Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾ ಸಹಕಾರಿ ಯುನಿಯನ್ ನಿರ್ದೇಶಕರಾಗಿ ಆವಿರೋಧ ಆಯ್ಕೆಯಾಗಿರುವ ಬಸವರಾಜ ಮಹಾದೇವಪ್ಪ ಕುಂಬಾರ ಇವರು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷರೂ ಆಗಿರುವ ಸಚಿವ ಶಿವಾನಂದ ಪಾಟೀಲ ಅವರನ್ನು ನಗರದ ತೋಟದ ಮನೆಯಲ್ಲಿ ಸನ್ಮಾನಿಸಿದರು.ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರಾದ ಬಿ.ಎಸ್.ಪಾಟೀಲ ಯಾಳಗಿ, ತಾಳಿಕೋಟೆ ಪಿ.ಕೆ.ಪಿ.ಎಸ್. ಅಧ್ಯಕ್ಷರಾದ ಡಿ.ವಿ.ಪಾಟೀಲ, ಎಸ್.ಬಿ.ಇಲಕಲ್, ಗೋವಿಂದಸಿಂಗ್ ಮೂಲಿಮನಿ, ಬಸನಗೌಡ ಮಾಲೀಪಾಟೀಲ, ಯಮನಪ್ಪ ಬರದೇನಾಳ, ಎಂ.ಬಿ.ಕಟ್ಟಿಮನಿ, ಸಂಗನಗೌಡ ಅಸ್ಕಿ, ರಘುವೀರಸಿಂಗ್ ಹಜೇರಿ, ಶಂಕರಗೌಡ ಪಾಟೀಲ ಸೇರಿದಂತೆ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Read More

ಉದಯರಶ್ಮಿ ದಿನಪತ್ರಿಕೆ ಚಡಚಣ: ತಾಲೂಕಿನ ದೇವರ ನಿಂಬರಗಿ ಗ್ರಾಮದಲ್ಲಿ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಒಂದಾದ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಗಣತಿ ಕಾರ್ಯದಲ್ಲಿ ನಿರತ ಶಿಕ್ಷಕನಿಗೆ ಜೋಡಿ ನಾಯಿಗಳು ಕಡಿದು ಆಸ್ಪತ್ರೆ ಸೇರುವಂತಾಗಿದೆ.ಶನಿವಾರ ಎಂದಿನಂತೆ ಸಾಯಂಕಾಲದ ಸಮಯದಲ್ಲಿ ದೇವರನಿಂಬರಗಿ ಗ್ರಾಮದ ಮುಲ್ಲಾ ವಸ್ತಿಗೆ ಗಣತಿ ಮಾಡಲು ಹೋಗುವ ಸಂದರ್ಭದಲ್ಲಿ ವಸತಿಯಲ್ಲಿ ಇರುವ ಎರಡು ನಾಯಿಗಳು ಧಿಡಿರ ದಾಳಿ ನಡೆಸಿವೆ ಎಂದು ತಿಳಿದುಬಂದಿದೆ.ದಾಳಿಯಲ್ಲಿ ಗಾಯಗೊಂಡ ಶಿಕ್ಷಕ ಶ್ರೀಶೈಲ್ ಮಾಳಿ ಅವರು ದೇವರ ನಿಂಬರಗಿಯ ಎಲ್.ಪಿ.ಎಸ್.ಮಣಿಯಾರ ವಸ್ತಿ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಹೊಲದಲ್ಲಿ ಮನೆ ಮಾಡಿಕೊಂಡು ವಾಸಿಸುವ ಜನರ(ವಸ್ತಿಯಲ್ಲಿರುವ) ಶಿಕ್ಷಕರು ಗಣತಿ ಕಾರ್ಯ ಮಾಡುವದರಿಂದ ಇಂಥಹ ಪರಿಸ್ಥಿತಿ ಬರುವ ಸಾಧ್ಯತೆ ಹೆಚ್ಚು ಆದ್ದರಿಂದ ಚಡಚಣ ಶಿಕ್ಷಣ ಇಲಾಖೆಯ ಬಿಇಓ,ಗ್ರಾಮ ಪಂಚಾಯತಿಯ ಪಿಡಿಓ, ಪ.ಪಂಚಾಯತಿಯ ಸಿಓ ಅವರು ಇನ್ನು ಮುಂದಾದರು ಎಚ್ಚತ್ತುಕೊಂಡು ಸಾರ್ವಜನಿಕರಿಗೆ ಡಂಗುರ ಸಾರಿ ಸಾಕು ಪ್ರಾಣಿ ನಾಯಿಗಳನ್ನು ಮುಂಜಾನೆ 7 ಗಂಟೆಯಿಂದ ಸಂಜೆ 7 ಗಂಟೆಯವರೆಗೆ…

