Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರ ಹೊರವಲಯದ ಇಬ್ರಾಹಿಂಪುರ ಪೇಠದಲ್ಲಿ ಪ್ರತೀ ವರ್ಷದಂತೆ ಈ ವರ್ಷವೂ ಶ್ರೀ ನಂದಬಸವೇಶ್ವರ ಜಾತ್ರಾ ಮಹೋತ್ಸವವು ಇದೇ ದಿ. ೨೩ ರಿಂದ ೨೫ ರ ವರೆಗೆ ವಿಜೃಂಭಣೆಯಿಂದ ಜರುಗಲಿದೆ.ಜಾತ್ರೆಗೆ ಸರ್ವ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಜಾತ್ರೆಯ ಹಿನ್ನೆಲೆಯಲ್ಲಿ ನಂದಬಸವೇಶ್ವರ ದೇವಸ್ಥಾನ ಕಟ್ಟಡಕ್ಕೆ ಸುಣ್ಣ ಬಣ್ಣ ಹಚ್ಚಿ ಆಕರ್ಷಕ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ.ಅಲಂಕೃತ ನಂದಿಕೋಲ ಮೆರವಣಿಗೆ ಈ ಜಾತ್ರೆಯ ಒಂದು ಪ್ರಮುಖ ಆಕರ್ಷಣೆ. ಜಾತ್ರೆ ಎಂದಮೇಲೆ ನಾಟಕ ಪ್ರದರ್ಶನವಿದ್ದದ್ದೇ. ಸ್ಥಳೀಯ ಯುವಕರೇ ನಾಟಕ ಕಲಿತು ಈ ಜಾತ್ರೆಯಲ್ಲಿ ಅಭಿನಯಿಸಲಿದ್ದಾರೆ.ಜಾತ್ರೆಯ ಮೊದಲ ದಿನವೇಅಂದರೆ ದಿ. ೨೩ ರಂದು ರಾತ್ರಿ ೧೦.೩೦ಕ್ಕೆ ಸ್ಥಳೀಯ ಯುವ ಕಲಾವಿದರನ್ನೊಳಗೊಂಡ ಶ್ರೀ ನಂದಬಸವೇಶ್ವರ ನಾಟ್ಯ ಸಂಘದಿಂದ “ಹುಚ್ಚ ಹಚ್ಚಿದ ಕಿಚ್ಚು” ಎಂಬ ಸುಂದರ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳುವುದು.ದಿ.೨೪ ರಂದು ಬೆಳಿಗ್ಗೆ ೬ಕ್ಕೆ ಅಭಿಷೇಕ, ೯ಕ್ಕೆ ನಂದಿಕೋಲ ಮೆರವಣಿಗೆ ನಡೆಯುವುದು. ಶ್ರೀ ನಂದಬಸವೇಶ್ವರ ದೇವಸ್ಥಾನದಿಂದ ಹೊರಡುವ ನಂದಿಕೋಲ ಮೆರವಣಿಗೆ ಗ್ರಾಮದ ಎಲ್ಲ ಭಕ್ತಾದಿಗಳ ಮನೆಗಳಿಗೆ ಭೇಟಿಕೊಟ್ಟು ಮರಳಿ ಮಧ್ಯಾಹ್ನ…

Read More

ಉತ್ಸವ ಉದ್ಘಾಟಿಸಲಿರುವ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಉದಯರಶ್ಮಿ ದಿನಪತ್ರಿಕೆ ತಾಳಿಕೋಟೆ: ತಾಲೂಕಿನ ಮಿಣಜಗಿ ಗ್ರಾಮದ ಗ್ರಾಮದೇವಿ ಜಾತ್ರೆ ನಿಮಿತ್ಯ ಮಾತೋಶ್ರೀ ಸುಗಲಾಬಾಯಿಗೌಡತಿ ಪಾಟೀಲ ಜಾನಪದ ಪ್ರತಿಷ್ಠಾನ ಪಡಗಾನೂರ ಹಾಗೂ ಜಾತ್ರಾ ಸಮಿತಿ ಸಹಯೋಗದಲ್ಲಿ ದಿನಾಂಕ 22.12.2024 ರವಿವಾರ ಮಧ್ಯಾಹ್ನ 12 ಗಂಟೆಗೆ ಗ್ರಾಮದೇವಿ ದೇವಸ್ಥಾನ ಆವರಣದಲ್ಲಿ “ಜಿಲ್ಲಾ ಮಟ್ಟದ ಜಾನಪದ ಉತ್ಸವ” ನಡೆಯಲಿದೆ.ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಉದ್ಘಾಟಿಸುವರು. ಹಲಸಂಗಿ ಗೆಳೆಯರ ಪ್ರತಿಷ್ಠಾನದ ಸಂಚಾಲಕ ಸಾಹಿತಿ ದೊಡ್ಡಣ್ಣ ಭಜಂತ್ರಿ ಅಧ್ಯಕ್ಷತೆ ವಹಿಸುವರು. ಸಾಂಸ್ಕೃತಿಕ ಚಿಂತಕ ಮೋಹನ ಕಟ್ಟಿಮನಿ ಉಪನ್ಯಾಸ ನೀಡುವರು. ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಬಾಳನಗೌಡ ಪಾಟೀಲ ಪ್ರಾಸ್ತಾವಿಕ ಭಾಷಣ ಮಾಡುವರು. ಕೆ ಎಚ್ ಪಾಟೀಲ (ಮೂಕಿಹಾಳ) ಕಜಾಪ ನಿಡಗುಂದಿ ಅಧ್ಯಕ್ಷ ವೈ ಎಸ್ ಗಂಗಶೆಟ್ಟಿ, ಬಸವನ ಬಾಗೇವಾಡಿ ಶಿಕ್ಷಣ ಸಂಯೋಜಕ ಎಸ್ ಎಸ್ ಅಂಬಲಿ, ಶಿಕ್ಷಕ ಶಿವಾನಂದ ಮಳ್ಳಿ, ಕಜಾಪ ತಾಳಿಕೋಟೆ ತಾಲೂಕಾಧ್ಯಕ್ಷ ಸಿದ್ದನಗೌಡ ಕಾಸಿನಕುಂಟಿ ಆತಿಥಿಗಳಾಗಿ ಆಗಮಿಸುವರು.ವಿವಿಧ ಕ್ಷೇತ್ರಗಳಲ್ಲಿ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ವಿಜಯಪುರ ಗ್ರಾಮೀಣವಲಯದ ವತಿಯಿಂದ ಶ್ರೀ ಶಾಂತವೀರ ಪ್ರೌಢಶಾಲೆ ಬಬಲೇಶ್ವರದಲ್ಲಿ ಶನಿವಾರ ಎಸ್ ಎಲ್ ಸಿ ಯಲ್ಲಿ ಉತ್ತಮ ಸಾಧನೆಗೆ ವಿಧ್ಯಾರ್ಥಿಗಳಿಗೆ ವಿನೂತನ ಟಾರ್ಗೆಟ್ 625 ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತು.ಈ ಒಂದು ಕಾರ್ಯಕ್ರಮದಲ್ಲಿ ಸುಮಾರು 10 ಪ್ರೌಢಶಾಲೆಯ ವಿದ್ಯಾರ್ಥಿಗಳುಗಗನಮತ್ತು ಶಿಕ್ಷಕರು ಭಾಗವಹಿಸಿದ್ದರು. ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಮೋದಿನಿ ಬೋಳಲಮಟ್ಟಿ ಬೇರೆ ಬೇರೆ ಜಿಲ್ಲೆಗಳಲ್ಲಿ ಮಾತ್ರ ರ್ಯಾಂಕಗಳು ಬರುತ್ತಿದ್ದು, ನಮ್ಮ ಜಿಲ್ಲೆಯಲ್ಲಿ ಈ ಬಾರಿ ಎಸ್ ಎಲ್ ಸಿ ಪರೀಕ್ಷೆಯಲ್ಲಿ ನಮ್ಮ ಜಿಲ್ಲೆ ನಮ್ಮ ತಾಲೂಕಿನಲ್ಲಿ 625 ಕ್ಕೆ 625 ಅಂಕಗಳನ್ನು ಪಡೆಯಬೇಕೆಂದು ತಿಳಿಸಿದರು.