Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಮುದ್ದೇಬಿಹಾಳ: ಈ ಬಾರಿ ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ಕಾಂಗ್ರೇಸ್ ಪಕ್ಷ ವಿಜಯೋತ್ಸವ ಆಚರಿಸುವುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ ಎಂದು ಮಾಜಿ ಸಚಿವ, ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಸಿ.ಎಸ್.ನಾಡಗೌಡ (ಅಪ್ಪಾಜಿ) ಅವರು ಹೇಳಿದರು.ಪಟ್ಟಣದ ಹುಡ್ಕೋದಲ್ಲಿರುವ ತಮ್ಮ ಗೃಹ ಕಚೇರಿಯಲ್ಲಿ ಜೆಡಿಎಸ್ ಪಕ್ಷದ ಪದಾಧಿಕಾರಿಗಳನ್ನು ಕಾಂಗ್ರೇಸ್ ಪಕ್ಷಕ್ಕೆ ಬರಮಾಡಿಕೊಂಡು ಅವರು ಮಾತನಾಡಿದರು.ಕಾಂಗ್ರೇಸ್ ಪಕ್ಷದ ಅಭಿಮಾನ ಎಲ್ಲೆಡೆ ಮೊಳಗುತ್ತಿರುವುದು ಸಂತಸ ತಂದಿದೆ. ದುಡ್ಡಿನಿಂದ ಯಾರನ್ನು ಬೇಕಾದರೂ ಕೊಂಡುಕೊಳ್ಳುತ್ತೇನೆ ಎಂದು ಅಹಂಕಾರದಿAದ ದರ್ಪ ತೋರಿಸುವವರಿಗೆ ಮತಕ್ಷೇತ್ರದ ಜನತೆ ಈ ಬಾರಿ ತಕ್ಕ ಉತ್ತರ ನೀಡಲು ಸಿದ್ಧರಾಗಿ ಕುಳಿತಿದ್ದಾರೆ. ಮೇ10 ರ ದಿನಾಂಕಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ. ನನ್ನ ಇತಿಹಾಸದಲ್ಲಿಯೇ ಕಾಣದ ಮತಗಳು ಈ ಬಾರಿ ಕಾಂಗ್ರೇಸ್ ಪಕ್ಷಕ್ಕೆ ಬರಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಕಾಂಗ್ರೇಸ್ ಪಕ್ಷದ ಸೇರ್ಪಡೆಗೊಂಡ ಜೆಡಿಎಸ್ ಪಕ್ಷದ ಪದಾಧಿಕಾರಿಗಳಾದ ಕೃಷ್ಣ ರಾಠೋಡ, ಪ್ರಶಾಂತ ಕಾಳೆ, ಶಂಕರ್ ಮುರಾಳ, ಹುಸೇನ್ ಭಾಷಾ ಪಿಂಜಾರ, ರುದ್ರೇಶ ಮುರಾಳ ಮಾತನಾಡಿ, ಅಪ್ಪಾಜಿ ನಾಡಗೌಡರ ಸನ್ನಡತೆಯ ರಾಜಕಾರಣಕ್ಕೆ ಮನಸೋತು ಕಾಂಗ್ರೇಸ್ ಪಕ್ಷಕ್ಕೆ ಬೆಂಬಲಿಸಿದ್ದೇವೆ. ಈ ಬಾರಿ…
