ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಶಾರ್ಟ್ ಸರ್ಕೀಟ್ ನಿಂದಾಗಿ ಕೃಷ್ಣಾ ಭಾಗ್ಯ ಜಲ ನಿಗಮದ ಮುಳವಾಡ ಏತ ನೀರಾವರಿ ಯೋಜನೆಯ ವಿಭಾಗ ಸಂಖ್ಯೆ -೪ ಕಚೇರಿಯ ಎರಡು ಕೋಣೆಗಳಿಗೆ ಬೆಂಕಿಬಿದ್ದ ಘಟನೆ ಶನಿವಾರ ಸಂಜೆ ಜರುಗಿದೆ.
ಬೆಂಕಿ ಅವಘಡಕ್ಕೆ ಕಚೇರಿಯ ಎರಡೂ ಕೋಣೆಯಲ್ಲಿದ್ದ ಹಳೆ ಕಡತಗಳು, ಸ್ಟೇಷನರಿ ಸಾಮಗ್ರಿಗಳು, ೨೦ ಕ್ಕೂ ಕುರ್ಚಿಗಳು, ಟೈರ್ ಗಳೆಲ್ಲವೂ ಭಸ್ಮವಾಗಿವೆ.
ಕಚೇರಿಯ ಹಿಂಭಾಗದ ಚಿಕ್ಕ ಸ್ಟೋರ್ ಕೋಣೆಗೆ ಬೆಂಕಿ ಬಿದ್ದ ಪರಿಣಾಮ, ಬೆಂಕಿಯ ಕೆನ್ನಾಲಿ ಪಕ್ಕದ ಕೋಣೆಗೂ ವ್ಯಾಪಿಸಿದೆ. ಅಗ್ನಿಶಾಮಕ ದಳ, ಸ್ಥಳೀಯರು ಸೇರಿ ತಕ್ಷಣವೇ ಬೆಂಕಿ ನಂದಿಸಿದರು.
ಸ್ಟೋರ್ ರೂಮ್ ಗೆ ಬೆಂಕಿ ಬಿದ್ದ ಪರಿಣಾಮ, ಹಳೆಯ ಕಡತಗಳು ಸುಟ್ಟಿವೆ, ಜತೆಗೆ ಸಾಮಗ್ರಿಗಳು ಭಸ್ಮವಾಗಿವೆ ಸಿಬ್ಬಂದಿಗಳೆಲ್ಲಾ ಹಾನಿಯ ನಿಖರ ಮಾಹಿತಿಯ ಪಟ್ಟಿ ಮಾಡುತ್ತಿದ್ದಾರೆ ಎಂದು ಕಾರ್ಯನಿರ್ವಾಹಕ ಎಂಜಿನಿಯರ್ ಸಂಗಮೇಶ ಮುಂಡಾಸ ತಿಳಿಸಿದರು.
