Author: editor.udayarashmi@gmail.com

ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ‘ರಾಷ್ಟ್ರೀಯ ಸಂಖ್ಯಾಶಾಸ್ತ್ರ ದಿನಾಚರಣೆ’ ಕಾರ್ಯಕ್ರಮ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಮ್ಮ ಜೀವನದ ದಿನಿತ್ಯದಲ್ಲಿ ಸಂಖ್ಯಾಶಾಸ್ತ್ರ ಪ್ರಮುಖ ಪಾತ್ರವಹಿಸುತ್ತಿದ್ದು ಮಾಹಿತಿ ಪ್ರತಿಯೊಂದು ಹಂತದಲ್ಲೂ ಸೃಷ್ಟಿಯಾಗುತ್ತದೆ ಆರೋಗ್ಯ ಪರೀಕ್ಷೆಯಿಂದ ಮಳೆ ಅಂಕಿ ಅಂಶಗಳವರೆಗೆ, ಕಂಪನಿಗಳ ಮಾರಾಟದವರೆಗೆ, ಮಣ್ಣಿನ ಪರೀಕ್ಷೆಯವರೆಗೆ. ಈ ಅಂಕಿ ಅಂಶಗಳಿಗೆ ಅರ್ಥ ಕೊಡುವುದು ಸಂಖ್ಯಾಶಾಸ್ತ್ರ ಎಂದು ಧಾರವಾಡದ ಕೃಷಿ ಕಾಲೇಜಿನ ಕೃಷಿ ಸಂಖ್ಯಾಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಮತ್ತು ಮುಖ್ಯಸ್ಥೆ ಡಾ. ಆಶಾಲತಾ ಕೆ.ವಿ ಹೇಳಿದರು.ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎಸ್. ಬಿ. ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ, ಸಂಖ್ಯಾಶಾಸ್ತ್ರ ವಿಭಾಗದ ಸಹಯೋಗದಲ್ಲಿ ಸೋಮವಾರದಂದು ಜರುಗಿದ ‘ರಾಷ್ಟ್ರೀಯ ಸಂಖ್ಯಾಶಾಸ್ತ್ರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೃಷಿ, ಶೈಕ್ಷಣಿಕ ಮತ್ತು ಸಂಶೋಧನೆಯಲ್ಲಿ ಅಂಕಿ ಅಂಶಗಳ ಪಾತ್ರವನ್ನು ಒತ್ತಿ ಹೇಳಿದರು. ಸಂಖ್ಯಾಶಾಸ್ತ್ರವೆಂಬ ಸ್ನೇಹಿತನ ಸಹಕಾರವಿಲ್ಲದೆ ಯಾವುದೇ ವಿಜ್ಞಾನವೂ ಸಂಪೂರ್ಣವಾಗುವುದಿಲ್ಲ ಅಲ್ಲದೆ ಎಲ್ಲಾ ವಿಜ್ಞಾನಗಳಿಗೆ ಸಂಖ್ಯಾಶಾಸ್ತ್ರ ಒಳ್ಳೆಯ ಗೆಳೆಯ”. ವೈದ್ಯಕೀಯ ಕ್ಷೇತ್ರದಲ್ಲಿ, ಬಾಡಿ ಮಾಸ್…

