Subscribe to Updates
Get the latest creative news from FooBar about art, design and business.
Author: editor.udayarashmi@gmail.com
ತಾಳಿಕೋಟಿ: ನನಗೆ ಸಿಕ್ಕ ಈ ೫ ವರ್ಷಗಳಲ್ಲಿ ಸುಮಾರು ರೂ.೩೭೦೦ ಕೋಟಿ ಅನುದಾನವನ್ನು ತಂದು ಇಡೀ ಕ್ಷೇತ್ರದ ಅಭಿವೃದ್ಧಿಯನ್ನು ಮಾಡಿದ್ದೇನೆ. ತಾಳಿಕೋಟಿ ಪಟ್ಟಣದ ವಿಶೇಷ ಅಭಿವೃದ್ಧಿಗಾಗಿ ಹೆಚ್ಚಿನ ಆಸಕ್ತಿ ವಹಿಸಿ ಕೆಲಸ ಮಾಡಿದ್ದೇನೆ. ಈ ನಗರವನ್ನು ಒಂದು ಐತಿಹಾಸಿಕ ಪ್ರವಾಸಿ ಕೇಂದ್ರವನ್ನಾಗಿ ಮಾಡುವುದು ನನ್ನ ಮುಂದಿನ ಗುರಿಯಾಗಿದೆ. ಇದಕ್ಕಾಗಿ ನೀವು ಮೊತ್ತಮ್ಮೆ ಆಶೀರ್ವಾದ ಮಾಡಿ ಎಂದು ಶಾಸಕ ಎ. ಎಸ್. ಪಾಟೀಲ (ನಡಹಳ್ಳಿ) ಮನವಿ ಮಾಡಿದರು.ಪಟ್ಟಣದ ಶ್ರೀ ಖಾಸ್ಗತೇಶ್ವರ ಮಠ ಹಾಗೂ ಪಂಚಶಹೀದ ದರ್ಗದಲ್ಲಿ ಪಕ್ಷದ ಮುಖಂಡರು, ಅಭಿಮಾನಿ ಪ್ರಮುಖರೊಂದಿಗೆ ವಿಶೇಷ ಪೂಜೆ ಸಲ್ಲಿಸಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ನಾನು ಈ ಚುನಾವಣೆಯನ್ನು ವಾಸ್ತವಿಕತೆ ನೆಲೆಯಲ್ಲಿ ಎದುರಿಸುತ್ತಿದ್ದೇನೆ. ನಾನು ಮಾಡಿದ ಕೆಲಸಗಳ ಕಿರುಹೊತ್ತಿಗೆಯನ್ನು ನನ್ನ ಆಭಿಮಾನ ಬಳಗ ಹೊರತಂದಿದೆ. ಅದನ್ನು ಪ್ರತಿಮನೆಗೆ ತಲುಪಿಸುವ ಕೆಲಸ ಮಾಡುತ್ತೇನೆ. ಇದು ಎ.ಎಸ್.ಪಾಟೀಲ ಚುನಾವಣೆ ಆಗಿರದೆ ಈ ಮತಕ್ಷೇತ್ರದ ೨.೧೦ ಲಕ್ಷ ಮತದಾನರ ಆಭಿವೃದ್ದಿಗೊಸ್ಕರ ನಡೆಯುವ ಚುನಾವಣೆ. ಈಗಾಗಲೇ ಎದುರಿಸಿದ ೩ ಚುನಾವಣೆಗಿಂತಲೂ…
