Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎ.ವಿ.ಎಸ್ ಆಯುರ್ವೇದ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರದಲ್ಲಿ ಏಪ್ರೀಲ್ 27 ರಿಂದ ಮೇ 2ರ ವರೆಗೆ ಸೋಮವಾರದಿಂದ ಶನಿವಾರದ ವರೆಗೆ ನಿದ್ರಾಹೀನತೆ ಮತ್ತು ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಕುರಿತು ಉಚಿತ ತಪಾಸಣೆ ಮತ್ತು ಚಿಕಿತ್ಸೆ ಶಿಬಿರ ಆಯೋಜಿಸಲಾಗಿದೆ.ಆರು ದಿನ ಈ ಶಿಬಿರ ನಡೆಯಲಿದ್ದು, ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳಿಂದ ಬಳಲುತ್ತಿರುವ 20 ರಿಂದ 50 ವರ್ಷದೊಳಗಿನವರು ಈ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಬಿ.ಎಲ್.ಡಿ.ಇ ಸಂಸ್ಥೆಯ ಎ.ವಿ.ಎಸ್ ಆಯುರ್ವೇದ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಸಂಜಯ ಕಡ್ಲಿಮಟ್ಟಿ ಅವರು ಮಾಧ್ಯಮ‌ ಪ್ರಕಟಣೆಯಲ್ಲಿ ಮೂಲಕ ತಿಳಿಸಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ಮೊಬೈಲ ಸಂಖ್ಯೆ: 8073518596 ಮತ್ತು 7030746226 ಸಂಪರ್ಕಿಸಬಹುದಾಗಿದೆ.

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ತಾಲೂಕಿನ ಗುಬ್ಬೇವಾಡ ಗ್ರಾಮದ ಬಿ ಎಂ ಪಾಟೀಲ ಪ್ರೌಢ ಶಾಲೆ ಹಾಗೂ ಆಕ್ಸಫರ್ಡ್ ಇಂಟರನ್ಯಾಷನಲ್ ಸ್ಕೂಲ್ ಶಾಲಾ ಎಸ್ಸೆಸ್ಸೆಲ್ಸಿ 2025-26 ರ ಫಲಿತಾಂಶದಲ್ಲಿ ನೂರಕ್ಕೆ ನೂರು ಸಾಧನೆ ಮಾಡಿದೆ.ಶಾಲೆಯ ವಿದ್ಯಾರ್ಥಿಗಳಾದ ಕುಮಾರಿ ಅರ್ಚನಾ ಮಲಕಪ್ಪ ಜಾಲವಾದಿ ಬೋರಗಿ 89% ಶಾಲೆಗೆ ಪ್ರಥಮ ಸ್ಥಾನ, ಕುಮಾರ ಸಂತೋಷ ಸಾವಳಸಂಗ ಬೋರಗಿ 88%, ದ್ವಿತೀಯ ಸ್ಥಾನ, ಕುಮಾರ ಸಂಗಮೇಶ ಕುಂಬಾರ ಬೋರಗಿ ತೃತೀಯ 80% ಹಾಗೂ ಕುಮಾರಿ ಕಾವೇರಿ ಚಾವರ 79% ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾರೆ.ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಬಾಪುಗೌಡ ಎಂ ಪಾಟೀಲ್ ಹಾಗೂ ಮುಖ್ಯ ಗುರುಗಳು, ಶಿಕ್ಷಕರು, ಸಿಬ್ಬಂದಿ ಮತ್ತು ಪಾಲಕರು ಅಭಿನಂದನೆಗಳು ತಿಳಿಸಿದ್ದಾರೆ.

