Author: editor.udayarashmi@gmail.com

-ಚೇತನ ಶಿವಶಿಂಪಿಮುದ್ದೇಬಿಹಾಳ: ಪಾರದಶÀðಕ ಹಾಗೂ ಕಟ್ಟು ನಿಟ್ಟಿನ ಪರೀಕ್ಷೆಗಳು ನಡೆಸುವಂತೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿಗಳು ಸೂಚಿಸಿದ್ದರೂ ತಾಲೂಕಿನ ಪರೀಕ್ಷಾ ಕೇಂದ್ರವೊAದರಲ್ಲಿ ಪರೀಕ್ಷಾ ಪಾವಿತ್ರö್ಯಕ್ಕೆ ಧಕ್ಕೆ ತರುವಂತಹ ಘಟನೆ ನಡೆದಿರುವುದು ವಿಪರ್ಯಾಸ.ಪಟ್ಟಣದ ಎಂಜಿಎAಕೆ ಸೆಂಟರ್ ನಲ್ಲಿ ಕೊಠಡಿಯ ಮೇಲ್ವಿಚಾರಕರ ನೇಮಕದಲ್ಲಿ ಗೋಲಮಾಲ್ ನಡೆದಿದೆ ಎನ್ನಲಾಗುತ್ತಿದೆ. ಇಲ್ಲಿ ಇರುವ ಒಟ್ಟು ೧೪ ಕೊಠಡಿಗಳಿಗೆ ರಿಲೀವರ್ ಸೇರಿದಂತೆ ಒಟ್ಟು ೨೦ ಜನ ಕೊಠಡಿಯ ಮೇಲ್ವಿಚಾರಕರನ್ನು ನೇಮಿಸಿ ಡಿಡಿಪಿಐ ಅಧಿಕೃತವಾಗಿ ಆದೇಶಿಸಿದ್ದರೂ, ಮೂರು ಜನರನ್ನು ಅನಧಿಕೃತವಾಗಿ ನೇಮಕ ಮಾಡಿಕೊಳ್ಳಲಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ.ಅಷ್ಟಕ್ಕೂ ಈ ಮೂರು ಜನರ ಪೈಕಿ ಇಬ್ಬರು ಶಿಕ್ಷಕರು ಈಗಾಗಲೇ ಬೇರೆ ಪರೀಕ್ಷಾ ಕೇಂದ್ರಗಳಿಗೆ ಕೊಠಡಿಯ ಮೇಲ್ವಿಚಾರಕರಾಗಿ ಅಧಿಕೃತವಾಗಿ ನೇಮಕವಾದವರು. ಒಬ್ಬರೇ ಶಿಕ್ಷಕ ಎರಡು ಪರೀಕ್ಷಾ ಕೇಂದ್ರಗಳಲ್ಲಿ ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸಲು ಹೇಗೆ ಸಾಧ್ಯ? ಈ ಕುರಿತು ಸಂಬAಧಿಸಿದ ಅಧೀಕ್ಷಕರಿಗೆ ಪ್ರಶ್ನಿಸಿದರೆ ಅವರು ಬೇರೆ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವುದು ಗೊತ್ತಿದೆ ಎಂಬ ಉತ್ತರ ನೀಡಿದರೇ ವಿನಃ ಈವರೆಗೆ ನಾಲ್ಕು ಪರೀಕ್ಷೆಗಳು ಮುಕ್ತಾಯವಾದರೂ ಆದೇಶ…