ಮೋರಟಗಿ: ಬೊಲೆರೋ ಗೂಡ್ಸ ಪಿಕಪ್ ನಲ್ಲಿ ೫ ಜನರು ಶಹಾಪುರದಿಂದ ಅಫ್ಜಲಪುರ ಪಟ್ಟಣಕ್ಕೆ ಹೋಗುತ್ತಿರುವ ಎಂ೧೬, ಂA೨೮೨೪ ವಾಹನದಲ್ಲಿ ಸಾಗಿಸುತಿದ್ದ ದಾಖಲೆ ಇಲ್ಲದ ರೂ.11,07,000 ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.ಶುಕ್ರವಾರ ೧.೩೦ ಘಂಟೆಗೆ ಇಂಡಿ ಡಿ,ವಾಯ್,ಎಸ್ಪಿ, ನಂದರೆಡ್ಡಿ, ಹಾಗೂ ಸಿಪಿಐ ಡಿ, ಹುಲಗಪ್ಪಾ ,ಪಿಎಸ್ಐ ಶಿವರಾಜ ನಾಯಕವಾಡಿ ಮೋರಟಗಿ ಚೆಕ್ ಪೋಸ್ಟ ಗೆ ಪರಿಶೀಲನೆಗೆ ಆಗಮಿಸಿ ವಾಹನ ಪರಿಶೀಲನೆ ಮಾಡುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ.ಕೂಡಲೇ ತೆರಿಗೆ ಇಲಾಖೆಯ ಅಧಿಕಾರಿಗಳಿಗೆ ಕರೆಸಿ ೧೧ ಲಕ್ಷದ ಏಳು ಸಾವಿರ ಹಣವನ್ನು ತೆರಿಗೆ ಇಲಾಖೆಗೆ ಒಪ್ಪಿಸಿ ವಾಹನದಲ್ಲಿದ್ದ ೫ ಜನರನ್ನು ವಶಕ್ಕೆ ನೀಡಿ ಹಣ ಪಡೆದುಕೊಂಡು ಹೋಗಲು ಸೂಚಿಸಿದ್ದಾರೆ.ಪರಿಶೀಲನೆ ಸಂದರ್ಭದಲ್ಲಿ ರಾಜಪ್ಪ ಎಸ್, ಅಭಿವೃದ್ಧಿ ಅಧಿಕಾರಿ ರಾಘವೇಂದ್ರ ಚಕ್ರವರ್ತಿ, ಪೊಲೀಸ್ ಸಿಬ್ಬಂದಿಗಳಾದ ನಿಂಗಪ್ಪ ಪೂಜಾರಿ, ಸಿದ್ದನಗೌಡ ಬಿರಾದಾರ ಅನೀಲ ಕುಂಬಾರ, ಗ್ರಾಮ ಸಹಾಯಕ ವಿಶ್ವಾನಾಥ ವಾಲಿಕಾರ ಇದ್ದರು.
ವಿಜಯಪುರ: ವೈದ್ಯಕೀಯ ಸ್ನಾತಕೋತ್ತರ ವಿದ್ಯಾರ್ಥಿಗಳು ಕೇವಲ ಪರೀಕ್ಷೆಗಳತ್ತ ಗಮನ ಹರಿಸದೇ ರೋಗಿಗಳೊಂದಿಗೆ ಹೆಚ್ಚಿನ ಸಮಯ ಕಳೆದರೆ ಅದರ ಅನುಭವದ ಮೇಲೆ ಉತ್ತಮ ಚಿಕಿತ್ಸೆ ಪಡೆಯಲು ಸಾಧ್ಯ ಎಂದು ಬೆಳಗಾವಿಯ ಕಾಹೆರ್ ನ ಜೆ ಎನ್. ಮೆಡಿಕಲ್ ಕಾಲೇಜಿನ ಪ್ರಿನ್ಸಿಪಾಲ್ ಡಾ. ಎನ್. ಎಸ್. ಮಹಾಂತಶೆಟ್ಟಿ ಹೇಳಿದ್ದಾರೆ. ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರದ ಚಿಕ್ಕ ಮಕ್ಕಳ ವಿಭಾಗ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಎರಡು ದಿನಗಳ ಬಿ-ಐಟಿಇಸ್- 2023 ಎ ಪಿಡಿಯಾಟ್ರಿಕ್ ಪ್ರ್ಯಾಕ್ಟಿಕಲ್ ಕ್ರ್ಯಾಶ್ ಕೋರ್ಸ್ ಉದ್ಘಾಟಿಸಿ ಮಾತನಾಡಿದರು. ಸ್ನಾತಕೋತ್ತರ ವಿದ್ಯಾರ್ಥಿಗಳು