Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಚಡಚಣ: ಪಟ್ಟಣ ಪಂಚಾಯತಿ ಚಡಚಣ ವ್ಯಾಪ್ತಿಯ ನಾಗರಿಕರು 2026-27ನೇ ಸಾಲಿನ ಆಸ್ತಿ ತೆರಿಗೆಯನ್ನು ಏಪ್ರಿಲ್ 1ರಿಂದ 30ರೊಳಗೆ ಪಾವತಿಸಿದಲ್ಲಿ ಒಟ್ಟು ಮೊತ್ತದಲ್ಲಿ ಶೇ.5 ರಿಯಾಯಿತಿ ಪಡೆಯಬಹುದಾಗಿದೆ ಎಂದು ಪಟ್ಟಣ ಪಂಚಾಯತಿ ಪ್ರಕಟಣೆಯಲ್ಲಿ ತಿಳಿಸಿದೆ.ನಿಗದಿತ ಅವಧಿಯೊಳಗೆ ತೆರಿಗೆ ಪಾವತಿಸಿ ಈ ರಿಯಾಯತಿ ಸದುಪಯೋಗಪಡಿಸಿಕೊಳ್ಳುವಂತೆ ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ. ಮೇ ಹಾಗೂ ಜೂನ್ ತಿಂಗಳಲ್ಲಿ ಯಾವುದೇ ರೀತಿಯ ರಿಯಾಯತಿ ನೀಡಲಾಗುವುದಿಲ್ಲ. ಜುಲೈ ತಿಂಗಳಿಂದ ಬಾಕಿ ಇರುವ ಆಸ್ತಿ ತೆರಿಗೆಯ ಮೇಲೆ ಶೇ.2ರಷ್ಟು ಬಡ್ಡಿ ವಿಧಿಸಲಾಗುವುದು ಎಂದು ತಿಳಿಸಲಾಗಿದೆ.ಆಸ್ತಿ ತೆರಿಗೆ ಪಾವತಿಸಲು ನಾಗರಿಕರು ಪಟ್ಟಣ ಪಂಚಾಯತಿ ಕಚೇರಿಗೆ ಭೇಟಿ ನೀಡಿ ಪಾವತಿ ಮಾಡಬಹುದು.ಈ ಕುರಿತು ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಬಾಬಾಸಾಹೇಬ ತಾವಸೆ, ಅಧ್ಯಕ್ಷ ಮಲ್ಲಿಕಾರ್ಜುನ ಧೋತ್ರೆ ಹಾಗೂ ಉಪಾಧ್ಯಕ್ಷ ಇಲಾಹಿಸಾಬ ನದಾಫ ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ಚಡಚಣ: ಪಟ್ಟಣ ಪಂಚಾಯತಿ ಚಡಚಣ ವತಿಯಿಂದ ಸಾರ್ವಜನಿಕರಿಗೆ ಪ್ರಕಟಣೆ ನೀಡಲಾಗಿದ್ದು, ಪಟ್ಟಣ ಪಂಚಾಯತಿಯ ಮಾಲೀಕತ್ವದಲ್ಲಿರುವ ಒಟ್ಟು 34 ವಾಣಿಜ್ಯ ಮಳಿಗೆಗಳ ಪೈಕಿ 5 ಮಳಿಗೆಗಳು ಖಾಲಿ ಇರುವುದರಿಂದ ಅವುಗಳನ್ನು ಹರಾಜು ಮೂಲಕ ಹಂಚಿಕೆ ಮಾಡಲು ನಿರ್ಧರಿಸಲಾಗಿದೆ ಎಂದು ಬಿ ಕೆ ತಾವಸೆ ಮುಖ್ಯಾಧಿಕಾರಿ ಪ.ಪಂ. ಚಡಚಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಖಾಲಿ ಇರುವ ಮಳಿಗೆಗಳ ವಿವರ ಹೀಗಿದೆ: ಅಗಸಿ ಹತ್ತಿರ ಮಳಿಗೆ ಸಂಖ್ಯೆ 05 (ಸಾಮಾನ್ಯ), ಹಳೆ ತಹಶೀಲ್ದಾರ ಕಾರ್ಯಾಲಯ ಹತ್ತಿರ ಮಳಿಗೆ ಸಂಖ್ಯೆ 09 (ಪರಿಷಿಷ್ಟ ಪಂಗಡ), ಡಿ.