Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಭಾರತ ಕಲೆ ಮತ್ತು ಸಂಸ್ಕೃತಿಯ ತವರೂರು. ಅನೇಕತೆಯಲ್ಲಿ ಏಕತೆ ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟ ರಾಷ್ಟ್ರ ನಮ್ಮದು. ಹಲವು ಸಂಸ್ಕೃತಿ, ಭಾಷೆ, ಧರ್ಮ, ವೇಷ-ಭೂಷಣ ಮತ್ತು ಜಾನಪದ ಶೈಲಿ, ಜೀವನ-ಕಸುಬು ಹೀಗೆ ವೈವಿಧ್ಯಮಯ ಮತ್ತು ವೈಶಿಷ್ಟ್ಯಪೂರ್ಣವಾದ ಪವಿತ್ರ ಭೂಮಿ ನಮ್ಮದು. ಅದರಲ್ಲಿ ವಿಶೇಷವಾಗಿ ಭವ್ಯ ಪರಂಪರೆ, ಇತಿಹಾಸ ಹಾಗೂ ಸಾಂಸ್ಕೃತಿಕ ನೆಲೆಗಟ್ಟಿನ ಹಿನ್ನೆಲೆ ಹೊಂದಿದ ನಮ್ಮ ಕರ್ನಾಟಕ ರಾಜ್ಯದಲ್ಲಿ ಸೋಬಾನ ಪದ, ಲಾಲಿ ಹಾಡು, ಬೀಸುವ ಕಲ್ಲಿನ ಪದ, ಹಂತಿ ಪದ, ಗೀಗಿ ಪದ, ತೊಟ್ಟೀಲು ಕಾರ್ಯಕ್ರಮದಲ್ಲಿ ಹಾಡುವ ಅನೇಕ ಗರತಿಯ ಹಾಡುಗಳು ವಿಶಿಷ್ಟ ಹಾಗೂ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತವೆ ಎಂದು ಪ್ರಾಧ್ಯಾಪಕ ಗುರುಬಸಯ್ಯ ಹಿರೇಮಠ ಅವರು ಅಭಿಪ್ರಾಯಪಟ್ಟರು.ಅವರು ನಗರದ ಅಥಣಿ ರಸ್ತೆಯಲ್ಲಿರುವ ಅಲ್-ಅಮೀನ್ ಆಸ್ಪತ್ರೆಯ ಎದುರಿಗೆ ಇರುವ ಹವಾಲ್ದಾರ ಕಾಲನಿಯ ಲಕ್ಷ್ಮಿ ದೇವಸ್ಥಾನದ ೩ ನೇಯ ವರ್ಷದ ಜಾತ್ರಾ ಮಹೋತ್ಸವದ “ಜನಪದ ಸಾಹಿತ್ಯಕ್ಕೆ ಸ್ತ್ರೀ ಕೊಡುಗೆಗಳು” ವಿಷಯ ಕುರಿತು ಉಪನ್ಯಾಸ ನೀಡಿ ಮಾತನಾಡುತ್ತಿದ್ದರು.ತಾಯಿಯಾದವಳು ಮದುವೆಯಾಗಿ ಗಂಡನ ಮನೆ ಸೇರುತ್ತಿರುವ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಪ್ರತಿ ವರ್ಷವೂ ಉತ್ತಮ ಫಲಿತಾಂಶ ನೀಡುವ ಮೂಲಕ ಮನೆ ಮಾತಾಗಿರುವ ಎಕ್ಸಲಂಟ್ ಸಂಸ್ಥೆಯು ೨೦೨೫-೨೬ನೇ ಸಾಲಿನ ಜವಾಹರ ನವೋದಯ ಶಾಲೆಗಳ ಪ್ರವೇಶ ಪರೀಕ್ಷೆಯಲ್ಲಿ ತನ್ನ ಫಲಿತಾಂಶದ ಹೆಜ್ಜೆ ಗುರುತನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ೨೯ ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳನ್ನು ಪಡೆದುಕೊಳ್ಳುವ ಮೂಲಕ ಆಯ್ಕೆಯಾಗಿದ್ದಾರೆ. ಇದರೊಂದಿಗೆ ಎಕ್ಸಲಂಟ್ ತನ್ನ ಗುಣಮಟ್ಟಕ್ಕೆ ಮತ್ತೊಮ್ಮೆ ಕನ್ನಡಿ ಹಿಡಿದಿದೆ.