Read More

ಲೇಖನ- ಡಾ ಶಶಿಕಾಂತ ಪಟ್ಟಣರಾಮದುರ್ಗ – ಪುಣೆಮೊ: 9552002338 ಉದಯರಶ್ಮಿ ದಿನಪತ್ರಿಕೆ ಭಾರತದ ಗ್ರಾಮೀಣ ಭಾಗದ ಅಪ್ಪಟ ದೇಸೀಯ ಪ್ರತಿಭೆಯು ಮುಂದೆ ರಾಷ್ಟ್ರದ ಅತ್ಯಂತ ಅಪರೂಪದ ಬೃಹತ್ ಕೈಗಾರಿಕೆಯನ್ನು ಆರಂಭಿಸಲು ಮುಂದಾಗಿದ್ದು ಈ ಮಹಾನ್ ಕಾಯಕಯೋಗಿ ಡಾ ನೀಲಕಂಠ ಕಲ್ಯಾಣಿ.ಕರ್ನಾಟಕ ಮೂಲದ ಕಲ್ಯಾಣಿ ಕುಟುಂಬವು ಕೊಲ್ಹಾಪುರ ಗಡಿಭಾಗದ ಒಂದು ಪುಟ್ಟ ಗ್ರಾಮ. ಲಿಂಗಾಯತ ಸಮುದಾಯದಲ್ಲಿ ಮೊಟ್ಟ ಮೊದಲ ಬೃಹತ್ ಕೈಗಾರಿಕೆಯನ್ನು ಆರಂಭಿಸಿದ ಭಗೀರಥ. ಅಂದಿನ ಪ್ರಧಾನಿ ಪಂಡಿತ ಜವಾಹರ ಲಾಲ್ ನೆಹರೂ ಅವರನ್ನು ಭೇಟಿ ಮಾಡಿ ಉಕ್ಕು ಮತ್ತು ಕಬ್ಬಿಣದ ಕೈಗಾರಿಕೆ ತಯಾರಿಸಲು 1960 ರಲ್ಲಿ ಶ್ರೀ ನೀಲಕಂಠ ಕಲ್ಯಾಣಿ ಅವರ ಪರಿಶ್ರಮ ಅಪ್ರತಿಮ.ಡಾ ನೀಲಕಂಠ ಕಲ್ಯಾಣಿ ಅವರು ಕಲ್ಯಾಣಿ ಗ್ರೂಪ್‌ನ ಸಂಸ್ಥಾಪಕರಾಗಿದ್ದು, ಇವರ ತಂದೆ-ತಾಯಿ ಮತ್ತು ಕುಟುಂಬದ ವಿವರಗಳು : ತಂದೆ: ಅಣ್ಣಪ್ಪ ಎನ್. ಕಲ್ಯಾಣಿ. ಇವರು ಕಲ್ಯಾಣಿ ಕುಟುಂಬದ ಸಂಪತ್ತು ಮತ್ತು ವ್ಯವಹಾರದ ಮೂಲಪುರುಷರಾಗಿದ್ದು, ವೃತ್ತಿಯಿಂದ ಕೃಷಿಕ ಮತ್ತು ವರ್ತಕರಾಗಿದ್ದರು.ತಾಯಿ: ಅಕುತಾಯ್ ಅಣ್ಣಪ್ಪ ಕಲ್ಯಾಣಿ. ನೀಲಕಂಠ ಕಲ್ಯಾಣಿ ಅವರು…

