Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಪ್ರತಿಷ್ಠಿತ ಬಿ.ಎಲ್.ಡಿ.ಇ ಸಂಸ್ಥೆಯ ಎ.ವಿ.ಎಸ್ ಆಯುರ್ವೇದ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರದ ಕಾಯಚಿಕಿತ್ಸೆ ವಿಭಾಗದ ವತಿಯಿಂದ ಮಾರ್ಚ 30 ರಿಂದ ಎಪ್ರಿಲ್ 4ರ ವರೆಗೆ (25 ರಿಂದ 60 ವರ್ಷದವರಿಗೆ) ಲಿವರ್ ಸಮಸ್ಯೆ ಕುರಿತು ಉಚಿತ ತಪಾಸಣೆ ಮತ್ತು ಚಿಕಿತ್ಸೆ ಶಿಬಿರ ಆಯೋಜಿಸಲಾಗಿದೆ.ಸೋಮವಾರದಿಂದ ಶನಿವಾರದವರೆಗೆ ನಡೆಯಲಿರುವ ಈ ಶಿಬಿರದಲ್ಲಿ ಫ್ಯಾಟಿ ಲಿವರ್ (ಲಿವರ್ ಸಮಸ್ಯೆ) ಸಮಸ್ಯೆಯನ್ನು ಎದುರಿಸುತ್ತಿರುವ ಸಾರ್ವಜನಿಕರು ಈ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಬಿ.ಎಲ್.ಡಿ.ಇ ಸಂಸ್ಥೆಯ ಎ.ವಿ.ಎಸ್ ಮಹಾವಿದ್ಯಾಲಯ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಸಂಜಯ ಕಡ್ಲಿಮಟ್ಟಿ ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ಮೊ. ನಂ. 9513397413 ಸಂಪರ್ಕಿಸಬಹುದಾಗಿದೆ.
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಪ್ರೀತಿಯ ಪದಕೋಶಕ್ಕೆ ಹೊಸ ಭಾಷ್ಯಯನ್ನು ಸೇರಿಸಿದ ನಲಮೆಯ ಕವಿ ಶಿವರುದ್ರಪ್ಪನವರು ರಾಷ್ಟ್ರಕವಿಯಾಗಿ ಕನ್ನಡದ ಅಸ್ಮಿತೆಯಾಗಿದ್ದರು ಎಂದು ಪ್ರೊ.ಮಲ್ಲಿಕಾರ್ಜುನ ಮೇತ್ರಿ ಹೇಳಿದರು.ಅವರು ತಾಲ್ಲೂಕಿನ ರಾಂಪೂರ ಆರೂಢಮಠಕರ್ನಾಟಕ ಸಾಹಿತ್ಯ ಅಕಾಡೆಮಿ, ಚಕೋರ ಸಾಹಿತ್ಯ ವೇದಿಕೆ ಮತ್ತು ಸರಕಾರಿ ಪ್ರಥಮ ದರ್ಜೆ ಕಾಲೇಜು ಸಿಂದಗಿ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಸಮನ್ವಯ ಕವಿ ಡಾ.ಜಿ.ಎಸ್.ಶಿವರುದ್ರಪ್ಪ ವಿಶೇಷ ಉಪನ್ಯಾಸ ನೀಡಿದರು.