Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಪಟ್ಟಣದ ಹೃದಯ ಭಾಗದಲ್ಲಿರುವ ಖಬರಸ್ಥಾನ ಜಾಗ ಖಬರಸ್ಥಾನಕ್ಕಾಗಿಯೇ ಉಳಿಯಬೇಕು ಎಂದು ಆಗ್ರಹಿಸಿ ಕಳೆದ ೧೭ ದಿನಗಳಿಂದ ದರಣಿ ಸತ್ಯಾಗ್ರಹ ನಡೆದಿದೆ. ಈ ಸಮಸ್ಯೆಯನ್ನು ಪರಿಹರಿಸಲು ಸಿಂದಗಿ ಶಾಸಕ ಅಶೋಕ ಮನಗೂಳಿ ಅವರು ಎರಡು ಬಣದವರನ್ನು ಕರೆಯಿಸಿ ಮಾತುಕತೆ ನಡೆಸಿದ್ದಾರೆ ಎಂದು ಕರ್ನಾಟಕ ಮುಸ್ಲಿಂ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಎಂ.ಎ.ಖತೀಬ ಹೇಳಿದರು.ಪಟ್ಟಣದಲ್ಲಿ ಕರ್ನಾಟಕ ಮುಸ್ಲಿಂ ಹಿತರಕ್ಷಣಾ ವೇದಿಕೆಯ ವತಿಯಿಂದ ಹಮ್ಮಿಕೊಂಡ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲ್ಲಿ ಸುಮಾರು ವರ್ಷಗಳಿಂದ ಬಡ ಜನರು ತಮ್ಮ ಬದುಕನ್ನು ಕಟ್ಟಿಕೊಳ್ಳಲು ವ್ಯಾಪಾರ ವಹಿವಾಟು ಮಾಡಿಕೊಂಡಿದ್ದರು. ಅದಕ್ಕಾಗಿ ಎರಡು ಬಣದಿಂದ ಮೂರು ಜನ ಸದಸ್ಯರು ತೆಗೆದುಕೊಂಡು ಒಂದು ಸಮಿತಿಯನ್ನು ರಚಿಸಿ ಅಲ್ಲಿ ಅಂಗಡಿಗಳನ್ನು ನಿರ್ಮಿಸಿಕೊಳ್ಳುವಂತೆ ಉಸ್ತುವಾರಿ ವಹಿಸಿಕೊಳ್ಳುವುದಾಗಿ ಹೇಳಿದ್ದಾರೆ. ಪಟ್ಟಣದ ದುಡಿಯುವ ಬಡ ಜನರಿಗೆ ಅನುಕೂಲವಾಗಲಿ ಎಂಬ ದೃಷ್ಠಿಯಿಂದ ಶಾಸಕರಿಗೆ ಒತ್ತಾಯಿಸಲಾಗಿದೆ. ಈ ಕುರಿತು ಶಾಸಕರು ಸಮಸ್ಯೆಯನ್ನು ಪರಿಹರಿಸುವ ಭರವಸೆ ನೀಡಿದ್ದಾರೆ ಎಂದು ಮಾಧ್ಯಮದವರಿಗೆ ವಿವರಣೆ ನೀಡಿದ್ದಾರೆ.ಈ ವೇಳೆ ಕರ್ನಾಟಕ ಮುಸ್ಲಿಂ ಹಿತರಕ್ಷಣಾ ವೇದಿಕೆಯ…
ಭವಿಷ್ಯಕ್ಕಾಗಿ ಠೇವಣಿ ಇಟ್ಟಿದ್ದ ಹಣವನ್ನು ಮರಳಿಸುವಂತೆ ಸರ್ಕಾರಕ್ಕೆ ನೊಂದ ಠೇವಣಿದಾರರ ಆಗ್ರಹ ಉದಯರಶ್ಮಿ ದಿನಪತ್ರಿಕೆ ಬೆಳಗಾವಿ: ಬಹು ಕೋಟಿ ವಂಚನೆ ಹಗರಣದ ಬೆಳಗಾವಿ ಮೂಲದ ಸಂಗೊಳ್ಳಿ ರಾಯಣ್ಣ ಸಹಕಾರಿ ಸಂಸ್ಥೆಯಲ್ಲಿ ಸಾವಿರಾರು ಜನರು ತಮ್ಮ ಉಳಿತಾಯಕ್ಕಾಗಿ ಭವಿಷ್ಯಕ್ಕಾಗಿ ಠೇವಣಿ ಇಟ್ಟಿದ್ದ ಹಣವನ್ನು ಮರಳಿಸುವಂತೆ ನೊಂದ ಠೇವಣಿದಾರರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.