Author: editor.udayarashmi@gmail.com

ಬೆಳಗಾವಿ: ಬೈಲಹೊಂಗಲ ತಾಲೂಕಿನ ನಾಗನೂರು ಗ್ರಾಮದ ಸರಕಾರಿ ಎಸ್‌ಪಿಎಮ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದಿದ್ದಾರೆ. ಕಲಾ ವಿಭಾಗದಲ್ಲಿ ನೀಲಾಂಬಿಕಾ ಅಂಗಡಿ ಶೇ 95.66 ಪ್ರಥಮ ಸ್ಥಾನ. ಮಲ್ಲವ್ವ ಶಿವನಾಯ್ಕರ ಶೇ 92.83 ದ್ವಿತೀಯ ಹಾಗೂ ಸವಿತಾ ನಾಯ್ಕ ಶೇ 90.16 ಅಂಕ ಪಡೆದು ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ನಾಗರಾಜ ಮೆಳವಂಕಿ ಶೇ 93.13 ಪ್ರಥಮ ಸ್ಥಾನ. ಶ್ವೇತಾ ಮಠದ ಶೇ 93 ತೇಜಸ್ವಿನಿ ಹಟ್ಟಿ ಶೇ 92.57 ಅಂಕಗಳನ್ನು ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ.ಇದಲ್ಲದೇ ರುದ್ರವ್ವ ಬೈಲವಾಡ ಮತ್ತು ಸಹನಾ ಗದಗ ಲೆಕ್ಕಶಾಸ್ತçದಲ್ಲಿ 100 ಕ್ಕೆ 100ರಷ್ಟು ಅಂಕ ಗಳಿಸಿದ್ದಾರೆ. ಅಂತೆಯೇ ನೀಲಾಂಬಿಕಾ ಅಂಗಡಿ ಸಮಾಜಶಾಸ್ತçದಲ್ಲಿ 100ಕ್ಕೆ 100 ಅಂಕಗಳನ್ನು ಪಡೆದಿದ್ದಾಳೆ. ಅತ್ಯಧಿಕ ಅಂಕ ಗಳಿಸಿ ಅತ್ಯುತ್ತಮ ಸಾಧನೆಗೈದ ವಿದ್ಯಾರ್ಥಿಗಳನ್ನು ಪ್ರಾಚಾರ್ಯರು, ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ ಹಾಗೂ ಕಾಲೇಜು ಅಭಿವೃದ್ಧಿ ಸಮೀತಿಯ ಅಧ್ಯಕ್ಷರು ಹಾಗೂ ಸದಸ್ಯರು ಅಭಿನಂದಿಸಿದ್ದಾರೆ.

Read More

ಸಿಂದಗಿ: ಪಟ್ಟಣದ ಈದ್ಗಾ ಮೈದಾನದಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ಮುಸ್ಲಿಂ ಬಾಂಧವರು ಶನಿವಾರ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.ಮುಸ್ಲಿಂ ಯುವಕರು ಹಾಗೂ ಹಿರಿಯರು, ಮಕ್ಕಳು ಪರಸ್ಪರ ತಬ್ಬಿಕೊಂಡು ಶುಭಾಶಯವನ್ನು ವಿನಿಯೋಗಿಸಿಕೊಂಡರು.ತಾಲೂಕಿನ ಬೋರಗಿ ಗ್ರಾಮದ ಪುಟಾಣಿಗಳಾದ ಮಹಮ್ಮದ್ ಜುಬೇರ, ಮಹಮ್ಮದ್ ಜಯಾನ್ ಸಹೋದರರು ತನ್ನ ಸಹೋದರಿ ಜುನೇರಾ ಆಲಗೂರಗೆ ಪವಿತ್ರ ರಂಜಾನ ಹಬ್ಬದ ಪ್ರಯುಕ್ತ ಪರಸ್ಪರ ಶುಭ ಕೋರಿದರು.