ಗಣೇಶ ಪಾಟೀಲ್(೯೮.೭೫), ಸಮರ್ಥ ಚವ್ಹಾಣ(೯೭.೫೦), ಶ್ರೀಕರ ಗಗನಮಾಳಿ(೯೭.೫೦), ಕಾರ್ತಿಕ ಸತ್ಯಪ್ಪನವರ(೯೭.೫೦), ಸೃಜನ್ ಗೊರೆ(೯೭.೫೦), ಕೃತಿಕೇಶ ಹೊಂಗಲ್(೯೭.೫೦), ಕರುಣಸಾಗರ ಬಾದವಾಡಗಿ (೯೬.೨೫), ಸಾತ್ವಿಕ್ ಕೊಟ್ಟನಳ್ಳಿ(೯೬.೨೫), ಅಕ್ಷಯ ಪೊಲೀಸ್ ಪಾಟೀಲ್(೯೬.೨೫), ವೈಭವ್ ಹಚ್ಚಡದ(೯೬.೨೫), ವೇದಾ ದಾನಮ್ಮನವರ(೯೬.೨೫), ಶ್ರೇಯಸ್ ಅಂಗಡಿ(೯೬.೨೫), ಗೌತಮ್ ಚವ್ಹಾಣ(೯೫.೦೦), ಸೃಜನ್ ನಂದರಗಿ(೯೫.೦೦), ಯಮನಪ್ಪ ಜಮ್ಮನಕಟ್ಟಿ(೯೫.೦೦), ಆಶೀಶ್ ಹತ್ತಿಕಾಳ(೯೫.೦೦), ವಭವ್ ಕಾಮಶೆಟ್ಟಿ(೯೫.೦೦), ಸ್ಮಿçತಿ ಮೂರಮಾನ(೯೫.೦೦), ಪೃಥ್ವಿರಾಜ್ ಅಂಬಿಗೇರ(೯೩.೭೫), ಪ್ರೇಮ್ ಕಾಸರ್(೯೩.೭೫), ಸನ್ನಿದಿ ಎಚ್ಚರಸ್ವಾಮಿಮಠ(೯೩.೫೦), ಭೂಮಿ ವಾಲಿ(೯೨.೫೦), ಭೂಮಿಕಾ ಕೇವಂಟಿಗಿ(೯೨.೫೦), ವೈ.ಬಿ.ಧನುಶ್(೯೨.೫೦), ವಿರಾಟ್ ಬಿ(೯೨.೫೦), ಶ್ರೇಯಸ್ ದೊಡ್ಡಮನಿ(೯೨.೫೦), ಮಹಾಂತಗೌಡ ಪಾಟೀಲ(೯೨.೫೦), ಅಪೂರ್ವ ರಾಠೋಡ(೯೧.೨೫), ಪ್ರದೀಪ್ ಡೊಕ್ಕಣ್ಣವರ(೮೫.೦೦) ಪ್ರತಿಷತ ಅಂಕಗಳನ್ನು…

Read More

ಆಲಮಟ್ಟಿಯ ಎಂಎಚ್ಎಂ ಹಿರಿಯ ಪ್ರಾಥಮಿಕ ಶಾಲೆಯ ವಾಷಿ೯ಕ ಸ್ನೇಹ ಸಮ್ಮೇಳನ ವರದಿ: ಗುಲಾಬಚಂದ ಜಾಧವ ವಿಜಯಪುರ: ಸಂಗೀತ ನಾದದ ಹಾಡುಗಳಿಗೆ ಅಲ್ಲಿ ಪುಟ್ಟ ಪುಟ್ಟ ಮಕ್ಕಳ ಸ್ಟೇಪ್ಸ್ ಲಯಬದ್ಧವಾಗಿ ಸಾಗಿತ್ತು. ಮೈಮನ ಮಿಂಚಿನಂತೆ ಅತ್ತಇತ್ತ ಸಖತ್ ಸುಳಿದಾಡುತ್ತಿತ್ತು. ಕೈ,ಕಾಲು ಶರೀರ ಲೀಲಾಜಾಲವಾಗಿ ಹೊರಳಾಡುತ್ತಿತ್ತು. ಮೊಗಭಾವಗಳಲ್ಲಿ ಡ್ಯಾನ್ಸ್ ಜೋಶ್ ದ ರಂಗು ಮಿಟುಕುತಿತ್ತು. ನೃತ್ಯ ಲೋಕದ ಉನ್ಮಾದ ಅಲೆ ತೇಲಾಡುತ್ತಿತ್ತು. ಇದನ್ನು ಏಕಚಿತ್ತವಾಗಿ ಮೈಮರೆತು ಕಣ್ತುಂಬಿಸಿಕೊಳ್ಳುತ್ತಿದ್ದ ಕಂಗಳುಗಳಲ್ಲಿ ಆನಂದ ಭಾಷ್ಪ ಸೂಸುತ್ತಿತ್ತು..!ಇಂಥದೊಂದು ಸಾಂಸ್ಕೃತಿಕ ರಂಗದ ರೋಮಾಂಚಕ ದೃಶ್ಯ ಜಿಲ್ಲೆಯ ಆಲಮಟ್ಟಿ ಎಂಎಚ್ಎಂ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ವಾಷಿ೯ಕ ಸ್ನೇಹ ಸಮ್ಮೇಳನದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವೈವಿಧ್ಯತೆಯಿಂದ ಕಂಡುಬಂತು !ಇಳೆ ಭಾವದ ಮೊಗಗಳು ಗೀತಗಾನದ ಸಂಗೀತ ಲಹರಿಯಲ್ಲಿ ಮಸ್ತ್ ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿದರು. ರೋಚಕತೆಯ ಮೊನಚಿನಲ್ಲಿ ಹೆಜ್ಜೆ ಹಾಕಿ ನೃತ್ಯಗಳನ್ನು ಪ್ರದಶಿ೯ಸಿ ಸ್ಪೂತಿ೯ ಮೆರೆದರು. ಚಿಣ್ಣರ ನೃತ್ಯ ರೂಪ ನೋಡುಗರ ಹೃದಯಾಂಗಳದಲ್ಲಿ ಖುಷಿ, ಸಂತಸದ ಅಲೆ ತರಂಗ ಸೃಜಿಸಿದವು!ನೃತ್ಯಕಲೆ ವ್ಯಕ್ತಿತ್ವ ವಿಕಸನಕ್ಕೆ…

Read More

ನೂತನ ಜಾಹೀರಾತು ನೀತಿ ಸ್ಥಗಿತಗೊಳಿಸಿ ತಿದ್ದುಪಡಿಗೆ ಒತ್ತಾಯಿಸಿ ಸ್ಥಳಿಯ ದಿನಪತ್ರಿಕೆಗಳ ಸಂಪಾದಕರಿಂದ ಸಚಿವರು ಮತ್ತು ಜಿಲ್ಲಾಧಿಕಾರಿಗೆ ಮನವಿ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ರಾಜ್ಯ ಸರ್ಕಾರವು ೨೦೨೬–೨೭ನೇ ಹಣಕಾಸು ವರ್ಷದಿಂದ ಜಾರಿಗೆ ತರಲು ಉದ್ದೇಶಿಸಿರುವ ಕರ್ನಾಟಕ ಜಾಹೀರಾತು ನೀತಿ–೨೦೨೬ ವಿರುದ್ಧ ರಾಜ್ಯದ ಜಿಲ್ಲಾ ಹಾಗೂ ಪ್ರಾದೇಶಿಕ ಪತ್ರಿಕೆಗಳ ಸಂಘಟನೆಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ.ಈ ನೀತಿಯಲ್ಲಿ ಅಳವಡಿಸಿರುವ ಅನೇಕ ಅಂಶಗಳು ಸಣ್ಣ ಮತ್ತು ಪ್ರಾದೇಶಿಕ ಪತ್ರಿಕೆಗಳ ಬೆಳವಣಿಗೆಗೆ ಮಾರಕವಾಗಿದ್ದು, ಅವುಗಳ ಅಸ್ತಿತ್ವಕ್ಕೂ ಧಕ್ಕೆಯುಂಟುಮಾಡುವ ಸಾಧ್ಯತೆ ಇದೆ ಎಂದು ಸಂಘಟನೆಗಳು ಆತಂಕ ವ್ಯಕ್ತಪಡಿಸಿ ಶುಕ್ರವಾರ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿದವು.ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹಲವು ದಶಕಗಳಿಂದ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾ ಹಾಗೂ ಪ್ರಾದೇಶಿಕ ಪತ್ರಿಕೆಗಳು ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿವೆ. ಆದರೆ ಹೊಸ ಜಾಹೀರಾತು ನೀತಿಯಲ್ಲಿ ಈ ಪತ್ರಿಕೆಗಳ ಹಿತಾಸಕ್ತಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ ಎಂದು ಆರೋಪಿಸಲಾಗಿದೆ. ವಿಶೇಷವಾಗಿ, ಈ ನೀತಿಯನ್ನು ರೂಪಿಸುವ ವೇಳೆ ಯಾವುದೇ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸದೆ ಏಕಪಕ್ಷೀಯವಾಗಿ ತಯಾರಿಸಿರುವುದು…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ಮಾರ್ಚ ೧೮ ರಂದು ರಾಜ್ಯಾದಂತ ಕನ್ನಡ ಉರ್ದು ಇಂಗ್ಲೀಷ ಮಾಧ್ಯಮದ ಪ್ರಥಮ ಬಾಷೆ ಪೇಪರ ಎಲ್ಲ ಕಡೆ ಶಾಂತಿಯುತ ವಾಗಿದೆ. ಆದರೆ ಇಂಗ್ಲಿಷ್ ಪ್ರಶ್ನೆ ಪತ್ರಿಕೆಯ ಪ್ರಶ್ನೆ ನಂ ೧ ರ ಉತ್ತರ ಗಳು ಎರಡು ಸರಿಯಾಗಿದ್ದು ಇದರಿಂದ ೬೨೫ ಕ್ಕೆ ೬೨೫ ಪಡೆಯುವ ವಿದ್ಯಾರ್ಥಿಗಳಲ್ಲಿ ಗೊಂದಲ ಉಂಟಾಗಿದೆ.ಇಂಗ್ಲೀಷ್ ಪ್ರಶ್ನೆ ಪತ್ರಿಕೆಯಲ್ಲಿ ಮೊದಲ ಪ್ರಶ್ನೆಯ ಯು ಬ್ಲಾಕ್ಸ, ಯು ಸ್ಟೋನ್ಸ, ಯು ರ‍್ಸ ದ್ಯಾನ ಸೆನ್ಸಲೆಸ್ ಥಿಂಗ್ಸ ಎಂಬ ಪ್ರಶ್ನೆಗೆ ಸಿಮಿಲಿ, ಪರಸಾನಿಫಿಕೇಷನ್ ಮೇಠಾಫೆರ್ ಮತ್ತು ಅಲಿಟರೇಷನ್ ನಾಲ್ಕು ಉತ್ತರ ಗಳಿವೆ, ಈ ಪ್ರಶ್ನೆಗೆ ಬಳಸಿರುವ ವಾಕ್ಯವು ವಿಲಿಯಂ ಸೆಕ್ಸಪಿಯರ್ ರವರ ಜುಲಿಯಸ್ ಸಿಜರ್ ನಾಟಕದ್ದು ಆದರೆ ಆ ನಾಟಕ ೧೦ ನೇ ತರಗತಿ ಪಠ್ಯ ಕ್ರಮದಲ್ಲಿ ಇಲ್ಲ. ಲೆಸ್ಸನ್ ಬೇಸ್ಡ ಅಸ್ಸೆಸ್ಸಮೆಂಟ್ ಸಿಲೆ ಬಸ್ ನಲ್ಲಿ ಇಲ್ಲ. ಇದರಿಂದ ಈ ವಾಕ್ಯದ ಹಿನ್ನೆಲೆ ವಿದ್ಯಾರ್ಥಿಗಳಿಗೆ ತಿಳಿಯದೇ ಇರುವ ಕಾರಣ, ಅದರ ಅರ್ಥವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವದು ಕಷ್ಟಕರವಾಗಿದೆ.…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮಳೆ ಗಾಳಿಯಿಂದಾಗಿ ತಕ್ಷಣಕ್ಕೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾದರೆ ತುರ್ತು ಸೇವಾ ಕೇಂದ್ರ ಹಾಗೂ ಅಧಿಕಾರಿಗಳ ದೂರವಾಣಿ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ ಎಂದು ಹೆಸ್ಕಾಂನ ಕಾರ್ಯ ಮತ್ತು ಪಾಲನಾ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.