ಈ ಕುರಿತು ಗುರುವಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ ನೊಂದ ಠೇವಣಿದಾರರು, ಬೆಳಗಾವಿಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅರ್ಬನ್ ಕೋಆಪರೇಟಿವ್ ಸೊಸೈಟಿಯ ಉದ್ಯಮಿ ಆನಂದ ಅಪ್ಪುಗೋಳ ಎಂಬುವವರು ಠೇವಣಿದಾರರಿಗೆ ಪಂಗನಾಮ ಹಾಕಿದ್ದು, ಸಾವಿರಾರು ಕೋಟಿ ಆಸ್ತಿಯ ದಾಖಲೆ ಇದ್ದರೂ ಸಹ ಕಳೆದ ಏಳು ವರ್ಷದಿಂದ ಸಂಗೊಳ್ಳಿ ರಾಯಣ್ಣ ಸಹಕಾರಿ ಹಣಕಾಸು ಸಂಸ್ಥೆಯ ಅವ್ಯವಹಾರ ಇನ್ನೂ ಇತ್ಯರ್ಥವಾಗಿಲ್ಲ. 2020 ರಲ್ಲಿ ಬೆಳಗಾವಿ ಅಸಿಸ್ಟೆಂಟ್ ಕಮಿಷನರ್ ಕಚೇರಿಯಲ್ಲಿ ಎಲ್ಲರಿಗೂ ಠೇವಣಿ ಪಾತ್ರದ ನಕಲು ಪ್ರತಿಗಳನ್ನು ಹಚ್ಚಲು ಹೇಳಿ ಅರ್ಜಿಗಳನ್ನು ಸ್ವೀಕರಿಸಿದರು. ಬಡವರು ಕಾರ್ಮಿಕರು ಮದ್ಯಮ ವರ್ಗದವರು ಅರ್ಜಿ ಸಲ್ಲಿಸಿ ತಾವು ತುಂಬಿದ ಠೇವಣಿ ಹಣ ಬರುವುದೆಂದು ದಾರಿ…
ಉದಯರಶ್ಮಿ ದಿನಪತ್ರಿಕೆ ಅಪಜಲಪುರ: ಭೀಮಾತೀರದಲ್ಲಿರುವಉಡಚಣದಲ್ಲಿ ಸಹಸ್ರಾರ ಭಕ್ತರ ಜೈ ಘೋಷಗಳ ಮಧ್ಯೆ ಸಂಭ್ರಮದಿಂದ ಹುಚ್ಚ ಲಿಂಗೇಶ್ವರ ಜಾತ್ರಾ ಮಹೋತ್ಸವ ಬುಧವಾರ ಅಧೂರಿಯಾಗಿ ನೆರವೇರಿತು.ಬುಧವಾರ ಬೆಳಗ್ಗೆ ಶ್ರೀ ಹುಚ್ಚ ಲಿಂಗೇಶ್ವರರ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಮೆರವಣಿಗೆಯ ಮೂಲಕ ಭೀಮಾನದಿಗೆ ಗಂಗಾ ಸ್ಥಲಮಾಡಿಸಿಕೊಂಡು ಮೂರ್ತಿಯನ್ನು ದೇವಸ್ಥಾನಕ್ಕೆ ಅದ್ದೂರಿ ಮೆರವಣಿಗೆ ಡೊಳ್ಳು ಹಲಗೆ ಬಾಜಾ ಭಜಂತ್ರಿಗಳೊಂದಿಗೆ ಕರೆ ತರಲಾಯಿತು.