Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಲೇಖನ:ಸಂತೋಷ್ ರಾವ್ ಪೆರ್ಮುಡಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ-೫೭೪೧೯೮ದೂ:೯೭೪೨೮೮೪೧೬೦ ಉದಯರಶ್ಮಿ ದಿನಪತ್ರಿಕೆ ಅಪ್ಪನಂತೆ ತಾನೂ ವಿಜ್ಞಾನಿ ಆಗಬೇಕೆಂಬ ಬಾಲ್ಯದ ಕನಸನ್ನು ನನಸು ಮಾಡುವ ಇಂಜಿನಿಯರಿಂಗ್ ಮುಗಿಸಿ ಕ್ಯಾಂಪಸ್ ಇಂಟರ್ವ್ಯೂನಲ್ಲಿಯೇ ಹಲವಾರು ಕಂಪನಿಗಳ ಆಫರ್ಗಳು ಬಂದಿದ್ದರಿಂದ ಕೆಲಸಕ್ಕೂ ಸೇರಿದ್ದರು. ಇನ್ನೇನು ಬದುಕು ಎಲ್ಲಾ ಅಡೆತಡೆಗಳನ್ನು ದಾಟಿ ಮುನ್ನುಗ್ಗಲಿದೆ ಎನ್ನುವಷ್ಟರಲ್ಲಿ ಅಚಾತುರ್ಯ ನಡೆದಿತ್ತು. ೨ನೇ ತಾರೀಖು ಡಿಸೆಂಬರ್ ೨೦೧೧ರಂದು ಎಂದಿನಂತೆ ಖುಷಿಯಲ್ಲಿ, ಕಛೇರಿಗೆ ತೆರಳುವ ದಾರಿಯಲ್ಲಿ ಇವರ ಬೈಕಿಗೆ ಲಾರಿ ಗುದ್ದಿದ ರಭಸಕ್ಕೆ ಇವರ ಕೈ ಮುರಿದು, ಎಡಗಾಲ ಮೇಲೇ ಲಾರಿಯ ಚಕ್ರ ಹತ್ತಿ ಕಾಲನ್ನು ಸಂಪೂರ್ಣ ನುಜ್ಜುಗುಜ್ಜಾಗಿಸಿ, ಇಡೀ ದೇಹವನ್ನೇ ಮುದ್ದೆಯಾಗಿಸಿತ್ತು.ಅದೆಷ್ಟೇ ಹರಸಾಹಸ ಪಟ್ಟರೂ ಜಜ್ಜಿಹೋಗಿದ್ದ ಕಾಲಿನ ಗಾಯ ಗ್ಯಾಂಗ್ರೀನ್ ರೂಪ ತಳೆದಿದ್ದರಿಂದ ಡಾಕ್ಟರ್ಗಾಗಲೀ ಮನೆಯವರಿಗಾಗಲೀ ಆ ಕಾಲು ಕತ್ತರಿಸುವುದನ್ನು ಬಿಟ್ಟು ಬೇರೆ ಆಯ್ಕೆಯಿರಲಿಲ್ಲ. ೪೫ ದಿನಗಳ ಕಾಲ ಮುಂಬೈನ ವಾಶಿಯ ಎಂ.ಜಿ.ಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಬಂದರು. ಕಾಲು ಹೋಗಿದ್ದರಿಂದ ಇವರು ಬೇಸರಿಸಿಕೊಳ್ಳಲಿಲ್ಲ. ಆದರೆ…
ಲೇಖನ- ಸುಧಾ ಪಾಟೀಲವಿಶ್ವಸ್ಥರುಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರಪುಣೆ ಉದಯರಶ್ಮಿ ದಿನಪತ್ರಿಕೆ ಅಗಾಥಾ ಕ್ರಿಸ್ಟಿ ಅವರ ಪೂರ್ಣ ಹೆಸರು ಡೇಮ್ ಅಗಾಥಾ ಮೇರಿ ಕ್ಲರಿಸ್ ಕ್ರಿಸ್ಟಿ. ಇವರು ಸೆಪ್ಟೆಂಬರ್ 15 1893 ರಲ್ಲಿ ಇಂಗ್ಲೆಂಡಿನಲ್ಲಿ ಜನಿಸಿದರು. ಇವರು ಮೇಲ್ವರ್ಗದ ಶ್ರೀಮಂತ ಕುಟುಂಬದಲ್ಲಿ ಹುಟ್ಟಿದರು.