Read More

ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ಪ್ರತಿ ವರ್ಷವು ಗಜಾನನ ಉತ್ಸವಕ್ಕಾಗಿ ಗಜಾನನ ಮಹಾಮಂಡಳದಲ್ಲಿ ನೋಂದಾಯಿತ ಎಲ್ಲ ಗಜಾನನ ಮಂಡಳಿಗಳಿಗೆ 5ಸಾವಿರ ರೂ. ಪ್ರೋತ್ಸಾಹ ದೇಣಿಗೆ ನೀಡಲಿದ್ದೇವೆ ಎಂದು ಶಾಸಕ ಜಗದೀಶ್ ಗುಡಗುಂಟಿ ಹೇಳಿದರು.ನಗರದ ಸಾಕ್ಷಾತ್ಕಾರ ನಿಲಯದ ಶಾಸಕರ ಗೃಹ ಕಛೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಮಹಾಮಂಡಳದಲ್ಲಿ ನೋಂದಾಯಿಸಿ ಪ್ರತಿಷ್ಠಾಪಿಸಿದ 5, 7, 9 ದಿನಗಳ ಗಜಾನನ ಮಂಡಳಿಗಳಿಗೆ ಪ್ರೋತ್ಸಾಹ ಧನ ನೀಡಲಾಗುವದು ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಪ್ರತಿಷ್ಠಾಪಿಸಿದ ಎಲ್ಲ ಗಣೇಶ ಮಂಡಳಗಳಿಗೆ 25 ಕೆಜಿ ಸಕ್ಕರೆ ನೀಡಲಿದ್ದೇವೆ ಎಂದರು.ಎಲ್ಲರೂ ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಮೂಲಕ ಪರಿಸರ ಕಾಳಜಿ ಮೆರೆಯಬೇಕು ಎಂದರು.ಗಣೇಶನ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ದಿನದಂದು ಮಾನವನ ಶರೀರದ ಮೇಲೆ ದುಷ್ಪರಿಣಾಮ ಉಂಟುಮಾಡುವ ಶಬ್ದ ಮಾಲಿನ್ಯ ಉಂಟಾಗುವ ಡಿಜೆ ಹಚ್ಚಬಾರದು ಎಂದು ವಿನಂತಿಸಿದರು.ಪ್ರತಿ ಮಂಡಳಿಯವರು ಪ್ರತಿ ದಿನ ವಿವಿಧ ದೇಶೀಯ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಂಡು ಶೃದ್ಧಾ ಭಕ್ತಿಯಿಂದ ಗಣೇಶ ಹಬ್ಬ ಆಚರಿಸೋನಾ ಎಂದರು.ಮಹಾಮಂಡಳ ಅಧ್ಯಕ್ಷ ಸಚೀನ ಪಟ್ಟಣಶೆಟ್ಟಿ…

