Author: editor.udayarashmi@gmail.com

ಕೊಲ್ಹಾರ: ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಕಾಲುವೆಗಳಿಗೆ ಹಿಂಗಾರು ಹಂಗಾಮಿಗೆ ನೀರು ಪೂರೈಸಲು ಸಾಧ್ಯವಿಲ್ಲ ಎಂದು ನಿರ್ಣಯ ತೆಗೆದುಕೊಂಡಿರುವುದು ರೈತರಿಗೆ ಅನ್ಯಾಯ ಮಾಡಿದಂತಾಗುತ್ತದೆ. ಆದ್ದರಿಂದ ನೀರಾವರಿ ಸಲಹಾ ಸಮೀತಿಯ ಅಧ್ಯಕ್ಷರೂ ಆಗಿರುವ ಸಚಿವ ಆರ್.ಬಿ.ತಿಮ್ಮಾಪೂರ ತಮ್ಮ ನಿರ್ಣಯವನ್ನು ಹಿಂದಕ್ಕೆ ಪಡೆದು ಹಿಂಗಾರು ಹಂಗಾಮಿಗೂ ಕಾಲುವೆಗಳಿಗೆ ನೀರು ಹರಿಸಲು ಆದೇಶ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಜಿಲ್ಲಾ ಮುಖಂಡ ಟಿ.ಟಿ.ಹಗೇದಾಳ ಆಗ್ರಹಿಸಿದ್ದಾರೆ.ಈ ಕುರಿತು ಶನಿವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ವಿಶೇಷವಾಗಿ ವಿಜಯಪೂರ ಜಿಲ್ಲೆಯಲ್ಲಿ ಬರಗಾಲದಂತಹ ಭೀಕರ ಪರಿಸ್ಥಿತಿ ನಿರ್ಮಾಣವಾಗಿ ರೈತರ ದನ ಕರುಗಳಿಗೆ ಉಳಿದ ಬೆಳೆಗಳನ್ನು ಬೆಳೆದುಕೊಳ್ಳಲು ಮಳೆರಾಯನ ಅಭಾವ ಸೃಷ್ಟಿಯಾಗಿರುವದರಿಂದ ಕಷ್ಟಕರವಾದ ಜೀವನವಾಗಿದೆ. ಪೂರ್ವಜನ್ಮದ ಪುಣ್ಯವೋ ಏನೋ ಪಶ್ಚಿಮ ಘಟ್ಟದ ಮೇಲ್ಬಾಗದಲ್ಲಿ ಅಧಿಕಪ್ರಮಾಣದಲ್ಲಿ ಮಳೆಯಾದ ಪ್ರಯುಕ್ತ ಕೃಷ್ಣಾ ನದಿ ತುಂಬಿ ಹರಿಯುತ್ತಿದ್ದು ನದಿ ಪಾತ್ರದ ರೈತರಿಗೆ ಕಾಲುವೆಗಳ ಮೂಲಕ ನೀರು ಹರಿದು ಮುಂಗಾರು ಬೆಳೆಯನ್ನು ಬೆಳೆದು ಸಂತ್ರಪ್ತಿಯಿಂದ ಇರಬಹುದು ಕೆಲವು ಕಡೆ ಮುಂಗಾರು ಬೆಳೆಗಳು ಕೈಕೊಟ್ಟು ರೈತನಿಗೆ ಫಸಲು ಬರದೇ…

