Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಸಾಮೂಹಿಕ ಶ್ರೀಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮೇಲ್ವಿಚಾರಕ ವಿಶ್ವನಾಥ ಸದಲಗೆ ಹೇಳಿದರು.ಪಟ್ಟಣದ ಹೊಸನಗರದ ವಿಠ್ಠಲ ರುಕ್ಮಿಣಿ ಮಂಗಲ ಭವನದಲ್ಲಿ ಇತ್ತೀಚೆಗೆ ಜರುಗಿದ ಸಾಮೂಹಿಕ ಶ್ರೀಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ದಿ:೨೦ ರಂದು ಮಂಗಳವಾರ ಬೆಳಿಗ್ಗೆ ೯ ಗಂಟೆಗೆ ಪೂಜೆ ಆರಂಭಗೊಂಡು ನಂತರ ಧಾರ್ಮಿಕಸಭಾ ಜರುಗಲಿದೆ. ಇದರಲ್ಲಿ ಪಟ್ಟಣದ ಪ್ರಮುಖರು ಭಾಗವಹಿಸಲಿದ್ದಾರೆ ಎಂದರು.ಜಾಲವಾದ ವಲಯ ಮೇಲ್ವಿಚಾರಕ ಸದಾಶಿವಪ್ಪ ಅಂಗಡಿ ಮಾತನಾಡಿ, ಧಾರ್ಮಿಕ ಸಭೆ ಸೇರಿದಂತೆ ಎಲ್ಲ ಪ್ರಾಪಂಚಿಕ ಪ್ರಗತಿದಾಯಕ ಕಾರ್ಯಗಳಲ್ಲಿ ಹತ್ತು ಮನಸ್ಸುಗಳು ಒಂದಾಗಿ ಆತ್ಮೀಯತೆಯಿಂದ ದುಡಿದಲ್ಲಿ ಆರ್ಥಿಕ ಸ್ವಾವಲಂಬನೆಯೊಂದಿಗೆ ಸರ್ವತೋಮುಖ ಅಭಿವೃದ್ಧಿ ಸುಲಭ ಸಾಧ್ಯ ಎಂದರು.ಇದೇ ಸಂದರ್ಭದಲ್ಲಿ ಪೂಜಾ ವ್ಯವಸ್ಥಾಪನಾ ಸಮಿತಿ ರಚಿಸಿ ವಿವಿಧ ಜವಾಬ್ದಾರಿಗಳನ್ನು ಹಂಚಲಾಯಿತು.ಸಮಿತಿ ಅಧ್ಯಕ್ಷ ಈರಣ್ಣ ಒಂಟೆತ್ತಿನ, ಗೌರವ ಅಧ್ಯಕ್ಷರುಗಳಾದ ಗೊಲ್ಲಾಳಪ್ಪ ಚೌಧರಿ, ಪಿ.ಎಸ್.ಮಿಂಚನಾಳ, ಉಪಾಧ್ಯಕ್ಷರುಗಳಾದ ಈರಪ್ಪ ಉಪಳಾಯಿ, ಶಂಕರಗೌಡ ಪಾಟೀಲ, ಸಲಹೆಗಾರರಾದ ಸಿ.ಕೆ.ಕುದರಿ, ಹಸನ್…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸರ್ಕಾರದ ದಿನಾಂಕ:೦೭.೦೧.೨೦೨೬ರ ಪತ್ರದಲ್ಲಿನ ನಿರ್ದೇಶನ ಹಾಗೂ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, ೧೯೯೩ ರ ೪ನೇ ಪ್ರಕರಣದ ೨ನೇ ಉಪ ಪ್ರಕರಣದಂತೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ,ವಿಜಯಪುರ ತಾಲ್ಲೂಕಿನ ಐನಾಪೂರ ಗ್ರಾಮ ಪಂಚಾಯತಿ ವ್ಯಾಪ್ತಿಗೆಐನಾಪೂರ ಹಾಗೂ ಬುರಣಾಪೂರ ಗ್ರಾಮಗಳನ್ನು ಮತ್ತು ಜುಮನಾಳ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಜುಮನಾಳ ಹಾಗೂ ಖತಿಜಾಪೂರ ಗ್ರಾಮಗಳನ್ನು ಒಳಪಡಿಸಿ, ಗ್ರಾಮ ಪಂಚಾಯತಿಗಳನ್ನು ಪುನರ್ರಚಿಸಿ, ಜಿಲ್ಲಾ ಚುನಾವಣಾಧಿಕಾರಿಗಳೂ ಆದ ಜಿಲ್ಲಾಧಿಕಾರಿ ಡಾ.ಆನಂದ್. ಕೆ ಅವರು ಕರಡು ಅಧಿಸೂಚನೆ ಹೊರಡಿಸಿದ್ದಾರೆ.ಈ ಕರಡು ಅಧಿಸೂಚನೆಗೆ ಯಾವುದೇ ಆಕ್ಷೇಪಣೆಗಳಿದ್ದಲ್ಲಿ, ದಿನಾಂಕ:೧೭-೦೧-೨೦೨೬ ರಿಂದ ೨೩-೦೧-೨೦೨೬ರ ಒಳಗಾಗಿ ಅಂತಹ ಆಕ್ಷೇಪಣೆಗಳನ್ನು ಲಿಖಿತವಾಗಿ ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯ ಎಂಟು ಪರೀಕ್ಷಾ ಕೇಂದ್ರಗಳಲ್ಲಿ ಜ.೧೯ ರಿಂದ ೨೪ರವರೆಗೆ ಅರೇಬಿಕ್ ಪರೀಕ್ಷೆಗಳು ನಡೆಯಲಿವೆ.ಮುಂಜಾಗ್ರತಾ ಕ್ರಮವಾಗಿ ಪರೀಕ್ಷಾ ಕೇಂದ್ರಗಳ ಸುತ್ತಲಿನ ೨೦೦ ಮೀಟರ್ ಪ್ರದೇಶದಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ-೨೦೨೩ರ ಕಲಂ ೧೬೩ರನ್ವಯ ನಿಷೇಧಾಜ್ಞೆ ಜಾರಿಗೊಳಿಸಿ, ಜಿಲ್ಲಾ ದಂಡಾಧಿಕಾರಿಗಳಾದ ಜಿಲ್ಲಾಧಿಕಾರಿ ಡಾ.ಆನಂದ.ಕೆ ಅವರು ಆದೇಶ ಹೊರಡಿಸಿದ್ದಾರೆ.ಪರೀಕ್ಷಾ ಕಾರ್ಯದಲ್ಲಿ ತೊಡಗಿರುವ ಯಾವುದೇ ಅಧಿಕಾರಿ, ಸಿಬ್ಬಂದಿ ಮತ್ತು ಇತರರು ಮೊಬೈಲ್ ತರುವುದನ್ನು ಹಾಗು ಅದರ ಬಳಕೆ ನಿಷೇಧಿಸಿದೆ. ಪರೀಕ್ಷಾ ಕೇಂದ್ರಗಳ ಸುತ್ತಲಿನ ೨೦೦ ಮೀಟರ್ ಪ್ರದೇಶದಲ್ಲಿ ಬೆಳಿಗ್ಗೆ ೯ ಗಂಟೆಯಿಂದ ಪರೀಕ್ಷೆ ಮುಕ್ತಾಯವಾಗುವವರೆಗೆ ನಿಷೇಧಿತ ಪ್ರದೇಶವೆಂದು ಘೋಷಿಸಿ, ಈ ಪರೀಕ್ಷಾ ಕೇಂದ್ರಗಳ ವ್ಯಾಪ್ತಿಯಲ್ಲಿನ ಝರಾಕ್ಸ್ ಅಂಗಡಿಗಳು, ಕಂಪ್ಯೂಟರ್ ಕೇಂದ್ರಗಳು, ಸೈಬರ್ ಕೆಫೆಗಳು ಹಾಗೂ ಕೋಚಿಂಗ್ ಕೇಂದ್ರಗಳು