Author: editor.udayarashmi@gmail.com

ವಿಭಾಗ, ರಾಜ್ಯ ಮಟ್ಟದ ಖೋಖೋ ಪಂದ್ಯಾವಳಿಗೆ ಆಲಮಟ್ಟಿ ಸಜ್ಜು ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ಕೃಷ್ಣೆಯ ತಟದಲ್ಲಿರುವ ಉದ್ಯಾನ ನಗರಿ ಆಲಮಟ್ಟಿಯಲ್ಲಿ ನಾಳೆಯಿಂದ ಖೋಖೋ ಆಟದ ಕಲರವ ಮೊಳಗಲಿದೆ. ಗ್ರಾಮೀಣ ಪ್ರದೇಶದ ಅಚ್ಚುಮೆಚ್ಚಿನ ಆಟಗಳಲ್ಲೊಂದಾದ ಖೋಖೋ ಪಂದ್ಯಾಟದ ರಸಸ್ವಾದ ಈ ಭಾಗದ ಕ್ರೀಡಾಭಿಮಾನಿಗಳು, ಕ್ರೀಡಾ ಪ್ರಿಯರು ಕಣ್ತುಂಬಿಸಿಕೊಂಡು ಖುಷಿ,ಉಲ್ಲಾಸದಿಂದ ಸವಿಯಲ್ಲಿದ್ದಾರೆ. ಇಂಥದೊಂದು ಸುಕ್ಷಣದ ಸನ್ನಿವೇಶಕ್ಕೆ ಇಲ್ಲಿನ ಆಲಮಟ್ಟಿ ಡ್ಯಾಂ ಸೈಟಿನ ಶಾಲಾ ಮೈದಾನ ಇದೀಗ ಸಜ್ಜಾಗಿ ಕಂಗೊಳಿಸುತ್ತಿದೆ. ಸುಸಜ್ಜಿತ ನಾಲ್ಕು ಆಟದ ಅಂಕಣಗಳು ನಿಮಿ೯ಸಲಾಗಿದ್ದು ಇಲ್ಲಿ ಏಕಕಾಲದಲ್ಲಿಯೇ ಕಸರತ್ತಿನ ಖೋಖೋ ಪಂದ್ಯ ನಡೆಯಲಿದೆ. ಪ್ರತಿಷ್ಠಿತ ತಂಡಗಳು ಪ್ರತಿ ಆಟದಲ್ಲೂ ತಮ್ಮ ಹಣಾಹಣಿಭರಿತ ಮಿಂಚಿನ ವೇಗದ ಸ್ಪರ್ಧಾ ಕೌಶಲ್ಯ ಒರೆಗಲ್ಲಿಗೆ ಹಚ್ಚಲ್ಲಿವೆ. ಈ ಸವಿರಸ ಕ್ಷಣಗಳನ್ನು ವೀಕ್ಷಿಸುವ ಅವಕಾಶ ಕ್ರೀಡಾಸಕ್ತ ಪ್ರೇಮಿಗಳು ಕೌತಕದಿಂದ ಎದುರು ನೋಡುತ್ತಿದ್ದಾರೆ ! ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳ ಬೆಳಗಾವಿ ವಿಭಾಗ ಮತ್ತು ರಾಜ್ಯ ಮಟ್ಟದ ಖೋಖೋ ಪಂದ್ಯಾವಳಿ ಇಲ್ಲಿ ಜರುಗಲ್ಲಿದ್ದು , ನ.೧೨ ರಂದು…

Read More

ಎಕ್ಸಲಂಟ್ ಪದವಿ ಪೂರ್ವ ವಿಜ್ಞಾನ ಕಾಲೇಜಿನಲ್ಲಿ ‘ಹಾಸ್ಯಸಂಜೆ’ ಉದ್ಘಾಟನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಇಂದಿನ ಧಾವಂತದ ದಿನಗಳಲ್ಲಿ ನಮ್ಮತನದ ಸ್ವಾಭಿಮಾನ ಮಾನವೀಯತೆ ಮರೆತಿದ್ದೇವೆ. ದ್ಯಾನ, ದಾನ, ದಯೆ ಕಾಯಕ, ಅಂತಃಕರಣ ನಮ್ಮ ಉಸಿರಾಗಬೇಕು. ಕಷ್ಟದಲ್ಲಿ ಕೈ ಹಿಡಿದು ನೆರವಾದವರಿಗೆ ಪ್ರತಿಯಾಗಿ ನಾವೂ ಸಹಾಯ ಮಾಡಬೇಕು. ಕಳೆದ ವರ್ಷದ ಸಮಸ್ತ ದಿನಗಳು ಉತ್ತಮ ಅನುಭವಗಳೇ ಹೊಸ ವರ್ಷಕ್ಕೆ ಮಾರ್ಗದರ್ಶನವಾಗಲಿ ಎಂದು ಹಾಸ್ಯ ಕಲಾವಿದೆ ಇಂದುಮತಿ ಸಾಲಿಮಠ ನುಡಿದರು.