Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಭಾವರಶ್ಮಿ ಲೇಖನ- ಮಲಪ್ಪ. ಸಿ. ಖೊದ್ನಾಪೂರ (ತಿಕೋಟಾ)ವಿಜಯಪುರ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಶಿಕ್ಷಣತಜ್ಞ ಮಿಚ್ ಅಲಬೊಮ್ ಅವರು “ಃehiಟಿಜ ಚಿಟಟ ಥಿouಡಿ sಣoಡಿies is ಚಿಟತಿಚಿಥಿs ಥಿouಡಿ moಣheಡಿ’s sಣoಡಿಥಿ, beಛಿಚಿuse heಡಿs is ತಿheಡಿe ಥಿouಡಿs begiಟಿs” ಎಂದು ಹೇಳಿದ್ದಾರೆ. ಮನೆಯೇ ಮೊದಲ ಪಾಠಶಾಲೆ. ಜನನಿಯೇ ಮೊದಲ ಗುರು ಎಂಬುದು ಜಗತ್ತಿನ ಅತಿ ದೊಡ್ಡ ಸತ್ಯ. ಬಾಲ್ಯದಲ್ಲಿ ಮಗು ಸಂಸ್ಕಾರ, ಸಂಸ್ಕೃತಿ, ನೈತಿಕತೆ ಮತ್ತು ಬದುಕಿನ ಪಾಠಗಳನ್ನು ತಾಯಿಯಿಂದ ಮನೆಯಲ್ಲಿ ಕಲಿಯುತ್ತದೆ. ತಾಯಿಯ ಪ್ರೀತಿ ಮತ್ತು ಮಾರ್ಗದರ್ಶನ ಆ ಮಗುವಿನ ಮುಂದಿನ ಜೀವನಕ್ಕೆ ಅಡಿಪಾಯ. ಅದಕ್ಕಂತಲೇ ಹಿರಿಯರು “ಪುಸ್ತಕದ ಪಾಠ ಶಾಲೆಗೆ, ಬದುಕಿನ ಪಾಠ ಮನೆಗೆ” ಎಂದು ಹೇಳಿರುವುದು ಖಂಡಿತ ನಿಜ. ಮಗುವಿನ ಸರ್ವಾಂಗೀಣ ಬೆಳವಣಿಗೆಯಲ್ಲಿ ತಾಯಿ ಮತ್ತು ಮನೆಯ ಪಾತ್ರವನ್ನು ಎತ್ತಿ ತೋರಿಸುತ್ತದೆ. ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಕೇವಲ ಜ್ಞಾನ ಸಂಪಾದನೆ, ಗರಿಷ್ಠ ಅಂಕದೊಂದಿಗೆ ಪದವಿ ಮತ್ತು ಜೀವನೋಪಾಯಕ್ಕೊಂದು ಉದ್ಯೋಗಕ್ಕಾಗಿ ಶಿಕ್ಷಣ ಎಂಬಂತಾಗಿದೆ. ವಿದ್ಯಾರ್ಥಿಯ ಸರ್ವಾಂಗೀಣ ವಿಕಾಸ ಕೇವಲ…
ಲೇಖನ- ಜಯಶ್ರೀ.ಜೆ. ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕರುಬೆಳಗಾವಿಮೊ: ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ಮಾತು ಆಡಿದರೆ ಹೋಯ್ತು ಮುತ್ತು ಒಡೆದರೆ ಹೋಯ್ತು ಎಂಬ ಗಾದೆ, ಶಬ್ದಗಳು ಮಾನವನ ಬದುಕಿನಲ್ಲಿ ಬಹು ದೊಡ್ಡ ಪಾತ್ರ ವಹಿಸುತ್ತವೆ ಎಂಬ ಸಂಗತಿಯನ್ನು ಒತ್ತಿ ಹೇಳುತ್ತದೆ. ಆಡುವ ಶಬ್ದಗಳಿಗೆ ತುಂಬಾ ಬೆಲೆಯಿದೆ ಅವು ಪರಿಣಾಮಕಾರಿ ಎಂದು ತಿಳಿದವರು ಬಹಳ. ಮೌನವೂ ಒಂದು