Subscribe to Updates
Get the latest creative news from FooBar about art, design and business.
Author: editor.udayarashmi@gmail.com
ವಿಜಯಪುರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಚೇರಿಯಲ್ಲಿ ಸಸಿ ನೆಡುವ ಕಾರ್ಯಕ್ರಮ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಸ್ಟೇಶನ್ ರಸ್ತೆಯಲ್ಲಿರುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಚೇರಿ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಮಂಗಳವಾರ ಕಚೇರಿ ಆವರಣದಲ್ಲಿ ವಾರ್ತಾಧಿಕಾರಿ ಅಮರೇಶ ದೊಡಮನಿ ಅವರು ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಪ್ರತಿಯೊಬ್ಬರು ಪರಿಸರ ರಕ್ಷಣೆಗೆ ಮುಂದಾಗಬೇಕು. ಪರಿಸರ ರಕ್ಷಣೆ ಎಲ್ಲರ ಜವಾಬ್ದಾರಿಯಾಗಿದೆ. ಇಂದಿನಿಂದಲೇ ನಾವು ಪರಿಸರವನ್ನು ಕಾಪಾಡಿಕೊಂಡು ಹೋದಲ್ಲಿ ಮುಂದಿನ, ಭವಿಷ್ಯದ ಪೀಳಿಗೆಗೆ ಸ್ವಚ್ಛ ಸುಂದರ ಪರಿಸರ ನೀಡಬಹುದಾಗಿದೆ. ಈ ನಿಟ್ಟಿನಲ್ಲಿ ಮನೆ, ಕಚೇರಿ ಆವರಣಗಳಲ್ಲಿ ಗಿಡಗಳನ್ನು ನೆಡುವ ಮೂಲಕ ಪರಿಸರ ರಕ್ಷಣೆಗೆ ಕೈ ಜೋಡಿಸಬೇಕು ಎಂದು ಅವರು ಹೇಳಿದರು.ಈ ಸಂದರ್ಭದಲ್ಲಿ ವಾರ್ತಾ ಇಲಾಖೆಯ ಸುರೇಶ ಅಂಬಿಗೇರ, ಅಬ್ದುಲರಜಾಕ ಬಾಗೇವಾಡಿ, ಪ್ರಕಾಶ ಘಟಕಾಂಬಳೆ, ನಾಗರಾಜ ಉಪಸ್ಥಿತರಿದ್ದರು.
ಲೇಖನ- ಜಯಶ್ರೀ .ಜೆ. ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕರುಬೆಳಗಾವಿಮೊ: ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ಜೀವನವು ಸರಳ ರೇಖೆಯಲ್ಲ. ಅದು ಏರಿಳಿತಗಳಿಂದ ತುಂಬಿದೆ. ಬದುಕಿನ ಎಲ್ಲ ದಿನಗಳೂ ಒಂದೇ ತರನಾಗಿರುವುದಿಲ್ಲ. ಒಂದು ದಿನ ನಾನು ಎಲ್ಲವನ್ನೂ ಅರ್ಥಮಾಡಿಕೊಂಡಿದ್ದೇನೆ ಎಂದು ಅನಿಸಬಹುದು. ನಂತರ ಒಂದೇ ಕ್ಷಣದಲ್ಲಿ ನನಗೇನೂ ಗೊತ್ತಿಲ್ಲ. ನಾನಿನ್ನೂ ಬಹಳಷ್ಟು ತಿಳಿದುಕೊಳ್ಳುವುದು ಬಾಕಿ ಇದೆ ಎಂದೆನಿಸುವುದು. ಪ್ರತಿದಿನ ಬೇರೆ ಬೇರೆ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಸವಾಲುಗಳನ್ನು ದಾರಿ ನಡುವೆ ಇರುವ ದೊಡ್ಡ ಕಲ್ಲುಗಳೆಂದು ತಿಳಿಯುತ್ತೇವೆ. ಎಷ್ಟೋ ಸಲ ಅವುಗಳನ್ನು ಮಗ್ಗಲು ಮುಳ್ಳುಗಳೆಂದು ಭಾವಿಸಿ ಕಷ್ಟ ಪಡುತ್ತೇವೆ. ಆದರೆ ಅಸಲಿಯಾಗಿ ಅವುಗಳು ನಮ್ಮ ಬದುಕನ್ನು ಬೆಳಗಿಸುವ ದೀಪಗಳು. ಏಕೆಂದರೆ ಅವು ನಮ್ಮಲ್ಲಿ ಹುದುಗಿರುವ ಸೃಜನಶೀಲ ಮೇದಾವಿತನವನ್ನು ಹೊರಗೆಡುವುತ್ತವೆ. ಆದರೆ ನಾವು ಸವಾಲುಗಳ ಕರೆಗೆ ಓಗೊಡುವುದಿಲ್ಲ. ಅದಕ್ಕೆ ಕಾರಣ ಇಲ್ಲದಿಲ್ಲ. ನಮ್ಮಲ್ಲಿ ಬಹಳಷ್ಟು ಜನರು ಬದಲಾವಣೆ ಬಯಸುವುದಿಲ್ಲ. ಅಸಾಮಾನ್ಯರಾಗಲು ಹಿಂಜರಿಯುತ್ತಾರೆ. ಕೇವಲ ಕೆಲವರು ಮಾತ್ರ ಸಾಧಕರಾಗುತ್ತಿದ್ದಾರೆ. ಅವರು ಮಾತ್ರ ಸವಾಲುಗಳ ಬೇಲಿಯನ್ನು ದಾಟಲು ಮನಸ್ಸು ಮಾಡುತ್ತಾರೆ. ಉಳಿದವರೆಲ್ಲ ಸವಾಲೆಂಬ ಬೇಲಿಗಳಿಗೆ…
ಲೇಖನ- ಡಾ. ರಾಜಶೇಖರ ನಾಗೂರ”ನಮ್ಮ ಕಥಾ ಅರಮನೆ”ಬರಹಗಾರರು ಉದಯರಶ್ಮಿ ದಿನಪತ್ರಿಕೆ ಆ ವ್ಯಕ್ತಿ ತನ್ನ ಪುಟ್ಟ ಮಗನನ್ನು ಬೆಳಿಗ್ಗೆ ಶಾಲೆಗೆ ತಂದು ಕಾರಿನ ಬಾಗಿಲು ತೆರೆದ. ಆ ಮಗು ಕಾರಿನಿಂದ ಇಳಿದು ಹತ್ತು ಹೆಜ್ಜೆ ಸಾಗಿ, ಅಪ್ಪನ ಕಡೆ ಭಾವನಾತ್ಮಕವಾಗಿ ನೋಡಿ “ಅಪ್ಪಾ ಶಾಲೆ ಬಿಟ್ಟ ನಂತರ ನನ್ನ ಕರೆದುಕೊಂಡು ಹೋಗಲು ಬರ್ತೀಯ ಅಲ್ವಾ” ಎಂದು ಕೇಳಿತು. ಕಾರು ಹತ್ತಿದ್ದ ಆ ತಂದೆ ಕೆಳಗಿಳಿದು ಬಂದು ಮಗುವನ್ನು ತಬ್ಬಿ “ಖಂಡಿತ ಮಗ, ನಿನ್ನ ಕರೆದುಕೊಂಡು ಹೋಗಲು ಬಂದೇ ಬರುವೆ” ಎಂದು ಮುಗುವಿನ ತಲೆಯ ಮೇಲೆ ಕೈಯಾಡಿಸಿ, ಮುದ್ದಿಸಿ ಹೊರಡುತ್ತಾನೆ.ಆ ವ್ಯಕ್ತಿ ಶಾಲೆಯಿಂದ ಹೊರಟ 20 ನಿಮಿಷಗಳ ನಂತರ ಅತ್ಯಂತ ಪ್ರಭಲ ಭೂಕಂಪ ಸಂಭವಿಸುತ್ತದೆ. ಕೇವಲ ನಾಲ್ಕು ನಿಮಿಷದಲ್ಲಿ ಇಡೀ ನಗರ ಸ್ಮಶಾನವಾಗಿ ಬಿಡುತ್ತದೆ. ಆ ರಸ್ತೆಯ ಮೂಲಕ ಕಾರ್ ಲ್ಲಿ ಹೊರಟ ಆ ವ್ಯಕ್ತಿಗೆ ತನ್ನ ಮಗುವಿನ ಗತಿ ಏನು ಎಂದು ಆತಂಕವಾಗಿ ತಕ್ಷಣವೇ ಶಾಲೆಯ ಕಡೆ ಕಾರನ್ನು ತಿರುಗಿಸಿಕೊಂಡು ಅವಸರದಲ್ಲಿ…
ಯಲಗೂರು ಗ್ರಾಮದಲ್ಲಿ ಮಹಿಳಾ ವಿವಿ ಹಮ್ಮಿಕೊಂಡಿದ್ದ ಮೂರು ದಿನಗಳ ನಾಗರಿಕ ಪೌರತ್ವ ತರಬೇತಿ ಶಿಬಿರ ಉದ್ಘಾಟನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ದೇಶದ ನಿಜವಾದ ಪ್ರಗತಿ ಗ್ರಾಮಗಳ ಪ್ರಗತಿಯಲ್ಲಿ ಅಡಕವಾಗಿದ್ದು, ಎಲ್ಲರ ದೃಷ್ಟಿಯೂ ಗ್ರಾಮಗಳ ಅಭಿವೃದ್ಧಿಯತ್ತ ಹರಿಯಬೇಕು ಎಂದು ಮಹಿಳಾ ವಿವಿಯ ಕುಲಸಚಿವ ಶಂಕರಗೌಡ ಸೋಮನಾಳ ಹೇಳಿದರು.ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಶಿಕ್ಷಣ ಅಧ್ಯಯನ ವಿಭಾಗವು ನಿಡಗುಂದಿ ತಾಲೂಕು ಯಲಗೂರು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಮೂರು ದಿನಗಳ ನಾಗರಿಕ ಪೌರತ್ವ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಶಿಕ್ಷಕ ತರಬೇತಿಯಲ್ಲಿ ಪೌರತ್ವ ಮೌಲ್ಯಗಳನ್ನು ಪರಿಚಯಿಸುವ ಈ ತರಬೇತಿ ಶಿಬಿರಗಳು ಅತ್ಯಂತ ಅವಶ್ಯವಾಗಿವೆ. ವಿಶೇಷವಾಗಿ ಇವು ಗ್ರಾಮೀಣ ಭಾಗದಲ್ಲಿ ಆಯೋಜನೆಯಾಗಬೇಕು. ವಿದ್ಯಾರ್ಥಿ ಮತ್ತು ಶಿಕ್ಷಕರಿಗೆ ನೇರ ಅನುಭವ ಒದಗಿಸಲು ಶಿಬಿರಗಳು ಉತ್ತಮ ವೇದಿಕೆಯಾಗುತ್ತವೆ ಎಂದರು.ಇದೇ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಶಾಂಮ ಪಾತ್ರದ ಮಾತನಾಡಿ, ಈ ತರಬೇತಿ ಶಿಬಿರವು ಗ್ರಾಮಸ್ಥರಿಗೆ ಬಹಳ ಅನುಕೂಲ ನೀಡುತ್ತದೆ. ಹಳ್ಳಿಗಳಲ್ಲಿ ವಂಚನೆಯ ಹಾಗೂ ಮೂಢನಂಬಿಕೆಗಳ ಸಮಸ್ಯೆ ನಿವಾರಣೆಗೆ ಶಿಕ್ಷಣವೇ ಪರಿಣಾಮಕಾರಿಯಾದ…
