Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ೨೦೨೪-೨೫ನೇ ಸಾಲಿನಲ್ಲಿ ಪ್ರಥಮ ವರ್ಷದ ಪೂರ್ಣಾವಧಿ ಪಿಎಚ್‌ಡಿ ಅಧ್ಯಯನ ಪ್ರಾರಂಭಿಸಿರುವ ರಾಜ್ಯದ ಹಿಂದುಳಿದ ವರ್ಗಗಳ ಪ್ರವರ್ಗ ೧, ೨ಎ, ೩ಎ ಹಾಗೂ ೩ಬಿ ಗಳಿಗೆ ಸೇರಿದ ಅರ್ಹ ಅಭ್ಯರ್ಥಿಗಳಿಂದ ಮಾಸಿಕ ವ್ಯಾಸಾಂಗ ವೇತನ ವೇತನ/ ಫೆಲೋಶಿಫ್ ಗಾಗಿ ಅರ್ಜಿ ಆಹ್ವಾನಿಸಲಾಗಿದೆ.ಕರ್ನಾಟಕದ ಶಾಸನ ಬದ್ದ ವಿಶ್ವವಿದ್ಯಾಲಯಗಳಲ್ಲಿ/ ಅಧೀನಕ್ಕೆ ಒಳಪಡುವ ಸಂಸ್ಥೆಗಳಲ್ಲಿ ಪ್ರಥಮ ವರ್ಷದ ಪಿಎಚ್‌ಡಿ (೨೦೨೪ರ ಜ.೧೦ ಮತ್ತು ಅದರ ನಂತರ ಪ್ರಥಮ ವರ್ಷದ ಪಿಎಚ್‌ಡಿ) ಅಧ್ಯಯನ ಮಾಡುತ್ತಿರುವ ಹೊಸ ಅಭ್ಯರ್ಥಿಗಳು ಮಾತ್ರ ಆಪ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಹ ಅಭ್ಯರ್ಥಿಗಳು ಫೆ.೧೦ರ ಒಳಗಾಗಿ ಅರ್ಜಿ ಸಲ್ಲಿಸಬಹುದು.ಹೆಚ್ಚಿನ ಮಾಹಿತಿಗಾಗಿ ಇಲಾಖಾ ವೆಬ್‌ಸೈಟ್ https://bcwd.karnataka.gov.in ಹಾಗೂ ಸಹಾಯವಾಣಿ ಸಂಖ್ಯೆ. ೮೦೫೦೭೭೦೦೦೪ ಗೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾ ಪೊಲೀಸ್ ಅಧೀಕ್ಷರು ೨೦೨೩-೨೪ನೇ ಸಾಲಿನಲ್ಲಿ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಒಟ್ಟು ೨೧ ಎನ್ ಡಿಪಿಎಸ್ ಪ್ರಕರಣಗಳಲ್ಲಿ ಜಪ್ತಿ ಮಾಡಲಾದ ೧೮.೪೩೨ ಕೆ.ಜಿ ಅಫಿಮ್ ಡ್ರೆöÊಡ್ ನಟ್ಸ್ ಪೌಡರ್, ೨೮೩.೮೦೮ ಕೆ.ಜಿ ಗಾಂಜಾ ಪ್ಲಾಂಟ್ ಮತ್ತು ಪೌಡರ ಒಟ್ಟು ೩೦೨.೨೪೦ಕೆ.ಜಿ ವಶಪಡಿಸಿಕೊಂಡಿದ್ದ ಮಾದಕ ವಸ್ತುಗಳನ್ನು ಜ.೨೩ರಂದು ಮಹಾನಗರ ಪಾಲಿಕೆಯ ವ್ಯಾಪ್ತಿಯ ಇಂಡಿ ರಸ್ತೆ ಸರ್ವೆ ನಂ ೧೪೦ರ KPMP Trust, Bio medical waste disposal unitನಲ್ಲಿ ದಹಿಸಿ ನಾಶಗೊಳಿಸಲಾಯಿತು.ಈ ಸಂದರ್ಭದಲ್ಲಿ ಡ್ರಗ್ಸ್ ಡಿಸಪೋಸಲ್ ಕಮೀಟಿಯ ಚೇರಮನ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷö್ಮಣ ನಿಂಬರಗಿ, ಸಮೀತಿ ಸದಸ್ಯ ಡಿಎಸ್‌ಪಿ ಬಸವರಾಜ ಯಲಿಗಾರ, ಇಂಡಿ ಡಿ.ಎಸ್‌ಪಿ ಜಗದೀಶ್ ಎಚ್‌ಎಸ್, ಜಿಲ್ಲಾ ಪರಿಸರ ಅಧಿಕಾರಿ ವಿವೇಕ ಗುನಗಾ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಡೆಪ್ಯೂಟಿ ಡೈರೆಕ್ಟರ್ ಆಫ್, ಪ್ಯಾಕ್ಟರಿಸ್ & ಬೋಯಿಲರ್‌ನ ಜಟಿಂಗರಾಯ ಹಾಗೂ ಉಪಸ್ಥಿತರಿದ್ದರು.