ಭಾಷೆ ಎಂದು ತಿಳಿದವರು ವಿರಳ. ಮಾತಿಗೆ ಹೇಗೆ ಬೆಲೆಯಿದೆಯೋ ಹಾಗೆಯೇ ಮೌನಕ್ಕೂ ಬೆಲೆಯಿದೆ ಎಂದು ಎಷ್ಟೋ ಜನಕ್ಕೆ ಗೊತ್ತಿಲ್ಲ. ಎಲ್ಲ ಭಾವನೆಗಳನ್ನು ಶಬ್ದಗಳಲ್ಲಿ ಹಿಡಿದಿಡಲು ಆಗುವುದಿಲ್ಲವೆಂಬುದು ಅನುಭವಕ್ಕೆ ಬಂದರೂ ಮೌನದ ಬೆಲೆ ಅರಿತುಕೊಂಡವರು ತುಂಬಾ ಕಡಿಮೆ.ಮಾತನಾಡಿ ಇತರರನ್ನು ಆಕರ್ಷಿಸುವುದು ಮತ್ತು ಗಮನದ ಕೇಂದ್ರಬಿಂದುವಾಗಬಹುದು. ಇತರರನ್ನು ಆಯಸ್ಕಾಂತದಂತೆ ಸೆಳೆಯಬಹುದು ಎಂಬ ಸಂಗತಿಗಳು ನಿಜ. ಬಹುತೇಕ ಜನರಿಗೆ ಮೌನವಾಗಿ ಆಕರ್ಷಕವಾಗಿರುವುದು ಎಂದರೆ ನಂಬಲಾಗುವುದಿಲ್ಲ. ಮೌನ ಒಂದ ಕಾಂತೀಯ ಶಕ್ತಿಯನ್ನು ಹೊಂದಿದೆ.. ಜಗತ್ತಿನಲ್ಲಿ ಸಾವಿರಾರು ಭಾಷೆಗಳಿವೆ. ಒಂದಕ್ಕಿಂತ ಒಂದು ಭಿನ್ನ. ಒಂದಕ್ಕಿಂತ ಒಂದು ಚೆಂದ. ಎಲ್ಲರಿಗೂ ಎಲ್ಲ ಭಾಷೆಯನ್ನು ಕಲಿಯುವುದು ಕಷ್ಟ ಸಾಧ್ಯ.…
ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ಅಧ್ಯಕ್ಷೆ ಶ್ರೀಮತಿ ಕಾಂತಾ ನಾಯ್ಕ ಅಧಿಕಾರಿಗಳಿಗೆ ಸೂಚನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯ ನಿರುದ್ಯೋಗಿ ಯುವಕರಿಗೆ ಉದ್ಯೋಗಾವಕಾಶ ಒದಗಿಸುವ ಉದ್ದೇಶದಿಂದ ಫೆ.೨ರಂದು ಬೆಳಿಗ್ಗೆ ೯ ರಿಂದ ಸಂಜೆ ೫ ಗಂಟೆಯವರೆಗೆ ನಗರದ ದರ್ಬಾರ ಶಾಲಾ ಆವರಣದಲ್ಲಿ ಉದ್ಯೋಗ ಮೇಳ ಆಯೋಜಿಲಾಗಿದೆ. ಈ ಉದ್ಯೋಗ ಮೇಳದಲ್ಲಿ ಜಿಲ್ಲೆಯ ನಿರುದ್ಯೋಗಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ hಣಣಠಿs://uಜಥಿogಚಿmeಟಚಿ.ಞಜಛಿಞಚಿಡಿಟಿಚಿಣಚಿಞಚಿ.ಛಿom ಮೂಲಕ ಕ್ಲಿಕ್ಮಾಡಿ ವಿವರ ಭರ್ತಿ ಮಾಡಿ, ನೋಂದಾಯಿಸಿಕೊಂಡು, ಉದ್ಯೋಗ ಮೇಳದ ಸದುಪಯೋಗ ಪಡೆದುಕೊಳ್ಳುವ ನಿಟ್ಟಿನಲ್ಲಿ ಅಗತ್ಯ ಮಾಹಿತಿ ಒದಗಿಸುವಂತೆ ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀಮತಿ ಕಾಂತಾ ನಾಯ್ಕ ಅವರು ಸೂಚನೆ ನೀಡಿದರು.