗೀತದ ಆಸಕ್ತಿ ಹೊಂದಬೇಕು. ಸಂಗೀತಕ್ಕೆ ಜ್ಞಾನ ತುಂಬುವ ಶಕ್ತಿ ಅಡಗಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಗ್ರಾಮ ಪಂಚಾಯತಿ ಆವರಣದಲ್ಲಿ ಮಂಗಳವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಬೆಂಗಳೂರು ಇವರ ಸಹಕಾರದಲ್ಲಿ ಶ್ರೀ ಭಾಗ್ಯವಂತಿ ಸಂಸ್ಕೃತಿಕ ಕಲಾ ನಾಟ್ಯ ಸಂಘದಿಂದ ಹಮ್ಮಿಕೊಂಡ ಜಾನಪದ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಸಂಗೀತ ಕೇಳುವುದರಿಂದ ಮನುಷ್ಯನಿಗೆ ಶಾಂತಿ ನೆಮ್ಮದಿ ಪ್ರಾಪ್ತಿಯಾಗುತ್ತದೆ. ಗ್ರಾಮೀಣ ಭಾಗದಲ್ಲಿ ಸಂಘ ರಚನೆ ಕಾರ್ಯಕ್ರಮ ಆಯೋಜಿಸಿ ಸಂಗೀತದ ಮೂಲಕ ಸಾರ್ವಜನಿಕರಿಗೆ ಜ್ಞಾನ ತುಂಬುತ್ತಿರುವ ಗ್ರಾಪಂ ಅಧ್ಯಕ್ಷರ ಕಾರ್ಯ ಶ್ಲಾಘನೀಯ ಎಂದು ಬಣ್ಣಿಸಿದರು.ಎನ್.ಎನ್.ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿದರು.ಶ್ರೀ ಭಾಗ್ಯವಂತಿ ಸಾಂಸ್ಕೃತಿಕ ನಾಟ್ಯ ಸಂಘದಿಂದ ವಿವಿಧ ರೀತಿಯ ಜಾನಪದ ಕಾರ್ಯಕ್ರಮಗಳು ಜರುಗಿದವು.ಮಹಾಂತ ಸ್ವಾಮಿಗಳು ವಿರಕ್ತಮಠ ಜೇರಟಗಿ, ಬಿಳಿಯನಿಸಿದ್ದ ಒಡಿಯರ್ ಸಾನಿಧ್ಯ ವಹಿಸಿದ್ದರು. ಜಿಪಂ ಮಾಜಿ ಸದಸ್ಯ ಎನ್.ಆರ್.ತಿವಾರಿ, ಎಂ.ಕೆ.ಕಣ್ಣಿ, ಪಿಕೆಪಿಎಸ್ ಅಧ್ಯಕ್ಷ…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ಪಹಣಿಗಳಲ್ಲಿ ವಕ್ಪ್‌ ಬೋರ್ಡ ಹೆಸರು ದಾಖಲಿಸಲು ಮುಂದಾಗಿದ್ದ ರಾಜ್ಯ ಸರಕಾರ ಬಿಜೆಪಿ ಪಕ್ಷದ ಹೋರಾಟಕ್ಕೆ ಮಣಿದು ಪಹಣಿಯಲ್ಲಿ ಸೇರಿಸಿದ್ದ ವಕ್ಫ್ ಹೆಸರನ್ನು ಅಳಿಸಿ ಹಾಕಿದೆ. ಅದಾಗ್ಯೂ ಯಾವುದಾದರೂ ರೈತರ ಪಹಣಿಯಲ್ಲಿ ವಕಪ್ ಬೋರ್ಡ ಹೆಸರು ಉಳಿದಿದ್ದರೆ ಕೂಡಲೆ ಬಿಜೆಪಿ ಮುಖಂಡರ ಗಮನಕ್ಕೆ ತರಬೇಕೆಂದು ಬಿಜೆಪಿ ಮುಖಂಡ ಕಾಸುಗೌಡ ಬಿರಾದಾರ ಹೇಳಿದರು.ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ರೈತರ ಪಹಣಿಯಲ್ಲಿ ವಕಪ್ ಬೋರ್ಡ ಹೆಸರು ತೇಲಿಸಿದ್ದಕ್ಕೆ ಖಂಡಿಸಿ ನ್ಯಾಯಾಂಗದ ಮೊರೆ ಹೋಗಲು ನಿರ್ಧರಿಸಿದ್ದರಲ್ಲದೆ, ದೊಡ್ಡ ಹೋರಾಟದ ಸುಳಿವು ನೀಡಿದ್ದರು. ಅವರ ಹೇಳಿಕೆಗೆ ಬೆದರಿದ ಸರಕಾರ ಕೊನೆಗೂ ಪಹಣಿಗಳಲ್ಲಿನ ವಕಪ್‌ಬೋರ್ಡ ಹೆಸರು ಅಳಿಸಿ ಹಾಕಿದೆ ಎಂದರು.ಭೀಮರಾಯ ಮದರಖಂಡಿ, ಪ್ರಕಾಶ ಬಿರಾದಾರ, ಶ್ರೀಶೈಲಗೌಡ ಬಿರಾದಾರ, ಮಲ್ಲು ಗುಡ್ಲ, ದೇವೆಂದ್ರ ಕುಂಬಾರ, ಅನೀಲಗೌಡ ಬಿರಾದಾರ ಸೇರಿದಂತೆ ಇನ್ನಿತರರು ಇದ್ದರು.