Read More

ಕೊಲ್ಹಾರ: ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಅ.೧೮ ರಂದು ಜರುಗಲಿರುವ ಚಿಗುರು ಕವಿಗೋಷ್ಠಿಯಲ್ಲಿ ತಾಲೂಕಿನ ಮುಳವಾಡ ಗ್ರಾಮದ ಖ್ಯಾತ ಮಕ್ಕಳ ಸಾಹಿತಿ ಪ.ಗು.ಸಿದ್ದಾಪುರ ಅವರು ಮುಖ್ಯ ಅತಿಥಿ ಸ್ಥಾನವನ್ನು ವಹಿಸಲಿದ್ದಾರೆಂದು ದಸರಾ ಕವಿಗೋಷ್ಠಿ ಉಪಸಮಿತಿಯ ಕಾರ್ಯಾಧ್ಯಕ್ಷ ಡಾ. ವಿಜಯಕುಮಾರಿ ಕರಿಕಲ್ ತಿಳಿಸಿದ್ದಾರೆ. ಪ.ಗು.ಸಿದ್ದಾಪುರವರು ಈಗಾಗಲೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿ ಮಕ್ಕಳಸಾಹಿತ್ಯದ ಕುರಿತು ಉಪನ್ಯಾಸ ನೀಡಿದ್ದಾರೆ. ಹಲವಾರು ಕೃತಿಗಳನ್ನು ಲೋಕಾರ್ಪಣೆಗೊಳಿಸಿದ ಇವರ ಕವಿತೆಗಳು ಕರ್ನಾಟಕ, ಮಹಾರಾಷ್ಟ್ರ ಹಾಗೂ ಕೇರಳ ರಾಜ್ಯ ಪಠ್ಯ ಪುಸ್ತಕದಲ್ಲಿ ಸ್ಥಾನ ಪಡೆದುಕೊಂಡಿವೆ.

Read More

ದೇವರಹಿಪ್ಪರಗಿ: ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಕಡಿತಗೊಳಿಸದೇ, ಕೃಷಿ ಚಟುವಟಿಕೆಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡುವಂತೆ ಆಗ್ರಹಿಸಿ ಬಿಜೆಪಿ ಧುರೀಣ ಪ್ರಭುಗೌಡ ಬಿರಾದಾರ ನೇತೃತ್ವದಲ್ಲಿ ಅಸ್ಕಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಹೆಸ್ಕಾಂ ಎಇಇ ವಿಜಯಕುಮಾರ ಹವಾಲ್ದಾರ ಅವರಿಗೆ ಮನವಿ ಸಲ್ಲಿಸಿದರು.ಪಟ್ಟಣದ ಹೆಸ್ಕಾಂ ಕಚೇರಿಗೆ ಶುಕ್ರವಾರ ಮತಕ್ಷೇತ್ರದ ಅಸ್ಕಿ, ನೀರಲಗಿ, ಜಲಪುರ, ಹಾಗೂ ಬನ್ನಟ್ಟಿ ಪಿ.ಟಿ ಗ್ರಾಮಸ್ಥರು ಆಗಮಿಸಿ ಸತತ ವಿದ್ಯುತ್ ನಿಲುಗಡೆಯಿಂದಾಗುವ ಪರಿಣಾಮಗಳ ಕುರಿತು ಮಾಹಿತಿ ನೀಡಿ ಮಾತನಾಡಿದರು.ಮತಕ್ಷೇತ್ರದ ಅಸ್ಕಿ ಗ್ರಾಮದಲ್ಲಿ ನಿರ್ಮಾಣಗೊಂಡಿರುವ ೧೧೦ ಕೆ.ವ್ಹಿ ವಿತರಣಾ ಕೇಂದ್ರ ಆರಂಭಕ್ಕೆ ರೈತರು ಚಂದಾಹಣ ನೀಡಿ ಸಹಕಾರ ನೀಡಿದ್ದಾರೆ. ಆದರೆ ಈಗ ಇದೇ ಕೇಂದ್ರದಿಂದ ಸಮರ್ಪಕ ವಿದ್ಯುತ್ ವಿತರಣೆಯಾಗುತ್ತಿಲ್ಲ. ಈ ಮೊದಲು ದಿನಕ್ಕೆ ೮ ಗಂಟೆಗಳ ಕಾಲ ತ್ರಿಫೇಸ್ ವಿದ್ಯುತ್ ಪೂರೈಕೆ ಆಗುತ್ತಿತ್ತು. ಈಗ ಅದು ಹಗಲು ೩ ಗಂಟೆ, ರಾತ್ರಿ ೨ ಗಂಟೆ ಪೂರೈಕೆಗೆ ಮಾತ್ರ ಸೀಮಿತವಾಗಿದೆ. ಹೀಗಾದರೆ ಜಮೀನುಗಳಿಗೆ ನೀರು ಪೂರೈಸುವುದಾದರೂ ಹೇಗೆ? ಎಂದು ಪ್ರಶ್ನಿಸಿ ಈ ಮೊದಲೇ ಮಳೆ ಅಭಾವದಿಂದ…