ಈ ಟಾರ್ಗೆಟ್ 625 ಎನ್ನುವ ಕಾರ್ಯಕ್ರಮ ನನ್ನ ಕನಸಿನ ಕೂಸಲ್ಲ ಇದು ಸಚಿವರಾದ ಎಂ. ಬಿ. ಪಾಟೀಲ್ ಅವರದ್ದು ಎಂದು ತಿಳಿಸಿದರು. ಇದೇ ರೀತಿಯಾಗಿ ತಾಲೂಕಿನಾದ್ಯಂತ ಇಂತಹ ಕಾರ್ಯಕ್ರಮಗಳನ್ನು ಪ್ರತಿ ಶನಿವಾರ ಮಾಡಲಾಗುವುದು ಎಂದು ತಿಳಿಸಿದರು.ಈ ಕಾರ್ಯಕ್ರಮದಲ್ಲಿ ಶಾಂತೇಶ್ವರ ಪ್ರೌಢಶಾಲೆ ಉಪ ಪ್ರಾಂಶುಪಾಲ ಸಿದ್ದನಗೌಡ ಬಿರಾದಾರ, ಸಂಪನ್ಮೂಲ…

Read More

ಉದಯರಶ್ಮಿ ದಿನಪತ್ರಿಕೆ ಗೋಲಗೇರಿ: ಕ್ಲಸ್ಟರ್ ನ ನೂತನ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಶರಣು ಚಟ್ಟಿ ಅವರನ್ನು ಕ್ಲಸ್ಟರಿನ ವಿವಿಧ ಶಾಲೆಗಳ ಅತಿಥಿ ಶಿಕ್ಷಕರು ಗ್ರಾಮಸ್ಥರ ಸಮ್ಮುಖದಲ್ಲಿ ಸನ್ಮಾನಿಸಿ ಗೌರವಿಸಿದರು. ಮಾಜಿ CRP ಆರ್.ಎಸ್.ಬಿರಾದಾರರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.ಈ ಸಂದರ್ಭದಲ್ಲಿ ಗ್ರಾಮದ ಹಿರಿಯ ಮುಖಂಡರಾದ ಮುರಿಗೆಪ್ಪಗೌಡ ರದ್ದೇವಾಡಗಿ, ನಾಗಯ್ಯ ಹಿರೇಮಠ, ಪ್ರಕಾಶಗೌಡ ಬಿರಾದಾರ, ಮಲ್ಲಿಕಾರ್ಜುನ ಹತ್ತರಕಿ, ಕುತ್ಬುದ್ದಿನ್ ಕೋರಬು, ದಾವಲಸಾಬ್ ಬನ್ನೆಟ್ಟಿ, ಶಿಕ್ಷಕಿ ಎಂ.ಎಸ್.ಚೌಧರಿ, ಅತಿಥಿ ಶಿಕ್ಷಕರಾದ ರವಿ ಪಾಟೀಲ, ರಾಜಶೇಖರ್ ಕರ್ನಾಳ, ಬಸವರಾಜ ನಿಗಡಿ, ದೇವಿಂದ್ರ ದೊಡಮನಿ, ಅನಿತಾ ಕಾರನೂರ, ಅನುಸೂಯಾ ನಾಗಣಸೂರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Read More

ನವಜಾತ ಶಿಶುಗಳನ್ನು ಆಸ್ಪತ್ರೆಗಳಿಗೆ ಸುರಕ್ಷಿತ ಸ್ಥಳಾಂತರ ಕುರಿತು ಸಂವಹನ ಸಭೆಯಲ್ಲಿ ಡಿಸಿ ಟಿ.ಭೂಬಾಲನ್ ಸಲಹೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಡಿ. 21: 2026 ರೊಳಗೆ ಶಿಶುಮರಣ ಪ್ರಮಾಣವನ್ನು ಶೇ.5ಕ್ಕೆ ಇಳಿಸಬೇಕು ಎಂದು ಜಿಲ್ಲಾಧಿಕಾರಿ ಟಿ. ಭೂಬಾಲನ್ ಹೇಳಿದ್ದಾರೆ.