Read More

ಬಿ.ಎಲ್.ಡಿ.ಇ ನೂತನ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಬಸವ ಜಯಂತಿ ಉತ್ಸವ | ತಿಕೋಟಾ ಕಸಾಪ ಅಧ್ಯಕ್ಷ ಎಸ್.ಜಿ.ಲಕ್ಕುಂಡಿಮಠ ಅಭಿಮತ ಉದಯರಶ್ಮಿ ದಿನಪತ್ರಿಕೆ ತಿಕೋಟಾ: ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ 12ನೇ ಶತಮಾನದ ಅಣ್ಣ ಬಸವಣ್ಣನವರ ವಿಚಾರಗಳು ಮತ್ತು ಅವರ ಆಡಳಿತದ ವೈಖರಿ ಪ್ರಸ್ತುತ ಪ್ರಜಾಪ್ರಭುತ್ವ ವ್ಯವಸ್ಥೆಗೆ ಸತ್ಯದ ದಾರಿಯನ್ನು ತೋರಿಸುತ್ತದೆ ಎಂದು ತಿಕೋಟಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್. ಜಿ. ಲಕ್ಕುಂಡಿಮಠ ಅವರುಹೇಳಿದರು.ಬಿ.ಎಲ್.ಡಿ.ಇ. ಸಂಸ್ಥೆಯ ನೂತನ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಮಂಗಳವಾರ ದಿನ ಹಮ್ಮಿಕೊಂಡಿದ್ದ ಬಸವ ಜಯಂತ್ಯುತ್ಸವ, ವಚನ ಗಾಯನ ಹಾಗೂ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.900 ವರ್ಷಗಳ ಹಿಂದೆ ರಚನೆಗೊಂಡಿರುವ ವಚನಗಳು ಇಂದಿಗೂ ಉಳಿದುಕೊಂಡಿವೆ ಎಂದರೆ ಅದು ವಚನ ಸಾಹಿತ್ಯದ ಶಕ್ತಿಯನ್ನು ತೋರಿಸುತ್ತದೆ.ಮೂಲತಃ ವಿಜಯಪುರ ನಾಡಿನವರಾದ ಬಸವಣ್ಣನವರು ಬಾಲ್ಯದಲ್ಲಿಯೇ ಲಿಂಗ ಅಸಮಾನತೆಯ ವಿರುದ್ಧ ಬಂಡೆದ್ದು ಕುಟುಂಬದಿಂದ ದೂರಾಗಿ ಕೂಡಲಸಂಗಮದಲ್ಲಿ ವಿದ್ಯಾರ್ಜನೆಯಲ್ಲಿ ತೊಡಗಿಸಿಕೊಂಡರು.ಮುಂದೆ ಕಲ್ಯಾಣದಲ್ಲಿ ಬಿಜ್ಜಳನ ಆಡಳಿತದಲ್ಲಿ ಮಂತ್ರಿ, ಮಹಾಮಂತ್ರಿ, ಪ್ರಧಾನಮಂತ್ರಿ ಆಗುವ ಮೂಲಕ ಸಮ ಸಮಾಜ ಕಟ್ಟುವಲ್ಲಿ…

Read More

’*’ಉದಯರಶ್ಮಿ’ ಸಂಪಾದಕ ಇಂದುಶೇಖರ ಮಣೂರ ಅವರಿಗೆ ನಾಳೆ (ಏಪ್ರಿಲ್ ೨೫ ರವಿವಾರ ) “ಬಸವ ಸೇವಾ ಪ್ರಶಸ್ತಿ” ಪ್ರದಾನವಾಗಲಿದೆ. ಈ ನಿಮಿತ್ತ ಈ ವಿಶೇಷ ಲೇಖನ* ಲೇಖನ- ಶಿಲ್ಪಾ ಮೃತ್ಯುಂಜಯ ಮಿಣಜಗಿಶಿಕ್ಷಕರುಕೆ.ಇ.ಬೋರ್ಡ್ ಸೆಂಟ್ರಲ್ ಸ್ಕೂಲ್ಧಾರವಾಡ. ಉದಯರಶ್ಮಿ ದಿನಪತ್ರಿಕೆ ಜನಪರ-ಜೀವಪರ ಧೋರಣೆಯ ’ಉದಯರಶ್ಮಿ’ ದಿನಪತ್ರಿಕೆ ಸಂಪಾದಕರು ಹಾಗೂ ಶರಣ ಮತ್ತು ಬಸವ ತತ್ವಗಳ ಪರಿಪಾಲಕರಾದಶ್ರೀಯುತ ಇಂದುಶೇಖರ ಸಿದ್ದಣ್ಣ ಮಣೂರ ಅವರು ಸಂಪಾದಕರಷ್ಟೇ ಅಲ್ಲ, ಅಪ್ಪಟ ಬಸವ ಭಕ್ತರೂ ಹೌದು.ಸಂಪಾದಕ ಎಂದರೆ ಕೇವಲ ಬರಹದ ದೋಷ ತಿದ್ದುವವರಲ್ಲ, ಸಮಾಜದ ನಾಡಿಮಿಡಿತವನ್ನು ಅರಿತು ಸತ್ಯವನ್ನು ಜನರಿಗೆ ಮುಟ್ಟಿಸುವ ದಿಕ್ಸೂಚಿ ಎಂಬುದು ನಮಗೆ ಗೊತ್ತಿರುವ ವಿಷಯವಾಗಿದೆ. ಬಸವಣ್ಣನವರ ತತ್ವಗಳನ್ನು ಮೈಗೂಡಿಸಿಕೊಂಡ ಒಬ್ಬ ಸಂಪಾದಕ ಸಮಾಜದಲ್ಲಿ ಬದಲಾವಣೆ ತರಬಲ್ಲರು ಎಂಬುದನ್ನು ಅಕ್ಷರಶಃ ನಿಜ ಮಾಡಿದ ಕೀರ್ತಿ ಇಂದುಶೇಖರ ಇವರಿಗೆ ಸಲ್ಲುತ್ತದೆ. ಸತ್ಯದ ಅನ್ವೇಷಣೆ (ನುಡಿದಂತೆ ನಡೆಯುವಿಕೆ)ಬಸವಣ್ಣನವರು “ನುಡಿದರೆ ಮುತ್ತಿನ ಹಾರದಂತಿರಬೇಕು” ಎಂದಿದ್ದಾರೆ. ಒಬ್ಬ ಉತ್ತಮ ಸಂಪಾದಕನ ಬರಹವು ಅಷ್ಟೇ ಪಾರದರ್ಶಕವಾಗಿರಬೇಕು. ಪೂರ್ವಾಗ್ರಹ ಪೀಡಿತರಾಗದೆ, ಸತ್ಯಕ್ಕೆ ಚ್ಯುತಿ ಬರದಂತೆ ವಿಷಯವನ್ನು…

