Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪಟ್ಟಣದ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ತಾಲೂಕು ಕೃಷಿಕ ಸಮಾಜಕ್ಕೆ ೧೫ ಸ್ಥಾನಗಳಿಗೆ ಮಂಗಳವಾರ ಜರುಗಿದ ಚುನಾವಣೆಯಲ್ಲಿ ಎಲ್ಲ ೧೫ ಸ್ಥಾನಗಳಿಗೂ ಒಂದೊಂದೇ ನಾಮಪತ್ರ ಸಲ್ಲಿಕೆಯಾಗಿದ್ದರಿಂದ ಎಲ್ಲ ಸ್ಥಾನಗಳಿಗೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ಎಂ.ಎಚ್.ಯರಝರಿ ಘೋಷಿಸಿದರು.ತಾಲೂಕು ಕೃಷಿಕ ಸಮಾಜಕ್ಕೆ ಕಾರ್ಯಕಾರಿ ಸಮಿತಿಗೆ ಶಿವನಗೌಡ(ಶಿವಣ್ಣ) ಬಿರಾದಾರ, ಮಲ್ಲಪ್ಪ(ಮಲ್ಲಣ್ಣ) ಅಣ್ಣೆಪ್ಪನವರ, ಬಸವರಾಜ ಬ್ಯಾಕೋಡ, ಗೊಲ್ಲಾಳಪ್ಪ ಉಪ್ಪಿನ, ಶಿವಲಿಂಗಪ್ಪ ಮಂಗಾನವರ, ಬಸವರಾಜ ಸೋಮಪುರ, ಅರವಿಂದ ಸಜ್ಜನ, ರವೀಂದ್ರ ಬಾವಿಕಟ್ಟಿ, ಶಂಕರಗೌಡ ಪಾಟೀಲ, ಗುರುಸಂಗಪ್ಪ ಸಜ್ಜನ, ಗುರುನಗೌಡ ಪಾಟೀಲ, ಬಸವರಾಜ ಅವಟಿ, ಶಿವರಾಯ ಕಲಬುರ್ಕಿ, ಎನ್.ಜಿ.ಚಿಕ್ಕೊಂಡ, ಅಶೋಕ ಕಲ್ಲೂರ ಅವರು ಅವಿರೋಧವಾಗಿ ಆಯ್ಕೆಯಾದರು.ನಂತರ ಜರುಗಿದ ಅಧ್ಯಕ್ಷ, ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಖಚಾಂಚಿ, ಜಿಲ್ಲಾ ಪ್ರತಿನಿಧಿ ಸ್ಥಾನಗಳಿಗೆ ಜರುಗಿದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಶಿವನಗೌಡ ಬಿರಾದಾರ, ಉಪಾಧ್ಯಕ್ಷರಾಗಿ ಶಿವಲಿಂಗಪ್ಪ ಮಂಗಾನವರ, ಪ್ರಧಾನ ಕಾರ್ಯದರ್ಶಿಯಾಗಿ ಗೋಲಾಳಪ್ಪ ಉಪ್ಪಿನ, ಖಜಾಂಚಿಯಾಗಿ ಅರವಿಂದ ಸಜ್ಜನ, ಜಿಲ್ಲಾ ಪ್ರತಿನಿಧಿಯಾಗಿ ಬಸವರಾಜ ಸೋಮಪುರ ಅವರು ಅವಿರೋಧವಾಗಿ…
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ತಾಲೂಕಿನ ನಾಗೋಡ ಕ್ರಾಸ್ ಸಮೀಪ ಅಪರಿಚಿತ ವಾಹನವೊಂದು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕಿನಲ್ಲಿ ಹೊರಟಿದ್ದ ಇಬ್ಬರಲ್ಲಿ ಒರ್ವ ಸ್ಥಳದಲ್ಲಿಯೇ ಮೃತಪಟ್ಟರೆ, ಇನ್ನೊರ್ವ ಆಸ್ಪತ್ರೆಯಲ್ಲಿ ಮೃತ ಪಟ್ಟ ಘಟನೆ ಸೋಮವಾರ ರಾತ್ರಿ ಸಂಭವಿಸಿದೆ. ಇರ್ವರೂ ಬಸವನಬಾಗೇವಾಡಿ ಪಟ್ಟಣದ ನಿವಾಸಿಗಳು. ಸ್ಥಳದಲ್ಲಿ ಸಂತೋಷ ಹಿಂಗೋಲಿ(೩೬) ಮೃತ ಪಟ್ಟ ದುರ್ದೈವಿ. ಆಸ್ಪತ್ರೆಯಲ್ಲಿ ಅಮೂಲ(ತುಷಾರ) ಜಾಧವ(೩೪) ಮೃತ ಪಟ್ಟ ದುರ್ದೈವಿ. ಬಸವನಬಾಗೇವಾಡಿಗೆ ಬೈಕ್ ಮೇಲೆ ಬರುವ ಸಂದರ್ಭದಲ್ಲಿ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಹೋದ ಪರಿಣಾಮ ಈ ಅಪಘಾತ ಸಂಭವಿಸಿದೆ ಎಂದು ಪಿಐ ಗುರುಶಾಂತ ದಾಶ್ಯಾಳ ತಿಳಿಸಿದ್ದಾರೆ. ಈ ಕುರಿತು ಬಸವನಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಪಟ್ಟ ಯುವಕರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಪುರಸಭೆ ಸ್ಥಾಯಿ ಸಮೀತಿಯ ಸದಸ್ಯರ ಪಟ್ಟಿ ಅನುಮೋದನೆ ನೀಡುವದು, ಪಟ್ಟಣದ ಸರ್ವೇ ನಂ ೫೯ರ ಜಾಗೆಯಲ್ಲಿನ ಅತಿಕ್ರಮಣ ತೆರವು, ಗಣೇಶ ನಗರದಲ್ಲಿನ ಸರ್ವೇ ನಂ ೭೮ರ ಆಸ್ತಿಯಲ್ಲಿನ ಅತಿಕ್ರಮಣ ಉದ್ಯಾನವನಗಳ ಕುರಿತು ಚರ್ಚೆ, ವಿವಿಧ ಕಾಮಗಾರಿಗಳ ಅನುಮೋದನೆ ನೀಡುವದು, ಪುರಸಭೆ ಕಚೇರಿಯ ಎಲ್ಲ ವಿಭಾಗಕ್ಕೆ ಹೊಸದಾಗಿ ಕಂಪ್ಯೂಟರ್ ಹಾಗೂ ಇತರೆ ಸಾಮಗ್ರಿಗಳ ಖರೀದಿ ಚರ್ಚೆ, ಬೀದಿ ದೀಪಗಳ ದುರಸ್ತಿ ಮತ್ತು ಹಸ್ತಾಂತರ, ಅಂಬೇಡ್ಕರ್ ಭವನ ಲೀಜ್ ಕೊಡುವ ಬಗ್ಗೆ, ತಾಳಿಕೋಟೆ ರಸ್ತೆಯಲ್ಲಿರುವ ಆಶ್ರಯ ಕಾಲೋನಿಯ ಮನೆಗಳಿಗೆ ಸಂಬಂಧಿಸಿದಂತೆ ಠರಾವು ಪುಸ್ತಕದಲ್ಲಿ ಇಲ್ಲದ ಆಸ್ತಿಗಳಿಗೆ ನಮೂನೆ-೩ ಪೂರೈಸುವದು, ವಕೀಲರ ಭವನ ನಿರ್ಮಿಸುವದು ಸೇರಿದಂತೆ ಅಧ್ಯಕ್ಷರ ಅಪ್ಪಣೆಯಂತೆ ಹಲವು ವಿಷಯಗಳು ಮತ್ತು ಹಿಂದಿನ ಸಭೆಯಲ್ಲಿ ಚರ್ಚಿಸಲಾದ ವಿಷಯಗಳ ಪೈಕಿ ಕಾರ್ಯರೂಪಕ್ಕೆ ಬರದ ವಿಷಯಗಳ ಬಗ್ಗೆ ಪುರಸಭೆ ಸಭಾಭವನದಲ್ಲಿ ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಚರ್ಚಿಸಲಾಯಿತು.ಕಳೆದ ಸಭೆಯಲ್ಲಿ ಪಟ್ಟಣದ ಬಸವೇಶ್ವರ ವೃತ್ತದಿಂದ ಬೀದಿ ವ್ಯಾಪಾರಸ್ಥರು ಮುಖ್ಯ…
ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣ | ಸಾಕ್ಷಿಯೇ ಇಲ್ಲದೆ ಬಿಜೆಪಿ ಆರೋಪ | ಗೃಹ ಸಚಿವ ಜಿ ಪರಮೇಶ್ವರ ಸಮರ್ಥನೆ ಬೆಂಗಳೂರು: ಕಳೆದ ವಾರ ಬೀದರ್ನಲ್ಲಿ ನಡೆದ ಗುತ್ತಿಗೆದಾರನ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜೀನಾಮೆಗೆ ಒತ್ತಾಯಿಸುತ್ತಿರುವ ತಮ್ಮ ಸಂಪುಟ ಸಹೋದ್ಯೋಗಿ ಪ್ರಿಯಾಂಕ್ ಖರ್ಗೆ ಅವರನ್ನು ಗೃಹ ಸಚಿವ ಜಿ ಪರಮೇಶ್ವರ ಸಮರ್ಥಿಸಿಕೊಂಡಿದ್ದು, ಸಿಐಡಿ ತನಿಖೆಯಿಂದ ಸತ್ಯ ಹೊರಬೀಳಲಿದೆ ಎಂದು ಮಂಗಳವಾರ ಹೇಳಿದ್ದಾರೆ.ಗುತ್ತಿಗೆದಾರರು ಪ್ರಿಯಾಂಕ್ ಖರ್ಗೆ ಅವರ ಆಪ್ತರೊಬ್ಬರ ವಿರುದ್ಧ ಆರೋಪ ಮಾಡಿರುವ ಏಳು ಪುಟಗಳ ಡೆತ್ ನೋಟ್ ದೊರಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಲೇ ಪ್ರಿಯಾಂಕ್ ಖರ್ಗೆ ಅವರ ರಾಜೀನಾಮೆ ಪಡೆಯಬೇಕು ಎಂದು ಆಗ್ರಹಿಸಿರುವ ಬಿಜೆಪಿ, ಜನವರಿ 4ರೊಳಗೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಇಲ್ಲವಾದರೆ, ಕಲಬುರಗಿಯಲ್ಲಿ ಸಚಿವರ ನಿವಾಸಕ್ಕೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದೆ.’ಗುತ್ತಿಗೆದಾರನ ಆತ್ಮಹತ್ಯೆ ಪ್ರಕರಣದಲ್ಲಿ ನನ್ನ ಪಾತ್ರವಿಲ್ಲ, ಇದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಡೆತ್ನೋಟ್ನಲ್ಲಿ ತಮ್ಮ ಹೆಸರಿಲ್ಲ ಎಂದು ಸ್ವತಃ ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದ್ದಾರೆ. ಹೀಗಿದ್ದರೂ ಬಿಜೆಪಿಯವರು ಅವರನ್ನು…
ಶ್ರೀ ಸಿದ್ಧೇಶ್ವರ ಸ್ವಾಮೀಜಿ ಗುರುನಮನ ಮಹೋತ್ಸವದ ೭ ನೇ ಗೋಷ್ಠಿ `ಸೇವಾಭಾವ’ ಕಾರ್ಯಕ್ರಮ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿಚಾರ ಕ್ರಾಂತಿಯ, ಜ್ಞಾನ ದಾಸೋಹದ ಮೂಲಕ ಕೋಟ್ಯಾಂತರ ಭಕ್ತ ಹೃದಯ ಗೆದ್ದ ವ್ಯಕ್ತಿ ಯಾರಾದರೂ ಇದ್ದರೆ ಅವರೇ ಶ್ರೀ ಸಿದ್ದೇಶ್ವರರು. ನಾವು ನಮ್ಮ ಕಾಯಕದೊಂದಿಗೆ ಪರೋಪಕಾರಿಯಾಗಿ ಜೀವನ ನಡೆಸಿದರೆ ಅಪ್ಪಾಜಿ ಸದಾ ನಮ್ಮ ಜೊತೆಯಲ್ಲಿಯೇ ಇರುತ್ತಾರೆ ಎಂದು ಸೇಡಂನ ಕೊತ್ತಲ ಬಸವೇಶ್ವರ ಶಿಕ್ಷಣ ಸಂಸ್ಥೆ ಸಂರಕ್ಷಕ ಬಸವರಾಜ ಪಾಟೀಲ ಸೇಡಂ ಹೇಳಿದರು.