ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಮಾನವ ಜೀವನ ಪರೋಕಾರದಿಂದಲೇ ನಡೆಯಬೇಕು. ಇಂತಹ ಪರೋಪಕಾರದ ಮನೋಭಾವ ಹೊಂದಿರುವ ಬಿರಾದಾರ ಕುಟುಂಬವು ಮುಕ್ತಿ ವಾಹನವನ್ನು ಸಮಾಜಕ್ಕೆ ಅರ್ಪಿಸಿ ಒಳಿತು ಮಾಡಿದೆ ಎಂದು ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾಯರು ಹೇಳಿದರು.
ಸಿಂದಗಿ ಪಟ್ಟಣದ ಆಶೀರ್ವಾದ ಗ್ರೂಪ್ ವತಿಯಿಂದ ದಿ.ರವಿಗೌಡ ಬಿರಾದಾರ ಆವರು ದ್ವಿತೀಯ ಪುಣ್ಯಸ್ಮರಣೆ ನಿಮಿತ್ತ ಶನಿವಾರ ಪುರಸಭೆ ಮುಖ್ಯಾಧಿಕಾರಿ ಸುರೇಶ ನಾಯಕ ಅವರಿಗೆ ನೇರವಾಗಿ ಹಸ್ತಾಂತರಿಸಿ ಮಾತನಾಡಿದ ಶ್ರೀಗಳು, ನಗರ ಬೆಳೆಯುತ್ತಿದೆ. ನಗರದ ಎಲ್ಲ ವರ್ಗದ ಜನರ ಅಂತಿಮ ಸಂಸ್ಕಾರಕ್ಕೆ ಮುಕ್ತಿ ವಾಹನವನ್ನು ಒದಗಿಸುವ ಮೂಲಕ ತಮ್ಮ ಪರೋಪಕಾರವನ್ನು ಸಮಾಜಕ್ಕೆ ಬಿತ್ತರಿಸಿದ್ದಾರೆ. ಇವರ ಈ ಸಮಾಜ ಮುಖಿ ಕಾರ್ಯ ಸಮಾಜಕ್ಕೆ ಮಾದರಿ ಎಂದರು.
ಈ ವೇಳೆ ಶಾಸಕ ಅಶೋಕ ಮನಗೂಳಿ, ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ, ಉಪಾಧ್ಯಕ್ಷ ರಾಜಣ್ಣ ನಾರಾಯಣಕರ, ಮಾಜಿ ಪುರಸಭೆ ಸದಸ್ಯ ರಾಜಶೇಖರ ಕೂಚಬಾಳ, ವಿಶ್ರಾಂತ ಶಿಕ್ಷಕ ಸಿದ್ದಪ್ಪ ಮಾಸ್ತರ ಬಿರಾದಾರ, ದಿ.ರವಿ ಬಿರಾದಾರ ಪತ್ನಿ ಲಕ್ಷ್ಮಿ, ಪುತ್ರ ಅಭಿಷೇಕ, ಅದ್ವಿತ್, ನಾಗರತ್ನ ಮನಗೂಳಿ ಸೇರಿದಂತೆ ಬಿರಾದಾರ ಕುಟುಂಬಸ್ಥರಿದ್ದರು.