Read More

ಆಮ್ ಆದ್ಮಿ ಪಾರ್ಟಿ ವಿಜಯಪುರ ಜಿಲ್ಲಾಧ್ಯಕ್ಷ ಭೋಗೇಶ್ ಸೋಲಾಪುರ್ ಖಂಡನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕನ್ನಡ ಸಾಹಿತ್ಯ ಲೋಕದ ಹೆಮ್ಮೆಯ ಲೇಖಕಿ, ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರಿಗೆ ಭಾರತೀಯ ಜನತಾ ಪಕ್ಷದ (ಬಿಜೆಪಿ) ಕೆಲವು ನಾಯಕರಿಂದ ನಡೆಯುತ್ತಿರುವ ಅವಮಾನಕಾರಿ ವರ್ತನೆಯನ್ನು ತೀವ್ರವಾಗಿ ಖಂಡಿಸುತ್ತದೆ ಎಂದು ಆಮ್ ಆದ್ಮಿ ಪಾರ್ಟಿ ವಿಜಯಪುರ ಜಿಲ್ಲಾಧ್ಯಕ್ಷ ಭೋಗೇಶ್ ಸೋಲಾಪುರ್ ತಿಳಿಸಿದರು.ಪತ್ರಿಕಾ ಪ್ರಕಟಣೆಯಲ್ಲಿ ಅವರು “ಬಾನು ಮುಷ್ತಾಕ್ ಅವರು ತಮ್ಮ ಕೃತಿ “ಹಾರ್ಟ್ ಲ್ಯಾಂಪ್” ಮೂಲಕ ಕನ್ನಡ ಸಾಹಿತ್ಯಕ್ಕೆ ಜಾಗತಿಕ ಮನ್ನಣೆ ತಂದುಕೊಟ್ಟವರು. ಆದರೆ, ಬಿಜೆಪಿಯ ಕೆಲವು ನಾಯಕರು ಮತ್ತು ಅವರ ಸಂಘಟನೆಯ ಕಾರ್ಯಕರ್ತರು ಲೇಖಕಿಯ ಸಾಮಾಜಿಕ ಕಾರ್ಯಗಳು ಮತ್ತು ಅವರ ವೈಯಕ್ತಿಕ ನಿಲುವುಗಳನ್ನು ಗುರಿಯಾಗಿಟ್ಟುಕೊಂಡು ಅವಮಾನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.”ಬಾನು ಮುಷ್ತಾಕ್ ಅವರು ಕರ್ನಾಟಕದಲ್ಲಿ ಸಾಮಾಜಿಕ ನ್ಯಾಯ, ಜಾತ್ಯತೀತತೆ, ಮತ್ತು ಸೌಹಾರ್ದತೆಗಾಗಿ ದಶಕಗಳಿಂದ ಶ್ರಮಿಸುತ್ತಿರುವ ಕಾರ್ಯಕರ್ತೆಯಾಗಿದ್ದಾರೆ. ಅವರ ಸಾಹಿತ್ಯವು ಶೋಷಿತರ, ತಳ ಸಮುದಾಯಗಳ, ವಿಶೇಷವಾಗಿ ಮಹಿಳೆಯರ ಧ್ವನಿಯನ್ನು ಎತ್ತಿಹಿಡಿಯುತ್ತದೆ.…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಪ್ರತಿಷ್ಠಿತ ಬಿ.ಎಲ್.ಡಿ.‌ ಸಂಸ್ಥೆಯ ಶ್ರೀ ಬಿ. ಎಂ. ಪಾಟೀಲ್ ಪಬ್ಲಿಕ್ ಶಾಲೆಯ ವತಿಯಿಂದ ರಾಷ್ಟ್ರೀಯ ಕ್ರೀಡಾ ದಿನದ ಅಂಗವಾಗಿ ಆಗಷ್ಟ 29 ರಂದು ಶುಕ್ರವಾರ ಮಧುಮೇಹ ಜಾಗೃತಿ ಜಾಥಾ ನಡೆಯಲಿದೆ.ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಸಹಯೋಗದಲ್ಲಿ ಈ ಜಾಗೃತಿ ಜಾಥಾ ನಡೆಯಲಿದೆ. ಸಕ್ಕರೆ ಕಾಯಿಲೆ ಹಲವು ರೋಗಗಳ ತವರಾಗಿದ್ದು, ಚಿಕ್ಕ ವಯಸ್ಸಿನಲ್ಲಿ ಅನೇಕ ಜನ ಹೃದಯಾಘಾತದಿಂದ ಸಾವನ್ನಪ್ಪುತ್ತಿದ್ದಾರೆ. ಅವರೆಲ್ಲರಲ್ಲಿ ಆರೋಗ್ಯದ ಜಾಗೃತಿಯನ್ನು ಉಂಟು ಮಾಡಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ.ಅಂದು ಬೆಳಗ್ಗೆ 9ಕ್ಕೆ ಬಿ.ಎಲ್.ಡಿ.ಇ ಆಸ್ಪತ್ರೆಯಿಂದ ಸಿದ್ದೇಶ್ವರ ಗುಡಿಯ ಮಾರ್ಗವಾಗಿ ಗಾಂಧಿ ಚೌಕಿನವರೆಗೂ ಈ‌ ಜಾಥಾ ನಡೆಯಲಿದೆ ಎಂದು ಶಾಲೆಯ ಪ್ರಾಚಾರ್ಯ ಶೈಜೂ ಕೆ.‌ ನಾಯರ ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