Read More

ಮಕ್ಕಳ ಕತೆ ರಾಜನ ಶಯನಾಗೃಹದಲ್ಲಿ ಹೇನೊಂದು ಸೇರಿಕೊಂಡಿತ್ತು. ರಾಜನ ಹಂಸತೂಲಿಕಾ ಮಂಚದಲ್ಲಿ ಹಗಲಿಡೀ ಆ ಹೇನು ವಿಶ್ರಾಂತಿ ತೆಗೆದುಕೊಂಡು ರಾತ್ರಿಯ ವೇಳೆಯಲ್ಲಿ ರಾಜನು ಸುಖನಿದ್ರೆಗೆ ಜಾರಿದಾಗ ರಾಜನ ಅರಿವಿಗೆ ಬಾರದಂತ ರಾಜನ ತಲೆಯನ್ನು ಸೇರಿ ಅವನ ಅರಿವಿಗೆ ಬಾರದಂತೆ ರಕ್ತಹೀರುತಿತ್ತು. ಹೀಗೆ ಆ ಹೇನು ಬಹಳ ಕಾಲದಿಂದಲೂ ಅಲ್ಲಿ ಸುಖವಾಗಿ ನೆಲೆಸಿತ್ತು.ಹೀಗಿರಲು ಒಂದುದಿನ ರಾಜನ ಶಯ್ಯಾಗೃಹಕ್ಕೆ ತಿಗಣೆಯೊಂದು ಬಂತು. ಆಗ ಹೇನು ಹೇಳಿತು” ನೋಡು ನೀನು ಇಲ್ಲಿದ್ದರೆ ನಮ್ಮಿಬ್ಬರನ್ನೂ ಹುಡುಕಿ ಕೊಲ್ಲುತ್ತಾರೆ…” .ಎಂದಿತು. ಆಗ ತಿಗಣೆ ಹೇಳಿತು” ಗೆಳೆಯ ಮನೆಗೆ ಬಂದ ಅತಿಥಿಯನ್ನು ನಿರಾಸೆ ಮಾಡಿ ಹಾಗೇ ಕಳಿಸಬಾರದು. ನಾನು ಹೆಚ್ಚುಕಾಲ ಇಲ್ಲಿರಲಾರೆ. ನಾನು ಅಧಿಕಾರಿಗಳ , ರೈತರ , ಸಾಮಾನ್ಯ ಜನರ ರಕ್ತವನ್ನು ಹೀರಿದ್ದೆ. ಆದರೆ ರಾಜನ ರಕ್ತ ಹೀರಿಲ್ಲ. ಒಂದೇ ಒಂದು ಸಾರಿ ರಾಜನ ರಕ್ತದ ರುಚಿನೋಡಿ ಹೋಗುವೆ..”ಎಂದು ಅಂಗಲಾಚಿತು ತಿಗಣೆ. ಅದಕ್ಕೆ ಹೇನು” ನೋಡು ನೀನು ಮೊದಲೇ ಆತುರಗಾರ. ರಾಜನಿಗೆ ಎಚ್ಚರವಿರುವಾಗ ಕಚ್ಚಿದರೆ ಇಬ್ಬರಿಗೂ ಅಪಾಯ .…