ವಿಜಯಪುರ ಜಿಲ್ಲೆಯ 8 ಮತಕ್ಷೇತ್ರ | ನಾಮಪತ್ರ ಸಲ್ಲಿಸುವ 5ನೇ ದಿನ ವಿಜಯಪುರ: ರಾಜ್ಯ ವಿಧಾನಸಭೆ ಸಾರ್ವತ್ರಿಕ ಚುನಾವಣೆ ನಾಮಪತ್ರ ಸಲ್ಲಿಸಲು ಐದನೇ ದಿನವಾದ ಏಪ್ರಿಲ್ 19ರ ಬುಧವಾರದಂದು ವಿಜಯಪುರ ಜಿಲ್ಲೆಯ 8 ವಿಧಾನಸಭಾ ಮತಕ್ಷೇತ್ರಗಳಲ್ಲಿ 31 ಅಭ್ಯರ್ಥಿಗಳಿಂದ ಒಟ್ಟು 37 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ತಿಳಿಸಿದ್ದಾರೆ.26-ಮುದ್ದೇಬಿಹಾಳ ವಿಧಾನಸಭಾ ಮತಕ್ಷೇತ್ರದಿಂದ 05, 27-ದೇವರಹಿಪ್ಪರಗಿ ಮತಕ್ಷೇತ್ರದಿಂದ 05, 28-ಬಸವನಬಾಗೇವಾಡಿ ಮತಕ್ಷೇತ್ರದಿಂದ 04, 29-ಬಬಲೇಶ್ವರ ಮತಕ್ಷೇತ್ರದಿಂದ 03, 30-ಬಿಜಾಪುರ ನಗರ ಮತಕ್ಷೇತ್ರದಿಂದ 06, 31-ನಾಗಠಾಣ (ಎಸ್ಸಿ) ಮತಕ್ಷೇತ್ರದಿಂದ 04, 32-ಇಂಡಿ ಮತಕ್ಷೇತ್ರದಿಂದ 05 ಹಾಗೂ 33-ಸಿಂದಗಿ ಮತಕ್ಷೇತ್ರದಿಂದ 05 ನಾಮಪತ್ರಗಳು ಸೇರಿದಂತೆ ಒಟ್ಟು 37 ನಾಮಪತ್ರಗಳು ಇಂದು ಸಲ್ಲಿಕೆಯಾಗಿವೆ.ಮುದ್ದೇಬಿಹಾಳ ಮತಕ್ಷೇತ್ರದಿಂದ ಅಪ್ಪಾಜಿ ಅಲಿಯಾಸ ಚನ್ನಬಸವರಾಜ ನಾಡಗೌಡ (ಭಾರತೀಯ ರಾಷ್ಟಿçÃಯ ಕಾಂಗ್ರೆಸ್ ಪಕ್ಷ -2 ನಾಮಪತ್ರಗಳು)., ಅಮೀನಪ್ಪಗೌಡ ಪಾಟೀಲ (ಭಾರತೀಯ ಜನತಾ ಪಾರ್ಟಿ-3 ನಾಮಪತ್ರಗಳು) ಅವರು ನಾಮಪತ್ರ ಸಲ್ಲಿಸಿದ್ದಾರೆ.ದೇವರಹಿಪ್ಪರಗಿ ಮತಕ್ಷೇತ್ರದಿಂದ ಸೋಮನಗೌಡ.ಬ ಪಾಟೀಲ (ಸಾಸನೂರ) ಭಾರತೀಯ ಜನತಾ…
ವಿಜಯಪುರ: ಜಿಲ್ಲಾ ಸ್ವೀಪ್ ಸಮಿತಿ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಮತ್ತು ಕೋಲ್ಹಾರ ಹಾಗೂ ಬಸವನ ಬಾಗೇವಾಡಿ ತಾಲೂಕ ಪಂಚಾಯತಿ, ತಾಲೂಕಾ ಆಡಳಿತ ಹಾಗೂ ಪುರಸಭೆ ಇವರ ಸಹಯೋಗದಲ್ಲಿ ಇತ್ತಿಚಿಗೆ ಕೋಲ್ಹಾರ ಹಾಗೂ ಬಸವನ ಬಾಗೇವಾಡಿ ತಾಲೂಕಿನಲ್ಲಿ ವಿಶೇಷ ಚೇತನರ ಇಂಧನ ಚಾಲಿತ ತ್ರಿ-ಚಕ್ರವಾಹನಗಳ ಮೂಲಕ ಮತದಾನ ಜಾಗೃತಿ ಮೂಡಿಸಲಾಯಿತು.
