Author: editor.udayarashmi@gmail.com

ವಿಜಯಪುರ ನಗರ ವಿಧಾನಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸನಗೌಡ ರಾ ಪಾಟೀಲ ಯತ್ನಾಳ ಅವರ, ಚುನಾವಣಾ ಪ್ರಚಾರ ಕಾರ್ಯಾಲಯವನ್ನು ಗುರುವಾರ ಉದ್ಘಾಟಿಸಲಾಯಿತು.ಹಿಂದೂಗಳ ಆರಾಧ್ಯದೈವ ಗೋ ಮಾತೆಗೆ ಪೂಜೆ ಸಲ್ಲಿಸಿ, ಹಣ್ಣು, ಸಿಹಿ ತಿನಿಸಿ, ಗಣೇಶನಿಗೆ ಪೂಜೆ ಸಲ್ಲಿಸುವ ಮೂಲಕ ಪ್ರಚಾರ ಕಾರ್ಯಾಲಯದಲ್ಲಿ ಕಾರ್ಯ ಚಟುವಟಿಕೆಗಳಿಗೆ ಚಾಲನೆ ನೀಡಲಾಯಿತು.ಬಾಳೆದಿಂಡು, ತೆಂಗಿನ ಪರಕಿ, ಹೂಗಳಿಂದ ಅಲಂಕಾರಗೊಳಿಸಲಾದ ಕಾರ್ಯಾಲಯ ಕೇಸರಿಮಯವಾಗಿ ಕಂಗೋಳಿಸುತ್ತಿದೆ. ರಂಗೋಲಿಯಲ್ಲಿ ಅರಳಿದ ಕಮಲದ ಹೂ ಕಣ್ಮನ ಸೆಳೆಯಿತು.ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ, ವಿಡಿಎ ಅಧ್ಯಕ್ಷ ಪರಶುರಾಮ ರಜಪುತ, ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಚಂದ್ರಶೇಖರ ಕವಟಗಿ, ಮುಖಂಡರಾದ ವಿವೇಕಾನಂದ ಡಬ್ಬಿ, ಪ್ರಕಾಶ ಅಕ್ಕಲಕೋಟ, ಬಸವರಾಜ ಬಿರಾದಾರ, ಶಿವರುದ್ರ ಬಾಗಲಕೋಟ, ಮಳುಗೌಡ ಪಾಟೀಲ ಸೇರಿದಂತೆ ಮಹಾನಗರ ಪಾಲಿಕೆ ಸದಸ್ಯರು, ಕಾರ್ಯಕರ್ತರು, ಅಭಿಮಾನಿಗಳು ಮತ್ತಿತರರು ಇದ್ದರು.

