Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ತಾಲ್ಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ಇಂದು ಅಧಿಕೃತವಾಗಿ ಬಿಡುಗಡೆಗೊಳಿಸಲಾಯಿತು.ಪಟ್ಟಣದ ಶಾಸಕರ ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲಾ ಆವರಣದಲ್ಲಿನ ಪರಿಷತ್ ಭವನದಲ್ಲಿ ಶನಿವಾರ ಸಾಯಂಕಾಲ ಪರಿಷತ್ತಿನ ಪದಾಧಿಕಾರಿಗಳು, ಸಾಹಿತಿಗಳು, ಗಣ್ಯರ ಸಮ್ಮುಖದಲ್ಲಿ ಜನೇವರಿ ಮೂರರಂದು ಜರುಗಲಿರುವ ತಾಲ್ಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಯಿತು.ತಾಲ್ಲೂಕು ಕಸಾಪ ಅಧ್ಯಕ್ಷ ಜಿ.ಪಿ.ಬಿರಾದಾರ, ಪಟ್ಟಣ ಪಂಚಾಯತಿ ಸದಸ್ಯ ಬಶೀರ್ಅಹ್ಮದ ಬೇಪಾರಿ, ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಎ.ಎಚ್.ವಾಲೀಕಾರ, ನಿವೃತ್ತ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಸಿ.ಕೆ.ಕುದರಿ, ಪಿ.ಎಸ್.ಮಿಂಚನಾಳ, ಸೋಮಶೇಖರ ಹಿರೇಮಠ, ಕಾಶೀನಾಥ ಕೋರಿ, ರಮೇಶ ಮಶಾನವರ, ಭೀಮನಗೌಡ ನಾಗರಾಳ, ನಾಗಯ್ಯ ಹಿರೇಮಠ, ಮುನ್ನಾ ಮಳಖೇಡ, ಕಾಶೀನಾಥ ತಳಕೇರಿ, ಪಿ.ಸಿ.ತಳಕೇರಿ, ಪ್ರಕಾಶ ಮಲ್ಹಾರಿ, ಸಿದ್ದು ಮೇಲಿನಮನಿ, ಅರುಣ ಕೋರವಾರ, ರಾಘವೇಂದ್ರ ಗುಡಿಮನಿ, ಇಕ್ಬಾಲ್ ಬಿಜಾಪುರ, ಮುರ್ತುಜಾ ತಾಂಬೋಳಿ, ಸಿದ್ದಪ್ಪ ನಾಗರಳ್ಳಿ, ಅಪ್ಪುಗೌಡ ಪಾಟೀಲ, ಎಸ್.ಜಿ. ತಾವರಖೇಡ, ಸದಾಶಿವ ಗುಡಿಮನಿ, ದಸ್ತಗೀರ ಬಗಲಿ, ಎಸ್.ಆರ್. ನಂದ್ಯಾಳ,…
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಈ ಭಾಗದಲ್ಲಿ ರೈತರು ತೊಗರಿ ಮಾತ್ರ ಬೆಳೆಯುತ್ತಾರೆ. ಅದನ್ನು ಬಿಟ್ಟು ಬೇರೆ ಬೆಳೆಯನ್ನೂ ಬೆಳೆಯಬೇಕು. ಒಂದು ಬೆಳೆ ಕೈಕೊಟ್ಟರೆ ಇನ್ನೊಂದು ಬೆಳೆ ಕೈಹಿಡಿಯುವದು ಎಂದು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಸಚಿವ ಶಿವಾನಂದ ಪಾಟೀಲ ಹೇಳಿದರು.