ಸಿ.ಸಿ ಬ್ಯಾಂಕ್ ಹತ್ತಿರ ಮಳಿಗೆ ಸಂಖ್ಯೆ 05 (ಅಂಗವಿಕಲರಿಗೆ), ಮಳಿಗೆ ಸಂಖ್ಯೆ 08 (ಸಾಮಾನ್ಯ) ಹಾಗೂ ಮಳಿಗೆ ಸಂಖ್ಯೆ 02 (ಪರಿಷಿಷ್ಟ ಜಾತಿ).ಮಾನ್ಯ ಸರ್ಕಾರದ ಅಧಿನ ಕಾರ್ಯದರ್ಶಿಗಳು ನಗರಾಭಿವೃದ್ಧಿ ಇಲಾಖೆಯ ಆದೇಶದನ್ವಯ,ತಿದ್ದುಪಡೆ ಸಂಖ್ಯೆ : ನಅಇ 254 ಟಿ.ಎಮ್.ಎಸ್ 2021(ಇ) ದಿನಾಂಕ 04-11-2022ರನ್ವಯ, ದಿನಾಂಕ 13-04-2026 ರಂದು ಬೆಳಿಗ್ಗೆ 11.00 ಗಂಟೆಗೆ ಪಟ್ಟಣ ಪಂಚಾಯತಿ ಸಭಾಭವನದಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ.ಹರಾಜಿನಲ್ಲಿ ಭಾಗವಹಿಸಲು…

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಇಂದು ಪಾಲಕರು ತಮ್ಮ ಮಕ್ಕಳನ್ನು ಲಕ್ಷ ಲಕ್ಷ ಡೊನೇಶನ್ ಕೊಟ್ಟು ಕಲಿಸದೇ ಲಕ್ಷ್ಯ ವಹಿಸಿ ಕಲಿಸುವಂತಾಗುವ ಜೊತೆಗೆ ತಾಯಂದಿಯರು ಮೊಬೈಲ್ ತ್ಯಾಗ ಮಾಡಿ ಮಕ್ಕಳನ್ನು ಉತ್ತಮರನ್ನಾಗಿ ಬೆಳೆಸುವಂತಾಗಬೇಕೆಂದು ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಹೇಳಿದರು.ಪಟ್ಟಣದ ನಂದಿ ಬಡಾವಣೆಯ ಮಾರುತಿ ದೇವಸ್ಥಾನದ ಆವರಣದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತು, ಕದಳಿ ವೇದಿಕೆಯ ಸಹಯೋಗದಲ್ಲಿ ಗುರುವಾರ ಸಂಜೆ ಹಮ್ಮಿಕೊಂಡಿದ್ದ ಅಕ್ಕಮಹಾದೇವಿ ಜಯಂತಿ ಹಾಗೂ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಚಿಕ್ಕಮಕ್ಕಳನ್ನು ಆದಷ್ಟು ಮೊಬೈಲ್ ದಿಂದ ದೂರವಿಡಬೇಕು.