ಸಿಂದಗಿ: ಪಟ್ಟಣದಲ್ಲಿನ ಕುಡಿಯುವ ನೀರಿನ ಬವಣೆ ನೀಗಿಸಲು ಅಮೃತ-೨ ಯೋಜನೆಯ ಮೂಲಕ ಪ್ರತಿ ಮನೆ ಮನೆಗಳಿಗೆ ನೀರಿನ ಸರಬರಾಜು ಮಾಡಲು ಸುಮಾರು ೯೬ ಕೋಟಿ ಅನುದಾನದಲ್ಲಿ ಕಾಮಗಾರಿ ಕೂಡಲೆ ಪ್ರಾರಂಭ ಮಾಡಲಾಗುವುದು. ಪ್ರಸ್ತುತ ಕಾಮಗಾರಿಗೆ ಮೊದಲ ಹಂತದಲ್ಲಿರೂ ೪೦ ಕೊಟಿ ಬಿಡುಗಡೆಗೊಂಡಿದ್ದು ಕಾಮಗಾರಿಯ ಟೆಂಡರ್ ಪ್ರಕ್ರಿಯೆಯಲ್ಲಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಅವರು ಪುರಸಭೆ ಕಾರ್ಯಾಲಯ ಸಿಂದಗಿ ಆಯೋಜಿಸಿರುವ ೨೦೨೩-೨೪ ನೇ ಸಾಲಿನ ಪುರಸಭೆಯ ನಿಧಿಯಲ್ಲಿ ಮನಗೂಳಿ ಅವರ ಮನೆಯಿಂದ ಶ್ರೀ ಸೋಮಲಿಂಗೇಶ್ವರ ಚೌಕದವರೆಗೆ ೩೦ ಲಕ್ಷರೂ ಗಳಲ್ಲಿನ ಸಿಸಿ ರಸ್ತೆ, ವಿಜಯಪುರದ ಮುಖ್ಯರಸ್ತೆಯಿಂದ ಶ್ರೀ ಸೋಮಲಿಂಗೇಶ್ವರ ಚೌಕದವರೆಗೆ ೧೫ ಲಕ್ಷರೂಗಳಲ್ಲಿ ಬೀದಿ ದ್ವೀಪ ಅಳವಡಿಕೆ, ಆಲಮೇಲ ಸರ್ ಮನೆಯಿಂದ ಆಶೀರ್ವಾದ ಕಲ್ಯಾಣ ಮಂಟಪದಿಂದ ಬಿರಾದಾರ ಸರ್ ಮನೆಯವರೆಗೆ ೧೫ ಲಕ್ಷ ರೂಗಳಲ್ಲಿ ಬೀದಿ ದೀಪ ಅಳವಡಿಕೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಪಟ್ಟಣದ ಜನತೆಗೆ ಪ್ರಸ್ತುತ ಸುಮಾರು ೬-೭ ದಿನಕ್ಕೊಮ್ಮೆ ಕುಡಿಯುವ ನೀರು ಸರಬರಾಜ ಆಗುತ್ತಿದೆ. ಇದನ್ನು ತಪ್ಪಿಸಲು ಸುಮಾರು ೧೨ ವರ್ಷಗಳಿಂದ ಸ್ಥಗಿತಗೊಂಡಿರುವ ಹಳೆಯ ನೀರು ಶುದ್ದೀಕರಣ ಘಟಕವನ್ನು ಪುನಚ್ಚೇತನಗೊಳಿಸಿ ಪಟ್ಟಣದ ಜನತೆಗೆ ೩ ದಿನಕ್ಕೋಮ್ಮೆ ಕುಡಿಯುವ ನೀರನ್ನು ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗಿದೆ. ಮುಂಬರುವ ದಿನಗಳಲ್ಲಿ ಅಂದಾಜು ೧೦೦ ಕೋಟಿ ಅನುದಾನದಲ್ಲಿ ಪ್ರತಿ ವಾರ್ಡಿನಲ್ಲಿ ಉತ್ತಮ ಸಿಸಿ ರಸ್ತೆ, ಚರಂಡಿ ವ್ಯವಸ್ಥೆ ಮತ್ತು ಮೂಲಭೂತ ಸೌಕರ್ಯಗಳನ್ನು ಮಾಡುವ ಕಾರ್ಯಯೋಜನೆ ನಡೆಸಲಾಗುವುದು. ಪ್ರತಿ ವಾರ್ಡಿನಲ್ಲಿ ಕಾಮಗಾರಿಗಳು ಪ್ರಾರಂಭಗೊಂಡಾಗ ಜನತೆಯು ಸಹಕಾರ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಇಂಡಿ ಉಪ ವಿಭಾಗಾಧಿಕಾರಿ ಹಮೀದ ಗದ್ಯಾಳ ಮಾತನಾಡಿದರು.
ಈ ವೇಳೆ ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ, ಪುರಸಭೆಯ ಮುಖ್ಯಾಧಿಕಾರಿ ಗುರುರಾಜ ಚೌಕಿಮಠ, ಪುರಸಭೆಯ ಸದಸ್ಯ ಶಾಂತವೀರ ಬಿರಾದಾರ, ಹಾಸೀಂ ಆಳಂದ ಹಾಗೂ ಶಿವು ಬಡಿಗೇರ, ವೀರೇಶ ದುರ್ಗಿ, ಮಂಜು ಬಿರಾದಾರ, ಬಾಬು ತಾಂಬೋಳಿ, ಶಾಂತಪ್ಪ ರಾಣಾಗೋಳ, ಷಣ್ಮುಖಯ್ಯ ಹಿರೇಮಠ ಯಂಕಂಚಿ ಸೇರಿದಂತೆ ಇತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

