Author: editor.udayarashmi@gmail.com

ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನರೇಗಾ ಯೋಜನೆ ಹೆಸರು ಬದಲಾವಣೆ ವಿಷಯದ ವಿರುದ್ಧ ವಿಶೇಷ ಅಧಿವೇಶನ ಕರೆಯುತ್ತಿರುವುದು ಸರಿಯಲ್ಲ, ಅದಕ್ಕಿಂತಲೂ ಪ್ರಮುಖವಾದ ಒಳ ಮೀಸಲಾತಿ ಲೋಪದೋಷ ಸರಿಪಡಿಸಲು, ಖಾಲಿ ಇರುವ ಹುದ್ದೆ ಭರ್ತಿ ಮೊದಲಾದ ಮಹತ್ವದ ವಿಷಯಗಳ ಬಗ್ಗೆ ಚರ್ಚೆ ಮಾಡಲು ವಿಶೇಷ ಅಧಿವೇಶನ ಕರೆಯಿರಿ. ಅದನ್ನು ಬಿಟ್ಟು ರಾಜಕೀಯ ಉದ್ದೇಶ ಇರಿಸಿಕೊಂಡು ವಿಶೇಷ ಅಧಿವೇಶನ ಕರೆಯುತ್ತಿರುವುದು ಯಾವ ಕಾರಣಕ್ಕೂ ಸರಿಯಲ್ಲ ಎಂದು ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ ಹೇಳಿದ್ದಾರೆ.ಈ ಗುರುವಾರ ಕುರಿತು ಪತ್ರಿಕಾ ಹೇಳಿಕೆಯ ಮೂಲಕ ಸರ್ಕಾರದ ನಡೆಯನ್ನು ಖಂಡಿಸಿರುವ ಅವರು, ದಿ.೨೨ ರಿಂದ ದಿ.೩೧ ರವರೆಗೆ ವಿಶೇಷ ಅಧಿವೇಶನ ಕರೆಯಲು ಸರ್ಕಾರ ಮುಂದಾಗಿದೆ, ರಾಜ್ಯದಲ್ಲಿ ಗಂಭೀರವಾದ ಸಮಸ್ಯೆಗಳಿವೆ, ಪ್ರಮುಖವಾಗಿ ಒಳ ಮೀಸಲಾತಿ ವಿಷಯವಾಗಿ ಆಗಿರುವ ಗೊಂದಲಗಳ ನಿವಾರಣೆಗಾಗಿ, ರಾಜ್ಯದಲ್ಲಿ ಖಾಲಿ ಇರುವ ೨.೭೩ ಲಕ್ಷ ಹುದ್ದೆ ಭರ್ತಿಯ ಬಗ್ಗೆ ಮಹತ್ವದ ತೀರ್ಮಾನ…

Read More

ವಿಜಯಪುರದಲ್ಲಿ ಆಹಾರ ಹಾಗೂ ಪೊಲೀಸ್ ಇಲಾಖೆಗಳ ಜಂಟಿ ಕಾರ್ಯಾಚರಣೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿಜಯಪುರ ನಗರದ ಗೋಲ್ ಗುಂಬಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಹಿಂಭಾಗದ ಹಳೆಯ ಪಾಳುಬಿದ್ದ ಮನೆಯಲ್ಲಿ ಗೃಹ ಬಳಕೆ ಸಿಲಿಂಡರ್ ಬಳಸಿ ಅಕ್ರಮವಾಗಿ ವಾಣಿಜ್ಯ ಬಳಕೆಯ ಸಿಲಿಂಡರ್ ತುಂಬಿಸುತ್ತಿದ್ದ ಸ್ಥಳಕ್ಕೆ ಆಹಾರ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಜಂಟಿ ದಾಳಿ ನಡೆಸಿ,೪೧ ಗೃಹ ಬಳಕೆ ಸಿಲಿಂಡರ್ , ೨೧ ವಾಣಿಜ್ಯ ಬಳಕೆ ಸಿಲಿಂಡರ್, ಮೋಟಾರ್ ಯಂತ್ರ ಮತ್ತು ತೂಕದ ಯಂತ್ರಗಳನ್ನು ವಶಕ್ಕೆ ಪಡೆದುಕೊಂಡು, ಗೋಲ್ ಗುಂಬಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.ದಾಳಿಯ ಸಂದರ್ಭದಲ್ಲಿ ಆಹಾರ ನಿರೀಕ್ಷಕ ವಿಜಯಕುಮಾರ ಗುಮಶೆಟ್ಟಿ ಹಾಗೂ ಗೋಲ್ ಗುಂಬಜ್ ಠಾಣೆ ಪಿಎಸ್‌ಐ ಎಮ್.ಡಿ.ಘೋರಿ, ಎಎಸ್‌ಆಯ್ ಎ.ಎ. ಹಾದಿಮನಿ, ಪೊಲೀಸ್ ಸಿಬ್ಬಂದಿಗಳಾದ ಗೋಪಾಲ ದಾಸರ, ಮಹಾದೇವ ಅಡಿಹುಡಿ, ಬಿ.ಬಿ. ಮಖನಾಪುರ, ಕುಶ ರಾಠೋಡ್, ಮಲ್ಲಿಕಾರ್ಜುನ ಚಾವರ್, ಮೌನೇಶ್ ನೆಲವಾಸಿ, ಅಪ್ಪು ಕೋಟ್ಯಾಳ ಭಾಗವಹಿಸಿದ್ದರು ಎಂದು ಆಹಾರ ಇಲಾಖೆಯ ಉಪ ನಿರ್ದೇಶಕ…

