Author: editor.udayarashmi@gmail.com

– ಡಾ.ಶಶಿಕಾಂತ ಪಟ್ಟಣರಾಮದುರ್ಗ ಉದಯರಶ್ಮಿ ದಿನಪತ್ರಿಕೆ ಸಾಹಿತ್ಯ ಸಮ್ಮೇಳನದೊಡ್ಡ ಶಾಮಿಯಾನಝಗ ಮಗಿಸುವಲೈಟು ಬೆಳಕುಮೈಕಿನ ಕಿರುಚಾಟವೇಷಧಾರಿಗಳ ಕುಣಿತಡೊಳ್ಳು ವಾದ್ಯ ಬಡಿತಅಕ್ಷರ ಜಾತ್ರೆಶಬ್ದಗಳ ಸಂಭ್ರಮಬಂದವರ ಮಾತುಉಂಡು ಸಾಗುವಕೊಂಡು ಹೋಗುವಪುಂಡರ ಸಂತೆಬಾಡೂಟಕೆ ಸಂಪುಭರ್ಜರಿ ಊಟಕನ್ನಡ ಉಳಿಸ ಬನ್ನಿಸಂಜೆ ಮಂತ್ರಿಯ ಕರೆಟಿವಿ ಪತ್ರಿಕೆಮಾಧ್ಯಮದವರ ಹಬ್ಬಮೂಲೆಯಲ್ಲಿಸೊರಗುವ ಪುಸ್ತಕಸಾಯದೆ ಕೈ ಕಟ್ಟಿನಿಂತ ಲೇಖಕ ಪ್ರಕಾಶಕಮಾಡಿ ಮುಗಿಸುವರುಸಾಹಿತ್ಯ ಯಾತ್ರೆಮೊದಲಿನಂತೆಬದಲಾಗಿಲ್ಲಬದಲಾಗುವುದಿಲ್ಲಬಡವಾಯಿತು ಕನ್ನಡ

Read More

ಲೇಖನ- ವೀಣಾ ಹೇಮಂತ್ ಗೌಡ ಪಾಟೀಲ್ಮುಂಡರಗಿ, ಗದಗ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಓರ್ವ ವ್ಯಕ್ತಿ ಜೀವನದಲ್ಲಿ ಯಶಸ್ಸನ್ನು ಸಾಧಿಸಿದ್ದರೆ ಅದರ ಹಿಂದೆ ಆತನ ಅಪಾರ ಪರಿಶ್ರಮ, ತಾಳ್ಮೆ ಮತ್ತು ಶ್ರದ್ದೆಗಳು ಕಾರ್ಯನಿರ್ವಹಿಸುತ್ತವೆ.ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಬದುಕಿನ ಗುರಿಯನ್ನು ಸಾಧಿಸಲು ತನ್ನದೇ ಆದ ಶ್ರಮದ ಕಂದಾಯವನ್ನುಕಟ್ಟಲೇಬೇಕು.ಪ್ರಾಜ್ಞರು ಹೇಳಿರುವಂತೆ ಯಶಸ್ಸಿಗೆ ಯಾವುದೇ ಅಡ್ಡದಾರಿಗಳಿಲ್ಲ… ಯಶಸ್ಸಿನ ಹಾದಿ ಸುಲಭವಾದದ್ದಲ್ಲ. ಯಶಸ್ಸಿನ ಹಾದಿಯಲ್ಲಿ ಸಾಗಬೇಕಾದರೆ ಹಲವಾರು ಕಷ್ಟಗಳೆಂಬ ಎಡರು ತೊಡರುಗಳನ್ನು ದಾಟಿ, ಬದುಕಿನ ಬವಣೆಗಳನ್ನು ನೀಗಿಕೊಂಡು ಸತತವಾಗಿ ಶ್ರದ್ದೆಯಿಂದ ಗುರಿಯನ್ನು ಬೆಂಬತ್ತಬೇಕು. ಯಾವುದೇ ರೀತಿಯ ಮನರಂಜನೆಗಳಿಗೆ ಅವಕಾಶವಿಲ್ಲದ ದಿನಗಳನ್ನು ಕೂಡ ಕಳೆಯಬೇಕಾಗಬಹುದು.ಗುರಿಯನ್ನು ಬೆನ್ನತ್ತಿ ಯಶಸ್ಸನ್ನು ನಮ್ಮದಾಗಿಸಿಕೊಳ್ಳಲು ಈ ಕೆಲವು ಕ್ರಮಗಳನ್ನು ಬದುಕಿನಲ್ಲಿ ನಾವು ಅಳವಡಿಸಿಕೊಳ್ಳಲೇಬೇಕು. ಸತತ ಪ್ರಯತ್ನ ..ಅವನಿಗೇನು ಬಿಡಪ್ಪ! ಚಿನ್ನದ ಚಮಚ ಬಾಯಲ್ಲಿಟ್ಟುಕೊಂಡು ಹುಟ್ಟಿದ್ದಾನೆ ಎಂದು ಬೇರೆಯವರ ಅದೃಷ್ಟದ ಕುರಿತು ಮಾತನಾಡುವ ಸಾಕಷ್ಟು ಜನರನ್ನು ನಾವು ನೋಡಿದ್ದೇವೆ. ಆದರೆ ಕೇವಲ ಅದೃಷ್ಟದ ಬಲವೊಂದರಿಂದಲೇ ಯಾರೂ ಮುಂದೆ ಬರಲು ಸಾಧ್ಯವಿಲ್ಲ. ನಮ್ಮ ಕಠಿಣ ಪರಿಶ್ರಮವೂ ಬೇಕು. ಅದೃಷ್ಟದಲ್ಲಿ…