ಈಕೆ ಕ್ಲಾರ ಮತ್ತು ಮಿಲ್ಲರ್ ದಂಪತಿಗಳ ಕೊನೆಯ ಪುತ್ರಿ. ಇವರ ಅಕ್ಕ ಮಾರ್ಗ್ರೇಟ್ ಮಿಲ್ಲರ್ ಮತ್ತು ಅಣ್ಣ ಲೂಯಿಸ್ ಮಿಲ್ಲರ್ . ಸಂಗೀತದಲ್ಲಿ ಅಪಾರ ಆಸಕ್ತಿ ಹೊಂದಿದ ಇವರು ಪಿಯಾನೋ ಮತ್ತು ಮಾಂಡೋಲಿನ ನುಡಿ ಸುತ್ತಿದ್ದರು. ಇವರು ಜೀವಮಾನವಿಡಿ ಪುರಾತತ್ವ ಕ್ಷೇತ್ರದಲ್ಲಿ ಆಸಕ್ತಿ ಉಳಿಸಿಕೊಂಡಿದ್ದರು. ಕಾದಂಬರಿಕಾರರು ಮಾತ್ರವಲ್ಲದೆ ಸಣ್ಣ ಕಥೆಗಾರರು ಮತ್ತು ನಾಟಕಕಾರರಾಗಿ ಕೂಡ ಹೆಸರುವಾಸಿಯಾಗಿದ್ದಾರೆ. ಇವರು ಮೇಲೆ ” ಮೇರಿ ವೆಸ್ಟ್ ಮೆಕ್ಕೊಟ್ “ಎಂಬ ಮತ್ತೊಂದು ಹೆಸರಿನಲ್ಲಿ ಪ್ರಣಯ ಕಥೆಗಳನ್ನು ಬರೆದಿದ್ದಾರೆ. ಇವರು ಅಗಾಥಾ ಕ್ರಿಸ್ಟಿ ಎನ್ನುವ ಹೆಸರಿನಲ್ಲಿ ಹೆಸರಿನಲ್ಲಿ 66 ಪತ್ತೆದಾರಿ ಕಾದಂಬರಿಗಳನ್ನು ಮತ್ತು 14 ಸಣ್ಣ ಕಥಾ ಸಂಗ್ರಹಗಳನ್ನು ಬರೆದಿದ್ದಾರೆ.ಇವರು ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ…
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ೬೨೫ ಕ್ಕೆ ೬೨೫ ಅಂಕಗಳನ್ನು ಗಳಿಸುವ ಮೂಲಕ ರಾಜ್ಯವೇ ತನ್ನತ್ತ ತಿರುಗಿ ನೋಡುವಂತಹ ಸಾಧನೆ ಮಾಡಿದ ತಾಲೂಕಿನ ನಾಗರಬೆಟ್ಟ ಗ್ರಾಮದ ಆಕ್ಸಫರ್ಡ ಪಾಟೀಲ್ಸ್ ಶಾಲೆಯ ವಿದ್ಯಾರ್ಥಿ ಅಖಿಲ ನದಾಫ್ ಗೆ ತನ್ನ ಕುಟುಂಬದವರು ಸಿಹಿ ತಿನ್ನಿಹಿ ಶುಭಹಾರೈಸಿದರು.ಮಹಾರಾಷ್ಟ್ರದ ಸೊಲಾಪೂರದಲ್ಲಿ ಸಂಬಂಧಿಕರ ಮದುವೆ ಸಂಭ್ರಮದಲ್ಲಿ ಭಾಗಿಯಾಗಿದ್ದ ಅಖಿಲನನ್ನು ಫೊನ್ ಕರೆ ಮೂಲಕ ಸಂಪರ್ಕಿಸಿದಾಗ ಈ ಅಂಕ ಬರುವ ನಿರೀಕ್ಷೆಯಲ್ಲಿರುವದಾಗಿ ತಿಳಿಸಿದ್ದಾನೆ. ತನ್ನ ಸಾಧನೆಗೆ ತನ್ನ ತಂದೆ ತಾಯಿಯವರ ಶ್ರಮ, ಆಶೀರ್ವಾದ ಮತ್ತು ತನಗೆ ಪಾಠ ಮಾಡಿದ ಶಿಕ್ಷಕರು ಕಾರಣ ಎಂದು ತಿಳಿಸಿದ್ದಾನೆ.