Read More

ಬಂಜಾರ ಆಭರಣ ತಯಾರಿಕಾ ಕಾರ್ಯಾಗಾರದ ಸಮಾರೋಪ | ಪ್ರೊ.ನಾರಾಯಣ ಪವಾರ ಅಬಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಬಂಜಾರ ಆಭರಣ ತಯಾರಿ ಮತ್ತು ಬಂಜಾರಾ ಸಮುದಾಯದ ಕೌಶಲ್ಯಗಳನ್ನು ಇತರರು ಬಳಸಿಕೊಂಡು ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆದಿದ್ದಾರೆ. ಆದರೆ ಬಂಜಾರ ಸಮಾಜವೇ ಮುಂದೆ ಬಂದಿಲ್ಲ. ಸಮುದಾಯವು ಒಟ್ಟಾಗಿ ಒಂದಾಗಿ ಬೆಳೆಯಬೇಕು ಶೆರಿಂಗ್ ಇಜ್ ಕೆರಿಂಗ್ ಆಗಬೇಕು. ಹಾಗೆಯೆ ಯಾವುದೇ ವೃತ್ತಿ ಮಾಡಿದರೂ ನಾವೆಲ್ಲ ಗೋರ್ ಬಂಜಾರರು ಎಂದು ಸಮಾಜ ಚಿಂತಕ, ಡಾ.ಬಾಬು ರಾಜೇಂದ್ರ ನಾಯಕ್ ಸಲಹೆ ನೀಡಿದರು.ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ, ಬೆಂಗಳೂರು ಹಾಗೂ ಗ್ರಾಮ ಪಂಚಾಯತ್, ಬರಟಗಿ ಸಹಕಾರದೊಂದಿಗೆ “೧೦ ದಿನಗಳ ಬಂಜಾರ ಆಭರಣ ತಯಾರಿಕಾ ಕಾರ್ಯಾಗಾರ” ದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.ಇನೋರ್ವ ಮುಖ್ಯ ಅತಿಥಿ ಕ.ರಾ.ಅ.ಮ.ವಿ.ವಿ ಕನ್ನಡ ಅಧ್ಯಯನ ವಿಭಾಗದ ಪ್ರೊ.ನಾರಾಯಣ ಪವಾರ ಮಾತನಾಡಿ, ಬಂಜಾರ ಭಾಷೆಯು ಅದ್ಭುತವಾದ ವ್ಯಾಕರಣಾಂಶಗಳನ್ನು ಹೊಂದಿರುವ ಭಾಷೆಯಾಗಿದೆ. ಲಂಬಾಣಿ ಮಹಿಳೆಯರ ಸೌಭಾಗ್ಯದ ಸಂಕೇತವಾದ ಆಭರಣ ತಯಾರಿಸುವ ನೀವುಗಳು ಶ್ರೇಷ್ಠ ಕಲಾವಿದರು ಎಂದರು.ಕನ್ನಡ…

