ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ, ವಿಜಯಪುರದ ಅಹಲ್ಯಾಬಾಯಿ ಸ್ನಾತಕೋತ್ತರ ಮಹಿಳಾ ಅಧ್ಯಯನ, ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಮಾರ್ಚ್ ೬ ರಿಂದ ಮಾರ್ಚ್ ೮ರವರೆಗೆ “ಮಹಿಳಾ ಸಾಂಸ್ಕೃತಿಕ ಹಬ್ಬ-೨೦೨೫” ಹಮ್ಮಿಕೊಳ್ಳಲಾಗಿದೆ.
“ಮಹಿಳಾ ಸಾಂಸ್ಕೃತಿಕ ಹಬ್ಬ-೨೦೨೫”ದ ಅಂಗವಾಗಿ ಕವಿ-ಕವಿಯತ್ರಿಯರಿಂದ ಮಹಿಳಾ ಕೇಂದ್ರಿತ ಕವನಗಳನ್ನು ಆಹ್ವಾನಿಸಲಾಗಿದೆ. ಬಂದ ಕವನಗಳಲ್ಲಿ ಅತ್ತುö್ಯತ್ತಮ ೩ ಕವನಗಳನ್ನು ಆಯ್ಕೆ ಮಾಡಿ, ರಚನೆ ಮಾಡಿದ ಕವಿಯತ್ರಿ/ಕವಿಗಳನ್ನು ಮಾರ್ಚ್ ೮, ೨೦೨೫ ರಂದು ಓದಲು ಅವಕಾಶ ನೀಡಿ, ಅಭಿನಂದನಾ ಪತ್ರ ನೀಡಿ ಗೌರವಿಸಲಾಗುವುದು. ಆಸಕ್ತರು ದಿನಾಂಕ: ೨೫-೦೨-೨೦೨೫ರೊಳಗಾಗಿ ತಮ್ಮ ಕವನಗಳನ್ನು ಪ್ರೊ.ಲಕ್ಷಿö್ಮದೇವಿ ವೈ., ನಿರ್ದೇಶಕರು, ಅಹಲ್ಯಾಬಾಯಿ ಸ್ನಾತಕೋತ್ತರ ಮಹಿಳಾ ಅಧ್ಯಯನ, ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ, ಜ್ಞಾನಶಕ್ತಿ ಆವರಣ, ತೊರವಿ, ಕ.ರಾ.ಅ.ಮ.ವಿವಿ, ವಿಜಯಪುರ-೫೮೬೧೦೮, ಮೊ.ಸಂ.೯೯೦೨೨೩೪೪೬೯ ಇವರಿಗೆ ತಲುಪುವಂತೆ ಹಾಗೂ ಸಾಫ್ಟ್ ಪ್ರತಿಯನ್ನು directorwscksawuv@gmail.comಗೆ ಕಳುಹಿಸಬಹುದಾಗಿದೆ. ವಿಶ್ವವಿದ್ಯಾನಿಲಯದಿಂದ ಯಾವುದೇ ರೀತಿಯ ಪ್ರಯಾಣ ಭತ್ಯೆ, ದಿನ ಭತ್ಯೆ ಮತ್ತು ಸಂಭಾವನೆಯನ್ನು ನೀಡಲಾಗುವುದಿಲ್ಲ ಎಂದು ವಿವಿ ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಮೋ.ಸಂ. ೯೮೪೫೪೪೨೮೨೮, ೯೪೮೧೭೦೬೩೩೦, ೭೯೭೫೫೬೦೦೯೫, ೮೮೬೧೬೭೭೦೫೨.