ಉದಯರಶ್ಮಿ ದಿನಪತ್ರಿಕೆ ಪುಣೆ: ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ ಮತ್ತು ಸಮಸ್ತ ಲಿಂಗಾಯತ ವೆಲ್ಫೇರ್ ಟ್ರಸ್ಟ್ ಪುಣೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಇದೆ ದಿನಾಂಕ 4 ರವಿವಾರದಂದು ಬೆಳಿಗ್ಗೆ 10 ಘಂಟೆಗೆ ಪುಣೆಯ ಅಕ್ರುಡಿಯಲ್ಲಿನ ಗಡಿ ಮಡಗುಳಕರ ಸಭಾ ಭವನದಲ್ಲಿ ಬಸವ ಜಯಂತಿಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುವುದು.ಶಾಂತವೀರ ಸ್ವಾಮಿಗಳು ತೋಂಟದಾರ್ಯ ಮಠ ಶಿರೋಳ ಮತ್ತು ಭೈರನಟ್ಟಿ ಇವರ ನೇತೃತ್ವದಲ್ಲಿ ಜರುಗುವ ಕಾರ್ಯಕ್ರಮಕ್ಕೆ ಕರ್ನಾಟಕ ಮಹಾರಾಷ್ಟ್ರ ತೆಲಂಗಾಣ ಮತ್ತು ಆಂಧ್ರ ಪ್ರದೇಶದಿಂದ ನೂರಾರು ಬಸವ ಭಕ್ತರು ಪಾಲ್ಗೊಳ್ಳಲಿದ್ದಾರೆ.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉದ್ಯಮಿ ಎಸ ಬಿ ಪಾಟೀಲ ಅವರು ವಹಿಸಲಿದ್ದು ನಾರಾಯಣ ಬಹಿರವಾಡಿ, ಅಣ್ಣಾರಾಯ ಬಿರಾದಾರ, ಆರ್ ಎಸ ದೇಸಿಂಗೆ,ಶ್ರೀ ಪ್ರಶಾಂತ ಔಟಿ ಮುಖ್ಯ ಇಂಜಿನಿಯರ್, ಡಾ ಸರಸ್ವತಿ ಪಾಟೀಲ, ಸತೀಶ ಪಾಟೀಲ ಮುಂತಾದ ಗಣ್ಯರು ಅತಿಥಿಯಾಗಿ ಆಗಮಿಸಲಿದ್ದು ಇದೆ ಸಂದರ್ಭದಲ್ಲಿ ಸೋಲಾಪುರ ವಿಶ್ವ ವಿದ್ಯಾಲಯದ ಪ್ರೊ ವೈಸ್ ಚಾನ್ಸಲರ್ ಡಾ ಲಕ್ಷ್ಮೀಕಾಂತ ಬಸವರಾಜ ದಾಮಾ ಮತ್ತು ಪ್ರೊ ಶಾರದಾ ಪಾಟೀಲ ಮೇಟಿ ಇವರಿಗೆ…
ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಹಾಲುಮತ ಸಮುದಾಯದವರು ತಮ್ಮ ಶ್ರದ್ಧೆ, ಭಕ್ತಿ, ನಂಬಿಕೆ ಮತ್ತು ಸಂಸ್ಕೃತಿಯನ್ನು ನಿಸ್ವಾರ್ಥವಾಗಿ ಮುಂದುವರೆಸುತ್ತಿರುವುದು ಹೆಮ್ಮೆಪಡುವ ವಿಷಯವಾಗಿದೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.ಗುರುವಾರ ಮುಸ್ಸಂಜೆ ತಿಕೋಟಾ ತಾಲೂಕಿನ ಬಾಬಾನಗರದಲ್ಲಿ ಶ್ರೀ ನಗರ ಸಿದ್ಧೇಶ್ವರ ದೇವಸ್ಥಾನದ ನೂತನ ಕಟ್ಟಡ ಉದ್ಘಾಟನೆ, ಕಳಸಾರೋಹಣ ಹಾಗೂ ಪ್ರಾಣ ಪ್ರತಿಷ್ಠಾಪನೆ, ಕುಂಭ ಮೇಳ, ಜಾತ್ರಾ ಮಹೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.