Read More

ಆಲಮಟ್ಟಿ: ಆಲಮಟ್ಟಿ ಜಲಾಶಯ ಎತ್ತರದಿಂದ ಜಲಾವೃತಗೊಳ್ಳುವ ತಾಲ್ಲೂಕಿನ ಏಕೈಕ ಗ್ರಾಮವಾದ ವಂದಾಲ ಗ್ರಾಮದ ಭೂಸ್ವಾಧೀನ ಪ್ರಕ್ರಿಯೆ ಶೀಘ್ರ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿ ವಂದಾಲ ಮುಳಗಡೆ ಹಿತರಕ್ಷಣಾ ವೇದಿಕೆಯ ಸದಸ್ಯರು ಆಲಮಟ್ಟಿಯ ಹೆಚ್ಚುವರಿ ವಿಶೇಷ ಭೂಸ್ವಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಕಳೆದ 2013 ರಿಂದ ವಂದಾಲ ಗ್ರಾಮ ಮುಳುಗಡೆ ಗ್ರಾಮ ಎಂದು ಘೋಷಿಸಿ ಸ್ವಾಧೀನ ಪ್ರಕ್ರಿಯೆ ಆರಂಭಿಸಲಾಗಿದೆ. ಗ್ರಾಮದ ಮನೆ ಮನೆ ಸಮೀಕ್ಷೆ ಕಾರ್ಯ ಪೂರ್ಣಗೊಳಿಸಿ, ಮನೆಗಳ ಮೌಲ್ಯನಿರ್ಧರೀಕರಣ, ಜೆಎಂಸಿ ಪ್ರಕ್ರಿಯೆ ಶೀಘ್ರ ಪೂರ್ಣಗೊಳಿಸಬೇಕು, ಯಾವ ಮನೆಯನ್ನು ಬಿಡದೇ, ಯಾರಿಗೂ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳಬೇಕು. ಇನ್ನೂ ಹೊಸ ಪುನರ್ವಸತಿ ಕೇಂದ್ರದ ರಚನಾ ಪ್ರಕ್ರಿಯೆ ಆರಂಭಿಸಬೇಕು. ಅದಕ್ಕೆ ಬೇಕಾದ ಭೂಮಿಯ ಸ್ವಾಧೀನ ಪ್ರಕ್ರಿಯೆ ತ್ವರಿತಗೊಳಿಸಬೇಕು ಎಂದು ಮನವಿ ಸಲ್ಲಿಸಿದರು.ಹೆಚ್ಚುವರಿ ವಿಶೇಷ ಭೂಸ್ವಾಧೀನಾಧಿಕಾರಿ ಮೋಹನ ನಾಗಠಾಣ ಮಾತನಾಡಿದರು.ಇನ್ನೂ ಹಲವಾರು ಹಂತದಲ್ಲಿ ಕೆಲಸ ಮಾಡಬೇಕಾಗಿರುವದರಿಂದ ವಿಳಂಬಕ್ಕೆ ಅವಕಾಶ ಕೊಡದೇ ಸರ್ಕಾರದ ಸೌಲಭ್ಯ ಗಳನ್ನು ಪಡೆಯಿರಿ. ತಪ್ಪು ಮಾಹಿತಿ ಕೊಡುವವರ ಕಡೆ ಗಮನಕೊಡಬೇಡಿ ಎಂದು ಮನವಿ ಮಾಡಿದರು. ಎಲ್ಲ ಪ್ರಕ್ರಿಯೆಗಳು ಆರಂಭಗೊಂಡಿವೆ…

