ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಅಂಗವಾಗಿ ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ರವರು ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿರುವ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಗೌರವ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಾಮಾಜಿಕ ಕ್ರಾಂತಿಯ ಹರಿಕಾರ, ಭಾರತ ರತ್ನ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರವರು ರಚಿಸಿದ ಸಂವಿಧಾನ ಸೂರ್ಯ ಚಂದ್ರದರು ಇರುವವರೆಗೆ ಈ ದೇಶದ ಸಂವಿಧಾನವಾಗಿ ಉಳಿಯುತ್ತದೆ. ಯಾವುದೇ ಕಾಲಕ್ಕೂ ಸಂವಿಧಾನಕ್ಕೆ ಧಕ್ಕೆ ಆಗದಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೇರಿದಂತೆ ನಮ್ಮ ನಾಯಕರು ನೋಡಿಕೊಳ್ಳುತ್ತಾರೆ ಎಂಬ ಅಚಲ ವಿಶ್ವಾಸವಿದೆ. ಅಂಬೇಡ್ಕರ್ ಜಯಂತಿ ಅಂದರೆ ನಮಗೆಲ್ಲ ಹಬ್ಬವಿದ್ದಂತೆ. ಏಕೆಂದರೆ ಎಲ್ಲ ಜನಾಂಗದವರಿಗೆ ನ್ಯಾಯ ಕೊಟ್ಟಿರುವ ಪುಣ್ಯಾತ್ಮರು ಅಂಬೇಡ್ಕರರು ಎಂದು ಹೇಳಿದರು.
ಮುಖಂಡರಾದ ಮಡಿವಾಳ ಯಾಳವಾರ, ದಾದಾಸಾಹೇಬ ಬಾಗಾಯತ, ವಿಠ್ಠಲ ನಡುವಿನಕೇರಿ, ಶಶಿಧರ ಅಥರ್ಗಾ, ಗುರು ಗಚ್ಚಿನಮಠ, ರಾಘವ ಅಣ್ಣಿಗೇರಿ, ಶಂಕರ ಹೂಗಾರ, ಪಾಂಡುಸಾಹುಕಾರ ದೊಡಮನಿ, ಕಿರಣ ಪಾಟೀಲ, ರಾಜಶೇಖರ ಕುರಿಯವರ, ಜವಾಹರ ಗೋಸಾವಿ, ದತ್ತಾ ಗೊಲಂಡೆ, ಅಶೋಕ ಬೆಲ್ಲದ, ರಾಚು ಬಿರಾದಾರ, ಪ್ರವೀಣ ನಾಟೀಕಾರ, ಪ್ರವೀಣ ಕೂಡಗಿ, ರಾಜಲಕ್ಷ್ಮೀ ಪರ್ವತ್ತನವರ, ಲಕ್ಷ್ಮೀ ಕನ್ನೋಳ್ಳಿ, ಸುಚೀತಾ ಜಾಧವ, ರಾಜಶೇಖರ ಭಜಂತ್ರಿ, ನಾಗರಾಜ ಮುಳವಾಡ, ಸಿದ್ದನಗೌಡ ಬಿರಾದಾರ, ಬಸವರಾಜ ಗುರಣ್ಣವರ, ಬಸು ಲವಗಿ, ಬಸವರಾಜ ಬಿರಾದಾರ, ಮಹೇಂದ್ರ ಸುಣಗಾರ ಸೇರಿದಂತೆ ಮತ್ತಿತರರು ಇದ್ದರು.