Read More

ವಿಜಯಪುರ: ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಅಂಗವಾಗಿ ಮೇ.೧೦ ರಂದು ಮತದಾನ ನಡೆಯಲಿದ್ದು, ಜಿಲ್ಲೆಯ ಎಂಟೂ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯ ವಿಜಯಪುರದ ಸೈನಿಕ ಶಾಲೆಯಲ್ಲಿ ನಡೆಯಲಿದ್ದು, ಮತ ಏಣಿಕೆ ಕೇಂದ್ರಕ್ಕೆ ಶನಿವಾರ ಚುನಾವಣಾ ಸಾಮಾನ್ಯ ವೀಕ್ಷಕರು ಹಾಗೂ ವೆಚ್ಚ ವೀಕ್ಷಕರು ಭೇಟಿ ನೀಡಿ, ಮತ ಎಣಿಕೆ ಕಾರ್ಯದ ಸಿದ್ಧತೆ ಕುರಿತು ಪರಿಶೀಲನೆ ನಡೆಸಿದರು. ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ಮತ ಎಣಿಕೆ ಕೇಂದ್ರ ಸಿದ್ಧತೆಯ ಸಮಗ್ರ ಚಿತ್ರಣವನ್ನು ವೀಕ್ಷಕರಿಗೆ ವಿವರಿಸಿದರು. ಮತ ಎಣಿಕೆ ಕೇಂದ್ರದಲ್ಲಿ ಇವಿಎಂ ಯಂತ್ರಗಳ ದಾಸ್ತಾನು, ಭದ್ರತಾ ಕೊಠಡಿ, ಮಾಧ್ಯಮ ಕೊಠಡಿ, ಮತಗಳ ಎಣಿಕೆ ಕೊಠಡಿಗಳು, ವೀಕ್ಷಕರ ಕೊಠಡಿ ನಿಗದಿಪಡಿಸಿರುವ ಕೊಠಡಿಗಳ ಮಾಹಿತಿ ವೀಕ್ಷಕರಿಗೆ ನೀಡಲಾಯಿತು. ಮೇ.೧೦ ರಂದು ಜರುಗುವ ಮತದಾನ ಪ್ರಕ್ರಿಯೆ ಬಳಿಕ ಎಲ್ಲ ವಿಧಾನಸಭಾ ಕ್ಷೇತ್ರಗಳ ಇವಿಎಂ ಮತಯಂತ್ರಗಳನ್ನು ನಗರದ ಸೈನಿಕ ಶಾಲೆಯಲ್ಲಿ ನಿರ್ಮಿಸಲಾಗುವ ಭದ್ರತಾ ಕೊಠಡಿಯಲ್ಲಿ ದಾಸ್ತಾನು ಮಾಡಿ, ಬಿಗಿ ಪೊಲೀಸ್ ಬಂದೋಬಸ್ತ್ನಲ್ಲಿ ಇರಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಮತ ಏಣಿಕೆ ಕೇಂದ್ರದಲ್ಲಿ…

Read More

ವಿಜಯಪುರ: ಈ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಮೂಲ ಸಿದ್ದಾಂತ ಹಿಂದುತ್ವ ಮತ್ತು ಅಭಿವೃದ್ಧಿಯ ಅಜೆಂಡಾ ಇಟ್ಟುಕೊಂಡು ಜಿಲ್ಲಾದ್ಯಂತ ನಾಳೆಯಿಂದ ಪ್ರಚಾರ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ ಹೇಳಿದರು.ಶನಿವಾರ ನಗರದ ಬಿಜೆಪಿ ಕಾರ್ಯಾಲಯದಲ್ಲಿ ಮಾಧ್ಯಮ ಕೇಂದ್ರವನ್ನು ಉದ್ಭಾಟಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊ0ಡು ಮತದಾರರ ಬಳಿ ಹೋಗುತ್ತೇವೆ. ಜಿಲ್ಲೆಯಲ್ಲಿ ಹೊರ್ತಿ ರೇವಣಸಿದ್ದೇಶ್ವರ ಏತ ನೀರಾವರಿ, ಬೂದಿಹಾಳ-ಪೀರಾಪೂರ ಏತ ನೀರಾವರಿ ಸೇರಿದಂತೆ ಜಿಲ್ಲೆಯಲ್ಲಿ ನೀರಾವರಿಗಾಗಿಯೇ ಒಟ್ಟು ರೂ. 505 ಕೋಟಿ ಖರ್ಚು ಮಾಡಲಾಗುತ್ತಿದೆ. ರೈತರು ಮತ್ತು ಕೂಲಿ ಕಾರ್ಮಿಕರ ಮಕ್ಕಳುವಿದ್ಯೆಯಿಂದ ವಂಚಿತರಾಗಬಾರದೆ0ದು ರೈತ ವಿದ್ಯಾನಿಧಿ ಯೋಜನೆ ಜಾರಿಗೆ ಬಂದಿದೆ. ೮ವರ್ಷಗಳ ಹಿಂದೆ ಜಿಲ್ಲಾದ್ಯಂತ ಇದ್ದ ಎಲ್ಲ ಹದಗೆಟ್ಟ ರಸ್ತೆಗಳು ಇಂದು ಉತ್ತಮ ರಸ್ತೆಗಳಾಗಿವೆ. ಬಿಜೆಪಿ ಸರಕಾರದ ಅಭಿವೃದ್ಧಿಯನ್ನು ಮೆಚ್ಚಿ ಮತದಾರರೀಗ ಬಿಜೆಪಿಯತ್ತ ಒಲವು ತೋರುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಸಂದರ್ಭ ಸ್ವಯಂಪ್ರೇರಿತರಾಗಿ ೩೦ ಸಾವಿರಕ್ಕೂ ಅಧಿಕ…