ಅವರು ವಿಜಯಪುರ ನಗರದ ಕೆ.ಎಸ.ಆರ್.ಟಿ.ಸಿ. ಕಾಲನಿಯಲ್ಲಿರುವ ಎಕ್ಸಲಂಟ್ ಪದವಿ ಪೂರ್ವ ವಿಜ್ಞಾನ ಕಾಲೇಜಿನ ಶಾರದಾ ಸಭಾಂಗಣದಲ್ಲಿ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾದ ‘ಹಾಸ್ಯಸಂಜೆ’ ಉದ್ಘಾಟಿಸಿ ಮಾತನಾಡುತ್ತಾ, ಒತ್ತಡ ಜೀವನದಲ್ಲಿ ಆನಂದವಾಗಿರಲು ನಗುವೇ ದಿವ್ಯ ಔಷಧಿಯಾಗಿದೆ. ಎದುರಾಗುವ ಸಮಸ್ಯೆಗಳಿಗೆ ನಗುತ್ತಾ ಉತ್ತರಿಸಬೇಕು. ಸಾಧನೆಯಿಂದ ಎಷ್ಟೇ ಎತ್ತರಕ್ಕೆ ಬೆಳೆದರು ಕೂಡಾ ಸರ್ವರ ಹೃದಯಕ್ಕೆ ಹತ್ತಿರವಾದಾಗಲೇ ಜೀವನ ಸಾಫಲ್ಯ ಎಂದರು.ಕಾರ್ಯಕ್ರಮ ಆಯೋಜಿಸಿದ ಎಕ್ಸಲಂಟ್ ಸಂಸ್ಥೆಯ ನಿರ್ದೇಶಕಿ ಪುಷ್ಪಾ ಬ. ಕೌಲಗಿ ಮಾತನಾಡಿ, ನಗುವುದು ಸಹಜ ಧರ್ಮ ನಗಿಸುವುದು ಪರಧರ್ಮ ಎಂಬ ಕವಿವಾಣಿಯಂತೆ ನಾವೆಲ್ಲ…

Read More

ಉದಯರಶ್ಮಿ ದಿನಪತ್ರಿಕೆ ಚಡಚಣ: ಇಂದಿನ ಆಧುನಿಕ ಯುಗದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ ಎನ್ನುವ ದೃಷ್ಟಿಯಿಂದ ಪ್ರತಿ ಮಗು ಶಿಕ್ಷಣದಿಂದ ವಂಚಿತರಾಗಬಾರದೆಂದು ಸರಕಾರ ಹಾಗೂ ಸಂಘ ಸಂಸ್ಥೆಗಳು ಹಲವಾರು ಯೋಜನೆಗಳ ಮೂಲಕ ಸಹಾಯ ಹಸ್ತ ನೀಡುತ್ತಿವೆ ಎಂದು ಮುಂಬೈನ ಸೇಠ ಟಾಪಿದಾಸ ಹಾಗೂ ತುಳಸಿದಾಸ ವೈಜಿದಾಸ ಚಾರಿಟೇಬಲ್ ಟ್ರಸ್ಟಿನ ಸಂಚಾಲಕ ವಿಶ್ವನಾಥ ಸಿಂದಗಿ ಹೇಳಿದರು.ಅವರು ತಾಲೂಕಿನ ಹೊಳೆಸಂಖ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸ್ಮಾರ್ಟ್ ಬೋರ್ಡ್ ದೇಣಿಗೆ ನೀಡಿ ಮಾತನಾಡುತ್ತಿದ್ದರು.ಗ್ರಾಮೀಣ ಭಾಗದ ಮಕ್ಕಳಿಗೆ ಶೈಕ್ಷಣಿಕವಾಗಿ ಏನನ್ನಾದರು ನೀಡಬೇಕೆಂಬುದು ನನ್ನ ಕನಸಿತ್ತು.ದೊರೆತ ಅಧಿಕಾರದ ಅವಕಾಶ ಬಳಸಿಕೊಂಡು ಈ ಸೇವೆ ಮಾಡಿದ್ದೇನೆ.ಇದನ್ನು ಶಿಕ್ಷಕರು ಬಳಸಿಕೊಂಡು ಮಕ್ಕಳ ಉಜ್ವಲ ಭವಿಷ್ಯವನ್ನು ರೂಪಿಸಬೇಕು ಎಂದು ಹೇಳಿದರು.