Read More

ಲೇಖನ- ಶ್ರೀಮತಿ ಗಿರಿಜಾ ಸಂತೋಷ ಪಾಟೀಲಹವ್ಯಾಸಿ ಬರಹಗಾರರುಬಸವನಬಾಗೇವಾಡಿ ಉದಯರಶ್ಮಿ ದಿನಪತ್ರಿಕೆ ಬೆರೆತು ಅರಿತು ಬದುಕುವದರಲ್ಲಿ ಬದುಕಿಗೊಂದು ಅರ್ಥವಿದೆ. ನಾವೆಲ್ಲರೂ ಒಂದೇ ಎನ್ನುವ ಭಾವದಲ್ಲಿ ಬದುಕಿದೆ. ಬದುಕಿನ ಆನಂದ ನಾವು ಆಚರಿಸುವ ಹಬ್ಬಗಳಲ್ಲಿದೆ.ಹಬ್ಬಗಳು ಆಗಾಗ ಸುಮ್ಮನೆ ಹಾಯ್ದುಹೋಗುವ ಗಾಳಿಯಂತಲ್ಲ , ನಮ್ಮ ಬದುಕು ಕಟ್ಟಿಕೊಡುವ, ಬಾಂಧವ್ಯ ಗಟ್ಟಿಗೊಳಿಸುವ ದಿವ್ಯ ಅಸ್ತ್ರ. ಜಗತ್ತಿನಲ್ಲೇ ಭಾರತ ದೇಶ ಬಲು ವಿಶೇಷ. ಇಲ್ಲಿರುವ ಧಾರ್ಮಿಕ ಆಚರಣೆ, ಹಬ್ಬಗಳ ಸಡಗರ, ಗುರುಭಕ್ತಿ , ಸಂಸ್ಕೃತಿ , ಸಂಪ್ರದಾಯ ಭಾರತಕ್ಕೆ ವಿಶೇಷ ಕಳೆ ತಂದಿದೆ. ನಾನು ಭಾರತೀಯ ಎಂದು ಕೂಗಲು ಕೂಡಾ ಪೂರ್ವ ಜನ್ಮದ ಪುಣ್ಯ ಬೇಕು. ಭಾರತ ಹಳ್ಳಿಗಳ ದೇಶ , ಹಬ್ಬಗಳ ದೇಶ. ಪ್ರತಿ ಪ್ರಮುಖ ಹಬ್ಬದಲ್ಲೂ ಬರೀ ಸಂಸ್ಕೃತಿ, ಸಂಪ್ರದಾಯ ಅಷ್ಟೇ ಇಲ್ಲಾ. ವೈಜ್ಞಾನಿಕ ಕಾರಣವು ಇದರೊಂದಿಗೆ ಬೆರೆತಾಗಿದೆ. ಆದ್ದರಿಂದಲೇ ಜ್ಞಾನ, ವಿಜ್ಞಾನ, ತಂತ್ರಜ್ಞಾನ ಹೆಚ್ಚಾದರೂ ಹಬ್ಬಗಳಲ್ಲಿ ಇನ್ನೂ ಜೀವಂತಿಕೆ ಇದೆ. ಬ್ರಹ್ಮಾಂಡದ ಪ್ರತಿ ಚಲನೆ, ಪ್ರತಿ ಬದಲಾವಣೆ ಕೂಡ ನಮ್ಮ ಬದುಕುಗಳ ಮೇಲೆ ಅಗಾಧವಾದ…