Read More

ಚಡಚಣ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಸವರಾಜ ಮಜಗಿ ಅಭಿಮತ ಉದಯರಶ್ಮಿ ದಿನಪತ್ರಿಕೆ ಚಡಚಣ: ಸಹಕಾರ ತಳಹದಿಯ ಮೇಲೆ, ಶಿಕ್ಷಕರ ಕಲ್ಯಾಣಕ್ಕೋಸ್ಕರ ಕಾರ್ಯ ನಿರ್ವಹಿಸುತ್ತಿರುವ ಈ ಪ್ರಾಥಮಿಕ ಶಾಲಾ ಶಿಕ್ಷಕರ ಸೊಸೈಟಿ ಅತ್ಯಧಿಕ ಬಂಡವಾಳ ಹೊಂದಿ, ರಾಜ್ಯಕ್ಕೆ ಮಾದರಿ ಯಾಗಿದೆ ಎಂದು ಚಡಚಣ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಸವರಾಜ ಮಜಗಿ ಹೇಳಿದರು.ಪಟ್ಟಣದಲ್ಲಿ ಭಾನುವಾರ ಆಯೋಜಿಸಲಾದ ಚಡಚಣ ಭಾಗದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಹಕಾರ ಪತ್ತಿನ 56ನೇ ವಾರ್ಷಿಕ ಸರ್ವ ಸಾಧಾರಣ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.ಚಡಚಣ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಹಕಾರ ಪತ್ತಿನ ಶಿಕ್ಷಕರ ಸೊಸೈಟಿ ಅಧ್ಯಕ್ಷ ಎಸ್.ಎಸ್. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, 1969ರಲ್ಲಿ ದಿ.ಭೋಜಪ್ಪ ಸಿದ್ರಾಮಪ್ಪ ಹೊರ್ತಿ ನೇತೃತ್ವದಲ್ಲಿ ಕೇವಲ 15 ರಿಂದ 20 ಶಿಕ್ಷಕರಿಂದ ಕೇವಲ 15 ರೂ. ಬಂಡವಾಳದೊಂದಿಗೆ ಪ್ರಾರಂಭವಾದ ಈ ಸಹಕಾರ ಸಂಘ ಇಂದು 27 ಕೋಟಿ ರೂ. ಬೃಹತ್ ಬಂಡವಾಳ ಹೊಂದಿದೆ. ಈಗಾಗಲೇ ಸ್ವಂತ ಕಟ್ಟಡ ಹೊಂದಿರುವ…

Read More

ಸಂಗ್ರಹ- ಸುಧಾ ಪಾಟೀಲವಿಶ್ವಸ್ಥರುಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರಪುಣೆ ಉದಯರಶ್ಮಿ ದಿನಪತ್ರಿಕೆ 32 ನೆಯ ದಿನದ ಶರಣ ಮಾಲಿಕೆಯಲ್ಲಿ ಶರಣೆ ಹನುಮಾಕ್ಷಿ ಗೋಗಿ ಅವರು ಶರಣ ಏಕಾಂತದ ರಾಮಯ್ಯ ಅವರ ಬಗೆಗೆ ಹಲವಾರು ಶಾಸನಗಳನ್ನು ಉಲ್ಲೇಖಿ ಸುವುದರ ಮೂಲಕ ತಮ್ಮ ಅನುಭಾವವನ್ನು ಹಂಚಿಕೊಂಡರು.ತಮ್ಮ ಬರವಣಿಗೆಗೆ, ಸಂಶೋಧನೆಗೆ ಬೆನ್ನ ಹಿಂದಿನ ಬೆಳಕಾಗಿರುವ ಎಂ.ಎಂ. ಕಲ್ಬುರ್ಗಿ ಅವರನ್ನು ನೆನಪಿಸುತ್ತಶಾಸನ, ವಚನ, ಶರಣ ಸಾಹಿತ್ಯ ಅವರ ಪ್ರೀತಿಯ ವಿಷಯವಾಗಿತ್ತೆನ್ನುವುದು, ತಾವು ಅವರಿಂದ ಕಲಿತದ್ದನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ ಎಂದು ನಯ-ವಿನಯದಿಂದ ನುಡಿದರು.ಉಗ್ರ ಮಾಹೇಶ್ವರ ಪಂಥದ ಏಕಾಂತದ ರಾಮಯ್ಯನವರು ಶೈವ ಬ್ರಾಹ್ಮಣರು. ಇವರ ಮೂಲ ಊರು ಅಲಂದೆ ಸಾಸಿರದಲ್ಲಿಯ ಅಲಂದೆ (ಆಳಂದ). ಅಲ್ಲಿ ಸೋಮನಾಥನ ದೇವಾಲಯವಿದ್ದು, ರಾಮಯ್ಯನವರ ತಂದೆ ಪುರುಷೋತ್ತಮ ಭಟ್ಟರು ಮತ್ತು ತಾಯಿ ಸೀತಾದೇವಿ ಸೋಮನಾಥನ ಆರಾಧಕರಾಗಿದ್ದರು. ಭಕ್ತಿಯಿಂದ ಶಿವನನ್ನು ಏಕಾಗ್ರ ಚಿತ್ತದಿಂದ ಏಕಾಂತದಲ್ಲಿ ಆರಾಧಿಸಿದ್ದಕ್ಕೆ ಏಕಾನ್ತದ ರಾಮಯ್ಯ ಎನ್ನುವ ಹೆಸರು ಇವರಿಗೆ ಬಂತು. ಹರಿಹರನ ರಗಳೆ, ಭೀಮಕವಿಯ ಬಸವ ಪುರಾಣ, ಲಕ್ಕಣ್ಣ ದಂಡೇಶನ ಶಿವತತ್ವ ಚಿಂತಾಮಣಿ,…

