Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾಡಳಿತ ವತಿಯಿಂದ ಇದೇ ಜನವರಿ ೧೪ರಂದು ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ, ಜ.೧೯ರಂದು ಮಹಾಯೋಗಿ ವೇಮನ ಜಯಂತಿ ಹಾಗೂ ಜ.೨೧ರಂದು ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮಗಳನ್ನು ಅತ್ಯಂತ ಅರ್ಥಪೂರ್ಣ ಹಾಗೂ ವ್ಯವಸ್ಥಿತವಾಗಿ ಆಚರಿಸಲು ನಿರ್ಧರಿಸಲಾಯಿತು.ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ, ಜನವರಿ ೧೪ರಂದು ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಹಾಗೂ ಜ.೧೯ರಂದು ಜಯಂತಿ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮಗಳನ್ನು ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಮಹನೀಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರೊಂದಿಗೆ ಕಾರ್ಯಕ್ರಮವನ್ನು ನಗರದ ರಂಗಮಂದಿರ ದಲ್ಲಿ ಆಯೋಜಿಸಲಾಗಿದೆ. ಬೆಳಿಗ್ಗೆ ೧೦ ಘಂಟೆಗೆ ಸಿದ್ದೇಶ್ವರ ದೇವಸ್ಥಾನದಿಂದ ರಂಗಮಂದಿರದವರೆಗೆ ಮೆರವಣಿಗೆ ಆಯೋಜನೆ ಮಾಡಲಾಗಿದೆ. ನಂತರ ವೇದಿಕೆ ಕಾರ್ಯಕ್ರಮ ಮಾಡುವ ಮೂಲಕ ಅವರ ವಿಚಾರಧಾರೆಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಉಪನ್ಯಾಸ ಸಂಗೀತ ಕಾರ್ಯಕ್ರಮ ಏರ್ಪಡಿಸಲು ನಿರ್ಧರಿಸಲಾಯಿತು.ಜಿಲ್ಲಾಡಳಿತದಿಂದ ಆಚರಿಸಲಾಗುವ ಈ ಎಲ್ಲ ಮಹನಿಯರ ಜಯಂತಿ ದಿನಗಳಂದು, ಜಯಂತಿ ಕಾರ್ಯಕ್ರಮ ಹಾಗೂ ಮೆರವಣಿಗೆ ಕಾರ್ಯಕ್ರಮ ನಡೆಯುವ ಸ್ಥಳಗಳಲ್ಲಿ…