ಜಿಲ್ಲಾಡಳಿತ-ಜಿಲ್ಲಾ ಸ್ವೀಪ್ ಸಮಿತಿಯಿಂದಮತದಾನ ಜಾಗೃತಿಯ ಮಾದರಿ ವಿದ್ಯುನ್ಮಾನ ಮತಯಂತ್ರ ಸ್ತಬ್ದಚಿತ್ರಕ್ಕೆ ಚಾಲನೆ ವಿಜಯಪುರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಇವರ ಸಹಯೋಗದಲ್ಲಿ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಆವರಣದಲ್ಲಿ ಬುಧವಾರ “ಮಾದರಿ ವಿದ್ಯುನ್ಮಾನ ಮತಯಂತ್ರದ ಮತದಾನ ಜಾಗೃತಿಯ ಸ್ತಬ್ಧಚಿತ್ರ’ಕ್ಕೆ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರು ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಅವರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.ಜಿಲ್ಲೆಯಲ್ಲಿ ಕಡಿಮೆ ಮತದಾನವಾಗಿರುವ ಮತಗಟ್ಟೆ ವ್ಯಾಪ್ತಿಯ ಪ್ರದೇಶಗಳಲ್ಲಿ ಪ್ರತಿಶತ ೧೦೦ ರಷ್ಟು ಮತದಾನ ಪ್ರಮಾಣ ಹೆಚ್ಚಿಸುವ ಉದ್ದೇಶದೊಂದಿಗೆ ಮತದಾನ ಪ್ರಮಾಣ ಹೆಚ್ಚಿಸಲು ವಿನೂತನ ರೀತಿಯಲ್ಲಿ ಮತದಾನ ಜಾಗೃತಿ ಅರಿವು ಮೂಡಿಸಲಾಗುತ್ತಿದೆ. ಮತದಾರರು ಮತದಾನ ಮಾಡುವ ಮೂಲಕ ತಮ್ಮ ಮತಾಧಿಕಾರ ಚಲಾಯಿಸಬೇಕು. ನಗರವಾಸಿ, ಗ್ರಾಮವಾಸಿ ಮತ್ತು ಯುವ ಮತದಾರರು ಮತದಾನ ಮಾಡಬೇಕು ಎಂದು ಕರೆ ನೀಡಿದ ಅವರು, ಮಾದರಿ ವಿದ್ಯುನ್ಮಾನ ಮತಯಂತ್ರ ಹೊಂದಿರುವ ಮತದಾನ ಜಾಗೃತಿಯ ಈ ಸ್ತಬ್ಧಚಿತ್ರ ವಾಹನವು ಜಿಲ್ಲೆಯ…
ಮುದ್ದೇಬಿಹಾಳ: ಪರಮಾತ್ಮ ಮನುಷ್ಯನಿಗೆ ಶಾಶ್ವತವಾಗಿ ನೀಡಿರುವುದು ಮೂರು-ಆರು ಅಡಿ ಜಾಗದ ಮನೆ. ಆ ಮನೆಯನ್ನು ಶೃಂಗಾರಗೊಳಿಸಲು ಮತ್ತು ಅಲ್ಲಿ ಸದಾಕಾಲ ಸಂತೋಷವಾಗಿ ಇರಲು ಜೀವನದುದ್ದಕ್ಕೂ ಕಷ್ಟದಲ್ಲಿರುವವರಿಗೆ ದಾನ ಧರ್ಮಗಳನ್ನು ಮಾಡಿದಾಗ ಮಾತ್ರ ಸಾಧ್ಯ ಎಂದು ಸಮಾಜ ಸೇವಕ ಅಯೂಬ ಮನಿಯಾರ ಹೇಳಿದರು.ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ತಮ್ಮ ಕಚೇರಿಯಲ್ಲಿ ಪ್ರತೀ ವರ್ಷದಂತೆ ಈ ವರ್ಷವೂ ಹಮ್ಮಿಕೊಳ್ಳಲಾಗಿದ್ದ ಉಚಿತ ನೇತ್ರ ತಪಾಸಣೆ ಮತ್ತು ಶಸ್ತç ಚಿಕಿತ್ಸೆ ಶಿಬಿರದಲ್ಲಿ ತಪಾಸಣೆಯ ಬಳಿಕ ಫಲಾನುಭವಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.