Read More

ಲೇಖನ- ಶ್ರೀಮತಿ ವೀಣಾ ಹೇಮಂತ್ ಗೌಡ ಪಾಟೀಲ, ಮುಂಡರಗಿ – ಗದಗ ಉದಯರಶ್ಮಿ ದಿನಪತ್ರಿಕೆ “ಅಸತೋಮಾ ಸದ್ಗಮಯತಮಸೋಮ ಜ್ಯೋತಿರ್ಗಮಯಮೃತ್ಯೋರ್ಮ ಅಮೃತಂಗಮಯಓಂ ಶಾಂತಿ ಶಾಂತಿ ಶಾಂತಿಃ” ಅಸತ್ಯದಿಂದ ಸತ್ಯದೆಡೆಗೆ, ಕತ್ತಲಿನಿಂದ ಬೆಳಕಿನೆಡೆಗೆ, ಮೃತ್ಯುತ್ವದಿಂದ ಅಮರತ್ವದೆಡೆಗೆ ನಮ್ಮನ್ನು ಕೊಂಡೊಯ್ಯುವ ಜ್ಯೋತಿ ಸ್ವರೂಪಕ್ಕೆ ನಮಸ್ಕಾರಗಳು.ಮನುಷ್ಯ ಜೀವನದ ಏಕತಾನತೆಯನ್ನು ಕಳೆಯುವ ಆಚರಣೆಗಳೇ ಹಬ್ಬಗಳು, ಆ ಹಬ್ಬಗಳ ಆಚರಣೆಯಲ್ಲಿರುವ ವೈವಿಧ್ಯತೆಗಳು, ಹಬ್ಬದ ಹಿಂದಿರುವ ಆಶಯಗಳು, ನಮ್ಮಲ್ಲಿ ಹೊಸ ಹುರುಪನ್ನು, ಭರವಸೆಯನ್ನು ತುಂಬುತ್ತವೆ.ಭಾರತೀಯ ಜೀವನ ಪದ್ಧತಿಯಲ್ಲಂತೂ ಹಬ್ಬಗಳು ತುಸು ಹೆಚ್ಚೇ.ಬಹುಶಃ ಜಗತ್ತು ಕಂಡು ಕೇಳರಿಯದಷ್ಟು ಧರ್ಮಗಳು, ಜಾತಿಗಳು, ಉಪಜಾತಿಗಳು ನಮ್ಮ ಭರತ ಖಂಡದಲ್ಲಿವೆ. ಹೀಗಾಗಿ ಆಯಾ ಧರ್ಮದ, ಜಾತಿಯ ನಂಬಿಕೆಯ ಆಚರಣೆಗಳು ಕಾಲಕ್ರಮೇಣ ಹಬ್ಬದ ರೂಪವನ್ನು ಕಂಡುಕೊಂಡಿವೆ.ರಾಮನು ಸ್ವರ್ಣಲಂಕೆಯಲ್ಲಿ ರಾಕ್ಷಸೇಂದ್ರ ರಾವಣನನ್ನು ಕೊಂದು, ಆತನ ಸಹೋದರ ವಿಭೀಷಣನಿಗೆ ಪಟ್ಟ ಕಟ್ಟಿ, ಅಯೋಧ್ಯೆಯೆಡೆಗೆ ಪ್ರಯಾಣ ಬೆಳೆಸಿದ. ಕಾರ್ತಿಕದ ಆ ಕತ್ತಲಿನಲ್ಲಿ ರಾಮನ ಸ್ವಾಗತಕ್ಕಾಗಿ ಇಡೀ ಅಯೋಧ್ಯಾ ರಾಜ್ಯವೇ ದೀಪವನ್ನು ಹಚ್ಚಿ ಸ್ವಾಗತ ಕೋರಿತು. ಅದರ ಸವಿ ನೆನಪಿನ ದಿನವೇ ದೀಪಾವಳಿ. ದೀಪಾವಳಿ…