Read More

ರಚನೆ- ಇಂದಿರಾ ಮೋಟೆಬೆನ್ನೂರಬೆಳಗಾವಿ ಉದಯರಶ್ಮಿ ದಿನಪತ್ರಿಕೆ ತಾಯ ಕೊರಳ ಮುರಿಯಬಂದ ಅರಿಯ ಕಂಡುರುಧಿರ ಕುದಿದುಕರುಳ ತರಿದುಸಿಡಿಲ ಮರಿಗಳುಕೊಟ್ಟರವರು ಕೊರಳ ಕುಣಿಕೆಗೆ… ದಾಸ್ಯ ಶೃಂಖಲೆ ಬಿಡಿಸಿಭಾರತಿಯ ಮಡಿಲಪುತ್ರರು ವೀರ ಶೂರರುಎದೆಯ ಗುಂಡಿಗೆಗುಂಡಿಗೊಡ್ಡಿ ಅಮರರಾಗಿಕೊಟ್ಟರವರು ಕೊರಳ ಕುಣಿಕೆಗೆ… ನೆಲದ ಮಣ್ಣ ಕಣ್ಣ ತೆರೆದುಕೈ ಬೀಸಿ ಕರೆಯಲುಗಡಿಯ ಮೆಟ್ಟಿ ಒಡಲಬಗೆಯ ಬಂದವರಎದೆಯ ಸೀಳುತಕೊಟ್ಟರವರು ಕೊರಳ ಕುಣಿಕೆಗೆ… ಅವ್ವನ ಕಾಲಿಗೆ ಬೇಡಿ ತೊಡಿಸಿಆಳ ಬಂದವರ ತಡೆದುಒಡೆದು ಆಳುವ ನೀತಿ ಮುರಿದುತಮ್ಮ ಬಾಳ ಮುಡಿಪ ಮಾಡಿವೀರಪುತ್ರರು ದೇಶಭಕ್ತರುಕೊಟ್ಟರವರು ಕೊರಳ ಕುಣಿಕೆಗೆ… ತ್ಯಾಗ ಬಲಿದಾನ ಸತ್ಯಅಹಿಂಸೆ ಸತ್ಯಾಗ್ರಹಮಾರ್ಗದಲಿ ನಡೆದುಸ್ವಾತಂತ್ರ್ಯ ಜ್ಯೋತಿಬೆಳಗಲೆಂದು ನಾಡಿಗಾಗಿಕೊಟ್ಟರವರು ಕೊರಳ ಕುಣಿಕೆಗೆ… ಇರುಳ ಕಳೆದು ಬೆಳಕುಹರಿದು ನಗಲು ಮೊಗವುತಾಯಿ ಭಾರತಿಯ ಮನವುಸ್ವಾತಂತ್ರ್ಯ ಮುತ್ತಿ ಮುಗಿಲುಹರಿಯೆ ಹರುಷ ಹೊನಲುಕೊಟ್ಟರವರು ಕೊರಳ ಕುಣಿಕೆಗೆ..