ಕಳೆದ ಹತ್ತು ವರ್ಷಗಳಿಂದ ನನ್ನ ತಂದೆ ತಾಯಿಗಳ ಸ್ಮರಣಾರ್ಥವಾಗಿ ಬಡವರು ಹಾಗೂ ನಿರಾರ್ಶಿತರಿಗೆ ಯಾವುದೇ ಜಾತಿ ಬೇಧ ಎನ್ನದೇ ಉಚಿತ ನೇತ್ರ ತಪಾಸಣೆ ಮತ್ತು ಶಸ್ತç ಚಿಕಿತ್ಸೆಯನ್ನು ಆಯೋಜಿಸಿಕೊಂಡು ಬಂದಿದ್ದೇನೆ ಅಲ್ಲದೇ ಕಳೆದ ಇಪ್ಪತ್ತೆöÊದು ವರ್ಷಗಳಿಂದ ರಂಜಾನ್ ಹಬ್ಬದ ಪ್ರಯುಕ್ತ ದಿನಸಿ ಕಿಟ್ ಕೊಡುವ ಕಾರ್ಯಕ್ರಮ ಕೊಡುತ್ತ ಬಂದಿದ್ದೇನೆ. ಬಡವರ ಕಣ್ಣಲ್ಲಿ ಮತ್ತು ಅವರ ಸಂತೋಷದಲ್ಲಿ ನಾನು ನಮ್ಮ ತಂದೆ ತಾಯಿಗಳನ್ನು ಕಾಣುತ್ತೇನೆ ಹೊರತು ಇದರ ಹಿಂದೆ ಯಾವುದೇ…
ಇಂಡಿ ಮತಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿ ಕಾಸುಗೌಡ ಬಿರಾದಾರ ಅವರು ತಮ್ಮ ಅಪಾರ ಬೆಂಬಲಿಗರೊAದಿಗೆ ಮೆರವಣಿಗೆ ನಡೆಸಿ ಮಿನಿ ವಿಧಾನಸೌಧಕ್ಕೆ ತೆರಳಿ ಕಂದಾಯ ಉಪವಿಬಾಗಾಧಿಕಾರಿ ರಾಮಚಂದ್ರ ಗಡದೆ ಇವರಿಗೆ ನಾಮಪತ್ರ ಸಲ್ಲಿಸಿದರು.ಬೆಳಗ್ಗೆ ೧೦ ಗಂಟೆಗೆ ಪಟ್ಟಣದ ಶ್ರೀ ಶಾಂತೇಶ್ವರ ದೇವಸ್ಥಾನ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ಅಂಬಾಭವಾನಿ ಮತ್ತು ಇನ್ನಿತರ ದೇವಸ್ಥಾನ ತೆರಳಿ ಆರ್ಶೀವಾದ ಪಡೆದು ಶಿವಾಜಿ ವೃತ್ತದ ಮೂಲಕ ಬೃಹತ್ ಮೆರವಣೆಗೆಯಲ್ಲಿ ತೆರಳಿ ನಾಮಪತ್ರ ಸಲ್ಲಿಸಿದರು.ಜನರಿಗೆ ಉತ್ತಮ ಆಡಳಿತ ಹಾಗೂ ಜನಪರ ಆಡಳಿತ ನೀಡಬೇಕಾದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂಬುದು ಎಲ್ಲರ ಇಚ್ಛೆ. ಪಕ್ಷದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಿ ಮತಯಾಚಿಸುತ್ತೇವೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.ಇಂಡಿ ಮತ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಅರಳಲಿದೆ. ಮೇ ೧೩ ರಂದು ಬಿಜೆಪಿ ಬಾವುಟ ಹಾರಲಿದೆ ಎಂದು ಅಭ್ಯರ್ಥಿ ಕಾಸುಗೌಡ ಬಿರಾದಾರ ಹೇಳಿದರು.ಮೆರವಣಿಗೆಯಲ್ಲಿ ಉತ್ತರಾಖಂಡದ ಶಿಕ್ಷಣ ಸಚಿವ ಧ್ಯಾನಚಂದ ರಾವತ, ಉತ್ತರ ಪ್ರದೇಶದ ಗಿರಿಧರಲಾಲ ತಿವಾರಿ, ಮಾಜಿ ಶಾಸಕ ಡಾ.ಸಾರ್ವಭೌಮ ಬಗಲಿ,…