ಅವರು ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ನಡೆದ ಕೌಶಲ್ಯದಿಂದ ಉದ್ಯೋಗದ ಕಡೆಗೆ –ಯುವ ಸಮೃದ್ಧಿ ಸಮ್ಮೇಳನ ಹಾಗೂ ಉದ್ಯೋಗ ಮೇಳದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವಲ್ಲಿ ಉದ್ಯೋಗ ಮೇಳಗಳು ಪ್ರಮುಖ ಪಾತ್ರ ವಹಿಸುತ್ತಿದ್ದು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ವೆಬ್ಸೈಟ್ ಮೂಲಕ ನೋಂದಾಯಿಸಿಕೊಂಡು ಸದುಪಯೋಗಪಡಿಸಿಕೊಳ್ಳಲು ಅಗತ್ಯ…
ಮಾರ್ಸನಳ್ಳಿ ಗ್ರಾಮದಲ್ಲಿ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಆಶಯ ಉದಯರಶ್ಮಿ ದಿನಪತ್ರಿಕೆ ಇಂಡಿ: ರೈತರು ಸಂಘ ಸಂಸ್ಥೆಗಳನ್ನು ಕಟ್ಟಿ ಇಲ್ಲವೆ ಸರಕಾರದವರು ಕಾರ್ಖಾನೆ ಪ್ರಾರಂಭ ಮಾಡಿದರೆ ರೈತರ ಬೆಳೆಗಳಿಗೆ ಶೀಘ್ರ ಮಾರುಕಟ್ಟಿ ದೊರೆಯುತ್ತದೆ. ಜೊತೆಗೆ ರೈತರಿಗೆ ಅರ್ಥಿಕವಾಗಿ ಅನೂಕೂಲವಾಗಲಿದೆ ಎಂದು ಇಂಡಿಯ ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.ತಾಲೂಕಿನ ಮಾರ್ಸನಳ್ಳಿ ಗ್ರಾಮದಲ್ಲಿ ನೂತನವಾಗಿ ಪ್ರಾರಂಭವಾದ ಕರ್ನಾಟಕ ಕಾಟಸೀಡ್ಸ ಹತ್ತಿಯ ಕಾರ್ಖಾನೆ ಉದ್ಘಾಟಿಸಿ ಮಾತನಾಡುತ್ತಿದ್ದರು.ಅಫಜಲಪೂರ ಶಾಸಕ ಎಂ.ವೈ ಪಾಟೀಲರು ಮಾತನಾಡಿ, ಇಂದು ಭೀಮಾ ತೀರ ಎಲ್ಲ ರೀತಿಯಲ್ಲೂ ಪ್ರಗತಿ ಹೊಂದುತ್ತಿದೆ. ಭೀಮೆಯ ದಡದಲ್ಲಿ ಸಕ್ಕರೆ ಹತ್ತಿ ಮತ್ತು ರೈತರಿಗೆ ಉಪಯೋಗವಾಗುವ ಕಾರ್ಖಾನೆ ಪ್ರಾರಂಭೀಸಿದರೆ ಅನುಕೂಲವಾಗುತ್ತದೆ. ಈ ದಿಶೇಯಲ್ಲಿ ಶಾಸಕ ಯಶವಂತಗೌಡ ಪಾಟೀಲರಾಗಲೀ ರೈತ ಸಂಘಗಳು ಪ್ರಾರಂಬಿಸಿದರೆ ಸಂಪೂರ್ಣ ಪ್ರೋತ್ಸಾಹ ನೀಡುವದಾಗಿ ತಿಳಿಸಿದರು.ಮಾಜಿ ಸಚಿವ ಮಾಲಿಕಯ್ಯಾ ಗುತ್ತೇದಾರ, ಶ್ರೀ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು, ಚಂದ್ರಶೇಖರ ಶಿವಾಚಾರ್ಯರು, ಅಭಿನವ ಪುಂಡಲಿಂಗ ಶಿವಯೋಗಿಗಳು, ಡಾ. ಸಂದೀಪ ಪಾಟೀಲ, ಶ್ರೀಶೈಲಯ್ಯ ಶ್ರೀಗಳು, ಆನಂದಲಿಂಗ ಶ್ರೀಗಳು, ಬಸವಲಿಂಗ ಶರಣರು, ನೀತಿನ ಗುತ್ತೇದಾರ,…