ವೈದ್ಯಕೀಯ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಗಳ ಕುರಿತು ಪ್ರತಿನಿತ್ಯ ಗಮನ ಹರಿಸಬೇಕು. ಕೇವಲ ಪರೀಕ್ಷೆಗಳ ಬಗ್ಗೆ ಗಮನ ಹರಿಸದೇ ರೋಗಿಗಳ ಜೊತೆ ಸಂವಹನ, ರೋಗಗಳ ಸಂಶೋಧನೆ, ಕಾಯಿಲೆಗಳನ್ನು ದೃಢೀಕರಿಸುವುದರ ಕಡೆಗೂ ಗಮನ ಹರಿಸಬೇಕು. ರೋಗಿಗಳೊಂದಿಗೆ ಹೆಚ್ಚಿನ ಸಮಯ ಕಳೆಯುವುದರಿಂದ ಸಿಗುವ ಅನುಭವ ಉತ್ತಮ ವೈದ್ಯರಾಗಲು ನೆರವಾಗುತ್ತದೆ. ಲಭ್ಯ ದತ್ತಾಂಶಗಳನ್ನು…
ವಿಜಯಪುರ: ಬೈಕ್ ಸವಾರನ ಸಾವಿಗೆ ಕಾರಣನಾದ ಲಾರಿ ಚಾಲಕನಿಗೆ ವಿಜಯಪುರದ 3ನೇ ಅಪರ ನ್ಯಾಯಾಲಯ 6 ತಿಂಗಳು ಶಿಕ್ಷೆ ಹಾಗೂ 6 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕವಲಗುಡ್ಡ ಗ್ರಾಮದ ಯಲ್ಲಪ್ಪ ಶಿವಲಿಂಗ ಅವಳೆ ಶಿಕ್ಷೆಗೊಳಗಾದ ಆರೋಪಿ. ತಿಕೋಟಾದಲ್ಲಿ ಇಳಿಜಾರಿನಲ್ಲಿ ಲಾರಿ ಗೇಯರ್ನಲ್ಲಿ ನಿಲ್ಲಿಸಿ ಹೋಗಿದ್ದ. ಆಗ ಅಲ್ಲಿ ಹೊರಟಿದ್ದ ಬೈಕ್ಗೆ ಲಾರಿ ಡಿಕ್ಕಿ ಹೊಡೆದಿದ್ದರಿಂದ ಸವಾರ ಭೀಮಣ್ಣ ಯಡವೆ ಎಂಬಾತ ಮೃತಪಟ್ಟಿದ್ದ. ತಿಕೋಟಾ ಠಾಣೆ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ 3ನೇ ಅಪರ ಸಿವಿಲ್ ನ್ಯಾಯಾಧೀಶ ಮಾದೇಶ ಎಂ.ವಿ, ಪುರಾವೆ ಪರಿಶೀಲಿಸಿ, ಆರೋಪಿಗೆ ಈ ಶಿಕ್ಷೆ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ಎಂ.ಎಲ್. ಹಳ್ಳೂರ ವಾದ ಮಂಡಿಸಿದ್ದರು.
Udayarashmi kannada daily newspaper
ಶಾಸಕ ಯತ್ನಾಳರ ಕುರಿತು ದುರುದ್ದೇಶದ ಹೇಳಿಕೆ | ಕಾರ್ಪೊರೇಟರ್ ಗಳ ಆಕ್ರೋಶ
Udayarashmi kannada daily newspaper