Read More

ಉಮರಜ ಶಿಥಿಲ ಶಾಲೆಗೆ ಅಪರ ಆಯುಕ್ತ ಡಾ.ಉಳ್ಳಾಗಡ್ಡಿ ಭೇಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪರಿಶೀಲನೆ | ಕೂಡಲೆ ಕ್ರಮಕ್ಕೆ ಚಡಚಣ ಬಿಇಓ ಅವರಿಗೆ ಆದೇಶ ಉದಯರಶ್ಮಿ ದಿನಪತ್ರಿಕೆ ಚಡಚಣ: ಅ.03 ಶುಕ್ರವಾರ ಚಡಚಣ ತಾಲೂಕಿನ ಕರ್ನಾಟಕ ಮಹಾರಾಷ್ಟ್ರ ಗಡಿಭಾಗದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಉಮರಜ ಶಾಲೆಗೆ ಬೆಳಗಾವಿ ವಿಭಾಗದ ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತರಾದ ಡಾ ಈಶ್ವರ ಉಳ್ಳಾಗಡ್ಡಿ ಅವರು ಸದರಿ ಶಾಲೆಯ ಕುರಿತು ಗ್ರಾಮಸ್ಥರ ದೂರು ಹಾಗೂ ನಾಗಠಾಣ ಶಾಸಕರಾದ ವಿಠ್ಠಲ ಕಟಕಧೋಂಡ ಅವರು ಗ್ರಾಮಕ್ಕೆ ಸೆ.24 ರಂದು ಉಮರಜ ಗ್ರಾಮಕ್ಕೆ ಭೇಟಿಕೊಟ್ಟು ಮಳೆಯಿಂದಾಗಿ ಶಾಲೆಯ ಕಟ್ಟಡ ಶಿಥಿಲಗೊಂಡಿದ್ದು ತಕ್ಷಣ ನಾಲ್ಕು ಹೊಸ ಕೊಣೆಗಳನ್ನು ನಿರ್ಮಿಸಿಕೊಡುವದಾಗಿ ಭರವಸೆ ಕೊಟ್ಟ ವರದಿ ’ಉದಯ ರಶ್ಮಿ’ ದಿನಪತ್ರಿಕೆಯಲ್ಲಿ ಸೆ.26 ರಂದು ಪ್ರಕಟವಾದ ಆಧಾರದ ಮೇಲೆ ಸಂದರ್ಶನ ನೀಡಿದ್ದಾರೆ ಎಂದು ತಿಳಿದುಬಂದಿದೆ.ಈ ಕುರಿತು ’ಉದಯರಶ್ಮಿ’ ಪತ್ರಿಕೆಯಲ್ಲಿ ವಿವರವಾದ ವರದಿ ಪ್ರಕಟವಾಗಿದ್ದನ್ನು ಇಲ್ಲಿ ಸ್ಮರಿಸಬಹುದು.ಈ ಸಂದರ್ಭದಲ್ಲಿ ಶಾಲೆಯಲ್ಲಿನ ಮೂಲಭೂತ ಸೌಕರ್ಯಗಳ ಕುರಿತಾಗಿ…

