ಉದಯರಶ್ಮಿ ದಿನಪತ್ರಿಕೆ
ಮೋರಟಗಿ: ಸುಗಮ ಸಂಗೀತಕ್ಕೆ ಶಾಂತಿ ವೃದ್ಧಿ ಮಾಡುವ ಶಕ್ತಿಇದೆ ತಂತ್ರಜ್ಞಾನ ಯುಗದಲ್ಲಿ ತಮ್ಮ ಸಂಗೀತ, ಜಾನಪದ ಮತ್ತು ನಾಟಕದ ಮೂಲಕ ಗ್ರಾಮೀಣ ಭಾಗದಲ್ಲಿ ಯುವಕರಿಗೆ ಜ್ಞಾನ ತುಂಬುತ್ತಿರುವ ಶ್ರೀಭಾಗ್ಯವಂತಿ ಸಂಸ್ಕೃತಿ ನಾಟ್ಯ ಕಲಾ ಸಂಘದವರ ಕಾರ್ಯ ಶ್ಲಾಘನೀಯಾವದುದ್ದು ಎಂದು ಜೇರಟಗಿ ವೀರಕ್ತ ಮಠದ ಮಹಾಂತ ಸ್ವಾಮಿಗಳು ಹೇಳಿದರು.
ಸಮೀಪದ ಕುಳೇಕುಮಟಗಿ ಗ್ರಾಮದ ಶ್ರೀರಾಮಗಿರಿ ಮಠದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀ ಭಾಗ್ಯವಂತಿ ಕಲಾ ನಾಟ್ಯ ಸಂಘ ಹಮ್ಮಿಕೊಂಡ ಸಂಗೀತ ಜಾನಪದ ಸಂಭ್ರಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯುವಕರಲ್ಲಿ ಮೊಬೈಲ್ ಬಳಕೆ ಹೆಚ್ಚುತ್ತಿದ್ದಂತೆ ಸಂಗೀತ, ಸಂಸಾರಿಕ ನಾಟಕ, ಪ್ರವಚನ, ಪುರಾಣ, ಜಾನಪದಗಳು ನಸಿಸಿ ಹೋಗುತ್ತಿವೆ ಸಂಗೀತಕ್ಕೆ ಜೀವನದ ಶೈಲಿಯನ್ನೇ ಬದಲಾಯಿಸುವ ಶಕ್ತಿ ಇದೆ, ಯುವಕರು ಶಿಕ್ಷಣದ ಅವಶ್ಯಕತೆ ಮಾತ್ರ ಮೊಬೈಲ್ ಮೊಬೈಲ್ ಬಳಸಬೇಕು ತಮಗೆ ಸಿಕ್ಕಿರುವ ಸಮಯದಲ್ಲಿ ಒಳ್ಳೆಯ ಸಂಗೀತ ಕೇಳಬೇಕು ವಚನಗಳು ಓದಬೇಕು ಹಾಗೂ ಸಂಸಾರಿಕ ನಾಟಕದ ಪುಸ್ತಕಗಳನ್ನು ಕೂಡಾ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದರು.
ವಿಜಯಪುರ ಜಿಲ್ಲೆಯ ಕೊನೆಯ ಹಳ್ಳಿ ಮೋರಟಗಿ ಗ್ರಾಮದ ಬಡತನ ಕುಟುಂಬಗಳಲ್ಲಿ ಕಲಾವಿದರು ಹುಟ್ಟಿಕೊಂಡಿದ್ದಾರೆ ಆರ್ಥಿಕವಾಗಿ ಹಿಂದುಳಿದ ಈ ಕಲಾವಂತರಿಗೆ ಸರ್ಕಾರ ಗುರುತಿಸಿ ಮುಖ್ಯ ವಾಹಿನಿಗೆ ತರುವುದರ ಜೊತೆಗೆ ಆರ್ಥಿಕವಾಗಿ ಸದೃಢವಾಗುವ ನಿಟ್ಟಿನಲ್ಲಿ ಸಹಾಯಕ್ಕೆ ನಿಲ್ಲಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.
ಕಾರ್ಯಕ್ರಮದ ನಂತರ ವಿವಿಧ ಖ್ಯಾತ ಕಲಾವಿದರಿಂದ ಕಥಾ ಕೀರ್ತನೆ, ಜಾನಪದ ಸಂಗೀತ, ಸುಗಮ ಸಂಗೀತ, ವಚನ ಗಾಯನ, ಭಾವಗೀತೆ, ದಾಸವಾಣಿ, ಗಜಲ್ ಗಾಯನಗಳು ಜರುಗಿದವು.
ಕಾರ್ಯಕ್ರಮದಲ್ಲಿ ಬಸಯ್ಯ ಸ್ವಾಮಿಗಳು ರಾಮಗಿರಿಮಠ, ಸಂತೋಷ ಭೋವಿ ಸಹಾಯಕ ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಜಯಪುರ, ರಾಜೂಗೌಡ ಪಾಟೀಲ್, ಬಸಲಿಂಗಪ್ಪ ಬೋನಾಳ, ಇದ್ದರು.