ದೇವರಹಿಪ್ಪರಗಿ: ಬಿಜೆಪಿ ಅಭ್ಯರ್ಥಿ ಸೋಮನಗೌಡ ಪಾಟೀಲ ಸಾಸನೂರ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಸುಣಗಾರ ತಮ್ಮ ತಮ್ಮ ಪಕ್ಷಗಳ ನಾಯಕರು, ಬೆಂಬಲಿಗರು ಹಾಗೂ ಕಾರ್ಯಕರ್ತರೊಂದಿಗೆ ಮೆರವಣಿಗೆಯಲ್ಲಿ ಆಗಮಿಸಿ ನಾಮಪತ್ರ ಸಲ್ಲಿಸಿದರು.ಬಿಜೆಪಿಯಿಂದ ಸೋಮನಗೌಡ ನಾಮಪತ್ರ ಸಲ್ಲಿಕೆ: ಪಟ್ಟಣದ ಮಲ್ಲಯ್ಯನ ದೇವಸ್ಥಾನದ ಮುಂಭಾಗದಲ್ಲಿ ಬುಧವಾರ ಶಾಸಕ ಸೋಮನಗೌಡ ಪಾಟೀಲ ಸಾಸನೂರ ನೇತೃತ್ವದಲ್ಲಿ ಸಭೆ ಸೇರಿದ ಬಿಜೆಪಿ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಮೆರವಣಿಗೆಯ ಮೂಲಕ ಹೋರಟು ತಹಶೀಲ್ದಾರ ಕಚೇರಿ ತಲುಪಿ ನಾಮಪತ್ರ ಸಲ್ಲಿಸಿದರು.ಈ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ಸೋಮನಗೌಡ ಪಾಟೀಲ(ಸಾಸನೂರ), ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ, ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ(ಕುಚಬಾಳ) ಬಿ.ಎಸ್.ಪಾಟೀಲ (ನಾಗರಾಳ ಹುಲಿ), ಪಂಚಮಸಾಲಿ ಸಮುದಾಯದ ಮುಖಂಡ ಸುರೇಶಗೌಡ ಪಾಟೀಲ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಾಧನೆ ಹಾಗೂ ಶಾಸಕರ ಅಭಿವೃದ್ಧಿ ಕಾರ್ಯಗಳು ಕ್ಷೇತ್ರದಲ್ಲಿ ಪಕ್ಷ ಜಯಗಳಿಸಲು ಸಹಕಾರಿಯಾಗಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಉತ್ತರಪ್ರದೇಶದ ಮಾಜಿಸಚಿವ ಆನಂದ ಸ್ವರೂಪ ಶುಕ್ಲಾಜೀ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪ್ರಭುಗೌಡ ಬಿರಾದಾರ(ಅಸ್ಕಿ), ಮಂಡಲ ಅಧ್ಯಕ್ಷ ಭೀಮನಗೌಡ ಸಿದರಡ್ಡಿ,…