Read More

ರಚನೆ- ಇಂದಿರಾ ಮೋಟೆಬೆನ್ನೂರಬೆಳಗಾವಿ ಉದಯರಶ್ಮಿ ದಿನಪತ್ರಿಕೆ ತಾಯ ಕೊರಳ ಮುರಿಯಬಂದ ಅರಿಯ ಕಂಡುರುಧಿರ ಕುದಿದುಕರುಳ ತರಿದುಸಿಡಿಲ ಮರಿಗಳುಕೊಟ್ಟರವರು ಕೊರಳ ಕುಣಿಕೆಗೆ… ದಾಸ್ಯ ಶೃಂಖಲೆ ಬಿಡಿಸಿಭಾರತಿಯ ಮಡಿಲಪುತ್ರರು ವೀರ ಶೂರರುಎದೆಯ ಗುಂಡಿಗೆಗುಂಡಿಗೊಡ್ಡಿ ಅಮರರಾಗಿಕೊಟ್ಟರವರು ಕೊರಳ ಕುಣಿಕೆಗೆ… ನೆಲದ ಮಣ್ಣ ಕಣ್ಣ ತೆರೆದುಕೈ ಬೀಸಿ ಕರೆಯಲುಗಡಿಯ ಮೆಟ್ಟಿ ಒಡಲಬಗೆಯ ಬಂದವರಎದೆಯ ಸೀಳುತಕೊಟ್ಟರವರು ಕೊರಳ ಕುಣಿಕೆಗೆ… ಅವ್ವನ ಕಾಲಿಗೆ ಬೇಡಿ ತೊಡಿಸಿಆಳ ಬಂದವರ ತಡೆದುಒಡೆದು ಆಳುವ ನೀತಿ ಮುರಿದುತಮ್ಮ ಬಾಳ ಮುಡಿಪ ಮಾಡಿವೀರಪುತ್ರರು ದೇಶಭಕ್ತರುಕೊಟ್ಟರವರು ಕೊರಳ ಕುಣಿಕೆಗೆ… ತ್ಯಾಗ ಬಲಿದಾನ ಸತ್ಯಅಹಿಂಸೆ ಸತ್ಯಾಗ್ರಹಮಾರ್ಗದಲಿ ನಡೆದುಸ್ವಾತಂತ್ರ್ಯ ಜ್ಯೋತಿಬೆಳಗಲೆಂದು ನಾಡಿಗಾಗಿಕೊಟ್ಟರವರು ಕೊರಳ ಕುಣಿಕೆಗೆ… ಇರುಳ ಕಳೆದು ಬೆಳಕುಹರಿದು ನಗಲು ಮೊಗವುತಾಯಿ ಭಾರತಿಯ ಮನವುಸ್ವಾತಂತ್ರ್ಯ ಮುತ್ತಿ ಮುಗಿಲುಹರಿಯೆ ಹರುಷ ಹೊನಲುಕೊಟ್ಟರವರು ಕೊರಳ ಕುಣಿಕೆಗೆ..