Read More

ವಿಜಯಪುರ: ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಬಾಕಿ ಇರುವ ಎಲ್ಲ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವುದಾಗಿ ಕೆ.ಪಿ.ಸಿ.ಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಹೇಳಿದರು. ಬಬಲೇಶ್ವರ ತಾಲೂಕಿನ ಹಲಗಣಿ, ಶೇಗುಣಸಿ, ಮದಗುಣಕಿ, ಕಂಬಾಗಿ, ನಂದ್ಯಾಳ, ಬೋಳಚಿಕ್ಕಲಕಿ ಮತ್ತು ಸಂಗಾಪುರ ಎಸ್. ಎಚ್ ಗ್ರಾಮಗಳಿಗೆ ಭೇಟಿ ನೀಡಿದ ಅವರು ಗ್ರಾಮಸ್ಥರೊಂದಿಗೆ ಮಾತನಾಡಿದರು. 2013 ರಿಂದ 2018ರ ಅವಧಿಯಲ್ಲಿ ಜಲಸಂಪನ್ಮೂಲ ಸಚಿವನಾಗಿ ಶಕ್ತಿಮೀರಿ ಸಾಕಷ್ಟು ನೀರಾವರಿ ಕೆಲಸ ಮಾಡಿದ್ದೇನೆ. ಮುಂದೆ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದ್ದು, ಎಲ್ಲ ಬಾಕಿ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಿ, ರೈತರ ಜಮೀನಿಗೆ ನೀರು ಹರಿಸಲಾಗುವುದು ಎಂದು ಹೇಳಿದರು. ಈ ಭಾಗದಲ್ಲಿ ಈ ಹಿಂದೆ ಇದ್ದ ದುಸ್ಥಿತಿ ಮತ್ತು ಈಗ ಅಭಿವೃದ್ಧಿಯಿಂದ ಆಗಿರುವ ಸುಸ್ಥಿತಿಯನ್ನು ಜನರು ಅರ್ಥ ಮಾಡಿಕೊಳ್ಳಬೇಕು. ಈ ಮುಂಚೆ ಟ್ಯಾಂಕರ್ ಮೂಲಕ ನೀರು ಪಡೆಯಲು ಹರಸಾಹಸ ಪಡುತ್ತಿದ್ದ ಜನರ ಮನೆ ಬಾಗಿಲಿಗೆ ನಳಗಳ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿದೆ. ಸಚಿವನಾಗಿದ್ದಾಗ ಕೇವಲ ಐದೇ ವರ್ಷಗಳಲ್ಲಿ…

Read More

ವಿಜಯಪುರ: ಜಿಲ್ಲೆಯ ನಾಗಠಾಣ ವಿಧಾನಸಭಾ ಮೀಸಲು ಮತಕ್ಷೇತ್ರದ ಟಿಕೇಟನ್ನು ಸಂಘ ಪರಿವಾರದ ಹಿನ್ನೆಲೆಯಿರುವ ಛಲವಾದಿ ಸಮುದಾಯದ ಮಂಜುನಾಥ ಮೀಸಿಯವರಿಗೆ ನೀಡಬೇಕು ಎಂದು ರಾಷ್ಟಿçÃಯ ಚಲವಾದಿ ಮಹಾಸಭಾ ಹಿಂದು ರಾಷ್ಟ್ರೀಯ ಅಧ್ಯಕ್ಷೆ ಡಾ.ಸ್ಪಂದನಾ ಮತ್ತು ರಾಷ್ರೀಯ ಸಮಾಜವಾದ ಆಂದೋಲನದ ರಾಷ್ರೀಯ ಸಂಚಾಲಕ ಚಂದ್ರಶೇಖರ ಗಬ್ಬೂರ(ವಕೀಲರು) ಆಗ್ರಹಿಸಿದರು.ಸೋಮವಾರ ನಗರದಲ್ಲಿ ಸುದ್ದಿಗೋಷ್ಟಿಯನ್ನುದ್ದೇಶಿಸಿ ಅವರು ಮಾತನಾಡಿದರು.ಮAಜುನಾಥ ಮೀಸಿಯವರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನಲ್ಲಿ ನಗರ ಮಟ್ಟದಿಂದ ರಾಷ್ಟಿçÃಯ ಮಟ್ಟದವರೆಗೂ ಅನನ್ಯ ಜವಾಬ್ದಾರಿಗಳನ್ನು ನಿರ್ವಹಿಸಿದವರು. ರಾಜ್ಯದ ಸಂಘಟನಾ ಕಾರ್ಯದರ್ಶಿಯಾಗಿ ೨೦ ವರ್ಷಗಳ ಸುಧೀರ್ಘ ಕಾಲದವರೆಗೆ ಪೂರ್ಣಾವಧಿ ಕಾರ್ಯಕರ್ತರಾಗಿ ಕೆಲಸ ಮಾಡಿದವರು ದಲಿತ ಬಲಗೈ ಸಮುದಾಯದದಲ್ಲಿ ಯಾರೂ ಇಲ್ಲ. ಯಾವುದೇ ಫಲಾಪೇಕ್ಷೆ ಇಲ್ಲದೆ ಕೆಲಸ ಮಾಡಿದ ಇಂಥವರನ್ನು ಸಂಘ ಪರಿವಾರ ಗುರುತಿಸಬೇಕು ಎಂದರು.ಕಳೆದ 75 ವರ್ಷಗಳಿಂದ ಕಾಂಗ್ರೆಸ್ ಪಕ್ಷ ದಲಿತ ಸಮುದಾಯಕ್ಕೆ £Ãಡಿದ ಕೊಡುಗೆ ಶೂನ್ಯ, ಕೇವಲ ನಮ್ಮ ಮತಗಳ ಓಲೈಕೆಗೆ ನಮ್ಮನ್ನು ಬಳಸಿಕೊಂಡರು. £ಜವಾಗಿಯೂ ದಲಿತರ ಕೂಗು ಕೇಳಿಸಿಕೊಂಡು ಈ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಒದಗಿಸಿದ್ದು ಈ ಬಿಜೆಪಿ…