ಹೆಸ್ಕಾಂ ವಿಜಯಪುರ ನಗರ ಉಪ ವಿಭಾಗ-೧ಕ್ಕೆ ಸಂಬಂಧಿಸಿದಂತೆ,ನಗರದ ಗಾಂಧಿ ವೃತ್ತದಿಂದ ಉತ್ತರ ಈಶಾನ್ಯ ಮತ್ತು ವಾಯುವ್ಯ ದಿಕ್ಕಿನ ಪ್ರದೇಶಕ್ಕೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಡಿ.ಎಂ. ಮೂಲಿಮನಿ ಮೊಬೈಲ್ ಸಂಖ್ಯೆ: ೯೪೪೮೩೭೦೨೫೦ ಹಾಗೂ ಸೇವಾ ಕೇಂದ್ರದ ದೂರವಾಣಿ ಸಂಖ್ಯೆ:೦೮೩೫೨-೨೫೦೦೩೬, ಮತ್ತು ಹೆಸ್ಕಾಂ ವಿಜಯಪುರ ನಗರ ಉಪ ವಿಭಾಗ-೨ಕ್ಕೆ ಸಂಬಂಧಿಸಿದಂತೆ ನಗರದ ಗಾಂಧಿ ವೃತ್ತದಿಂದ ದಕ್ಷಿಣ, ನೈಋತ್ಯ ಮತ್ತು ಅಗ್ನಿಯ ದಿಕ್ಕಿನ ಪ್ರದೇಶದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಅಕ್ಷರಬಾಶಾ ಕುರಿ ಮೊ. ಸಂಖ್ಯೆ:೯೪೪೮೩೨೭೫೭೧೧, ಸೇವಾ ಕೇಂದ್ರದ ದೂರವಾಣಿ ಸಂಖ್ಯೆ: ೯೪೮೦೮೮೨೬೯೦ ಹಾಗೂ ೦೮೩೫೨-೨೭೬೯೪೦ ಸಂಪರ್ಕಿಸಬಹುದಾಗಿದೆ.ಜೊತೆಗೆ ಟೊಲ್ ಫ್ರೀ ಅಥವಾ ಹೆಸ್ಕಾಂ, ಸಹಾಯವಾಣಿ ೧೯೧೨ ಸಂಪರ್ಕಿಸಬಹುದು. ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾದಲ್ಲಿ ತುರ್ತು ಸಂದರ್ಭಕ್ಕೆ ದೂರವಾಣಿ ಸಂಖ್ಯೆಗಳಿಗೆ ಸಂಪರ್ಕಿಸಬಹುದಾಗಿದೆ ಎಂದವರು ಪ್ರಕಟಣೆಯಲ್ಲಿ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕೆಪಿಟಿಸಿಎಲ್ ವಿಜಯಪುರ ಇವರ ಮೂಲಕ ೨೨೦/೧೧೦/೧೧ ಕೆ.ವ್ಹಿ ಬೇ ಗಳ ನಾಲ್ಕನೇ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಕೈಗೆತ್ತಿಕೊಂಡಿರುವುದರಿಂದ, ೨೨೦/೧೧೦/೧೧ ಕೆವಿ ವಿದ್ಯುತ್ ವಿತರಣಾ ಕೇಂದ್ರ ಜುಮನಾಳ, ವಿಜಯಪುರ ನಗರ(ಸಿಟಿ), ಕೆಐಎಡಿಬಿ, ಹಾಗೂ ಭೂತನಾಳ ಉಪ ಕೇಂದ್ರದಲ್ಲಿಯೂ ಮತ್ತು ೧೧೦/೧೧ ಕೆ.ವ್ಹಿ ವಿದ್ಯುತ್ ವಿತರಣಾ ಕೇಂದ್ರ ಮಮದಾಪುರ, ಬೆಳ್ಳುಬ್ಬಿ, ದೇವರಗೆಣ್ಣೂರ, ಶಿರಬೂರ, ಬಬಲೇಶ್ವರ, ಕಂಬಾಗಿ, ಕಾಖಂಡಕಿ, ಹಾಗೂ ನಿಡೋಣಿ ಮತ್ತು ೧೧೦/೩೩/೧೧ ಕೆ.