Read More

ಆಹಾರವೇ ಔಷಧಿ ಮತ್ತು ಅಡುಗೆ ಮನೆಯೇ ಔಷಧಾಲಯ – ವೀಣಾ ಎಚ್.ಪಾಟೀಲ್, ಮುಂಡರಗಿ ಭಾರತೀಯ ಸಂಸ್ಕೃತಿಯಲ್ಲಿ ಅಡುಗೆ ಮನೆಗೆ ವಿಶಿಷ್ಟವಾದ ಸ್ಥಾನ. ಶಡ್ರಸಗಳಾದ ಕ್ಷಾರ, ಲವಣ, ಕಟು, ತಿಕ್ತ,ಮಧುರ, ಆಮ್ಲ ಗಳಿಂದ ಕೂಡಿದ ಭೋಜನ, ಲಂಘನ , ಒಪ್ಪತ್ತು ಊಟ, ಏಕಾದಶಿಯಂತಹ ಆಚರಣೆಗಳು ನಮ್ಮ ದೈಹಿಕ ಆರೋಗ್ಯವನ್ನು ಕಾಪಾಡುತ್ತದೆ. ನಮ್ಮ ಅಡುಗೆ ಮನೆಯ ಒಗ್ಗರಣೆ ಡಬ್ಬಿಯು ಆರೋಗ್ಯದ ಅರಮನೆಯಆಡುಂಬೊಲವಾಗಿದೆ.ಸಾಸಿವೆ…. ಸಾಸಿವೆ ನಮ್ಮ ಒಗ್ಗರಣೆಯ ಪ್ರಮುಖ ವಸ್ತು. ಸಾಸಿವೆ ಇಲ್ಲದ ಒಗ್ಗರಣೆಯನ್ನು ಊಹಿಸಲು ಅಸಾಧ್ಯ. ಆದ್ದರಿಂದಲೇ ಗೌತಮ ಬುದ್ಧನು ಸಾವಿಲ್ಲದ ಮನೆಯ ಸಾಸಿವೆ ತರಲು ಹೇಳಿದ್ದು.ಸಾಸಿವೆಯು ತೀಕ್ಷ್ಣಗುಣವನ್ನು ಹೊಂದಿದ್ದು ಎಣ್ಣೆಯನ್ನು ಕಾಯಿಸಿ ಸಾಸಿವೆಯನ್ನು ಹಾಕಿದಾಗ ಅದು ಚಟಪಟನೆ ಸಿಡಿಯುತ್ತದೆ. ಹೀಗೆ ಸಿಡಿದಾಗ ಅದರಲ್ಲಿರುವ ತಿಕ್ತ ಗುಣವು ಎಣ್ಣೆಯಲ್ಲಿ ಬಿಡುಗಡೆಯಾಗುತ್ತದೆ. ಈ ರೀತಿ ಸಾಸಿವೆಯು ದೇಹದಲ್ಲಿ ಉಷ್ಣಗುಣವನ್ನು ಹೆಚ್ಚಿಸಿ ದೇಹದ ಶಾಖವನ್ನು ಸಮತೋಲನಗೊಳಿಸುತ್ತದೆ. ಕಡು ಚಳಿಗಾಲವನ್ನು ಹೊಂದಿರುವ ಉತ್ತರ ಭಾರತದ ಹಿಮಾಲಯ ಪ್ರದೇಶಗಳಲ್ಲಿ ಸಾಸಿವೆಯ ಎಣ್ಣೆಯನ್ನೇ ಅಡುಗೆಗೆ ಬಳಸುತ್ತಾರೆ. ಬಿಸಿಲು ಪ್ರದೇಶವಾದ ದಕ್ಷಿಣದ ರಾಜ್ಯಗಳಲ್ಲಿ…