ಶಿಕ್ಷಕ ವಿಜಯಕುಮಾರ ಖವೇಕರ ಸ್ವಾಗತಿಸಿ ನಿರೂಪಿಸಿದರು.ಶಿಕ್ಷಕ ಶಶಿಧರ ಕಾಂಬಳೆ ವಂದಿಸಿದರು.ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ಬಸವರಾಜ ಡೊಳ್ಳಿ, ಉಪಾಧ್ಯಕ್ಷರಾದ ಜಗದೇವ ಕ್ಷತ್ರಿ, ಹಿರಿಯರಾದ ಭೈರಪ್ಪ ಮಡಸನಾಳ,ಸತೀಶ ಜತ್ತಿ,ಎಸ್ ಬಿ ಮಡಸನಾಳ,ಶಿಕ್ಷಣ ಸಂಯೋಜಕ ಸಂಗಮೇಶ ಸೂರಜ, ಸಮೂಹ…

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಪಟ್ಟಣದ ದಿ ಕೋ ಅಪ್ ಬ್ಯಾಂಕ್ ಇದು ಹಿರಿಯರು ಕಟ್ಟಿದ ಬ್ಯಾಂಕು. ಅವರು ಹಾಕಿದ ಮಾರ್ಗದಲ್ಲಿ ನಡೆದು ಹೆಚ್ಚೆಚ್ಚು ಬ್ರಾಂಚುಗಳನ್ನು ಸ್ಥಾಪಿಸುವಂತಾಗಲಿ ಎಂದು ಜಿಲ್ಲಾ ಪಂಚಾಯತ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಹೇಳಿದರು.ತಾಲೂಕಿನ ಯರಝರಿ ರಸ್ತೆಯಲ್ಲಿರುವ ತಮ್ಮ ತೋಟದಲ್ಲಿ ಬ್ಯಾಂಕ್ ಗೆ ನೂತನವಾಗಿ ಆಯ್ಕೆಯಾದ ಆಡಳಿತ ವರ್ಗಕ್ಕೆ ಮತ್ತು ಜೆಓಸಿಸಿ ಬ್ಯಾಂಕ್ ಗೆ ಆಯ್ಕೆಯಾದ ಅರವಿಂದ್ ಹೂಗಾರ ಮತ್ತು ಆನಂದ ಬಿರಾದಾರ ಇವರನ್ನು ಅಸ್ಮಾನಿಸಿ ಗೌರವಿಸಿ ಅವರು ಮಾತನಾಡಿದರು.ಸಧ್ಯ ಕರ್ನಾಟಕ ಬ್ಯಾಂಕು ಉತ್ತಮವಾಗಿ ಸಾಗುತ್ತಿದೆ. ಎಲ್ಲ ರೈತರಿಗೆ, ವ್ಯಾಪಾರಸ್ಥರಿಗೆ ಇನ್ನಷ್ಟು ಸೇವೆ ನೀಡಿ ಹೆಚ್ಚೆಚ್ಚು ಬ್ರಾಂಚುಗಳನ್ನು ಸ್ಥಾಪಿಸುವಂತಾಗಲಿ ಎಂದು ಹರಸಿದರು.ಜೆಓಸಿಸಿ ಬ್ಯಾಂಕಿಗೆ ನಮ್ಮ ಆತ್ಮೀಯರು ಆಯ್ಕೆಯಾಗಿದ್ದು ಖುಷಿ ತಂದಿದೆ. ಈಗಾಗಲೇ ಈ ಇಬ್ಬರು ಸಾಕಷ್ಟು ಹೆಸರು ಮಾಡಿದ್ದು ಬರುವ ದಿನಗಳಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದರು.ಭಾಜಪಾ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ ಮತ್ತು ಕಸಾಪ ಮಾಜಿ ಅಧ್ಯಕ್ಷ ಎಂ.ಬಿ.ನಾವದಗಿ ಮಾತನಾಡಿ ಶೇರುದಾರರು ನಿಮ್ಮೆಲ್ಲರ ಮೇಲೆ ವಿಶ್ವಾಸವನ್ನಿಟ್ಟು ಜವಾಬ್ದಾರಿ ನೀಡಿದ್ದಾರೆ.…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ತೊಗರಿ ಕಾಳಿಗೆ ಬೆಂಬಲ ಬೆಲೆ ಹೆಚ್ಚಳಕ್ಕೆ ಭಾರತೀಯ ಜನತಾ ಪಕ್ಷದ ಕೇಂದ್ರ ಸರಕಾರಕ್ಕೆ ಆಗ್ರಹ ಮಾಡಬೇಕೆಂದು ಎಂದು ಭುಯ್ಯಾರ ಗ್ರಾಮದ ಕೃಷಿಕ ಕೃಷ್ಣ ಆದ್ಯ ಜಿಲ್ಲಾ ಬಿಜೆಪಿ ಘಟಕಕ್ಕೆ ಅಗ್ರಹಿಸಿದ್ದಾರೆ.ಪ್ರತಿಕೂಲ ಹವಾಮಾನದ ಫಲವಾಗಿ ತೊಗರಿ ಬೆಳೆ ಸಂಪೂರ್ಣ ಹಾಳವಾಗಿ ಪ್ರತಿಶತ ೨೫% ಮಾತ್ರ ಫಸಲು ಬಂದಿದ್ದು ರೈತರು ಕಂಗಾಲಾಗಿದ್ದಾರೆ ಇಂತಹ ಸಮಯದಲ್ಲಿ ರೈತರ ನೆರವಿಗೆ ಬಿಜೆಪಿ ಪಕ್ಷ ಬರಬೇಕಿದೆ ತೊಗರಿಗೆ ಕನಿಷ್ಠ ಬೆಲೆ ೯೦೦೦ ರೂಪಾಯಿ ರಾಜ್ಯ ಸರ್ಕಾರ ಕೊಡಬೇಕು ಜೊತೆಗೆ ಕೇಂದ್ರ ಸರ್ಕಾರ ೧೫೦೦ ರುಪಾಯಿ ಕೊಟ್ಟು ರೈತರ ನೆರವಿಗೆ ಬರಬೇಕು ರಾಜ್ಯ ಸರ್ಕಾರ ಕೇವಲ ಪ್ರತಿ ಕ್ವಿಂಟಾಲ್‌ಗೆ ೭೬೦೦ ರುಪಾಯಿ ನಿಗದಿ ಮಾಡಿದ್ದು ತುಂಬಾ ಕಡಿಮೆ ಆಗುತ್ತದೆ ಎಂದು ಹೇಳಿದ ಅವರು ಬರಿ ಪಕ್ಷದ ಆಂತರಿಕ ಕಚ್ಚಾಟ ಬಿಟ್ಟು ಬೇಗನೆ ರೈತರ ನೆರವಿಗೆ ಬರಬೇಕೆಂದು ಒತ್ತಾಯಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಸಿದ್ದೇಶ್ವರ ದೇವಸ್ಥಾನ ಆವರಣದಲ್ಲಿರುವ ಸಿದ್ಧಸಿರಿ ಸೌಹಾರ್ದ ಸಹಕಾರಿಯ ಮುಖ್ಯ ಕಚೇರಿಗೆ ಶುಕ್ರವಾರ ಆಕಸ್ಮಿಕ ಭೇಟಿ ನೀಡಿದ್ದ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷರಾದ ಸಂಗಮೇಶ ಬಬಲೇಶ್ವರ ಮತ್ತು ಉದ್ಯಮಿ ಶಾಂತೇಶ ಕಳಸಗೊಂಡ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.ಸಹಕಾರಿಯ ವ್ಯವಸ್ಥಾಪಕ ನಿರ್ದೇಶಕರಾದ ಜೊತಿಬಾ ಖಂಡಾಗಳೆ ಮತ್ತು ಜಂಟಿ ವ್ಯವಸ್ಥಾಪಕ ನಿರ್ದೇಶಕರಾದ ರಾಘವ ಅಣ್ಣಿಗೇರಿ ಅವರು, ಸಿದ್ಧಸಿರಿ ಸೌಹಾರ್ದ ಸಹಕಾರಿಯ ಸೇವೆಗಳು, ಸೌಲಭ್ಯಗಳು, ಸಾಮಾಜಿಕ ಕಾರ್ಯಗಳು ಹಾಗೂ ಸಹಕಾರಿಯ ಬೆಳವಣಿಗೆ ಕುರಿತು ಮಾಹಿತಿ ನೀಡಿ, ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಅವರ ಅಧ್ಯಕ್ಷತೆಯಲ್ಲಿ ಸಹಕಾರಿಯು, ಕರ್ನಾಟಕ ರಾಜ್ಯಾದ್ಯಂತ 165 ಶಾಖೆಗಳು ಕಾರ್ಯನಿರ್ವಹಿಸುತ್ತಿದ್ದು, 1,480 ಸಿಬ್ಬಂದಿಗಳು ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸ್ತುತ ರೂ.64.83 ಕೋಟಿ ಶೇರು ಬಂಡವಾಳ, ರೂ.3,897 ಕೋಟಿ ಠೇವಣಿ ಹೊಂದಿದ್ದು, ರೂ.2,822 ಕೋಟಿ ಸಾಲ ವಿತರಿಸಲಾಗಿದೆ. ರೂ.4,042 ಕೋಟಿ ದುಡಿಯುವ ಬಂಡವಾಳ ಹೊಂದಿರುವ ನಮ್ಮ ಸಹಕಾರಿ, ಕೇವಲ 18 ವರ್ಷಗಳಲ್ಲಿ ಅಭೂತಪೂರ್ವ ಸಾಧನೆ ಮಾಡಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸ್ನಾತಕೋತ್ತರ ಗಣಕ ವಿಜ್ಞಾನ ವಿಭಾಗದಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕೇಂದ್ರದಲ್ಲಿ ಸರ್ಕಾರ ಕೋಟಾದಡಿ ಖಾಲಿ ಉಳಿದಿರುವ ವಿಜಯಪುರದ ಎಂ.ಸಿಎ ಕೋರ್ಸಿನ ಸೀಟುಗಳ ಭರ್ತಿಗಾಗಿ ವಿಶ್ವವಿದ್ಯಾಲಯದ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ಜನವರಿ ೨೧ ಆಯಾ ಕೇಂದ್ರದಲ್ಲಿ ನಡೆಸಲಾಗುವುದು.ಅರ್ಹ ಅಭ್ಯರ್ಥಿಗಳು UUಅಒS ತಂತ್ರಾಂಶದಲ್ಲಿ ಜನವರಿ ೧೦ ರಿಂದ ಜ.೧೮ರ ವರೆಗೆ ಅರ್ಜಿ ಸಲ್ಲಿಸಬಹುದು. ಸಲ್ಲಿಸಿದ ಅರ್ಜಿಯೊಂದಿಗೆ ನಿಗಧಿತ ಶುಲ್ಕ ಭರಿಸಿ, ಧೃಡಿಕೃತ ಅಗತ್ಯ ದಾಖಲೆಗಳನ್ನು ಲಗತ್ತಿಸಿ ೨೦-೦೧-೨೦೨೫ ರ ಸಾಯಂಕಾಲ ೫ ಗಂಟೆಯ ಒಳಗಾಗಿ ಸ್ನಾತಕೋತ್ತರ ಕೇಂದ್ರದ ಗಣಕ ವಿಜ್ಞಾನ ವಿಭಾಗದಲ್ಲಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ವಿಶ್ವವಿದ್ಯಾಲಯದ ವಿಶ್ವವಿದ್ಯಾಲಯದ ಜಾಲತಾಣ www.rcub.ac.inಹಾಗೂ ದೂರವಾಣಿ ಸಂಖ್ಯೆ ೦೮೩೧-೨೫೬೫೨೪೪ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯು ತಿಳಿಸಿದೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕಂದಾಯ ಆಯುಕ್ತಾಲಯ ಬೆಂಗಳೂರು ಹಾಗೂ ಜಿಲ್ಲಾಧಿಕಾರಿಗಳ ವಿಜಯಪುರ ಇವರ ನಿರ್ದೇಶನದಂತೆ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಹಳೆಯ ಭೂ ದಾಖಲೆಗಳ ಗಣಕೀಕರಣದಿಂದ ಸಾರ್ವಜನಿಕ ದಾಖಲೆಗಳ ಸುರಕ್ಷೆ ಮತ್ತು ಸುಲಭ ಲಭ್ಯತೆಯ ಗ್ಯಾರಂಟಿ ಯೋಜನೆಯಾದ ಭೂ ಸುರಕ್ಷ ಯೋಜನೆಯಡಿ ಅಭಿಲೇಖಾಲಯದ ದಾಖಲೆಗಳನ್ನು ಗಣಕೀಕರಣ ಕಾರ್ಯ ಕೈಗೊಳ್ಳುವ ಕುರಿತಂತೆ ಬಬಲೇಶ್ವರ ಮತ್ತು ತಿಕೋಟಾ ತಹಶೀಲದಾರರ ಕಾರ್ಯಾಲಯದ ಅಭಿಲೇಖಾಲಯದ ದಾಖಲೆಗಳನ್ನು ಭೂಸುರಕ್ಷಾ ಯೋಜನೆಯಡಿ ಗಣಕೀಕರಣಗೊಳಿಸುವ ಕಾರ್ಯವನ್ನು ಮಾನ್ಯ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಬಿ ಪಾಟೀಲ್ ಅವರು ವಿಜಯಪುರದ ಹಳೆ ತಹಶೀಲ್ಧಾರ ಕಾರ್ಯಾಲಯದಲ್ಲಿ ಜನವರಿ ೧೧ರಂದು ಬೆಳಿಗ್ಗೆ ೧೧ ಗಂಟೆಗೆ ಉದ್ಘಾಟನೆ ನೆರವೇರಿಸಲಿದ್ದಾರೆ ಎಂದು ತಿಕೋಟಾ ಹಾಗೂ ಬಬಲೇಶ್ವರ ತಹಶೀಲ್ದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಅನಧಿಕೃತವಾಗಿ ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ಅಪರಾಧವಾಗಿದ್ದು, ಗರ್ಭಧಾರಣಾ ಪೂರ್ವ ಮತ್ತು ಪ್ರಸವಪೂರ್ವ ತಂತ್ರ ವಿಧಾನಗಳ (ಲಿಂಗ ಆಯ್ಕೆಯ ನಿಷೇಧ) ಕಾಯ್ದೆ ೧೯೯೪ ನ್ನು ಜಿಲ್ಲೆಯಲ್ಲಿ ಸಮರ್ಪಕವಾಗಿ ಜಾರಿಗೊಳಿಸಲು ಮತ್ತು ಸದರಿ ಕಾಯ್ದೆ ಉಲ್ಲಂಘಿಸಿರುವ ಸ್ಕಾö್ಯನಿಂಗ್ ಕೇಂದ್ರಗಳ ವಿರುದ್ಧ ಎಫ್.ಐ.ಆರ್ ದಾಖಲಿಸಲು ಮತ್ತು ಸದರಿ ಕಾಯ್ದೆಯನ್ವಯ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜ.೮ರಂದು ಬುಧವಾರ ಪಿಸಿ&ಪಿಎನ್‌ಡಿಟಿ ಕಾಯ್ದೆಯ ಜಿಲ್ಲಾ ಸಲಹಾ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ಮಾತನಾಡಿದ ಅವರು, ರಾಜ್ಯ ಸಕ್ಷಮ ಪ್ರಾಧಿಕಾರದ ಅಧಿಕಾರಿ ಮತ್ತು ತಂಡದವರು ಡಿ.೨೬, ೨೦೨೪ & ಡಿ. ೨೭, ೨೦೨೪ ರಂದು ಜಿಲ್ಲೆಯಲ್ಲಿನ ಆಸ್ಪತ್ರೆ/ಸ್ಕ್ಯಾನಿಂಗ್ ಕೇಂದ್ರಗಳಿಗೆ ಅನೀರಿಕ್ಷಿತವಾಗಿ ಭೇಟಿ ನೀಡಿದಾಗ ಪಿಸಿ&ಪಿಎನ್‌ಡಿಟಿ ಕಾಯ್ದೆಯ ಉಲ್ಲಂಘನೆ ಮಾಡಿರುವ ೧) ದೇಸಾಯಿ ಆಸ್ಪತ್ರೆ, ಇಂಡಿ ೨) ಗಜಾಕೋಶ ಆಸ್ಪತ್ರೆ, ಇಂಡಿ ಹಾಗೂ ೩) ಆದಿತ್ಯ ಮೆಟರನಿಟಿ & ಜನರಲ್ ಆಸ್ಪತ್ರೆ, ವಿಜಯಪುರ ಇಲ್ಲಿನ ಸ್ಕಾö್ಯನಿಗ್…