ಇಂದಿನ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳ ಬರಬೇಕು ಎಂಬುದು ಬಾಬಾನಗರದ ಜನತೆಯೆ ಒತ್ತಾಸೆಯಾಗಿತ್ತು. ಆದರೆ, ಪೂರ್ವನಿಗದಿತ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಸಿಎಂ ಬರಲು ಆಗಿಲ್ಲ. ಆದರೆ, ಮುಂಬರುವ ದಿನಗಳಲ್ಲಿ ಸಿಎಂ ಅವರನ್ನು ಆಹ್ವಾನಿಸಿ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಅವರು ತಿಳಿಸಿದರು.ಶ್ರೀ ನಗರ ಸಿದ್ಧೇಶ್ವರ ಪುರಾತನ ದೇವಸ್ಥಾನವನ್ನು ರೈತರು ದುಡಿದ ಹಣ ಕೂಡಿಸಿ ಅಭಿವೃದ್ಧಿ ಮಾಡಿದ್ದಾರೆ. ಮಖಣಾಪುರ, ಅಮೋಘಸಿದ್ಧ, ಬಾಬಾನಗರ ಸೇರಿದಂತೆ ಇನ್ನುಳಿದ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಎಸ್ಸೆಸ್ಸೆಲ್ಸಿ ಪರೀಕ್ಷೆ-1 ರ ಫಲಿತಾಂಶ ಶುಕ್ರವಾರ ಪ್ರಕಟಗೊಂಡಿದ್ದು ಪಟ್ಟಣದ ಪ್ರಕಾಶ ಚೌಧರಿ ಅವರ ಆಕ್ಷಫರ್ಡ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಶೇ.98.14 ರಷ್ಟಾಗಿದೆ. ಪರೀಕ್ಷೆಗೆ ಕುಳಿತ 54 ವಿದ್ಯಾರ್ಥಿಗಳಲ್ಲಿ 53 ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. 44 ವಿದ್ಯಾರ್ಥಿಗಳು ಉನ್ನತಶ್ರೇಣಿಯಲ್ಲಿ, 9 ವಿದ್ಯಾರ್ಥಿಗಳು ಪ್ರಥಮದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.ಗುರುಬಾಯಿ ಕುಂಬಾರ ಶೇ.98.20, ಪೂರ್ಣಿಮಾ ಜಂಗಾಣಿ ಶೇ.96.8, ಸ್ವೇತಾ ಅಕ್ಕಲಕೋಟ ಶೇ.96.4, ಪೂಜಾ ನಂದಿಕೋಲಮಠ ಶೇ.96.3, ಪ್ರದೀಪ ಕೋಣಸಿರಸಗಿ ಶೇ.96.1, ಭಾಗ್ಯಶ್ರೀ ಚೌಕಿಮಠ ಶೇ.95.8, ಗೀತಾ ಸುಲ್ಪಿ ಶೇ.94.8, ಲಕ್ಷಿö್ಮಪುತ್ರ ಬಡಿಗೇರ ಶೇ.94.4, ಅಮೃತಾ ಲೊಣಿ, 