ಇಂದು ಮೊಬೈಲ್ ಬಳಕೆ ಹೆಚ್ಚಾಗಿ ಬಳಕೆ ಮಾಡಿದ ಪರಿಣಾಮ ನಿಮ್ಹಾನ್ಸ್ ನಲ್ಲಿ ಹೆಚ್ಚು ಮಕ್ಕಳನ್ನು ಕಾಣುವಂತಾಗಿದೆ. ಮಕ್ಕಳ ಜೀವನ ಶುದ್ಧರಾಗಿಬೇಕಾದರೆ ಮೊದಲು ಪಾಲಕರು ಮಕ್ಕಳು ಇರುವಾಗ ಮೊಬೈಲ್ ತ್ಯಾಗ ಮಾಡಬೇಕು. ಇಂದು ಮಕ್ಕಳು ಹಠ ಮಾಡಬಾರದು ಎಂಬ ಕಾರಣಕ್ಕೆ ಪಾಲಕರೇ ಮೊಬೈಲು ಗೀಳು ಮಕ್ಕಳಿಗೆ ಅಂಟಿಸುತ್ತಿರುವುದು ವಿಷಾದನೀಯ. ಇದು ನಿಲ್ಲಬೇಕಿದೆ. ಮೊಬೈಲ್ ಬಳಕೆ ಸದುಪಯೋಗವಾಗುವಂತಿರಬೇಕು. ಇಂದು ಕೊಲ್ಲಿ ಯುದ್ಧ ಪರಿಣಾಮ…

Read More

ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ಮದುವೆ ನಿಶ್ಚಿತಾರ್ಥ ಮುರಿದು ಬಿದ್ದ ನಂತರ ಮರಳಿ ಹೆಣ್ಣು ಸಿಗದ ಕಾರಣ ಕುರಿಗಾಹಿ ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಜರುಗಿದೆ.ಮೃತ ಯುವಕ ಚಿಮ್ಮಲಗಿ ಭಾಗ-೨ ಗ್ರಾಮದ ಶಂಕರ ತಳವಾರ (೨೫).ಚಿಮ್ಮಲಗಿ ಗ್ರಾಮದ ಜಮೀನೊಂದರಲ್ಲಿಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಎರಡು ವರ್ಷದ ಹಿಂದೆ ಮದುವೆ ನಿಶ್ಚಯವಾಗಿ ಮುರಿದು ಬಿದ್ದಿತ್ತುತದನಂತರ ಎಷ್ಟು ಹುಡುಕಿದ್ರೂ ಹೆಣ್ಣು ಸಿಕ್ಕಿರಲಿಲ್ಲ.ಈ ಕಾರಣ ಮನನೊಂದು ಜಮೀನಲ್ಲಿ ಬೇವಿನ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ನಿಡಗುಂದಿ ಪೊಲೀಸರು ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ಭಾರತೀಯ ಭೂಸೇನೆಯಲ್ಲಿ ಹದಿನೇಳು ವರ್ಷ ಸೇವೆ ಸಲ್ಲಿಸಿ ನಿವೃತ್ತಿಯಾದ ಸಾಲೋಟಗಿ ಗ್ರಾಮದ ವೀರ ಯೋಧ ಅನೀಲ ಪರಶೇನವರ ಅವರನ್ನು ಇಂಡಿ ರೈಲು ನಿಲ್ದಾಣದಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು.ನಂತರ ಇಂಡಿ ರೈಲು ನಿಲ್ದಾಣ, ಇಂಡಿ ನಗರ ಮತ್ತು ಸಾಲೋಟಗಿ ಗ್ರಾಮದಲ್ಲಿ ಅದ್ದೂರಿಯ ಮೆರವಣೆಗೆ ನಡೆಯಿತು.ತೆರೆದ ಜೀಪದಲ್ಲಿ ಸೈನಿಕ ಪರಶೇನವರ ಇವರಿಗೆ ಅಂದಾಜು ೨೦೦ ಕ್ಕೂ ಹೆಚ್ಚು ಬೈಕುಗಳು ಸೇರಿ ಭಾರತ ಮಾತೆಯ ಧ್ವಜದೊಂದಿಗೆ ಭಾರತ ಮಾತಾ ಕಿ ಜೈ ಘೋಷಣೆಯೊಂದಿಗೆ ಭವ್ಯ ಮೆರವಣೆಗೆ ನಡೆಯಿತು.