ತೆರೆಯದಂತೆ ಆದೇಶಿಸಲಾಗಿದೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಅಹಂ ಮೇತಿ’ ಎಂಬಂತೆ ಎಲ್ಲವು ನಾನು, ನನ್ನದು, ನನ್ನಿಂದ ಎಂಬ ಮಮಕಾರ-ಅಹಂಭಾವ ತೊಲಗಲಿ. ‘ಪರೋಪಕಾರಂ ಇದಂ ಶರೀರಂ’ ಎಂಬ ಶ್ಲೋಕದಂತೆ ಜೀವನ ಇರುವುದು ನನಗಾಗಿ ಅಷ್ಟೇ ಅಲ್ಲದೇ ಈ ಸಮಾಜದ ಅಭ್ಯುದಯಕ್ಕಾಗಿ ಮತ್ತು ಸಹಾಯ ಬೇಡಿ ಬಂದವರಿಗೆ ಸಾಧ್ಯವಾದಷ್ಟು ಉಪಕಾರ ಮಾಡುವ ಮನೋಭಾವವನ್ನು ನಾವೆಲ್ಲರೂ ಬೆಳೆಸಿಕೊಳ್ಳಬೇಕು ಎಂದು ಜಮಖಂಡಿಯಯ ಓಲೆಮಠದ ಶ್ರೀ ಆನಂದ ದೇವರು ಅವರು ಅಭಿಪ್ರಾಯಪಟ್ಟರು.ಅವರು ನಗರದ ಅಥಣಿ ರಸ್ತೆಯ ಅಲ್-ಅಮೀನ ಆಸ್ಪತ್ರೆಯ ಎದುರಿಗೆ ಎನ್.ಜಿ,ಓ ಕಾಲನಿಯ ಜೈ ಶ್ರೀ ಆಂಜನೇಯ ದೇವಸ್ಥಾನದ ೬ನೇಯ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡ ಸದ್ಭಾವನಾ ಜನಜಾಗೃತಿ(ದುಶ್ಚಟಗಳ ನಿರ್ಮೂಲನೆ) ಮತ್ತು ಪ್ರವಚನ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡುತ್ತಿದ್ದರು.ಅವರು ಮಾತನಾಡುತ್ತಾ, ಇಂದಿನ ಸಮೂಹ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳ ಪ್ರಭಾವ ಮತ್ತು ಮಿತಿಮೀರಿದ ಬಳಕೆಯಿಂದ ಸಂಸ್ಕೃತಿ-ಸಂಸ್ಕಾರ, ಜೀವನ-ಮೌಲ್ಯಗಳು ಅಧಃಪತನಗೊಳ್ಳುತ್ತಿದೆ. ಮಾನವ ಕೇವಲ ಹಣ ಗಳಿಕೆಯತ್ತ ತನ್ನ ಜೀವನವನ್ನು ಸಾಗಿಸುತ್ತಾ, ಸಂಸಾರವೆಂಬ ಪ್ರಾಪಂಚಿಕ ಜಗತ್ತಿನಲ್ಲಿ ಮುಳುಗಿ ಹೋಗಿದ್ದಾನೆ. ಮನದಲ್ಲಿರುವ ಅಷ್ಟ ಅರಿಷಡ್ವರ್ಗಗಳಾದ…
