Author: editor.udayarashmi@gmail.com

ಚಡಚಣ: ಸ್ವಚ್ಛ ಭಾರತ್ ಮಿಷನ್ (ನಗರ) 1.0 ಯೋಜನೆಯಡಿ ಬಯಲು ಶೌಚಮುಕ್ತ ನಗರ ಪ್ರದೇಶಗಳಾಗಿ ಘೋಷಿಸಲಾಗಿರುತ್ತದೆ. ಇತ್ತೀಚೆಗೆ ದಿನೇ ದಿನೇ ನಗರ ವ್ಯಾಪ್ತಿಯು ಹೆಚ್ಚಾಗುತ್ತಿರುವದರಿಂದ ಕೇಂದ್ರ ಸರ್ಕಾರವು ನಗರ ಪ್ರದೇಶಗಳಲ್ಲಿ ನೈಮ್ರ್ಯಲೀಕರಣ, ಸ್ವಚ್ಛತೆ ಮತ್ತು ಶುಚಿತ್ವದ ಮೇಲೆ ಹೆಚ್ಚು ಗಮನಹರಿಸಿ ಸ್ವಚ್ಛ ಭಾರತ್ ಮಿಷನ್ (ನಗರ)2.0 ಯೋಜನೆಯಡಿ, ಚಡಚಣ ಪಟ್ಟಣ ಪಂಚಾಯತಿಗೆ ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ 90 ಸೀಟ್ ಶೌಚಾಲಯ ನಿರ್ಮಾಣ ಮಾಡಲು ಮಂಜೂರಿಯಾಗಿದ್ದು, ಸದರಿ ಶೌಚಾಲಯ ನಿರ್ಮಾಣಕ್ಕೆ ಅರ್ಹ ಫಲಾನುಭವಿಗಳಿಂದ ಅರ್ಜಿ ಕರೆಯಲಾಗಿರುತ್ತದೆ ಎಂದು ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಶಿವಾನಂದ ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಅರ್ಹ ಫಲಾನುಭವಿಗಳು ಜ.17 ಸಂಜೆ 5.30ರೊಳಗೆ ಪಟ್ಟಣ ಪಂಚಾಯ್ತಿ ಕಾರ್ಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಲು ತಿಳಿಸಿದ ಅವರು, ಅರ್ಜಿಗಳು ಪಟ್ಟಣ ಪಂಚಾಯತಿಯ ಆರೋಗ್ಯ ವಿಭಾಗದಲ್ಲಿ ಲಭ್ಯವಿರುತ್ತದೆ ಎಂದು ತಿಳಿಸಿದ್ದಾರೆ .