ಇಂಡಿಯಲ್ಲಿ ಶಿವಾಜಿ ವೃತ್ತ, ಮಹಾವೀರ ವೃತ್ತ, ಬಸವೇಶ್ವರ ವೃತ್ತ, ಸ್ವಾಮಿ ವಿವೇಕಾನಂದ ವೃತ್ತದ ಮೂಲಕ ಸಾಲೋಟಗಿ ಗ್ರಾಮದ ವರೆಗೆ ಮೆರವಣೆಗೆ ನಡೆಯಿತು.ಸಾಲೋಟಗಿ ಗ್ರಾಮದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಶ್ರೀ ಸಂಗಮೇಶ್ವರ ಶ್ರೀಗಳು ಜಗತ್ತಿನಲ್ಲಿ ಯಾವದು ಶ್ರೇಷ್ಠ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಹಾಲಿನಲ್ಲಿ ತಾಯಿಯ ಎದೆಹಾಲು, ಚುಕ್ಕೆಯಲ್ಲಿ ಬೆಳ್ಳಿ ಚುಕ್ಕೆ, ಹೂವು ಹತ್ತಿ ಹೂ, ಮಕ್ಕಳಲ್ಲಿ ಭೂ ತಾಯಿಯ ಚೊಚ್ಚಲ ಮಗ ರೈತ, ಮತ್ತು ಸೈನಿಕ…

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ:ಭಾರತೀಯ ಜನಗಣತಿ 2027ರ ಕಾರ್ಯಾಚರಣೆ ಮೊದಲ ಹಂತ ಏಪ್ರಿಲ್ 1 ರಿಂದ ಮೇ 15ರವರೆಗೆ ನಡೆಯಲಿದೆ. ಈ ಅವಧಿಯಲ್ಲಿ ಮನೆಗಳ ಪಟ್ಟಿ ಮತ್ತು ಮನೆಗಣತಿ ಕಾರ್ಯ ಕೈಗೊಳ್ಳಲಾಗುತ್ತಿದೆ. ಈ ಬಾರಿ ಜನಗಣತಿ ಎರಡು ಹಂತಗಳಲ್ಲಿ ನಡೆಯಲಿದೆ. ಮೊದಲ ಹಂತದಲ್ಲಿ ಮನೆಗಳ ಪಟ್ಟಿ ಮತ್ತು ಮನೆಗಳ ಮಾಹಿತಿ ಸಂಗ್ರಹಿಸುವ ಕಾರ್ಯ ನಡೆಯಲಿದೆ. ಭಾರತ ಸರಕಾರವು ಇದೇ ಮೊದಲ ಬಾರಿಗೆ ನಾಗರಿಕರಿಗೆ ಸ್ವಯಂ ಜನಗಣತಿ ಸೌಲಭ್ಯವನ್ನು ಪರಿಚಯಿಸಿದೆ. ನಾಗರಿಕರು ತಾವಾಗಿಯೇ ಆನ್‌ಲೈನ https://se.census.gov.in ದಾಖಲಿಸಿ ಸ್ವಯಂ ಜನಗಣತಿ ಮಾಡಿಕೊಂಡು ಐಡಿ ಯನ್ನು ಪಡೆದುಕೊಳ್ಳುವುದು. ಗಣತಿದಾರರು ನಿಮ್ಮ ಮನೆಗೆ ಭೇಟಿ ನೀಡಿದಾಗ ಸ್ವಯಂ ಗಣತಿ ಐಡಿಯನ್ನು ಅವರಿಗೆ ನೀಡಬೇಕು. ಈ ಪ್ರಕ್ರಿಯೆಯು ಸಂಪೂರ್ಣ ಉಚಿತವಾಗಿರುತ್ತದೆ.ಅದರಂತೆ ಈ ಜನಗಣತಿ ಕಾರ್ಯಕ್ಕೆ ನೇಮಕ ಮಾಡಿದ ಅಧಿಕಾರಿ ನೌಕರರು ಏಪ್ರಿಲ್ 16 ರಿಂದ ಮೇ 15 ರವರೆಗೆ ತಮ್ಮ ಮನೆಗೆ ಬರಲಿದ್ದು. ಪುರಸಭೆ ವ್ಯಾಪ್ತಿಯ ಎಲ್ಲ ಸಾರ್ವಜನಿಕರು ಸ್ವಯಂ ಪ್ರೇರಿತವಾಗಿ ಈ ಜನಗಣತಿ ಕಾರ್ಯದಲ್ಲಿ ಭಾಗವಹಿಸಿ ಸರ್ಕಾರದ…