Read More

ಇಂಡಿ: ಜೆಡಿಎಸ್ ಅಭ್ಯರ್ಥಿ ಬಿ.ಡಿ. ಪಾಟೀಲ ಸರ್ವರನ್ನು ಗೌರವಿಸುವ ಸಂಭಾವಿತ ವ್ಯಕ್ತಿಯಾಗಿದ್ದು, ಅವರಿಗೆ ನಿಮ್ಮ ಮತ ನೀಡಿ ಆಯ್ಕೆ ಮಾಡಬೇಕೆಂದು ವಿಜಯಪುರ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಶಿವಯೋಗೆಪ್ಪ ನೇದಲಗಿ ಮನವಿ ಮಾಡಿಕೊಂಡರು.ಶುಕ್ರವಾರ ಸಂಜೆ ತಾಲ್ಲೂಕಿನ ರೂಗಿ ಗ್ರಾಮದಲ್ಲಿ ಚುನಾವಣಾ ಪ್ರಚಾರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಈ ಚುನಾವಣೆ ಹಣಬಲವೋ ಇಲ್ಲವೆ ಜನಬಲವೋ ಎನ್ನುವುದನ್ನು ನಿರ್ಧರಿಸುವ ಚುನಾವಣೆಯಾಗಿದೆ. ಹಣಕ್ಕೆ ಮತದಾರರು ಮನ ಸೋಲಬಾರದು ಎಂದು ಮನವಿ ಮಾಡಿಕೊಂಡ ಅವರು, ರೈತರ ಸಮಸ್ಯೆಗಳನ್ನು ಆಲಿಸುವ, ಅನ್ಯಾಯದ ವಿರುದ್ಧ ಹೋರಾಡುವ ವ್ಯಕ್ತಿ ಬಿ.ಡಿ. ಪಾಟೀಲರನ್ನು ಆಯ್ಕೆ ಮಾಡಬೇಕೆಂದು ಮನವಿ ಮಾಡಿಕೊಂಡರು.ಜೆಡಿಎಸ್ ಅಭ್ಯರ್ಥಿ ಬಿ.ಡಿ. ಪಾಟೀಲ ಮಾತನಾಡಿ, ತಾಲ್ಲೂಕಿನಲ್ಲಿ ನೆನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳನ್ನು ತ್ವರಿತಗತಿಯಲ್ಲಿ ಮಾಡುವ ಸಂಕಲ್ಪ ಹೊಂದಿದ್ದೇನೆ. ಹಾಗೂ ನಿಂಬೆ ಬೆಳೆಗಾರರ ಹಿತರಕ್ಷಣೆಗೆ ಕಂಕಣಬದ್ಧನಾಗಿದ್ದೇನೆ. ತಮ್ಮ ಸೇವೆಗೆ ಒಂದು ಅವಕಾಶ ನೀಡಬೇಕೆಂದು ಮನವಿ ಮಾಡಿಕೊಂಡರು.

Read More

ಇಂಡಿ: ಕೇಂದ್ರ ಮತ್ತು ರಾಜ್ಯದಲ್ಲಿ ಡಬಲ್ ಎಂಜಿನ್ ಸರ್ಕಾರಗಳಿರುವುದರಿಂದಾಗಿ ರಾಜ್ಯದ ಅಭಿವೃದ್ಧಿಯ ಹೆಚ್ಚಳಕ್ಕೆ ಕಾರಣವಾಗಿದೆ. ಆದ್ದರಿಂದ ಬಿಜೆಪಿ ಸರ್ಕಾರಕ್ಕೆ ಬೆಂಬಲಿಸಿ ನನ್ನನ್ನು ಆಯ್ಕೆ ಮಾಡಬೇಕೆಂದು ಇಂಡಿ ವಿಧಾನಸಭೆಯ ಬಿಜೆಪಿ ಅಭ್ಯರ್ಥಿ ಕಾಸೂಗೌಡ ಬಿರಾದಾರ ಮನವಿ ಮಾಡಿದರು.ಶನಿವಾರ ತಾಲ್ಲೂಕಿನ ಹಳಗುಣಕಿ ಗ್ರಾಮದಲ್ಲಿ ಮನೆ-ಮನೆಗಳಿಗೆ ಭೇಟಿ ನೀಡಿ ಮತ ಯಾಚಿಸಿ ಅವರು ಮಾತನಾಡಿದರು.ಇದೇ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ದಯಾಸಾಗರ ಪಾಟೀಲ, ಶಂಕರಗೌಡ ಪಾಟೀಲ, ಸಿದ್ದಲಿಂಗ ಹಂಜಗಿ, ರವಿ ಖಾನಾಪೂರ ಮಾತನಾಡಿ, ಕಾಸೂಗೌಡ ಬಿರಾದಾರ ಪರ ಮತ ಯಾಚಿಸಿದರು.ಬಿ.ಎ. ಪಾಟೀಲ, ಮಲ್ಲಪ್ಪ ಹಲಸಂಗಿ, ಶೇಖರಯ್ಯ ಮಣಿಕಂಠ, ದುಂಡಪ್ಪ ಲಚ್ಯಾಣ, ಶ್ರೀಶೈಲಗೌಡ ಬಿರಾದಾರ ಉಪಸ್ಥಿತರಿದ್ದರು.

Read More

ಇಂಡಿ: ಪಟ್ಟಣದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕಟ್ಟಲಾಗುವ ನಿಂಬೆ ಸಂಸ್ಕಾರಣಾ ಘಟಕಕ್ಕೆ 205ಕೋಟಿ ರೂ ಬಿಡುಗಡೆಯಾಗಿದ್ದು, ಸಧ್ಯದಲ್ಲಿಯೇ ಕಟ್ಟಡ ಕಾರ್ಯ ಪ್ರಾರಂಭಿಸಲಾಗುವದೆ0ದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಪಿ.ಎಲ್. ಪಾಟೀಲ ಹೇಳಿದರು.ಶನಿವಾರ ಪಟ್ಟಣದ ಕೃಷಿ ವಿಜ್ಞಾನ ಕೇಂದ್ರದಲ್ಲಿ ವಸ್ತು ಪ್ರದರ್ಶನ ಮತ್ತು ಮಾರಾಟ ವಿಭಾಗದ ಕೊಠಡಿ ಉದ್ಘಾಟಿಸಿ ಅವರು ಮಾತನಾಡಿದರು. ಸರಕಾರ ದ್ವಿತಿಯ ಕೃಷಿ ಪದ್ದತಿ ಅನುಸರಿಸುತ್ತಿದ್ದು ಕೃಷಿ ಉತ್ಪಾದನೆಯಲ್ಲಿ ಮೌಲ್ಯ ವರ್ಧನಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ. ನಿಂಬೆ ಮೌಲ್ಯವರ್ಧನೆ ಮುಖಾಂತರ ನಿಂಬೆ ರಸ, ಉಪ್ಪಿನಕಾಯಿ, ಕ್ಯಾಂಡಿ ಸೇರಿದಂತೆ ಹತ್ತು ಹಲವು ಪ್ರಕಾರದ ಮೌಲ್ಯವರ್ಧನೆ ಮಾಡಿ ಆದಾಯ ಹೆಚ್ಚಿಸಿಕೊಳ್ಳಬಹುದು ಎಂದರು. ಯುವಕರಿಗೆ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಿಂಬೆ ಮೌಲ್ಯವರ್ಧನೆ ಕುರಿತು ತರಬೇತಿ ನೀಡಲಾಗುವದು. ಮತ್ತು ರೈತರು ನಿಂಬೆ ತಂದು ಸಂಸ್ಕರಣೆ ಮಾಡಿಕೊಳ್ಳಬಹುದು ಎಂದರು.ಸರಕಾರ ಒಂದು ಜಿಲ್ಲೆ ಒಂದು ಬೆಳೆ ಆಯ್ಕೆ ಮಾಡಿದ್ದು, ನಿಂಬೆ ವಿಜಯಪುರ ಜಿಲ್ಲೆಯ ಬೆಳೆಯಾಗಿ ಆಯ್ಕೆಯಾಗಿದೆ ಎಂದ ಅವರು, ರೈತರಿಗೆ ಒಂದೇ ಬೆಳೆಯಿಂದ ಜೀವನೋಪಾಯ ಹೆಚ್ಚಿಸಿಕೊಳ್ಳಲು ಆಗುವದಿಲ್ಲ. ಹೀಗಾಗಿ…