Read More

ವಿಜಯಪುರದಲ್ಲಿ ಸಂಸದ ರಮೇಶ ಜಿಗಜಿಣಗಿ ಕಾಂಗ್ರೆಸ್ ವಿರುದ್ಧ ಟೀಕಾ ಪ್ರಹಾರ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ದೇಶಕ್ಕೆ ಸ್ವಾತಂತ್ರ್ಯ ದೊರಕಿದ ಬಳಿಕ ಕಾಂಗ್ರೆಸ್ ವಿಸರ್ಜನೆ ಮಾಡಬೇಕು ಎಂದು ಮಹಾತ್ಮಾ ಗಾಂಧೀಜಿ ಹೇಳಿದ್ದರು, ಆದರೆ ಕಾಂಗ್ರೆಸ್‌ನವರು ಗಾಂಧೀಜಿ ಅವರ ಆಶಯದಂತೆ ನಡೆದುಕೊಂಡರೇ? ಅವರ ಒಂದೇ ಒಂದು ಕನಸನ್ನು ಕಾಂಗ್ರೆಸ್ ನನಸು ಮಾಡಿಲ್ಲ, ಅಶಿಸ್ತಿನ ರೀತಿಯಲ್ಲಿ ಅಂಗಿ-ಚಡ್ಡಿ ಹಾಕುವ ಹುಡುಗನಿಂದ ಕಾಂಗ್ರೆಸ್ ನಾಯಕತ್ವನ್ನು ಯಾರು ಒಪ್ಪಿಕೊಳ್ಳುತ್ತಾರೆ, ಈ ಕಾಂಗ್ರೆಸ್ ಸರ್ವನಾಶವಾಗುತ್ತದೆ ಎಂದು ಸಂಸದ ರಮೇಶ ಜಿಗಜಿಣಗಿ ಕಾಂಗ್ರೆಸ್ ಪಕ್ಷದ ವಿರುದ್ಧ ಖಾರವಾದ ಶಬ್ದಗಳಲ್ಲಿ ವಾಗ್ದಾಳಿ ನಡೆಸಿದರು.ಬಿಜೆಪಿ ನರೇಗಾ ಯೋಜನೆಯ ಹೆಸರು ಬದಲಿಸಿ ಗಾಂಧೀಜಿ ಅವರ ಆಶಯಗಳನ್ನು ಮೂಲೆಗುಂಪು ಮಾಡಲಾಗುತ್ತಿದೆ ಎಂಬ ಕಾಂಗ್ರೆಸ್ ನಾಯಕರ ಆರೋಪಕ್ಕೆ ತೀಕ್ಷ್ಣವಾದ ಪ್ರತಿಕ್ರಿಯೆ ನೀಡಿದ ಸಂಸದ ಜಿಗಜಿಣಗಿ ಅನೇಕ ಸವಾಲುಗಳನ್ನು ಕೇಳುವ ಮೂಲಕ ಕಾಂಗ್ರೆಸ್ ವಿರುದ್ಧ ಟೀಕಾ ಪ್ರಹಾರ ನಡೆಸಿದರು.ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯಗಳನ್ನು ಕುರಿತು ಮಾತನಾಡಿದ ಅವರು, ಗಾಂಧೀಜಿ, ಡಾ.ಅಂಬೇಡ್ಕರ ಅವರಂತಹ ಮಹಾನ್ ಚೇತನರನ್ನು ಅವಮಾನ ಮಾಡಿದ್ದೆ ಕಾಂಗ್ರೆಸ್, ಈಗ…