ನಗರದ ಜ್ಞಾನಯೋಗಾಶ್ರಮದಲ್ಲಿ ನಡೆಯುತ್ತಿರುವ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ಗುರುನಮನ ಮಹೋತ್ಸವದ ೭ ನೇ ಗೋಷ್ಠಿ `ಸೇವಾಭಾವ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು,ಸೇವೆ ಮಾಡಬೇಕಾದರೆ ಗಟ್ಟಿ, ಸ್ವಚ್ಛ ಹಾಗೂ ಅಂತಃಕರಣದ ಮನಸ್ಸನ್ನು ಹೊಂದಿರುವುದು ಅವಶ್ಯ. ಯಾವುದೇ ಕೆಲಸ ಮಾಡಿದರು ಅದರಲ್ಲಿ ಆಸೆ, ಆಕಾಂಕ್ಷೆ ಸ್ವಾರ್ಥತೆ ಇಲ್ಲದಿದ್ದರೆ ಅದು ನಿಜವಾದ ಸೇವಾಭಾವ. ಅಂತಹ ಸೇವೆಗಳು ಕೇವಲ ಆಶ್ರಮಗಳಲ್ಲಿ ಸಿಗುತ್ತದೆ. ಸಮಾಜದ ಅಸಹಾಯಕರಿಗೆ, ಬುದ್ಧಿಮಾಂಧ್ಯರಿಗೆ ಆಶ್ರಯ ನೀಡುವ ಸೇವೆಯನ್ನು ಮಾಡುತ್ತಿವೆ. ನಾವು ಆಶ್ರಮ ಸಂಸ್ಕೃತಿಯನ್ನು ಪಾಲಿಸಿಕೊಂಡು…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಪಟ್ಟಣದ ಶ್ರೀಗುರು ಕೃಪಾ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಜ.೦೩ ಶುಕ್ರವಾರದಂದು ಸಾಯಂಕಾಲ ೫ಗಂಟೆಗೆ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಹೆಚ್.ಟಿ.ಕುಲಕರ್ಣಿ ವಹಿಸಲಿದ್ದಾರೆ. ಮುಖ್ಯ ಅಥಿತಿಗಳಾಗಿ ವಿಜಯಪುರ ರಾಣಿಚೆನ್ನಮ್ಮ ವಿಶ್ವವಿದ್ಯಾಲಯದ ಬಿಇಒ ಸದಸ್ಯ ಮಂಜುನಾಥ ಎಂ.ಜುನಗೊಂಡ ವಹಿಸಿಕೊಳ್ಳಲಿದ್ದಾರೆ. ಅತಿಥಿಗಳಾಗಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಮಹಾಂತೇಶ ಯಡ್ರಾಮಿ, ಅಥರ್ಗಾ ಜ್ಞಾನ ಭಾರತಿ ಶಾಲೆಯ ಆಡಳಿತಾಧಿಕಾರಿ ಆರ್.ಬಿ.ಪುರೋಹಿತ, ನಾಗರಹಳ್ಳಿ ಬಸವ ಸಮಿತಿ ಅಧ್ಯಕ್ಷ ಎನ್.ಎಸ್.