ಶನಿವಾರ ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿವಿಯಲ್ಲಿ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರದ ಮಕ್ಕಳ ವೈದ್ಯಕೀಯ ಉಪಚಾರಶಾಸ್ತ್ರ ವಿಭಾಗ ಹಾಗೂ ಜಿಲ್ಲಾಸ್ಪತ್ರೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ನವಜಾತ ಶಿಶುಗಳನ್ನು ಆಸ್ಪತ್ರೆಗಳಿಗೆ ಸುರಕ್ಷಿತ ಸ್ಥಳಾಂತರ ಕುರಿತು ಸಂವಹನ ಸಭೆಯಲ್ಲಿ ಅವರು ಮಾತನಾಡಿದರು.ಹೆರಿಗೆ ಸಂದರ್ಭದಲ್ಲಿ ತಾಯಿ ಮತ್ತು ಶಿಶುವಿನ ಆರೋಗ್ಯ ರಕ್ಷಣೆ ಪ್ರಮುಖವಾಗಿದೆ. ಅದಕ್ಕಾಗಿ ಸರಕಾರ ಮತ್ತು ಆಸ್ಪತ್ರೆಗಳು ಸಾಕಷ್ಟು ಮುಂಜಾಗೃತೆ ಕ್ರಮಗಳನ್ನು ಕೈಗೊಳ್ಳುತ್ತಿವೆ. ಆದರೂ, ಗ್ರಾಮೀಣ ಭಾಗದಲ್ಲಿ ಮತ್ತು ಮನೆಗಳಲ್ಲಿ ಹೆರಿಗೆಯಾದ ಸಂದರ್ಭದಲ್ಲಿ ನವಜಾತ ಶಿಶುಗಳ ಆರೋಗ್ಯ ರಕ್ಷಣೆಗಾಗಿ ಆ್ಯಂಬೂಲನ್ಸ್ ಮುಖಾಂತರ ಅವುಗಳನ್ನು ಸೂಕ್ತ ಆಸ್ಪತ್ರೆಗಳಿಗೆ ಸ್ಥಳಾಂತರಿಸುವ ಮೂಲಕ 2026 ರೊಳಗೆ ಶಿಶುಮರಣದ ಪ್ರಮಾಣವನ್ನು 5ಕ್ಕೆ ಇಳಿಸಲು ಎಲ್ಲರೂ ಕೈಜೊಡಿಸಬೇಕಾಗಿದೆ.…

Read More

ಕವನ- ಶಾಂತಿ ಕಾರಂತ್ ಉದಯರಶ್ಮಿ ದಿನಪತ್ರಿಕೆ ನೀಲ ಮೇಘಗಳು ಮಧುರ ಮೈತ್ರಿಯಲಿಭುವಿಯ ಸಾಂಗತ್ಯ ಬಯಸಿ ಧರೆಗಿಳಿದಂತಿತ್ತುವಸುಧೆ ಮೊಗ ಮುಚ್ಚಿಹಳು ಲಜ್ಜೆಯಿಂದಲಿಹಬ್ಬದ ವಾತಾವರಣ ಕಂಗಳ ತುಂಬಿತ್ತು ಹೊರಟಿಹುದು ಮಿಂಚಿನುತ್ಸವ ಬಾನೂರಲಿಹಸಿರುಡುಗೆಯಲಿ ಇಳೆ ಸಿಂಗರಿಸಿಕೊಂಡಂತಿತ್ತು,ನಾಚಿಕೆಯ ಕೆಂಪು ಛಾಯೆಯ ಹೊಳಪು ಕೆನ್ನೆಯಲಿ.ಮಳೆಬಿಲ್ಲು ಭೂರಮೆಯ ಶಿರವ ಅಲಂಕರಿಸಿತ್ತು. ನಲ್ಲೆಯು ಬಸವಳಿದು ಕಾದಿಹಳು ವಿರಹದಲಿಮನದ ಬಳ್ಳಿಯಲಿ ಪ್ರೀತಿಯ ಹೂ ಅರಳಿತ್ತುಇನಿಯನಾಗಮನಕೆ ಅವನಿ ತವಕಿಸಿಹಳಿಲ್ಲಿ,ಪ್ರೇಮರಾಗ ಒಲಿದ ಹೃದಯಗಳ ಹಾಡಾಯಿತು.