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಪಟ್ಟಣದ ಹಡಲಗೇರಿ ರಸ್ತೆಯಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಡಿ.೨೯ ರಂದು ಶ್ರೀ ಅಯ್ಯಪ್ಪ ಸ್ವಾಮಿ ಮಹಾಪೂಜೆ ಮತ್ತು ಪಡಿಪೂಜೆಯನ್ನು ಶ್ರದ್ಧಾ ಭಕ್ತಿಯಿಂದ ಅತ್ಯಂತ ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ.ಅಂದು ಬೆಳಿಗ್ಗೆ ೧೦ಕ್ಕೆ ಅದ್ಧೂರಿ ವಾದ್ಯ ವೈಭವಗಳೊಂದಿಗೆ ಪಟ್ಟಣದ ಕಿಲ್ಲಾ ಗಲ್ಲಿಯಲ್ಲಿರುವ ಶ್ರೀ ಕಾಳಿಕಾ ದೇವಿ ದೇವಸ್ಥಾನದಿಂದ ಪ್ರಮುಖ ರಸ್ತೆಗಳ ಮೂಲಕ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದವರೆಗೆ ಪಲ್ಲಕ್ಕಿ ಉತ್ಸವ ಹಾಗೂ ಶ್ರೀ ಅಯ್ಯಪ್ಪಸ್ವಾಮಿ ಉತ್ಸವ ಮೂರ್ತಿಯ ಅದ್ಧೂರಿ ಮೆರವಣಿಗೆ ನಡೆಯುವದು. ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ೬ಕ್ಕೆ ಮಹಾಪೂಜೆ ಹಾಗೂ ಪಡಿಪೂಜೆ ಪ್ರಾರಂಭವಾಗುವದು. ಭಕ್ತಾದಿಗಳು ಆಗಮಿಸಿ ಶ್ರೀ ಮಣಿಕಂಠನ ಕೃಪೆಗೆ ಪಾತ್ರರಾಗುವಂತೆ ದೇವಸ್ಥಾನ ಕಮೀಟಿಯವರು ವಿನಂತಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಆಲಮಟ್ಟಿ-ಯಾದಗಿರಿ ರೈಲು ಹೋರಾಟವನ್ನು ತೀರ್ವವಾಗಿಸಲು ೪ ದಿನಗಳ ಕಾಲ ಜನಜಾಗೃತಿ ಯಾತ್ರೆಯನ್ನು ಹಮ್ಮಿಕೊಳ್ಳಲು ಡಿ.೨೮ ರಂದು ಬೆಳಿಗ್ಗೆ ೧೦:೩೦ ಕ್ಕೆ ಪಟ್ಟಣದ ಮುಖ್ಯ ಬಜಾರನಲ್ಲಿರುವ ಜನರಲ್ ಲೈಬ್ರರಿಯಲ್ಲಿ ಪೂರ್ವಭಾವಿ ಸಭೆ ಕರೆದಿದ್ದು ಎಲ್ಲಾ ಸಂಘಸAಸ್ಥೆಗಳ ಪದಾಧಿಕಾರಿಗಳು, ವರ್ತಕರು, ಉದ್ದಿಮೆದಾರರು ಹಾಗೂ ರೈಲು ಮಾರ್ಗ ಅಗಲೇಬೇಕೆಂಬ ಆಸಕ್ತ ಮಿತ್ರರು ಭಾಗಿಯಾಗಿ ಹೋರಾಟಕ್ಕೆ ಕೈ ಜೋಡಿಸಬೇಕೆಂದು ಹೋರಾಟದ ಪ್ರಮುಖರಾದ ಬಸವರಾಜ ನಂದಿಕೇಶ್ವರಮಠ ವಿನಂತಿಸಿದ್ದಾರೆ.