ಲೇಖನ- ಡಾ ಶಶಿಕಾಂತ ಪಟ್ಟಣರಾಮದುರ್ಗ – ಪುಣೆ ಉದಯರಶ್ಮಿ ದಿನಪತ್ರಿಕೆ ನಾಡಿನ ಬಹುದೊಡ್ಡ ಜನಪದ ಸಾಹಿತ್ಯ ಸಂಶೋಧಕ ಸ್ವರ ವಚನಗಳ ಸಂಪಾದಕಟ ಉತ್ತರ ಕರ್ನಾಟಕ ಮತ್ತು ಹೈದ್ರಾಬಾದ ಕರ್ನಾಟಕದ ಜಾನಪದ ಹಾಡುಗಳ ಸಂಗ್ರಹಕಾರ ಡಾ ಎಂ ಎಸ್ ಲಠ್ಠೆ. ಇವರ ಪೂರ್ಣ ಹೆಸರು ಮಲ್ಲಿಕಾರ್ಜುನ ಶಿವಪ್ಪ ಲಠ್ಠೆ.ಜನನಮಲ್ಲಿಕಾರ್ಜುನ ಲಠ್ಠೆಯವರು ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ತಾಲ್ಲೂಕು ಕೇಂದ್ರವಾದ ಮುತನಾಳದಲ್ಲಿ.ತಂದೆ ಶಿವಪ್ಪ,ತಾಯಿ ಬಸವಮ್ಮ.ಶಿಕ್ಷಣಪ್ರಾಥಮಿಕ ವಿದ್ಯಾಭ್ಯಾಸಹಿರೇಬಾಗೇವಾಡಿಯಲ್ಲಿ. ಮುತನಾಳ ಗ್ರಾಮದಿಂದಬರಿಗಾಲಿನಲ್ಲಿ ಹೀರೆ ಬಾಗೇವಾಡಿ ಗ್ರಾಮಕ್ಕೆ ನಡೆದು ಬಂದು ತಮ್ಮ ಪ್ರಾಥಮಿಕ ಶಿಕ್ಷಣ ಮುಗಿಸಿದರು. ಮುಂದೆ ಹೈಸ್ಕೂಲ್ ಶಿಕ್ಷಣವನ್ನು ಕೆ ಎಲ್ ಇ ಸಂಸ್ಥೆ ಜಿ ಎ ಹೈಸ್ಕೂಲ್ ನಲ್ಲಿ ಶ್ರೀ ಕರಡಿ ಮಾಸ್ತರ ಮತ್ತು ಶ್ರೀ ಬಿ ಆರ್ ಪಾಟೀಲ ಇವರ ಶಿಷ್ಯನಾಗಿ ಶಿಕ್ಷಣ ಮುಗಿಸಿದರು.ಮುಂದೆ ಧಾರವಾಡಕಾಲೇಜಿಗೆ ಸೇರಿದ್ದು ಧಾರವಾಡದ ಕರ್ನಾಟಕ ಕಾಲೇಜು, ಬಿ.ಎ. ಆನರ್ಸ್ ಪದವಿ ಮುಗಿಸಿದರು. ಅತ್ಯಂತ ಬಡತನದಲ್ಲಿ ಶಾಲೆ ಕಲಿತ ಈ ಹುಡುಗ ತಮ್ಮ ಕೆಲಸ ಮಾಡುತ್ತಲೆ ಸಾಂಗ್ಲಿಯ ಕಾಲೇಜಿನಿಂದಪೂನ ವಿಶ್ವವಿದ್ಯಾಲಯದಿಂದ ಎಂ.ಎ.…
ಲೇಖನ- ಎಚ್ಚಾರ್ ಬಾಗವಾನಸಾಮಾಜಿಕ ಚಿಂತಕರು, ಪತ್ರಕರ್ತರುಆಸಾರ ಗಲ್ಲಿಮುದ್ದೇಬಿಹಾಳ – ೫೮೬೨೧೨ಮೊ: 9448406079 ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ನೊಂದಣಿ ಇಲಾಖೆಯಲ್ಲಿ ಗುಣಾತ್ಮಕ ರೀತಿಯ ಸುಧಾರಣೆ ತರಲು ಹಿಂದೆ ಬಿಜೆಪಿ ಸರ್ಕಾರದಲ್ಲಿ ಕಂದಾಯ ಮಂತ್ರಿ ಆರ್ ಅಶೋಕ ರವರು ನೊಂದಣಿ ಇಲಾಖೆಯ ಸುಧಾರಣಾ ಕಾಯ್ದೆ ಜಾರಿಗೊಳಿಸಿ ಕಾವೇರಿ ೦೨ ತತ್ರಾಂಶ ಜಾರಿಗೊಳಿಸಿದ್ಗರು. ಆದರೆ ಈಗ ಸರ್ಕಾರ ಕಾವೇರಿ ೦೩ ಜಾರಿಗೊಳಿಸಲು ಮುಂದಾಗಿರುವುದು ಪಾರದರ್ಶಕತೆಯ ರೂಪದಲ್ಲಿ ಸ್ಥಿರಾಸ್ತಿ ಖರೀದಿಸುವರಿಗೆ ಅಭದ್ರತೆ ಕಾಡುವಂತೆ ಮಾಡಿದೆ.