ದೇಸಿನೆಲೆಯಲ್ಲಿ ಕನ್ನಡವನ್ನು ಬೆಳೆಸಿದ ಕೀರ್ತಿ ಜಿಎಸ್.ಎಸ್ ಅವರಿಗೆ ಸಲ್ಲುತ್ತದೆ, ಜಾಗತಿಕ ಸಾಹಿತ್ಯಕ್ಕೆ ಕನ್ನಡವನ್ನು ಪ್ರತಿನಿಧಿಸುವ ಮೇರು ಅವರಾಗಿದ್ದರು ಎಂದರು.ಪ್ರಾಸ್ತಾವಿಕವಾಗಿ ಮಾತನಾಡಿದ ಸಾಹಿತ್ಯ ಅಕಾಡೆಮಿಯ ಚಕೋರ ವೇದಿಕೆಯ ಸಂಚಾಲಕ ಶಂಕರ ಬೈಚಬಾಳ ಮಾತನಾಡಿದರು.ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿದ ಆರೂಢಮಠದ ನಿತ್ಯಾನಂದ ಮಹಾರಾಜರು ಮಾತನಾಡಿದರು.ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಚಾರ್ಯ ಡಾ. ಎಸ್ ಎಸ್. ಹಳಮನಿ ಮಾತನಾಡಿ ‘ ಸಾಹಿತ್ಯಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮುಖ್ಯ ಉದ್ದೇಶ ವಿದ್ಯಾರ್ಥಿಗಳಲ್ಲಿ ಪುಸ್ತಕಪ್ರೀತಿ ಮತ್ತು ಸಾಹಿತ್ಯದ ರುಚಿ ಬೆಳೆಸುವದಾಗಿದೆ, ಇಂತಹ ಕಾರ್ಯಕ್ರಮ ಸಾಹಿತ್ಯ ಅಕಾಡೆಮಿ ಆಯೋಜಿಸಿದ್ದು ಅಭಿನಂದನಾರ್ಹವಾಗಿದೆ ಎಂದರು.ವೇದಿಕೆಯಲ್ಲಿ ಐಕ್ಯೂಎಸಿ ಸಂಚಾಲಕ ಡಾ.ರಾಜಶೇಖರ ಬೆನಕನಳ್ಳಿ,…
ವಾಣಿಜ್ಯ ಬಳಕೆಯ ಅನಿಲ ಸಿಲಿಂಡರ್ಗಳಿಗಾಗಿ ಜಾತಕ ಪಕ್ಷಿಗಳಂತೆ ಕಾಯುತ್ತಿರುವ ಹೋಟೆಲ್ ಮಾಲೀಕರು ಉದಯರಶ್ಮಿ ದಿನಪತ್ರಿಕೆ ವರದಿ: ಸಿದ್ರಾಮ್ ಎಮ್ ಇಟ್ಟಿಜಮಖಂಡಿ: ವಾಣಿಜ್ಯ ಬಳಕೆಯ ಅನಿಲ ಸಿಲಿಂಡರ್ಗಳಿಗಾಗಿ ಹೋಟೆಲ್ ಮಾಲೀಕರು ಜಾತಕ ಪಕ್ಷಿಗಳಂತೆ ಕಾಯುತ್ತಿದ್ದರೂ ಗ್ಯಾಸ್ ಏಜೆನ್ಸಿಗಳು ಮಾತ್ರ ಇನ್ನೂ ಗ್ಯಾಸ್ ಬಂದಿಲ್ಲ. ಏ.1ರಿಂದ ಸಮಸ್ಯೆ ಬಗೆಹರಿಯಲಿದೆ ಎಂದೇ ಹೇಳುತ್ತಿದ್ದಾರೆ.ಹೋಟೆಲ್ಗಳು ಹಾಗೂ ಇನ್ನಿತರ ಸೇವಾ ಸಂಸ್ಥೆಗಳಿಗೆ ದಿನನಿತ್ಯ ಅಗತ್ಯವಿರುವ ಸಿಲಿಂಡರ್ಗಳ ಶೇ.50ರಷ್ಟನ್ನು ನೀಡಲಾಗುತ್ತದೆ ಎಂದು ಸರ್ಕಾರ ಘೋಷಣೆ ಮಾಡಿದೆ. ಆದರೆ ಈ ವ್ಯವಸ್ಥೆ ಏ.1ರಿಂದ ಜಾರಿಗೆ ಬರಲಿದೆ ಎಂದು ಗ್ಯಾಸ್ ಏಜೆನ್ಸಿಗಳು ಹೇಳುತ್ತಿವೆ.