Read More

ಅಕ್ಟೋಬರ್ ೦೬ ರಿಂದ ೦೮ ರವರೆಗೆ ಸಿಂದಗಿಯ ಭೀಮಾಶಂಕರ ಮಠದಲ್ಲಿ ನಡೆಯುವ ’ಬಿಂದಿಗೆ ಪೂಜೆ” ಯ ಕುರಿತು ವಿಶೇಷ ಲೇಖನ ಲೇಖನ- ಪ್ರಶಾಂತ ಕುಲಕರ್ಣಿಉಪನ್ಯಾಸಕರುಶ್ರೀ ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯಸಿಂದಗಿವಿಜಯಪುರ ಜಿಲ್ಲೆಮೊ: 9745442237 ಉದಯರಶ್ಮಿ ದಿನಪತ್ರಿಕೆ ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣವು ಧಾರ್ಮಿಕ, ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪರಂಪರೆಯ ಜೀವಂತ ಪ್ರತಿರೂಪವಾಗಿದೆ. ಈ ನಾಡು ನಂಬಿಕೆಯ ಶಕ್ತಿಗೆ ಜೀವ ತುಂಬಿದ ನೆಲ. ಇಲ್ಲಿನ ಶ್ರೀಮಠವು ಶತಮಾನಗಳಿಂದ ಭಕ್ತರ ಭಾವನೆ, ಭಕ್ತಿ ಮತ್ತು ಶ್ರದ್ಧೆಯ ಕೇಂದ್ರವಾಗಿ ಉಳಿದಿದೆ. ಈ ಪವಿತ್ರ ತಾಣದಲ್ಲಿ ಪ್ರತಿ ವರ್ಷ ನಡೆಯುವ “ಬಿಂದಗಿಯ ಮಹಾತ್ಮೆ” ಎಂಬ ದಿವ್ಯ ಘಟನೆಯು, ಇಂದಿನ ವಿಜ್ಞಾನಯುಗದಲ್ಲಿಯೂ ಮಾನವನ ತರ್ಕವನ್ನು ಮೀರಿ ನಂಬಿಕೆಯ ಶಕ್ತಿಯನ್ನು ಎತ್ತಿ ತೋರಿಸುತ್ತದೆಸಿಂದಗಿಯ ಶ್ರೀಮಠವನ್ನು ಸ್ಥಾಪಿಸಿದವರು ಮಹಾನ್ ಯೋಗಿ ಶ್ರೀ ಸದ್ಗುರು ಭೀಮಾಶಂಕರ ಸ್ವಾಮಿಗಳು. ಕುಲಕರ್ಣಿಯವರ ವಂಶದಲ್ಲಿ ಜನಿಸಿದ ಅವರು ಬಾಲ್ಯದಲ್ಲೇ ಲೌಕಿಕ ಆಸೆಗಳನ್ನು ತ್ಯಜಿಸಿ ಭಕ್ತಿ ಮತ್ತು ತಪಸ್ಸಿನ ಮಾರ್ಗವನ್ನು ಆರಿಸಿಕೊಂಡರು. ಅವರ ಜೀವನದಲ್ಲಿ ತಿರುವು ತಂದದ್ದು ಅಫಜಲಪೂರ ರ…