Read More

ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ೩ನೇ ತ್ರೈಮಾಸಿಕದ ದಿಶಾ ಸಮಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಂಸದ ರಮೇಶ ಜಿಗಜಿಣಗಿ ಅಧಿಕಾರಿಗಳಿಗೆ ಸೂಚನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ರಸ್ತೆಗಳಲ್ಲಿ ಅವಶ್ಯವಿರುವ ಕಡೆ ಇಲಾಖೆ ಮಾನದಂಡ ಅನುಸಾರವಾಗಿ ಹಂಪ್ಸ್ ನಿರ್ಮಿಸಿ ಕ್ರಮ ವಹಿಸುವಂತೆ ಸಂಸದ ರಮೇಶ ಜಿಗಜಿಣಗಿ ಸೂಚಿಸಿದರು.ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜ.೧೦ ಇಂದು ಆಯೋಜಿಸಿದ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ೩ನೇ ತ್ರೈಮಾಸಿಕದ ದಿಶಾ ಸಮಿತಿ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಗ್ರಾಮೀಣ, ರಾಜ್ಯ ರಸ್ತೆಗಳಲ್ಲಿ ಅಗತ್ಯವಿರುವ ಕಡೆ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.ಜಿಲ್ಲೆಯ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ಶುದ್ಧ ಕುಡಿನೀರಿನ ಘಟಕಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಶುದ್ಧ ನೀರಿನ ಘಟಕಗಳನ್ನು ದುರಸ್ಥಿಗೊಳಿಸಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿಕೊಡುವಂತೆ ಹಾಗೂ ನಾಗಠಾಣ ಮತಕ್ಷೇತ್ರದ ಕೇಲವು ವಾರ್ಡ್ಗಳಲ್ಲಿ ಸಮರ್ಪಕ ಕುಡಿಯುವ ನೀರು ಪೂರೈಸುವಂತೆ ಅಧಿಕಾರಿಗಳಿಗೆ ತಿಳಿಸಿದರು.ಜುಮನಾಳ ರೈಲ್ವೆ ಮೇಲ್ಸೆತುವೆ ಕಾಮಗಾರಿಯನ್ನು ಶೀಘ್ರಗತಿಯಲ್ಲಿ ಪೂರ್ಣಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.ಸಭೆಯಲ್ಲಿ…

Read More