ಉದಯರಶ್ಮಿ ದಿನಪತ್ರಿಕೆ
ಚಿಕ್ಕಪಡಸಲಗಿ: ಹಿಂದು ಧರ್ಮದ ಅಪ್ರತಿಮ ಪ್ರತಿಪಾದಕ,ವೀರ ಸಾಮ್ರಾಟ್ ಛತ್ರಪತಿ ಶಿವಾಜಿ ಮಹಾರಾಜರ ಮನಭಾವದಲ್ಲಿ ಹುದುಗಿದ್ದ ಹಿಂದುತ್ವದ ತಿರುಳುಳ್ಳ ದೇಶಪ್ರೇಮದ ವಿಚಾರಧಾರೆಗಳು ಅನನ್ಯವಾಗಿವೆ. ಅವು ಇಂದಿಗೂ ಜನಮಾನಸದಲ್ಲಿ ಚಿರಸ್ಥಾಯಿಯಾಗಿ ಅಚ್ಚಳಿಯಾಗಿವೆ ಎಂದು ವಿಶ್ರಾಂತ ದೈಹಿಕ ಶಿಕ್ಷಣ ಶಿಕ್ಷಕ ಬಸವರಾಜ ಅನಂತಪೂರ ಹೇಳಿದರು.
ಚಿಕ್ಕಪಡಸಲಗಿ ಗ್ರಾಮದಲ್ಲಿ ಗದುಗಿನ ತೋಂಟದಾರ್ಯ ವಿದ್ಯಾಪೀಠ ಸಂಸ್ಥೆಯ ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಟ್ಟಾ ದೇಶಭಕ್ತಿ,ಸ್ವಾಭಿಮಾನಿಯಾಗಿದ್ದ ಛತ್ರಪತಿ ಶಿವಾಜಿಯವರ ರಾಷ್ಟ್ರ ಪ್ರೇಮ,ಧೈರ್ಯ,ಶೌರ್ಯ,ಸಾಹಸಮಯ ಗುಣಗಳು ಆವಣೀ೯ಯವಾಗಿವೆ ಎಂದರು.
ಶಿವಾಜಿ ಮಹಾರಾಜರ ಜೀವನ ಚರಿತ್ರೆಯ ಯಶೋಗಾಥೆ ರೋಚಕಮಯವಾಗಿದೆ. ವೀರ,ಶೂರತೆ,ಸೌಹಾರ್ದತೆ ದಿಟ್ಟತೆಯ ಬಿಂಬಗಳು ಕಂಡಿವೆ. ರಾಷ್ಟ್ರ ರಕ್ಷಕವೆಂಬ ಹೆಗ್ಗಳಿಕೆಯ ಗುರುತುಗಳು ಅವರ ಧೀರತೆಯ ವ್ಯಕ್ತಿತ್ವಕ್ಕೆ ತಾಗಿವೆ.ಛಲಗಾರ,ಶ್ರೇಷ್ಠ ಆಡಳಿತಗಾರೆಂಬ ಖ್ಯಾತಿ ಪಡೆದು ಮಿನುಗಿದ್ದಾರೆ. ಜನಸಾಮಾನ್ಯರ ಕಳಕಳಿಗೆ ಸ್ಪಂದಿಸಿ ಜನೋಪಕಾರಿ ಸಮಾಜಸೇವಾ ಯೋಜನೆಗಳನ್ನು ತಮ್ಮ ಆಡಳಿತಾವಧಿಯಲ್ಲಿ ಕಾರ್ಯರೂಪಕ್ಕೆ ತಂದು ಜನಮೆಚ್ಚುಗೆ ಪಡೆದಿದ್ದಾರೆ. ಶಿವಾಜಿ ಮಹಾರಾಜರು ದೇಶದ ಅಮೂಲ್ಯ ಆಸ್ತಿಯಾಗಿದ್ದಾರೆ.ಜನಮನದಲ್ಲಿ ಆತ್ಮಮನೋಬಲ ತುಂಬಿದ ದಿವ್ಯಾತ್ಮರಾಗಿದ್ದಾರೆ ಎಂದರು.
ಪ್ರಭಾರ ಮುಖ್ಯೋಪಾಧ್ಯಾಯ ಬಸವರಾಜ ಜಾಲೋಜಿ, ಧಮಾ೯ತೀತ,ಜಾತ್ಯಾತೀತ ಸದ್ಗುಣ, ಸಂಸ್ಕಾರಗಳನ್ನು ಬಿತ್ತಿರುವ ಶಿವಾಜಿ ಮಹಾರಾಜರ ರಾಷ್ಟ್ರಪ್ರೇಮಭಾವದ ಹೃದಯ ವೈಶಾಲ್ಯತೆ ವೈವಿಧ್ಯಮಯವಾಗಿದೆ. ಮಹಾರಾಜರ ಪರಿಕಲ್ಪನೆಗಳು ಭವ್ಯಭಾರತ ಹಿಂದುತ್ವದ ಸಿದ್ಧಾಂತದಲ್ಲಿ ಮೈದೇಳಿವೆ.ದಕ್ಷತೆಯನ್ನು ಪ್ರತಿಬಿಂಬಿಸಿವೆ.
ಇಂಥ ಪರಾಕ್ರಮಿ ಪುಣ್ಯ ಪುರುಷರು ಕಾಣುವುದು ಅಪರೂಪ. ಧೀಮಂತ ಸಾಹಸಿ ಶಿವಾಜಿಯವರ ರಾಷ್ಟ್ರಪ್ರೇಮದ ಧರ್ಮ ಸಂಸ್ಕೃತಿಗಳ ತತ್ವ ,ಚಿಂತನೆಗಳನ್ನು ಮಕ್ಕಳು ಅರಿಯಬೇಕು.ಇಂಥ ಮಹನೀಯರ ಆದರ್ಶಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ಉತ್ತಮ ವಿದ್ಯೆ ಪಡೆದು ಜೀವನ ಶೈಲಿ ಒಳಿತಿನೆಡೆಗೆ ಕಂಡುಕೊಳ್ಳಬೇಕು ಎಂದರು.
ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪುಷ್ಪ ನಮನದೊಂದಿಗೆ ಪೂಜೆ ಸಲ್ಲಿಸಲಾಯಿತು. ಶಿಕ್ಷಕ ಗುಲಾಬಚಂದ ಜಾಧವ, ಲೋಹಿತ ಮಿಜಿ೯, ಶ್ರೀಶೈಲ ಹುಣಶಿಕಟ್ಟಿ, ಶಿಕ್ಷಕಿ ಸಹನಾ ಹತ್ತಳ್ಳಿ (ಕಲ್ಯಾಣಿ), ಪ್ರಮೀಳಾ ತೇಲಸಂಗ, ಶೃತಿ ಲಿಗಾಡೆ ಇತರರಿದ್ದರು.