Read More

ಲೇಖನವೀಣಾ ಹೇಮಂತ್ ಗೌಡ ಪಾಟೀಲ್ಮುಂಡರಗಿಗದಗ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಎಲ್ಲ ವಸ್ತುಗಳಲ್ಲಿಯೂ, ವಿಷಯಗಳಲ್ಲಿಯೂ ಶಾಶ್ವತತೆಯನ್ನು ಹುಡುಕುವ ನಾವುಗಳು ನಮ್ಮ ಬದುಕೇ ಆಶಾಶ್ವತತೆಯ ತೂಗುಯ್ಯಾಲೆಯಲ್ಲಿ ತೂಗುತ್ತದೆ ಎಂಬ ಸತ್ಯವನ್ನು ಮರೆತಿದ್ದೇವೆ. ಜೀವನವನ್ನು ನೋಡುವ ನಮ್ಮ ದೃಷ್ಟಿಕೋನವನ್ನು ಬದಲಾಯಿಸುವ ಶಕ್ತಿ ಈ ಆಶಾಶ್ವತತೆಯ ಪರಿಕಲ್ಪನೆಗಿದೆ. ಸಂತಸ, ದುಃಖ, ಸೋಲು, ಯಶಸ್ಸು, ಸಂಬಂಧಗಳು ಮತ್ತು ನಮ್ಮ ಇಡೀ ಬದುಕು ಆಶಾಶ್ವತ.ನೂರು ಕಾಲ ನಾವು ಬಾಳುತ್ತೇವೋ ಇಲ್ಲವೇ ಮುಂದಿನ ಕ್ಷಣವೇ ಇಲ್ಲವಾಗುತ್ತೇವೋ ಎಂಬ ಅರಿವು ಕೂಡ ನಮಗೆ ಇರುವುದಿಲ್ಲ.. ಆದ್ದರಿಂದಲೇ ಭಗವಾನ್ ಶ್ರೀ ಕೃಷ್ಣನಿಗೆ ಅರ್ಜುನನು ಸುಖದಲ್ಲಿ ಮತ್ತು ದುಃಖದಲ್ಲಿ ನಮ್ಮನ್ನು ನಿರ್ಲಿಪ್ತರಾಗಿಸಲು, ಮತ್ತೆ ಜೀವನ್ಮುಖಿಯಾಗಿಸಲು ಒಂದು ವಾಕ್ಯವನ್ನು ಹೇಳು ಎಂದು ಹೇಳಿದಾಗ ಶ್ರೀ ಕೃಷ್ಣನು ‘ಈ ಕ್ಷಣ ಶಾಶ್ವತವಲ್ಲ, ಈ ಸಮಯ ಕಳೆದು ಹೋಗುತ್ತದೆ’ ಎಂಬ ಪರಮ ಸತ್ಯವನ್ನು ಅರುಹಿದ.ಸಾಮಾಜಿಕವಾಗಿ ನೋಡುವುದಾದರೆ ಅತ್ಯಂತ ಕಡಿಮೆ ವರಮಾನವಿರುವ ವ್ಯಕ್ತಿ ನಾನು ಖರೀದಿಸುವ ವಸ್ತುಗಳು, ಬಟ್ಟೆಗಳು ಬಹಳ ದಿನಗಳ ಕಾಲ ತಾಳಿಕೆ ಬರಲಿ ಎಂದು ಅಪೇಕ್ಷೆ ಪಡುತ್ತಿದ್ದುದು ಸಹಜವಾಗಿತ್ತು.…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಹುಟ್ಟುಕಿವುಡುತನದಿಂದ ಬಳಲುವ ಮಕ್ಕಳಿಗೆ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ ವರದಾನವಾಗಿದ್ದು, ಇದರಿಂದ ಬಡ ಮತ್ತು ಕೂಲಿಕಾರ್ಮಿಕರ ಮಕ್ಕಳಿಗೆ ಸಾಕಷ್ಟು ಅನುಕೂಲಾವಾಗಿದೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.ನಗರದ ಬಿ.ಎಲ್.ಡಿ.ಇ ಆಸ್ಪತ್ರೆಯ ಟ್ರಾಮಾ ಸೆಂಟರ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹುಟ್ಟುಕಿವುಡುತನದಿಂದ ಬಳಲುತ್ತಿದ್ದ ಮಕ್ಕಳಿಗೆ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ ನಡೆಸಿ ಕಿವಿ ಕೇಳಿಸುವಂತೆ ಮಾಡಲು ಸಾಫ್ಟವೇರ್ ಅಳವಡಿಸಲಾಗಿದೆ. ಈ ಧ್ವನಿ ಆಲಿಸುವ ತಂತ್ರಜ್ಞಾನದ ಸ್ವಿಚ್ ಆನ್(Switch on) ಪ್ರಕ್ರಿಯೆಗೆ ಚಾಲನೆ ನೀಡಿ ಅವರು ಮಾತನಾಡಿದರು.ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆಗೆ ಸುಮಾರು ರೂ. 7.50 ಲಕ್ಷದಿಂದ ರೂ. 15 ಲಕ್ಷದ ವರೆಗೆ ವೆಚ್ಚ ತಗಲುತ್ತದೆ. ಆದರೆ, ಸರಕಾರದ ಯೋಜನೆಯಡಿ ಈ ಸೌಲಭ್ಯವನ್ನು ಪಡೆಯುವ ಅವಕಾಶವಿದ್ದು, ಇಂಥ ಕ್ಲಿಷ್ಟಕರ ಶಸ್ತ್ರಚಿಕಿತ್ಸೆ ನಡೆಸಲು ಬಿ.ಎಲ್.ಡಿ.ಈ ಆಸ್ಪತ್ರೆಯಲ್ಲಿ ಸಕಲ ಸೌಲಭ್ಯಗಳು ಲಭ್ಯವಿವೆ. ಇಲ್ಲಿನ ವೈದ್ಯರು ಇದೇ ಮೊದಲ ಬಾರಿಗೆ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ವಿಜಯಪುರ ಮತ್ತು ಸುತ್ತಮುತ್ತಲಿನ…

Read More

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸಂಪತ್ ಗುಣಾರಿ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: “ಉಜ್ವಲ ಭವಿಷ್ಯಕ್ಕಾಗಿ ಹೆಣ್ಣು ಮಕ್ಕಳ ಸಬಲೀಕರಣ ಬಹು ಮುಖ್ಯ” ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸಂಪತ್ತ ಗುಣಾರಿ ಹೇಳಿದರು.ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯದಲ್ಲಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಅಂಗವಾಗಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹೆಣ್ಣು ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರದಿಂದ ಸಮಗ್ರ ಪ್ರಯತ್ನಗಳು ನಡೆದಿವೆ. ಈ ನಿಟ್ಟಿನಲ್ಲಿ “ಪಿ.ಸಿ. & ಪಿ.ಎನ್.ಡಿ.ಟಿ ಕಾಯ್ದೆ ೧೯೯೪” ಅನುಷ್ಠಾನವು ಮುಖ್ಯ ಅಂಶವಾಗಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಆರ್ ಸಿ ಎಚ್ ಅಧಿಕಾರಿ ಡಾ. ಕೆ.ಡಿ. ಗುಂಡಬಾವಡಿ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ರಾಜೇಶ್ವರಿ ಗೊಲಗೇರಿ, ಜಿಲ್ಲಾ ಮಲೇರಿಯ ನಿರ್ಮೂಲನಾ ಅಧಿಕಾರಿ ಡಾ.ಜಾನ್ ಕಟವಟೆ, ತಾಲೂಕು ಆರೋಗ್ಯಧಿಕಾರಿ ಡಾ. ಪರಸುರಾಮ ಹಿಟ್ನಳ್ಳಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜಿ.ಎಂ.