ರಚನೆ- ಜಯಂತಿ ಎಸ್ ಭಟ್ಟಶಿರಾಲಿ”ನಮ್ಮ ಕಥಾ ಅರಮನೆ”ಬರಹಗಾರರು ಉದಯರಶ್ಮಿ ದಿನಪತ್ರಿಕೆ ತನ್ನೆಲ್ಲ ಕನಸು ಕಾಣುತ ಮಕ್ಕಳಲಿತನ್ನವರಿಗಾಗಿ ಜೀವ ಸವೆದವನುನೋವನೆಲ್ಲ ಮರೆಮಾಚಿ ತನ್ನಲಿಖುಷಿ ಹಂಚುತ ನಗು ಚೆಲ್ಲಿದವನು ಗಂಭೀರ ಮುಖ ಮುದ್ರೆಯಲಿಜೀವನದ ಪಾಠವ ಕಲಿಸಿದವನುತನ್ನ ಬಯಕೆಗಳ ಸಾಯಿಸುತಲಿತನ್ನವರ ಬಯಕೆ ತೀರಿಸಿದವನು ತಾನು ಕಾಣದ ಸುಂದರ ಲೋಕದಿನಮಗಾಗಿ ಭವ್ಯ ಚಿತ್ತಾರ ಗೀಚಿದನುಸೋತಿಹೆವು ನಾವು ಶಬ್ದಕೋಶದಿಪದವ ತರಲು ಅಪ್ಪನ ವರ್ಣಿಸಲು
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಉಜ್ವಲ್ಕುಮಾರ ಘೋಷ್ ಸೂಚನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯಲ್ಲಿ ಮುಂಗಾರಿನಲ್ಲಿ ಬಿತ್ತನೆ ಕಾರ್ಯ ಪ್ರಗತಿಯಲ್ಲಿದ್ದು, ಜುಲೈ ೧೫ರವರೆಗೆ ತೊಗರಿ ಬಿತ್ತನೆಗೆ ಕಾಲಾವಕಾಶವಿದೆ. ಒಂದು ವೇಳೆ ಮಳೆ ಬಾರದೆ ಇದ್ದ ಸಂದರ್ಭದಲ್ಲಿ ಪರ್ಯಾಯ ಬೆಳೆಗಳನ್ನು ಬೆಳೆಯುವ ಕುರಿತು ರೈತರಲ್ಲಿ ಸೂಕ್ತ ಜಾಗೃತಿ ತಿಳುವಳಿಕೆ ಮೂಡಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸುವರ್ಣ ಆರೋಗ್ಯ ಟ್ರಸ್ಟ್ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಉಜ್ವಲ್ ಕುಮಾರ ಘೋಷ್ ಅವರು ಸೂಚಿಸಿದರು.ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಜನವರಿಯಿಂದ ಜೂನ್ವರೆಗೆ ಜಿಲ್ಲೆಯಲ್ಲಿ ಶೇ.೮೨% ರಷ್ಟು ಮಳೆಯಾಗಿದೆ. ಈ ವರ್ಷ ಏಪ್ರಿಲ್-ಮೇನಲ್ಲಿ ಶೇ.೨೮೩ ರಷ್ಟು ಹೆಚ್ಚುವರಿ ಮಳೆಯಾಗಿದೆ. ಜಿಲ್ಲೆಯಲ್ಲಿ ಬಿತ್ತನೆ ಕಾರ್ಯ ನಡೆದಿದ್ದು, ಜುಲೈ ೧೫ರವರೆಗೆ ತೊಗರಿ ಬಿತ್ತನೆಗೆ ಅವಕಾಶವಿದೆ. ಈ ಸಲ ಶೇಕಡ ನೂರರಷ್ಟು ಇಳುವರಿ ಅಂದಾಜಿಸಲಾಗಿದೆ. ಎಲ್ಲ ಅಗತ್ಯ ಬಿತ್ತನೆ ಬೀಜ, ರಸಗೊಬ್ಬರಗಳನ್ನು ಸಮರ್ಪಕವಾಗಿ ದಾಸ್ತಾನಿಟ್ಟುಕೊಂಡು ರೈತರಿಗೆ ಯಾವುದೇ…