Read More

ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಮುಲ್ಕಿ ಪರೀಕ್ಷೆಯಲ್ಲಿ ಜಿಲ್ಲೆಯಲ್ಲೇ ಪ್ರಥಮ ಸ್ಥಾನ ಗಳಿಸಿ ಆಯುರ್ವೇದ ಹಾಗೂ ಯುನಾನಿ ವೈದ್ಯಕೀಯ ಪದ್ಧತಿ ಶಿಕ್ಷಣ ಪಡೆದು ಹಳೆ ಕೊಲ್ಹಾರದಲ್ಲಿ ಬಡವರಿಗೆ ಉಚಿತವಾಗಿ ವೈದ್ಯಕೀಯ ಸೇವೆಸಲ್ಲಿಸುವ ಮೂಲಕ ಬಡವರ ವೈದ್ಯರೆಂದೇ ಖ್ಯಾತರಾಗಿದ್ದಡಾ.ಬಸಯ್ಯ ಈರಯ್ಯ ಗಣಕುಮಾರಮಠ ಅವರ 10ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ ಜ.15ರಂದು ಬೆಳಿಗ್ಗೆ 10 ಗಂಟೆಗೆ ಪಟ್ಟಣದ ಯುಕೆಪಿ ಬಳಿಯಿರುವ ಗುರುಲಿಂಗಪ್ಪ ಬಾಟಿಯವರ ತೋಟದಲ್ಲಿ ನಡೆಯಲಿದೆ.1935 ಜುಲೈ 1 ರಂದು ಜನಿಸಿದ ಇವರು ವೈದ್ಯಕೀಯ ಸೇವೆಯ ಜೊತೆ ಜೊತೆಗೆ ತಮ್ಮನ್ನು ತಾವು ಹೆಚ್ಚಾಗಿ ಗ್ರಾಮದ ಹಾಗೂ ಗ್ರಾಮಸ್ಥರ ಒಳತಿಗಾಗಿ ಸದಾ ಸಮಾಜಮುಖಿ ಸೇವೆಗಳಲ್ಲಿಯೇ ತೊಡಗಿಸಿಕೊಳ್ಳುತ್ತಿದ್ದರು. 10 ವರ್ಷಗಳ ಕಾಲ ಗ್ರಾ.ಪಂ.ಸದಸ್ಯರಾಗಿ ಗ್ರಾಮದ ಸರ್ವಾಂಗಿನ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ.ಅಲ್ಲದೇ ಸಂಘ ಪರಿವಾರದಲ್ಲಿ ಗುರುತಿಸಿಕೊಂಡು ಸುಮಾರು 38 ವರ್ಷಗಳ ಕಾಲ ಆರ್ ಎಸ್ ಎಸ್ ಬಸವ ಬಾಗೇವಾಡಿ ತಾಲೂಕಿನ ಸಂಘ ಚಾಲಕರಾಗಿದ್ದರು. ಇವರು 1967 ರಲ್ಲಿ ಬಸವನ ಬಾಗೇವಾಡಿ ಮತಕ್ಷೇತ್ರದಿಂದ 1972 ರಲ್ಲಿ ಹೂವಿನ ಹಿಪ್ಪರಗಿ ಮತಕ್ಷೇತ್ರಗಳಿಂದ ಜನಸಂಘದ ಅಭ್ಯರ್ಥಿಯಾಗಿಯೂ…

Read More

ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ ಭೇಟಿ | ರೈತರ ಮನವೊಲಿಕೆಗೆ ಪ್ರಯತ್ನ ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಮುಳವಾಡ ಕೆಐಡಿಬಿಗೆ ಭೂಮಿ ಕಳೆದುಕೊಂಡ ಭೂ ಹಿತರಕ್ಷಣಾ ನಿರಾಶ್ರಿತರ ರೈತ ಸಂಘದಿಂದ ತಹಶೀಲ್ದಾರ ಕಚೇರಿ ಎದುರುಗಡೆ ಹಮ್ಮಿಕೊಂಡ 10 ನೇ ದಿನದ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ ಭೇಟಿ ನೀಡಿದರು.ಅಪರ ಜಿಲ್ಲಾಧಿಕಾರಿಗಳು ಉಪವಾಸ ಸತ್ಯಾಗ್ರಹ ನಿರತ ರೈತರೊಂದಿಗೆ ಚರ್ಚಿಸಿ ಮನವೊಲಿಸಲು ಪ್ರಯತ್ನಿಸಿದರು. ಆದರೆ ರೈತರು ತಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೆ ಸತ್ಯಾಗ್ರಹವನ್ನು ಹಿಂಪಡೆದುಕೊಳ್ಳಲು ನಿರಾಕರಿಸಿದರು.ಈ ವೇಳೆ ರೈತರಾದ ಶರಣು ಅಂಗಡಿಯವರು ಕೆಐಡಿಬಿ ಯವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೆಐಡಿಬಿಗೆ ಭೂಮಿ ಕಳೆದುಕೊಂಡ ರೈತರಿಗೆ ಯೋಗ್ಯವಾದ ಬೆಲೆ ನೀಡುತ್ತಿಲ್ಲ. ನಮ್ಮ ಭೂಮಿಗೆ ಪರಿಹಾರ ನೀಡದೆ ಜಮೀನಿನ ಪಹಣಿ ಪತ್ರದಲ್ಲಿ ಹೆಸರನ್ನು ಕಡಿಮೆ ಮಾಡಿದ್ದಾರೆ ಇದರಿಂದ ಬಹಳಷ್ಟು ಅನ್ಯಾಯವಾಗಿದೆ. ಜೆಎಂಸಿ ಆಧಾರದ ಮೇಲೆ ಜಮೀನುಗಳಲ್ಲಿದ್ದ ಗಿಡ ಮರಗಳಿಗೆ ಸರಿಯಾದ ಪರಿಹಾರ ನೀಡದೆ ಲಂಚ ಪಡೆದು ಕೆಲವರಿಗೆ ಹೆಚ್ಚು ಹಾಗೂ ಕೆಲವರಿಗೆ ಕಡಿಮೆ ಹಣ…