Read More

ಲೇಖನ – ಜಯಶ್ರೀ.ಜೆ. ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕರುಬೆಳಗಾವಿಮೊ: ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ನೆನಪುಗಳ ಓಣಿಯಲ್ಲಿ ಓಡಾಡುತಿರುವೆ. ನೆನಪುಗಳ ಮಳಿಗೆಯಲಿ ಇನ್ನಾರಿಲ್ಲ ನಿನ್ನ ಹೊರತು. ನೀನಿಲ್ಲದೇ ನೆನಪಿನ ಆ ಓಣಿ ಕಳೆಗಟ್ಟುವುದಾದರೂ ಹೇಗೆ? ನಿನ್ನೊಂದಿಗಿದ್ದ ದಿನಗಳೇ ಅಪ್ಪಟ ಸ್ವರ್ಗದ ದಿನಗಳು. ಸ್ವರ್ಗವೊಂದು ಏನಾದರೂ ಭೂಮಿಯ ಮೇಲಿದ್ದರೆ ಅದು ನಿನ್ನೊಂದಿಗಿದ್ದಾಗ ಮಾತ್ರ ಗೋಚರಿಸುತ್ತದೆ. ಸ್ವರ್ಗ ಬೇರಲ್ಲ ನೀನು ಬೇರಲ್ಲ ಅಂತ ಎಷ್ಟೊಂದು ಸಲ ನನಗೆ ಅನಿಸಿದ್ದು ಸುಳ್ಳಲ್ಲ ಸುಮತಿ. ಪ್ರಾಣ ಸ್ನೇಹಿತೆಯಾದ ನಿನ್ನ ಬಗೆಗಿನ ವಿಚಾರಗಳೆಲ್ಲ ಗಾಣದಂತೆ ಸದಾ ಸುತ್ತುತ್ತಲೇ ಇರುತ್ತವೆ. ಬಾಲ್ಯದಲ್ಲಿ ಗಂಡ ಹೆಂಡತಿಯಾಗಿ ಆಡಿದ ಆಟವಂತೂ ಇಂಚಿಂಚಾಗಿ ಯಥಾವತ್ತಾಗಿ ನೆನಪಿನಲ್ಲಿಟ್ಡಿದೆ ಮೆದುಳು. ಗಂಡ ಹೆಂಡತಿಯಾಟ ನೆನಪಿನ ಶಾಲೆಯಲ್ಲಿ ಹೆಚ್ಚೆಚ್ಚು ತೆರೆದುಕೊಳ್ಳುತ್ತದೆ. ಅದೇ ಈಗ ನಿಜವಾದರೆ ನನ್ನನ್ನು ಹಿಡಿಯುವವರೇ ಇಲ್ಲ. ಹೀಗೆ ನೆನಪಿನ ಲೋಕದಲ್ಲಿ ವಿಹರಿಸುವ ಹುಚ್ಚು ಇತ್ತೀಚಿಗೆ ಮತ್ತಷ್ಟು ಹೆಚ್ಚುತ್ತಿದೆ. ನೀನಿಲ್ಲದೇ ಪ್ರೇಮ ಲೋಕದ ಪ್ರಪಂಚ ನಿಂತಂತಾಗಿದೆ. ಮನಸ್ಸು ಕೂಡ ಭಾರವಾಗುತ್ತಿದೆ. ನನ್ನ ಅಪ್ರತಿಮ ಅನುಪಮ ಪ್ರೇಯಸಿ ಜೊತೆ ಭಾವನೆಗಳ ಬೆಸೆಯಲು ಮನಸ್ಸು…

Read More

ಅನಧಿಕೃತ ಸಂಪರ್ಕ ಹೊಂದಿದ್ದರೆ ೫ ಸಾವಿರ ರೂ. ದಂಡ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಅನವಶ್ಯಕವಾಗಿ ಕುಡಿಯುವ ನೀರು ಪೋಲು ಮಾಡುವರಿಗೆ ೨ ಸಾವಿರ ರೂ. ಹಾಗೂ ಅನಧಿಕೃತ ನಳ ಸಂಪರ್ಕ ಪಡೆದುಕೊಳ್ಳುವ ಹಾಗೂ ಪಡೆದುಕೊಂಡವರಿಗೆ ಹೊಸ ನಳದ ಶುಲ್ಕದ ಜೊತೆಗೆ ಹೆಚ್ಚುವರಿ ೫ ಸಾವಿರ ರೂ. ದಂಡ ವಿಧಿಸಲಾಗುವುದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸಹಾಯಕ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ.ನಗರದ ವಿವಿಧ ವಲಯ, ವಾರ್ಡಗಳಲ್ಲಿ ಪೂರೈಕೆಯಾಗುವ ನೀರನ್ನು ಕುಡಿಯುವ ಸಲುವಾಗಿ ಮಾತ್ರ ಪರಿಗಣಿಸಿ ನೀರಿನ ಪ್ರಮಾಣವನ್ನು ಅಂದಾಜಿಸಲಾಗಿರುತ್ತದೆ. ದಿನಂಪ್ರತಿ ಪ್ರತಿಯೊಬ್ಬರಿಗೆ ತಲಾ ೧೩೫ ಲೀಟರನಂತೆ ಪ್ರತಿ ಮನೆಯಲ್ಲಿ ಒಟ್ಟು ೫ ಜನರ ಬೇಡಿಕೆಯನ್ನಾಧರಿಸಿ ನೀರು ಪೂರೈಸಲಾಗುತ್ತಿದೆ. ಆದರೆ ಸಾರ್ವಜನಿಕರು ಈ ಪ್ರಮಾಣ ಮೀರಿ ವಾಹನ ತೊಳೆಯುವುದು, ಗಾರ್ಡನಗಳಿಗೆ ನೀರುಣಿಸುವುದು. ಅನವಶ್ಯಕವಾಗಿ ನಳದ ನೀರನ್ನು ಬಂದ್ ಮಾಡದೇ ರಸ್ತೆಗೆ, ಹೊರಚರಂಡಿಗೆ ಫೋಲು ಮಾಡುತ್ತಿರುವುದು ಕಂಡು ಬಂದಿರುತ್ತದೆ. ಕೆಲವೆಡೆ ಪವರ್ ಪಂಪ್ ಅಳವಡಿಸಿ. ಹೆಚ್ಚಿನ ನೀರು ಬಳಸುತ್ತಿದ್ದು, ಇದರಿಂದಾಗಿ ಕುಡಿಯುವ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಸಮಾಜ ಕಲ್ಯಾಣ ಇಲಾಖೆ ಇವರ ಸಹಯೋಗದಲ್ಲಿ ಹಸಿರು ಕ್ರಾಂತಿಯ ಹರಿಕಾರ ಹಾಗೂ ಭಾರತದ ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನ ರಾಂ ಅವರ ೧೧೯ನೇ ಜಯಂತಿ ಕಾರ್ಯಕ್ರಮವನ್ನು ಏಪ್ರಿಲ್ ೫ರಂದು ಬೆಳಿಗ್ಗೆ ೧೦ ಗಂಟೆಗೆ ನಗರದ ಕಂದಗಲ್ ಶ್ರೀ ಹನುಂತರಾಯ ರಂಗಮಂದಿರದಲ್ಲಿ ಆಯೋಜಿಸಲಾಗಿದೆ.ಅಂದು ಬೆಳಿಗ್ಗೆ ೯ ಗಂಟೆಗೆ ನಗರದ ಸೆಟ್‌ಲೈಟ್ ಬಸ್ ನಿಲ್ದಾಣದ ಹತ್ತಿರ ಇರುವ ಡಾ. ಬಾಬು ಜಗಜೀವನರಾಂ ವೃತ್ತದಿಂದ ನಗರದ ಪ್ರಮುಖ ವೃತ್ತಗಳ ಮೂಲಕ ಸಾಗಿ, ಕಂದಗಲ್ ಶ್ರೀ ಹನುಂತರಾಯ ರಂಗಮಂದಿರದವರೆಗೆ ಭಾವಚಿತ್ರದ ಮೆರವಣಿಗೆ ಜರುಗಲಿದೆ.