Read More

ಸಿದ್ಧೇಶ್ವರ ಸ್ವಾಮೀಜಿಗಳ ಗುರುನಮನ ಕಾರ್ಯಕ್ರಮ | ಮೂರನೇ ಗೋಷ್ಠಿ `ಗ್ರಾಮ ಸಂಸ್ಕೃತಿ’ ಉದ್ಘಾಟನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಎಲ್ಲರೂ ಜಂಗಮರಾಗಲು ಸಾಧ್ಯವಿಲ್ಲ, ಜಂಗಮರು ತಲೆ ಮೇಲೆ ಜಗತ್ತಿನ ಭಾರ ಹೊತ್ತುಕೊಂಡಿದ್ದಾರೆ ಅವರಲ್ಲಿ ನಮ್ಮನ್ನು ಭಾಗಿಸಿ ಸನ್ಮಾರ್ಗದಲ್ಲಿ ನಡೆಸುವ ಶಕ್ತಿ ಇದೆ ಅದನ್ನೇ ಶ್ರೀ ಸಿದ್ಧೇಶ್ವರ ಅಪ್ಪಾವರು ಮಾಡಿ ಹೋಗಿದ್ದಾರೆ ಎಂದು ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸಿದ್ಧಪ್ಪ ಬಿದರಿ ಹೇಳಿದರು.ನಗರದ ಜ್ಞಾನಯೋಗಾಶ್ರಮದ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ಗುರುನಮನ ಕಾರ್ಯಕ್ರಮದ ಮೂರನೇ ಗೋಷ್ಠಿ `ಗ್ರಾಮ ಸಂಸ್ಕೃತಿ’ ಉದ್ಘಾಟಿಸಿ ಮಾತನಾಡಿದ ಅವರು, ನಾವು ಗ್ರಾಮೀಣ ಸಂಸ್ಕೃತಿಯನ್ನು ಮರೆತಿದ್ದೇವೆ. ಹಿರಿಯರ ಮಾತಿಗೆ ಇಂದು ಬೆಲೆ ಇಲ್ಲದಂತಾಗಿದೆ ಇದು ಎಲ್ಲ ಸರಿಯಾಗಬೇಕಾದರೆ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳು ತಿಳಿಸಿರುವ ಗ್ರಾಮ ಸಂಸ್ಕೃತಿ, ಕೃಷಿ ಸಂಸ್ಕೃತಿಯನ್ನು ಪಾಲಿಸಬೇಕು ಎಂದರು.ಅಮೇರಿಕಾದಿಂದ ಆಗಮಿಸಿದ್ದ ಶಿಲ್ಪಾ ಹಾದಿಮನಿ ಅವರು ಮಾತನಾಡಿ, ಅಪ್ಪಾವರ ದೇಹ ತ್ಯಾಗವಾಗಿ ೨ ವರ್ಷಗಳು ಕಳೆದಿವೆ. ಆದರೆ ಅವರು ನೀಡಿರುವ ಸತ್ಯ, ಪ್ರೇಮ, ಪ್ರವಚನಗಳು ನಮ್ಮೊಂದಿಗೆ ಸದಾ ಇವೆ. ಮಾನವೀಯ ಮೌಲ್ಯಗಳನ್ನು ನಮಗೆ…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಪಟ್ಟಣದ ಎಪಿಎಂಸಿ ಯಾರ್ಡನಲ್ಲಿರುವ ಶ್ರೀಧರ್ಮಶಾಸ್ತಾ ಸನ್ನಿದಾನಂ ಹಾಗೂ ಸೇವಾ ಸಮಿತಿ ವತಿಯಿಂದ ೫ನೆಯ ವರ್ಷದ ಅನ್ನ ಸಂತರ್ಪಣೆ ಹಾಗೂ ನೂತನ ಪುರಸಭೆ ಅಧ್ಯಕ್ಷರಿಗೆ, ಉಪಾಧ್ಯಕ್ಷರಿಗೆ ಮತ್ತು ನಾಮ-ನಿರ್ದೇಶಿತ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮವನ್ನು ಡಿ.