ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಶಿಕ್ಷಣವೇ ಪ್ರಬಲ ಅಸ್ತ್ರ, ಇದರ ಮುಂದೆ ಜಗತ್ತಿನ ಯಾವುದೇ ಅಸ್ತ್ರಗಳು ಶೂನ್ಯ, ಶಿಕ್ಷಣ ಜಗತ್ತನ್ನು ಬದಲಾಯಿಸುವದು, ಆದ್ದರಿಂದ ಮನಸ್ಸು ಕೊಟ್ಟು ಓದಿ ಸಾಧನೆ ಮಾಡಿ ಎಂದು ಅಪರ ಜಿಲ್ಲಾಧಿಕಾರಿ ಸೋಮನಿಂಗ ಗೆಣ್ಣೂರ ಹೇಳಿದರು.
ಬಬಲೇಶ್ವರ ತಾಲ್ಲೂಕಿನ ಕಂಬಾಗಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಜಿಲ್ಲಾ ಪಂಚಾಯತ, ಶಾಲಾ ಶಿಕ್ಷಣ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಲಯ ಗ್ರಾಮೀಣ ವಲಯ ವಿಜಯಪುರ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ನಡೆದ ಸರಕಾರದಿಂದ ₹ 2 ಲಕ್ಷ ಅನುದಾನದಲ್ಲಿ ನೂತನ ವಿಜ್ಞಾನ ಪ್ರಯೋಗಲಯ ಮತ್ತು ಸಂದ್ಯಾ ಸಂಕಲ್ಪ ( ನಾನು ಪಾಸಾಗುವೆ ) 2025 ಎನ್ನುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳಿಗಾಗಿ ಅಸ್ತಿಯನ್ನು ಮಾಡುವದಕ್ಕಿಂತ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಬೇಕು. ಪ್ರಯತ್ನ ಗುಟ್ಟಾಗಿರಲಿ ಗೆದ್ದ ಮೇಲೆ ಸಂಭ್ರಮ ಜಗತ್ತಿಗೆ ಮುಟ್ಟುವಂತೆ ನೀವೆಲ್ಲ ಆಸಕ್ತಿಯಿಂದ ಓದಿ ಜಗತ್ತಿಗೆ ಬೆಳಕಾಗಿ ಎಂದು ಶುಭ ಹಾರೈಸಿದರು. ನಿಮ್ಮ ಸಾಧನೆಗೆ ನೀವೇ ದಾರಿದೀಪ ಎನ್ನುವ ಹಾಗೆ ಮಾನ್ಯ ಬಿಇಓ ರವರ ವಿಶೇಷ ಕಾಳಜಿಯಿಂದ ಟಾರ್ಗೆಟ್-625 ಎನ್ನುವ ವಿಶಿಷ್ಟ ವಿನೂತನ ಕಾರ್ಯಕ್ರಮದ ಮೂಲಕ ತಮ್ಮ ಫಲಿತಾಂಶ ಹೆಚ್ಚಿಸಿಕೊಂಡು ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಟ್ಟು ಜೀವನ ನಿರ್ಮಿಸಿಕೊಳ್ಳಬೇಕು. ತಂದೆ ತಾಯಿ ಹಾಗೂ ಶಿಕ್ಷಕರೇ ಈ ದೇಶದ ಹೀರೋಗಳು ಇವರ ಮಾರ್ಗದರ್ಶನದಲ್ಲಿ ನಿಮ್ಮ ಜೀವನ ನಿರ್ಮಿಸಿಕೊಳ್ಳಬೇಕು. ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪ್ರಥಮ ದ್ವಿತೀಯ ತೃತೀಯ ಬಂದವರಿಗೆ ₹ 50 ಸಾವಿರ ಠೇವಣಿ ಇಟ್ಟು ಬರುವ ಬಡ್ಡಿ ಹಣದಿಂದ ಪ್ರೋತ್ಸಾಹ ಧನ ನೀಡಲಾಗುವದು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಗ್ರಾಮೀಣವಲಯದ ಬಿಇಓ ಪ್ರಮೋದಿನಿ ಬಳೋಲಮಟ್ಟಿ ಶಿಕ್ಷಕರ ಪರಿಶ್ರಮದಿಂದ ಮಕ್ಕಳ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವ ಶಾಲೆಯ ಶಿಕ್ಷಕರಿಗೆ ಧನ್ಯವಾದಗಳು. ಪುಸ್ತಕದ ಹುಳುವಾಗಿ, ಎಸ್ಡಿಎಂಸಿ ಸಹಕಾರದಿಂದ ಈ ಶಾಲೆ ಇಡೀ ದೇಶದಲ್ಲಿ ಮಾದರಿಯಾಗಲಿ ಎಂದು ಶುಭ ಹಾರೈಸಿದರು.