ಪಟ್ಟಣದ ನಾಲತವಾಡ ರಸ್ತೆಯಲ್ಲಿ ನೂತನವಾಗಿ ಪ್ರಾರಂಭಿಸಲಾದ ಖಾಸಗಿ ದಾಲ್ಮಿಲ್ ಉದ್ಘಾಟನೆಯಲ್ಲಿ ಭಾಗಿಯಾಗಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ರೈತರು ಪ್ರತೀ ಸಾರಿ ಕೇಳಿದಷ್ಟು ತೊಗರಿಗೆ ಬೆಂಬಲ ಬೆಲೆ ಕೊಡಲು ಹೇಗೆ ಸಾಧ್ಯ? ಈಗಾಗಲೇ ತೊಗರಿಗೆ ರೂ.೭೬೦೦ ಬೆಂಬಲ ಬೆಲೆ ಘೋಷಿಸಿದ್ದೇವೆ. ಬರುವ ದಿನಗಳಲ್ಲಿ ಬೆಲೆ ಇನ್ನಷ್ಟು ಹೆಚ್ಚಬಹುದು. ಪ್ರತಿಯೊಂದಕ್ಕೂ ಹೆಚ್ಚಳ ಇದ್ದೇ ಇರುತ್ತೆ. ರೈತರು ಆತಂಕಕ್ಕೊಳಗಾಗಿ ಎಂದಿಗೂ ಮಾರಬಾರದು. ತಿಂಗಳ ಹಿಂದೆ ೯-೧೦ಸಾವಿರದವರೆಗೆ ಇತ್ತು. ಈಗ ನಾವು ಬೆಂಬಲ ಘೋಷಿಸಿದ ಮೇಲೆ ಮತ್ತೆ ಹೆಚ್ಚಳವಾಗಬಹುದು. ರೈತರು ಒಂದೇ ಬೆಳೆಯ ಮೇಲೆ ಅವಲಂಬನೆಯಾಗಬಾರದು. ಬೇರೆಯವರನ್ನು ನೋಡಿ ಬಿತ್ತನೆ ಮಾಡಬಾರದು ಎಂದರು.ಈ ವೇಳೆ ಕುಂಟೋಜಿ ಸಂಸ್ಥಾನ ಹಿರೇಮಠದ ಡಾ.ಚನ್ನವೀರ ಶಿವಾಚಾರ್ಯರು, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ…
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ೧೬ರ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ ಇಲ್ಲಿನ ಪಿಎಸ್ಐ ಸಂಜಯ ತಿಪರೆಡ್ಡಿ ಫೋಕ್ಸೋ ಪ್ರಕರಣ ದಾಖಲಿಸಿದ್ದಾರೆ.ತಾಲೂಕಿನ ಕೊಳೂರ ಗ್ರಾಮದ ಸಧ್ಯ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ವರಗೋಡದಿನ್ನಿ ಗ್ರಾಮದಲ್ಲಿ ವಾಸವಿರುವ ಬಾಲಕಿಗೆ ವರಗೋಡದಿನ್ನಿ ಗ್ರಾಮದ ಆರೋಪಿ ಸ್ಥಾನದಲ್ಲಿರುವ ರೇವಣಸಿದ್ದಪ್ಪ ಮಾದರ ಈತ ಪ್ರೀತಿಸುತ್ತೇನೆ ಅಂತಾ ವರಗೋಡದಿನ್ನಿ ಗ್ರಾಮದಲ್ಲಿ ಹೊಸದಾಗಿ ನಿರ್ಮಾಣವಾಗುತ್ತಿರುವ ಸರಕಾರಿ ಶಾಲೆಯೊಂದರಲ್ಲಿ ನಾಲ್ಕೈದು ಬಾರಿ ಸಂಭೊಗ ಮಾಡಿದ್ದು ಅಲ್ಲದೇ ಮುದ್ದೇಬಿಹಾಳದ ತನ್ನ ಚಿಕ್ಕಮ್ಮಳ ಮನೆಯಲ್ಲಿರುವ ಬಾಲಕಿಯನ್ನು ಮದುವೆ ಮಾಡಿಕೊಳ್ಳುವದಾಗಿ ಫುಸಲಾಯಿಸಿ ಕರೆದೊಯ್ದು ತಮ್ಮ ಮನೆಯಲ್ಲಿ ಇಟ್ಟುಕೊಂಡಿರುವದಾಗಿ ಬಾಲಕಿಯ ತಾಯಿ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ.
ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ಗುರುನಮನ ಮಹೋತ್ಸವ | ೫ ನೇ ಗೋಷ್ಠಿ `ಮಾತೃ ಭಕ್ತಿ’ ಕಾರ್ಯಕ್ರಮ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿದ್ಯೆಗೆ ಸಮನಾದಂತಹ ಮಿತ್ರನಿಲ್ಲ, ರೋಗಕ್ಕೆ ಸಮನಾದ ಶತ್ರುವಿಲ್ಲ, ಧರ್ಮಕ್ಕೆ ಸಮನಾದ ಬಂಧುವಿಲ್ಲ ಅಂತೆಯೇ ಮಾತೆಗೆ ಸಮನಾದಂತಹ ದೇವರು ಇಲ್ಲ ಎನ್ನುವ ಸಾಲುಗಳಿಗೆ ಶ್ರೀ ಸಿದ್ಧೇಶ್ವರ ಅಪ್ಪಾಜಿ ಅವರು ಜೀವ ತುಂಬಿದ್ದಾರೆ ಎಂದು ಖ್ಯಾತ ಹೃದಯ ತಜ್ಞೆ ಡಾ.ವಿಜಯಲಕ್ಷ್ಮಿ ಬಾಳೇಕುಂದ್ರಿ ಹೇಳಿದರು.ನಗರದ ಜ್ಞಾನಯೋಗಾಶ್ರಮದಲ್ಲಿ ನಡೆಯುತ್ತಿರುವ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ಗುರುನಮನ ಮಹೋತ್ಸವದ ೫ ನೇ ಗೋಷ್ಠಿ `ಮಾತೃ ಭಕ್ತಿ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅಂತಃಕರಣ, ಮೃದು ಸ್ವಭಾವವನ್ನು ಹೊಂದಿದ್ದ ಸಿದ್ದೇಶ್ವರ ಅಪ್ಪಾವರು ಮಾತೃ ಹೃದಯದವರಾಗಿದ್ದರು. ಮಣ್ಣಿನ ಮುದ್ದೆಯಾಗಿರುವ ಮಗುವನ್ನು ರೂಪ ನೀಡಿ ಬೆಳೆಸುವವಳು ತಾಯಿ. ಇಂದು ಆಂಗ್ಲ ಸಂಸ್ಕೃತಿ ಒಲವಿನಿಂದ ಮಕ್ಕಳಿಗೆ ಮಮ್ಮಿ ಎಂದು ಕರೆಯವುದನ್ನು ಕಲಿಸುತ್ತಿದ್ದೇವೆ. ಮಮ್ಮಿ ಎಂದರೆ ಸತ್ತ ಹೆಣ, ನಾವು ಸತ್ತ ಹೆಣ ಎಂದು ಕರೆಯಿಸಿಕೊಳ್ಳುತ್ತಿದ್ದೆವೆ. ಅದರ ಬದಲು ಮಕ್ಕಳಿಗೆ ಭಾರತೀಯ ಸಂಸ್ಕೃತಿಯಂತೆ ಅವ್ವ-ಅಪ್ಪಾ ಎಂದು…