Read More

ವಿಜಯಪುರ: ಹೊನ್ನಾವರದ ಕಾಸರಕೋಡ್ ಟೊಂಕದಲ್ಲಿ ಮೀನುಗಾರರಿಗೆ ಮತ್ತು ವಾಣಿಜ್ಯ ಬಂದರು ವಿರೋಧಿ ಹೋರಾಟಗಾರರಿಗೆ ಕೆಲವು ಅಪರಿಚಿತ ವ್ಯಕ್ತಿಗಳು ತಾವು ಭೂಗತ ಲೋಕದವರು, ಹೊನ್ನಾವರ ಪೋರ್ಟ್ ಪ್ರೈವೇಟ್ ಲಿಮಿಟೆಡ್ ಕಂಪನಿ ಅವರ ವಾಣಿಜ್ಯ ಬಂದರು ನಿರ್ಮಾಣಕ್ಕೆ ಮತ್ತು ರಸ್ತೆ ಕಾಮಗಾರಿಕೆಗೆ ಅಡ್ಡಿಪಡಿಸಿದರೆ ಪ್ರಾಣಬೆದರಿಕೆಯೊಡ್ಡಿ ಹೆದರಿಸಲು ಪ್ರಯತ್ನಿಸಿದ್ದು ಖಂಡನೀಯ ಎಂದು ರಾಷ್ಟೀಯ ಮೀನುಗಾರರ ಸಂಘದ ರಾಷ್ಟೀಯ ಉಪಾಧ್ಯಕ್ಷ ಡಾ.ಗೌತಮ್.ಆರ್.ಚೌಧರಿ ತಿಳಿಸಿದ್ದಾರೆ.ಮಂಗಳವಾರ ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ಇದೇ ವೇಳೆ ಮೀನುಗಾರಿಕೆ ಸಚಿವಮಂಕಾಳ ವೈದ್ಯ ಘಟನಾ ಸ್ಥಳದಲ್ಲಿದ್ದು, ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ ಕ್ರಮಕೈಗೊಳ್ಳಬೇಕೆಂದು ಆದೇಶಿಸಿರುವುದು ಸ್ವಾಗತಾರ್ಹವಾಗಿದೆ ಎಂದರು.ಆದರೆ ಮೀನುಗಾರರ ಹಿತರಕ್ಷಣೆಗಾಗಿ ಯಾವುದೇ ಒತ್ತಡ ಹಾಗೂ ಶಿಫಾರಸುಗಳಿಗೆ ಮಣಿಯದೆ ಮುಂದೆ ಇಂತಹ ಅಹಿತಕರ ಘಟನೆಗಳು ನಡೆಯದಂತೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮುಖ್ಯಮಂತ್ರಿಗಳಲ್ಲಿ ಹಾಗೂ ಮೀನುಗಾರಿಕೆ ಸಚಿವರಿಗೆ ಡಾ.ಗೌತಮ್.ಆರ್.ಚೌಧರಿ ಆಗ್ರಹಿಸಿದ್ದಾರೆ.

Read More

ವಿಜಯಪುರ: ಉತ್ತರ ಕರ್ನಾಟಕ ಕೃಷಿ, ಶಿಕ್ಷಣ, ಸಾರಿಗೆ,ರೈಲು, ಆಡಳಿತರಾಜಕೀಯ, ಆಧ್ಯಾತ್ಮಿಕ ಮಾಧ್ಯಮ, ಉದ್ಯಮ, ಚಲನಚಿತ್ರ ಹಲವಾರು ಕ್ಷೇತ್ರಗಳಲ್ಲಿ ಆಗಿರುವ ಅನ್ಯಾಯ, ತಾರತಮ್ಯ ಮತ್ತು ಮಲತಾಯಿ ಧೋರಣೆ ಪ್ರತಿಭಟಿಸಿ ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯಕ್ಕಾಗಿ ಆಗ್ರಹಿಸಿ ಮಂಗಳವಾರ ಸಂಸದ ರಮೇಶ ಜಿಗಜಿಣಿಗಿ ಕಚೇರಿಯಲ್ಲಿ ಉತ್ತರ ಕರ್ನಾಟಕ ಹೋರಾಟ ಸಮಿತಿ ರಾಜ್ಯ ಮತ್ತು ಜಿಲ್ಲಾ ಘಟಕಗಳ ಪದಾಧಿಕಾರಿಗಳು ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಉತ್ತರ ಕರ್ನಾಟಕ ರಾಜ್ಯ ಹೋರಾಟ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗೇಶ ಗೊಲಶೆಟ್ಟಿ, ವಿಜಯಪುರ ಜಿಲ್ಲಾ ಅಧ್ಯಕ್ಷ ಕಾಮಣ್ಣ ಗಂಗನಹಳ್ಳಿ, ಮಾಧ್ಯಮ ಸಲಹೆಗಾರ ಬಸವರಾಜ ಕನಕವಾಡಿ, ದೇವಕಾಂತ ಬಿಜ್ಜರಗಿ, ನ್ಯಾಯವಾದಿ ದಾನೇಶ ಅವಟಿ, ಸೋಮು ಜಗದಾಳ, ಗುರುಪಾದ ಕಲಾದಗಿ, ಬಾಬು ಚನ್ನಪ್ಪ ಗೌಡ, ಮೊದಲಾದರಿದ್ದರು.