ಎಸ್.ಎಸ್.ಎಲ್.ಸಿ ಮಾರ್ಗದರ್ಶಿ ಸಾಹಿತ್ಯ ಪುಸ್ತಕ ವಿತರಣಾ ಸಮಾರಂಭ ಹಾಗೂ ಜಿಲ್ಲಾ ಮಟ್ಟದ ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣಾ ಕಾರ್ಯಾಗಾರ ಉದ್ಘಾಟಿಸಿದ ರಾಜ್ಯ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಉತ್ತಮ ಅಂಕ ಗಳಿಸುವಲ್ಲಿ ಶಿಕ್ಷಕರ ಪಾತ್ರ ಮುಖ್ಯವಾಗಿರುತ್ತದೆ ಎಂದು ಧಾರವಾಡದ ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಅಧ್ಯಕ್ಷರಾದ ಸಂಗಮೇಶ ಬಬಲೇಶ್ವರ ಹೇಳಿದರು.ರಾಜ್ಯ ಬಾಲವಿಕಾಸ ಅಕಾಡೆಮಿ, ಧಾರವಾಡ, ಜಿಲ್ಲಾಪಂಚಾಯತ್ ಹಾಗೂ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಂಯುಕ್ತಾಶ್ರಯದಲ್ಲಿ ನಗರದ ಶಿವಶರಣ ಶ್ರೀ ಹೇಮರಡ್ಡಿ ಮಲ್ಲಮ್ಮ ಮಂಗಲ ಕಾರ್ಯಾಲಯದಲ್ಲಿ ಬುಧವಾರದಂದು ಆಯೋಜಿಸಿದ ಎಸ್.ಎಸ್.ಎಲ್.ಸಿ ಮಾರ್ಗದರ್ಶಿ ಸಾಹಿತ್ಯ ಪುಸ್ತಕ ವಿತರಣಾ ಸಮಾರಂಭ ಹಾಗೂ ಜಿಲ್ಲಾ ಮಟ್ಟದ ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣಾ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು ಬಾಲ ಮಂದಿರದಲ್ಲಿರುವ ಮಕ್ಕಳು ಬೀದಿ ಬದಿಯಲ್ಲಿ ಚಿಂದಿ ಆಯುವ, ಬಡ ಕೂಲಿಕಾರ್ಮಿಕರ ಮಕ್ಕಳು ಇಂತಹ ಮಕ್ಕಳ ಶಿಕ್ಷಣಕ್ಕಾಗಿ ಶಿಕ್ಷಕರು ಶ್ರಮಿಸಬೇಕು. ಈ ನಿಟ್ಟಿನಲ್ಲಿ ೪ ಜಿಲ್ಲೆಗಳಲ್ಲಿ ಮಾರ್ಗದರ್ಶಿ ಸಾಹಿತ್ಯ ಪುಸ್ತಕಗಳನ್ನು ವಿತರಿಸಲಾಗುವುದು…
ಲೇಖನ- ಪ್ರೊ.ಶಾರದಾ ಪಾಟೀಲ (ಮೇಟಿ )ಬಾದಾಮಿನಿವೃತ್ತ ಪ್ರಾಣಿಶಾಸ್ತ್ರ ಪ್ರಾಧ್ಯಾಪಕರು ಮತ್ತು ಪ್ರಜ್ಞೆ ಪರಿಸರ ಪ್ರೇಮಿಗಳು ಉದಯರಶ್ಮಿ ದಿನಪತ್ರಿಕೆ ಕಳ್ಳತನ ಮಾಡದಿರುವುದು, ಹಿಂಸಿಸದಿರುವುದು, ಸುಳ್ಳಾಡದಿರುವುದು. ಕೋಪಮಾಡಿಕೊಳ್ಳದಿರುವುದು, ಅನ್ಯರ ಬಗೆಗೆ ಅಸಹನೆ ಪಡದಿರುವುದು, ತನ್ನನ್ನು ತಾನು ಹೊಗಳಿಕೊಳ್ಳದಿರುವುದು, ಇತರರನ್ನು ನಿಂದಿಸದಿರುವುದು-ಈ ಸಪ್ತ ಶೀಲಗಳನ್ನು ಪಾಲಿಸುವುದರಿಂದ ಅಂತರಂಗ ಶುದ್ಧಿಯೂ ಉಂಟಾಗುತ್ತದೆ, ಬಹಿರಂಗ ಶುದ್ಧಿಯೂ ಉಂಟಾಗುತ್ತದೆ ಎನ್ನುತ್ತಾರೆ ಬಸವಣ್ಣನವರು.