’ಉದಯರಶ್ಮಿ’ ಪತ್ರಿಕೆ ಅಂಕಣ ಬರಹಗಾರ್ತಿಯಾದ ಕವಯತ್ರಿ ಸುಧಾ ಪಾಟೀಲ ಅವರು ದಿ.29-12-2024 ರಂದು ಡಾ.ಡಿ.ಎಸ್.ಕರ್ಕಿ ಪ್ರಶಸ್ತಿ ಪುರಸ್ಕೃತರಾದ ನಿಮಿತ್ತ ಅವರ ಮತ್ತು ಕವನಸಂಕಲನ ಕುರಿತು ಈ ಲೇಖನ) ಲೇಖನ- ಪ್ರೊ.ಶಕುಂತಲಾ.ಚನ್ನಪ್ಪ.ಸಿಂಧೂರಗದಗಮೊ: ೯೯೮೦೭೧೧೪೩೫. ಉದಯರಶ್ಮಿ ದಿನಪತ್ರಿಕೆ ಕವಯಿತ್ರಿಯ ಕೆಲವು ಪ್ರಮುಖ ಕವನಗಳನ್ನು ಕುರಿತು ವಿಮರ್ಶಾತ್ಮಕವಾದ ನನ್ನ ವಿಚಾರಧಾರೆಯನ್ನು ಬಿತ್ತರಿಸಿರುವ ಲೇಖನವಿದಾಗಿರುತ್ತದೆ.. ಉದಾ: “ಹ್ರೃದಯದ ಮೂಲೆಯಲ್ಲಿಹುಟ್ಟುತಿವೆ ನೆನಪುಗಳುಕಾಡುತಿವೆ ಬಿಡಿಬಿಡಿಯಾಗಿ” ‘ಕಾಡುತಿವೆ ನೆನಪುಗಳು’ ಕವನದ ಈ ಸಾಲುಗಳಲ್ಲಿ ಹುದುಗಿರುವ ಭಾವಗಳಿಗೆ ನೆನಪುಗಳಿಗೆ ಕವಿಯಿತ್ರಿ ಸ್ಪಂದಿಸಿರುವ ಶೈಲಿಯು’ ರೀತಿರಾತ್ಮಾ: ಕಾವ್ಯಸ್ಯ:’ ‘ರೀತಿಯೇ ಕಾವ್ಯದ ಆತ್ಮ’ ಎಂಬ ಕಾವ್ಯ ಮೀಮಾಂಸಕರ ಹೇಳಿಕೆಗೆ ಕೈಗನ್ನಡಿಯಂತಿದೆ. ಅನುಕ್ಷಣವೂ ಅನುದಿನವೂ ಕಾಡುವಂತಹ ಭಾವ ವಿಭಾವ ವಿಶಿಷ್ಟಾನು ಭಾವಪೂರಿತ ನೆನಪುಗಳೊಂದಿಗೆ ತಮ್ಮ ಸಂತಸ ವಿತರಿಸುವ ಧ್ವನಿಯು ಕಾವ್ಯಾತ್ಮಕವಾಗಿದ್ದು ‘ಧ್ವನಿರಾತ್ಮಾ: ಕಾವ್ಯಸ್ಯ:’ ಎಂಬ ವ್ಯಾಖ್ಯಾನಕ್ಕೆ ಉತ್ತಮ ನಿದರ್ಶನದಂತಿದೆ ಭಾವಜೀವಿ ಕವಿಯಿತ್ರಿಯ ಈ ಅನುಭಾವದ ನುಡಿಗಡಣ.ಇದ್ದುಬಿಡು ಇಲ್ಲದಂತೆ ಎಂಬ ಕಾವ್ಯದಲ್ಲಿ ಸುಧಾರವರ ವಾಸ್ತವಿಕ ಜಗತ್ತಿನ ಟೀಕೆ ಅಪಹಾಸ್ಯ ವ್ಯಂಗ್ಯ ವಿಡಂಬನೆ ವೈವಿಧ್ಯಮಯ ಅನಿಸಿಕೆಗಳಿಗೆ ತಮ್ಮನ್ನು ತಾವೇ ಸಂತೈಸಿಕೊಳ್ಳುವ…
– ಹರಿಹರ ಬಿ ಆರ್”ಅಕ್ಷಂತಲ ಬರಹ”ಬೆಂಗಳೂರು ಉದಯರಶ್ಮಿ ದಿನಪತ್ರಿಕೆ ಸೆಳೆಯುತಿದೆ ರವಿ ಚಂದ್ರರಂದದಲಿ ಕುಡಿನೋಟಹಾರುತಿದೆ ಮೇಲೆರಡು ಕಾಮನಬಿಲ್ಲಿನ ಬಾವುಟ ಹೊಳೆಯುತಿದೆ ನಕ್ಷತ್ರದಂತೆ ಹಣೆಯ ಬಿಂದಿಯುಕುಣಿಸುತಿದೆ ಮುಂಗುರುಳು ಮೆರಗಿಸಿ ಗಾಳಿಯು ಝಳಪಿಸುತಿದೆ ಕೋಲ್ಮಿಂಚಿನಂತೆ ಕಣ್ಣಂಚುಗಳುತೋರಿದೆ ಮುತ್ತಿನಂತೆ ಬಾಯಿಯ ಗುಹೆಯೊಳು ಸುತ್ತುವರೆದಿದೆ ಕೆಂಪಾಗಿ ಮೇಲೆಕೆಳಗಿನ ಚೆಂದುಟಿಸಹಕರಿಸುತಿದೆ ಮದ್ಯದಲಿ ನಾಲಿಗೆಯೋ ತುಂಟಿ ಕುಣಿಸುತಲಿದೆ ಬಿಳಿಗಿರಿಯಂತೆ ರಂಗಾದ ಕದಪುಮೇಳೈಸುತಿದೆ ಹವಳದಂತೆ ಬೆವರಿನ ಹೊಳಪು ಹೆಚ್ಚಿಸುತಿದೆ ಅಂದ ಚೆಂದವನು ಗುಳಿಬಿದ್ದ ಗಲ್ಲಕೀಳದಾದೆ ನೆಟ್ಟದೃಷ್ಟಿ ಕಂಡಿತು ಅನುರಾಗವೆಲ್ಲ
ಲೇಖನ- ಹೇಮಲತಾ ಉದಯರಶ್ಮಿ ದಿನಪತ್ರಿಕೆ ಹಳೇ ವಿದ್ಯಾರ್ಥಿಗಳ ಅಲ್ಲುಮಿನಿ ಕಾರ್ಯಕ್ರಮ ಜೂನ್ ಮೊದಲ ವಾರದಲ್ಲಿ ಮೈಸೂರಿನಲ್ಲಿ ಆಯೋಜಿಸಲಾಗಿತ್ತು. ರಾಜ್ಯದ ಬೇರೆ ಬೇರೆ ಊರುಗಳಿಂದ ವಿದ್ಯಾರ್ಥಿಗಳು ಅದೇ ಶಾಲೆಗೆ ಬಂದು ನಲಿದಿದ್ದರು, ಹಳೇ ನೆನಪುಗಳಲ್ಲಿ ಕೊಚ್ಚಿ ಹೋಗಿದ್ದರು, ತಮ್ಮ ಆಗಿನ ಉಪಾಧ್ಯಾಯರನ್ನು ನೆನೆದು ಭಾವುಕರಾಗಿದ್ದರು. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಹರೀಶನಿಗೆ ಅವನ ಗುರುಗಳಾದ ಸ್ವಾಮಿ ಮೇಷ್ಟ್ರನ್ನು ನೆನೆದು ಅವರ ಭೇಟಿಗೆ ಮನಸ್ಸು ಹಾತೊರೆಯಲಾರಂಭಿಸಿತು. ಕಾರ್ಯಕ್ರಮದ ಮರು ದಿನವೂ ಅಲ್ಲೇ ಉಳಿದು ಗುರುಗಳು ವಾಸವಾಗಿದ್ದ ಲಕ್ಷ್ಮಿ ಪುರಕ್ಕೆ ಹಣ್ಣಿನ ಬುಟ್ಟಿ ಮಹಾಲಕ್ಷ್ಮಿ ಸ್ವೀಟ್ ಅಂಗಡಿಯಿಂದ ಸಿಹಿತಿಂಡಿಗಳು, ವುಲನ್ ಶಾಲ್ ಹಿಡಿದು ಹರೀಶ ಹೋದ. ಅಲ್ಲಿ ಸ್ವಾಮಿ ಮೇಷ್ಟ್ರ ಮನೆ ಇದ್ದ ಜಾಗದಲ್ಲಿ ದೊಡ್ಡ ಮಹಡಿ ಮನೆಯೊಂದು ಬೀಗಿ ನಿಂತಿತ್ತು. ಅಕ್ಕ ಪಕ್ಕದವರನ್ನು ವಿಚಾರಿಸಿದಾಗ ಸ್ವಾಮಿ ಮೇಷ್ಟ್ರ ಹೆಂಡತಿಗೆ ಕ್ಯಾನ್ಸರ್ ಚಿಕಿತ್ಸೆಗಾಗಿ ಮನೆ ಮಾರಿದ್ದಾಗಿ ಹೇಳಿ ಅದು ಫಲಿಸದೇ ಮೃತರಾಗಿದ್ದು ತಿಳಿದು ವ್ಯಥಿತನಾದ. ಆಕೆಯ ನಗು ಮುಖ ಮನೆಗೆ ಹೋದಾಗ ಪ್ರೀತಿಯಿಂದ ಹಾಕುತ್ತಿದ್ದ ಕೈ ತುತ್ತು ನೆನಪಾಗಿ…