ಪಾಟೀಲ ಇರಲಿದ್ದಾರೆ. ಪಾಲಕ ಪ್ರತಿನಿಧಿಯಾಗಿ ಪತ್ರಕರ್ತ ಉಪನ್ಯಾಸಕ ಮಹಾಂತೇಶ ನೂಲಾನವರ ವಹಿಸಿಕೊಳ್ಳುವರು ಎಂದು ಸಂಸ್ಥೆಯ ಆಡಳಿತಾಧಿಕಾರಿ ಹೆಚ್.ಜಿ. ಪೋತದಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ತಾಲೂಕಾ ಕೃಷಿಕ ಸಮಾಜದ ೨೦೨೫-೨೬ ರಿಂದ ೨೦೨೯-೩೦ ರ ಅವಧಿಯ ಕಾರ್ಯಕಾರಿ ಸಮಿತಿಯ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಆಯ್ಕೆಗಾಗಿ ಪಟ್ಟಣದ ಸಹಾಯಕ ಕೃಷಿ ನಿರ್ದೇಶಕರ ಕಾರ್ಯಾಲಯದಲ್ಲಿ ಮಂಗಳವಾರ ಚುನಾವಣೆ ಜರುಗಿತು. ಶಿವಪ್ಪಗೌಡ ಬಿರಾದಾರ ಅವರು ಪುನಃ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಬಸಯ್ಯ ಹಿರೇಮಠ, ಪ್ರಧಾನಕಾರ್ಯದರ್ಶಿಯಾಗಿ ದೇವೆಂದ್ರ ಬಡಿಗೇರ, ಖಜಾಂಚಿಯಾಗಿ ಶ್ಯಾಯಪ್ಪ ಪೂಜಾರಿ, ಜಿಲ್ಲಾ ಪ್ರತಿನಿಧಿಯಾಗಿ ರಮೇಶ ಪೂಜಾರ ಅವರು ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆಯಾದರು.ಚುನಾವಣಾಧಿಕಾರಿಯಾಗಿ ಸಹಾಯಕ ಕೃಷಿ ನಿರ್ದೇಶಕ ಡಾ.ಎಚ್.ವಾಯ್.ಸಿಂಗೆಗೋಳ, ಸಹಾಯಕ ಚುನಾವಣಾಧಿಕಾರಿಯಾಗಿ ಕೃಷಿ ಅಧಿಕಾರಿ ಶಿವಾನಂದ ಹೂವಿನಹಳ್ಳಿ ಅವರು ಕಾರ್ಯನಿರ್ವಹಿಸಿದರು.ಚುನಾವಣೆ ಸಂದರ್ಬದಲ್ಲಿ ೨೦೨೫-೨೬ ರಿಂದ ೨೦೨೯-೩೦ ರ ಅವಧಿಯ ಕಾರ್ಯಕಾರಿ ಸಮಿತಿಯ ಸದಸ್ಯರಾದ ಹಿಕ್ಕನಗೂತ್ತಿಯ ನಾಗಪ್ಪ ಬಿರಾದಾರ, ಬಂದಾಳದ ರೇವಣಸಿದ್ದಪ್ಪ ಬಡಾನೂರ, ಸಿಂದಗಿಯ ಸಿದ್ದಪ್ಪ ಹಿರೇಕುರಬರ, ಷಡಕ್ಷರಯ್ಯ ನಂದಿಕೋಲ, ಅರವಿಂದ ಬಿರಾದಾರ, ಶಶಿಕಲಾ ಬಿರಾದಾರ, ಆರ್.ಪಿ. ಬಿರಾದಾರ, ವಕೀಲ ಬಿ.ಜಿ. ನೆಲ್ಲಗಿ, ಅಶೋಕ ಅಲ್ಲಾಪೂರ ಅವರು ಚುನಾವಣೆ ಪ್ರಕ್ರೀಯೆಯಲ್ಲಿ ಭಾಗವಹಿಸಿದ್ದರು.ಈ ಸಂದರ್ಭದಲ್ಲಿ ಕೃಷಿ ಇಲಾಖೆಯಿಂದ ನೂತನ ಅಧ್ಯಕ್ಷ…