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ವಕೀಲ ವೃತ್ತಿ ಕೇವಲ ಉದ್ಯೋಗವಲ್ಲ, ಇದು ನ್ಯಾಯ ವ್ಯವಸ್ಥೆಯ ಪ್ರಮುಖ ಕಂಬ ಎಂದು ಜಯ ಕರ್ನಾಟಕ ಸಂಘಟನೆಯ ಕಾನೂನು ಘಟಕದ ರಾಜ್ಯಾಧ್ಯಕ್ಷ ಹಾಗೂ ಬೆಂಗಳೂರು ವಕೀಲರ ಸಂಘದ ಮಾಜಿ ಉಪಾಧ್ಯಕ್ಷ ನಾರಾಯಣಸ್ವಾಮಿ ಜಿ. ಹೇಳಿದರು.ಅವರು ರಾಜ್ಯ ವಕೀಲರ ಪರಿಷತ್ ಚುನಾವಣೆಗೆ ಸ್ಪರ್ಧಿಸಿರುವ ಹಿನ್ನೆಲೆ ಮಂಗಳವಾರ ಪಟ್ಟಣದ ನ್ಯಾಯಾಲಯಕ್ಕೆ ಭೇಟಿ ನೀಡಿ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದರು.ವಕೀಲರ ಸಮಸ್ಯೆಗಳನ್ನು ಅರಿತು, ಅವುಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುವ ಕಾರ್ಯವನ್ನು ನಾನು ಮಾಡುವೆ. ವಕೀಲರ ಹಿತಾಸಕ್ತಿಗೆ ವಿರುದ್ಧವಾಗುವ ಯಾವುದೇ ನಿರ್ಧಾರಗಳಿಗೆ ಅವಕಾಶ ನೀಡುವುದಿಲ್ಲ. ನಾನು ಯಾವುದೇ ರಾಜಕೀಯ ಪಕ್ಷಕ್ಕೆ, ಜಾತಿಗೆ ಸೀಮಿತವಾಗಿಲ್ಲ ಎಂದು ಸ್ಪಷ್ಟಪಡಿಸಿದ ಅವರು ಎಲ್ಲ ವಕೀಲರು ನನ್ನ ಕುಟುಂಬ ಎಂದು ಭಾವಿಸಿ ಅವರ ಕಷ್ಟಗಳಿಗೆ ತಕ್ಷಣ ಸ್ಪಂದಿಸುವೆ ಎಂದರು.ನ್ಯಾಯವಾದಿಗಳ ಸಂಘದ ಅಧ್ಯಕ್ಷ ಶಶಿಕಾಂತ ಮಾಲಗತ್ತಿ ಮಾತನಾಡಿ, ಚುನಾವಣೆಗೂ ಪೂರ್ವದಲ್ಲಿ ಸಂಘದ ಸರ್ವ ಸದಸ್ಯರೊಂದಿಗೆ ಚರ್ಚಿಸಿ ಮತ ನೀಡುವ ಭರವಸೆ ನೀಡಿದರು.ಹಿರಿಯ, ಕಿರಿಯ ಹಾಗೂ ಯುವ ವಕೀಲರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಕೌಟುಂಬಿಕ ಕಲಹ ಹಾಗೂ ಒತ್ತಡಗಳಿಂದ ತಮ್ಮ ಸಮಸ್ಯೆಗಳನ್ನು ನಿರ್ಲಕ್ಷಿಸಿ ಜೀವನವನ್ನು ಸಾಗಿಸುತ್ತಿರುವ ಮಹಿಳೆಯರ ಮನಸ್ಸನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಪೂರಕವಾಗಿವೆ ಎಂದು ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರ ಸಮಾಜ ಕಾರ್ಯಕರ್ತೆ ರಶ್ಮಿ ನೂಲಾನವರ ಹೇಳಿದರು.