Read More

ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಪಟ್ಟಣದ ಶ್ರೀ ದ್ಯಾಮವ್ವ ದೇವಿ ಜಾತ್ರಾ ಮಹೋತ್ಸವವು ಮೇ 4ರಿಂದ ಭಕ್ತಿಭಾವ ಹಾಗೂ ವಿಜೃಂಭಣೆಯಿಂದ ನಡೆಯಲಿದೆ.ಮೇ 4 ಸೋಮವಾರ ಮುಂಜಾನೆ 10 ಗಂಟೆಗೆ ಕೃಷಿ ಮೇಳ ಉದ್ಘಾಟನೆ ನಡೆಯಲಿದೆ. ಮಧ್ಯಾಹ್ನ 3 ಗಂಟೆಗೆ ಅರವಟಿಗಿ ಬಸವೇಶ್ವರ ದೇವಸ್ಥಾನದಿಂದ ಹಂದರ ತಪ್ಪಲು ಮೆರವಣಿಗೆ ಮೂಲಕ ಆಗಮಿಸಿ ದೇವಸ್ಥಾನಕ್ಕೆ ಹಂದರ ತಪ್ಪಲು ಹಾಕುವ ಕಾರ್ಯಕ್ರಮ ಹಾಗೂ ಕಳಸಾರೋಹಣ ನೆರವೇರಿಸಲಾಗುವುದು.ಮೇ 5 ಮಂಗಳವಾರ ಮುಂಜಾನೆ 5 ಗಂಟೆಗೆ ಹೋಮ–ಹವನ ಕಾರ್ಯಕ್ರಮದಲ್ಲಿ ದಂಪತಿಗಳು ಭಾಗವಹಿಸಲಿದ್ದಾರೆ. ಬೆಳಗ್ಗೆ 10 ಗಂಟೆಗೆ ಶ್ರೀ ದೇವಿ ಗಂಗಾ ಸ್ಥಳಕ್ಕೆ ತೆರಳಿ ಗಂಗಾ ಸ್ನಾನ ನಡೆಸಿ, ಪಟ್ಟಣದ ಪ್ರಮುಖ ರಸ್ತೆಯಲ್ಲಿ ವಿವಿಧ ಕಲಾ ತಂಡಗಳು ಭಾಗವಹಿಸಿ ಭವ್ಯ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಆಗಮಿಸಲಾಗುವುದು. ಮಧ್ಯಾಹ್ನ 3 ಗಂಟೆಗೆ ದೇವಿ ಆಗಮನ, ಸಂಜೆ 6 ಗಂಟೆಗೆ ಉತ್ತಮ ಶಿಕ್ಷಕರು, ಪ್ರತಿಭಾ ವಿದ್ಯಾರ್ಥಿಗಳಿಗೆ ಹಾಗೂ ವಿಶೇಷ ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ, ಧರ್ಮಸಭೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.ಮೇ 6 ಬುಧವಾರ…