Read More

ಲೇಖನ- ಡಾ.ಮಲ್ಲಿಕಾರ್ಜುನ ಎಸ್ ಆಲಮೇಲಯಡ್ರಾಮಿಕಲಬುರ್ಗಿ ಜಿಲ್ಲೆ.ಮೋ. 9740499814 ಉದಯರಶ್ಮಿ ದಿನಪತ್ರಿಕೆ ಹಬ್ಬಗಳ ಪರ್ವಮಾಸ ಶ್ರಾವಣವು ಕಳೆದು ಭಾದ್ರಪದ ಮಾಸವು ಆಗಮಿಸುತ್ತಿದ್ದಂತೆ ವಿಶ್ವದೆಲ್ಲೆಡೆ ಇರುವ ಹಿಂದೂಗಳ ಮನೆ,ಮನದಿ ಸಡಗರ – ಸಂಭ್ರಮ ತುಂಬಿಕೊಳ್ಳುವದು,ಕಾರಣ,ಭಾದ್ರಪದ ಚತುರ್ಥಿ ( ಚೌತಿ ) ಗೆ ಪಾರ್ವತಿ ತನಯ, ಪರಮೇಶ್ವರ ಪ್ರೀತಿಯ ಕುವರ, ವಿಘ್ನ ನಿವಾರಕ,ಸರ್ವ ಗಣಗಳ ಅಧಿಪತಿ, ಮೂಷಿಕ ವಾಹನ, ಮೋದಕ ಹಸ್ತ, ಚಾಮರ ಕರ್ಣ, ಗಜಮುಖ ಶ್ರೀಗಣೇಶನು, ಮಾತೆ ಗೌರಿಯೊಂದಿಗೆ ಆಗಮಿಸುವನುಎಲ್ಲೆಡೇ ” ಗಣಪತಿ ಬಪ್ಪಾ ಮೊರಿಯಾ”, ಮಂಗಳ ಮೂರ್ತಿ ಮೊರಿಯಾ, ಜೈ ಗಣೇಶ ಎಂದು ಜೈಕಾರದ ಝೇಂಕಾರ ಮಾಸ ಪೂರ್ಣವು ಮಾರ್ದನಿಸುವದು. ಗಣಪತಿಯ ಜನನಯಾಜ್ಞವಲ್ಕ್ಯ ಸ್ಮೃತಿಯ ಪ್ರಕಾರ ಅಂಬಿಕೆಯು ಗಣಪತಿಯ ತಾಯಿ. ಆತನು ಪಾರ್ವತಿ ದೇವಿಯ ಮೈಯಿಂದ ಹುಟ್ಟಿದವನು. ಸ್ವರ್ಣಗೌರಿಯ ಮಾನಸ ಪುತ್ರ ಈತ. ಗೌರಿ ತನ್ನ ಮೈಕೊಳೆಯಿಂದ ( ಮೈಮೇಲೆ ಕುಳಿತಿದ್ದಂತ ದೂಳಿನ ಕಣದಿಂದ ) ಆಕೃತಿಯೊಂದನ್ನು ಸೃಷ್ಟಿಸಿ ಅದಕ್ಕೆ ಜೀವತುಂಬಿ ದ್ವಾರದಿ ಕಾವಲು ಕಾಯಲು ಹೇಳಿ ಸ್ನಾನ ಮಾಡಲು ಹೋಗಿರುತ್ತಾಳೆ. ತಾಯಿಯ…

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ತಾಲೂಕಿನ ಉಕ್ಕಲಿ ಗ್ರಾಮದ ಗೊಲ್ಲಾಳೇಶ್ವರ ಜಾತ್ರೆಯ ಹಿನ್ನೆಲೆಯಲ್ಲಿ ಸೋಮವಾರ ಗ್ರಾಮಕ್ಕೆ ಭೇಟಿ ನೀಡಿದ ಸಚಿವ ಶಿವಾನಂದ ಪಾಟೀಲ ಅವರು ಗೊಲ್ಲಾಳೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದುಕೊಂಡರು.ನಂತರ ಗ್ರಾಮಸ್ಥರು ದೇವಸ್ಥಾನದ ಪರವಾಗಿ ಸಚಿವ ಶಿವಾನಂದ ಪಾಟೀಲ ಹಾಗೂ ಯರನಾಳ ವಿರಕ್ತಮಠದ ಸಂಗನಬಸವ ಸ್ವಾಮೀಜಿಯವರನ್ನು ಸನ್ಮಾನಿಸಿದರು.ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಎ.ಎಂ.ಪಾಟೀಲ, ಸುಭಾಸ ಕಲ್ಯಾಣಿ, ಪಂಡಿತ ಓಜಿ, ಡಾ.ಎಂ.ಎಂ.ಪಾಟೀಲ, ಶೇಖರಗೌಡ ಪಾಟೀಲ, ಗ್ರಾಮ ಪಂಚಾಯಿತಿ ಅಧ್ಯಕ್ಷ ನಿಂಗೊಂಡ ಸಿಂದಗಿ, ಬಾಬು ತಿಕೋಟಾ, ನಿಂಗನಗೌಡ ಬಿರಾದಾರ, ಬಿ.ಬಿ.ಬಿರಾದಾರ, ನಿಂಗೊಂಡ ಕೊಟ್ಲಿ ಇತರರು ಇದ್ದರು.

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪಟ್ಟಣದ ಪೊಲೀಸ್ ಠಾಣೆಯ ಆವರಣದಲ್ಲಿ ಸೋಮವಾರ ಪಿಐ ಗುರುಶಾಂತ ದಾಶ್ಯಾಳ ಅವರು ಪೊಲೀಸ್ ಠಾಣೆಯ ವ್ಯಾಪ್ತಿಯ ರಡಿ ಮತ್ತು ಕಮ್ಯೂನಲ್ ಗೂಂಡಾಗಳ ಪರೇಡ್ ನಡೆಸಿದರು.ಪಿಐ ಗುರುಶಾಂತ ದಾಶ್ಯಾಳ ಅವರು, ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬದಲ್ಲಿ ನೀವು ಯಾವುದೇ ಕಾನೂನು ಬಾಹಿರ ಕೃತ್ಯದಲ್ಲಿ ಭಾಗಿಯಾಗದಂತೆ ನೋಡಿಕೊಳ್ಳಬೇಕು. ಅಲ್ಲದೇ ಸಂಘಟಿತ ಅಪರಾಧ ಧರ್ಮ ಸಂಘಟಿತ ಅಪರಾಧದಲ್ಲಿ ಮತ್ತು ಅಕ್ರಮ ಕೂಟಗಳಲ್ಲಿ ಭಾಗವಹಿಸಬಾರದು. ಒಂದು ಇಂತಹ ಘಟನೆಗಳಲ್ಲಿ ಭಾಗವಹಿಸಿದರೆ ನಿಮ್ಮ ಮೇಲೆ ನಿರ್ಧಾಕ್ಷಣ್ಯ ಕ್ರಮ ಕೈಗೊಂಡು ಗಡಿಪಾರು ಮಾಡಬೇಕಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದರು.ಈ ಸಂದರ್ಭದಲ್ಲಿ ಪಿಎಸ್ಐಗಳಾದ ಎಂ.ಐ. ಮುಲ್ಲಾ, ಎಂ. ಆರ್.ಕಂಚಗಾರ, ಎಎಸ್ಐ ಎಂ.ಐ. ತಳವಾರ, ಸಿಬ್ಬಂದಿಗಳಾದ ಜಗದೀಶ ತಕ್ಕೋಡ,ಪಿ.ಜಿ.ಅಚನೂರ, ಶಿವಬಸಪ್ಪ ಮೊಕಾಶಿ, ಜಿ.ಎಂ.ಪಲ್ಲೇದ, ಬಸವರಾಜ ಶೇಬಗೊಂಡ, ಎಂ.ಎಚ್.ಹುಗ್ಗೇನವರ, ಮಹಾಂತೇಶ ಸಜ್ಜನ, ವೆಂಕಣ್ಣ ಬಿರಾದಾರ, ಶಿವಬಸಪ್ಪ ಮಾಮನಿ, ಸಂತೋಷಕುಮಾರ ಬಿರಾದಾರ ಇತರರು ಇದ್ದರು.