ಸಿಂದಗಿ ತಾಲೂಕಿನ ರಾಂಪುರ ಪಿಎ ಗ್ರಾಮದ ಸಿದ್ಧರಾಮೇಶ್ವರ ಸಮುದಾಯ ಭವನದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಶ್ರೀಧರ ವಿದ್ಯಾವರ್ಧಕ ಸಂಘ, ವಿಜಯಪುರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಿಂದಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಾರ್ಯಾಲಯ ಹಾಗೂ ಸಂಗಮ ಸಮಾಜ ಸೇವಾ ಸಂಸ್ಥೆಯ ಸಹಯೋಗದಲ್ಲಿ ಹಮ್ಮಿಕೊಂಡ ಮಹಿಳಾ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಹಿಳೆಯರ ಏಳಿಗೆಗಾಗಿ ಸರಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲಿ ಮಹಿಳೆಯರು ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರವು ಒಂದು ಎಂದರು.ಈ ವೇಳೆ ಸಂಗಮ ಸಂಸ್ಥೆಯ ಸಹ ನಿರ್ದೇಶಕಿ ಸಿಸ್ಟರ್ ಸಿಂತಿಯಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಂಗನವಾಡಿ ಮೇಲ್ವಿಚಾರಕಿ ಸುನಿತಾ ಕಪ್ಪೆಣವರ ಮಾತನಾಡಿ,…
ಸಿಂದಗಿಯಲ್ಲಿ ಅಶೋಕ ಲಾಂಛನ ಸ್ತಂಭ ವೃತ್ತ ನಿರ್ಮಾಣ, ಗಾಂಧಿ ಪುತ್ಥಳಿ ಅನಾವರಣ, ನೂತನ ಹೈಟೆಕ್ ಅಂಬುಲೆನ್ಸ್ ಮತ್ತು ಡಯಾಲಿಸಿಸ್ ಕೇಂದ್ರ, ಪಿಡಿಯಾಟ್ರಿಕ್ ಐಸಿಯು ಘಟಕಗಳ ಉದ್ಘಾಟನೆ ನೆರವೇರಿಸಿದ ಸಚಿವ ಎಂ.ಬಿ.ಪಾಟೀಲ ಹೇಳಿಕೆ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ನಗರದ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಉನ್ನತಿಕರಣಕ್ಕೆ ಇನ್ನು ಹೆಚ್ಚಿನ ರೀತಿಯ ಸೌಲಭ್ಯಗಳನ್ನು ಒದಗಿಸುವ ದಿಸೆಯಲ್ಲಿ ಶಾಸಕ ಅಶೋಕ ಮನಗೂಳಿ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವನಾಗಿ ಸಹಕಾರ ನೀಡುತ್ತೇನೆ ಎಂದು ಜಿಲ್ಲಾ ಉಸ್ತವಾರಿ ಸಚಿವ ಎಂ.ಬಿ.ಪಾಟೀಲ ಹೇಳಿದರು.