ವಿಜಯಪುರ: ರಾಜಕಾರಣದಲ್ಲಿ ಜಾತಿ ಬರಬಾರದು. ಜಾತ್ಯತೀತ ನಾಯಕರನ್ನು ಎಲ್ಲ ಸಮುದಾಯದವರು ಒಕ್ಕೊರಲಿನಿಂದ ಬೆಂಬಲಿಸಬೇಕು ಎಂದು ಜಯಬಸವ ಕುಮಾರ ಸ್ವಾಮೀಜಿ ಹೇಳಿದ್ದಾರೆ. ನಗರದಲ್ಲಿ ಮಲ್ಲಿಕಾರ್ಜುನ ಎಸ್. ಲೋಣಿ ಬೆಂಬಲಿಗರ ಸಭೆಯಲ್ಲಿ ಮಾತನಾಡಿದ ಅವರು, ವ್ಯಕ್ತಿಯನ್ನು ಜಾತಿಯಿಂದ ನೋಡಬಾರದು. ಅಭಿವೃದ್ಧಿ ಮತ್ತು ದೂರದೃಷ್ಠಿ ಹೊಂದಿರುವ ನಾಯಕರಿಗೆ ಎಲ್ಲ ಸಮುದಾಯ ಬೆನ್ನೆಲುಬಾಗಿ ನಿಲ್ಲಬೇಕು. ಮನುಷ್ಯನಿಗೆ ಕೃತಜ್ಞತೆ ಇರಬೇಕು. ಆದರೆ, ಜಾತಿ ರಾಜಕಾರಣಿಗಳಿಗೆ ಇದು ಅರ್ಥವಾಗುವುದಿಲ್ಲ. ಜಾತ್ಯತೀತ ನಾಯಕರನ್ನು ಉನ್ನತ ಸ್ಥಾನಕ್ಕೇರಿಸಲು ಎಲ್ಲರೂ ಕೈ ಜೋಡಿಸೋಣ ಎಂದು ಹೇಳಿದರು. ಎಂ. ಬಿ. ಪಾಟೀಲರು ಹೃದಯ ವೈಶಾಲ್ಯತೆ ಹೊಂದಿದ್ದಾರೆ. ಅವರು ಮಾಡಿರುವ ಅಭಿವೃದ್ಧಿ ಕಾರ್ಯಗಳು ಜನಜನಿತವಾಗಿವೆ. ಸಂಗಾಪುರ ಎಸ್.ಎಚ್ ಗ್ರಾಮದಲ್ಲಿ ರೈತರು ಅವರ ಪುತ್ಥಳಿ ಸ್ಥಾಪಿಸಿರುವುದು ಇದಕ್ಕೆ ಸಾಕ್ಷಿ ಎಂದು ಹೇಳಿದರು. ಕೆ.ಪಿ.ಸಿ.ಸಿ. ಪ್ರಚಾರ ಸಮಿತಿ ಉಪಾಧ್ಯಕ್ಷ ಮಲ್ಲಿಕಾರ್ಜುನ ಎಸ್. ಲೋಣಿ ಮಾತನಾಡಿ, ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ. ಕಾಂಗ್ರೆಸ್ ಸರಕಾರದಲ್ಲಿ ಎಂ. ಬಿ. ಪಾಟೀಲರು ಪ್ರಮುಖ ಸ್ಥಾನದಲ್ಲಿರುತ್ತಾರೆ. ನಮಗೆಲ್ಲರಿಗೂ ಅವರೇ ಗಾಡ್ ಫಾದರ್.…
ಬ್ರಹ್ಮದೇವನಮಡು: ಭಾರತೀಯ ಸಾಂಸ್ಕ್ರತಿಕ ಪರಂಪರೆಯಲ್ಲಿ ಮಹಿಳೆ ಮಹತ್ವದ ಸ್ಥಾನ ಹೊಂದುವ ಮೂಲಕ ಧಾಮಿ೯ಕವಾಗಿಯೂ ಆದಶ೯ವಾಗಿದ್ದಾಳೆ ಎಂದು ಪ್ರವಚನಕಾರ ಸಿದ್ದರಾಮ ಸ್ವಾಮೀಜಿ ಹೇಳಿದರು.ಸಿಂದಗಿ ತಾಲೂಕು ಸುಕ್ಷೇತ್ರ ಹೊನ್ನಳ್ಳಿ – ಬ್ರಹ್ಮದೇವನಮಡು ಗ್ರಾಮದಲ್ಲಿ ಕಲ್ಶಾಣದೇಶ್ವರ ಜಾತ್ರಾ ಮಹೋತ್ಸವ ನಿಮಿತ್ಶ ಮಂಗಳವಾರ ರಾತ್ರಿ ಹಮ್ಮಿಕೊಂಡಿದ್ದ ಶ್ರೀ ದೇವಿ ಹಾಗೂ 401 ಮುತ್ತೈದಿಯರಿಗೆ ಉಡಿ ತುಂಬುವ ಕಾಯ೯ಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಭಾರತದ ಪರಂಪರೆಯಲ್ಲಿ ಮಹಿಳೆಯರ ಸಾಮಥ್ಶ೯ ಇತಿಹಾಸದ ತುಂಬೆಲ್ಲ ಕಾಣಸಿಗುತ್ತದೆ. ಅಂತಹ ಮಹಿಳೆಯರು ನೀವಾಗಬೇಕು ಎಂದರು.