– ಜಿ. ಬಿ. ಸಾಲಕ್ಕಿ
ವಿಜಯಪುರ
ಉದಯರಶ್ಮಿ ದಿನಪತ್ರಿಕೆ
ಹಾಲು, ಪೇಪರ ದಿನನಿತ್ಯದ ವಹಿವಾಟುಗಳ ದಿನಗಳ ಗುಂಡು ಕಟ್ಟುವ ಹಳೆ ಹಾಳೆಗಳಿಗೆ ವಿದಾಯ, ಹೊಸದಕ್ಕೆ ಸ್ವಾಗತ
ಅಗಲಿದ ಹಿರಿಯರ ನೆನಪು, ಸಿಹಿ, ಕಹಿ ಘಟನೆಗಳ ಸ್ಮರಣೆ. ಹಾಗಾಗಬಾರದಿತ್ತೆಂಬ ಹಳಹಳಿ ಮತ್ತೆ ಮರೆವು
ಅದೇ ಕುರಡು ಕಾಂಚಾಣದಾಟ, ಸತ್ಯದ ಮೇಲೆ ಹಾರಾಡುವ ಸುಳ್ಳುಗಳು, ಮನುಷ್ಯನನ್ನು ಮನುಷ್ಯನನ್ನಾಗಿ ಕಾಣಬೇಕೆಂಬುವ ಸವಕಳಿಯಾದ ಭೋದನೆ.
ನಾಲ್ಕಾರು ದಿನಗಳ ಹುರುಪು
ಕೋಟಿ, ಕೋಟಿ ಖರ್ಚಿನ ಪಾರ್ಲಿಮೆಂಟು, ವಿಧಾನ ಸಭೆಗಳಲ್ಲಿ ಆಡಳಿತ, ವಿರೋಧಿಗಳ ಕೆಸರಾಟ,ಮಸ್ತಿ, ಮೋಜು
ಮತ ಹಾಕಿ ಚುನಾಯಿಸಿದ ನಾಗರಿಕ ಮತನೀಡಿದ ಕೖ ಹಿಚುಕಿ ಪಶ್ಚಾತ್ತಾಪ, ಮತ್ತೆ ಮರೆವು ಆದಕ್ಕೇನೆ ಬೆಂಬಲ
ಪ್ರಜಾತಂತ್ರದ ಪದಗಳಿಗೆ ಪ್ರತಿಜ್ನೆ ಮಾಡಿದ ಸ್ವಜನಪಕ್ಷ ಪಾತ, ಜಾತ್ಯಾತೀತೆಗಳು ಕೇವಲ ಅಕ್ಷರಗಳಲ್ಲಿ
ಹಳೆಯ ವರ್ಷ ಗತಿಸುವ ನೆಪದಲಿ ಗುಂಡು, ತುಂಡು, ಮೋಜು ಮಸ್ತಿ
ಹೊಸ ವರ್ಷಕೆ ಹೊಸ ನಿರ್ಣಯ, ನಿರ್ಧಾರ ಎಂಬ ಬಾವ ಕೆಲ ದಿನ ಮಾತ್ರ ಮತ್ತೆ ಅದೇ ನಡೆ, ಅದೇ ಮಾತು
ವರ್ಷ ವರ್ಷ ಕಳೆದರೂ ಅದೇ ರೀತಿ, ನೀತಿ, ಮಾತುಗಳು
ಕೇವಲ ವರ್ಷದ ಅಂಕಿ ಅದರ ಕ್ಯಾಲೆಂಡರ ಬದಲು. ಹಳೆಯದಕ್ಕೆ ವಿದಾಯ, ಹೊಸದಿನಗಳಿಗೆ ಸ್ವಾಗತ ಎಂಬ ಭಾವ ಕೆಲವೇ ದಿನ..