Read More

ಲೇಖನ- ರೇಷ್ಮಾ ಮಲೆನಾಡ್ ಉದಯರಶ್ಮಿ ದಿನಪತ್ರಿಕೆ “ಪರೋಪಕಾರಾರ್ಥಮಿದಂ ಶರೀರಂ” ಅಂದರೆ “ಈ ಮನುಷ್ಯ ದೇಹ ಇರುವುದೇ ಪರರಿಗೆ ಉಪಕಾರ ಅಂದರೆ ಒಳಿತನ್ನು ಮಾಡಲು” ಎಂದಿದ್ದಾರೆ ನಮ್ಮ ಹಿರಿಯರು.“ವನ ಸುಮ” ಅಂದರೆ ಕಾಡಲ್ಲಿ ಬೆಳೆಯುವ ಸುವಾಸನಾಭರಿತ ಮಲ್ಲಿಗೆ ಹೂ ಬೆಳಿಗ್ಗೆ ಅರಳಿ ಎಲೆಮರೆಯಲ್ಲಿಯೇ ಇದ್ದೂ ಇತರರಿಗೆ ತನ್ನ ಪರಿಮಳವನ್ನು ಹಂಚಿ, ಸಂಜೆ ಬಾಡಿ ಉದುರಿ ಮಣ್ಣು ಸೇರಿ ಮಣ್ಣಾಗುತ್ತದೆ,, ಮಾನವ ಜನ್ಮ ನಶ್ವರ, ಯಾವಾಗ ಕಾಲನ ಕರೆ ಬರುತ್ತದೆಯೋ ಆಗ ಹೊರಟುಬಿಡಬೇಕು, ಅದು ನೂರು ವರ್ಷವಾದರೂ ಸರಿಯೇ ಇಂದಿದ್ದು ಇನ್ನೂ ಕೆಲವೇ ದಿನಗಳಲ್ಲಿ ಹೋಗುವುದಾದರೂ ಸರಿಯೇ ನಮ್ಮ ಕೈಲಾದಷ್ಟು ಒಳ್ಳೆಯ ಕಾರ್ಯಗಳನ್ನು ಮಾಡಿ, ಇತರರಿಗೆ ಒಳಿತನ್ನು ಮಾಡಿಯೇ ಸಾಯಬೇಕು.“ಯಾಕೆ ಒಳಿತು ಮಾಡಬೇಕು?” “ಯಾರಿಗೆ ಒಳಿತನ್ನು ಮಾಡಬೇಕು?,”ಎಷ್ಟು ಒಳಿತು ಮಾಡಬೇಕು? ““ಹೇಗೆ ಒಳಿತುಮಾಡಬೇಕು?” “ಒಳಿತಾವುದು ಕೆಡುಕಾವುದು?” “ನನ್ನಲ್ಲಿ ದುಡ್ಡಿಲ್ಲ, ನಾನೇ ಕಷ್ಟ ಪಡುತ್ತಿರುವೆ, ಬೇರೆಯವರಿಗೆ ನಾನೇನು ಒಳಿತು ಮಾಡಲಿ?” ಎಂಬೆಲ್ಲ ಪ್ರಶ್ನೆಗಳು ಎದುರಾಗುತ್ತವೆ.೧) ನೊಂದವರಿಗೆ ನೆರವಾಗುವುದು, ಸಾಂತ್ವನ ನೀಡುವುದು, ಸಮಾಜಕ್ಕೆ, ಬಂಧುಬಾಂಧವರಿಗೆ ಸ್ನೇಹಿತರಿಗೆ, ದೇಶಕ್ಕೆ,…

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಚಿಂಚೊಳ್ಳಿಯ ಸಿದ್ಧಸಿರಿ ಎಥನಾಲ್ ಮತ್ತು ಪವರ್ ಘಟಕದ ಸರ್ವೋಚ್ಛ ನ್ಯಾಯಾಲಯದ ಆದೇಶ ಸ್ವಾಗತಾರ್ಹ. ಸತ್ಯಕ್ಕೆ ಜಯ ಕಟ್ಟಿಟ್ಟ ಬುತ್ತಿ ಎಂಬ ಮಾತು ಈ ಪ್ರಕರಣದ ಆದೇಶ ಮೂಲಕ ಮತ್ತೊಮ್ಮೆ ಸಾಬೀತು ಮಾಡಿದಂತಾಗಿದೆ ಎಂದು ಜಿಲ್ಲಾ ಪಂಚಾಯತ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಹೇಳಿದರು.ಈ ಕುರಿತು ಉದಯರಶ್ಮಿಯೊಂದಿಗೆ ಮಾತನಾಡಿದ ಅವರು, ರಾಜಕೀಯ ದುರುದ್ದೇಶದಿಂದ ಪ್ರಕರಣ ದಾಖಲಿಸಿ ಸುಖಾ ಸುಮ್ಮನೆ ಸಾವಿರಾರು ರೈತರಿಗೆ, ಕಾರ್ಮಿಕರಿಗೆ ಅನ್ಯಾಯ ಮಾಡಿದ್ದರು. ಸದ್ಯ ಪ್ರಕರಣದ ವಿಚಾರಣೆ ಮುಗಿದು ಆದೇಶವಾಗಿದ್ದು ಆದೇಶದಲ್ಲಿ ೭ ದಿನಗಳಲ್ಲಿ ಕಬ್ಬು ನುರಿಸಲು ಅನುಮತಿ ನೀಡುವಂತೆ ತಿಳಿಸಿದೆ. ಈ ಆದೇಶದಿಂದ ಸಾಕಷ್ಟು ಕಾರ್ಮಿಕರಿಗೆ, ರೈತರಿಗೆ ಅನುಕೂಲವಾಗಿದೆ ಎಂದರು.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ಶೀತ ಗಾಳಿ ಬೀಸುವುದರಿಂದ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕಂದಾ ಇಲಾಖೆಯ ಸ್ವಾಯತ್ತ ಸಂಸ್ಥೆ) ರವರು ವಿಜಯಪುರ ಜಿಲ್ಲೆಯಲ್ಲಿ ತೀವ್ರವಾದ ಶೀತಗಾಳಿ ಬೀಡುವ ಸಾಧ್ಯತೆಯಿರುತ್ತದೆ ತಾಪಮಾನ ಕಡಿಮೆ ಆಗುವ ಸಾಧ್ಯತೆ ಇದೆ ಎಂದು ತಿಳಿಸಿರುತ್ತಾರೆ. ಇದರ ಹಿನ್ನೆಲೆ ಸಾರ್ವಜನಿಕರು ಬೆಳಿಗ್ಗೆ ಸೋಯೋದಯಕ್ಕಿಂತ ಮುಂಚೆ ಹಾಗೂ ಸೂರ್ಯಾಸ್ತದ ನಂತರ ವಾಕಿಂಗ್ ಮಾಡುವವರು ಮುನ್ನೆಚ್ಚರಿಕೆ ವಹಿಸಬೇಕೆಂದು ಸಾರ್ವಜನಿಕರಿಗೆ ತಿಳಿಸಬೇಕೆಂದು ನಗರದ ಕಾಂಗ್ರೇಸ್ ಮುಖಂಡ ಅಬ್ದುಲ್ ಹಮಿದ ಮುಶ್ರೀಫ್ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು.ಹಾಗೂ ಬೆಳಿಗ್ಗೆ ೭ ಘಂಟೆಗೆ ಪ್ರಾರಂಭವಾಗುವ ಶಾಲೆಯ ಸಮಯವನ್ನು ಬದಲಿಸಿ ೨ ಗಂಟೆಗೆ ಲೇಟ್ ಆಗಿ ಪ್ರಾರಂಭಿಸಬೇಕು. ಇದರಿಂದ ಮಕ್ಕಳ ಆರೋಗ್ಯ ಸುಧಾರಿಸಬಹುದು. ಮಕ್ಕಳ ಶಾಲೆಗೆ ಕಳುಹಿಸುವ ಸಲುವಾಗಿ ಪಾಲಕರು ನಸುಕಿನ ಜಾವ ೫ ಘಂಟೆಗೆ ಚಳಿಯಲ್ಲಿ ಎದ್ದು ಅವರ ತಯಾರಿಗಾಗಿ ಶ್ರಮಿಸಬೇಕಾಗುತ್ತದೆ. ಮಕ್ಕಳಿಗೆ ತಯಾರು ಮಾಡಿ ೭ ಘಂಟೆಗೆ ಬಸ್‌ನಲ್ಲಿ ಕಳುಹಿಸದರೆ ನಸುಕಿನ ಜಾವ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಬಸವ ಜನ್ಮಭೂಮಿ ಪ್ರತಿಷ್ಠಾನದ ೧೪ನೇ ವಾರ್ಷಿಕೋತ್ಸವ ಹಾಗೂ ರಾಜ್ಯಮಟ್ಟದ ವಚನವೈಭವ ನಿಮಿತ್ತ ಕೊಡಮಾಡುವ ರಾಷ್ಟ್ರಮಟ್ಟದ ಬಸವವಿಭೂಷಣ ಹಾಗೂ ರಾಜ್ಯಮಟ್ಟದ ಬಸವಭೂಷಣ ಪ್ರಶಸ್ತಿ ಪ್ರದಾನ ಸಮಾರಂಭ ಡಿ.೨೫ ರಂದು ಬೆಳಗ್ಗೆ ೧೧-೦೦ ಚೇತನಾ ಕಾಲೇಜ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.ಬಸವನಬಾಗೇವಾಡಿ ಹಿರೇಮಠದ ಶಿವಪ್ರಕಾಶಶ್ರೀ ಪಾವನ ಸಾನಿಧ್ಯ ವಹಿಸಲಿದ್ದು, ಚೇತನಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ರಾಜಶ್ರೀ ಜುಗತಿ ಅಧ್ಯಕ್ಷತೆ ವಹಿಸುವರು. ಬೆಂಗಳೂರಿನ ಸಾಹಿತಿ, ಋತುಸೌರಭ ಫೌಂಡೇಶನ ಅಧ್ಯಕ್ಷೆ ವಿಜಯಲಕ್ಷ್ಮಿ ಸತ್ಯಮೂರ್ತಿ ಉದ್ಘಾಟಿಸುವರು.ಚಿತ್ರದುರ್ಗ ಸಾಹಿತಿ ಶೈಲಾ ಜಯಕುಮಾರ, ಯಾದಗಿರಿ ಜಿಲ್ಲಾ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕ ಜಯಪ್ರಕಾಶ ಎಚ್., ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸುರೇಶ ಶೆಡಶ್ಯಾಳ ಹಾಗೂ ಸಾಹಿತಿ ಶಂಕರ ಬೈಚಬಾಳ ಮುಖ್ಯ ಅತಿಥಿಗಳಾಗಿ ಆಗಮಿಸುವರು.ಈ ಸಂದರ್ಭದಲ್ಲಿ ನಾಡಿನ ೨೪ ಸಾಧಕರಿಗೆ ರಾಷ್ಟ್ರ ಹಾಗೂ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರತಿಷ್ಠಾನದ ಸಂಚಾಲಕ, ಸಾಹಿತಿ ಮುರುಗೇಶ ಸಂಗಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More