Read More

ಮುದ್ದೇಬಿಹಾಳ: ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಪಟ್ಟಣದ ಹಳೆಯ ತರಕಾರಿ ಮಾರುಕಟ್ಟೆಯಲ್ಲಿರುವ ಖಾಸ್ಗತೇಶ್ವರ ಮಠದಲ್ಲಿ ಸಂಜೀವಿನಿ ಯುವಕ ಸಂಘದ ವತಿಯಿಂದ ಪ್ರಸಾದ ಸೇವೆ ಕಲ್ಪಿಸಲಾಗಿತ್ತು.ಈ ವೇಳೆ ಸಂಘದ ಪ್ರಮುಖರಾದ ರಾಜೇಂದ್ರಗೌಡ ರಾಯಗೊಂಡ, ಪಿಡಿಓ ಮುತ್ತು ಗಣಾಚಾರಿ, ಶರಣು ಪಡದಾಳಿ, ಹರೀಶ ಬೆವೂರ ಮತ್ತೀತರರು ಮಾತನಾಡಿ, ಕಳೆದ ಮೂವತ್ತು ವರ್ಷದಿಂದ ಮಂತ್ರಾಲಯಕ್ಕೆ ತೆರಳುವ ಪಾದಯಾತ್ರಿಗಳಿಗೆ ಕುಶಲೋಪರಿ ವಿಚಾರಿಸಿ ರಾತ್ರಿಯ ಊಟ ಹಾಗೂ ಬೆಳಿಗ್ಗೆ ಉಪಹಾರ ಸೇವೆ ಕಲ್ಪಿಸುವ ಸೇವಾ ಕಾರ್ಯವನ್ನು ಸಂಜೀವಿನಿ ಯುವಕ ಸಂಘ ಮಾಡುತ್ತ ಬಂದಿದೆ. ನಮ್ಮೆಲ್ಲರ ಸ್ನೇಹಿತ ದಿ.ಶರಣು ಬೂದಿಹಾಳಮಠ ಅವರ ಮಾರ್ಗದರ್ಶನದಂತೆ ಈ ಸೇವೆಯಲ್ಲಿ ಪ್ರತಿಯೊಬ್ಬರೂ ಕಾಯಾ ವಾಚಾ ಮನಸಾ ತೊಡಗಿಕೊಳ್ಳುತ್ತೇವೆ ಎಂದರು.ಸೇವೆಯಲ್ಲಿ ರಮೇಶ ಕೆಂಧೂಳಿ, ಶಿವು ಬಿಜಾಪೂರ, ಅಶೋಕ ವನಹಳ್ಳಿ, ಶೇಖರ ಪತ್ತಾರ, ಮಹಾಂತೇಶ ಮಡಿವಾಳರ, ಸಂತು ಬಾವೂರ, ರಾಜು ಬಳ್ಳೊಳ್ಳಿ, ರಾಜು ಹೊಳಿ, ಮಹಾಂತೇಶ ಬೂದಿಹಾಳಮಠ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