Read More

ಮುದ್ದೇಬಿಹಾಳ: ರಾಜ್ಯದಲ್ಲಿ ಬಿಜೆಪಿ ಸರಕಾರದಿಂದ ಜನಸಾಮಾನ್ಯರಿಗೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಾಗಿದೆ ಎಂಬುದನ್ನು ಜನರು ಈಗಾಗಲೇ ಅರ್ಥೈಸಿಕೊಂಡಿದ್ದಾರೆ. ಅಲ್ಲದೇ ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಕಿತ್ತೊಗೆದು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ತೀರ್ಮಾನಿಸಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಸಿ.ಎಸ್.ನಾಡಗೌಡ(ಅಪ್ಪಾಜಿ) ಪುತ್ರಿ ಪಲ್ಲವಿ ನಾಡಗೌಡ ಹೇಳಿದರು.ಪಟ್ಟಣದ ವಿದ್ಯಾನಗರ, ಗಣೇಶನಗರ ಬಡಾವಣೆಗಳಲ್ಲಿ ತಮ್ಮ ತಂದೆಯ ಪರವಾಗಿ ಚುನಾವಣಾ ಪ್ರಚಾರ ನಡೆಸಿ ಸಾರ್ವಜನಿಕರನ್ನು ಉದ್ದೇಶಿಸಿ ಅವರು ಮಾತನಾಡಿದರು.ಕಳೆದ ೩೫ ವರ್ಷಗಳಿಂದ ನಮ್ಮ ತಂದೆಯವರಾದ ಸಿ.ಎಸ್.ನಾಡಗೌಡ ಅವರು ಸ್ವಚ್ಛ ಹಾಗೂ ಸನ್ನಡೆ ರಾಜಕಾರಣ ನಡೆಸುವ ಮೂಲಕ ಮತಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಸಾವಿರಾರು ಕೋಟಿ ಅನುದಾನ ತಂದು ಉತ್ತಮ ಜನರಪರ ಆಡಳಿತ ಕೊಟ್ಟಿದ್ದಾರೆ. ಮತಕ್ಷೇತ್ರದಲ್ಲಿ ನಿರಾವರಿ, ವಿದ್ಯುತ್ ಮತ್ತು ಪಟ್ಟಣ ಸೇರಿದಂತೆ ಎಲ್ಲ ಗ್ರಾಮಗಳಲ್ಲಿ ಬಹುಹಳ್ಳಿ ಕುಡಿಯುವ ನೀರು ಯೋಜನೆಯಡಿಯಲ್ಲಿ ಜನರಿಗೆ ಶುದ್ಧ ಕುಡಿಯುವ ನೀರು ಸೇರಿದಂತೆ ಹಲವಾರು ಯೋಜನೆಗಳನ್ನು ತಂದಿದ್ದೇ ನಮ್ಮ ತಂದೆಯವರಾದ ನಾಡಗೌಡರು. ಆದರೆ ಕಾಂಗ್ರೆಸ್ ಸರಕಾರದ ಅಧಿಕಾರದಲ್ಲಿ ನಾಡಗೌಡರು ತಂದಿರುವ ಅನುದಾನವನ್ನು ಇಂದಿನ ಬಿಜೆಪಿ ಶಾಸಕರು…

Read More

ಸಿಂದಗಿ: ರಾಜ್ಯ ವಿಧಾನಸಭೆ ಚುನಾವಣೆಗೆ ಗುರುವಾರ ನಾಮಪತ್ರ ಸಲ್ಲಿಕೆ ಆರಂಭವಾಗಿದೆ. ನಾಮಪತ್ರ ಸಲ್ಲಿಕೆ ಮೊದಲ ದಿನ ಬಿಜೆಪಿ, ಕಾಂಗ್ರೆಸ್ ಮತ್ತು ಬಿಎಸ್‌ಪಿ ಯಿಂದ ತಲಾ ಒಂದು ಸಾಂಕೇತಿಕವಾಗಿ ನಾಮಪತ್ರ ಸಲ್ಲಿಕೆಯಾಗಿವೆ.ಪಟ್ಟಣದ ತಹಶೀಲ್ದಾರ ಕಾರ್ಯಾಲಯದ ಸಭಾಭವನದಲ್ಲಿ ೨೦೨೩ರ ಸಾರ್ವತ್ರಿಕ ಚುನಾವಣೆ ಕರ್ನಾಟಕ ವಿಧಾನಸಭೆಯ ವೇಳಾಪಟ್ಟಿಯಂತೆ ಅಭ್ಯರ್ಥಿಗಳು ಚುನಾವಣಾಧಿಕಾರಿ ಸಿದ್ರಾಮ ಮಾರಿಹಾಳ ಅವರಿಗೆ ನಾಮಪತ್ರ ಸಲ್ಲಿಕೆ ಮಾಡಿದರು. ಸಹಾಯಕ ಚುನಾವಣಾಧಿಕಾರಿಗಳಾದ ತಹಶೀಲ್ದಾರ ನಿಂಗಪ್ಪ ಬಿರಾದಾರ, ತಹಶೀಲ್ದಾರ ಸುರೇಶ ಇದ್ದರು. ಬಿಜೆಪಿ ಘೋಷಿತ ಅಭ್ಯರ್ಥಿ ಹಾಲಿ ಶಾಸಕ ರಮೇಶ ಭೂಸನೂರ ಅವರು ನಾಮ ಪತ್ರ ಸಲ್ಲಿಸಿದರು.ಈ ವೇಳೆ ಬಿಜೆಪಿ ಮಂಡಲ ಅಧ್ಯಕ್ಷ ಈರಣ್ಣ ರಾವೂರ, ನ್ಯಾಯವಾದಿ ಅರವಿಂದ ಕನ್ನೂರ, ಪೀರು ಕೆರೂರ ಜಿಪಂ ಮಾಜಿ ಉಪಾಧ್ಯಕ್ಷ ಸಿದ್ದು ಪಾಟೀಲ, ಇದ್ದರು. ಬಿಎಸ್‌ಪಿ ಘೋಷಿತ ಅಭ್ಯರ್ಥಿ ದಸ್ತಗೀರ ಮುಲ್ಲಾ ಅವರು ನಾಮಪತ್ರ ಸಲ್ಲಿಸಿದರು. ಇದೇ ವೇಳೆ ರಮೇಶ ಖಾನಾಪೂರ, ಚಂದ್ರಶೇಖರ ದೇವೂರ, ರಸುಲಸಾಬ ಆಲಮೇಲ ಇದ್ದರು. ಕಾಂಗ್ರೆಸ್ ಸಿಂದಗಿ ಮತಕ್ಷೇತ್ರಕ್ಕೆ ಇನ್ನೂ ಯಾರಿಗೂ ಟಿಕೆಟ್ ಘೋಷಣೆ ಮಾಡಿಲ್ಲ.…