ಶ್ರೀಮಠದ ಕಲ್ಶಾಣದಯ್ಶಾ ಸ್ವಾಮೀಜಿ ಆಶೀವ೯ಚನ ನೀಡಿ, ನಾರಿಯ ಗೌರವದಲ್ಲಿಯೇ ಭಗವಂತನ ಕರುಣೆಯ ಕೃಫೆ ಅಡಗಿದೆ. ಮಹಿಳೆಯಲ್ಲಿನ ಸಂಸ್ಕಾರ ಒಂದು ಪೀಳಿಗೆಯ ಪರಂಪರೆ ಉದ್ದರಿಸಲು ಸಹಕಾರಿ.ಜಾಗೃತ ಮಹಿಳೆ ಸಮಾಜದ ಮೊದಲ ಮೆಟ್ಟಿಲಾಗಬಲ್ಲಳು ಎಂದು ಹೇಳಿದರು. ನಾಲ್ಕುನೂರಕ್ಕೂ ಹೆಚ್ಚು ಮುತೈದೆಯರಿಗೆ ಬಳೆ,ಕುಪ್ಪಸ ಸೇರಿ ಐದು ಬಗೆಯ ವಸ್ತುಗಳಿಂದ ಉಡಿ ತುಂಬಿ ಪ್ರಸಾದ ವಿತರಿಸಲಾಯಿತು.ಶ್ರೀಮಠದ ರಾಜೇಶ್ವರಿ ವೀರಘಂಟಯ್ಶ ಗದ್ದಗಿಮಠ, ಚನ್ನಮಲ್ಲಯ್ಶ ಹಿರೇಮಠ, ಸಿಂದಗಿ ಕಾಂಗ್ರೆಸ್ ಅಭ್ಶಥಿ೯ ಅಶೋಕ ಮನಗೂಳಿ ಪತ್ನಿ ನಾಗರತ್ನ ಮನಗೂಳಿ, ಅರವಿಂದ…
ಚಡಚಣ: ನಾನು ನಾಗಠಾಣ ಕ್ಷೇತ್ರದ ಅಭ್ಯರ್ಥಿ ಅಲ್ಲ, ಕಾರ್ಯಕರ್ತರಾದ ಪ್ರತಿಯೊಬ್ಬರೂ ಅಭ್ಯರ್ಥಿ ಇದ್ದೀರಿ. ಹಾಗಾಗಿ ನಿಮ್ಮ ಗೆಲುವು ನಿಮ್ಮ ಕೈಯಲ್ಲೇ ಇದೆ ಎಂದು ಕಾಂಗ್ರೆಸ್ ಅಭ್ಯರ್ಥಿ ವಿಠ್ಠಲ ಕಟಕದೊಂಡ ವಿಶ್ವಾಸ ತುಂಬಿದರು.ಇಲ್ಲಿನ ಕಾಂಗ್ರೆಸ್ ಪಕ್ಷದ ಕಾರ್ಯಾಲಯದಲ್ಲಿ ನಡೆದ ಪೂರ್ವ ತಯಾರಿ ಸಭೆಯಲ್ಲಿ ಮಾತನಾಡಿದರು.ಎಲ್ಲರೂ ಸಹಕರಿಸಿಕೊಂಡು ಚುನಾವಣೆ ಎದುರಿಸಬೇಕು. ಒಬ್ಬರಿಗೊಬ್ಬರು ಕೋಆರ್ಡಿನೇಟ್ ಮಾಡಿಕೊಂಡು ಆಯಾ ಜಿಪಂ ವ್ಯಾಪ್ತಿಯ ತಂಡಗಳು ಕಾರ್ಯನಿರ್ವಹಿಸಬೇಕು. ಜಿಪಂ ವ್ಯಾಪ್ತಿಯ ಎಲ್ಲ ಹಳ್ಳಿಗಳ ಮರದಾರರರನ್ನು ತಲುಪಬೇಕು ಎಂದರು. ದೊಡ್ಡದಾದ ಕ್ಷೇತ್ರ ಇರುವುದರಿಂದ ನನಗೊಬ್ಬನಿಗೆ ಎಲ್ಲೆಡೆ ತಲುಪಲಾಗುವುದಿಲ್ಲ. ಆದ್ದರಿಂದ ತಾವೆಲ್ಲ ಕಾರ್ಯಕರ್ತರೇ ಅಭ್ಯರ್ಥಿ ನೀವೇ ಎಂದು ತಿಳಿದು ಎಲ್ಲರನ್ನು ಭೇಟಿಯಾಗಿ ಮತಯಾಚಿಸಬೇಕು. ಗ್ರಾಪಂನಿಂದ ಹಳ್ಳಿ ಹಳ್ಳಿ, ಅಲ್ಲಿಂದ ತಾಪಂ ಮತ್ತೆ ಜಿಪಂ ವರೆಗೆ ನೀವು ಪ್ರತಿ ಮತದಾರ ಎಲ್ಲಿದ್ದಾರೆ ಎಂದು ಗುರುತಿಸಿ ಅವರನ್ನು ಬೂತ್ಗೆ ತರುವ ಜವಾಬ್ದಾರಿ ನಿಮ್ಮದು. ಮನೆ ಮನೆ ತಲುಪಿ ಮತದಾರರನ್ನು ಕಾಂಗ್ರೆಸ್ ಕಡೆಗೆ ಸೆಳೆದು, ಆ ಅಲೆಯಲ್ಲಿ ಪಕ್ಷವನ್ನು ಅಧಿಕಾರದ ದಡ ಮುಟ್ಟಿಸಬೇಕು ಎಂದು ಕೇಳಿಕೊಂಡರು.ಪಕ್ಷದ ಬ್ಲಾಕ್…