Read More

ವಿಜಯಪುರ: ೨೦೨೩-೨೪ನೇ ಸಾಲಿಗೆ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಯಂತ್ರಚಾಲಿತ ದ್ವಿಚಕ್ರ ವಾಹನ ಯೋಜನೆ, ಟಾಕಿಂಗ್ ಲ್ಯಾಪ್ಟಾಫ್ ಯೋಜನೆ, ಸಾಧನೆ ಸಲಕರಣೆಗಳ, ಶ್ರವಣದೋಷವುಳ್ಳವರಿಗೆ ಹೊಲಿಗೆ ಯಂತ್ರ, ದೃಷ್ಟಿದೋಷ ಹೊಂದಿರುವ ವಿಕಲಚೇನರಿಗೆ ಬ್ರೈಲ್ ಕಿಟ್ ಗಳಿಗಾಗಿ ಸುವಿಧಾ ವೆಬ್ ಸೈಟ್ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.ಈ ಯೋಜನೆಯನ್ನು ಡಿ.ಬಿ.ಟಿ ಒಳಪಡಿಸಿ, ಅರ್ಹ ವಿಕಲಚೇತನರು ಆನ್‌ಲೈನ್ ಮೂಲಕ ಹಾಗೂ ಭೌತಿಕವಾಗಿ ಕಚೇರಿಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಸಲು ೩೦-೦೧-೨೦೨೪ ಕಡೆಯ ದಿನವಾಗಿದೆ.ಹೆಚ್ಚಿನ ಮಾಹಿತಿಗಾಗಿ ವಿಜಯಪುರ – ರವಿ ರಾಠೋಡ ( ಮೊ.೯೦೦೩೫೫೫೩೩೩೭), ಇಂಡಿ – ಪರಶುರಾಮ ಭೋಸಲೆ (ಮೊ.೯೯೭೨೪೪೧೪೬೪), ಸಿಂದಗಿ – ಮುತ್ತುರಾಜ ಸಾತಿಹಾಳ (ಮೊ.೯೯೮೦೦೧೯೬೩೫), ಬಸವನ ಬಾಗೇವಾಡಿ – ಎಸ್. ಡಿ ಬಿರಾದಾರ (ಮೊ.೮೭೨೨೧೩೫೬೬೦) ಹಾಗೂ ಮುದ್ದೇಬಿಹಾಳ – ಎಸ್.ಕೆ. ಘಾಟಿ (ಮೊ.೯೭೪೦೬೮೨೯೭೯) ಕಚೇರಿ ದೂರವಾಣಿ ಸಂಖ್ಯೆ೦೮೩೫೨-೭೯೬೦೬೦ಗೆ ಸಂಪರ್ಕಿಸುವಂತೆ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿಗಳಾದ ರಾಜಶೇಖರ ದೈವಾಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ವಿಜಯಪುರ: ಜಾನುವಾರ ಜಾತ್ರೆಯ ಹಿನ್ನೆಲೆಯಲ್ಲಿ ನಗರದ ತೊರವಿಗೆ ಮಂಗಳವಾರ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಭೇಟಿ ನೀಡಿ ನೀಡಿ ಸ್ಥಳ ಪರಿಶೀಲನೆ ಮಾಡಿದರು.ಮೂರು ವರ್ಷಗಳ ನಂತರ ಜಾನುವಾರಗಳ ಜಾತ್ರೆ ನಡೆಯುತ್ತಿರುವುದರಿಂದ ಸುಮಾರು ೨೦-೨೫ ಎಕರೆಯಲ್ಲಿ ಬಹಳ ವಿಜೃಂಭಣೆಯಿಂದ ಜಾತ್ರೆ ಆಯೋಜಿಸಲಾಗುತ್ತಿದ್ದು, ಈ ಬಗ್ಗೆ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ಮಾಡಿದರು.ಜಾನುವಾರ ಜಾತ್ರೆಯ ಸಂದರ್ಭ ಯಾವುದೇ ಸಮಸ್ಯೆಯುಂಟಾಗದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಸೂಚಿಸಿದರು.ಜಾತ್ರೆಗೆ ಬರಲು ಅನುಕೂಲವಾಗುವ ನಿಟ್ಟಿನಲ್ಲಿ ಸುಗಮ ರಸ್ತೆ ಹಾಗೂ ಬಸ್‌ಗಳ ವ್ಯವಸ್ಥೆ, ಜಾನುವಾರಗಳಿಗೆ ಕುಡಿಯುವ ನೀರು ಒದಗಿಸುವುದು, ಮೇವಿನ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಪಶುವೈದ್ಯರು ಮುಂಜಾಗ್ರತಾ ಕ್ರಮವಾಗಿ ಜಾತ್ರೆಯ ಸಂದರ್ಭದಲ್ಲಿ ಆಂಬ್ಯಲೆನ್ಸ್ ವೈದ್ಯಕೀಯ ಸೌಲಭ್ಯ ಇರುವಂತೆ ನೋಡಿಕೊಳ್ಳಬೇಕು. ಯಾವುದೇ ಕೊರತೆ ಉಂಟಾಗದಂತೆ ಅಚ್ಚುಕಟ್ಟಾಗಿ ಜಾನುವಾರ ಜಾತ್ರೆ ವ್ಯವಸ್ಥಿತವಾಗಿ ಆಯೋಜನೆಗೆ ಅಧಿಕಾರಿಗಳಿಗೆ ಸೂಚಿಸಿದರು.ಈ ಸಂದರ್ಭ ವಿಜಯಪುರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಾಹುಲ್ ಶಿಂಧೆ, ವಿಜಯಪುರ ಉಪವಿಭಾಗಾಧಿಕಾರಿ ಬಸವಣೆಪ್ಪ ಕಲಶೆಟ್ಟಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಶೈಲಜಾ. ಎಂ.ವಿ ಹಾಗೂ…