94.8, ಸೃಷ್ಠಿ ಬಗಲಿ ಶೇ.93.7, ಅರ್ಚನಾ ಹಡಪದ ಶೇ.92.6, ಪ್ರಜ್ವಲ್ ಅಸ್ಕಿ ಶೇ.92.3, ದೇವಿಕಾ ಯಾಳವಾರ ಶೇ.91.2, ನವೀನ ಬತಗೂಣಕಿ ಶೇ.91.2, ಸಮರ್ಥ ಹಿರೇಮಠ ಶೇ.90.8, ಭಾಗ್ಯಲಕ್ಷ್ಮಿ ಬೆನಕೋಟಗಿ ಶೇ.90.8, ಪ್ರದೀಪ ಹಳ್ಳಿ ಶೇ.90.7, ಕೀರ್ತಿ ಮೇತ್ರಿ ಶೇ.90.7, ಎಂ.ಎಸ್. ಸ್ಪೂರ್ತಿ 90.6, ಅಂಬಿಕಾ ಸಂಕನಾಳ ಶೇ.90.1 ಅಂಕಪಡೆದು ಉತ್ತಮ ಸಾಧನೆ ಮಾಡಿದ್ದಾರೆ. ಸಂಸ್ಥೆಯ ಸಂಚಾಲಕ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಎಸ್ಸೆಸ್ಸೆಲ್ಸಿ ಪರೀಕ್ಷೆ-1 ರ ಫಲಿತಾಂಶ ಶುಕ್ರವಾರ ಪ್ರಕಟಗೊಂಡಿದ್ದು ಪಟ್ಟಣದ ಪ್ರಕಾಶ ಚೌಧರಿ ಅವರ ಎಚ್ಟಿಕೆ ಚೌಧರಿ ಕನ್ನಡ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.ಸಮರ್ಥ ನಂದೂರ ಶೇ.98.7, ರೇವತ್ಯಾ ಬಿರಾದಾರ ಶೇ.96.6, ಶೃದ್ಧಾ ಯಾಳಗಿ 96.16, ಸೃಷ್ಠಿ ಪಾರಗೊಂಡ ಶೇ.96.16, ಪೂರ್ಣಿಮಾ ಪಾಟೀಲ ಶೇ.95.8, ಶೋಭಾ ಐನಾಪೂರ ಶೇ.94.7, ಪ್ರಮೋದ ಬಿರಾದಾರ ಶೇ.94.5, ಅಪೂರ್ವ ಪಾರಗೊಂಡ ಶೇ.94.4, ಅಮೃತಾ ಕೊಪ್ಪಳ ಶೇ.93.6, ಯಶೋಧಾ ತಳವಾರ ಶೇ.91.4, ಅಂಬಾಭವಾನಿ ಅಲ್ಲಾಪೂರ ಶೇ.90.2 ಅಂಕಗಳನ್ನು ಪಡೆದು ಉತ್ತಮ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಸಂಚಾಲಕ ಪ್ರಕಾಶ ಚೌಧರಿ, ಆಢಳಿತಾಧಿಖಾರಿ ಮಹಾಂತೇಶ ಚೌಧರಿ, ಮುಖ್ಯಗುರು ವಿಶ್ವನಾಥ ಯಾತನೂರ ಹಾಗೂ ಸಿಬ್ಬಂದಿ ಹರ್ಷ ವ್ಯಕ್ತ ಪಡೆಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ಬುಧವಾರ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಶುಕ್ರವಾರ ನಡೆದ ಆದಿ ಶಂಕರಾಚಾರ್ಯರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅವರು ಅಧ್ವೈತ ಅಂದರೇ ಏಕತ್ವದ ಸಿದ್ದಾಂತವನ್ನು ಪ್ರತಿಪಾದಿಸಿದವರು ಶಂಕರಾಚಾರ್ಯರು, ಮನುಕುಲಕ್ಕೆ ಅವರು ಸಾರಿದ ತತ್ವಾದರ್ಶಗಳು ದಾರಿದೀಪವಾಗಿವೆ ಎಂದು ತಿಳಿಸಿದರು.