Read More

ಇಂಡಿ: ಮುಸ್ಲಿಂ ಬಾಂಧವರು ಪವಿತ್ರ ಹಬ್ಬ ರಂಜಾನ್ ಹಬ್ಬದ ಅಂಗವಾಗಿ ಪಟ್ಟಣದ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡುವ ಮೂಲಕ ಹಬ್ಬವನ್ನು ಆಚರಿಸಿದರು.ಶನಿವಾರ ಪಟ್ಟಣದ ಹಂಜಗಿ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಶಾಕೀರ ಮೌಲಾನಾ ಕಾಸ್ಮಿ ಹಾಗೂ ಮುಕ್ತಿ ಅಬ್ದುಲ್ ರಹಿಮಾನ ಮತ್ತು ಅಂಜುಮನ್ ಮೈದಾನದಲ್ಲಿ ಮೌಲಾನಾ ಝಿಲಾ ಉಲ್ಲ ಹಕ್ ನಮಾಜ ಬೋಧಿಸಿದರು. ಒಂದು ತಿಂಗಳ ಪರ್ಯಂತ ಉಪವಾಸ ವೃತಾಚರಣೆ ಮಾಡಿ ಇಂದು ಹಬ್ಬದಂದು ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಿ ಒಬ್ಬರಿಗೊಬ್ಬರು ಶುಭಾಶಯ ಕೋರುವ ಮೂಲಕ ಪವಿತ್ರ ರಂಜಾನ್ ಹಬ್ಬವನ್ನು ಆಚರಿಸಲಾಯಿತು. ಈದ್ಗಾ ಮೈದಾನದಲ್ಲಿ ಹಾಲಿ ಶಾಸಕ ಯಶವಂತಗೌಡ ಪಾಟೀಲ, ಜೆಡಿಎಸ್ ನ ಬಿ.ಡಿ. ಪಾಟೀಲ, ಬಿಜೆಪಿಯ ಕಾಸುಗೌಡ ಬಿರಾದಾರ, ಅನೀಲಗೌಡ ಬಿರಾದಾರ, ಜಾವೇದ ಮೋಮೀನ್, ಫಯಾಜ ಬಾಗವಾನ, ಜಮೀರ ಬಾಗವಾನ, ಅಂಜುಮನ ಸಂಸ್ಥೆಯ ಅಧ್ಯಕ್ಷ ಅಪಝಲ ಹವಾಲದಾರ, ಮುದಸರ್ ಬಳಗಾನೂರ, ಹಪೀಜ್ ಬಾಷಾ, ಪುರಸಭೆ ಸದಸ್ಯರಾದ ಅಯೂಬ ಬಾಗವಾನ, ಶಬ್ಬೀರ ಖಾಜಿ, ಸದ್ದಾಂ ಅರಬ, ಕೆಆರ್‌ಪಿಪಿ ಯ ಮಹಿಬೂಬ…