Read More

ಉದಯರಶ್ಮಿ ದಿನಪತ್ರಿಕೆ ಬಬಲೇಶ್ವರ: ಪಟ್ಟಣದ ಸರ್ಕಾರಿ ಕನ್ನಡ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲೆಯಲ್ಲಿ, ಹಸಿ ಕಸ ಮರದಿಂದ ಉದುರಿದ ಎಲೆ, ಮಧ್ಯಾಹ್ನ ಬಿಸಿ ಊಟ ತಯಾರಿಕಾ ಕೋಣೆಯಲ್ಲಿ ಉತ್ಪತ್ತಿಯಾಗುವಂತಹ ಹಸಿ ಕಸವನ್ನು ಮತ್ತು ಉಳಿದಿರುವಂತಹ ನಿರುಪಯುಕ್ತ ಆಹಾರವನ್ನು ಹಾಗೂ ಶಾಲೆಯ ಆವರಣದಲ್ಲಿ ಬಿದ್ದಿರುವ ಮರದ ಎಲೆಗಳನ್ನು ಮತ್ತು ಇತ್ಯಾದಿ ಹಸಿ ಕಸವನ್ನು ಉಪಯೋಗಿಸಿಕೊಂಡು ಪೈಪ್ ಕಾಂಪೋಸ್ಟಿಂಗ್ ಮುಖಾಂತರ ಸಾವಯುವ ರಸಗೊಬ್ಬರವನ್ನು ತಯಾರಿಸುವ ವಿಧಾನಕ್ಕೆ ಬಬಲೇಶ್ವರ ಪಟ್ಟಣ ಪಂಚಾಯಿತಿಯ ಮುಖ್ಯ ಅಧಿಕಾರಿಗ ಪ್ರೀತಿ ಗಡೆದ ರವರು ಚಾಲನೆಯನ್ನು ನೀಡಿ ಮಾತನಾಡಿದರು.ಶಾಲೆಯ ಮಕ್ಕಳಿಗೆ ಮೂಲದಲ್ಲಿಯೇ ಹಸಿ ಕಸ ಮತ್ತು ಒಣ ಕಸ ವಿಂಗಡಣೆ ಕುರಿತು ಜಾಗೃತಿಯನ್ನು ಮೂಡಿಸಿದರು. ಪ್ರಕೃತಿ ನಮಗೆ ಹಲವಾರು ಕೊಡುಗೆಗಳನ್ನು ನೀಡಿದೆ. ನಾವು ಪ್ರಕೃತಿಗೆ ಏನಾದರೂ ಒಳ್ಳೆಯದನ್ನು ಮಾಡಬೇಕಿದ್ದರೆ ಸ್ವಚ್ಛತೆಯ ಬಗ್ಗೆ ಗಮನಹರಿಸಬೇಕು. ನಾವು ಎಲ್ಲೆಂದರಲ್ಲಿ ಕಸವನ್ನು ಬಿಸಾಡದೇ ಪಟ್ಟಣ ಪಂಚಾಯಿತಿಯ ವಾಹನಗಳಿಗೆ ಕಸವನ್ನು ಮೂಲದಲ್ಲಿಯೇ ವಿಂಗಡಿಸಿ ಕೊಡಬೇಕು ಎಂದು ಹೇಳಿದರು. ಕಸದಿಂದ ರಸ ಎನ್ನುವ ಮಾತಿನಂತೆ ನಾವು…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಹೊಸದಾಗಿ ನಿರ್ಮಾಣವಾಗುತ್ತಿರುವ ಗುಬ್ಬೇವಾಡ ವಿದ್ಯುತ್ ವಿತರಣಾ ಕೇಂದ್ರದಿಂದ ಯಂಕಂಚಿ ವಿತರಣಾ ಕೇಂದ್ರದವರೆಗೆ ವೈಯರ್ ಎಳೆಯುವ ಕಾಮಗಾರಿ ಹಮ್ಮಿಕೊಂಡಿರುವ ಕೆವಿಪ್ರನಿನಿ ಯೋಜನೆ ಉಪವಿಭಾಗ-೨ರ ಗೋಲಗೇರಿ ೩೩ಕೆವ್ಹಿ ಮಾರ್ಗದಲ್ಲಿ ವಿದ್ಯುತ್ ವ್ಯತ್ಯಯವಾಗಿರುವುದರಿಂದ ಸದರಿ ೩೩/೧೧ಕೆವ್ಹಿ ಗೋಲಗೇರಿ ವಿದ್ಯುತ್ ವಿತರಣಾ ಕೇಂದ್ರದ ಮೇಲೆ ಬರುವ ಎಲ್ಲಾ ೧೧ಕೆವ್ಹಿ ಮಾರ್ಗಗಳಲ್ಲಿ ಜ.೧೬ರಂದು ಮಧ್ಯಾಹ್ನ ೧೨:೦೦ ರಿಂದ ಸಾಯಂಕಾಲ ೦೫:೦೦ಗಂಟೆವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಸದರಿ ಮಾರ್ಗಗಳ ಮೇಲೆ ಬರುವ ಗ್ರಾಹಕರು ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದು ಸಿಂದಗಿ ಹೆಸ್ಕಾಂ ಉಪವಿಭಾಗದ ಸಹಾಯಕ ನಿರ್ವಾಹಕ ಅಭಿಯಂತರರು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