ಮುಖ್ಯೋಪಾಧ್ಯಾಯ ಮಲ್ಲಿಕಾರ್ಜುನ ಯರಗುದ್ರಿ ಮಾತನಾಡಿ ಎಸ್ಎಸ್ಎಲ್ಸಿ ಫಲಿತಾಂಶ ಸುಧಾರಣೆಗೆ ನಮ್ಮ ಶಾಲೆಯಲ್ಲಿ ರಾತ್ರಿ ಸಮಯದಲ್ಲಿ ಸಂದ್ಯಾ ಸುರಕ್ಷಾ ಎಂಬ ಚಟುವಟಿಕೆ ಹಮ್ಮಿಕೊಳ್ಳಲಾಗಿದ್ದು, 60 ಮಕ್ಕಳು ರಾತ್ರಿ ಸಮಯದಲ್ಲಿ ಪ್ರತಿ ದಿನ ಪಾಠ ಪ್ರವಚನಕ್ಕೆ ಹಾಜರಾಗುತ್ತಿದ್ದಾರೆ. ಪ್ರತಿ ದಿನ ಒಬ್ಬರು ಶಿಕ್ಷಕರು ನಿಯೋಜನೆ ಇದ್ದು ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದಾರೆ. ಪ್ರತಿ ದಿನ ಎಲ್ಲ ಮಕ್ಕಳ ಪಾಲಕರಿಗೆ ಭೇಟಿ ನೀಡಿ ತಮ್ಮ ಮಕ್ಕಳಿಗೆ ಓದಲು ಎಲ್ಲ ಸಿಬ್ಬಂದಿಗಳು ಪ್ರೇರಣೆ ನೀಡುತ್ತಿದ್ದಾರೆ. ಹಳ್ಳಿಯ ಮಕ್ಕಳು ಕೂಡ ನಾವಿನ್ಯಯುತ ಪ್ರಯೋಜನ ಆಗಲಿ ಎಂದು ವಿಜ್ಞಾನ ಪ್ರಯೋಗಾಲಯ ನಿರ್ಮಿಸಿದ್ದಾರೆ ಎಂದು ಮಾತನಾಡಿದರು.
ಕಾರ್ಯಕ್ರಮದಲ್ಲಿ ಇಸಿಓ ಪ್ರಭು ಬಿರಾದಾರ, ಗ್ರಾಪಂ ಅಧ್ಯಕ್ಷ ಹಣಮಂತ ಸೊನ್ನದ, ಎಸ್ಡಿಎಂಸಿ ಅಧ್ಯಕ್ಷ ಉಮೇಶ ಮಲ್ಲಣ್ಣವರ, ಎಂ.ಪಿ. ಜಾನೋಜಿ, ಮಲ್ಲಪ್ಪ ಸಿಂಗಿ, ಹಣಮಂತ ನಾವಿ, ಪಾಂಡು ದಳವಾಯಿ, ಶ್ರೀಕಾಂತ ತೇಲಿ, ಎಂ. ಎಸ್. ತೊದಲಬಾಗಿ, ಗುರು ಹಿರೇಮಠ, ಎ. ಎಂ. ಬಿರಾದಾರ, ಡಿ.ಜಿ.ಇಮ್ಮನದ, ಜೆ.ಎಸ್.ದೇಶನೂರ ಹಾಜರಿದ್ದರು.