ಣಿಮೆಯ ಮರುದಿನ ಬೂದಿಚೆಲ್ಲುವ (ದೂಳವಾಡ) ದಿನದಂದು ಉತ್ತರ ಕರ್ನಾಟಕದ ಬಹುತೇಕ ಹಳ್ಳಿಗಳ, ಪಟ್ಟಣಗಳ ಜನರು ಕಂಬಿ ದೇವರನ್ನು ಹೊತ್ತುಕೊಂಡು ಪ್ರತಿ ವರ್ಷ ೧೨ ಜ್ಯೋತಿರ್ಲಿಂಗಗಳಲ್ಲಿ ಒಂದಾದ ಶ್ರೀಶೈಲ ಜ್ಯೋತಿರ್ಲಿಂಗದ ದರ್ಶನ ಪಡೆಯಲು ಪಾದಯಾತ್ರೆಯ ಮೂಲಕ ಹೊರಡುವದು ವಾಡಿಕೆಯಾಗಿದೆ.ಇಲ್ಲೊಂದು ಸೋಜಿಗದ ವಿಷಯವೆಂದರೆ ಕೊಲ್ಹಾರ ಪಟ್ಟಣದಿಂದ ಪಾದಯಾತ್ರೆಯ ಕೈಗೊಳ್ಳುವ ಭಕ್ತರ ಸಂಪ್ರದಾಯಕ್ಕೆ ಶತಮಾನಗಳ ಇತಿಹಾಸವಿದೆ.ಪಾದಯಾತ್ರೆ ಮಾಡುವ ಭಕ್ತರ ಜೊತೆಯಲ್ಲಿ ನಿರಂತರವಾಗಿ ೧೫ ದಿನಗಳ ಕಾಲ ಕಂಟ್ಲಿ ಎತ್ತು ಎನ್ನುವ ಎತ್ತೊಂದು ಬಸವ ಭಕ್ತರ ಜೊತೆಜೊತೆಯಲ್ಲಿ ಹೆಜ್ಜೆ ಹಾಕುತ್ತಾ, ಭಕ್ತರಿಗೆ ದಾರಿಯನ್ನು ದೇವನ ಸ್ವರೂಪದಂತೆ ತೋರಿಸುವ ಶಿವನ ನಂದಿ ಅವತಾರದಂತಿತ್ತು ಈ ಕಂಟ್ಲಿ ಎತ್ತು.ಕಾಕತಾಳೀಯ ಎಂಬAತೆ ಈ ವರ್ಷ ಶ್ರೀಶೈಲಕ್ಕೆ ತೆರಳಿದ್ದ ಕಂಟ್ಲಿ ಎತ್ತು ಮರಳಿ ಕೊಲ್ಹಾರ ಪಟ್ಟಣಕ್ಕೆ ಆಗಮಿಸಿದ ಬುಧವಾರ ದಿನದಂದೆ ತನ್ನ ದೇಹ ತ್ಯಾಗವನ್ನು ಮಲ್ಲಯ್ಯನ ಸನ್ನಿಧಿಗೆ ಸಮರ್ಪಿಸಿದೆ. ಪುಣ್ಯದ ಬಸವ ತನ್ನ ನಡಿಗೆಯನ್ನು ನಿಲ್ಲಿಸಿದ್ದು ಸಾವಿರಾರು ಭಕ್ತರನ್ನು ದುಃಖಸಾಗರದಲ್ಲಿ ತೇಲುವಂತೆ ಮಾಡಿದೆ.೧೮ ವರ್ಷ ವಯಸ್ಸಿನ ಹೆಮ್ಮೆಯ ಬಸವ ಸತತವಾಗಿ ೧೧ ವರ್ಷಗಳ…
ಸಿಂದಗಿ: ಪವಿತ್ರ ರಂಜಾನ್ ಹಬ್ಬದ ಸಂದರ್ಭದಲ್ಲಿ ಒಂದು ಹನಿ ನೀರು ಸಹ ಕುಡಿಯದೇ ಮುಸ್ಲಿಂ ಸಮಾಜ ಬಾಂಧವರು ಕಟ್ಟುನಿಟ್ಟಾದ ಉಪವಾಸ ಪಾಲನೆ ಮಾಡುತ್ತಾರೆ. ಇಂತಹ ಊರಿ ಬಿಸಿಲಿನಲ್ಲಿ ಕಠಿಣ ಉಪವಾಸ ಮಾಡೋದು ದೊಡ್ಡವರಿಗೇ ಕಷ್ಟವಾಗುತ್ತಿದೆ. ಇಂತಹ ಸಮಯದಲ್ಲಿ ಸಿಂದಗಿ ಪಟ್ಟಣದ ರಜಪೂತ ಲೇಔಟ್ ನಿವಾಸಿ ಆರಕ್ಷಕ ನಬಿಲಾಲ ಶೇಖ ಅವರ ಮಗಳು ಪುಟ್ಟ ಬಾಲಕಿ ಆಶಿಯಾ ಶೇಖ(೬) ರಂಜಾನ್ ಉಪವಾಸವನ್ನು ಆಚರಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾಳೆ.