Read More

ನೂರು ವರ್ಷಗಳ ಐತಿಹ್ಯ ಹೊಂದಿರುವ ಜಾತ್ರೆ | ಗದ್ದೆಮ್ಮ-ಲಕ್ಕಮ್ಮ ಅಕ್ಕ ತಂಗಿ ದೇವಿಗಳ ಸಮಾಗಮ | ಭವ್ಯ ಪಲ್ಲಕ್ಕಿ- ಕಳಸ ಮೆರವಣಿಗೆ ಉದಯರಶ್ಮಿ ದಿನಪತ್ರಿಕೆ ವರದಿ: ಗುಲಾಬಚಂದ ಜಾಧವವಿಜಯಪುರ: ನೂರು ವರ್ಷಗಳ ಐತಿಹ್ಯ ಇತಿಹಾಸ ಹೊಂದಿರುವ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ನಾಗೂರ ಗ್ರಾಮದಲ್ಲಿ ಶ್ರೀ ಗದ್ದೆಮ್ಮದೇವಿ ಜಾತ್ರಾ ಮಹೋತ್ಸವ ಅತ್ಯಂತ ಸಡಗರ, ಸಂಭ್ರಮದಿಂದ ಜರುಗಿತು.ಈ ಭಾಗದ ಭಕ್ತರ ಆರಾಧ್ಯದೇವಿಯಾಗಿ ಶ್ರದ್ಧಾಭಕ್ತಿಯಿಂದ ಪೂಜಿಸಲ್ಪಡುವ ಗದ್ದೆಮ್ಮದೇವಿ ಜಾಗೃತ ದೇವಿಯಾಗಿ ಭಕ್ತಗಣದ ಮನದಲ್ಲಿ ನೆಲೆಸಿದ್ದಾಳೆ. ಹೀಗಾಗಿ ಪ್ರತಿ ವರ್ಷವೂ ದೇವಿ ಜಾತ್ರೆ ಅದ್ದೂರಿಯಾಗಿ ನಡೆಯುತ್ತದೆ. ಗ್ರಾಮ ಸೇರಿದಂತೆ ವಿವಿಧೆಡೆಯಿಂದ ಜಾತ್ರಾ ಉತ್ಸವಕ್ಕೆ ಆಗಮಿಸಿದ ನೂರಾರು ಭಕ್ತ ಜನಸ್ತೋಮ ದೇವಿಯ ಆರಾಧನೆಯಲ್ಲಿ ದೈವತ್ವವನ್ನು ಕಂಡರು. ಭಕ್ತಿಪೂರಕ ನಮಿಸಿ ಹಲವರು ಧನ್ಯತೆ ಮೆರೆದರೆ ಇನ್ನೂ ಹರಿಕೆ ಹೊತ್ತ ಅನೇಕ ಜನತೆ ಭಕ್ತಿ ತರ್ಪಣದೊಂದಿಗೆ ದೇವಿಗೆ ವಿವಿಧ ಸೇವೆ ಸಮಪಿ೯ಸಿದರು. ಇಡೀ ನಾಗೂರ ಗ್ರಾಮ ಜಾತ್ರಾ ಹಬ್ಬದ ವೈವಿಧ್ಯಮಯ ವಿಶೇಷ ಸಾಮರಸ್ಯದ ವೈವಿಧ್ಯತೆಯಲ್ಲಿ ಮಿಂದೆದ್ದಿತು.ನೂರು ವಸಂತಗಳ ಇತಿಹಾಸ ಲೇಪಿಸಿಕೊಂಡಿರುವ…