Read More

ಕಾಂಗ್ರೆಸ್‌ನ ಹಣ ಎಂದ ಬಿಜೆಪಿ-ಜೆಡಿಎಸ್‌ | ಪಂಚ ರಾಜ್ಯಗಳ ಚುನಾವಣೆಗೆ ಹಣ ಸಂಗ್ರಹದ ಆರೋಪ ಬೆಂಗಳೂರು: ಆದಾಯ ತೆರಿಗೆ ಅಧಿಕಾರಿಗಳು ಗುತ್ತಿಗೆದಾರರು ಆಭರಣ ಮಳಿಗೆ ಮಾಲೀಕರು, ಮಾಜಿ ಕಾರ್ಪೋರೇಟರ್‌ಗಳಿಗೆ ಸೇರಿದ ಹಲವು ಕಡೆ ಐಟಿ ಅಧಿಕಾರಿಗಳು ಶೋಧ ನಡೆಸಿದ್ದಾರೆ.  ಏಳು ಸ್ಥಳಗಳಲ್ಲಿ ದಾಳಿ ನಡೆಸುತ್ತಿದ್ದು, ಇದುವರೆಗೆ 42 ಕೋಟಿ ರೂ. ವಶಪಡಿಸಿಕೊಂಡಿದ್ದಾರೆ.ಈ ಹಣ ಕಾಂಗ್ರೆಸ್‌ಗೆ ಸೇರಿದ್ದು, ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಬಳಸಲು ಕರ್ನಾಟಕದಲ್ಲಿ ಹಣ ಸಂಗ್ರಹಿಸುತ್ತಿದ್ದಾರೆ ಎಂದು ಬಿಜೆಪಿ, ಜೆಡಿಎಸ್‌ ಆರೋಪಿಸಿವೆ.ಐದು ರಾಜ್ಯಗಳಾದ ತೆಲಂಗಾಣ, ಮಧ್ಯಪ್ರದೇಶ, ರಾಜಸ್ಥಾನ, ಮಿಜೋರಾಂ ಮತ್ತು ಛತ್ತೀಸ್‌ಗಢ ಚುನಾವಣೆಗೆ ಹಣ ನೀಡಲು ಕಾಂಗ್ರೆಸ್ ಗುತ್ತಿಗೆದಾರರಿಂದ ಕಮಿಷನ್ ಪಡೆಯುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‌ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.5 ರಾಜ್ಯಗಳ ಚುನಾವಣೆ ಘೋಷಣೆಯಾದ ತಕ್ಷಣ ಕಾಟನ್ ಬಾಕ್ಸ್ ಗಳಲ್ಲಿ ಕೋಟ್ಯಂತರ ರೂಪಾಯಿ ಗುತ್ತಿಗೆದಾರರ ಮನೆಯಲ್ಲಿ ಪತ್ತೆಯಾದ ಹಣ ಯಾರದ್ದು? ಯಾರಿಂದ ಸಂಗ್ರಹಿಸಲಾಗಿದೆ? ಇದಕ್ಕೆ ಸಿಎಂ ಸಿದ್ದರಾಮಯ್ಯ ಉತ್ತರ ನೀಡಬೇಕು ಎಂದು ಕುಮಾರಸ್ವಾಮಿ…

Read More

ವಿಜಯಪುರ: 2022ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ಮುದ್ರಣ ಹಾಗೂ ವಿದ್ಯುನ್ಮಾನ ಪತ್ರಕರ್ತರಿಂದ ಅರ್ಜಿ ಆಹ್ವಾನಿಸಿದೆ.ಅರ್ಹ ಪತ್ರಕರ್ತರು ಬರೆದ ವರದಿ, ಲೇಖನ, ಸುದ್ದಿಛಾಯಾಚಿತ್ರ ಹಾಗೂ ವಿಡಿಯೊ ಕ್ಲಿಪ್ಪಿಂಗ್ ಅರ್ಜಿಯೊಂದಿಗೆ ಕಳುಹಿಸಬಹುದಾಗಿದೆ.ಅತ್ಯುತ್ತಮ ಮಾನವೀಯ ವರದಿ, ಗ್ರಾಮೀಣ ವರದಿ, ಕ್ರೀಡಾ ವರದಿ ಸೇರಿದಂತೆ ಹಲವು ಆಯಾಮಗಳಲ್ಲಿ ಬರೆದಿರುವ ವಿಶೇಷ ವರದಿ ಹಾಗೂ ಲೇಖನಗಳನ್ನು ಮುದ್ರಣ ಮಾಧ್ಯಮದ ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ.ವಿದ್ಯುನ್ಮಾನ ಮಾಧ್ಯಮದವರು ಅತ್ಯುತ್ತಮ ರಾಜಕೀಯ ವಿಶ್ಲೇಷಣೆ, ಅತ್ಯುತ್ತಮ ತನಿಖಾ ವರದಿ, ಸಾಮಾಜಿಕ ಮಾನವೀಯ ವರದಿ, ಅತ್ಯುತ್ತಮ ಆ್ಯಂಕರ್ ಪ್ರಶಸ್ತಿಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.ಪ್ರಶಸ್ತಿಗೆ 2022 ಜನವರಿ 1 ರಿಂದ 2022 ಡಿಸೆಂಬರ್ 31 ರೊಳಗೆ ದಿನಪತ್ರಿಕೆ ಮತ್ತು ನಿಯತಕಾಲಿಕೆಗಳಲ್ಲಿ ಪ್ರಕಟವಾದ ಲೇಖನ, ವರದಿ, ವಿಶೇಷ ವರದಿ, ಸುದ್ದಿ ಛಾಯಾ ಚಿತ್ರಗಳನ್ನು ಕಳುಹಿಸಬೇಕು. ವರದಿ, ಲೇಖನ ಯಾವ ಪ್ರಶಸ್ತಿಗೆ ಎಂಬುದನ್ನು ಲೇಖನದ ಮುಖಪುಟದಲ್ಲಿ ಸ್ಪಷ್ಟವಾಗಿ ಬರೆಯಬೇಕು. ಅನುವಾದ ಮಾಡಿದ ವರದಿ, ಲೇಖನ ಪರಿಗಣಿಸುವುದಿಲ್ಲ.ರಾಜ್ಯ ಸಂಘ, ಜಿಲ್ಲಾ ಮತ್ತು ತಾಲೂಕು ಸಂಘದ ಪದಾಧಿಕಾರಿಗಳು…

Read More

ವಿಜಯಪುರ: ನಗರದ ರಾಜಾಜಿ ನಗರ ನಾಡದೇವಿ ಉತ್ಸವವು ಅ.೧೫ ರಿಂದ ಆರಂಭವಾಗಲಿದೆ ಎಂದು ನಾಡದೇವಿ ಉತ್ಸವ ಸಮಿತಿಯ ಅಧ್ಯಕ್ಷರಾದ ಬಾಬು ಏಳಗಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಭಕ್ತಿ ಶ್ರದ್ದೆಗಳಿಂದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವೈಭವದೊಂದಿಗೆ ಅ.೧೫ ರಿಂದ ೨೪ ರವರೆಗೆ ಆಚರಿಸಲಾಗುವುದು. ೧೫ ರಂದು ಶ್ರೀ ದೇವಿಗೆ ಅಭಿಷೇಕ ಮಹಾಪ್ರಜೆ ಘಟಸ್ಥಾಪನೆ ಮಹಾಮಂಗಳಾರತಿ, ೧೬ ರಂದು ಸಾಯಂಕಾಲ ಅಚಿತಾರಾಷ್ಟ್ರೀಯ ನೃತ್ಯಗಾರ್ತಿಯರಾದ ಕುಮಾರಿ ದಿವ್ಯ, ದೀಕ್ಷಾ ಭೀಸೆ ಹಾಗೂ ತಂಡದವರಿಂದ ವಿವಿಧ ನೃತ್ಯಗಳು, ಖ್ಯಾತ ಸುಗಮ ಸಂಗೀತಗಾರ್ತಿ ಕುಮಾರಿ ಪ್ರಣತಿ ರಾವ್ ಅವರಿಂದ ಭಕ್ತಿಗೀತೆ, ಭಾವಗೀತೆ ಹಾಗೂ ಕನ್ನಡ-ಹಿಂದಿ ಚಿತ್ರಗೀತೆಗಳ ಗಾಯನ ನಡೆಯಲಿದೆ.ಈ ಕಾರ್ಯಕ್ರಮಗಳ ಸಾನಿಧ್ಯವನ್ನು ಮಸಬಿನಾಳ ವಿರಕ್ತಮಠದ ಸಿದ್ದರಾಮ ಸ್ವಾಮಿಜಿ ಹಾಗೂ ಮನಗೂಳಿ ಹಿರೇಮಠದ ಅಭಿನವ ಸಂಗನಬಸವ ಶಿವಾಚಾರ್ಯ ಸ್ವಾಮಿಗಳು ವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ವಹಿಸಲಿದ್ದಾರೆ. ಉದ್ಘಾಟನೆಯನ್ನು ಸಂಸದ ರಮೇಶ ಜಿಗಜಿಣಗಿ ನಡೆಸಿಕೊಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕ.ಸಾ.ಪ ಅಧ್ಯಕ್ಷ ಹಾಸಿಂಪೀರ ವಾಲೀಕಾರ, ಉದ್ದಿಮೆದಾರ ನೀಲೇಶ ಕೋಳಿ, ಶ್ರೀಮಂತ ಝಳಕಿ,…