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಬಾಗಲಕೋಟ ಜಿಲ್ಲೆಯ ಬೀಳಗಿಯ ನಂದಿ ಅಂತರಾಷ್ಟ್ರೀಯ ಶಾಲೆಯಲ್ಲಿ ಭಾನುವಾರ ಆಯೋಜಿಸಿದ್ದ ೭ ನೇ ರಾಜ್ಯಮಟ್ಟದ ರೋಪ್ ಸ್ಕಿಪ್ಪಿಂಗ ಚಾಂಪಿಯನ್ಶೀಫ್ದಲ್ಲಿ ಸ್ಥಳೀಯ ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರದಡಿಯ ಬಸವೇಶ್ವರ ದೇವಾಲಯ ಅಂತರಾಷ್ಟ್ರೀಯ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ವಿವಿಧ ವಿಭಾಗಗಳ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ. ಭಾಗವಹಿಸಿದ್ದ ಒಟ್ಟು ವಿದ್ಯಾರ್ಥಿಗಳು ೧೦ ಚಿನ್ನದ ಪದಕ, ೪ ಬೆಳ್ಳಿ, ಒಂದು ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಈ ವಿದ್ಯಾರ್ಥಿಗಳಿಗೆ ಶಾಲೆಯ ದೈಹಿಕ ಶಿಕ್ಷಕರಾದ ಮಹೇಶ ಸಂಗಮ, ವಿಜಯ ರಾಠೋಡ ಮಾರ್ಗದರ್ಶನ ನೀಡಿದ್ದಾರೆ. ಈ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಗುರುನಾಥ ದಡ್ಡೆ, ಶಾಲೆಯ ಸಲಹಾ ಸಮಿತಿ ಅಧ್ಯಕ್ಷ ಅನಿಲ ಅಗರವಾಲ, ಶಾಲಾ ಸಲಹಾ ಸಮಿತಿಯ ಎಲ್ಲ ಸದಸ್ಯರು, ಶಾಲಾ ಪ್ರಾಚಾರ್ಯೆ ಆರ್.ಎಂ.ರೋಣದ, ಉಪಪ್ರಾಚಾರ್ಯ ಎಸ್.ಎಂ.ಬಿಸ್ಟಗೊಂಡ, ಶಾಲಾ ಸಿಬ್ಬಂದಿ, ಪಾಲಕರು ಹರ್ಷ ವ್ಯಕ್ತಪಡಿಸಿದ್ದಾರೆ ಎಂದು ಶಾಲೆಯ ಪ್ರಕಟಣೆ ತಿಳಿಸಿದೆ.

Read More