Read More

ಮುದ್ದೇಬಿಹಾಳ: ರಾಜ್ಯ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆಯು ಗುರುವಾರ ಆರಂಭವಾಗಿದ್ದು ಮೊದಲ ದಿನ ಒಂದು ನಾಮಪತ್ರ ಸಲ್ಲಿಕೆಯಾಗಿದೆ.ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮಾಜಿ ಸಚಿವ ಸಿ.ಎಸ್.ನಾಡಗೌಡ ಅಪ್ಪಾಜಿ ಅವರು ಗುರುವಾರ ಸರಳವಾಗಿ ತಮ್ಮ ಕೆಲವೇ ಬೆಂಬಲಿಗರೊAದಿಗೆ ಚುನಾವಣಾಧಿಕಾರಿ ಚಂದ್ರಕಾAತ ಪವಾರಗೆ ನಾಮಪತ್ರ ಸಲ್ಲಿಸಿದ್ದಾರೆ. ಏ.೧೭ ರಂದು ಬಹಿರಂಗವಾಗಿ ಬಿ-ಫಾರ್ಮ ಮೂಲಕ ತಮ್ಮ ಅಪಾರ ಬೆಂಬಲಿಗರೊAದಿಗೆ ಮತ್ತೊಂದು ನಾಮ ಪತ್ರ ಸಲ್ಲಿಸುವದಾಗಿ ನಾಡಗೌಡರು ತಿಳಿಸಿದ್ದಾರೆ.

Read More

ದೇವರಹಿಪ್ಪರಗಿ: 2023ರ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಕಾರ್ಯ ಗುರುವಾರ ಪ್ರಾರಂಭವಾಗಿದ್ದು, ಮೊದಲದಿನ ಕರ್ನಾಟಕ ರಾಷ್ಟç ಸಮಿತಿ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಶಿವಾನಂದ ಯಡಹಳ್ಳಿ ದೇವರಹಿಪ್ಪರಗಿ ಮತಕ್ಷೇತ್ರದ ಚುನಾವಣಾಧಿಕಾರಿ ಡಾ. ದುರುಗೇಶ ಅವರಿಗೆ ತಮ್ಮ ನಾಮಪತ್ರವನ್ನು ಸಲ್ಲಿಸಿದರು.ಈ ಸಂದರ್ಭದಲ್ಲಿ ಕೆ.ಆರ್.ಎಸ್ ಪಕ್ಷದ ಜಿಲ್ಲಾ ಉಸ್ತುವಾರಿ ವಿಜಯಕುಮಾರ್ ಯುಬಿ, ಪ್ರವೀಣ್ ಕನಸೆ, ರಾಘವೇಂದ್ರ ಚಲವಾದಿ, ಮೈಬೂಬ್ ತಾಂಬೋಳಿ, ರಾಕೇಶ್ ಇಂಗಳಗಿ, ಪ್ರವೀಣ್ ರಾಯಗೊಂಡ, ನರೇಂದ್ರ ರಾಠೋಡ, ಮಾಂತೇಶ ಮರ್ನೂರ, ಸುರೇಶ ಪಡಶೆಟ್ಟಿ ಸೇರಿದಂತೆ ಇತರರು ಇದ್ದರು.ಮೊದಲ ದಿನ ಕೇವಲ ಒಬ್ಬರೆ ನಾಮಪತ್ರ ಸಲ್ಲಿಸಿದ್ದಾರೆ.