Read More

ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆ ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಸ್ಥಿರತೆಯ ಭಾವನೆ ಕಾಡುತ್ತಿದ್ದು, ಹೀಗಾಗಿಯೇ ಇನ್ನೂ ಎರಡು ವರ್ಷಗಳ ಕಾಲ ನಾನೇ ಮುಖ್ಯಮಂತ್ರಿ ಎಂದು ಪದೇ ಪದೇ ಹೇಳುತ್ತಿದ್ದಾರೆಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಶುಕ್ರವಾರ ಹೇಳಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಸ್ಥಿರತೆಯ ಕಾರಣದಿಂದ ಸಿದ್ದರಾಮಯ್ಯ ನಾನೇ ಸಿಎಂ ಎಂದು ಪದೇ ಪದೇ ಹೇಳುತ್ತಿದ್ದಾರೆ. ನಾನೇ ಸಿಎಂ ಇರುತ್ತೇನೆಂದು ಹೇಳುವುದು ಅಸ್ಥಿರತೆಯ ಮೊದಲ ಲಕ್ಷಣ ಎಂದಿದ್ದಾರೆ. ಯಾಕೆ ಅವರಿಗೆ ವಿಶ್ವಾಸವಿಲ್ಲವಾ? ಬದುಕಿದ್ದವನು, ನಾನು ಬದುಕಿದ್ದೇನೆ ಬದುಕಿದ್ದೇನೆ ಎಂದು ಯಾಕೆ ಹೇಳುತ್ತಾನೆ. ನಾನು ಸತ್ತಿಲ್ಲ, ಬದುಕಿದ್ದೇನೆ ಅಂತ ಹೇಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವ್ಯಂಗ್ಯವಾಡಿದರು.ಜಾತಿ ಗಣತಿ ಕುರಿತು ಮಾತನಾಡಿ, ಕ್ರಾಂತಿ ಸ್ವಲ್ಪ ಆ ಕಡೆ, ಈ ಕಡೆ ಆಗಬಹುದು. ಕ್ರಾಂತಿ ಬಗ್ಗೆ ಕಾಂಗ್ರೆಸ್‌ನವರೇ ಹೇಳಿದ್ದಾರೆ. ಅದನ್ನು ತಪ್ಪಿಸಲು ಜಾತಿ ಗಣತಿ ಆರಂಭಿಸಿದ್ದಾರೆ. ಮುಜಾವರ್ ಮುಸ್ಲಿಂ ಬ್ರಾಹ್ಮಣ ಎಂದು ಸೇರಿಸಿದ್ದಾರೆ. ಅದನ್ನು ಎಲ್ಲಿಂದ ತಂದಿದ್ದಾರೆಂದು ಪ್ರಶ್ನಿಸಿದರು.ಇದೇ ವೇಳೆ ಜಿಎಸ್‌ಟಿ ಹಂಚಿಕೆಯಲ್ಲಿ ಕರ್ನಾಟಕಕ್ಕೆ…

Read More

ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಪಟ್ಟಣಕ್ಕೆ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆಗೆ ಆಗಮಿಸಿದ ಸಚಿವ ಶಿವಾನಂದ್ ಪಾಟೀಲ್ ಅವರಿಗೆ ಕೊಲ್ಹಾರ ಪಟ್ಟಣ ಅಭಿವೃದ್ಧಿ ಚಿಂತಕರ ವೇದಿಕೆಯಿಂದ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಮನವಿ ಸಲ್ಲಿಸಿ ಮಾತನಾಡಿದ ಕೊಲ್ಹಾರ ಪಟ್ಟಣ ಅಭಿವೃದ್ಧಿ ಚಿಂತಕರ ವೇದಿಕೆಯ ರಾಮಣ್ಣ ಉಪ್ಪಲದಿನ್ನಿ ಹಾಗೂ ಸಿ.ಎಂ. ಗಣಕುಮಾರ ಪಟ್ಟಣದ ಮಹಾತ್ಮ ಗಾಂಧಿ ಸರ್ಕಲ್ ಪಕ್ಕದಲ್ಲಿ ಇರುವ ಎಪಿಎಂಸಿ ಜಾಗೆಯಲ್ಲಿ ರೈತರ ಅನುಕೂಲಕ್ಕೆ ರೈತ ಭವನ ನಿರ್ಮಾಣ ಮಾಡಲು ಮತ್ತು ಪಟ್ಟಣದ ಬಸ್ ನಿಲ್ದಾಣವನ್ನು ಅಭಿವೃದ್ಧಿಪಡಿಸುವುದು. ಹಿಂದೂ ರುದ್ರ ಭೂಮಿಗೆ ಅನುದಾನ ನೀಡಿ ಶವ ಸಂಸ್ಕಾರಕ್ಕೆ ಸುಸಜ್ಜಿತವಾದ ಚಿತಾಗಾರ ನಿರ್ಮಾಣ, ರಸ್ತೆ ಡಾಂಬರೀಕರಣ, ಶೌಚಾಲಯ, ಕಾಂಪೌಂಡ್ ಸೇರಿದಂತೆ ಮೂಲಭೂತ ಸೌಲಭ್ಯ ಒದಗಿಸಿ ಮಾದರಿ ರುದ್ರಭೂಮಿಯನ್ನಾಗಿ ಮಾಡುವಂತೆ ಹಾಗೂ ಕೊಲ್ಹಾರ ಪುನರ್ವಸತಿ ಕೇಂದ್ರದಲ್ಲಿ ನಡೆಯುತ್ತಿರುವ ಕಾಮಗಾರಿಗಳು ಮತ್ತು ಮುಂದಿನ ದಿನಗಳಲ್ಲಿ ಆಗುವ ಸರ್ಕಾರಿ ಕಚೇರಿಗಳು ಮತ್ತು ವಿವಿಧ ಕಾಮಗಾರಿಗಳು ಮುಂದಿನ ಬೆಳವಣಿಗೆ ದೃಷ್ಟಿಯಿಂದ ವೈಜ್ಞಾನಿಕವಾಗಿ ಮಾಡಲು ಸೂಚಿಸುವಂತೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ದಿಗಂಬರೇಶ್ವರ…