ಸಿಂದಗಿ ನಗರದ ನೂತನ ಗಾಂಧಿ ಪುತ್ಥಳಿ ಅನಾವರಣ, ರಾಷ್ಟ್ರೀಯ ಲಾಂಛನ ಅಶೋಕ ಸ್ತಂಭ, ನಗರಸಭೆ ಕಾರ್ಯಾಲಯ ಉದ್ಘಾಟನೆ, ನೂತನ ಹೈಟೆಕ್ ಅಂಬುಲೆನ್ಸ್ ಮತ್ತು ಡಯಾಲಿಸಿಸ್ ಕೇಂದ್ರ, ಪಿಡಿಯಾಟ್ರಿಕ್ ಐಸಿಯು ಘಟಕಗಳ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರ ನೇತೃತ್ವ ಮತ್ತು ಸಿಂದಗಿ ಶಾಸಕ ಅಶೋಕ ಮನಗೂಳಿ ಅವರ ಪ್ರಯತ್ನದಿಂದ ನಗರದ ೫೦ಸಾವಿರಕ್ಕೂ ಹೆಚ್ಚು ಜನತೆಯ ಕನಸಿನಂತೆ ಸಿಂದಗಿ ನಗರಸಭೆಯಾಗಿ ಪರಿವರ್ತನೆಯಾಗಿದೆ. ವಿಜಯಪುರ ಜಿಲ್ಲೆಯಲ್ಲಿಯೇ ಪ್ರಪ್ರಥಮ ಅಶೋಕ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ನೂತನ ಸಿಂದಗಿ ಮತ್ತು ಆಲಮೇಲ ತಾಲೂಕು ಕಾನೂನು ಘಟಕದ ಅಧ್ಯಕ್ಷರಾಗಿ ಆಯ್ಕೆಯಾದ ಜಕ್ಕಣ್ಣ ಸೀತಿಮನಿ ಹಾಗೂ ರೇಬ್ಬಣ್ಣ ಸೀತಿಮನಿ ಅವರಿಗೆ ಆದೇಶವನ್ನು ಪತ್ರ ನೀಡಲಾಯಿತು.ಬ್ಲೂ ಇಂಡಿಯಾ ಪಾರ್ಟಿಯ ನೂತನ ಕಾನೂನು ಘಟಕದ ರಾಜ್ಯಾಧ್ಯಕ್ಷರನ್ನಾಗಿ ಕಲ್ಲಪ್ಪ ಮರೆಪ್ಪ ಬಳುಂಡಗಿ, ಸಿಂದಗಿ ತಾಲೂಕಾಧ್ಯಕ್ಷರನ್ನಾಗಿ ಜಕ್ಕಣ್ಣ ಭೀಮರಾಯ ಸೀತಿಮನಿ ಹಾಗೂ ಆಲಮೇಲ ತಾಲೂಕಾಧ್ಯಕ್ಷರನ್ನಾಗಿ ರೇಬ್ಬಣ್ಣ ಬೀರಪ್ಪ ಸೀತಿಮನಿ ಅವರನ್ನು ಆಯ್ಕೆಮಾಡಲಾಗಿದೆ ಎಂದು ಬ್ಲೂ ಇಂಡಿಯಾ ಪಾರ್ಟಿ ಸಂಸ್ಥಾಪಕ ರಾಜ್ಯಾಧ್ಯಕ್ಷ ರಾಜಶೇಖರ ದೊಡ್ಡಣ್ಣ ಮೌರ್ಯ ಅವರು ಆದೇಶಿಸಿದ್ದಾರೆ.
ದಿ. ಎಂ.ಸಿ.ಮನಗೂಳಿ ಅವರ ೫ನೇ ಪುಣ್ಯಸ್ಮರಣೆ ನಿಮಿತ್ತ ಹೊನಲು ಬೆಳಕಿನ ವಾಲಿಬಾಲ್ “ಭಗೀರಥ ಕಪ್” ಕಾರ್ಯಕ್ರಮಕ್ಕೆ ಚಾಲನೆ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ದಿ. ಎಂ.ಸಿ.ಮನಗೂಳಿ ಅವರು ಕಡು ಬಡುತನದಲ್ಲಿ ಹುಟ್ಟಿದರು ಜನಸೇವೆ ಮಾಡಬೇಕೆಂಬ ಬಯಕೆ ಅವರಲ್ಲಿ ಬಹಳಷ್ಟಿತ್ತು. ಅದರ ಫಲವಾಗಿ ಅವರು ಸಚಿವರಾಗಿ ಆಯ್ಕೆಯಾಗಿ ಜಿಲ್ಲೆಗೆ ಅನೇಕ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿದ ಒಬ್ಬ ದೀಮಂತ ವ್ಯಕ್ತಿಯಾಗಿದ್ದರು ಎಂದು ಮಾಜಿ ಶಾಸಕ ಶರಣಪ್ಪ ಸುಣಗಾರ ಹೇಳಿದರು.ಸಿಂದಗಿ ಪಟ್ಟಣದ ಎಚ್.ಜಿ.ಕಾಲೇಜಿನ ಮೈದಾನದಲ್ಲಿ ಕರ್ನಾಟಕ ವಾಲಿಬಾಲ್ ಸಂಸ್ಥೆ ಹಾಗೂ ಎಂ.ಸಿ.ಮನಗೂಳಿ ಪ್ರತಿಷ್ಠಾನದ ವತಿಯಿಂದ ಎಂ.ಸಿ.