ಹೀಗಾಗಿ ಬುಧವಾರˌ ಗುರುವಾರ ಕೂಡ ಅಡುಗೆ ಅನಿಲ ಸಿಲಿಂಡರ್ಗಳ ಅಭಾವ ಮುಂದುವರಿದಿದೆ. ಈ ನಡುವೆ ಕೆಲ ಹೋಟೆಲ್ಗಳು ಬಂದ್ ಮಾಡಿದ್ದರೆ, ಮತ್ತೆ ಕೆಲ ಸಣ್ಣ ಹೋಟೆಲ್ಗಳವರು ಸೌದೆ ಒಲೆ ಮೋರೆ ಹೋಗಿ ಅಡುಗೆ ಮಾಡುತ್ತಿದ್ದಾರೆ.ಜಿಎಸ್ ಟಿಯೇ ದಾಖಲೆ:ಕೇಂದ್ರ ಸರ್ಕಾರ ವಾಣಿಜ್ಯ ಸಿಲಿಂಡರ್ ನೀಡಲು ಕೆಲ ಮಾನದಂಡಗಳನ್ನು ನಿಗದಿಪಡಿಸಿದೆ. ಹೋಟೆಲ್ ಮಾಲೀಕರು ಜಿಎಸ್ಟಿ ದಾಖಲೆಗಳಲ್ಲಿ ಎಷ್ಟು ಸಿಲಿಂಡರ್ ಬಳಕೆಯನ್ನು ನಮೂದಿಸಿದ್ದಾರೋ, ಅದರಲ್ಲಿ…
ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ವಿಶ್ವಾಸ ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ಬಾಗಲಕೋಟೆ ಉಪ ಚುನಾವಣೆಯಲ್ಲಿ ಜನರ ಅಭೂತಪೂರ್ವ ಉತ್ಸಾಹ ನೋಡಿದರೆ ಕಾಂಗ್ರೆಸ್ ಅಭ್ಯರ್ಥಿ 25 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸುವುದು ಸೂರ್ಯ ಚಂದ್ರರಿರುವಷ್ಟೆ ಸತ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ವಿಶ್ವಾಸ ವ್ಯಕ್ತಪಡಿಸಿದರು.ನಗರದ ಕಾಂಗ್ರೆಸ್ ಮುಖಂಡ ಡಾ. ತೌಫಿಕ್ ಪಾರ್ಥನಳ್ಳಿ ಅವರ ನಿವಾಸದಲ್ಲಿ ಸುದ್ದಿಗಾರರ ಜೋತೆ ಅವರು ಮಾತನಾಡಿದರು.ಬಿಜೆಪಿಯ ಹಿಂದುತ್ವ ಕಠಿಣವಾಗಿ ಟೀಕಿಸಿದ ಸಚಿವರು, ಅಜೆಂಡಾವನ್ನು ಬಿಜೆಪಿಯವರು ಮಾತ್ರ ಹಿಂದೂಗಳಾ? ನಾವೆಲ್ಲ ಯಾರು? ನಾವೂ ಹಿಂದೂಗಳೇ. ಆದರೆ ನಮ್ಮದು ಬಸವಣ್ಣನವರ ತತ್ವದ, ಪರಮಹಂಸರ, ಸ್ವಾಮಿ ವಿವೇಕಾನಂದರ ತತ್ವದ ಹಿಂದುತ್ವ. ಕುವೆಂಪು ಅವರು ಹೇಳಿದಂತೆ ಸರ್ವ ಜನಾಂಗದ ಶಾಂತಿಯ ತೋಟವಾಗಿ ಸಂವಿಧಾನದ ಅಡಿಯಲ್ಲಿ ಎಲ್ಲ ಜಾತಿ-ಧರ್ಮದವರು ಅಣ್ಣ-ತಮ್ಮಂದಿರಂತೆ ಬದುಕುವುದು ನಮ್ಮ ಹಿಂದುತ್ವವಾಗಿದೆ. ದಲಿತರು, ಹಿಂದುಳಿದವರು ಹಿಂದೂಗಳಲ್ಲವೇ? ಹಿಂದುತ್ವ ಎಂಬುದು ಯಾರೊಬ್ಬರ ಖಾಸಗಿ ಆಸ್ತಿಯಲ್ಲ, ಅದು ನಮ್ಮೆಲ್ಲರ ಆಸ್ತಿ ಎಂದು ಗುಡುಗಿದರು.ಕೇಂದ್ರ ಸರ್ಕಾರದ ನೀತಿಗಳನ್ನು…
ಅಥಣಿಯಲ್ಲಿ ಭರವಸೆ ಬೆಳಕು ಫೌಂಡೇಶನ್ ಅಧ್ಯಕ್ಷೆ ರೂಪಾ ಕಾಂಬಳೆ ಪತ್ರಿಕಾಗೋಷ್ಠಿ ಉದಯರಶ್ಮಿ ದಿನಪತ್ರಿಕೆ ಅಥಣಿ: ಭರವಸೆ ಬೆಳಕು ಫೌಂಡೇಶನ್ ವತಿಯಿಂದ ದ್ವಿತೀಯ ವರ್ಷದ ವಾರ್ಷಿಕೋತ್ಸವ, ವಿಶ್ವ ಮಹಿಳಾ ದಿನಾಚರಣೆ ಹಾಗೂ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮವನ್ನು ಮಾರ್ಚ್ 31ರಂದು ಬೆಳಗ್ಗೆ 10 ಗಂಟೆಗೆ ಪಟ್ಟಣದ ಗಚ್ಚಿನ ಮಠದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಭರವಸೆ ಬೆಳಕು ಫೌಂಡೇಶನ್ ಅಧ್ಯಕ್ಷೆ ರೂಪಾ ಕಾಂಬಳೆ ಹೇಳಿದರುಅವರು ಪಟ್ಟಣದ ನಿರೀಕ್ಷಣಾ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ. ನಾಗಲಕ್ಷ್ಮಿ ಚೌಧರಿ ಅವರು ನೆರವೇರಿಸಲಿದ್ದಾರೆ. ಶಾಸಕ ಲಕ್ಷ್ಮಣ ಸವದಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ತಾಲೂಕಿನ ಹಾಗೂ ಗ್ರಾಮೀಣ ಭಾಗದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.ನಂತರ ಕರುನಾಡ ಕಾರ್ಮಿಕ ವೇದಿಕೆ ಜಿಲ್ಲಾ ಅಧ್ಯಕ್ಷೆ ರಾಣಿ ಬಡಿಗೇರ್ ಮಾತನಾಡಿ, “ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರು ಮೊದಲ ಬಾರಿಗೆ ಅಥಣಿಗೆ ಆಗಮಿಸುತ್ತಿದ್ದಾರೆ. ಮಹಿಳೆಯರು…