Read More

ಯೋಜನೆಯಲ್ಲಿ ಅಕ್ರಮವೆಸಗಿದ ರಾಜಕಾರಣಿಗಳು, ಅಧಿಕಾರಿಗಳು ಮತ್ತು ಕಾಂಟ್ರ್ಯಾಕ್ಟರ್ | ರೈತರೊಂದಿಗೆ ಸೇರಿ ದೊಡ್ಡ ಮಟ್ಟದ ಹೋರಾಟದ ನಿರ್ಧಾರ ಉದಯರಶ್ಮಿ ದಿನಪತ್ರಿಕೆ ಚಡಚಣ: ಈ ಭಾಗದ ೭ ಹಳ್ಳಿಗಳ ರೈತರ ಆಶಾ ಕೀರಣವಾಗಿದ್ದ ಚಡಚಣ ಏತ ನೀರಾವರಿ ಯೋಜನೆ ಕಾರ್ಯರೂಪಕ್ಕೆ ಬರದಿದ್ದರೆ ಚಡಚಣ ಭಾಗದಲ್ಲಿ ರೈತರೊಂದಿಗೆ ಹೋರಾಟ ಪ್ರಾರಂಭಿಸುವದಾಗಿ ಸಂಸದ ರಮೇಶ ಜಿಗಜಣಗಿ ಸರಕಾರಕ್ಕೆ ಎಚ್ಚರಿಕೆ ನೀಡಿದರು.ಚಡಚಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸುಮಾರು ೫೦೦ ಕೋಟಿ ವೆಚ್ಚದ ಯೋಜನೆಯನ್ನು ಸಂಪೂರ್ಣವಾಗಿ ಹಳ್ಳ ಹಿಡಿಸಲಾಗಿದೆ.. ರೈತರ ಜಮೀನುಗಳಿಗೆ ಒಂದು ಹನಿ ನೀರು ಹರೆದಿಲ್ಲ. ಆದರೆ ಈ ಯೋಜನೆ ಪೂರ್ಣಗೊಂಡಿದೆ ಎಂದು ಸರಕಾರದ ಮಟ್ಟದಲ್ಲಿ ಮಾಹಿತಿ ನೀಡಲಾಗಿದೆ. ಸುಮಾರು ೨೨೭೫೧ ಎಕರೆ ಜಮೀನುಗಳಿಗೆ ನೀರು ನೀಡುವ ಬೃಹತ ಯೋಜನೆ ಇದಾಗಿತ್ತು. ಆದರೆ ರಾಜಕಾರಣಿಗಳು, ಅಧಿಕಾರಿಗಳು ಮತ್ತು ಕಾಂಟ್ರ್ಯಾಕ್ಟರ ಸೇರಿ ಯೋಜನೆಯನ್ನು ಪೇಪರನಲ್ಲಿ ಪೂರ್ಣಗೊಳಿಸಿ ಹಣ ಲೂಟಿ ಮಾಡಿದ್ದಾರೆ. ಈ ಹಣ ಯಾರಪ್ಪನದು, ಸಾರ್ವಜನಿಕರ ದುಡ್ಡನ್ನು ಗುಳುಂ ಮಾಡಿರುವವರಿಗೆ ಇದು ಎಚ್ಚರಿಕೆ. ಈ ಯೋಜನೆ ಚಡಚಣ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಪವಿತ್ರ ಪುಷ್ಪಗಳಿಂದ ರೂಪಿಸಲಾದ ಬೃಹತ್ ಗಾತ್ರದ ಪಂಚ ಝೇಲಾಗಳು (ವೃತ್ತಾಕಾರದ ಪುಷ್ಪಾಲಂಕಾರ).. ಮುಗಿಲು ಮುಟ್ಟಿದ ನಾರಾಯೇ ತಕ್ಬೀರ್ ಅಲ್ಲಾಹು ಅಕ್ಬರ್ ಎಂಬ ಪವಿತ್ರ ಉದ್ಘೋಷ.. ಮಾನವೀಯತೆಯ ತತ್ವಗಳನ್ನು ಸಾರಿದ ಹಜರತ್ ಗೌಸ್ ಏ ಅಜಂ ಅವರ ಸ್ಮರಣೆ ಹಾಗೂ ಸರ್ವಧರ್ಮ ಸಮನ್ವಯತೆಯ ಕೇಂದ್ರವಾಗಿರುವ ಹಜರತ್ ಅರ್ಕಾಟ್ ದರ್ಗಾದ ಉರುಸು ಪ್ರಯುಕ್ತ ಶನಿವಾರ ಭವ್ಯ ಭಕ್ತಿ-ಸದ್ಭಾವ ಯಾತ್ರೆಯಲ್ಲಿ ಕಂಡು ಬಂದ ದೃಶ್ಯಗಳಿವು.