ಅಂದಕಾರದಲ್ಲಿದ್ದ ಸಮಾಜವನ್ನು ಸನ್ಮಾರ್ಗ ತೊರಿಸುವ ಕಾರ್ಯವನ್ನು ಶಂಕರಾಚಾರ್ಯರು ಮಾಡಿದರು. ಅವರ ಆದರ್ಶ ವಿಚಾರಧಾರೆಗಳನ್ನು ಮುಂದಿನ ಪೀಳಿಗೆಗೆ ತಿಳಿಸುವ ಕಾರ್ಯಗಳಾಗಬೇಕು ಎಂದು ಅವರು ಹೇಳಿದರು. ದೇಶದ ಮೂಲೆ ಮೂಲೆಗಳಲ್ಲಿ ಸಂಚರಿಸಿದ ಶಂಕರಾಚಾರ್ಯರು ತಮ್ಮ ಸಿದ್ಧಾಂತಗಳನ್ನು ಮನುಕುಲ ಉದ್ದಾರಕ್ಕೆ ಪ್ರತಿಪಾದಿಸಿದರು. ಅದ್ವೆöÊತ ವೇದಾಂತವು ಭಾರತೀಯ ಆಧ್ಯಾತ್ಮಿಕತೆ, ಯೋಗ ಮತ್ತು ಧ್ಯಾನದ ಮೇಲೆ ಗಾಢವಾದ ಪ್ರಭಾವ ಬೀರಿವೆ ಎಂದು ಅವರು ತಿಳಿಸಿದರು.ವೇದಾಂತದ ಬಗ್ಗೆ ತಮ್ಮ ಸಿದ್ಧಾಂತದಲ್ಲಿ ತಿಳಿಸಿದ ಶಂಕರಾಚಾರ್ಯರು ಜ್ಞಾನದ ಅರಿವಿನ ಅಂತಿಮ ಗುರಿಯನ್ನು ತಿಳಿಸಿಕೊಡುವುದೇ ವೇದಾಂತ ಎಂದು ಸಾರಿದರು.ಶಂಕರಾಚಾರ್ಯರ ಸಿದ್ದಾಂತದ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಅಭಿವೃದ್ಧಿಯಲ್ಲಿ ಜೈನ್ ಸಮುದಾಯದ ಕೊಡುಗೆ ಮೆಚ್ಚುವಂತದ್ದು ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಹೇಳಿದರು.ಇಲ್ಲಿಯ ಪಾರ್ಶ್ವ ಹೀರಾ ಧಾಮದಲ್ಲಿ ಮಾತೋಶ್ರೀ ಹೀರಾಬೆನ್ ಚೋಗಾಲಾಲ್ ಜೀ ಪಾಲರೇಚಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ೧೦೦೮ ಶ್ರೀ ಪಾರ್ಶ್ವನಾಥ ತೀರ್ಥಂಕರರ ಪಂಚ ಕಲ್ಯಾಣಕ ಮಹೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಜೈನ್ ಸಮುದಾಯ ತನು ಮನದಿಂದ ಅನೇಕ ಜೀವಗಳನ್ನು ಉಳಿಸಿದ ಸಮುದಾಯವಾಗಿದೆ. ಏನೇ ಮಾಡಿದರೂ ಮೊದಲಿಗೆ ಹಿಂದೂ ಸಮುದಾಯದವರಿಗೆ ಆದ್ಯತೆ ನೀಡುತ್ತಾರೆ. ನಿರಂತರವಾಗಿ ಈ ಸಮುದಾಯ ನಮ್ಮನ್ನು ಬೆಂಬಲಿಸಿದ್ದರಿಂದ ವಿಜಯಪುರ ನಗರದ ಅಭಿವೃದ್ಧಿ ಸಾಧ್ಯವಾಗಿದೆ ಎಂದು ತಿಳಿಸಿದರು.