ಆಧಾರ ಕಾರ್ಡ ಲಿಂಕ್ ಪಡೆದು ಆಸ್ತಿ ಮಾಲಿಕನ ಓಟಿಪಿ ಬಳಸಿ ಧೃಢಿಕರಿಸಿದ ನಂತರವಷ್ಠೆ ಆಸ್ತಿ ನೊಂದಣಿ ಆಗುತ್ತಲಿದೆ. ಇದನ್ನು ಬಿಟ್ಟು ಫೇಸಲೆಸ್ಸ್ ಪೇಪರಲೆಸ್ಸ್ ಕಾಯ್ದೆಗೆ ಮುಂದಾಗಿರುವದು ಭವಿಷ್ಯದ ದೃಷ್ಠಿಯಿಂದ ಒಳ್ಳೆಯ ಬೆಳವಣಿಗೆಯಂತೂ ಖಂಡಿತ ಅಲ್ಲ. ರಾಜ್ಯದಲ್ಲಿ ಇಷ್ಠೆಲ್ಲ ವ್ಯವಸ್ಥೆ ಇರುವಾಗಲು ಅದೆಷ್ಟೋ ಆಸ್ತಿಗಳು ಅಕ್ರಮ ನೊಂದಣಿ ಮಾಡಿರುವ ತಪ್ಪಿಗೆ ಸಬ್ ರಜಿಸ್ಟಾರಗಳು ಅಮಾನತ್ತು ಆಗಿದ್ದಾರೆ. ಅದೆಷ್ಟೋ ಪ್ರಕರಣಗಳು ನ್ಯಾಯಾಲಯದ ಮೆಟ್ಟಿಲೇರಿ ವಿಚಾರಣೆಯ ಹಂದಲ್ಲಿವೆ. ತಂತ್ರಜ್ಞಾನದಿಂದ ಅಕ್ರಮಗಳು ಫೇಕ್ ಖಾತೆಗಳ ಮೂಲಕ ನಡೆಯುತ್ತಲಿರುವದು ಕೂಡಾ…
ಉದಯರಶ್ಮಿ ದಿನಪತ್ರಿಕೆ ಚಡಚಣ: ಜ.18 ರಿಂದ ಪ್ರಾರಂಭವಾಗಲಿರುವ ಪಟ್ಟಣದ ಶ್ರೀ ಸಂಗಮೇಶ್ವರ ಜಾನುವಾರು ಜಾತ್ರೆಯಲ್ಲಿ ಜಾನುವಾರು ಮಾರಾಟಗಾರ ಹಾಗೂ ಖರೀದಿಗಾರ ರೈತರಿಗೆ ಪ್ರತಿ ವಹಿವಾಟಿಗೆ ಕೇವಲ ರೂ.5 ಘೋಷಣೆ ಮಾಡುವಂತೆ ಆಗ್ರಹಿಸಿ ರೈತರು ಚಡಚಣ ಎಪಿಎಂಸಿ ಉಪ ಮಾರುಕಟ್ಟೆ ಕಾರ್ಯದರ್ಶೀ ಅವರಿಗೆ ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ವತಿಯಿಂದ ತಾಲೂಕಾಧ್ಯಕ್ಷ ವಸಂತ ಭೈರಾಮಡಿ ಮನವಿ ಸಲ್ಲಿಸಿದರು.ಮನವಿಯನ್ನು ಕಾರ್ಯದರ್ಶಿ ಐ.ಎಸ್. ಔರಾದಕರ ಪರವಾಗಿ ಚಡಚಣ ಉಪ ಸಮೀತಿಯ ಕಾರ್ಯದರ್ಶಿ ಶ್ರೀಶೈಲ ಪಟ್ಟಣಶೆಟ್ಟಿ ಅವರು ಸ್ವಿಕರಿಸಿ ಮುಂದಿನ ಕ್ರಮಕ್ಕಾಗಿ ಇಂಡಿ ಎಪಿಎಮ್ಸಿ ಅಧಿಕಾರಿಗೆ ಖಳಿಸಿಕೊಡುವದಾಗಿ ಹೇಳಿದರು.ಇದೇ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡ ತಾಲೂಕಾಧ್ಯಕ್ಷ ವಸಂತ ಭೈರಾಮಡಿ, ಜ.18 ರಿಂದ ಪ್ರಾರಂವಾಗಲಿರುವ ಪಟ್ಟಣದ ಶ್ರೀ ಸಂಗಮೇಶ್ವರ ಜಾನುವಾರು ಜಾತ್ರೆಗೆ ಆಗಮಿಸುವ ರೈತರಿಂದ ಜಾತ್ರಾ ಸಮೀತಿಯವರು ಖರೀದಿದಾರ ರೈತರಿಂದ ಎಪಿಎಮ್ಸಿ ಕಾನೂನು ಮೀರಿ ರೂ 100, ಮಾರಾಟಗಾರರಿಗೆ + ರೂ.100 ವಸೂಲಿ ಮಾಡುತ್ತಿದ್ದಾರೆ. ಈ ಹಣ ರೈತರಿಗೆ ಹೊರೆಯಾಗುತ್ತದೆ. ರೈತರು ಈ ವರ್ಷ ಹಸಿ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಬೆಂಗಳೂರಿನ ಸೂರ್ಯ ಫೌಂಡೇಶನ್-ಸ್ಪಾರ್ಕ್ ಅಕಾಡೆಮಿ(ಆರ್) ನೀಡುವ ಪ್ರತಿಷ್ಠಿತ “ಶಿಕ್ಷಣ ಚೈತನ್ಯ – 2025–26” ಪ್ರಶಸ್ತಿಗೆ ತಾಲೂಕಿನ ಗುಬ್ಬೇವಾಡ ಗ್ರಾಮದ ಆಕ್ಸಫರ್ಡ್ ಇಂಟರ್ನ್ಯಾಷನಲ್ ಸ್ಕೂಲ್ ಆಯ್ಕೆಯಾಗಿದೆ.ಈ ವಿಶಿಷ್ಟ ಗೌರವವು ಸಂಸ್ಥೆಯ ಅಧ್ಯಕ್ಷ ಬಾಪೂಗೌಡ ರ ದೂರದೃಷ್ಟಿಯ ನಾಯಕತ್ವ, ಅಚಲ ಸಮರ್ಪಣೆ ಮತ್ತು ಸಂಸ್ಥೆಯು ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ನಿರಂತರ ಬದ್ಧತೆಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ ಎಂದು ಸ್ಪಾರ್ಕ್ ಅಕಾಡೆಮಿ ಸಂಸ್ಥಾಪಕ ಅಧ್ಯಕ್ಷ ಸೋಮೇಶ ನವೋದಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಪ್ರಶಸ್ತಿ ಪ್ರದಾನ ಸಮಾರಂಭವು 25/01/2026 ರಂದು ಬೆಂಗಳೂರಿನಲ್ಲಿ ನಡೆಯಲಿದೆ.
ಉದಯರಶ್ಮಿ ದಿನಪತ್ರಿಕೆ ಸಿಂದಗಿ: “ದಾಸ ಸಾಹಿತ್ಯಕ್ಕಷ್ಟೇ ಅಲ್ಲ, ಕನ್ನಡ ಸಾಹಿತ್ಯ ಲೋಕದೆಲ್ಲೆಡೆ ಪುರಂದರ ದಾಸರ ಕೊಡುಗೆ ಅನನ್ಯ ಮತ್ತು ಅಪಾರ” ಎಂದು ಪಂ. ವಿಠ್ಠಲಾಚಾರ್ಯ ಹೇಳಿದರು.ಸಿಂದಗಿ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಆಯೋಜಿಸಲಾಗಿದ್ದ ಪುರಂದರ ದಾಸರ ಆರಾಧನಾ ಮಹೋತ್ಸವದಲ್ಲಿ ಅವರು ಪ್ರವಚನ ನೀಡಿದರು. “ಹರಿದಾಸರ ಪರಂಪರೆಯಲ್ಲಿ ಪುರಂದರ ದಾಸರ ಸ್ಥಾನ ಶ್ರೇಷ್ಠ. ಇತರ ದಾಸವರೇಣ್ಯರು ಅವರನ್ನೇ ಕೊಂಡಾಡಿರುವುದೇ ಇದರ ದೃಢವಾದ ಸಾಕ್ಷಿ” ಎಂದು ಹೇಳಿದರು.