೨೯ ಭಾನುವಾರದಂದು ಹಮ್ಮಿಕೊಳ್ಳಲಾಗಿದೆ.ಕಾರಣ ಸಧ್ಭಕ್ತರೆಲ್ಲರು ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಜೊತೆಗೆ ಪ್ರಸಾದವನ್ನು ಸ್ವೀಕರಿಸಬೇಕು ಎಂದು ಶ್ರೀಧರ್ಮಶಾಸ್ತಾ ಸನ್ನಿದಾನಂ ಹಾಗೂ ಸೇವಾ ಸಮಿತಿಯ ಅಧ್ಯಕ್ಷ ರಾಜಶೇಖರ ಉಪ್ಪಿನ ವಿನಂತಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಸತತ ಒಂದು ತಿಂಗಳಿನಿಂದ ಚಳಿಯೆನ್ನದೆ ಅವರು ಮಾಡುವ ಭಕ್ತಿ ಸೇವೆ ನಂತರ ಮಕರ ಸಂಕ್ರಾಂತಿ ದಿನದಂದು ಮಕರ ಜ್ಯೋತಿಯ ದರ್ಶನ ಪಡೆದು ತಮ್ಮ ಜೀವನ ಪಾವನ ಪಡೆಸಿಕೊಳ್ಳುತ್ತಾರೆ ಎಂದು ಕಾವ್ಯಾ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಚಂದ್ರಶೇಖರ ನಾಗರಬೆಟ್ಟ ಹೇಳಿದರು.ಪಟ್ಟಣದ ಎಪಿಎಂಸಿ ಆವರಣದಲ್ಲಿರುವ ಅಯ್ಯಪ್ಪ ಸ್ವಾಮಿ ಸನ್ನಿದಿಯಲ್ಲಿ ಪ್ರಸಾದ ಕಾಮತ್ ಅವರ ವತಿಯಿಂದ ನಡೆದ ಮಹಾಪೂಜೆಯಲ್ಲಿ ಭಾಗವಹಿಸಿ ಮಾತನಾಡಿ, ಅಂತಹ ಸೇವಾಧಾರಿಗಳ ಸೇವೆಯಲ್ಲಿ ಪಾಲ್ಗೊಂಡು ನಾವೆಲ್ಲರು ಪ್ರಸಾದ ಸೇವನೆ ಮಾಡುವುದು ಪುಣ್ಯದ ಕಾರ್ಯವಾಗಿದೆ ಎಂದರುಈ ವೇಳೆ ವರ್ತಕ ಗುರುಪ್ರಸಾದ್ ಕಾಮತ್ ಮಾತನಾಡಿದರು.ಇದೇ ಸಂದರ್ಭದಲ್ಲಿ ಗುರುಸ್ವಾಮಿ ಕಿರಣ್ ಶಿವಶಿಂಪಿ ಸೇರಿದಂತೆ ಸುಮಾರು ೫೦ಕ್ಕೂ ಹೆಚ್ಚು ಜನ ಮಾಲಾಧಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಕಾರ್ಯಕ್ರಮದ ನಂತರ ಎಲ್ಲ ಮಾಲಾದಾರಿಗಳಿಗೂ ಸೇರಿದಂತೆ ಭಕ್ತಾದಿಗಳಿಗೆ ಗುರುಪ್ರಸಾದ್ ಕಾಮತ್ ಇವರಿಂದ ಅನ್ನಪ್ರಸಾದ ಸೇವೆ ನೆರವೇರಿಸಿದರು.ಕಾರ್ಯಕ್ರಮದಲ್ಲಿ ಕಸಾಪ ಅದ್ಯಕ್ಷ ಶಿವು ಬಡಾನೂರ, ಮಲ್ಲನಗೌಡ ಪಾಟೀಲ ಇಬ್ರಾಹಿಂಪುರ, ಕಾನಿಪ ಧ್ವನಿ ಸಂಘದ ಅಧ್ಯಕ್ಷ ಪಂಡಿತ ಯಂಪೂರೆ, ಡಾ.ಪ್ರಶಾಂತ್ ಬಮ್ಮಣ್ಣಿ,…