Read More

ವಿಜಯಪುರ: ಮಹಾನಗರ ಪಾಲಿಕೆಯಲ್ಲಿ ಹೊರಗುತ್ತಿಗೆ ಆಧಾರದ ಮೆಲೆ ದುಡಿಯುತ್ತಿರುವ ವಾಹನ ಚಾಲಕ, ನಿರ್ವಾಹಕರು, ಕಸ ಸಂಗ್ರಹಗಾರರು ಮತ್ತು ಲೋಡರ್ಸ್ ಯುಜೀಡಿ ಕಾರ್ಮಿಕರು ಮತ್ತು ಸುಪರವೈಜರಗಳ ಹಾಗೂ ನೇರ ಪಾವತಿ ಪೌರ ಕಾರ್ಮಿಕರ ೦೪ ತಿಂಗಳ ವೇತನ ನೀಡುವಂತೆ ಆಗ್ರಹಿಸಿ ವಿಜಯಪುರ ಮಹಾನಗರ ಪಾಲಿಕೆ, ವಾಹನ ಚಾಲಕರ ಮತ್ತು ನಿರ್ವಾಹಕರ ಕ್ಷೇಮಾಭಿವೃದ್ದಿ ಸಂಘ (ರಿ) ವಿಜಯಪುರ, ಕರ್ನಾಟಕ ಮುನ್ಸಿಪಲ್ ಕಾರ್ಮಿಕರ ಸಂಘ (ಸಿಐಟಿಯು) ಮತ್ತು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರವಾದ) ಇವರ ಸಹಯೋಗದೊಂದಿಗೆ ವಿಜಯಪುರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿಗಳು, ವೇತನ ಪಾವತಿಗಾಗಿ ೦೩ ದಿನಗಳ ಕಾಲಾವಕಾಶವನ್ನು ಕೊಟ್ಟಿರುತ್ತಾರೆ. ಒಂದು ವೇಳೆ ಮೂರು ದಿನಗಳಲ್ಲಿ ವೇತನ ಪಾವತಿ ಆಗದೇ ಹೋದಲ್ಲಿ ಅನಿರ್ದಿಷ್ಟ ಹೋರಾಟವನ್ನು ಹಮ್ಮಿಕೊಳ್ಳಲಾಗುವದು ಎಂದು ನಿರ್ಧಾರ ಕೈಗೊಳ್ಳಲಾಯಿತು.ಈ ಸಂದರ್ಭ ಮುಖಂಡರು ಮಾತನಾಡಿ, ವಿಜಯಪುರ ಮಹಾನಗರ ಪಾಲಿಕೆಯಲ್ಲಿ ಸುಮಾರು ವರ್ಷಗಳಿಂದ ಹೊರ ಗುತ್ತಿಗೆ ಆಧಾರದ ಮೇಲೆ ವಾಹನ ಚಾಲಕ, ನಿರ್ವಾಹಕರು,ಕಸ ಸಂಗ್ರಹಗಾರರು ಮತ್ತು ಲೋಡರ್ಸ್ ಯುಜಿಡಿ ಕಾರ್ಮಿಕರು ಮತ್ತು ಸುಪರವೈಜರಗಳ…

Read More