ನಂತರ ದೇವರಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಸಹಸ್ರಾರು ಭಕ್ತ ಸಮೂಹ ಮಧ್ಯೆ ಮಧ್ಯಾನ ಎರಡು ಗಂಟೆಗೆ ಭಂಡಾರಿ ದಂಪತಿ ಅಗ್ಗಿ ಪ್ರವೇಶಿಸುವ ಮೂಲಕ ಅಗ್ಗಿ ಹಾಯುವ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು, ರಾಜ್ಯ ಹಾಗೂ ನೆರೆ ರಾಜ್ಯದ ಭಕ್ತರು ಬಿಸಿಲಲ್ಲಿ ಅಗ್ಗಿ ಹಾಯುವ ಸನ್ನಿವೇಶವನ್ನು ಕಣ್ತುಂಬಿಕೊಂಡು ಧನ್ಯರಾದರು, ಸಹಸ್ರಾರು ಭಕ್ತರು ಆಗ್ಗಿ ಪ್ರವೇಶವನ್ನು ವೀಕ್ಷಿಸಿದರು. ಎಲ್ಲೆಡೆ ಹುಚ್ಚ ಲಿಂಗೇಶ್ವರ ಮಹಾರಾಜ ಕಿ ಜೈ ಜೈ ಘೋಷಣೆಗಳು ಮೊಳಗಿದವು,ಬೃಹತ್ ಜಾನುವಾರ ಜಾತ್ರೆಯೊ ನಡೆದಿದ್ದು ಸಾವಿರಾರು ಜಾನುವಾರುಗಳ ವ್ಯಾಪಾರಕ್ಕೆ ಬೃಹತ್ತ ಮಾರುಕಟ್ಟೆ ದೊರೆಕಿದೆ ಜನರಿಗೆ ಅಗ್ಗಿ ನೋಡಲು ಅನುಕೂಲ ಕಲ್ಪಿಸಲು ಬೃಹತ್ ಟೀವಿ…
ಶಿಕ್ಷಕ, ಪತ್ರಕರ್ತ ಗಂಗಾದರ ಹಿರೇಮಠ ಅವರಿಗೆ ಮಾತೃವಿಯೋಗ ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ಸ್ಥಳೀಯ ಎಂ.ಎಚ್.ಎಂ.ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಗಂಗಾಧರ ಹಿರೇಮಠ ಅವರ ತಾಯಿ ಶ್ರೀಮತಿ ಶಾಂತಾಬಾಯಿ ಮಲ್ಲಿಕಾರ್ಜುನಯ್ಯ ಹಿರೇಮಠ (78) ಬುಧವಾರ ರಾತ್ರಿ ನಿಧನರಾದರು.ಕಳೆದೆರಡು ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮೃತರು ಭಾಗಶಃ ಊಟವನ್ನು ತ್ಯಜಿಸಿದ್ದರು. ಅವರಿಗೆ ನಾಲ್ಕು ಜನ ಮಕ್ಕಳಲ್ಲಿ ತಲಾ ಇಬ್ಬರು ಗಂಡು, ಹೆಣ್ಣು ಮಕ್ಕಳಿದ್ದರು. ಇಬ್ಬರು ಗಂಡು ಮಕ್ಕಳಲ್ಲಿ ಒಬ್ಬರು ಈಗಾಗಲೇ ಅಸ್ತಂಗತರಾಗಿದ್ದಾರೆ. ಈಗ ಪತಿ, ಮೂರು ಜನ ಮಕ್ಕಳು ಸೇರಿದಂತೆ ಅಪಾರ ಬಂದು ಬಳಗವನ್ನು ಬಿಟ್ಟು ಮೃತರು ಅಗಲಿದ್ದಾರೆ.ಮೃತರ ಪುತ್ರ ಗಂಗಾಧರ ಹಿರೇಮಠ ಒಳ್ಳೆಯ ಯೋಗಪಟು, ಯೋಗ ಗುರು, ಆಲಮಟ್ಟಿ ಕನ್ನಡಪ್ರಭ ಮತ್ತು ಉದಯರಶ್ಮಿ ದಿನಪತ್ರಿಕೆಗಳ ವರದಿಗಾರರಾಗಿ ವೃತ್ತಿ ಕಾಯಕದ ಜೊತೆಗೆ ಸಮಾಜಮುಖಿ ಸೇವೆ ಸಲ್ಲಿಸುತ್ತಾ ಈ ಭಾಗದ ಜನತೆಯ ಪ್ರೀತಿಗೆ ಪಾತ್ರರಾಗಿದ್ದಾರೆ.