Read More

ವಿಜಯಪುರ: ಇಂದು ನರದ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಮಕ್ಕಳ ರಕ್ಷಣಾ ವ್ಯವಸ್ಥೆಯ ಕುರಿತು ಭಾಗಿದಾರೊಂದಿಗೆ ಪ್ರಗತಿ ಪರಿಶೀಲನೆ ಅಧ್ಯಕ್ಷತೆ ವಹಿಸಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ಶಶಿಧರ ಕೋಸಂಬೆ ಮಾತನಾಡಿ, ಅಪ್ರಾಪ್ತರು ಗರ್ಭಿಣಿ ಕುರಿತು ಫೋಕ್ಸೋ ಅದೇಶದಂತೆ ಪೋಲಿಸರ ಗಮನಕ್ಕೆ ತಂದು ಪ್ರಕರಣ ದಾಖಲಿಸಿಕೊಳ್ಳುವತ್ತ ಆರೋಗ್ಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ಅವರು ಸೂಚನೆ ನೀಡಿದರು.ಸಶಕ್ತ ಸಧೃಢ ಉತ್ತಮ ಸಮಾಜದ ಬೆಳವಣಿಗೆ ಗರ್ಭಿಣಿಯರ ಹಾಗೂ ತಾಯಂದಿರುಗಳು ಮಗುವಿನ ಉತ್ತಮ ಬೆಳೆವಣಿಗೆಗಾಗಿ ಆರೋಗ್ಯ ಕಡೆ ಹೆಚ್ಚು ನಿಗಾ ವಹಿಸಬೇಕು. ಸಮತೋಲನ ಹಾಗೂ ಪೌಷ್ಟಿಕ ಆಹಾರ ಅತ್ಯವಶ್ಯವಾಗಿದ್ದು ತಪ್ಪದೆ ಉತ್ತಮ ಶಕ್ತಿಭರಿತ ಆಹಾರ ಒದಗಿಸಬೇಕು ಎಂದು ಅವರು ಹೇಳಿದರು.ರಕ್ತ ಹೀನತೆ ಮಕ್ಕಳಿಗಾಗಿ ಅನಿಯಾ ಮುಕ್ತ ಕರ್ನಾಟಕ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಪ್ರಥಮ ಹಂತದಲ್ಲಿ ಸರ್ಕಾರಿ ಕಾಲೇಜುಗಳಲ್ಲಿ ನಂತರ ಹೈಸ್ಕೂಲ…