ಅಂತರಂಗದ ಬೆಳಕು ಬದುಕಿಗೆ ದಾರಿಯಾಗಲಿ, ಬಹಿರಂಗದ ಬೆಳಕು ನಡೆಯುವ ಹಾದಿಗೆ ಬೆಳಕಗಾಲಿ. ಧ್ಯಾನ ದಾನ ದಾಸೋಹ ಕಾಯಕ ಸತ್ಯ ಶುದ್ಧ ನಡವಳಿಕೆ ಚಿಂತನೆ ಆಲೋಚನಾ ಕ್ರಮಗಳು ಮನುಷ್ಯನನ್ನು ಅಂತರಂಗದಲ್ಲಿ ಶುದ್ಧೀಕರಿಸುತ್ತವೆ. ದೈಹಿಕ ಮಾನಸಿಕ ಶುದ್ಧೀಕರಣದ ಅರಿವು ಮನುಷ್ಯನಿಗೆ ಅಗತ್ಯವಾಗಿದೆ.ಆಹಾರ, ಆರೋಗ್ಯದ ಶುದ್ಧೀಕರಣ, ತ್ರಿಕರಣ ಶುದ್ಧೀಕರಣ ಅಂತರಂಗದ ಅರಿವನ್ನು ಜಾಗೃತಗೊಳಿಸುತ್ತವೆ. ಆಸನ ವ್ಯಸನಗಳಲ್ಲಿ ವ್ಯತ್ಯಾಸವಾದಾಗ ಅನಾರೋಗ್ಯದ ಹಾದಿ ಖಂಡಿತ. ಉಂಡಾಗ ದೇಹದ ರಕ್ತಪರಿಚಲನೆ ಉದರದೆಡೆಗೆ ಸುಗಮಗೊಳುವುದು ಸಹಜ ಪ್ರಕ್ರಿಯೆ. ಆದರೆ ಸ್ನಾನದ ಅನಂತರ ರಕ್ತಪರಿಚಲನೆ ದೇಹದ ಮೂಲೆ ಮೂಲೆ ಕಡೆಗೆ ಧಾವಿಸುವುದು ಸಹಜ. ಉತ್ತಮ ಆರೋಗ್ಯಕ್ಕೆ ಸ್ನಾನ ಬಿಸಿನೀರಿನ ಸ್ನಾನವು…
ಲೇಖನ-ಡಾ. ಶಶಿಕಾಂತ ಪಟ್ಟಣರಾಮದುರ್ಗ ಉದಯರಶ್ಮಿ ದಿನಪತ್ರಿಕೆ ಗಂಗಾಂಬಿಕಾ ಐಕ್ಯಸ್ಥಳಬಸವಣ್ಣನವರ ಮೊದಲನೆಯ ಪತ್ನಿ ಗಂಗಾಂಬಿಕಾ. ಇವರು ಸಹೋದರಿ ನೀಲಮ್ಮನವರ ಮಗನಾದ ಬಾಲ ಸಂಗಯ್ಯನ ಜೊತೆ ಕಾದ್ರೊಳ್ಳಿಯ ಕಾಳಗವಾದ ನಂತರಮುಗುಟಖಾನ ಹುಬ್ಬಳ್ಳಿಯ ಮಲಪ್ರಭಾ ನದಿಯಲ್ಲಿ ಐಕ್ಯವಾಗಿದ್ದಾರೆ. ಈಗ ಅತ್ಯಂತ ಸುಂದರ ಸ್ಮಾರಕ ಅಲ್ಲಿ ನಿರ್ಮಾಣಗೊಂಡಿದ್ದು ಬಸವ ಭಕ್ತರಿಗೆ ಸಾಧಕರಿಗೆ ಪೂಜ್ಯ ಸ್ಥಳವಾಗಿದೆ. ಶರಣೆ ಗಂಗಾಂಬಿಕೆ ಸೋವಿದೇವನ ಸೈನಿಕರೊಂದಿಗೆ ಯುದ್ಧ ಮಾಡಿ ದಾರಿಯಲ್ಲಿಯೇ ಮಡಿದರು.