Read More

ಹೊನವಾಡ: ಕೋವಿಡ್ ಮಹಾಮಾರಿ ದೇಶಾದ್ಯಂತ ವ್ಯಾಪಿಸಿದಾಗ ಪ್ರಧಾನಿಯವರ ನಾಯಕತ್ವದಲ್ಲಿ ಸಮರ್ಥವಾಗಿ ಕೋವಿಡ್‌ ಎದುರಿಸಿ ಹಿಂದಿನ ಸ್ಥಿತಿಗೆ ಮರಳಿದ್ದೇವೆ. ಆರ್ಥಿಕ ಪರಿಸ್ಥಿತಿ ಕೂಡ ಚೇತರಿಸಿಕೊಂಡಿದೆ ಎಂದು ಬಿಜೆಪಿ ಮುಖಂಡ ವಿಜುಗೌಡ ಪಾಟೀಲ್ ನುಡಿದರು.ತಿಕೋಟಾ ತಾಲೂಕಿನ ಹೊನವಾಡ ಗ್ರಾಮದಲ್ಲಿ ನಡೆದ ಬಿಜೆಪಿ ಪಕ್ಷದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಆರಂಭದಲ್ಲಿ ಕೊರೊನಾ ಲಸಿಕೆಯನ್ನು ಅಪಹಾಸ್ಯ ಮಾಡಿದ ಕಾಂಗ್ರೆಸ್ಸಿಗರು ಅದನ್ನು ಮೋದಿ ಲಸಿಕೆ ಎಂದು ಕರೆದರಲ್ಲದೆ, ಲಸಿಕೆ ಪಡೆದರೆ ಸಂತಾನ ಶಕ್ತಿ ಕಳೆದುಕೊಳ್ಳುತ್ತಾರೆ ಎಂಬ ಅಪಪ್ರಚಾರವನ್ನು ಸಹ ಮಾಡಿತ್ತು. ಆದರೆ ಕೋವಿಡ್‌ ತೀವ್ರವಾದ ಬಳಿಕ ಕಾಂಗ್ರೆಸ್‌ ನಾಯಕರೇ ಸಾಲಿನಲ್ಲಿ ನಿಂತು ಲಸಿಕೆ ಪಡೆದರು ಎಂದು ವಿಜುಗೌಡ ಪಾಟೀಲ ವ್ಯಂಗ್ಯವಾಡಿದರು.ಇಂದಿನ ದಿನಗಳಲ್ಲಿ ದೇಶ ಅಭಿವೃದ್ಧಿಯಾಗಿದೆ ಎಂದರೆ ಅದಕ್ಕೆ ಬಿಜೆಪಿ ಕಾರಣ. ಚುನಾವಣೆ ಬಂದಾಗ ಸೀರೆ ಕುಕ್ಕರ್ ಮೊಬೈಲ್ ಹಂಚುವುದು ಅಭಿವೃದ್ಧಿಯ ಕೆಲಸವಲ್ಲ ಎಂದರು.ಈ ಸಂದರ್ಭದಲ್ಲಿ ಉದ್ಯಮಿ ಗಣೇಶ್ ಗುಗ್ಗರಿ ಮತ್ತು ಗ್ರಾಮದ ಅನೇಕ ಯುವಕರು ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿಗೆ ಸೇರ್ಪಡೆಗೊಂಡರು.ವೇದಿಕೆಯ ಮೇಲೆ ಬಿಜೆಪಿ ಒಬಿಸಿ ಯುವ ಮೋರ್ಚಾ ಪ್ರಧಾನ…