ರಾಷ್ಟ್ರೀಯ ಅಹಿಂದ ಸಂಘಟನೆ ಜಿಲ್ಲಾಧ್ಯಕ್ಷ ಸಂತೋಷ ಹರನಾಳ ಅಸಮಾಧಾನ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಅಹಿಂದ, ದಲಿತ ಸಂಘರ್ಷ ಸಮಿತಿ, ರೈತ ಸಂಘ, ಮಹಿಳಾ ಸಂಘಟನೆ, ವಿವಿಧ ಪ್ರಗತಿಪರ ಸಂಘಟನೆಗಳಾಶ್ರಯದಲ್ಲಿ ನಡೆದ ಬಂದ್ನಲ್ಲಿ ನಮ್ಮ ಜಿಲ್ಲೆಯ ಈರ್ವರು ಸಚಿವರು, ನಾಲ್ವರು ಶಾಸಕರಿದ್ದರೂ ಭಾಗವಹಿಸದೇ ಇರುವುದು ಬೇಸರದ ಸಂಗತಿ. ಚುನಾವಣೆಯಲ್ಲಿ ಅಹಿಂದ ವರ್ಗದ ಮತಬೇಕು. ಆದರೆ ಅಹಿಂದ ವರ್ಗದ ಕಷ್ಟಗಳಿಗೆ ಸ್ಪಂದನೆಯಿಲ್ಲ. ಅಹಿಂದ ವರ್ಗದ ಜನಸಂಖ್ಯೆ ಹೆಚ್ಚಿಗಿದ್ದರು ಬೆರೆಳಣಿಕೆಯಷ್ಟು ಜನರು ಶಾಸಕರಾಗುತ್ತಾರೆ. ಕಾರಣ ಹಣದ ಬಲ. ಮುಂಬರುವ ದಿನಮಾನಗಳಲ್ಲಿ ನಮ್ಮ ಜನರು ಯಾರಿಗೂ ಗುಲಾಮರಾಗದೇ ಯಾವ ಹಣಕ್ಕೂ ಆಸೆ ಪಡದೆ. ಹಿಂದುಳಿದ ವರ್ಗದ ಜನರು ಒಗ್ಗಟ್ಟಾಗಿ ಇಂತಹ ಶಾಸಕರಿಗೆ ತಕ್ಕ ಪಾಠ ಕಲಿಸಬೇಕು ಎಂದು ರಾಷ್ಟ್ರೀಯ ಅಹಿಂದ ಸಂಘಟನೆ ಜಿಲ್ಲಾಧ್ಯಕ್ಷ ಸಂತೋಷ ಹರನಾಳ ಹೇಳಿದ್ದಾರೆ.ಈ ಕುರಿತು ಮಂಗಳವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಡಾ.ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಖಂಡಿಸಿ ಡಿ.೩೦ರಂದು ವಿಜಯಪುರ ಬಂದ್ಗೆ ಕರೆ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಸಾರ್ವಜನಿಕರ ಏಳಿಗೆಗಾಗಿ ರಾಜ್ಯ ಸರ್ಕಾರ ಜಾರಿಗೆ ತಂದ ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ, ಶಕ್ತಿ ಹಾಗೂ ಯುವನಿಧಿ ಯೋಜನೆ ಒಳಗೊಂಡ ಪಂಚ ಗ್ಯಾರಂಟಿ ಯೋಜನೆಗಳು ಜನಪರ ಕಾರ್ಯಕ್ರಮಗಳಾಗಿದ್ದು, ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಆರ್ಥಿಕ ಸಬಲೀಕರಣಕ್ಕೆ ತುಂಬಾ ಸಹಕಾರಿಯಾಗಿದೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಶ್ರೀಶೈಲ ಕವಲಗಿ ಹೇಳಿದರು.ಪಟ್ಟಣದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಸರಕಾರದ ೫ಗ್ಯಾರಂಟಿ ಯೋಜನೆಗಳ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಕಾರ್ಯಕ್ರಮಗಳಾದ ಪಂಚ ಗ್ಯಾರಂಟಿ ಯೋಜನೆಗಳು ಸಮಾಜದ ಕಟ್ಟಕಡೆ ವ್ಯಕ್ತಿಗಳಿಗೂ ತಲುಪಬೇಕು. ಜೊತೆಗೆ ಅರ್ಹರಾದ ಎಲ್ಲ ಫಲಾನುಭವಿಗಳಿಗೆ ತಲುಪಿಸುವ ಅಗತ್ಯ ಕ್ರಮಕೈಕೊಳ್ಳಬೇಕು ಎಂದರು.