Read More

ಸಿಂದಗಿ: ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ತು ಸಿಂದಗಿ ಘಟಕದ ವತಿಯಿಂದ ಇದೇ ತಿಂಗಳು ಕೊನೆಯ ವಾರದಲ್ಲಿ ಹಮ್ಮಿಕೊಳ್ಳಲಾಗುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕವಿಗೋಷ್ಠಿ ಹಮ್ಮಿಕೊಳ್ಳಲಾಗಿದ್ದು ಕವಿಗೋಷ್ಠಿಯಲ್ಲಿ ಭಾಗವಹಿಸಲು ಇಚ್ಚಿಸುವವರು ಜ. ೧೫ರೊಳಗಾಗಿ ಕನ್ನಡ ಸಾಹಿತ್ಯ ಪರಿಷತ್ತು, ಸಂಘಟನಾ ಕಾರ್ಯದರ್ಶಿ ರಮೇಶ ಪೂಜಾರಿ ದೂ. ೯೪೪೮೬೪೪೨೨೮, ಗೌರವ ಕಾರ್ಯದರ್ಶಿ ಶಿವಕುಮಾರ ಕಲ್ಲೂರ ೮೮೮೪೪೪೬೬೪೮ ಇವರಲ್ಲಿ ತಮ್ಮ ಹೆಸರುಗಳನ್ನು ನೊಂದಾಯಿಸಬೇಕು. ಮತ್ತು ಬಾಗವಹಿಸುವ ಎಲ್ಲ ಕವಿಗಳಿಗೆ ಪ್ರಮಾಣ ಪತ್ರ ನೀಡಲಾಗುವುದು ಎಂದು ತಾಲೂಕು ಮಾದ್ಯಮ ಪ್ರತಿನಿಧಿ ಪಂಡಿತ ಯಂಪೂರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಸಿಂದಗಿ: ಮಹಿಳೆಯರು ಬದುಕು ಸ್ವಾವಲಂಬನೆಯಾಗಿರಬೇಕು ಎಂದು ಧರ್ಮಸ್ಥಳ ಸಂಘವು ಮಹಿಳೆಯರಿಗೆ ಉತ್ತೇಜನ ನೀಡುತ್ತಿದೆ ಎಂದು ಲೋಯಲ್ ಕೈಗಾರಿಕಾ ತರಬೇತಿ ಸಂಸ್ಥೆಯ ಉಪನ್ಯಾಸಕ ದ್ಯಾಮಣ್ಣ ಹೇಳಿದರು.ಪಟ್ಟಣದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನಾ ಕಛೇರಿಯ ವತಿಯಿಂದ ಸ್ವ-ಸಹಾಯ ಸಂಘಗಳಿಗೆ ಸ್ವ-ಉದ್ಯೋಗ ಅಧ್ಯಯನ ಪ್ರವಾಸ ಕೈಗೊಂಡು ವಿಜಯಪುರ ನಗರದ ಲೋಯಲ್ ಕೈಗಾರಿಕಾ ತರಬೇತಿ ಸಂಸ್ಥೆಗೆ ಬೇಟಿ ನೀಡದ ಸಂದರ್ಭದಲ್ಲಿ ಅಲ್ಲಿನ ಉಪನ್ಯಾಸಕ ದ್ಯಾಮಣ್ಣ ಮಾಹಿತಿ ನೀಡಿದರು.ಗೃಹ ಬಳಕೆಯ ಸ್ವ ಉದ್ಯೋಗಗಳಾದ ರೊಟ್ಟಿ ತಯಾರಿಕೆ, ಹಗ್ಗ ತಯಾರಿಕೆ, ಹಾಲು ಕರೆಯುವ ಮಿಲ್ಕಿಂಗ್ ಯಂತ್ರ, ಕುಂಬಾರಿಕೆ ಸೇರಿದಂತೆ ವಿವಿಧ ಸ್ವ-ಉದ್ಯೋಗಗಳ ಕುರಿತಾಗಿ ಮಾಹಿತಿ ನೀಡದರು.ತದನಂತರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ರುಡ್‌ಸೆಟ್ ಸಂಸ್ಥೆಗೆ ಬೇಟಿ ನೀಡಿ ಜಗದೀಶ ಅವರಿಂದ ಟೈಲರಿಂಗ್ ಮತ್ತು ಕೃಷಿಯೇತರ ಮತ್ತು ಕೃಷಿಗೆ ಪೂರಕವಾದಂತ ಹಲವಾರು ಸ್ವ ಉದ್ಯೋಗಗಳ ಕುರಿತು ಮಾಹಿತಿ ಪಡೆದುಕೊಂಡರು. ಆರ್ಥಿಕವಾಗಿ ಅಭಿವೃದ್ಧಿಯಾಗುವಲ್ಲಿ ಹೆಣ್ಣು ಮಕ್ಕಳ ಪಾತ್ರದ ಬಹಲ ಮುಖ್ಯ. ಮಹಿಳೆಯರು ಸೌ-ಉದ್ಯೋಗಿಗಳಾಗುವ ಮೂಲಕ ಸ್ವಾವಲಂಬನೆಯ ಬದುಕು ಸಾಗಿಸಿರಿ ಎಂದರು.ಈ ವೇಳೆ ಕೃಷಿ…