ಮೃತರ ಅಂತ್ಯಕ್ರಿಯೆ ಗುರುವಾರ ಸಕಲ ಗೌರವಗಳೊಂದಿಗೆ ಸಿಂದಗಿ ಪಟ್ಟಣದಲ್ಲಿ ನೆರವೇರಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.ಸಂತಾಪ: ಹಿರಿಯ ಮಾತೋಶ್ರೀ ಶ್ರೀಮತಿ ಶಾಂತಾಬಾಯಿ ಹಿರೇಮಠ…
ಲೇಖನ:- ಸಂತೋಷ್ ರಾವ್ ಪೆರ್ಮುಡಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆಬೆಳ್ತಂಗಡಿ ತಾಲೂಕುದ.ಕ ಜಿಲ್ಲೆ-೫೭೪೧೯೮ದೂ: ೯೭೪೨೮೮೪೧೬೦ ಉದಯರಶ್ಮಿ ದಿನಪತ್ರಿಕೆ ಮನುಷ್ಯನಿಗೆ ೩೦ ವರ್ಷ ವಯಸ್ಸಿನ ನಂತರ ವೃದ್ಧಾಪ್ಯ ಆರಂಭ ಆಗುತ್ತದೆ. ಆತನ ಕಾರ್ಯಕ್ಷಮತೆಯ ಉತ್ತುಂಗದ ಹಂತಕ್ಕೇರಿ ಅಲ್ಲಿಂದ ಆತನ ದೇಹದ ಜೀವಕೋಶಗಳು ನಿಧಾನವಾಗಿ ಕುಂದಲು ಪ್ರಾರಂಭವಾಗುತ್ತದೆ. ನಂತರ ಸ್ನಾಯುಗಳ ಶಕ್ತಿ ಕುಂಠಿತ ಆಗುವುದು, ಉಸಿರಾಟ ನಿಧಾನವಾಗುವುದು, ರಕ್ತಪರಿಚಲನೆಯ ದಕ್ಷತೆ ಕಡಿಮೆ ಆಗುವುದು, ದೇಹದ ರೋಗನಿರೋಧಕ ಶಕ್ತಿಯೂ ಕಡಿಮೆ ಆಗುತ್ತಾ ಹೋಗುತ್ತದೆ. ಅಷ್ಟೇ ಅಲ್ಲ ಆತನ ಚರ್ಮದ ಸ್ಥಿತಿಸ್ಥಾಪಕತೆ ಕಡಿಮೆಯಾಗಿ ಸುಕ್ಕುಗಟ್ಟಲು ಆರಂಭಿಸುತ್ತದೆ. ಮುಪ್ಪಿಗೆ ಕಾರಣಗಳೇನು ಎಂದು ವಿಶ್ಲೇಷಿಸಿದರೆ ವಿಜ್ಞಾನಿಗಳ ಪ್ರಕಾರ ಮುಪ್ಪು ಮತ್ತು ಮರಣಕ್ಕೆ ಸಂಬಂಧಿಸಿದ ಕೋಶಗಳ ಜೀನ್ಗಳಲ್ಲೇ ಒಂದು ವೇಳಾಪಟ್ಟಿಯಿದ್ದು, ಇದು ಪೂರ್ವನಿರ್ಧರಿತ. ಅಂಗಗಳ ಅಭಿವರ್ಧನೆಯನ್ನು ಕೆಲವು ಜೀನ್ಗಳು ನಿಯಂತ್ರಿಸುವಂತೆ, ಕೆಲವು ಜೀನ್ಗಳು ಮುಪ್ಪು ಮತ್ತು ಮರಣವನ್ನು ನಿಯಂತ್ರಿಸುತ್ತವೆ.ಮನುಷ್ಯನಲ್ಲಿ ಮಗುವಿನ ಚರ್ಮದ ಜೀವಕೋಶಗಳು ಸುಮಾರು ೫೦ ಬಾರಿ ವಿಭಜಿಸಿ ತಮ್ಮ ವಿಭಜನೆಯ ಕೆಲಸವನ್ನು ನಿಲ್ಲಿಸಿಬಿಡುತ್ತವೆ. ಅದೇ ೯೦ ವರ್ಷ ವಯಸ್ಸಿನ…