Read More

ಸ್ನೇಹಸಂಭ್ರಮ ಹಾಗೂ ಗುರುವಂದನಾ ಕಾರ್ಯಕ್ರಮ | ಸಾಹಿತಿ, ಪ್ರಾಧ್ಯಾಪಕ ಡಾ. ಯಶವಂತ ಕೊಕ್ಕನವರ ಅಭಿಮತ ಉದಯರಶ್ಮಿ ದಿನಪತ್ರಿಕೆ ಚಿಮ್ಮಡ: ಇಂದಿನ ವಿದ್ಯಾರ್ಥಿ-ಶಿಕ್ಷಕರ ಮನಸ್ಸುಗಳು ವಾಣಿಜ್ಯಕರಣಗೊಂಡ ಪರಿಣಾಮ ಶಿಕ್ಷಕರಿಗೆ ವಿದ್ಯಾರ್ಥಿಗಳ ಮೇಲೆ ಮಮತೆಯಿಲ್ಲ, ವಿದ್ಯಾರ್ಥಿಗಳಿಗೆ ಶಿಕ್ಷಕರ ಮೇಲೆ ಗೌರವವಿಲ್ಲದಂತಾಗಿರುವುದು ವಿಷಾದನೀಯ ಸಂಗತಿಯಾಗಿದೆ ಎಂದು ವಿಜಯಪುರ ಅಕ್ಕ ಮಹಾದೇವಿ ವಿಶ್ವವಿದ್ಯಾಲಯದ ಜಮಖಂಡಿ ಸ್ನಾತಕೋತ್ತರ ಕೇಂದ್ರದ ಕನ್ನಡ ಪ್ರಾಧ್ಯಾಪಕ, ಸಾಹಿತಿ ಡಾ. ಯಶವಂತ ಕೊಕ್ಕನವರ ಅಭಿಪ್ರಾಯ ವ್ಯಕ್ತಪಡಿಸಿದರು.ಗ್ರಾಮದ ಸರಕಾರಿ ಮಾದರಿ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯ ಸಭಾ ವೇದಿಕೆಯಲ್ಲಿ ರವಿವಾರ ಹಮ್ಮಿಕೊಳ್ಳಲಾಗಿದ್ದ ಸ್ನೇಹಸಂಭ್ರಮ ಹಾಗೂ ಗುರುವಂದನಾ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಕೇವಲ ಜ್ಞಾನದಿಂದ ಮಾತ್ರ ಜಗತ್ತು ಗೆಲ್ಲಲು ಸಾದ್ಯವಿಲ್ಲ ಜ್ಞಾನದೊಂದಿಗೆ ಪ್ರೀತಿಸುವ ಹೃದಯ ಬೇಕು, ಇಂದು ಹೃದಯಕ್ಕೆ ಶಿಕ್ಷಣ ನೀಡದ ಪರಿಣಾಮ ತಂದೆ, ತಾಯಿ, ಗುರುವಿನ ಮೇಲಿನ ಗೌರವ ಕಡಿಮೆಯಾಗುತ್ತಿದೆ ಇದಕ್ಕೆ ಬಯಸಿ ವೃತ್ತಿ ಆಯ್ಕೆಮಾಡಿಕೊಳ್ಳದೆ ಅನಿವಾರ್ಯವಾಗಿ ಶಿಕ್ಷಕರಾದವರೇ ಹೆಚ್ಚಾಗಿರುವುದರ ಪರಿಣಾಮ ಸಮತೋಲನದ ಶಿಕ್ಷಣ ಮಾಯವಾಗಿದೆ ಎಂದರು.ಕಾರ್ಯಕ್ರಮದ ಸಾನಿಧ್ಯವಹಿಸಿದ ವಿರಕ್ತಮಠದ ಶ್ರೀ…