ಕೋಲಾಉರ, ಜಿಲ್ಲಾ ಪ್ಲೋರೋಸಿಸ್ ಸಂಯೋಜಕ…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ಪಟ್ಟಣದ ಶ್ರೀ ಅಂಬಾಭವಾನಿ ದೇವಸ್ಥಾನದ ಮೂರ್ತಿಯ ೩೨ ನೆಯ ವರ್ಷದ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ ಮಹೋತ್ಸವ ನಿಮಿತ್ಯ ಸರ್ವ ಭಕ್ತಾದಿಗಳಿಂದ ವಾಧ್ಯ ವೈಭವದೊಂದಿಗೆ ಪಲ್ಲಕ್ಕಿ ಉತ್ಸವ ಮತ್ತು ಕುಂಭ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ನಡೆಯಿತು.ಮೆರವಣಿಗೆ ದೇವಸ್ಥಾನದಿಂದ ಪ್ರಾರಂಭಗೊಂಡು ನಗರದ ಪ್ರಮುಖ ಬೀದಿಗಳಲ್ಲಿ ಹಾಯ್ದು ಮತ್ತೆ ದೇವಸ್ಥಾನ ತಲುಪಿತು.ದಾರಿಯುದ್ದಕ್ಕೂ ಭಕ್ತರು ಆಯಿ ರಾಧಾ ಗೆ ಉಧೋ ಉಧೋ ತುಳಜಾಪುರ ಆಯಿಗೆ ಉಧೋ ಉಧೋ, ಇಂಡಿ ಆಯಿಗೆ ಉಧೋ ಉಧೋ ಜೈ ಭವಾನಿ, ಜೈ ಶಿವಾಜಿ ಘೋಷಣೆಗಳು ನಡೆದವು.ಬೆಳಗ್ಗೆ ೬ ಗಂಟೆಯಿಂದ ೮ ಗಂಟೆಯ ವರೆಗೆ ಶ್ರೀ ದೇವಿಯ ಮಹಾಭೀಷೇಕ, ಪುಷ್ಪಾಂಜಲಿ, ಹಾಗೂ ಮಂಗಳಾರತಿ, ನಂತರ ಮೆರವಣೆಗೆ ನಡೆಯಿತು,ದೇವಸ್ಥಾನ ಸಮಿತಿಯ ಮಾಜಿ ಅಧ್ಯಕ್ಷರುಗಳಾದ ಸುರೇಶ ಕೋಳೆಕರ, ಹೀರಾಲಾಲ ಹಂಚಾಟೆ ಮಹಾವೀರ ಕೋಳೆಕರ, ಸುರೇಶ ಬಳಮಕರ, ಅರುಣ ಕೋಳೆಕರ ಇವರನ್ನು ಜೊತೆಗೆ ವೈದ್ಯಕೀಯ ಸೇವೆ ಸಲ್ಲಿಸುತ್ತಿರುವ ಡಾ|| ವಿಫುಲ್ ಕೋಳೆಕರ ಇವರನ್ನು ಸನ್ಮಾನಿಸಲಾಯಿತು.ದೇವಸ್ಥಾನ ಸಮಿತಿಯ ಅಧ್ಯಕ್ಷ ನಾಗನಾಥ ಹಂಚಾಟೆ, ಶಂಕರ ಕೋಳೆಕರ,…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಅಹಲ್ಯಾಬಾಯಿ ಸ್ನಾತಕೋತ್ತರ ಮಹಿಳಾ ಅಧ್ಯಯನ, ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರ, ಮತ್ತು ಸೆಲ್ಕೋ ಸೋಲಾರ್ ಲೈಟ್ ಪ್ರೈವೇಟ್ ಲಿಮಿಟೆಡ್ ಬೆಂಗಳೂರು, ವಿಜಯಪುರ ಶಾಖೆ ಇವರ ಸಹಯೋಗದಲ್ಲಿ ‘ಸಮೃದ್ಧಿ ಸಂತೃಪ್ತಿ’ ಗ್ರಾಮೀಣ ಮಹಿಳೆಯರ ಸಬಲೀಕರಣದಲ್ಲಿ ಸೌರಶಕ್ತಿಯ ಪಾತ್ರ ಎಂಬ ವಿಷಯದ ಕುರಿತು ಎರಡು ದಿನಗಳ ಕಾರ್ಯಾಗಾರವನ್ನು ಇದೇ ದಿ. ೨೮ ಮತ್ತು ೨೯ ರಂದು ಬೆಳಿಗ್ಗೆ ೯:೦೦ ಗಂಟೆಗೆ ಕನ್ನಡ ಅಧ್ಯಯನ ಸಭಾಭವನದಲ್ಲಿ ಆಯೋಜಿಸಲಾಗಿದೆ.