ಕಾಂಗ್ರೆಸ್ ಅಲ್ಪಸಂಖ್ಯಾತರ ತುಷ್ಟೀಕರಣ ನೀತಿಯಿಂದ ಸಮಾಜದಲ್ಲಿ ಅಶಾಂತಿ | ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪ ಕರ್ನಾಟಕದಲ್ಲಿ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಸರ್ಕಾರಿ ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ ಶೇಕಡಾ 4ರಷ್ಟು ಮೀಸಲಾತಿ ನೀಡಲು ಯೋಜಿಸುತ್ತಿದೆ ಎಂದು ಬಿಜೆಪಿ ಬುಧವಾರ ಆರೋಪಿಸಿದೆ.ರಾಜ್ಯಾದ್ಯಂತ ಎಲ್ಲಾ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿರುವಾಗ, ಆಡಳಿತಾರೂಢ ಕಾಂಗ್ರೆಸ್ ಅಲ್ಪಸಂಖ್ಯಾತರಿಗೆ ಸರ್ಕಾರಿ ಒಪ್ಪಂದಗಳಲ್ಲಿ ಶೇಕಡಾ ನಾಲ್ಕು ಮೀಸಲಾತಿ ನೀಡುವ ಪ್ರಸ್ತಾಪವನ್ನು ಸಚಿವ ಸಂಪುಟದ ಮುಂದೆ ಮಂಡಿಸಲು ನಿರ್ಧರಿಸಿದೆ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.ದೇಶದಲ್ಲಿ ಅನೇಕ ಇತರ ಸಮುದಾಯಗಳಿರುವಾಗ ಅಲ್ಪಸಂಖ್ಯಾತರೆಂದರೆ ಯಾವಾಗಲೂ ಮುಸ್ಲಿಮರು ಎಂದು ಏಕೆ ಕರೆಯಲಾಗುತ್ತದೆ ಎಂದು ವಿಜಯೇಂದ್ರ ಪ್ರಶ್ನಿಸಿದರು.”ಅಲ್ಪಸಂಖ್ಯಾತರು ಎಂದರೆ ಮುಸ್ಲಿಮರು ಮಾತ್ರವೇ ಹೊರತು ಬೇರೆ ಯಾರನ್ನೂ ಅಲ್ಲವೇ? ಕಾಂಗ್ರೆಸ್ನ ಅಲ್ಪಸಂಖ್ಯಾತರ ತುಷ್ಟೀಕರಣ ನೀತಿಗಳು ಸಮಾಜದಲ್ಲಿ ಅಶಾಂತಿಯನ್ನು ಉಂಟುಮಾಡುತ್ತವೆ” ಎಂದು ವಿಜಯೇಂದ್ರ ಸುದ್ದಿಗಾರರಿಗೆ ತಿಳಿಸಿದರು.ಮುಖ್ಯಮಂತ್ರಿ ಸಿದ್ದರಾಮಯ್ಯ ನಿಜವಾಗಿಯೂ ಹಿಂದುಳಿದ ಸಮುದಾಯಗಳ ನಾಯಕರಾಗಿದ್ದರೆ, ಅವರು ತಮ್ಮನ್ನು ತಾವು ಹಿಂದುಳಿದ ಸಮುದಾಯಗಳ ನಾಯಕ ಎಂದು ಬಿಂಬಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಅವರಿಗೆ ಅಧಿಕಾರ ನೀಡುವ…