ಮನಗೂಳಿ ಅವರ ೫ನೇ ಪುಣ್ಯಸ್ಮರಣೆ ನಿಮಿತ್ತ ಹಮ್ಮಿಕೊಂಡ ಹೊನಲು ಬೆಳಕಿನ ವಾಲಿಬಾಲ್ ಭಗೀರಥ ಕಪ್ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಹಿರಿಯರ ಮಾರ್ಗದರ್ಶನ ಮುಖೇನ ನಾವೆಲ್ಲ ಕಾರ್ಯನಿರ್ವಹಿಸಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂಬುದಕ್ಕೆ ದಿ.ಎಂ.ಸಿ.ಮನಗೂಳಿ ಅವರ ಸುಪುತ್ರ ಶಾಸಕ ಅಶೋಕ ಮನಗೂಳಿ ಅವರೇ ನೀದರ್ಶನ. ಅಶೋಕ ಮನಗೂಳಿ ಶಾಸಕರಾಗಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡುವ…
ಉದಯರಶ್ಮಿ ದಿನಪತ್ರಿಕೆ ಆಲಮೇಲ: ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ವತಿಯಿಂದ ಆಲಮೇಲದ ಬೆರಗು ಪ್ರಕಾಶನದ ಪ್ರಕಾಶಕಿ ವಿಜಯಲಕ್ಷ್ಮೀ ರಮೇಶ ಕತ್ತಿ ರವರ ಮನೆಗೊಂದು ಗ್ರಂಥಾಲಯ ಉದ್ಘಾಟನೆ ಕಾರ್ಯಕ್ರಮ ಜರುಗಿತು.ಉದ್ಘಾಟನೆ ಮಾಡಿ ಮಾತನಾಡಿದ ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ ರವರು, ಇಂದು ಡಿಜಿಟಲ್ ಪರಿಣಾಮವಾಗಿ ಪುಸ್ತಕಗಳನ್ನು ಕೊಳ್ಳುವವರಿಲ್ಲ, ಓದುವವರಿಲ್ಲ ಎಂಬ ಕೊರಗು ನಮ್ಮ ಸಾಹಿತಿಗಳಲ್ಲಿ , ಪ್ರಕಾಶಕರಲ್ಲಿ ಆತಂಕ ಮನೆ ಮಾಡಿದೆ. ಇದನ್ನು ಮನಗಂಡು ನಮ್ಮ ಪ್ರಾಧಿಕಾರ ಮಹತ್ವಾಕಾಂಕ್ಷೆ ಯೋಜನೆ ಮನೆಗೊಂದು ಗ್ರಂಥಾಲಯ ಅಡಿಯಲ್ಲಿ ರಾಜ್ಯದಲ್ಲಿ ಕನಿಷ್ಠ ಒಂದು ಲಕ್ಷ ಮನೆಗಳಲ್ಲಿ ಅಸ್ತಿತ್ವಕ್ಕೆ ತರುವ ಸಲುವಾಗಿ ಪ್ರತಿ ಜಿಲ್ಲಾವಾರು ಹತ್ತು ಜನ ಸದಸ್ಯರು ತಂಡದೊಂದಿಗೆ ಪ್ರತಿ ನಿತ್ಯ ೫-೬ ಮನೆಗೊಂದು ಗ್ರಂಥಾಲಯ ಸ್ಥಾಪನೆ ಮಾಡುವ ಕಾರ್ಯ ಮಾಡುತ್ತಿದೆ. ಅದರಂತೆಯೇ ಇಂದು ವಿಜಯಪುರ ಜಿಲ್ಲೆಯಲ್ಲಿ ಆಲಮೇಲ ತಾಲ್ಲೂಕಿನ ಉಪನ್ಯಾಸಕರು ಪ್ರೊಫೆಸರ್ ಡಾ.ರಮೇಶ ಕತ್ತಿ ರವರ ಮನೆಯಲ್ಲಿ ಉದ್ಘಾಟನೆ ಮಾಡುವ ಸೌಭಾಗ್ಯ ದೊರೆಯಿತು. ಉದ್ಘಾಟನೆ ಮಾಡಿ ಮನೆಯಲ್ಲಿನ ಅಚ್ಚುಕಟ್ಟಾದ ಗ್ರಂಥಾಲಯ ವೀಕ್ಷಣೆ ಮಾಡಿದಾಗ ರಾಜ್ಯದ ಹೆಸರಾಂತ ಸಾಹಿತಿಗಳ…