Read More

ಮುದ್ದೇಬಿಹಾಳದ ಬಾಗವಾನ ಯುವಕರ ಸಂಘದಿಂದ ಇಫ್ತಿಯಾರ ಕೂಟ ಮುದ್ದೇಬಿಹಾಳ : ಬದುಕಿನಲ್ಲಿ ಯಾರಿಗೂ ನೋವು ಮಾಡದೇ ಎಲ್ಲರನ್ನೂ ಪ್ರೀತಿಸುವ ಸದ್ಭುದ್ದಿಯ ನಾಲಿಗೆ ಯಾರಲ್ಲಿ ಇರುತ್ತದೆಯೋ ಅವನು ದೊಡ್ಡವನು ಎಂದು ಕುಂಟೋಜಿ ಸಂಸ್ಥಾನ ಹಿರೇಮಠದ ಡಾ.ಚನ್ನವೀರ ದೇವರು ಹೇಳಿದರು.ಪಟ್ಟಣದ ಭಾರಪೇಟ್ ಗಲ್ಲಿಯಲ್ಲಿ ಬಾಗವಾನ್ ಜಮಾಅತ್ ಮತ್ತು ಬಾಗವಾನ್ ಯುವಕರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಇಫ್ತಿಯಾರ್ ಕೂಟದಲ್ಲಿ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.ಪ್ರವಾದಿ ಮೊಹಮ್ಮದರು ಹೇಳಿದಂತೆ, ನಾವು ಊಟ ಮಾಡುವದಕ್ಕಿಂತ ನಮ್ಮ ಮನೆಗೆ ಬಂದ ಅತಿಥಿಯನ್ನು ಮೊದಲು ಉಣಬಡಿಸುವದು ದೊಡ್ಡ ಗುಣ. ಇನ್ನೊಬ್ಬರನ್ನು ಪ್ರೀತಿಸುವ ವಾತ್ಸಲ್ಯದಿಂದ ನೋಡುವ ಗುಣ ನಮ್ಮಲ್ಲಿ ಇಲ್ಲದಿದ್ದರೆ ನಾವು ಯಾವ ಧರ್ಮ ಆಚರಿಸಿದರೂ ಅದು ದೊಡ್ಡದಾಗುವದಿಲ್ಲ. ಅಂಥವರು ದೊಡ್ಡವರು ಎನಿಸಿಕೊಳ್ಳುವದಿಲ್ಲ ಎಂದರು.ದಿ ಕರ್ನಾಟಕ ಕೋ ಅಪ್ ಬ್ಯಾಂಕ್ ಅಧ್ಯಕ್ಷ ಸತೀಶ ಓಸ್ವಾಲ್ ಮಾತನಾಡಿ, ಉಪವಾಸ ಮಾಡುವದರಿಂದ ದೇಹದ ಎಲ್ಲ ಅಂಗಾAಗಗಳೂ ಶುದ್ಧವಾಗುತ್ತವೆ. ಉಪವಾಸ ಎಲ್ಲ ಧರ್ಮದಲ್ಲಿಯೂ ಇದೆ ಆದರೆ ಆಚರಣೆ ಮಾತ್ರ ಬೇರೆ ಬೇರೆಯಾಗಿದೆ ಎಂದರು.ಕಸಾಪ ಮಾಜಿ ಅಧ್ಯಕ್ಷ…