ಉದಯರಶ್ಮಿ ದಿನಪತ್ರಿಕೆ ಗೋಲಗೇರಿ: ಕರ್ನಾಟಕ ರಾಜ್ಯ ತಳವಾರ ಮಹಾಸಭಾ ರಾಜ್ಯ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಹೋರಾಟಗಾರ ಶಿವಾಜಿ ಮೆಟಗಾರ ಅವರನ್ನು ಇಂದು ಸಿಂದಗಿಯಲ್ಲಿ ತಳವಾರ ಸಮಾಜದ ಬಾಂಧವರು ಸನ್ಮಾನಿಸಿ ಅಭಿನಂದಿಸಿದರು.ಸನ್ಮಾನ ಸ್ವೀಕರಿಸಿ ಮಾತನಾಡಿದ ಶಿವಾಜಿ ಮೆಟಗಾರ ಅವರು, ನಾನು ಹಿಂದೆಯೂ ತಳವಾರ ಸಮಾಜದ ಅಭಿವೃದ್ಧಿಗಾಗಿ ಹೋರಾಟ ಮಾಡಿದ್ದೇನೆ ಮುಂದೆಯೂ ತಳವಾರ ಸಮಾಜದ ಅಭಿವೃದ್ಧಿಗಾಗಿ ಸದಾ ಸಿದ್ದವಿರುವದಾಗಿ ಹೇಳಿದರು.ಈ ಸಂದರ್ಭದಲ್ಲಿ ಮಾತನಾಡಿದ ತಳವಾರ ಸಮಾಜದ ಮುಖಂಡರಾದ ಮಡಿವಾಳ ನಾಯ್ಕೋಡಿ ಅವರು ತಳವಾರ ಸಮಾಜದ ಅಭಿವೃದ್ದಿಗಾಗಿ ಶಿವಾಜಿ ಮೆಟಗಾರ ಅವರ ಹೋರಾಟ ಯಾವಾಗಲೂ ಶ್ಲಾಘನೀಯ ಎಂದು ಹೇಳಿದರು.ಈ ಸಂದರ್ಭದಲ್ಲಿ ತಳವಾರ ಸಮಾಜದ ಮುಖಂಡರಾದ ಅರವಿಂದ ನಾಯ್ಕೋಡಿ, ನಾಗರಾಜ ತಳವಾರ, ಮಡಿವಾಳ ಕೂಡಿ, ಪ್ರಭು ನಾಟೀಕಾರ, ಶಂಕ್ರೆಪ್ಪಬೂದಿಹಾಳ, ಮಹೇಶ ಬೂದಿಹಾಳ,ಮಡಿವಾಳಪ್ಪ ನಾಯ್ಕೋಡಿ, ರಾಜಕುಮಾರ ಸುಂಗಠಾಣ, ಮುದಕಪ್ಪ ಸುಂಗಠಾಣ, ರವಿ.ಕೆಂಭಾವಿ ಸೇರಿದಂತೆ ಇನ್ನಿತರರು ಇದ್ದರು
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿಜ್ಞಾನವೆಂಬುದು ಆಧುನಿಕ ಯುಗದ ಧರ್ಮವಾಗಿದೆ ಎಂದು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಆರ್ಎಚ್ ಬಿರಾದಾರ ಹೇಳಿದರು.ಗಣಿಹಾರ ಮಾದರಿ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಜ್ಞಾನದ ಮಾದರಿಗಳು ಮತ್ತು ಪರಂಪರೆಗಳು ಹಲವು ಆದರೆ ಇದರಲ್ಲಿ ವಿಜ್ಞಾನ ಒಂದು ಮಾದರಿ, ಜ್ಞಾನವೆಂದರೆ ವಿಜ್ಞಾನವಲ್ಲ ಅದೊಂದು ಭಾಗವಾಗಿ ತೆಗೆದುಕೊಂಡು ನಮ್ಮ ಪರಂಪರೆಯನ್ನು ಉಳಿಸಿಕೊಂಡು ಹೋಗಬೇಕಾಗಿದೆ, ಇಂತಹ ವಿನೂತನ ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ಗಣಿಹಾರ ಶಾಲೆಯು ತಾಲೂಕಿನಲ್ಲಿ ಮಾದರಿಯಾಗಿದೆ ಎಂದರು ಎಂದರು.ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ರಾಜ್ಯ ಪರಿಷತ್ ಸದಸ್ಯ ರವಿಕುಮಾರ್ ಹೊಸಮನಿ ಮಾತನಾಡಿ ಮೂಲವಿಜ್ಞಾನವನ್ನು ಕಲಿಸಲು, ಕಲಿಯಲು ಅನುವು ಮಾಡಿಕೊಡುವಂತಹ ವಾತಾವರಣವನ್ನು ಸೃಷ್ಟಿಸಬೇಕಾಗಿದೆ. ಶಿಕ್ಷಕರಿಗೆ ವಿಜ್ಞಾನದ ಉನ್ನತ ತರಬೇತಿ ಕೊಡುವುದರ ಮೂಲಕ ಇದನ್ನು ಸಾಧಿಸಬಹುದು. ನಮಗೆ ವೈಜ್ಞಾನಿಕ ಸೂತ್ರ ಮತ್ತು ನಿಯಮಗಳ ಜೊತೆ ವಿಜ್ಞಾನದ ಭಾವವೂ ಬೇಕು ಎಂದರು.ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಸರ್ಕಾರಿ ನೌಕರ ಸಂಘದ ನಿರ್ದೇಶಕ ಸಂತೋಷ…
ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಜನಪರವಾದ ಕಾಮಗಾರಿ ಮತ್ತು ಯೋಜನೆಗಳು ಜನರ ಆಶೋತ್ತರಗಳಿಗೆ ಸ್ಪಂದಿಸುವವರೆ ಜನನಾಯಕರಾಗಿ ಸಾರ್ವಜನಿಕ ಜೀವನದಲ್ಲಿ ತಮ್ಮ ಚಾಪನ್ನು ಮೂಡಿಸುತ್ತಾರೆ ಎಂದು ದಿಗಂಬರೇಶ್ವರ ಸಂಸ್ಥಾನ ಮಠದ ಕಲ್ಲಿನಾಥ ದೇವರು ಹೇಳಿದರು.ಪಟ್ಟಣದಲ್ಲಿ ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ರಾಜ್ಯ ಕಾರ್ಯದರ್ಶಿ ಉಸ್ಮಾನಸಾಬ ಪಟೇಲ ರಮಜಾನ ತಿಂಗಳ ಮೊದಲ ಉಪವಾಸ ಆಚರಣೆ ಮಾಡಿದವರಿಗಾಗಿ ಏರ್ಪಡಿಸಿದ್ದ ಇಪ್ತೀಯಾರಕೂಟ ಹಾಗೂ ಪಟ್ಟಣ ಪಂಚಾಯತ ನೂತನ ಅಧ್ಯಕ್ಷ ಉಪಾಧ್ಯಕ್ಷರ ಸನ್ಮಾನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು. ತಾಲೂಕು ಕೇಂದ್ರವಾದ ಕೊಲ್ಹಾರ ಪಟ್ಟಣದ ಸರ್ವಾಂಗೀಣ ಅಭಿವ್ರದ್ದಿಗಾಗಿ ಸ್ಥಳೀಯ ಆಡಳಿತ ಮಂಡಳಿ ಉತ್ತಮವಾದ ಕೆಲಸ ಮಾಡಲಿ ಎಂದು ಹಾರೈಸಿದರು.