Read More

ಮುಂಬರುವ ಜಯಂತಿಗೆ ಪುತ್ಥಳಿ ಅನಾವರಣ | ಶಾಸಕ ಅಶೋಕ ಮನಗೂಳಿ ಭರವಸೆ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಭೋವಿ ಸಮಾಜದ ಬಹುದಿನದ ಬೇಡಿಕೆಯಂತೆ ಮುಂದಿನ ವರ್ಷ ಸಿದ್ಧರಾಮೇಶ್ವರ ಜಯಂತಿಗೆ ವೃತ್ತ ನಿರ್ಮಾಣ ಮತ್ತು ಪುತ್ಥಳಿ ಅನಾವರಣ ಮಾಡಿಕೊಡಲಾಗುವುದು ಎಂದು ಶಾಸಕ ಅಶೋಕ ಮನಗೂಳಿ ಭರವಸೆ ನೀಡಿದರು.ಸಿಂದಗಿ ತಾಲೂಕು ಆಡಳಿತ ಸೌಧದಲ್ಲಿ ಕಂದಾಯ ಇಲಾಖೆ ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಂಡ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ದೇಶ ಶರಣ ಸಂತರ ನಾಡು. ಶರಣರು ಅನೇಕ ವಿಚಾರಗಳನ್ನು ಮುಂದಿನ ಪೀಳಿಗೆಗೆ ಬಿಟ್ಟು ಹೋಗಿದ್ದಾರೆ. ಆದರೆ ಇಂದಿನ ಯುವಕರು ಶರಣರ ಸಂತರ ವಿಚಾರಗಳನ್ನು ಬದುಕಿನಲ್ಲಿ ಅಳವಡಿಕೊಳ್ಳದೇ ಇರುವುದು ನೋವಿನ ಸಂಗತಿ. ಅವುಗಳನ್ನು ಇಂದಿನ ಜನಾಂಗಕ್ಕೆ ಉಪನ್ಯಾಸಗಳ ಮುಖೇನ ಪರಿಚಯಿಸುವ ಕಾರ್ಯವಾಗಬೇಕು. ಶರಣರ ತತ್ವಾದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.ಈ ವೇಳೆ ಶ್ರೀ ಪದ್ಮರಾಜ ಮಹಿಳಾ ಕಾಲೇಜಿನ ಉಪನ್ಯಾಸಕ ಗಿರೀಶ ಕುಲಕರ್ಣಿ ಉಪನ್ಯಾಸ ನೀಡಿ, ಬಸವಣ್ಣನವರ ಅನುಭವ ಮಂಟಪದಲ್ಲಿ ಮೂರನೇ ಪೀಠಾಧ್ಯಕ್ಷರಾಗಿ ಕಾರ್ಯನಿರ್ವಹಿಸಿ ಮನುಜ…