Read More

ಅಮೋಘಸಿದ್ದೇಶ್ವರ ಜಾತ್ರೆ | ಪಲ್ಲಕ್ಕಿ ಉತ್ಸವ | ರಥೋತ್ಸವ | ನೀರೋಕುಳಿ | ಕಂಬ ಕಸರತ್ತು ತಿಕೋಟಾ: ತಾಲ್ಲೂಕಿನ ಘೋಣಸಗಿ ಗ್ರಾಮದಲ್ಲಿ ಮೂರು ದಿನಗಳ ಕಾಲ ಜರುಗಿದ ಅಮೋಘಸಿದ್ದ ದೇವರ ಜಾತ್ರೆಯಲ್ಲಿ ಭಕ್ತರು ಭಂಡಾರದಲ್ಲಿ ಮಿಂದೆದ್ದು ಪುಳಕಿತರಾದರು. ಗ್ರಾಮದ ರಾಮೇಶ್ವರ, ಕೇದಾರಲಿಂಗ, ಲಕ್ಷ್ಮಿದೇವಿ ಜಾತ್ರೆ ಹಾಗೂ ಮಲ್ಲಯ್ಯನ ಐದೇಶಿ ಎಲ್ಲವೂ ಸೇರಿ ಗ್ರಾಮಸ್ಥರು ಆಚರಣೆ ಮಾಡಿದ್ದು ವಿಶೇಷ. ಮೊದಲ ದಿನ ಗುರುವಾರ ಗ್ರಾಮದ ಅಮೋಘಸಿದ್ದ ದೇವರ ಪಲ್ಲಕ್ಕಿ ಹಾಗೂ ಸೋಮದೇವರಹಟ್ಟಿಯ ಸೋಮನಿಂಗ ದೇವರ ಪಲ್ಲಕಿಯ ಭೇಟಿ ನೀಡಿದವು. ಅಪಾರ ಭಕ್ತ ಸಮೂಹದ ಮಧ್ಯೆ ಪಲ್ಲಕ್ಕಿ ಭೇಟಿ ಭಕ್ತರ ಮನ ಸೆಳೆಯಿತು. ನಂತರ ರಾಮೇಶ್ವರ ದೇವರ ತೇರನ್ನು ಭಕ್ತರು ಎಳೆದರು. ಮಹಿಳೆಯರು ಬಾಳೆಹಣ್ಣು, ಬದಾಮ, ಖಾರಿಕ ಚುರುಮುರಿ ಎಸೆಯುವ ಮೂಲಕ ಭಕ್ತಿಯ ಪರಾಕಾಷ್ಠೆ ಮೆರೆದರು. ಶಾಲಾ ಮಕ್ಕಳಿಂದ ಕೋಲಾಟ, ಯುವಕರಿಂದ ಡೊಳ್ಳು ಕುಣಿತ ಜರುಗಿದವು. ಎರಡನೇ ದಿನ ಗುರುವಾರ ಯುವಕರ ನೀರೋಕುಳಿ ಮದ್ಯಾಹ್ನ ಸುಡುಬಿಸಿಲಿನಲ್ಲಿ ಆರಂಭವಾಯಿತು. ಐವತ್ತು ಅಡಿಕ್ಕಿಂತ ಹೆಚ್ಚು ಎತ್ತರವಿರುವ ಕಂಬ…