ವ್ಹಿ ವಿದ್ಯುತ್ ವಿತರಣಾ ಕೇಂದ್ರ ತಿಕೋಟ, ತೊರವಿ, ಟಕ್ಕಳಕಿ, ಕನಮಡಿ ಹಾಗೂ ಹೊನವಾಡ ವಿದ್ಯುತ್ ಕೇಂದ್ರಗಳಿಂದ ಹೊರಹೋಗುವ ಎಲ್ಲಾ ೧೧ ಕೆವ್ಹಿ ವಿದ್ಯುತ್ ಮಾರ್ಗಗಳಿಗೆ ಮಾರ್ಚ್ ೨೨ರ ಬೆಳಿಗ್ಗೆ ೯ ರಿಂದ ಮಧ್ಯಾಹ್ನ ೩ ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಕಾರಣ ಗ್ರಾಹಕರು ಸಹಕರಿಸಬೇಕೆಂದು ಹೆಸ್ಕಾಂನ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ರಾಜ್ಯದ ವಿವಿಧ ಶಿಕ್ಷಣ ಹಾಗೂ ಸರ್ಕಾರಿ ಇಲಾಖೆಗಳಲ್ಲಿನ ದೀರ್ಘಕಾಲದಿಂದ ಖಾಲಿ ಇರುವ ಗ್ರಂಥಪಾಲಕರ ಹುದ್ದೆಗಳನ್ನು ತುರ್ತಾಗಿ ನೇಮಕ ಮಾಡಿಕೊಳ್ಳುವಂತೆ ಕರ್ನಾಟಕ ರಾಜ್ಯ ಗ್ರಂಥಾಲಯ ಸಂಘದಿಂದ ಮುಖ್ಯಮಂತ್ರಿಗಳಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಯಿತು.ಮನವಿ ಸಲ್ಲಿಸಿ ಮಾತನಾಡಿದ ಜಿಲ್ಲಾ ಗ್ರಂಥಾಲಯ ಸಂಘದ ಅಧ್ಯಕ್ಷ ಎಂ.ಕೆ. ಬಿರಾದಾರ ರಾಜ್ಯದ ವಿಶ್ವವಿದ್ಯಾಲಯಗಳು, ಸರ್ಕಾರಿ ಹಾಗೂ ಅನುದಾನಿತ ಪ್ರಥಮದರ್ಜೆ ಕಾಲೇಜುಗಳು, ಪಾಲಿಟೆಕ್ನಿಕ್, ಇಂಜಿನಿಯರಿಂಗ್ ಪಿಯು ಕಾಲೇಜುಗಳಲ್ಲಿ ಅನೇಕ ಮಾನ್ಯಿತ ಗ್ರಂಥ ಪಾಲಕರ ಹುದ್ದೆಗಳು ದೀರ್ಘಕಾಲದಿಂದ ಖಾಲಿಯಾಗಿವೆ. ಇದಲ್ಲವೆ ಸಾರ್ವಜನಿಕ ಗ್ರಂಥಾಲಯಗಳು ರಾಜ್ಯ ಕೇಂದ್ರ, ಜಿಲ್ಲಾಕೇಂದ್ರ, ನಗರ ಕೇಂದ್ರ ಹಾಗೂ ತಾಲೂಕು ಗ್ರಂಥಾಲಯಗಳು, ಸರ್ಕಾರಿ ವೈದ್ಯಕೀಯ ಕಾಲೇಜುಗಳ ಗ್ರಂಥಾಲಯಗಳು, ಕರ್ನಾಟಕ ಪಬ್ಲಿಕ್ ಶಾಲೆಗಳ ಗ್ರಂಥಾಲಯಗಳು ಹಾಗೂ ಹೈಕೋರ್ಟ್, ಜಿಲ್ಲಾ ನ್ಯಾಯಾಲಯಗಳು, ವಿಧಾನಸೌಧ, ಪುರಾತತ್ವ ಇಲಾಖೆ ಸೇರಿದಂತೆ ವಿವಿಧ ಸರ್ಕಾರಿ ಕಚೇರಿಗಳಲ್ಲಿಯೂ ಗ್ರಂಥಪಾಲಕರ ಕೊರತೆ ತೀವ್ರವಾಗಿದೆ ಎಂದು ಹೇಳಿದರು.ಇದು ಕೇವಲ ಹುದ್ದೆಯ ಪ್ರಶ್ನೆಯಲ್ಲ ಇದು ಸಾವಿರಾರು ವಿದ್ಯಾವಂತ ಯುವಕರ ಬದುಕಿನ ಆಶೆಗಳ ಪ್ರಶ್ನೆಯಾಗಿದೆ. ಸಾಮಾಜಿಕ ಹಾಗೂ ಆರ್ಥಿಕವಾಗಿ…

Read More

ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಕೊಪ್ಪಳ ಗವಿಮಠದ ಪ ಪೂ ಶ್ರೀ ಗವಿಸಿದ್ಧೆಶ್ವರ ಶ್ರೀಗಳು ಪಾವನ ಸಾನಿದ್ಯ ವಹಿಸಿ ಮಾರ್ಚ್ 22 ರಂದು ರವಿವಾರ ಸಂಜೆ 4 ಗಂಟೆಗೆ ತಾಲೂಕಿನ ರೋಣಿಹಾಳ ಗ್ರಾಮದ ಶ್ರೀ ಎಡೆಯೂರ ಸಿದ್ಧಲಿಂಗೇಶ್ವರ ಪೂರ್ವ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಶಾಲೆಯ ನೂತನ ಕಟ್ಟಡದ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ ಎಂದು ರೋಣಿಹಾಳ ಶ್ರೀ ಎ ಸಿ ವಿ ವ ಸಂಘದ ಅಧ್ಯಕ್ಷ ರಮೇಶ ಬಿರಾದಾರ ತಿಳಿಸಿದ್ದಾರೆ. ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು ವಹಿಸಿ ಕಾಖಂಡಕಿ ಗುರುದೇವಾಶ್ರಮದ ಪ ಪೂ ಶಿವಯೋಗೀಶ್ವರ ಸ್ವಾಮೀಜಿ ಜ್ಯೋತಿಯನ್ನು ಬೆಳಗಿಸಲಿದ್ದಾರೆ. ಸಾನಿದ್ಯವನ್ನು ರೋಣಿಹಾಳದ ವೇ ಮೂ ರಾಜಶೇಖರಯ್ಯ ಹಿರೇಮಠ, ವೇ ಮೂ ರಾಚೋಟಯ್ಯ ಹಿರೇಮಠ, ವೇ ಮೂ ಮಹಾಂತಯ್ಯ ಮಠಪತಿ ವಹಿಸುವರು. ಅಧ್ಯಕ್ಷತೆಯನ್ನು ಶ್ರೀ ಎ ಸಿ ವಿ ವ ಸಂಘದ ಅಧ್ಯಕ್ಷ ರಮೇಶ ಮಮದಾಪೂರ ವಹಿಸುವರು. ಮುಖ್ಯ ಅತಿಥಿಗಳಾಗಿ ಗ್ರಾಮದ ಗಣ್ಯವ್ಯಕ್ತಿಗಳಾದ ಶರಣುಸಾವುಕಾರ ನ್ಯಾಮಗೌಡ್ರ ಸೇರಿದಂತೆ ಸಂಸ್ಥೆಯ ಆಡಳಿತ ಮಂಡಳಿಯ ಪದಾಧಿಕಾರಿಗಳು, ಗ್ರಾಮದ ಗಣ್ಯರು…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎ. ವಿ.ಎಸ್ ಆಯುರ್ವೇದ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರದಲ್ಲಿ ಶಲ್ಯತಂತ್ರ ವಿಭಾಗದ ವತಿಯಿಂದ ಉರುಪು ಮೂಲವ್ಯಾದಿ (Anal Fissure) ಸಮಸ್ಯೆ ಕುರಿತು ಉಚಿತ ತಪಾಸಣೆ ಮತ್ತು ಚಿಕಿತ್ಸೆ ಶಿಬಿರವನ್ನು ಮಾರ್ಚ್ 23 ರಿಂದ 27ರ ವರೆಗೆ ಐದು ದಿನಗಳ ಕಾಲ ನಡೆಯಲಿದೆ.ಇಂಥ ಸಮಸ್ಯೆ ಎದುರಿಸುತ್ತಿರುವ ಸಾರ್ವಜನಿಕರು ಈ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಬಿ.ಎಲ್.ಡಿ.ಇ ಸಂಸ್ಥೆಯ ಎ. ವಿ. ಎಸ್ ಮಹಾವಿದ್ಯಾಲಯದ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಸಂಜಯ ಕಡ್ಲಿಮಟ್ಟಿ ಮತ್ತು ಶಲ್ಯತಂತ್ರ ವಿಭಾಗದ ಮುಖ್ಯಸ್ಥ ಡಾ. ಪ್ರಸಾದಶಕ್ತಿ ಗಣ್ಣೂರ ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ಡಾ. ಪ್ರವೀಣ ಚೌಗಲಾ 7760357413 ಇವರನ್ನು ಸಂಪರ್ಕಿಸಬಹುದಾಗಿದೆ.

Read More