Read More

ಮುದ್ದೇಬಿಹಾಳ: ದಲಿತ ವಿರೋಧಿ ಜನ ವಿರೋಧಿ ಬಿಜೆಪಿ ಸರಕಾರವನ್ನು ತಿರಸ್ಕರಿಸಿ ನಿಜವಾದ ಸಮಾಜಿಕ ಹಾಗೂ ದೀನ ದಲಿತರ ಪರವಾದ ಕಾಳಜಿಯುಳ್ಳÀ ಕಾಂಗ್ರೇಸ್ ಪಕ್ಷವನ್ನು ಬೆಂಬಲಿಸಲು ತಾಳಿಕೋಟಿ ಹಾಗೂ ಮುದ್ದೇಬಿಹಾಳ ಸೇರಿದಂತೆ ಮತಕ್ಷೇತ್ರದ ಎಲ್ಲ ಚಲವಾದಿ ಸಮಾಜ ತೀರ್ಮಾನಿಸಿದೆ ಎಂದು ತಾಳಿಕೋಟೆ ತಾಲೂಕಾ ಚಲವಾದಿ ಸಮಾಜದ ಅಧ್ಯಕ್ಷ ಮುತ್ತಣ್ಣ ಚಮಲಾಪೂರ ಹಾಗೂ ಮುದ್ದೇಬಿಹಾಳ ತಾಲೂಕಾ ಅಧ್ಯಕ್ಷ ರೇವಣೆಪ್ಪ ಅಜಮನಿ ತಿಳಿಸಿದರು.ಪಟ್ಟಣದ ಬಸವೇಶ್ವರ ವೃತ್ತದಲ್ಲಿರುವ ಖಾಸಗಿ ಹೋಟೇಲ್ ಸಭಾಭವನದಲ್ಲಿ ಶನಿವಾರ ನಡೆದ ಮತಕ್ಷೇತ್ರದ ಚಲವಾದಿ ಸಮಾಜದ ಸಭೆಯಲ್ಲಿ ಮಾತನಾಡಿದ ಅವರು ಮತಕ್ಷೇತ್ರದಲ್ಲಿ ೨೫ ಸಾವಿರಕ್ಕಿಂತ ಹೆಚ್ಚು ಚಲವಾದಿ ಸಮುದಾಯವರ ಮತದಾರರಿದ್ದಾರೆ. ಆದರೆ ಬಿಜೆಪಿಯವರು ನಮ್ಮ ಸಮೂದಾಯವನ್ನು ಸಂಪೂರ್ಣ ಕಡೆಗಣಿಸಿದ್ದರಿಂದ ಮತಕ್ಷೇತ್ರದ ಎಲ್ಲ ಬಾಂಧವರು ಒಗ್ಗಟ್ಟಾಗಿ ಬಿಜೆಪಿ ಪಕ್ಷವನ್ನು ತಿರಸ್ಕರಿಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಕಳೆದ ಸಿದ್ರಾಮಯ್ಯನವರ ನೇತೃತ್ವದ ಕಾಂಗ್ರೇಸ್ ಸರಕಾರ ದಲಿತರ ಶ್ರೇಯೋಭಿವೃದ್ಧಿಗಾಗಿ ಎಸ್.ಸಿ.ಪಿ, ಟಿ.ಎಸ್.ಪಿ ಯೋಜನೆ ಜಾರಿಗೊಳಿಸಿತ್ತು. ಆದರಿಂದು ಸ್ಥಳೀಯ ಬಿಜೆಪಿ ಶಾಸಕರು ನಿಜವಾದ ದಲಿತ ಕೇರಿಗಳನ್ನು ಅಭಿವೃದ್ಧಿಗೊಳಿಸದೇ ಸಾಮಾನ್ಯ ಕ್ಷೇತ್ರಗಳಲ್ಲಿ…

Read More

ಆಲಮಟ್ಟಿ : ಬಸವನಬಾಗೇವಾಡಿ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಿವಾನಂದ ಪಾಟೀಲ ಗೆಲುವು ಸಾಧಿಸಬೇಕು ಎಂದು ಹರಕೆ ಹೊತ್ತು ಶನಿವಾರ ಕೊಲ್ಹಾರ ತಾಲ್ಲೂಕಿನ ತಳೇವಾಡ ಗ್ರಾಮದ ಚಂದ್ರಶೇಖರ ಹಂಚಿನಾಳ, ಸಿದ್ದು ಜಟ್ಟೆಪ್ಪಗೋಳ, ನಿಡಗುಂದಿ ತಾಲ್ಲೂಕಿನ ಸುಕ್ಷೇತ್ರ ಯಲಗೂರ ಆಂಜನೇಯನಿಗೆ ದೀಡ ನಮಸ್ಕಾರ ಸಲ್ಲಿಸಿದರು.ಸುಡು ಬಿಸಿಲಿನಲ್ಲಿ ಯಲಗೂರ ಕ್ರಾಸ್ ನಿಂದ ಯಲಗೂರ ದೇವಸ್ಥಾನದವರೆಗೆ ೨ ಕಿ.ಮೀ ದೀಡ ನಮಸ್ಕಾರ ಸಲ್ಲಿಸಿದರು. ಈ ಸಂದರ್ಭದಲ್ಲಿ ಶಾಸಕ ಶಿವಾನಂದ ಪಾಟೀಲ ಪುತ್ರಿ ಸಂಪ್ರದಾ ಪಾಟೀಲ, ಮಹೇಶ ಬಿರಾದಾರ, ಗಂಗಾಧರ ವಾರದ, ಶೇಖರ ರೂಡಗಿ ಚಂದ್ರಶೇಖರ ಕರಿಗಾರ ಮತ್ತೀತರರು ಇದ್ದರು.

Read More