Read More

ಶಾಸಕರಿಂದ ಅಧಿಕಾರ ದುರುಪಯೋಗ | ದೌರ್ಜನ್ಯ, ಗೂಂಡಾಗಿರಿ | ಎಸ್ಕಾರ್ಟ ಹಿಂಪಡೆಯದಿದ್ದರೆ ಹೋರಾಟದ ಎಚ್ಚರಿಕೆ ಕಾಂಗ್ರೆಸ್ ಮುಖಂಡರಿಂದ ಆರೋಪಗಳ ಸುರಿಮಳೆ ಮುದ್ದೇಬಿಹಾಳ: ಜೀವ ಬೆದರಿಕೆ ಇದೆ, ಗೂಂಡಾಗಿರಿ ಮಾಡುತ್ತಿದ್ದಾರೆ ಎಂದು ಹೇಳಿ ಎಸ್ಕಾರ್ಟ ಪಡೆದಿರುವ ಶಾಸಕ ನಡಹಳ್ಳಿ ತಾವೇ ಸಾಕಷ್ಟು ಜನರ ಮೇಲೆ ಗೂಂಡಾಗಿರಿ ಮಾಡಿ ರೌಡಿ ಶೀಟರ್ ಕೇಸ್ ದಾಖಲಿಸಿದ್ದಾರೆ. ಕೂಡಲೇ ಪೊಲೀಸ್ ಇಲಾಖೆ ಅವರಿಗೆ ನೀಡಲಾದ ಎಸ್ಕಾರ್ಟನ್ನು ಮರಳಿ ಪಡೆಯದಿದ್ದರೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ ಎಚ್ಚರಿಸಿದರು.ಪಟ್ಟಣದ ಹುಡ್ಕೋದಲ್ಲಿರುವ ಮಾಜಿ ಸಚಿವರು ಹಾಗೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಿ.ಎಸ್.ನಾಡಗೌಡ ಅಪ್ಪಾಜಿ ಅವರ ಗ್ರಹ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.ಕಾಂಗ್ರೆಸ್ ಪಕ್ಷದ ಮೇಲೆ ಗೂಬೆ ಕೂರಿಸಲು ಹೊರಟಿರುವ ಶಾಸಕ ನಡಹಳ್ಳಿ ಅವರು ತಾವೇ ಸಾಕಷ್ಟು ಜನರ ಮೇಲೆ ದೌಜ್ಯನ್ಯ ಮಾಡಿದ್ದಾರೆ. ಚುನಾವಣಾ ಸಮಯದಲ್ಲಿ ನೀತಿ ಸಂಹಿತೆ ಉಲ್ಲಂಘಿಸಿ ಒಂದೂವರೆ ಕೋಟಿ ರೂಗಳನ್ನು ಕಾನೂನುಬಾಹಿರವಾಗಿ ವಾಪಸಾತಿ ಮಾಡಿಕೊಂಡಿದ್ದಾರೆ. ಇವರ ಮೇಲೆ ಕೂಡಲೇ ಚುನಾವಣಾ…

Read More

ಬಸವನಬಾಗೇವಾಡಿ: ತಾಲೂಕಿನ ಇವಣಗಿ ರಸ್ತೆಯಿಂದ ಕಣಕಾಲ ಗ್ರಾಮಕ್ಕೆ ಹೋಗುವ ಮುಖ್ಯ ರಸ್ತೆಯ ಅಂಬಳನೂರ ಕ್ರಾಸ್ ಹತ್ತಿರ ಅಬಕಾರಿ ಅಧಿಕಾರಿಗಳು ಶುಕ್ರವಾರ ರಸ್ತೆಗಾವಲು ಮಾಡುತ್ತಿರುವ ಸಂದರ್ಭದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಅಂದಾಜು ರೂ. ೪೬,೪೦೦ ಮೌಲ್ಯದ ೫,೭೬೦ ಲೀ. ಮದ್ಯ ಹಾಗೂ ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.ಆರೋಪಿ ರಮೇಶ ಯಮನಪ್ಪ ನನ್ನೂರ ದಾಳಿ ಸಮಯದಲ್ಲಿ ಪರಾರಿಯಾಗಿದ್ದಾರೆ. ಅಬಕಾರಿ ಉಪ ನಿರೀಕ್ಷಕ ಎಸ್.ಎ.ಹುಂಡೇಕಾರ ಈ ಕುರಿತು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಅಬಕಾರಿ ದಾಳಿಯನ್ನು ಅಬಕಾರಿ ಉಪ ಆಯುಕ್ತ ಶಿವಲಿಂಗಪ್ಪ ಬನಹಟ್ಟಿ, ಉಪ ಅಽಕ್ಷಕ ಎಲ್.ಎಸ್.ಸಲಗರ ಮಾರ್ಗದರ್ಶನದಲ್ಲಿ ಅಬಕಾರಿ ನಿರೀಕ್ಷಕ ಜಿ.ಎಸ್.ಪಾಟೀಲ ನೇತೃತ್ವದಲ್ಲಿ ಅಬಕಾರಿ ಪೇದೆಯವರಾದ ಅನಿಲ ಕರಜಗಿ, ಭೀಮಾಶಂಕರ ಸಂಗೊಂಡ, ಯಮನಪ್ಪ ಮಾದರ, ವಾಹನ ಚಾಲಕ ಬಸು ಶಖಾಪುರ ತಂಡ ಮದ್ಯ, ದ್ವಿಚಕ್ರವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಬಕಾರಿ ಇಲಾಖೆಯ ಪ್ರಕಟಣೆ ತಿಳಿಸಿದೆ.

Read More