Read More

ಉದಯರಶ್ಮಿ ದಿನಪತ್ರಿಕೆ ಹೆಚ್ ಡಿ ಕೋಟೆ: ಶ್ರೀಮಂತರ ಮಕ್ಕಳು ಉತ್ತಮ ಅಂಕಗಳನ್ನು ಪಡೆಯುವುದರಲ್ಲಿ ಯಾವುದೇ ಆಶ್ಚರ್ಯ ಇರಲ್ಲ. ಆದರೆ ಒಬ್ಬ ರೈತನ ಮಗ/ಮಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣನಾಗಿದ್ದಾನೆ ಎಂದರೆ ಇಡೀ ಗ್ರಾಮಕ್ಕೆ ಗ್ರಾಮವೇ ಸಂಭ್ರಮಪಡುತ್ತೆ. ತಂದೆ-ತಾಯಿ ಮುಖದಲ್ಲಿ ಸಾರ್ಥಕ ಭಾವನೆ ಎದ್ದು ಕಾಣುತ್ತೆ. ಕೂಲಿ ಕೆಲಸ ಮಾಡಿ ಕಷ್ಟಪಟ್ಟು ಓದಿಸಿದಕ್ಕೂ ನನ್ನ ಮಗ ಊರಿಗೆ ಕೀರ್ತಿ ತಂದಿದ್ದಾನೆ, ಶಾಲೆಗೆ ಮಾದರಿಯಾಗಿದ್ದಾನೆ ಎಂಬ ಖುಷಿ ಇಮ್ಮಡಿಯಾಗುತ್ತೆ.ಬಡತನದಲ್ಲೂ ಕಠಿಣ ಪರಿಶ್ರಮ, ಶ್ರದ್ದೆ, ನಿರಂತರ ಪ್ರಯತ್ನ, ಶಿಕ್ಷಕರ ಮಾರ್ಗದರ್ಶನದಿಂದ ಗ್ರಾಮೀಣ ಪ್ರತಿಭೆ ಹೇಮಂತ್ ಜಿ ಉತ್ತಮ ಸಾಧನೆ ಮಾಡಿದ್ದಾರೆ. ಹೆಚ್ ಡಿ ಕೋಟೆ ತಾಲೂಕಿನ ಗಂಗಡಹೊಸಳ್ಳಿ ಗ್ರಾಮದ ಗುರುಸ್ವಾಮಿ – ಶಿಲ್ಪಾ ದಂಪತಿಯ ಪುತ್ರ ಹೇಮಂತ್ ಜಿ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನೂ ಪಡೆದಿದ್ದಾರೆ. ಶ್ರೀರಂಗಪಟ್ಟಣ ಪಂಪ್ ಹೌಸ್ ನಲ್ಲಿರುವ ಆರಾಧನಾ ಪಿಯು ಕಾಲೇಜಿನಲ್ಲಿ ಓದುತ್ತಿದ್ದ ಹೇಮಂತ್ ಜಿ 532 ಅಂಕಗಳನ್ನು ಗಳಿಸಿ ಉತ್ತಮ ಸಾಧನೆ ಮಾಡಿದ್ದಾರೆ.ರೈತರ ಪರ ಹೋರಾಟ ಮಾಡುತ್ತಾ ಬರುತ್ತಿರುವ ಗುರುಸ್ವಾಮಿ ಅವರ…