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ವಿಜಯಪುರದ ಅಮ್ಮ ಫೌಂಡೇಶನ್ ವತಿಯಿಂದ ಪ್ರತೀ ವರ್ಷ ಕೊಡಮಾಡುವ ರಾಜ್ಯ ಮಟ್ಟದ ಬಸವ ಚೇತನ ಪ್ರಶಸ್ತಿಗೆ ತಾಲೂಕಿನ ಕೇಸಾಪುರದ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರು ಪಿ.ಸಿ.ಹಡಗಿನಾಳ ಆಯ್ಕೆಯಾಗಿದ್ದಾರೆ.ಜು.೬ ರಂದು ವಿಜಯಪುರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ನಡೆಯಲಿರುವ ರಾಜ್ಯಮಟ್ಟದ ಬಸವ ಸಂಸ್ಕೃತಿ ಉತ್ಸವದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವದು ಎಂದು ಪೌಂಡೇಶನ ಸಂಚಾಲಕ ಕಬೂಲ ಕೊಕಟನೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ವಿಜಯಪುರ ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ 50 ರಲ್ಲಿನ ತಾಲೂಕಿನ ಮುಳವಾಡ ಬಳಿಯ ಟೋಲ್ ಪ್ಲಾಜಾದಲ್ಲಿ ಟೋಲ್ ಶುಲ್ಕವನ್ನು ಸುತ್ತಮುತ್ತಲಿನ 20ಕಿಮಿ ವ್ಯಾಪ್ತಿಯ ಗ್ರಾಮಗಳ ವಾಹನಗಳಿಗೆ ಶುಲ್ಕ ವಿಧಿಸಬಾರದು ಎಂದು ಟೋಲ್ ಪ್ಲಾಜಾ ಎದುರಿಗೆ ಗ್ರಾಮಸ್ಥರು, ಚಾಲಕರು ಹಾಗೂ ರೈತರಿಂದ ಕುಳಿತು ಪ್ರತಿಭಟನೆ ಮಾಡಿದರು.ಟೋಲ್ ಪ್ಲಾಜಾದಲ್ಲಿ ಕಾನೂನು ಬಾಹೀರವಾಗಿ ಶುಲ್ಕ ವಸೂಲಿ ಮಾಡಲಾಗುತ್ತಿದೆ ಎಂದು ಪ್ರತಿಭಟನಾಕರರು ಆರೋಪಿಸಿದರು. ಯಾರಿಗೆಲ್ಲಾ ಶುಲ್ಕ ವಿಧಿಸಲಾಗುತ್ತಿದೆ ಎಂಬ ದಾಖಲಾತಿಗಾಗಿ ಪ್ರತಿಭಟನಾಕಾರರು ಒತ್ತಾಯಿಸಿದರು. ಟೋಲ್ ವ್ಯಾಪ್ತಿಯ ಗ್ರಾಮಗಳ ಜನರಿಗೆ ಶುಲ್ಕ ವಿಧಿಸಬಾರದು ಎಂದು ಆಗ್ರಹ ಮಾಡಿದರು .ಸ್ಥಳಕ್ಕೆ ಕೊಲ್ಹಾರ ಠಾಣೆಯ ಪೊಲೀಸರು ಆಗಮಿಸಿ ಪ್ರತಿಭಟನಾಕಾರೊಂದಿಗೆ ಮಾತುಕತೆ ನಡೆಸಿದರು. ಪೊಲೀಸರ ಮನವಿ ಮೇರೆಗೆ ಪ್ರತಿಭಟನೆ ಪ್ರತಿಭಟಕಾರರು ಹಿಂಪಡೆದರು.ಪ್ರತಿಭಟನೆ ಕಾರಣ ಎನ್ಎಚ್ 50 ರಲ್ಲಿ ಸಂಚಾರಕ್ಕೆ ವ್ಯತ್ಯಯವಾಗಿ ವಾಹನಗಳು ಸಾಲುಗಟ್ಟಿ ನಿಂತು ವಿವಿಧ ವಾಹನಗಳು, ಪ್ರಯಾಣಿಕರಿಗೆ ತೊಂದರೆ ಉಂಟಾಯಿತು. “ಕೊಲ್ಹಾರ ತಾಲೂಕು ಹಾಗೂ ಜಿಲ್ಲೆಯ ಜನರು ರಾಜ್ಯ ಹಾಗೂ ಕೇಂದ್ರ ಸರಕಾರದ ವಿವಿಧ ಯೋಜನೆಗಳಿಗೆ ಫಲವತ್ತಾದ ಭೂಮಿಯನ್ನು…
ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ವಿಜಯಪುರದ ಅಮ್ಮ ಫೌಂಡೇಶನ್ ಕೊಡಮಾಡುವ 2025ನೇ ಸಾಲಿನ ರಾಜ್ಯ ಮಟ್ಟದ “ಬಸವ ಚೇತನ” ಪ್ರಶಸ್ತಿಗೆ ಸಾಹಿತಿ, ಯುವ ಮುಖಂಡ, ನ್ಯಾಯವಾದಿ ಮಹ್ಮದಗೌಸ ಹವಾಲ್ದಾರ ಅವರು ಆಯ್ಕೆಯಾಗಿದ್ದಾರೆ.ಮಹಮ್ಮದಗೌಸ್ ಹವಾಲ್ದಾರ್ ಅವರ ಸಮಾಜ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಜುಲೈ 6 ರಂದು ವಿಜಯಪುರ ನಗರದ ಕಂದಗಲ್ ಹನುಮಂತರಾಯ ರಂಗ ಮಂದಿರದಲ್ಲಿ ನಡೆಯುವ ಭವ್ಯ ಸಮಾರಂಭದಲ್ಲಿ ಹವಾಲ್ದಾರ್ ಅವರಿಗೆ “ಬಸವ ಚೇತನ” ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಆಯ್ಕೆ ಸಮಿತಿ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ಚಡಚಣ: ವಿಜಯಪುರ ಲಿಂಗರಾಜ ವಿವಿಧೋದ್ದೇಶ ಸಂಸ್ಥೆ, ಶ್ರೀಮತಿ ಕಮಲಾಬಾಯಿ ಬಸನಗೌಡ ಪಾಟೀಲ ಚಾರಿಟೇಬಲ್ ಟ್ರಸ್ಟ್, ಶಿರಸಂಗಿ ಲಿಂಗರಾಜ ಸಹಕಾರಿ ಪತ್ತಿನ ಸಂಘ ಹಾಗೂ ವಿಜಯಪುರ ಜಿಲ್ಲಾ ಲಿಂಗಾಯತ ಕುಡವಕ್ಕಲಿಗ ನೌಕರರ ಕ್ಷೇಮಭಿವೃದ್ಧಿ ವೇದಿಕೆ ಇವರ ಸಹಯೋಗದಲ್ಲಿ ಪ್ರಸಕ್ತ ಸಾಲಿನಲ್ಲಿ ಎಸ್.ಎಸ್. ಎಲ್.ಸಿ ಹಾಗೂ ಪಿ.ಯು.ಸಿ ಉತ್ತೀರ್ಣರಾದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ವಿಜಯಪುರ, ಬಾಗಲಕೋಟೆ ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಶೇ.85 ಕಿಂತ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳು ಜುಲೈ 10 ರ ಒಳಗಾಗಿ ವಿಜಯಪುರ ನಗರದ ಅಥಣಿ ರಸ್ತೆಯ ಜಿ ಕೆ ಪಾಟೀಲ ಸಭಾಭವನ ಹಾಗೂ ಆಶ್ರಮ ರಸ್ತೆಯ ಸಾಯಿ ಗಿಫ್ಟ್ ಸೆಂಟರ್ ನಲ್ಲಿ ಅರ್ಜಿ ಸಲ್ಲಿಸಬಹುದು ಹಾಗೂ ಹೆಚ್ಚಿನ ಮಾಹಿತಿಗಾಗಿ ಮೊ: 7892071467 ಹಾಗೂ 8147065366 ಗೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