ಆಯೋಜಕರಾದ ಉಸ್ಮಾನಸಾಬ ಪಟೇಲ ಮಾತನಾಡಿ ಪುನರವಸತಿ ಕೇಂದ್ರದಲ್ಲಿ ನಿವೇಶನ ಹಂಚಿಕೆಯಲ್ಲಾದ ಲೋಪದೋಷವನ್ನು ಸರಿಪಡಿಸಿ ಸಂತ್ರಸ್ತರಿಗೆ ಆದಷ್ಟು ಬೇಗನೆ ಇ ಉತಾರಿಗಳು ಸಿಗುವಂತಾಗಲು ಕ್ರಮಕೈಗೊಳ್ಳಬೇಕು ಎಂದರು.ಚಂದ್ರಶೇಖರಯ್ಯ ಮ ಗಣಕುಮಾರ. ಶ್ರೀಶೈಲ ಪತಂಗಿ ಮತ್ತು ಸಲಿಂ ಅತ್ತಾರ ಮಾತನಾಡಿದರು.ಕಾಂಗ್ರೇಸ ಪಕ್ಷದ ಯುವಘಟಕದ ಅಧ್ಯಕ್ಷ ಮೋಹಶೀನ್ ಕಾಖಂಡಕಿ ಪಪಂ ಅಧ್ಯಕ್ಷ ಚನಮಲ್ಲಪ್ಪ ಗಿಡ್ಡಪ್ಪಗೋಳ ಉಪಾಧ್ಯಕ್ಷೆ ಶ್ರೀಮತಿ ರಾಜಮಾ…
ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಪಟ್ಟಣದ ವಿಠ್ಠಲ ದೇವಸ್ಥಾನದ ಸಭಾಂಗಣದಲ್ಲಿ ಮಂಜುನಾಥ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ವತಿಯಿಂದ ವಿಕಲಚೇತನರಿಗೆ ಗಾಲಿ ಕುರ್ಚಿ ಸೈಕಲ್ ವಿತರಣಾ ಸಮಾರಂಭ ಜರುಗಿತು.ಉದ್ಘಾಟನೆ ನೆರವೇರಿಸಿ ಮಾಜಿ ಸಚಿವ ಎಸ್ ಕೆ ಬೆಳ್ಳುಬ್ಬಿ ಮಾತನಾಡಿ, ಪಟ್ಟಣದ ನಿರುದ್ಯೋಗಿ ಮಹಿಳೆಯರಿಗೆ ಉಚಿತ ಉದ್ಯೋಗ ತರಬೇತಿ ನೀಡಿ ಸ್ವ ಉದ್ಯೋಗ ಮಾಡಿ ತಮ್ಮ ಕುಟುಂಬಕ್ಕೆ ಆರ್ಥಿಕ ಸಹಕಾರ ನೀಡುವ ಮತ್ತು ವಿಕಲಚೇತನರಿಗೆ ಉಚಿತವಾಗಿ ಗಾಲಿ ಕುರ್ಚಿ ಸೈಕಲ್ ಮತ್ತು ಮನೆ ನಿರ್ಮಾಣ ಮಾಡಿ ಕೊಡುವುದು ಸರ್ಕಾರ ಮಾಡದ ಕೆಲಸವನ್ನು ಮಂಜುನಾಥ ಗ್ರಾಮಾಭಿವೃದ್ಧಿ ಸಂಸ್ಥೆ ಮಾಡುತ್ತಿದೆ ಇದು ನಿಜವಾಗಿಯೂ ಸಮಾಜದ ಉತ್ತಮ ಕಾರ್ಯವಾಗಿದೆ ಎಂದು ಹೇಳಿದರು.ಮುಖ್ಯ ಅತಿಥಿಗಳಾಗಿ ಪ್ರಗತಿಪರ ರೈತ ಸಿದ್ದಪ್ಪ ಬಾಲಗೊಂಡ ಮಾತನಾಡಿ ಈ ಸಂಸ್ಥೆಯು ಎಲೆಮರೆಯ ಕಾಯಿಯಂತೆ ಸಮಾಜ ಸೇವೆ ಮಾಡುವುದು ಈ ಸೇವೆಯನ್ನು ನಾವುಗಳು ಸರಿಯಾಗಿ ಬಳಸಿಕೊಂಡು ನಿಮ್ಮ ಜೀವನ ರೂಪಿಸಿಕೊಳ್ಳಲು ಆ ಮಂಜುನಾಥ ದೇವರು ನಿಮಗೆ ಕರುಣಿಸಿದ್ದಾನೆ ಎಂದು ತಿಳಿಸಿದರು.ಅತಿಥಿಗಳಾಗಿ ತಾಲ್ಲೂಕು ಯೋಜನಾಧಿಕಾರಿ ಪ್ರಸನ್ನ ಆರ್, ತರಬೇತಿದಾರರು ಸ್ಮೀತಾ…