ಹರಳಯ್ಯನವರ ಧರ್ಮಪತ್ನಿ ಕಲ್ಯಾಣಮ್ಮಬಯಲುಹೊಂಗಲ ತಾಲ್ಲೂಕಿನ ಇನ್ನೊಂದು ಅತಿ ಪ್ರಮುಖ ಪ್ರದೇಶ ತಿಗಡಿ. ಇಲ್ಲಿ ಹರಳಯ್ಯನವರ ಧರ್ಮಪತ್ನಿ ಕಲ್ಯಾಣಮ್ಮನವರ ಸಮಾಧಿಯು ಅತ್ಯಂತ ಶಿಥಿಲಾವಸ್ಥೆಯಲ್ಲಿದೆ. ಕಲ್ಯಾಣ ಕ್ರಾಂತಿಗೆ ಕಾರಣವಾದ ವರ್ಣಸಂಕರ ಎಂಬ ಆರೋಪದಡಿ ಹರಳಯ್ಯ ಮಧುವರಸರಿಗೆ ಎಳೆಹೂಟೆ ಶಿಕ್ಷೆಯಾಗುತ್ತದೆ. ಅವರೀರ್ವರ ಕಣ್ಣು ಕಿತ್ತು, ಆನೆ ಕಾಲಿಗೆ ಹಾಕಿ ತುಳಿಸಿ ಕೊಂದದ್ದು ದುರಂತ ಇತಿಹಾಸ. ಆನೆಕಾಲಿಗೆ ಕಟ್ಟಿ ಎಳೆದೊಯ್ದ ಪ್ರದೇಶ ಈಗಲೂ ಎಳೆಹೂಟಿ ಪ್ರದೇಶವೆಂದು ಬಸವಕಲ್ಯಾಣದಲ್ಲಿ ಗುರುತಿಸಲ್ಪಟ್ಟಿದೆ.ಅವರಿಬ್ಬರ ಹತ್ಯೆಯ ಮೊದಲೇ ಶೀಲವಂತ ಹಾಗೂ ಲಾವಣ್ಯ ಕಲ್ಯಾಣ ತೊರೆದಿರುತ್ತಾರೆ. ಈಗ ಇವರ ಕುಟುಂಬದಲ್ಲಿ ಉಳಿದವರು ಕಲ್ಯಾಣಮ್ಮನವರು ಮಾತ್ರ…
ಕನ್ನಡ ಮತ್ತು ಸಂಸ್ಕೃತಿ ಸಂಭ್ರಮ-೨೦೨೫ ಸಮಾರಂಭ | ಉಪನ್ಯಾಸ ಉದಯರಶ್ಮಿ ದಿನಪತ್ರಿಕೆ ಗದಗ: ವಿಶ್ವದೆಲ್ಲೆಡೆ ಕರ್ನಾಟಕ ಹೆಸರಾಗಿದೆ, ಜೊತೆಗೆ ಕನ್ನಡ ನುಡಿ ಪ್ರತಿಯೊಬ್ಬ ಕನ್ನಡಿಗನ ಉಸಿರಾಗಬೇಕು, ಕನ್ನಡವನ್ನು ಪ್ರೀತಿಸಬೇಕು. ಯಾಕೆಂದರೆ ಕನ್ನಡ ನಮ್ಮ ನಾಡಿ ಮಿಡಿತ, ಹೃದಯದ ಬಡಿತ, ಮಾತೃ ಪ್ರೇಮದ ತುಡಿತ, ಹಾಗೂ ಬದುಕಿನ ದುಡಿತ, ಕನ್ನಡ ಪ್ರೀತಿಯೇ ಕನ್ನಡಿಗರಿಗೆ ಶಾಶ್ವತ ಎಂದು ವಿಭೂತಿ ಪತ್ರಿಕೆಯ ಸಂಪಾದಕ ಅಂದಾನೆಪ್ಪ ವಿಭೂತಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.ಅವರು ಚಿಕ್ಕಟ್ಟಿ ಶಾಲೆಯ ಸಭಾಭವನದಲ್ಲಿ, ಉತ್ತರ ಕರ್ನಾಟಕ ಕಲಾವಿದರ ಹಾಗೂ ಕಲಾ ಪೋಷಕರ ಸಂಘಟನೆಯಾದ ಕಲಾ ವಿಕಾಸ ಪರಿಷತ್ (ರಿ) ಗದಗ ಮತ್ತು ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕನ್ನಡ ಮತ್ತು ಸಂಸ್ಕೃತಿ ಸಂಭ್ರಮ-೨೦೨೫ ಸಮಾರಂಭಲ್ಲಿ “ಹೆಸರಾಯಿತು ಕರ್ನಾಟಕ” ಎನ್ನುವ ವಿಷಯದ ಮೇಲೆ ಉಪನ್ಯಾಸ ನೀಡಿದರು.