ಲೇಖನ- ಪ್ರಶಾಂತ ಕುಲಕರ್ಣಿಉಪನ್ಯಾಸಕರುಶ್ರೀ ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯ ಸಿಂದಗಿವಿಜಯಪುರ ಜಿಲ್ಲೆಮೊ: 9845442237 ಉದಯರಶ್ಮಿ ದಿನಪತ್ರಿಕೆ ಭಾರತೀಯ ಸಂಸ್ಕೃತಿಯ ಮಹಾನ್ ಗ್ರಂಥವಾದ ರಾಮಾಯಣ ಮಾನವ ಜೀವನಕ್ಕೆ ದಾರಿದೀಪವಾಗಿದೆ. ಅದರ ಕೇಂದ್ರ ವ್ಯಕ್ತಿತ್ವವಾದ ಶ್ರೀರಾಮ ಮಾನವನಾಗಿ ಬದುಕಿ, ಮಾನವೀಯ ಮೌಲ್ಯಗಳಿಗೆ ಅತ್ಯುನ್ನತ ಮಾದರಿಯಾಗಿದ್ದಾನೆ. ರಾಮನ ಜೀವನದಲ್ಲಿ ಕಂಡುಬರುವ ಮೌಲ್ಯಗಳು ಕೇವಲ ಕಾಲಾತೀತವಲ್ಲ, ಇಂದಿನ ಆಧುನಿಕ ಜೀವನಕ್ಕೂ ಅತ್ಯಂತ ಪ್ರಾಸಂಗಿಕ. ಈಗ ಆ ಮೌಲ್ಯಗಳನ್ನು ಪ್ರತಿಯೊಂದಾಗಿ ವಿಸ್ತೃತವಾಗಿ ನೋಡೋಣ. 1. ಸತ್ಯನಿಷ್ಠ– ವ್ಯಕ್ತಿತ್ವದ ಅಡಿಪಾಯರಾಮನ ಜೀವನದಲ್ಲಿ ಸತ್ಯವು ಕೇವಲ ಒಂದು ಗುಣವಲ್ಲ; ಅದು ಅವನ ಜೀವನದ ಮೂಲತತ್ವ. ದಶರಥನ ಮಾತನ್ನು ಉಳಿಸಲು ರಾಜಪದವನ್ನು ತ್ಯಜಿಸಿ ವನವಾಸಕ್ಕೆ ತೆರಳಿದಾಗ, ಅವನು ತನ್ನ ವೈಯಕ್ತಿಕ ಆಸೆಗಳನ್ನು ಬಿಟ್ಟು ಸತ್ಯವನ್ನು ಆರಿಸಿಕೊಂಡನು. ಸತ್ಯನಿಷ್ಠೆ ಎಂದರೆ ಕೇವಲ ಸುಳ್ಳು ಹೇಳದಿರುವುದಲ್ಲ; ಅದು ಮನಸ್ಸು, ಮಾತು ಮತ್ತು ಕೃತ್ಯಗಳ ಏಕತೆಯನ್ನು ಕಾಯ್ದುಕೊಳ್ಳುವುದು.ಇಂದಿನ ಕಾಲದಲ್ಲಿ ಲಾಭಕ್ಕಾಗಿ ಸುಳ್ಳು ಹೇಳುವುದು ಸಾಮಾನ್ಯವಾಗಿ ಬಿಟ್ಟಿದೆ. ಆದರೆ ಸತ್ಯವನ್ನು ಹಿಡಿದಿಟ್ಟುಕೊಳ್ಳುವವರು ದೀರ್ಘಕಾಲದಲ್ಲಿ ವಿಶ್ವಾಸವನ್ನು ಗಳಿಸುತ್ತಾರೆ. ಸತ್ಯನಿಷ್ಠೆಯು ವ್ಯಕ್ತಿತ್ವವನ್ನು ಬಲಪಡಿಸುತ್ತದೆ.…
ಬಿರುಗಾಳಿಗೆ ಧರೆಗುರುಳಿದ ದ್ರಾಕ್ಷಿ ಪಡದ ಸಾಲುಗಳು | ಮಳೆಗೆ ತೊಯ್ದ ಒಣದ್ರಾಕ್ಷಿ | ಸಂಕಷ್ಟದಲ್ಲಿ ರೈತರು ಉದಯರಶ್ಮಿ ದಿನಪತ್ರಿಕೆ ತಿಕೋಟಾ: ದ್ರಾಕ್ಷಿ ಪಡದಲ್ಲಿನ ಹಣ್ಣಿಗೆ ಬಂದ ದ್ರಾಕ್ಷಿ ಕಟಾವು ಮಾಡಬೇಕೆನ್ನುವಷ್ಟರಲ್ಲೆ ಬಾರಿ ಬಿರುಗಾಳಿಗೆ ಸಹಿತ ಮಳೆಗೆ ದ್ರಾಕ್ಷಿ ಸಾಲುಗಳು ಧರೆಗುರುಳಿವೆ. ರ್ಯಾಕನಲ್ಲಿ ಕಟಾವು ಮಾಡಿ ಹಾಕಿದ ದ್ರಾಕ್ಷಿಯೂ ಒಣದ್ರಾಕ್ಷಿ ತಯಾರಾಗಿದ್ದು, ಒಣಹಾಕಲು ಹಾಕಿದ ಒಣದ್ರಾಕ್ಷಿ (ಮನೂಕ) ತೊಯ್ದಿದ್ದು, ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.ತಾಲ್ಲೂಕಿನಲ್ಲಿ ಬುಧವಾರ ಸಂಜೆ ಸುರಿದ ಮಳೆಗೆ ಕೊಟ್ಯಾಳ ರಸ್ತೆಯಲ್ಲಿನ ಸೋಮನಿಂಗ ಬಸಪ್ಪ ಬಾಗಲಕೋಟ ಎಂಬ ರೈತನ ಆರು ಎಕರೆ ದ್ರಾಕ್ಷಿ ಹಣ್ಣಾಗಿದ್ದು, ಈಗಾಗಲೇ ಎರಡು ಎಕರೆ ಕಟಾವು ಮಾಡಿ ಒಣದ್ರಾಕ್ಷಿ ತಯಾರಿಸಲು ರ್ಯಕನಲ್ಲಿ ಹಾಕಿದ್ದಾರೆ. ಇನ್ನೂ ನಾಲ್ಕು ಎಕರೆ ಹಣ್ಣಾದ ದ್ರಾಕ್ಷಿ ಪಡದಲ್ಲಿ ಇದ್ದು, ದ್ರಾಕ್ಷಿ ಸಮೇತ ಸಾಲುಗಳು ನೆಲಕಚ್ಚಿವೆ.ಬಾಬಾನಗರ ಗ್ರಾಮದ ರೈತ ಶಿವಾನಂದ ಚಂದ್ರಪ್ಪ ನಾವಿ ರೈತನು ದ್ರಾಕ್ಷಿ ಕಟಾವು ಮಾಡಿ ಒಣದ್ರಾಕ್ಷಿ ತಯಾರಿಸಿ ಬಯಲು ಪ್ರದೇಶದಲ್ಲಿ ಒಣಹಾಕಿದ್ದು, ಮಳೆಗೆ ಮೂರು ಟನ್ ಗೂ ಅಧಿಕ ಒಣದ್ರಾಕ್ಷಿ ತೊಯ್ದು…
ವಿಜಯಪುರದಲ್ಲಿ ಜನಗಣತಿ ಕುರಿತು ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಆನಂದ ಕೆ. B* ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯಲ್ಲಿ ಕೈಗೊಳ್ಳಲಾಗುತ್ತಿರುವ ಭಾರತ ಜನಗಣತಿ ೨೦೨೭ರ ಕಾರ್ಯಕ್ಕೆ ನಿಯೋಜಿಸುವ ಸಿಬ್ಬಂದಿಗಳಗೆ ಸೂಕ್ತ ತರಬೇತಿ ನೀಡಿ ನಿಯೋಜಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಆನಂದ ಕೆ. ಹೇಳಿದರು.ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಭಾರತ ಜನಗಣತಿ ೨೦೨೭ರ ಜನಗಣತಿ ಕುರಿತು ಪೂರ್ವಭಾವಿ ಸಿದ್ದತೆ ಹಾಗೂ ತರಬೇತುದಾರರಿಗೆ ವಿಡಿಯೋ ಸಂವಾದ ಮೂಲಕ ಮಾತನಾಡಿದ ಅವರು ಗಣತಿ ಕಾರ್ಯಕ್ಕೆ ನಿಯೋಜಿಸಿದ ಸಿಬ್ಬಂದಿಗಳು ಕಾಲ ಕಾಲಕ್ಕೆ ನೀಡುವ ತರಬೇತಿಯ ಪ್ರಯೋಜನೆ ಪಡೆದುಕೊಂಡು ಗಣತಿ ಕಾರ್ಯವನ್ನು ಯಾವುದೇ ಲೋಪ, ದೋಷಗಳಾಗದಂತೆ ಕಾರ್ಯ ನಿರ್ವಹಿಸಬೇಕು. ಮೊದಲನೆ ಹಂತವಾಗಿ ಏಪ್ರೀಲ್ ೧ರಿಂದ ೧೫ರ ವರೆಗೆ ಸ್ವಯಂ ಗಣತಿ ಕಾರ್ಯ ನಡೆಯಲಿದ್ದು, ಏಪ್ರೀಲ್ ೧೬ರಿಂದ ಮೇ ೧೫ರ ವರೆಗೆ ಮನೆ ಪಟ್ಟಿ ಕ್ಷೇತ್ರ ಕಾರ್ಯ ಕೈಗೊಳ್ಳಲಾಗುವುದು. ಫೆಬ್ರವರಿ ೨೦೨೭ರಿಂದ ಜನಗಣತಿ ಕಾರ್ಯ ನಡೆಯಲಿದೆ ಎಂದರು.ಜಿಲ್ಲೆಯ ಎಲ್ಲ ನಗರ ಮತ್ತು ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳಲ್ಲಿ ವಾಸಿಸುತ್ತಿರುವ ಬಾಡಿಗೆಗೆ…
ಎಚ್.ಡಿ.ಕೋಟೆ ತಾಲೂಕಿನ ಕಾಡಂಚಿನ ಭಾಗದಲ್ಲಿ ಸಚಿವ ಸಂಪುಟ ಸಭೆಗೆ ಮನವಿ ಉದಯರಶ್ಮಿ ದಿನಪತ್ರಿಕೆ ಸರಗೂರು: ಅವಳಿ ತಾಲೂಕಿನ ಜನ ಎದುರಿಸುತ್ತಿರುವ ಸಮಸ್ಯೆಗಳ ವಾಸ್ತವಾಂಶ ಗೊತ್ತಾಗಬೇಕಾದರೆ, ರಾಜ್ಯ ಸರ್ಕಾರ, ಕಾಡಂಚಿನ ಭಾಗದಲ್ಲಿ ಸಚಿವ ಸಂಪುಟ ಸಭೆ ನಡೆಸಿ ಚರ್ಚಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಕಲ್ಯಾಣ ಸಂಘದ ರಾಜ್ಯಾಧ್ಯಕ್ಷ ಭೂಮಿಪುತ್ರ ಚಂದನ್ ಗೌಡ ಸಿ ಅವರು ಮನವಿ ಮಾಡಿದರು.ಅರಣ್ಯ ಇಲಾಖೆ ಮತ್ತು ಹಾರ್ಟ್ ಸಂಸ್ಥೆ ಸಹಯೋಗದಲ್ಲಿ ತಾಲೂಕಿನ ಹಳೆಹೆಗ್ಗೂಡಿಲು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಉಚಿತ ಜನ-ಜಾನುವಾರುಗಳ ಆರೋಗ್ಯ ತಪಾಸಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಹುಲಿ ದಾಳಿ ಬಳಿಕ ಹಳೆಹೆಗ್ಗೂಡಿಲು ಗ್ರಾಮದ ಜನರು ಭಯಭೀತರಾಗಿದ್ದಾರೆ. ಆವೇಶದಲ್ಲಿ ಸಣ್ಣ ತಪ್ಪು ಮಾಡಿದ್ದಾರೆ. ಹೀಗಾಗಿ ಅರಣ್ಯ ಇಲಾಖೆ ರೈತರನ್ನು ಕ್ಷಮಿಸಿ, ಅವರ ಮೇಲೆ ದಾಖಲಿಸಿರುವ ಪ್ರಕರಣವನ್ನು ಸರ್ಕಾರ ಹಿಂಪಡೆಯುವಂತೆ ಮಾಡಲು ಕ್ರಮ ಕೈಗೊಳ್ಳಬೇಕು. ಸ್ಥಳೀಯ ಶಾಸಕರು, ಸಚಿವರು, ಸರ್ಕಾರದ ಮೇಲೆ ಒತ್ತಡ ಏರಿ, ಸಚಿವ ಸಂಪುಟ ಸಭೆಯಲ್ಲಿ ಕೇಸ್ ಹಿಂಪಡೆಯುವಂತೆ ಮಾಡಬೇಕು ಎಂದು ಚಂದನ್ ಗೌಡ ಮನವಿ ಮಾಡಿದರು.ಮುಳುಗಡೆ…
ಉದಯರಶ್ಮಿ ದಿನಪತ್ರಿಕೆ ಕಲಕೇರಿ: ಸಮೀಪದ ಅಸ್ಕಿ ಕಾರ್ಯಕ್ಷೇತ್ರದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ವಾತ್ಸಲ್ಯ ಯೋಜನೆಯಡಿ ಮಂಜೂರಾಗಿದ್ದ ಮನೆಯನ್ನು ನಿರ್ಮಿಸಿ ಫಲಾನುಭವಿಯಾದ ಅಸ್ಕಿ ಗ್ರಾಮದ ಪ್ಯಾಟಿ ಈರಮ್ಮನವರಿಗೆ “ವಾತ್ಸಲ್ಯ ಮನೆ” ಹಸ್ತಾಂತರ ಕಾರ್ಯಕ್ರಮ ನಡೆಯಿತು.ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮದ ಉದ್ಘಾಟನೆ ಮಾಡಿದ ಜಿಲ್ಲಾ ನಿರ್ದೇಶಕರಾದ ಮೋಹನ್ ನಾಯ್ಕ್ ಅವರು ಮಾತನಾಡಿ ಡಾ. ವೀರೇಂದ್ರ ಹೆಗ್ಗಡೆ ಮತ್ತು ಮಾತೃಶ್ರೀ ಹೇಮಾವತಿ ಅಮ್ಮನವರ ಆಶಾದಾಯಕ ಕಾರ್ಯಕ್ರಮವಾದ ವಾತ್ಸಲ್ಯ ಮನೆ ರಚನೆ, ಮಾಸಾಶಾನ ಪಲಾನುಭವಿಗಳಿಗೆ, ನಿರ್ಗತಿಕರಿಗೆ, ಸೂರಿಲ್ಲದವರಿಗೆ ಆಶ್ರಯ ಒದಗಿಸುವ ನಿಟ್ಟಿನಲ್ಲಿ ಪೂಜ್ಯರು ವಾತ್ಸಲ್ಯ ಮನೆ ರಚನೆ ಮಾಡುತ್ತಿದ್ದು, ಯೋಜನೆ ಅಡಿಯಲ್ಲಿ ಸುಮಾರು ೧೮೦೦೦ ವಾತ್ಸಲ್ಯ ಪಲಾನುಭವಿಗಳಿಗೆ ಪ್ರತಿ ತಿಂಗಳು ಒಂದು ಸಾವಿರ ಮಾಸಾಶಾನ ಬರುತಿದ್ದು, ಸುಮಾರು ೮೦೦ ವಾತ್ಸಲ್ಯ ಮನೆ ರಚನೆ ಮಾಡಿದ್ದು ಪಲಾನುಭವಿಗಳು ನೆಮ್ಮದಿಯ ಜೀವನ ನಡೆಸಲು ಪೂಜ್ಯರು ದಾರಿಮಾಡಿ ಕೊಟ್ಟಿದ್ದಾರೆ. ಇಷ್ಟೇ ಅಲ್ಲದೇ ಪೂಜ್ಯರು ಕೆರೆ ಹೂಳೆತ್ತುವುದು, ಸುಜ್ಞಾನ ಶಿಷ್ಯ ವೇತನ, ಜ್ಞಾನ ದೀಪ ಶಿಕ್ಷಕರ ನೇಮಕಾತಿ ಸೇರಿದಂತೆ ಹಲವಾರು…