Read More

ಚಿರನಿದ್ರೆಗೆ ಜಾರಿದ ಮಾಜಿ ಪಿಎಂ | ಎಐಸಿಸಿ ಕೇಂದ್ರ ಕಚೇರಿಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ | ಪಾರ್ಥಿವ ಶರೀರಕ್ಕೆ ಪಕ್ಷ ಬೇಧ ಮರೆತು ನಾಯಕರ ಅಂತಿಮ ಗೌರವ ನವದೆಹಲಿ: ಗುರುವಾರ ನಿಧನರಾದ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ಪಾರ್ಥಿವ ಶರೀರಕ್ಕೆ ಅವರ ನಿವಾಸದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಸೇರಿದಂತೆ ಹಲವು ಗಣ್ಯರು ಶುಕ್ರವಾರ ಅಂತಿಮ ನಮನ ಸಲ್ಲಿಸಿದರು.ತ್ರಿವರ್ಣ ಧ್ವಜ ಹೊದಿಸಿದ ಪಾರ್ಥಿವ ಶರೀರಕ್ಕೆ ಪಕ್ಷ ಬೇಧ ಮರೆತು ನಾಯಕರು ಅಂತಿಮ ಗೌರವ ಸಲ್ಲಿಸಿದರು. ಈ ವೇಳೆ ಸಿಂಗ್ ಅವರ ಪತ್ನಿ ಗುರುಶರಣ್ ಕೌರ್ ಮತ್ತಿತರ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.ಅಮೆರಿಕದಲ್ಲಿರುವ ಮನ ಮೋಹನ್ ಸಿಂಗ್ ಅವರ ಮಗಳಿಗಾಗಿ ಕುಟುಂಬ ಕಾಯುತ್ತಿದ್ದು, ಅವರು ಬಂದ ನಂತರ ನಾಳೆ ಪಾರ್ಥಿವ ಶರೀರದ ಅಂತ್ಯಕ್ರಿಯೆ ನಡೆಯಲಿದೆ. ಅಲ್ಲಿಯವರೆಗೂ ಅವರ ನವದೆಹಲಿಯ ನಿವಾಸದಲ್ಲಿಯೇ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.ಶನಿವಾರ ಬೆಳಗ್ಗೆ 8 ಗಂಟೆಗೆ ಕಾಂಗ್ರೆಸ್…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ತಾಯಿಗೆ ಸರಿಸುಮನಾದವರು ಈ ಜಗತ್ತಿನಲ್ಲಿ ಬೇರೆ ಯಾರು ಇಲ್ಲ, ಅವ್ವ ಎಂಬ ಪದದಲ್ಲಿ ಪ್ರೀತಿಯ ರಸವೆ ತುಂಬಿರುತ್ತದೆ. ಅವ್ವ ಜಗತ್ತಿನ ಶ್ರೇಷ್ಠ ದೇವತೆ ಎಂದು ಬುರುಣಾಪುರ ಆರೂಢ ಆಶ್ರಮದ ಯೋಗೇಶ್ವರಿ ಮಾತಾಜಿ ಅಭಿಪ್ರಾಯ ಪಟ್ಟರುಅವರು ಗುರುವಾರ ನಡೆದ ನಗರದ ಕರ್ನಾಟಕ ಕನಕದಾಸ ಶಿಕ್ಷಣ ಸಂಸ್ಥೆಯ ಕನಕ ಪಬ್ಲಿಕ್ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ “ಮಾತೃ ಸಂಗಮ” ‘ಮಾತೃದೇವೋಭವ ‘ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರುಸಾಹಿತಿ, ಪ್ರೊ.