ಕರ್ನಾಟಕ ಏಕೀಕರಣ ಹೋರಾಟದ ಮಜಲುಗಳನ್ನು ಮೆಲುಕು ಹಾಕುತ್ತಾ ಹೋರಾಟಗಾರರ ತ್ಯಾಗದ ಬದುಕನ್ನು ಸ್ಮರಿಸಿದರು.ಕಲಾ ವಿಕಾಸ ಪರಿಷತ್ ಪೋಷಕ ಡಾ. ಜಿ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಬಿ.ಎಲ್.ಡಿ.ಇ.ಸಂಸ್ಥೆಯ, ಜೆ.ಎಸ್.ಎಸ್ ಶಿಕ್ಷಣ ಮಹಾವಿದ್ಯಾಲಯಕ್ಕೆ ಜನೇವರಿ 9 ಮತ್ತು 10 ರಂದು ನ್ಯಾಕ್ ತಂಡದ ಭೇಟಿ ನೀಡಲಿದೆ.ಇದೇ ವೇಳೆ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಭೆಯನ್ನು ಕೂಡ ಆಯೋಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕಾಲೇಜಿನ ಹಿರಿಯ ವಿದ್ಯಾರ್ಥಿಗಳು, ಪಾಲಕರು, ಮುಖ್ಯೋಪಾಧ್ಯಾಯರು, ಶಿಕ್ಷಕರು, ಪ್ರಾಚಾರ್ಯರು, ಸಿಬ್ಬಂದಿ, ಪ್ರಶಿಶಿಕ್ಷಣಾರ್ಥಿಗಳು ಉಪಸ್ಥಿತರಿರಲಿದ್ದಾರೆ.ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲಿ ಉಪಸ್ಥಿತರಿರಬೇಕು ಎಂದು ಕಾಲೇಜಿನ ಪ್ರಾಚಾರ್ಯೆ ಬಿ. ವೈ. ಖಾಸನೀಸ ಮಾಧ್ಯಮ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವ ವಿದ್ಯಾನಿಲಯದಲ್ಲಿ ಅಧ್ಯಯನ ಪೀಠಗಳ ಸ್ಥಾಪನೆಗೆ ಅನುದಾನದ ಕೊರತೆ ಇದೆ ಎಂದು ಕುಲಪತಿ ಪ್ರೊ. ಬಿ.ಕೆ.ತುಳಸಿಮಾಲಾ ಹೇಳಿದರು.ಮಹಿಳಾ ವಿವಿ ಘಟಿಕೋತ್ಸವ ಕುರಿತು ಮಾಹಿತಿ ನೀಡಲು ಬುಧವಾರ ಕರೆಯಲಾಗಿದ್ದ ಪತ್ರಿಕಾಗೋಷ್ಟಿಯಲ್ಲಿ ವಿಜಯಪುರ ಜಿಲ್ಲೆಯ ಪತ್ರಿಕಾ ರಂಗದ ಭೀಷ್ಮ ಮೊಹರೆ ಹಣಮಂತರಾಯರ ಹೆಸರಿನಲ್ಲಿ ಅಧ್ಯಯನ ಪೀಠ ಸ್ಥಾಪಿಸಬೇಕೆಂಬ ಬೇಡಿಕೆಯ ಕುರಿತಂತೆ ಪತ್ರಕರ್ತರು ಪ್ರಶ್ನೆ ಕೇಳಿದಾಗ ಅಧ್ಯಯನ ಪೀಠ ಸ್ಥಾಪನೆಗೆ ಅನುದಾನದ ಕೊರತೆ ಇದೆ. ಹೀಗಾಗಿ ಪೀಠ ಸ್ಥಾಪನೆಗೆ ವಿಳಂಬವಾಗಿದೆ ಎಂದರು.