ಕಾರ್ಯಾಗಾರವನ್ನು ಮಹಿಳಾ ವಿವಿಯ ಹಂಗಾಮಿ ಕುಲಪತಿ ಪ್ರೊ. ಶಾಂತಾದೇವಿ ಟಿ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಮಹಿಳಾ ವಿವಿಯ ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ.ಎಚ್.ಎಂ.ಚಂದ್ರಶೇಖರ, ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಜಿ.ಎಸ್.ರಾಠೋಡ ಹಾಗೂ ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ ಸಿ.ಬಿ.ಕುಂಬಾರ ಭಾಗವಹಿಸಿಲಿದ್ದಾರೆ ಎಂದು ಮಹಿಳಾ ವಿವಿಯ ಪ್ರೊ.ಲಕ್ಷ್ಮಿ ವೈ ಹಾಗೂ ಬೆಂಗಳೂರಿನ ಸೆಲ್ಕೋ ಸೋಲಾರ್ ಲೈಟ್ ಪ್ರೈವೇಟ್ ಲಿಮಿಟೆಡ್‌ನ ಮುಖ್ಯ ವ್ಯವಸ್ಥಾಪಕಿ ಸಂಹಿತಾ ಮಜುಂದಾರ್ ಭಟ್ಟಾಚಾರ್ಯ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ (ನಿ) ವತಿಯಿಂದ ೨೦೨೪-೨೫ನೇ ಸಾಲಿನ ಅರಿವು (ರಿನ್ಯೂವಲ್) ಸಾಲ ಯೋಜನೆಯಡಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಆಯ್ಕೆಯಾದ ವೈದ್ಯಕೀಯ, ದಂತ ವೈದ್ಯಕೀಯ, ಇಂಜನೀಯರ್ & ಟೆಕ್ನಾಲಜಿ ವಿಷಯಗಳಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ಮತೀಯ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಂದ ಸಾಲಕ್ಕಾಗಿ ಆನ್ ಲೈನ್ ಅರ್ಜಿ ಆಹ್ವಾನಿಸಾಗಿದೆ.ಈ ಹಿಂದೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಆಯ್ಕೆಯಾಗಿ ಬೇರೆ ಬೇರೆ ವರ್ಷಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಅರಿವು ವಿದ್ಯಾಭ್ಯಾಸ ಸಾಲ ಪಡೆಯದಿರುವ ವಿದ್ಯಾರ್ಥಿಗಳು ಸಹ ಆನ್‌ಲೈನ್ ಅರ್ಜಿ ಸಲ್ಲಿಸಬಹುದು.ಅರ್ಹ ವಿದ್ಯಾರ್ಥಿಗಳು ಜ.೩೧ರ ಒಳಗಾಗಿ ಅರ್ಜಿ ಸಲ್ಲಿಸಬಹುದು.ಅರ್ಜಿಗಳನ್ನು ಸಲ್ಲಿಸುವಾಗ ನಿಗಮದಿಂದ ಕಳೆದ ವರ್ಷ ಪಡೆದಿರುವ ಸಾಲದ ಮೊತ್ತದಲ್ಲಿ ಶೇ.೧೨ರಷ್ಟನ್ನು ಆನ್‌ಲೈನ್ ಮೂಲಕ ಪಾವತಿಸಬಹುದು.ಹೆಚ್ಚನ ಮಾಹಿತಿಗಾಗಿ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ (ನಿ)ದ ಜಿಲ್ಲಾ ವ್ಯವಸ್ಥಾಪಕರ ಕಛೇರಿಗೆ ಹಾಗೂ ದೂರವಾಣಿ ಸಂಖ್ಯೆ. ೦೮೩೫೨-೨೭೮೩೪೪ & ೮೨೭೭೯೪೪೨೦೯ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Read More