ಇದೇ ವೇಳೆ ನಿತ್ಯಸೂರೂಜಿ ಗುರು ಮಹಾರಾಜರ ಆಶೀರ್ವಾದ ಪಡೆದುಕೊಂಡರು. ಜೈನ್ ಸಮಾಜದ ಗಣ್ಯರಾದ ಶಾಂತಿಲಾಲ ಓಸ್ವಾಲ, ಡಾ.ಕಿರಣ್ ಓಸ್ವಾಲ, ಲಾಲಾಜಿ ಶೆಟ್ ವಗತಾವರ ಪಾರಿಕ, ಸಂಜಯ ಪೋರವಾಲ, ಮಹಾವೀರ ಪೋರವಾಲ, ನೀಲೇಶ ಷಹಾ, ಮಹಾನಗರ ಪಾಲಿಕೆ ಸದಸ್ಯರಾದ ಕಿರಣ ಪಾಟೀಲ, ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷ ಶೀತಲ ಓಗಿ, ಸಿದ್ದೇಶ್ವರ ಬ್ಯಾಂಕ್ ನಿರ್ದೇಶಕ…
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಏ೨೮ ರಂದು ಕಾಣೆಯಾಗಿದ್ದ ತಾಲೂಕಿನ ಕುಂಟೋಜಿ ಗ್ರಾಮದ ನಿವಾಸಿ, ಹೆಸ್ಕಾಂ ನೌಕರ ಶಿವಪ್ಪ ಆರೇಶಂಕರ(೪೫) ಎರಡು ದಿನಗಳ ಬಳಿಕ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕೊಲೆ ಮಾಡಿ ನೇಣು ಹಾಕಿದ್ದಾರೆ ಎಂದು ಶಿವಪ್ಪಳ ಪತ್ನಿ ಗೌರಮ್ಮ ಆರೇಶಂಕರ ೪ ಜನರ ವಿರುದ್ಧ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.ಸಂಗಮೇಶ ಅಂಗಡಿ, ಶರಣಪ್ಪ ಬಳೂತಿ, ಶಿವಪ್ಪ ಮುಳವಾಡ ಮತ್ತು ರಾಜು ಕುಂಬಾರ ಎನ್ನುವವರ ಮೇಲೆ ಪ್ರಕರಣ ದಾಖಲಾಗಿದ್ದು ಸರಕಾರಿ ಜಾಗೆಯನ್ನು ಪ್ರಭಲ ವ್ಯಕ್ತಿಗಳು ತಮ್ಮ ವಶಕ್ಕೆ ಪಡೆದುಕೊಳ್ಳುವ ತವಕದಲ್ಲಿದ್ದಾಗ ಮೃತ ಶಿವಪ್ಪ ಆರೇಶಂಕರ ಇತನು ನಮ್ಮೂರ(ಕುಂಟೋಜಿ) ಇತರೆ ಗ್ರಾಮಸ್ಥರೊಂದಿಗೆ ಕೂಡಿ ತನ್ನ ಮುಂದಾಳತ್ವದಲ್ಲಿ ರಾಮ ಮಂದಿರ ಕಟ್ಟೆಯನ್ನು ಕಟ್ಟಿದ್ದರಿಂದ ಅವನ ಮೇಲೆ ಸಿಟ್ಟಾಗಿ ಚಿತ್ರಹಿಂಸೆ ನೀಡಿ ಬಸವ ಇಂಟರ್ನ್ಯಾಶನಲ್ ಶಾಲೆಯ ಬಳಿಯ ಒಂದು ಹೊಲದಲ್ಲಿರುವ ಬೇವಿನ ಗಿಡದಲ್ಲಿ ಹಳದಿ ಬಣ್ಣದ ವಾಯರ್ ಹಗ್ಗದಿಂದ ಉರುಲು ಹಾಕಿ ಕೊಲೆ ಮಾಡಿದ್ದಾರೆ ಎಂದು ಮತ್ತು ಸಾವಿಗೂ ಮೊದಲು ಶಿವಪ್ಪ, ಆರೋಪಿ ಸ್ಥಾನದಲ್ಲಿರುವವರಲ್ಲಿ…