ಅರ್ಕಾಟ್ ದರ್ಗಾದ ಸಜ್ಜಾದೆ ನಶೀನ್ ಸೈಯ್ಯದ್ ಇಕ್ಬಾಲ್ ಪೀರಾ ಹಾಗೂ ಡಾ.ತಖೀಪೀರಾ ಹುಸೈನಿ ಅವರ ನೇತೃತ್ವದಲ್ಲಿ ನಡೆದ ಈ ಯಾತ್ರೆಯಲ್ಲಿ ಸಾವಿರಾರು ಸಂಖ್ಯೆಯ ಯುವಕರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು `ನಾರಾಯೇ ತಕ್ಬೀರ್ ಅಲ್ಲಾಹು ಅಕ್ಬರ್’ ಎಂದು ಭಕ್ತಿಭಾವದಿಂದ ಘೋಷಣೆ ಮೊಳಗಿಸುತ್ತಾ, ಪವಿತ್ರ ಧ್ವಜಗಳನ್ನು ಕೈಯಲ್ಲಿ ಹಿಡಿದು ಮೆರವಣಿಗೆಯಲ್ಲಿ ಪಾಲ್ಗೊಂಡರು.ಜಾಮೀಯಾ ಮಸಜೀದ, ಶಹಾಪೇಟಿ, ಶಹಾಪೂರ ದರ್ವಾಜಾ, ಮದೀನಾ ನಗರ, ಬಡಿಕಮಾನ್ ಹೀಗೆ ನಾನಾ ಭಾಗಗಳಿಂದ ಭಕ್ತಾದಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡರು.ವಿಜಯಪುರ ಅಷ್ಟೇ ಅಲ್ಲದೇ ಬಾಗಲಕೋಟ, ಬೆಳಗಾವಿ, ಕಲಬುರ್ಗಿ,…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ಅತಿವೃಷ್ಟಿ, ಅನಾವೃಷ್ಟಿ ಹಾಗೂ ಬೆಳೆ ಹಾನಿ ಪ್ರದೇಶಗಳ ಭೇಟಿಯ ಸಲುವಾಗಿ, ಇಂಡಿ ತಾಲ್ಲೂಕಿನ ಮಿರಗಿ ಗ್ರಾಮಕ್ಕೆ ಭೇಟಿ ನೀಡಿದಾಗ ಪ್ರವಾಹದ ಪರಿಣಾಮವಾಗಿ ಜಲಾವೃತವಾಗಿ ಹಾನಿಯಾದ ಸೂರ್ಯಕಾಂತಿ ಬೆಳೆಯನ್ನು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ, ಸಂಸದ ಪಿ.ಸಿ ಗದ್ದಿಗೌಡರ್, ರಮೇಶ ಜಿಗಜಿಣಗಿ, ವಿಧಾನ ಪರಿಷತ್ತಿನ ಮುಖ್ಯ ಸಚೇತಕರಾದ ಎನ್.ರವಿಕುಮಾರ, ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಸೇರಿದಂತೆ ಬಿಜೆಪಿ ಜಿಲ್ಲಾ ಮುಖಂಡರು ಹಾನಿಯಾದ ಬೆಳೆ ವೀಕ್ಷಿಸಿದರು.