Read More

ಉದಯರಶ್ಮಿ ದಿನಪತ್ರಿಕೆ ಹೊನವಾಡ: ಗ್ರಾಮದ ಒಂದಿಂಚು ರೈತರ ಭೂಮಿಯನ್ನು ವಕ್ಪಗೆ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ. ಈಗಾಗಲೇ ಕೇಂದ್ರ ಸರಕಾರವು ಪ್ರಧಾನ ಮಂತ್ರಿ ಮೋದಿಯು ಇದಕ್ಕೊಂದು ಇತಿಶ್ರೀ ಹಾಡಿಯಾಗಿದೆ. ಯಾರೂ ಭಯಪಡುವ ಅಗತ್ಯವೇ ಇಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ, ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಹೇಳಿದರುತಿಕೋಟಾ ತಾಲ್ಲೂಕಿನ ಹೊನವಾಡ ಗ್ರಾಮಕ್ಕೆ ಬಿಜೆಪಿ ರಾಜ್ಯ ತಂಡದೊಂದಿಗೆ ಭೇಟಿ ನೀಡಿ, ಗ್ರಾಮಸ್ಥರಿಂದ ಮನವಿ ಪತ್ರಗಳನ್ನು ಸ್ವೀಕರಿಸಿ ಅವರು ಮಾತನಾಡಿದರು.ಹೊನವಾಡ ಗ್ರಾಮದ ಸುಮಾರು 1470 ಎಕರೆ ಸಾಗುವಳಿ ಹೊಲವು ವಕ್ಪಗೆ ಸೇರಿಸಲಾಗಿರುತ್ತದೆ. ಇದನ್ನು ಸರಿಪಡಿಸಬೇಕು. ಜಿಲ್ಲಾ ಉಸ್ತುವಾರಿ ಸಚಿವರು ಸರಿಯಾದ ಮಾಹಿತಿ ನೀಡುತ್ತಿಲ್ಲ, ಇದಕ್ಕೆ ಕಾಂಗ್ರೆಸ್ ಸರಕಾರದ ಕೈವಾಡವಿದೆ, ಮುಸ್ಲಿಂಮರು ಕೂಡ ಸಹೋದರತೆಯಿಂದ ಇರಬೇಕು ಎಂದು ಬಿಜೆಪಿ ಮುಖಂಡ ವಿಜೂಗೌಡ ಪಾಟೀಲ ಹೇಳಿದರು.ಹಿಂದೂ ಸಮಾಜ ಒಂದಾಗಬೇಕಾಗಿದೆ. ಹಿಂದೂಗಳು ಜಾಗೃತಗೊಳ್ಳಬೇಕಾಗಿದೆ. ಮುಸ್ಲಿಂರು ಹಿಂದೂಗಳ ಭೂಮಿಯನ್ನು ತೆಗೆದುಕೊಳ್ಳುವುದಿಲ್ಲ, ಇದು ಅವರ ಪ್ರಕಾರ ಹರಾಮ್ ಆಗಿದೆ ಎಂದು ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜಾ ಹೇಳಿದರುಈ ಸಮಯದಲ್ಲಿ ವೇದಿಕೆಯ ಮೇಲೆ ಹುಬ್ಬಳ್ಳಿಯ…

Read More

ಕರ್ನಾಟಕ ರಾಜ್ಯ ಸರಕಾರಿ ಹಾಸ್ಟೇಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಬೇಡಿಕೆಗಳು ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ರಾಜ್ಯ ಸರಕಾರಿ ಹಾಸ್ಟೇಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘ ಬೆಂಗಳೂರು ಜಿಲ್ಲಾ ಸಮಿತಿ ವಿಜಯಪುರ ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ವಿಜಯಪುರ ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಿಷಿ ಆನಂದ ಅವರಿಗೆ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರಕಾರಿ ಹಾಸ್ಟೇಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘ ಬೆಂಗಳೂರು ಜಿಲ್ಲಾ ಸಮಿತಿ ವಿಜಯಪುರ ಜಿಲ್ಲಾಧ್ಯಕ್ಷ ಹುಲಗಪ್ಪ ಎಚ್. ಚಲವಾದಿ ಮಾತನಾಡಿ, ಜಿಲ್ಲೆಯಲ್ಲಿರುವ ಸಮಾಜ ಕಲ್ಯಾಣ ಇಲಾಖೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಕ್ರೈಸ್ ಇಲಾಖೆ ನಿಲಯ ಮತ್ತು ವಸತಿ ಶಾಲೆಗಳಲ್ಲಿ ಕೆಲಸ ನಿರ್ವಹಿಸುತ್ತೀರುವ ಹೊರಗುತ್ತಿಗೆ ನೌಕರರ ಬಾಕಿ ವೇತನ ಪಾವತಿಸದೇ ಇರುವುದರಿಂದ ನೌಕರರು ಅತ್ಯಂತ ಸಂಕಷ್ಟದಲ್ಲಿ ಒದ್ದಾಡುತ್ತಿದ್ದಾರೆ. ಅಲ್ಲದೇ ಸಿಬ್ಬಂದಿ ಕಡಿತ ಮಾಡಿರುವುದರಿಂದ ಕೆಲಸದ ಹೋರ ಹೆಚ್ಚಾಗಿ ಅನಾರೋಗ್ಯದಿಂದ…

Read More

ಹೊನ್ನುಟಿಗಿ ಗ್ರಾಮದಲ್ಲಿ ಉದ್ಯೋಗ ಖಾತರಿ ನಡಿಗೆ ಸಬಲತೆಯೆಡೆಗೆ ಅಭಿಯಾನ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ತಾಲೂಕಿನ ಹೊನ್ನುಟಿಗಿ ಗ್ರಾಮದಲ್ಲಿ ಮನರೇಗಾ ಯೋಜನೆಯ ಮಾಹಿತಿ, ಶಿಕ್ಷಣ & ಸಂವಹನ (ಐಇಸಿ) ಕಾರ್ಯಕ್ರಮದಡಿ ಉದ್ಯೋಗ ಖಾತರಿ ನಡಿಗೆ ಸಬಲತೆಯೆಡೆಗೆ ಅಭಿಯಾನದ ಅಂಗವಾಗಿ ಮನೆ-ಮನೆಗೆ ಭೇಟಿ ಕಾರ್ಯಕ್ರಮಕ್ಕೆ ಸಹಾಯಕ ನಿರ್ದೇಶಕ ಕಾಸಿಮಸಾಬ ಮಸಳಿ ಚಾಲನೆ ನೀಡಿ ಮಾತನಾಡಿದರು.ಸರಕಾರದ ನಿರ್ದೇಶನದಂತೆ ೨೦೨೪-೨೫ನೇ ಸಾಲಿನ ಕಾರ್ಮಿಕ ಆಯವ್ಯಯ ತಯಾರಿಸುವ ನಿಟ್ಟಿನಲ್ಲಿ ಅಕ್ಟೋಬರ್ ೦೨ ರಿಂದ ಒಂದು ತಿಂಗಳುಗಳ ಕಾಲ ನಮ್ಮ ವಿಜಯಪುರ ತಾಲೂಕು ವ್ಯಾಪ್ತಿಯಲ್ಲಿ ಉದ್ಯೋಗ ಖಾತರಿ ನಡಿಗೆ ಸಬಲತೆಯೆಡೆಗೆ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ. ಈ ಅಭಿಯಾನದ ಭಾಗವಾಗಿ ತಾಲೂಕಿನ ಎಲ್ಲ ಗ್ರಾಮ ಪಂಚಾಯತಿ ವ್ಯಾಪ್ತಿಯ ಪ್ರತಿ ಮನೆ-ಮನೆಗೆ ಭೇಟಿ ನೀಡಿ ಕರಪತ್ರಗಳನ್ನು ನೀಡುವದರ ಜೊತೆಗೆ ಯೋಜನೆಯ ಕುರಿತು ಮಾಹಿತಿ ನೀಡಲಾಗುತ್ತಿದೆ. ಅಭಿಯಾನದ ಭಾಗವಾಗಿ ಗ್ರಾಮದ ರೈತ್ತರು & ಗ್ರಾಮಸ್ಥರು ತಮಗೆ ಬೇಕಾದ ಕಾಮಗಾರಿಗಳ ಬೇಡಿಕೆಯನ್ನು ಗ್ರಾಮ ಪಂಚಾಯತಿಗೆ ಸಲ್ಲಿಸಬೇಕು ಅದನ್ನು ಮುಂದಿನ ವರ್ಷದ ಕ್ರೀಯಾಯೋಜನೆಯಲ್ಲಿ ಅನುಮೋದನೆ ಪಡೆದುಕೊಂಡು ತಮಗೆ ಕಾಮಗಾರಿ…

Read More