Read More

ಸಿಂದಗಿ: ಮಹಿಳೆಯರ ಮತ್ತು ಗರ್ಭಿಣಿಯರ ಅನುಕೂಲಕ್ಕಾಗಿ ಸರಕಾರ ಅನೇಕ ಯೋಜನೆಗಳನ್ನು ರೂಪಿಸಿದೆ. ಆರೋಗ್ಯ ಸಮಸ್ಯೆಯಿಂದ ಯಾವುದೇ ಗರ್ಭಿಣಿ, ತಾಯಂದಿರು ಮತ್ತು ಶಿಶು ಮರಣವಾಗದಂತೆ ವಿಶೇಷ ಕಾರ್ಯಕ್ರಮ ಹಾಕಿಕೊಂಡಿದೆ. ಇದರ ಸದ್ಬಳಕೆಯನ್ನು ಮಾಡಿಕೊಳ್ಳಬೇಕು ಎಂದು ಡಾ.ನಾಗರಾಜ ಹೇಳಿದರು.ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಸಭಾಂಗಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿಜಯಪುರ, ಪ್ರತಿಬಂಧಕ ಘಟಕ, ತಾಲೂಕ ಆರೋಗ್ಯ ಅಧಿಕಾರಿಗಳ ಕಾರ್ಯಾಲಯ, ತಾಲೂಕ ಸಾರ್ವಜನಿಕ ಆಸ್ಪತ್ರೆಯ ಐಸಿಟಿಸಿ/ಎಆರ್‌ಟಿ ಕೇಂದ್ರಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಗರ್ಭಿಣಿ ಮಹಿಳೆಯರ ಸೀಮಂತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಅವರು, ಮಹಿಳೆಯರು ತರಕಾರಿ, ಹಣ್ಣು ಸೇರಿದಂತೆ ಪೌಷ್ಟಿಕ ಆಹಾರ ಸೇವನೆ ಮಾಡಬೇಕು. ಒಂದು ವೇಳೆ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸದೇ ಹೋದರೆ ಅನೇಕ ರೋಗಗಳಿಗೆ ಬಲಿಯಾಗುತ್ತಿದ್ದಾರೆ. ಹಾಗಾಗಿ ಆರೋಗ್ಯವಾಗಿರಲು ಪೌಷ್ಟಿಕಾಂಶದ ಆಹಾರವನ್ನು ಮನೆಯಲ್ಲಿಯೇ ತಯಾರಿಸಿ ಸೇವನೆ ಮಾಡಬೇಕು. ಮತ್ತು ಆರೋಗ್ಯ ತಪಾಸಣೆ ಮಾಡಿಸಿ ವೈದ್ಯರಿಂದ ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದು ಸಲಹೆ ನೀಡಿದರು.ಈ ವೇಳೆ ಐಸಿಟಿಸಿ ಘಟಕದ…

Read More