Read More

ಅದ್ಧೂರಿ ಪಲ್ಲಕ್ಕಿ ಉತ್ಸವ | ೧೫೧ ಹಂಡೆ ರುಚಿಕಟ್ಟಾದ ಬಜ್ಜಿ ಪಲ್ಯೆ ತಯಾರಿಕೆ | ಗುರು ಶಿಷ್ಯರ ಬಾಂಧವ್ಯಕ್ಕೆ ಸಾಕ್ಷಿಯಾದ ಭಕ್ತರು ಉದಯರಶ್ಮಿ ದಿನಪತ್ರಿಕೆ ಸಿಂದಗಿ: ತಾಲೂಕಿನ ಆಹೇರಿ ಗ್ರಾಮದಲ್ಲಿರುವ ಗಂಗಾಧರೇಶ್ವರರ ಜಾತ್ರೆ ಪ್ರತಿವರ್ಷದಂತೆ ಈ ವರ್ಷವೂ ಸಂಕ್ರಮಣದ ಬುಧವಾರ ದಿನವೇ ಭಕ್ತರ ದರ್ಶನದಿಂದ ಜಾತ್ರೆ ವಿಜೃಂಭಣೆಯಿಂದ ನಡೆಯಿತು.ಸಿಂದಗಿ ತಾಲೂಕಿನ ಆಹೇರಿ ಗ್ರಾಮದಲ್ಲಿರುವ ಗಂಗಾಧರೇಶ್ವರ ದೇವಸ್ಥಾನಕ್ಕೆ ಪಲ್ಲಕ್ಕಿಯನ್ನು ಜಯಘೋಷಗಳನ್ನು ಕೂಗುತ್ತಾ ಸ್ವಾಗತಿಸಲಾಯಿತು. ಬಳಿಕ ಅಗ್ಗಿ ಹಾಯುವ ಕಾರ್ಯ ಜರುಗಿತು. ದೇವಸ್ಥಾನದ ಆವರಣದಲ್ಲಿ ಚರಗ ಚೆಲ್ಲಿ ರೈತನ ಸಿರಿ ಸಮೃದ್ಧಿಗೆ ಪ್ರಾರ್ಥನೆ ಸಲ್ಲಿಸಲಾಯಿತು. ಈ ಬಾರಿ ೧೫೧ ಹಂಡೆಯ ಬಜ್ಜಿ ಪಲ್ಯೆ ಮಾಡಲಾಯಿತು.ಗುರು ಶಿಷ್ಯರ ಬಾಂಧವ್ಯಕ್ಕೆ ಸಾಕ್ಷಿಯಾದ ಭಕ್ತರು. ಈ ಜಾತ್ರೆಯ ವಿಶೇಷವೆನೆಂದರೆ ವಿವಿಧ ದಾನ್ಯಗಳಿಂದ ತಯ್ಯಾರಿಸಿದ ಭಜ್ಜಿ ಪಲ್ಯೆ ಮತ್ತು ರೊಟ್ಟಿಗೆ ಭಕ್ತರಲ್ಲರೂ ಬಾಯಿ ಚಪ್ಪರಿಸಿ ಪ್ರಸಾದ ರೂಪದಲ್ಲಿ ಸ್ವೀಕರಿಸಿ ಮಲ್ಲಯ್ಯನ ಏಳ ಕೋಟೆ ಏಳ ಕೋಟೆಯ ಉಗೆ ಎಂದು ಗಂಗಾಧರೇಶ್ವರ ಕೃಪೆಗೆ ಪಾತ್ರರಾಗುತ್ತಾರೆ.ಕಮಿಟಿಯ ಭಾಗಪ್ಪಗೌಡ ಪಾಟೀಲ, ಶಾಂತಗೌಡ ಬಿರಾದಾರ, ಗಂಗಾಧರ…

Read More