Read More

ದೇವರಹಿಪ್ಪರಗಿ: ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದು ಪಕ್ಷವೇ ವಿನಹಃÀ ವ್ಯಕ್ತಿಯಲ್ಲ. ಆದ್ದರಿಂದ ಪಕ್ಷದ ಗೆಲುವಿಗೆ ಕಾರ್ಯಕರ್ತರು ಶ್ರಮವಹಿಸಬೇಕು ಎಂದು ಉತ್ತರಖಂಡದ ಆರೋಗ್ಯ, ಶಿಕ್ಷಣ ಹಾಗೂ ಸಹಕಾರ ಸಚಿವ ಡಾ.ಧನಸಿಂಗ್ ರಾವತಜೀ ಹೇಳಿದರು.ಅವರು ಪಟ್ಟಣಕ್ಕೆ ಗುರುವಾರ ಭೇಟಿ ನೀಡಿ ಕಾರ್ಯಕರ್ತರೊಂದಿಗೆ ಮಾತನಾಡಿದರು.ಅಸಮಾಧಾನ ಏನೇ ಇದ್ದರೂ ಅದು ವ್ಯಕ್ತಿಗೆ ಸೀಮಿತವಾಗಿರಲಿ. ಪಕ್ಷ ದೊಡ್ಡದು, ಅದುವೇ ಕೊನೆಗೆ ಅಧಿಕಾರಕ್ಕೆ ಏರುವುದು. ಆದ್ದರಿಂದ ತಮ್ಮ ಮುನಿಸು ಇಂದಿಗೆ ಕೊನೆಗೊಳ್ಳಲಿ. ಪಕ್ಷದ ಗೆಲುವಿಗೆ ಶ್ರಮವಹಿಸಿ ಕನಿಷ್ಠ ಹತ್ತು ಸಾವಿರ ಮತಗಳ ಅಂತರದ ವಿಜಯಕ್ಕೆ ಕಾರಣರಾಗಿರಿ ಎಂದರು.ರಾಜ್ಯಸಭೆ ಸದಸ್ಯ ಹಾಗೂ ಬಸವನಬಾಗೇವಾಡಿ ಮತಕ್ಷೇತ್ರದ ಉಸ್ತುವಾರಿ ವಹಿಸಿದ ಬನ್ಸಲ್ ಸಾಹೇಬ್ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಎಲ್ಲ ಸಮುದಾಯಗಳ ಹಿತ ಕಾಪಾಡಿ ಯಶಸ್ವಿಯಾಗಿದ್ದು, ಬಲಿಷ್ಠವಾಗಿದೆ. ಅದಕ್ಕೆ ಈಗ ಕಾರ್ಯಕರ್ತರ ಸಂಪೂರ್ಣ ಬೆಂಬಲ ಹಾಗೂ ಸಹಕಾರ ಮಾತ್ರ ಅಗತ್ಯವಾಗಿದೆ ಎಂದರು.ಇAಡಿ ಮತಕ್ಷೇತ್ರದ ಕ್ಷೇತ್ರ ಸಂಚಾಲಕ ಬಿ.ಎಸ್.ಪಾಟೀಲ, ಮಂಡಲ ಅಧ್ಯಕ್ಷ ಭೀಮನಗೌಡ ಸಿದರಡ್ಡಿ, ಮಂಜುನಾಥ ಮಲ್ಲಿಕಾರ್ಜುನಮಠ, ಹುಸೇನ್ ಗೌಂಡಿ, ಈರಣ್ಣ ವಸ್ತçದ, ಸೋಮು ದೇವೂರ, ಸತೀಶ ಬೂದಿಹಾಳ,…