ಸಾಹಿತ್ಯ, ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಕ್ಷೇತ್ರಗಳಲ್ಲಿ ಪುರಂದರ ದಾಸರು ನೀಡಿದ ಕೊಡುಗೆ ಅನನ್ಯ. ‘ಪುರಂದರ ವಿಠ್ಠಲ’ ಎಂಬ ಅಂಕಿತನಾಮದಲ್ಲಿ ಅನೇಕ ಕೀರ್ತನೆಗಳನ್ನು ರಚಿಸಿ, ಸಮಾಜದಲ್ಲಿದ್ದ ಅನೇಕ ಮೌಢ್ಯಗಳನ್ನು ಹೋಗಲಾಡಿಸಿ ಜನಜಾಗೃತಿ ಮೂಡಿಸಿದರು ಎಂದು ಪಂಡಿತರು ವಿವರಿಸಿದರು. “ಅಂತಹ ಮಹಾನ್ ಹರಿದಾಸರ ಕೀರ್ತನೆಗಳನ್ನು ಅಧ್ಯಯನ ಮಾಡುವ ಮೂಲಕ ಜೀವನ ಪಾವನವಾಗುತ್ತದೆ” ಎಂದು ಅವರು ಸಲಹೆ ನೀಡಿದರು.ಮಠದಲ್ಲಿ ಬೆಳಿಗ್ಗೆ ಪೂಜೆ, ಪಂಚಾಮೃತಾಭಿಷೇಕ, ಅಷ್ಟೋತ್ತರ ಸೇವೆ ಹಾಗೂ ಭಜನೆ ಕಾರ್ಯಕ್ರಮಗಳು ಭಕ್ತಿಭಾವಪೂರ್ಣವಾಗಿ ಜರುಗಿದವು. ಮಧ್ಯಾಹ್ನದ ಪ್ರಸಾದ ವಿತರಣೆಯನ್ನು ರವೀಂದ್ರ ಕುಲಕರ್ಣಿ ಕೊರಳ್ಳಿ ಅವರು…
ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಭೀಮ್ ಆರ್ಮಿ ಕರ್ನಾಟಕ ಏಕತಾ ಮಿಷನ್ ಸಂಘಟನೆಯ ಕೊಲ್ಹಾರ ತಾಲ್ಲೂಕು ಅಧ್ಯಕ್ಷರಾಗಿ ಪಟ್ಟಣದ ಸಚಿನ್ ಈಟಿ, ಉಪಾಧ್ಯಕ್ಷರಾಗಿ ಆನಂದ ಕುದುರಿ ಅವರನ್ನು ನೇಮಕ ಮಾಡಲಾಗಿದೆ.ಸಂಘಟನೆಯ ರಾಜ್ಯಾಧ್ಯಕ್ಷರಾದ ಮತೀನ್ ಕುಮಾರ್ ಅವರ ಸೂಚನೆಯಂತೆ ವಿಜಯಪುರ ಜಿಲ್ಲಾ ಅಧ್ಯಕ್ಷ ಮಾರುತಿ ಕುದರಿ ಅವರು ನೇಮಕಾತಿ ಆದೇಶ ನೀಡಿದ್ದಾರೆ. ನೂತನ ಪದಾಧಿಕಾರಿಗಳು ಸಂಘಟನೆಯ ಗುರಿ–ಉದ್ದೇಶಗಳಿಗೆ ನಿಷ್ಠೆಯಿಂದ ಕೆಲಸ ಮಾಡಬೇಕು. ಶೋಷಿತ ಹಾಗೂ ಹಿಂದುಳಿದ ವರ್ಗಗಳ ಹಿತಾಸಕ್ತಿಗೆ ಧ್ವನಿಯಾಗುವ ಜೊತೆಗೆ, ಯಾವುದೇ ಆಮಿಷಗಳಿಗೆ ಒಳಗಾಗದೆ ಅನ್ಯಾಯದ ವಿರುದ್ಧ ಸಂವಿಧಾನಾತ್ಮಕ ಹಾಗೂ ಕಾನೂನುಬದ್ಧ ಹೋರಾಟ ನಡೆಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ ಎಂದು ಹೇಳಿದರು.