ಈ ಜಯಂತಿ ಕಾರ್ಯಕ್ರಮಕ್ಕೆ ಎಲ್ಲಾ ಜಿಲ್ಲಾಮಟ್ಟದ ಅಧಿಕಾರಿ,ಸಿಬ್ಬಂದಿ, ಜಿಲ್ಲೆಯ ಸಾರ್ವಜನಿಕರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಮತ್ತು ಎಲ್ಲಾ ಸಮುದಾಯದ ಗಣ್ಯರು ಭಾಗವಹಿಸುವಂತೆ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ಕೋರಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ಹೆಚ್ ಡಿ ಕೋಟೆ: ಮುಂಬರುವ ವಿಧಾನಸಭೆ ಚುನಾವಣೆಗೆ ಇನ್ನು ಎರಡು ವರ್ಷ ಬಾಕಿ ಇದೆ. ಆದರೆ ಹೆಚ್ ಡಿ ಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಈಗಲೇ ಚುನಾವಣಾ ಅಖಾಡಕ್ಕೆ ವೇದಿಕೆ ಸಿದ್ಧವಾಗುತ್ತಿದೆ. ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆಯಲ್ಲಿ ಉಪಚುನಾವಣಾ ಕಾವು ರಂಗೇರುತ್ತಿದ್ದರೆ ಹೆಚ್ ಡಿ ಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಹಾಗು ಕಾಂಗ್ರೆಸ್ ನಾಯಕರ ನಡುವೆ ಮಾತಿನ ವಾಕ್ಸಮರ ಜೋರಾಗಿದೆ. ಮಧ್ಯಪ್ರಾಚ್ಯದಲ್ಲಿ ನಿಜವಾದ ಯುದ್ಧ ನಡೆಯುತ್ತಿದ್ದರೆ ವನಸಿರಿ ನಾಡಿನಲ್ಲಿ ಮಾತಿನ ಯುದ್ಧ ತುಸು ಜೋರಾಗಿಯೇ ನಡೆಯುತ್ತಿದೆ.ಇತ್ತೀಚೆಗೆ ನಡೆದ ಜನರೊಂದಿಗೆ ಜನತಾದಳ ಸಮಾವೇಶದಲ್ಲಿ ಜೆಡಿಎಸ್ ಮುಖಂಡ ಕೆ.ಎಂ. ಕೃಷ್ಣನಾಯಕ ಅವರು ಶಾಸಕ ಅನಿಲ್ ಚಿಕ್ಕಮಾದು ವಿರುದ್ಧ ಆರೋಪಗಳ ಸುರಿಮಳೆಗೈದ್ದಿದ್ದರು. ಕ್ಷೇತ್ರಕ್ಕೆ ಶಾಸಕರ ಕೊಡುಗೆ ಏನು ಎಂದು ಪ್ರಶ್ನಿಸಿದ್ದರು. ಅಲ್ಲದೆ ಸೋಷಿಯಲ್ ಮೀಡಿಯಾದಲ್ಲಿ ಹದಗೆಟ್ಟ ರಸ್ತೆಗಳ ವಿಡಿಯೋಗಳನ್ನು ಅಪ್ಲೋಡ್ ಮಾಡುವ ಮೂಲಕ ಜೆಡಿಎಸ್ ಮುಖಂಡರು ಟೀಕೆಗಳ ಸುರಿಮಳೆಗೈದಿದ್ದರು. ಇದರಿಂದ ಕೇರಳಿ ಕೆಂಡವಾಗಿರುವ ಕಾಂಗ್ರೆಸ್ ನಾಯಕರು ಜೆಡಿಎಸ್ ಮುಖಂಡ ಕೆ.ಎಂ. ಕೃಷ್ಣನಾಯಕ ವಿರುದ್ಧ ತಿರುಗಿಬಿದ್ದಿದ್ದಾರೆ.…

Read More