ಈ ವೇಳೆ ಸಮಿತಿ ಸದಸ್ಯ ರಜತ ತಾಂಬೆ, ಎಸ್.ಬಿ.ಖಾನಾಪೂರ, ಸುನಂದಾ ಯಂಪೂರೆ, ಎಮ್.ಎ.ಬೀಳಗಿ ಮಾತನಾಡಿ, ಅನ್ನಭಾಗ್ಯದಲ್ಲಿ ಅಕ್ಕಿ ಮಾಫಿಯಾ ನಡೆಯುತ್ತಿದ್ದು, ಅದರೆಡೆಗೆ ಗಮನವಿರಲಿ. ಬಸ್ಸನಲ್ಲಿ ಪ್ರಯಾಣಿಸುವ ಜನರಿಗೆ ನಿರ್ವಾಹಕರು ಮತ್ತು ಚಾಲಕರು ಮಹಿಳೆಯರಿಗೆ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ರಾಷ್ಟ್ರೀಯ ಟಿ-10 ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿಗೆ ಉತ್ತರ ಕರ್ನಾಟಕ ಹಾಗೂ ಕರ್ನಾಟಕ ರಾಜ್ಯದ ಮಹಿಳಾ ಹಾಗೂ ಪುರುಷ ತಂಡಗಳಿಗೆ ಬೀಳ್ಕೋಡುವ ಸಮಾರಂಭ ಜರುಗಿತು.ಜನೇವರಿ 3 ರಿಂದ 7 ರವರೆಗೆ ಉತ್ತರ ಪ್ರದೇಶದ ವಾರಣಾಸಿಯಲ್ಲಿ ಜರುಗಲಿರುವ ರಾಷ್ಟ್ರೀಯ ಟಿ-10 ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿಗೆ ಉತ್ತರ ಕರ್ನಾಟಕ ಹಾಗೂ ಕರ್ನಾಟಕ ರಾಜ್ಯದಲ್ಲಿ ಎರಡು ಮಹಿಳಾ ಹಾಗೂ ಎರಡು ಪುರುಷ ತಂಡಗಳು ಭಾಗವಹಿಸಲು ಹೊರಡುತ್ತಿದ್ದು ಈ ತಂಡಗಳಿಗೆ ಇಂದು ವಿಜಯಪುರ ನಗರದ ಡಾ. ಬಿ.ಆರ್. ಅಂಬೇಡ್ಕರ ಕ್ರೀಡಾಂಗಣದಲ್ಲಿ ಸಮವಸ್ತ್ರ ವಿತರಣೆ ಮಾಡಿ ಬೀಳ್ಕೊಡಲಾಯಿತು.ಸಮಾರಂಭ ಮುಖ್ಯ ಅತಿಥಿಗಳಾಗಿ ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತ ಡಾ. ಜಾವಿದ ಜಮಾದಾರವರು ಮಾತನಾಡುತ್ತಾ ನಮ್ಮ ವಿಜಯಪುರ ಜಿಲ್ಲೆಯಿಂದ ಈಗಾಗಲೇ ಅಂತರಾಷ್ಟ್ರೀಯ ಮಟ್ಟದಲ್ಲಿ ಕ್ರಿಕೆಟ್ ನಲ್ಲಿ ಆಡುತ್ತಿರುವದು ನಮ್ಮೆಲ್ಲರ ಹೆಮ್ಮೆಯ ಸಂಗತಿ ಶ್ರದ್ಧೆ, ನಿಷ್ಠೆ ಹಾಗೂ ಪರಿಶ್ರಮದಿಂದ ಪ್ರತಿನಿತ್ಯ ತರಬೇತಿ ಪಡೆದಿದೆಯಾದರೆ ಗೆಲವು ಖಚಿತ ನಾವು ಮಹಿಳಾ ಕ್ರಿಕೆಟ್ ಸಂಘಟನೆಯನ್ನು ಹುಟ್ಟು ಹಾಕಿ ಸತತ ಪ್ರಯತ್ನದ…