ಆಲಮಟ್ಟಿ-ಯಾದಗಿರಿ ರೈಲು ಹೋರಾಟದ ಕುರಿತು ನಡೆದ ಪೂರ್ವಭಾವಿ ಸಭೆ ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಆಲಮಟ್ಟಿ-ಯಾದಗಿರಿ ರೈಲು ಹೋರಾಟ ನಡೆದು ಸಾಕಷ್ಟು ದಿನಗಳು ಕಳೆದರೂ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಹೋರಾಟ ಹೋರಾಟವಾಗಿಯೇ ಉಳಿದಿದೆ. ಹಾಗಾಗಿ ಈ ಹೋರಾಟದ ಮತ್ತೊಂದು ಭಾಗವಾಗಿ ಬರುವ ದಿನಗಳಲ್ಲಿ ಆಲಮಟ್ಟಿಯಿಂದ ಯಾದಗಿರಿಯ ವರೆಗೂ ಜನಜಾಗೃತಿ ಯಾತ್ರೆಯನ್ನು ಹಮ್ಮಿಕೊಳ್ಳಲು ನಿರ್ಧರಿಸಿದ್ದೇವೆ ಎಂದು ಹೋರಾಟದ ಪ್ರಮುಖರಾದ ಬಸಯ್ಯ ನಂದಿಕೇಶ್ವರಮಠ ತಿಳಿಸಿದರು.ಪಟ್ಟಣದ ಹಳೆಯ ನ್ಯಾಯಾಲಯದ ಬಳಿ ಇರುವ ಸಾರ್ವಜನಿಕ ವಾಚನಾಲಯದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಆಲಮಟ್ಟಿ-ಯಾದಗಿರಿ ರೈಲು ಹೋರಾಟದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.ರೈಲನ್ನೇ ಹೋಲುವ ವಾಹನವನ್ನು ತಯಾರಿಸಿ ಮೂರರಿಂದ ನಾಲ್ಕು ದಿನಗಳ ಕಾಲ ಜನಜಾಗೃತಿ ಯಾತ್ರೆಯ ಮೂಲಕ ರೈಲು ಮಾರ್ಗದ ಪ್ರತೀ ಹಳ್ಳಿಗಳಿಗೆ ಸಂಚರಿಸಿ ಜನತೆಯ ಸಹಿ ಸಂಗ್ರಹಿಸುವದು. ಬಳಿಕ ಪ್ರಮುಖರು ದೆಹಲಿಗೆ ತೆರಳಿ ಜಂತರ್ ಮಂತರ್ ನಲ್ಲಿ ಸಾಂಕೇತಿಕ ಧರಣಿ ನಡೆಸಿ, ರೈಲಿನಿಂದ ಸರ್ಕಾರಕ್ಕೆ ಮತ್ತು ಸಾರ್ವಜನಿಕರಿಗಾಗುವ ಲಾಭಗಳ ಬಗ್ಗೆ ಮನವಿ ಸಲ್ಲಿಸಿದಲ್ಲಿ ಈ ಬಾರಿ ಕೇಂದ್ರದ ಬಜೆಟ್ ನಲ್ಲಿ ರೈಲು…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ನಿಧನ ಈ ದೇಶಕ್ಕೆ ದೊಡ್ಡ ನೋವು ತಂದಿದೆ ಎಂದು ಶಾಸಕ ಅಶೋಕ ಮನಗೂಳಿ ಸಂತಾಪ ವ್ಯಕ್ತಪಡಿಸಿದ್ದಾರೆ.