Read More

ಢವಳಗಿ: ಮುದ್ದೇಬಿಹಾಳ ಮತಕ್ಷೇತ್ರದ ಶಾಸಕ ಎ ಎಸ್ ಪಾಟೀಲ ನಡಹಳ್ಳಿ ಅವರ ಅಭಿವೃದ್ಧಿ ಕೆಲಸಗಳನ್ನು ಗಮನಿಸಿ ಸಮೀಪದ ಬಸರಕೋಡ ಗ್ರಾಮದಲ್ಲಿ 30ಕ್ಕೂ ಅಧಿಕ ಯುವಕರು ಬುಧವಾರ ಸಂಜೆ ಕಾಂಗ್ರೆಸ್ ಪಕ್ಷವನ್ನು ತೊರೆದು ಶಾಸಕರಾದ ಎ ಎಸ್ ಪಾಟೀಲ ನಡಹಳ್ಳಿ ಅವರ ಸಮ್ಮುಖದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು.ಯುವ ಮುಖಂಡ ನಾಗರಾಜ ಕಮತರ ಸೇರಿದಂತೆ 30ಕ್ಕೂ ಹೆಚ್ಚು ಜನರು ಬಿಜೆಪಿ ಪಕ್ಷಕ್ಕೆ ಸೇರಿದರು.ಈ ಸಂದರ್ಭದಲ್ಲಿ ತಾಲೂಕಾ ಭಾಜಪಾ ಯುವ ಮೋರ್ಚಾ ಅಧ್ಯಕ್ಷ ಪುನೀತ ಹಿಪ್ಪರಗಿ, ಉಪಾಧ್ಯಕ್ಷ ಬಸವರಾಜ ಮಂಕಣಿ, ಸಂಗಮೇಶ ಬಿರಾದಾರ, ಬಾಜಪಾ ಯುವ ಮೋರ್ಚಾ ಕಾರ್ಯದರ್ಶಿ ಗುರು ರಾಯಗೊಂಡ, ಚೇತನ ಕುಮಾರ್ ಬಿರಾದಾರ, ಚಂದ್ರು ವಡ್ಡರ, ಪ್ರತಾಪ್ ಹುಬ್ಬಳ್ಳಿ ಸೇರಿದಂತೆ ಇತರರು ಇದ್ದರು.

Read More

ಇಂಡಿ: ಇಂಡಿ ವಿಧಾನಸಭಾ ಚುನಾವಣೆಗೆ ಜೆಡಿಎಸ್ ಪಕ್ಷದ ಅಧಿಕೃತ ಅಭ್ಯರ್ಥಿ ಬಿ.ಡಿ ಪಾಟೀಲ ಅವರು ತಮ್ಮ ಬೆಂಬಲಿಗರ ಜೊತೆಗೆ ಗುರುವಾರ ಚುನಾವಣಾಧಿಕಾರಿ ಮತ್ತು ಕಂದಾಯ ಉಪವಿಭಾಗ ಅಧಿಕಾರಿ ರಾಮಚಂದ್ರ ಗಡದೆ ಅವರಿಗೆ ನಾಮಪತ್ರ ಸಲ್ಲಿಸಿದರು.ಈ ಸಂದರ್ಭದಲ್ಲಿ ಬಿ.ಜಿ ಪಾಟೀಲ ಹಲಸಂಗಿ, ರವೀಂದ್ರ ಪೂಜಾರಿ, ಮರೆಪ್ಪ ಗಿರಣಿವಡ್ಡರ, ಬಾಳು ರಾಠೋಡ ಇದ್ದರು.ಅದೇ ರೀತಿ ಕೆ.ಆರ್.ಎಸ್ ಪಕ್ಷದ ಅಧಿಕೃತ ಅಭ್ಯರ್ಥಿ ಅಶೋಕ ಜಾಧವ ಅವರೂ ಸಹ ಬೆಂಬಲಿಗರ ಜೊತೆಗೆ ಆಗಮಿಸಿ ಚುನಾವಣಾಧಿಕಾರಿಗೆ ತಮ್ಮ ನಾಮಪತ್ರ ಸಲ್ಲಿಸಿದರು.ಈ ಸಂದರ್ಭದಲ್ಲಿ ಗಣಪತಿ ಲಾಲಸಿಂಗ್ ರಾಠೋಡ, ಸುರೇಂದ್ರ ಕುಸನಾಳೆ, ನಬಿರಸುಲ್ ಜಮಾದಾರ, ಭೀಮಾಶಂಕರ ಕಾಂಬಳೆ, ಮಲ್ಲಿಕಾರ್ಜುನ ಬಿರಾದಾರ, ಈರಣ್ಣ ತೇಲಿ ಇದ್ದರು.

Read More

ಇಂಡಿ: ಇಂಡಿ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿ ಯಶವಂತರಾಯಗೌಡ ಪಾಟೀಲ ಅವರು ತಮ್ಮ ಬೆಂಬಲಿಗರ ಜೊತೆಗೆ ಆಗಮಿಸಿ ಗುರುವಾರ ಚುನಾವಣಾಧಿಕಾರಿ ಮತ್ತು ಕಂದಾಯ ಉಪವಿಭಾಗ ಅಧಿಕಾರಿ ರಾಮಚಂದ್ರ ಗಡದೆ ಅವರಿಗೆ ತಮ್ಮ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ವಿಶ್ವನಾಥ ಬಿರಾದಾರ, ಧರ್ಮರಾಜ ವಾಲಿಕಾರ ಜಟ್ಟಪ್ಪ ರವಳಿ, ಶಿವಾನಂದ ನಿಂಬಾಳ, ಹುಚ್ಚಪ್ಪ ತಳವಾರ ಇದ್ದರು.

Read More

ವಿಜಯಪುರ: ನಗರದಲ್ಲಿ ಎನ್‌ಎಚ್‌ಎಆಯ್ ಇವರಿಂದ ನಡೆಯುತ್ತಿರುವ ಸರ್ವಿಸ್ ರೋಡನಿಂದ ಸಾರ್ವಜನಕರಿಗಾಗುವ ತೊಂದರೆ ಬಗೆಹರಿಸಲು ಆಗ್ರಹಿಸಿ ಹಂಚಿನಾಳ ಹೌಸಿಂಗ್ ಬೋರ್ಡ, ಉದಯ ನಗರ, ಹಾಗೂ ಉಮರಾಣಿ ಕಾಲೋನಿ, ಪಾರೇಖ ನಗರ, ಹಂಚಿನಾಳ ತಾಂಡೆ ನಿವಾಸಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.ಸದರಿ ಬಡಾವಣೆಗಳ ಜನರಿಗೆ ಸಂಬAಧಪಟ್ಟAತೆ ಎನ್‌ಎಚ್‌ಎಆಯ್ ಇವರು ಸರ್ವಿಸ್ ರೋಡ ಮಾಡುವುದಕ್ಕೆ ಪ್ರಾರಂಭಿಸಿದ್ದಾರೆ. ಆದರೆ ಆಶ್ರಮಕ್ಕೆ ಮಾರುಕಟ್ಟೆ, ಶಾಲೆಗೆ ಹೋಗಲು ಝಿಬ್ರಾ ಕ್ರಾಸ್ ಮಾಡಿ ಹೋಗಲು ಅನುಕೂಲ ಮಾಡಿಕೊಡಬೇಕು. ಹಾಗೂ ಈ ಸರ್ವಿಸ್ ರೋಡ ನಿರ್ಮಾಣದಿಂದ ಶಾಲೆಗೆ, ಆಸ್ಪತ್ರೆಗೆ ಸುತ್ತು ಹಾಕಿ ಹೋಗುವುದರಿಂದ ಸಮಯ ಹಾಗೂ ತೀವ್ರ ತರಹದ ತೊಂದರೆಯಾಗುತ್ತದೆ. ಈಗಾಗಲೇ ಈ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಅಲ್ಲದೆ ಎನ್‌ಎಚ್‌ಎಆಯ್ ಇವರಿಗೆ ದಿ.೦೬-೦೨-೨೦೨೨ ರಂದು ಮನವಿ ಸಹ ಸಲ್ಲಿಸಲಾಗಿತ್ತು. ಹಾಗೂ ಸಂಸದರಿಗೂ ಸಹ ಮನವಿ ಸಲ್ಲಿಸಲಾಗಿತ್ತು. ಸಂಸದರು ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದು ಈವರೆಗೂ ಭರವಸೆಯಾಗಿಯೇ ಉಳಿದಿದೆ.ಕಾರಣ ಈ ಸಮಸ್ಯೆಯನ್ನು ಈ ಚುನಾವಣೆಯೊಳಗೆ ಬಗೆಹರಿಸಬೇಕು. ಇಲ್ಲದೇ ಹೋದಲ್ಲಿ ಈ ಚುನಾವಣೆಯನ್ನು ಎಲ್ಲ ಬಡಾವಣೆಯ…

Read More