ಕಳೆದ ಮೂರು ವರ್ಷಗಳಿಂದ ಅಧ್ಯಯನ ಪೀಠ ಸ್ಥಾಪನೆಗಾಗಿ ಸರಕಾರಕ್ಕೆ ವಿಶ್ವವಿದ್ಯಾನಿಲಯಲಯದಿಂದ ಪ್ರಸ್ತಾವನೆ ಸಲ್ಲಿಸಿ ಅನುದಾನಕ್ಕಾಗಿ ಪ್ರಯತ್ನ ಮಾಡುತ್ತ ಬರಲಾಗಿದೆ. ಈ ಪ್ರಯತ್ನ ಇನ್ನೂ ಸಫಲವಾಗಿಲ್ಲ ಎಂದರು.ಅನುದಾನ ಕೊರತೆಯಿಂದಾಗಿ ಪೀಠ ಸ್ಥಾಪನೆ ವಿಳಂಬವಾಗುತ್ತಿದೆ. ಈ ವರ್ಷವೂ ಅನುದಾನಕ್ಕಾಗಿ ಮತ್ತೆ ಪ್ರಯತ್ನಿಸಲಾಗುವುದು ಎಂದು ಅವರು ಹೇಳಿದರು.ಪತ್ರಿಕಾ ರಂಗಕ್ಕೆ ಮೊಹರೆ ಹಣಮಂಮತರಾಯರ ಕೊಡುಗೆ ಅಪಾರ. ಹೀಗಾಗಿ ಅವರ ಹೆಸರಿನಲ್ಲಿ ವಿಜಯಪುರದ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಒಂದು ಅಧ್ಯಯನ ಪೀಠ ಸ್ಥಾಪಿಸಬೇಕೆಂದು…
ಜಯ್ ನುಡಿ(ವ್ಯಕ್ತಿತ್ವ ವಿಕಸನ ಲೇಖನ ಮಾಲಿಕೆ) – ಜಯಶ್ರೀ.ಜೆ. ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕರುಬೆಳಗಾವಿಮೊ: ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆಕಳೆದ ದಿನವನ್ನು ಹಾಗೆ ಸುಮ್ಮನೇ ಕುಳಿತು ಮೆಲಕು ಹಾಕಿದರೆ ಬೇಸರವೆನಿಸುತ್ತದೆ. ಜೀವನದಲ್ಲಿ ಮತ್ತೆ ಒಂದು ದಿನವನ್ನು ವ್ಯರ್ಥವಾಗಿ ಕಳೆದುಕೊಂಡು ಬಿಟ್ಟೆ. ಏನೂ ಮಾಡಲಾಗಲೇ ಇಲ್ಲ.ನಾಳೆಯಾದರೂ ಸಾರ್ಥಕ ದಿನವನ್ನು ಕಳೆಯೋಣ ಅಂದುಕೊಳ್ಳುತ್ತೇನೆ. ಮತ್ತೇ ಅದೇ ರಾಗ ಅದೇ ಹಾಡು. ಸಮಯವನ್ನು ವೃಥಾ ವ್ಯರ್ಥವಾಗಿ ಕಳೆದು ಬಿಡುತ್ತೇನೆ. ಅದಕ್ಕೆ ಮೂಲ ಕಾರಣ ಹುಡುಕುವುದು ದೊಡ್ಡದೇನಲ್ಲ. ಕೆಲವೇ ಕೆಲ ನಿಮಿಷಗಳಲ್ಲಿ ಮನಸ್ಸು ಉತ್ತರಿಸಿ ಬಿಡುತ್ತದೆ. ಎಲ್ಲ ಉತ್ತಮ ವಿಚಾರಗಳನ್ನು ತಲೆಯಲ್ಲಿಟ್ಟುಕೊಂಡು ಅಡ್ಡಾಡಿದರೆ ಏನು ಪ್ರಯೋಜನ? ಆಸಕ್ತಿಯಿಂದ ಅಂದುಕೊಂಡಿದ್ದನ್ನು ಮಾಡಲು ಮುಂದಾಗಬೇಕು. ಸ್ವಲ್ಪ ಸಮಯ ಆಸಕ್ತಿಯಿಂದ ಚಿಕ್ಕ ಪುಟ್ಟ ಕಾರ್ಯಗಳನ್ನು ನಿರ್ವಹಿಸುತ್ತೇನೆ. ಮುಂದುವರೆದು ಮತ್ತೊಂದಿಷ್ಟು ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು ಎನ್ನುವುದರೊಳಗೆ ಆಸಕ್ತಿ ಬೇಸತ್ತು ಮನದ ಮೂಲೆಯಲ್ಲಿ ಮಲಗಿ ಬಿಡುತ್ತದೆ. ಇದ್ಯಾಕೆ ಹೀಗೆ ನಿರಾಸಕ್ತಿ ಮನದ ಮನೆಯಲ್ಲಿ ಮನೆ ಮಾಡಿದೆ ಎಂದೆನಿಸುತ್ತದೆ. ನಿರಾಸಕ್ತಿ ತುಂಬಿಕೊಂಡರೆ ಮುಗಿದೇ ಹೋಯಿತು. ಬದುಕಿಗೆ ಗೆದ್ದಲು ಹತ್ತಿದಂತೆಯೇ ಸರಿ. ಅಗಾಧ…
ರಚನೆ- ನಾಗಮಣಿ ಎಚ್.ಆರ್(’ನಮ್ಮ ಕಥಾ ಅರಮನೆ’ ಬರಹಗಾರರು) ಉದಯರಶ್ಮಿ ದಿನಪತ್ರಿಕೆ
ಲೇಖನ- ಡಾ.ರಾಜಶೇಖರ ನಾಗೂರ ✍(’ನಮ್ಮ ಕಥಾ ಅರಮನೆ’ ಬರಹಗಾರರು) ಉದಯರಶ್ಮಿ ದಿನಪತ್ರಿಕೆ ಕತ್ತಿಯ ಗಾಯಕ್ಕಿಂತ ಮಾತಿನ ಗಾಯ ತುಂಬಾ ಕೆಟ್ಟದ್ದು ಎನ್ನುವ ಮಾತಿನಂತೆ ಮಾತಿನ ಹರಿತ ಎಷ್ಟು ಎಂದು ಎಲ್ಲರಿಗೂ ತಿಳಿದಿರುವಂತದ್ದು. ಇದನ್ನೇ ಹನ್ನೆರಡನೇ ಶತಮಾನದಲ್ಲಿ ನಮ್ಮ ಶರಣರು ಮಾತಿನ ಕುರಿತು “ಅಯ್ಯಾ ಎಂದರೆ ಸ್ವರ್ಗ, ಎಲವೋ ಎಂದರೆ ನರಕ” ಎಂದಿಲ್ಲವೇ.ಶರಣರು, ಸಂತರು, ಜ್ಞಾನಿಗಳು, ಅನುಭಾವಿಗಳು ಮಾತಿನ ಮಹತ್ವವನ್ನು ಅರಿತು ನಾಲಿಗೆಯಿಂದ ಒಳ್ಳೆಯ ನುಡಿಗಳನ್ನಾಡಿ ಜಗತ್ತಿನ ತುಂಬಾ ಜ್ಞಾನಸೌರಭವನ್ನು ಹರಡಿದ್ದಾರೆ. ಅವರ ಮಾತುಗಳು ಮಾನವ ಕುಲದ ನಂದಾ ದೀಪಗಳು.ಬಸವಣ್ಣನ “ದಯವೇ ಧರ್ಮದ ಮೂಲವಯ್ಯಾ”,ಬುದ್ಧನ “ಸರ್ವಂ ಕ್ಷಣಿಕಂ”,ಮಹಾವೀರನ “ಅಹಿಂಸಾ ಪರಮೋಧರ್ಮ”, ಶಂಕರನ “ಬ್ರಹ್ಮ ಸತ್ಯ ಜಗನ್ಮಿಥ್ಯ” ಎಂಬ ದಿವ್ಯ ನುಡಿಗಳು ನಮಗೆ ಮುತ್ತಿನಂತೆ ಅಲ್ವಾ!ಸೂರ್ಯನ ಕಿರಣಗಳು ಮೊಗ್ಗನ್ನು ಅರಳಿಸುವಂತೆ, ದಾರ್ಶನಿಕರ ನುಡಿಗಳು, ನಮ್ಮವರ ಪ್ರೋತ್ಸಾಹಿಕ ನುಡಿಗಳು ಮೊಗ್ಗಿನಂತ ಸಂಕುಚಿತ ಮನಸ್ಸನ್ನು ಅರಳಿಸಬಲ್ಲವು. ಅಂದರೆ ಮನಸು ಅರಳಲು ಸುಂದರ ಮಾತುಗಳ ಕಾವು, ಬೆಳಕು ಬೇಕೇ ಬೇಕು. ಆಗ ಮಾತು ಮುತ್ತಾಗುತ್ತದೆ.ನಾವಾಡುವ ಮಾತುಗಳು ನಮ್ಮ ಸುತ್ತಲೂ…