Read More

ಅನುದಾನ ಮಂಜೂರಿಸಲು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಶಿಫಾರಸ್ಸು ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸನ್ 2021-22ನೇ ಸಾಲಿನ ಕೇಂದ್ರ ಪುರಷ್ಕೃತ ಅಮೃತ 2.0 ಯೋಜನೆಯಡಿ ವಿಜಯಪುರ ನಗರ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ವಿವಿಧ ಕಾಲೊನಿ/ಬಡಾವಣೆಗಳ ಉದ್ಯಾನವನಗಳ ಅಭಿವೃದ್ಧಿ ಕಾಮಗಾರಿಗಳಿಗೆ ರೂ.4.10 ಕೋಟಿ ಅನುದಾನ ಬಿಡುಗಡೆಯಾಗಿದೆ.2022 ರ ಜುಲೈ 17 ರಂದು ಉದ್ಯಾನಗಳ ಅಭಿವೃದ್ಧಿಗಾಗಿ ಅನುದಾನ ಮಂಜೂರಿಸಲು ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ರವರು ಶಿಫಾರಸ್ಸು ಮಾಡಿದ್ದರು. ಅದರಂತೆ ಈಗ ನಗರದ ವಾರ್ಡ್ ನಂ.6ರ ಅಲಕುಂಟೆ ನಗರದ ಸಿದ್ದಿವಿನಾಯಕ ಗುಡಿ ಹತ್ತಿರದ ಉದ್ಯಾನವನ ಅಭಿವೃದ್ಧಿಗೆ ರೂ.30 ಲಕ್ಷ, ವಾರ್ಡ್ ನಂ.35ರ ಗಿರಿಮಲ್ಲೇಶ್ವರ ಕಾಲೊನಿಯಲ್ಲಿ ಉದ್ಯಾನವನ ಅಭಿವೃದ್ಧಿಗೆ ರೂ.50 ಲಕ್ಷ ಹಾಗೂ ಭವಾನಿ ನಗರದಲ್ಲಿ ಉದ್ಯಾನವನ ಅಭಿವೃದ್ಧಿಗೆ ರೂ.50 ಲಕ್ಷ, ವಾರ್ಡ್ ನಂ.29ರ ವಜ್ರಹನುಮಾನ ನಗರದಲ್ಲಿ ಉದ್ಯಾನವನ ಅಭಿವೃದ್ಧಿಗೆ ರೂ.40 ಲಕ್ಷ, ವಾರ್ಡ್ ನಂ.21ರ ನಂದಿನಿ ಬಡಾವಣೆಯ ಗುರುಪಾದೇಶ್ವರ ನಗರದ ಉದ್ಯಾನವನ ಅಭಿವೃದ್ಧಿಗೆ ರೂ.60 ಲಕ್ಷ, ವಜ್ರಹನುಮಾನ ಉದ್ಯಾನವನ (2) ಅಭಿವೃದ್ಧಿಗೆ…

Read More