ಅಡವಿಸ್ವಾಮಿ ಕೊಳಮಲಿ ಮಾತನಾಡಿ, ಹೆತ್ತು ಹೊತ್ತು ತುತ್ತು ಮಾಡಿ ತಿನಿಸಿದ ತಾಯಿಯ ಋಣವನ್ನು ಯಾವ ಜನ್ಮದಲ್ಲಿ ತೀರಿಸಲು ಸಾಧ್ಯವಿಲ್ಲ ತಂದೆ ತಾಯಿಯನ್ನು ಪೂಜಿಸುವ, ಸೇವೆ ಮಾಡುವ ಸೌಭಾಗ್ಯ ಪುಣ್ಯವಂತರಿಗೆ ಮಾತ್ರ ದೊರೆಯುತ್ತದೆ ನಮ್ಮ ಕಣ್ಣ ಮುಂದೆ ಕಾಣುವ ಜೀವಂತ ದೇವತೆ, ತಾಯಿ ಪ್ರತಿನಿತ್ಯ ಪ್ರತಿಕ್ಷಣವೂ ತಾಯಿಯನ್ನು ಗೌರವಿಸಬೇಕೆಂದು ಹೇಳಿದರುತಾಯಿಯ ಮಹತ್ವ ಕುರಿತು ವಿಶೇಷ ಉಪನ್ಯಾಸ ನೀಡಿದ, ಸಾಹಿತಿ, ಪ್ರೊ ಯು ಎನ್ ಕುಂಟೋಜಿ ಮಾತನಾಡಿ, ಮಕ್ಕಳ ಪಾಲನೆ ಪೋಷಣೆ ಬೆಳವಣಿಗೆಯಲ್ಲಿ ತಾಯಿಯ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಖೋ-ಖೋ ಕ್ರೀಡಾಪಟುಗಳು ೨೦೨೪-೨೫ನೇ ಸಾಲಿನ ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯದ ಕ್ರೀಡೆಗೆ ಆಯ್ಕೆಯಾಗಿದ್ದು, ಇದೇ ದಿ. ೨೮/೧೨/೨೦೨೪ ರಿಂದ ೩೧/೧೨/೨೦೨೪ರ ರವರೆಗೆ ಕ್ಯಾಲಿಕಟ್ ವಿಶ್ವವಿದ್ಯಾನಿಲಯದಲ್ಲಿ ಕ್ರೀಡೆ ಜರುಗಲಿದೆ. ಸದರಿ ಕ್ರೀಡಾಕೂಟದಲ್ಲಿ ಮಹಿಳಾ ವಿವಿಯ ಖೋ-ಖೋ ಕ್ರೀಡಾಪಟುಗಳು, ತಂಡದ ತರಬೇತಿದಾರಾಗಿ ಮಂಜಪ್ಪ ಸಿ.ಎಸ್ ಮತ್ತು ವ್ಯವಸ್ಥಾಪಕರಾಗಿ ಮಹಾಂತೇಶ ಎಲ್. ಭಾಗವಹಿಸಲಿದ್ದಾರೆ.ಆಯ್ಕೆಯಾಗಿರುವ ಕ್ರೀಡಾಪಟುಗಳ ತಂಡಕ್ಕೆ ವಿವಿಯ ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲ, ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ.ಎಚ್.ಎಂ.ಚಂದ್ರಶೇಖರ, ಕ್ರೀಡಾ ನಿರ್ದೇಶನಾಲಯದ ನಿರ್ದೇಶಕ ಡಾ.ಹನುಮಂತಯ್ಯ ಪೂಜಾರ, ಸಹ ನಿರ್ದೇಶಕ ವಿಶ್ವನಾಥ ನಡಕಟ್ಟಿ ಮತ್ತು ಕ್ರೀಡಾ ವಿಭಾಗದ ಮುಖ್ಯಸ್ಥ ಪ್ರೊ.ಸಕ್ಪಾಲ್ ಹೂವಣ್ಣ ಶುಭ ಹಾರೈಸಿದ್ದಾರೆ.

Read More