Read More

ಲೇಖನ- ಜಯಶ್ರೀ.ಜೆ.ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕರುಬೆಳಗಾವಿಮೊ: ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ಉದ್ಯೋಗ ಪ್ರಪಂಚವು ಇತ್ತೀಚಿಗೆ ಬಹು ವೇಗವಾಗಿ ಬದಲಾಗುತ್ತಿದೆ. ಹೊಸ ತಂತ್ರಜ್ಞಾನಗಳ ಏರಿಕೆ ಮತ್ತು ನಿರಂತರವಾಗಿ ವಿಕಸನಗೊಳ್ಳುತ್ತಿರುವ ಉದ್ಯೋಗ ಮಾರುಕಟ್ಟೆಯೊಂದಿಗೆ ಉದ್ಯೋಗದಲ್ಲಿ ಪ್ರಸ್ತುತ ಸ್ಪರ್ಧಾತ್ಮಕವಾಗಿರುವುದು ಎಂದಿಗಿಂತಲೂ ಹೆಚ್ಚು ಮುಖ್ಯವಾಗಿದೆ. ಕೆಲಸದ ಸ್ಥಳವು ವಿಸಕಸನಗೊಳ್ಳುತ್ತಿದ್ದಂತೆ, ಭವಿಷ್ಯದಲ್ಲಿ ನಮ್ಮನ್ನು ಯಶಸ್ಸಿಗೆ ಕೊಂಡೊಯ್ಯುವ ಹೊಸ ಕೌಶಲ್ಯಗಳನ್ನು ಕಲಿಯುವುದು ಅನಿವಾರ್ಯವಾಗಿದೆ.ಕೌಶಲ್ಯ ಅಭಿವೃದ್ಧಿಪದವಿ ಗಳಿಸುವುದು ಮತ್ತು ಕೆಲಸ ಗಿಟ್ಟಿಸಿಕೊಳ್ಳುವುದು ಎಷ್ಟು ಮುಖ್ಯವೋ ಉದ್ಯೋಗದಲ್ಲಿ ಕೌಶಲ್ಯಗಳನ್ನು ಉತ್ತಮಪಡಿಸಿಕೊಳ್ಳುವುದು ಸಹ ಅಷ್ಟೇ ಮುಖ್ಯ. ವೃತ್ತಿ ಜೀವನವನ್ನು ಉತ್ತಮಪಡಿಸಿಕೊಳ್ಳಲು ಬಹುತೇಕ ಜನರು ಅನುಭವ ಹೊಂದಿರುವುದನ್ನು ಖಚಿತಪಡಿಸಿಕೊಳ್ಳುವತ್ತ ಗಮನ ಹರಿಸುತ್ತಾರೆ. ಆದರೆ ಅಗತ್ಯ ಕೌಶಲ್ಯಗಳನ್ನು ವಿಶೇಷವಾಗಿ ಕೆಲಸದ ಸ್ಥಳ ಅಥವಾ ಮಾನವ ಕೌಶಲ್ಯಗಳನ್ನು ಉತ್ತಮಪಡಿಸಿಕೊಳ್ಳುವುದನ್ನು ನಿರ್ಲಕ್ಷಿಸುತ್ತಾರೆ. ಇದು ಉದ್ಯೋಗದಲ್ಲಿ ಹಿನ್ನಡೆಗೆ ಕಾರಣವಾಗುತ್ತದೆ. ಕೌಶಲ್ಯ ಅಭಿವೃದ್ಧಿಯು ನಾವು ಒಂದು ಕಾರ್ಯವನ್ನು ನಿರ್ವಹಿಸುವಾಗ ಹೆಚ್ಚು ಪರಿಣಾಮಕಾರಿಯಾಗಿರಲು ನಿರ್ಧಿಷ್ಟ ಕೌಶಲ್ಯಗಳನ್ನು ಸುಧಾರಿಸುವ ಪ್ರಕ್ರಿಯೆ.ವೃತ್ತಿಯಲ್ಲಿನ ಬೆಳವಣಿಗೆ ಕೆಲಸದ ಸಂದರ್ಭದಲ್ಲಿ ಯಾವ ಕೌಶಲ್ಯಗಳು ಬೇಕಾಗುತ್ತವೆ ಅಥವಾ ಅವುಗಳನ್ನು ಹೇಗೆ ಪಡೆಯುವುದು ಎಂದು ತಿಳಿದುಕೊಳ್ಳುವುದು ಯಾವಾಗಲೂ…

Read More