ಶೈಕ್ಷಣಿಕ ತಜ್ಞನಾಗಿ, ಅರ್ಥಶಾಸ್ತ್ರಜ್ಞನಾಗಿ ಅವರ ಅಧಿಕಾರ ಅವಧಿಯಲ್ಲಿ ಮಾಡಿದ ಕಾರ್ಯಗಳನ್ನು ನಿಜಕ್ಕೂ ಈ ದೇಶ ಎಂದು ಮರೆಯೋದಕ್ಕೆ ಸಾಧ್ಯವಿಲ್ಲ. ಅವರ ಭಾರತಕ್ಕೆ ನೀಡಿದ ಸೇವೆ ಒಂದು ಇತಿಹಾಸವಾಗಿದೆ. ೧೯೯೧ರಲ್ಲಿ ಭಾರತ ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದಾಗ, ಡಾ. ಮನಮೋಹನ್ ಸಿಂಗ್ ಅವರು ಮಂಡಿಸಿದ್ದ ಬಜೆಟ್ ದೇಶದ ಆರ್ಥಿಕತೆಗೆ ಹೊಸ ತಿರುವು ನೀಡಿತು. ಉದಾರೀಕರಣ, ಖಾಸಗೀಕರಣ ಮತ್ತು ವಿದೇಶಿ ಬಂಡವಾಳ ಹೂಡಿಕೆಗೆ ಒತ್ತು ನೀಡಿದ್ದರಿಂದಾಗಿ ಉದ್ಯಮಗಳಿಗೆ ಸ್ವಾತಂತ್ರ್ಯ ಹೆಚ್ಚಿತು ಮತ್ತು ಭಾರತ ಜಾಗತಿಕ ಮಾರುಕಟ್ಟೆಯಲ್ಲಿ ಸ್ಥಾನ ಪಡೆಯಿತು. ಇಂಥ ಮಹಾನ್ ನಾಯಕನ ಜೀವನ ಮತ್ತು ಅವರ ಬದುಕು ನಮಗೆಲ್ಲ ಆದರ್ಶವಾಗಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಶಾಸಕ ಅಶೋಕ ಮನಗೂಳಿ ನುಡಿನಮನ ಸಲ್ಲಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ತಾಲೂಕಿನ ಗೋಲಗೇರಿ ಗ್ರಾಮದಲ್ಲಿ ಮಾಜಿ ಪ್ರಧಾನಿ ಡಾ.ಮನಮೋಹನ ಸಿಂಗ್ ಅವರಿಗೆ ಭಾವಪೂರ್ಣ ಶೃದ್ಧಾಂಜಲಿ ಕಾರ್ಯಕ್ರಮ ನಡೆಸಿದರು.ಕಾರ್ಯಕ್ರಮದಲ್ಲಿ ಮಾಜಿ ಜಿ.ಪಂ.ಸದಸ್ಯ ಮಲ್ಲಣ್ಣ ಸಾಲಿ, ಯುವ ಮುಖಂಡ ಭರತ ಮನಗೂಳಿ, ರವಿರಾಜ ದೇವರಮನಿ, ಶಿವಯೋಗೆಪ್ಪ ಹತ್ತರಕಿ, ಮಡಿವಾಳ ನಾಯ್ಕೋಡಿ, ಬಾಬು ಜಾಲವಾದಿ, ಕುಮಾರ ಗೊಂಧಳಿ, ಭೀಮನಗೌಡ ಚಿಂಚೋಳಿ ಬಾಬುಗೌಡ ಬಿರಾದಾರ ಮಹೇಶ ಮನಗೂಳಿ ಭೀಮನಗೌಡ ಬಿರಾದಾರ, ಸಚೀನ ಪಾಟೀಲ, ರಮೇಶ ತಳವಾರ ಸಾಸಾಬಾಳ, ರೇವಣೆಪ್ಪ ಪೂಜಾರಿ, ದಯಾನಂದ ಪಟ್ಟಣಶೆಟ್ಟಿ, ಗೋಲ್ಲಾಳ ಕುಂಬಾರ, ಸಂಜು ಯಂಕಂಚಿ ಸೇರಿದಂತೆ ಅನೇಕ ಮುಖಂಡರು ಹಾಘೂ ಗ್ರಾಮಸ್ಥರು ಇದ್ದರು.
